Tag: ಮಯೂರಿ ಕ್ಯಾತರಿ

  • ಚಿಕ್ಕತಿರುಪತಿಯಲ್ಲಿ ಮಗನ ಕೇಶಮುಂಡನ ಮಾಡಿಸಿದ ನಟಿ ಮಯೂರಿ

    ಚಿಕ್ಕತಿರುಪತಿಯಲ್ಲಿ ಮಗನ ಕೇಶಮುಂಡನ ಮಾಡಿಸಿದ ನಟಿ ಮಯೂರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಯೂರಿ ಕ್ಯಾತರಿ ತಮ್ಮ ಮಗ ಆರವ್ ತಲೆ ಕೂದಲು ತೆಗೆಸಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆರವ್‍ಗೆ ಕೇಶಮುಂಡನ ಮಾಡಿದ್ದಾರೆ. ಗೋವಿಂದಾ ಗೋವಿಂದಾ ಎಂದು ಬರೆದುಕೊಂಡು ಆರವ್ ಕೂದಲು ತೆಗೆಸಿದ ನಂತರದಲ್ಲಿ ಕ್ಲಿಕ್ಕಿಸಿಕೊಂಡಿರುವ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ದಂಪತಿ ಮುಗುವನ್ನು ಇತ್ತಿಕೊಂಡು ದೇವಸ್ಥಾನದ ಎದುರು ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಮುದ್ದಾದ ಆರವ್ ಫೋಟೋಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.  ಇದನ್ನೂ ಓದಿ: ನಾನು ತಾಯಿಯಾಗಿದ್ದು ನನ್ನ ಬದುಕಿನ ಅತೀ ಸಂಭ್ರಮದ ಕ್ಷಣ: ಮಯೂರಿ

     

    View this post on Instagram

     

    A post shared by mayuri (@mayurikyatari)

    2020 ಜೂನ್ 12ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ  ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಮಯೂರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಗ ಹುಟ್ಟಿದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಹೀಗೆ ಮಗನಿಗಾಗಿ ಸ್ಟಾರ್‍ಬಾಯ್ ಎನ್ನುವ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆಯನ್ನು ತೆರೆದು ಮಗನ ಕೆಲವು ಮುದ್ದಾದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಗನಿಗೆ ಕೇಶಮುಂಡನ ಮಾಡಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ

  • ಮಾರ್ಚ್ 15ರ ನಂತ್ರ ಜೀವನವೇ ಬದಲಾಯ್ತು: ನಟಿ ಮಯೂರಿ

    ಮಾರ್ಚ್ 15ರ ನಂತ್ರ ಜೀವನವೇ ಬದಲಾಯ್ತು: ನಟಿ ಮಯೂರಿ

    ಬೆಂಗಳೂರು: ನಟಿ ಮಯೂರಿ ಕ್ಯಾತರಿ ಮಗುವಿನ ಫೋಟೋಗಳನ್ನು ಹಂಚಿಕೊಂಡು, ಆತನ ಹೆಸರನ್ನ ರಿವೀಲ್ ಗೊಳಿಸಿದ್ದಾರೆ. ಮಗನಿಗೆ ಆರವ್ ಎಂದು ಹೆಸರಿಟ್ಟಿದ್ದು, ಬಣ್ಣ ಬಣ್ಣದ ಬಟ್ಟೆ ತೊಡಿಸಿ ಫೋಟೋಶೂಟ್ ಮಾಡಿಸಿದ್ದಾರೆ.

    ಮಗ ಆರವ್ 15 ದಿನವನಿದ್ದಾಗ ಮಾಡಿಸಿದ ಫೋಟೋಶೂಟ್ ಇದಾಗಿದೆ. ಈತ ಬಂದ ಮೇಲೆ ನಮ್ಮ ಜೀವನವೇ ಸಂಪೂರ್ಣ ಬದಲಾಗಿದೆ. ಮಗ ಆರವ್ ಜೊತೆ ಮಯೂರಿ ಮತ್ತು ಅರುಣ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    2020 ಜೂನ್ 12 ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಮಯೂರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಗ ಹುಟ್ಟಿದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

    ನನಗೆ ಗಂಡು ಮಗುವಾಗಿದೆ. ಮದುವೆ ನಂತರ ಮತ್ತೊಂದು ಬ್ಯೂಟಿಫುಲ್ ಜರ್ನಿ ಶುರು ಮಾಡುತ್ತಿದ್ದೇನೆ. ಈ ಸುಂದರ ಭಾವನೆಯನ್ನು ವ್ಯಕ್ತಪಡಿಸಲು ಪದಗಳೆ ಸಿಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮಗುವಿನ ಮೇಲೆ ಇರಲಿ ಎಂದು ಬರೆದುಕೊಂಡು ಮಗನ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ನಟಿ ಮಯೂರಿ

    ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ನಟಿ ಮಯೂರಿ

    ಬೆಂಗಳೂರು: ‘ಕೃಷ್ಣ ಲೀಲಾ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸೌಂಡ್ ಮಾಡಿದ ನಟಿ ಮಯೂರಿ ಕ್ಯಾತರಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿಯೋದಕ್ಕೆ ನಟಿ ಮಯೂರಿ ಸಜ್ಜಾಗಿದ್ದಾರೆ. ಭರ್ತಿ 10 ವರ್ಷಗಳಿಂದ ಪ್ರೀತಿಯಲ್ಲಿ ಬಂಧಿಯಾಗಿರುವ ಮಯೂರಿ ಹಾಗೂ ಅರುಣ್, ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಅಡಿಯಿಡಲು ರೆಡಿಯಾಗಿದ್ದಾರೆ. ಶುಕ್ರವಾರ ಮಯೂರಿ ಮದುವೆ ನಡೆಯಲಿದ್ದು, ಕುಟುಂಬಸ್ಥರು-ಆಪ್ತರು ಭಾಗಿಯಾಗಲಿದ್ದಾರೆ. ದೇವಸ್ತಾನದಲ್ಲಿ ಕೃಷ್ಣಲೀಲಾ ಸುಂದರಿಯ ಮದುವೆ ನೆರವೇರುತ್ತಿದೆ.

    ಮಯೂರಿ ಅವರು ‘ಅಶ್ವಿನಿ ನಕ್ಷತ್ರ’ ಕಿರುತೆರೆ ಪ್ರವೇಶಿಸಿ, ಬಳಿಕ ‘ಕೃಷ್ಣ ಲೀಲಾ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟವರು. ‘ಇಷ್ಟಕಾಮ್ಯ’, ‘ರುಸ್ತುಂ’ನಂತಹ ಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಮಯೂರಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’, ‘ಮೌನಂ’ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.

    ಸಂಪೂರ್ಣ ಹೊಸಬರೇ ಇರುವ ‘ಮೌನಂ’ ಸಿನಿಮಾದಲ್ಲಿ ಮಯೂರಿ ಅವರು ನಾಯಕಿಯಾಗಿ ನಟಿಸಿದ್ದರು. ರಾಜ್ ಪಂಡಿತ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.