Tag: ಮಯಂಕ್ ಅಗರ್ ವಾಲ್

  • ಸಚಿನ್ ದಾಖಲೆ ಮುರಿದ ಕನ್ನಡಿಗ ಮಯಂಕ್ ಅಗರ್ ವಾಲ್

    ಸಚಿನ್ ದಾಖಲೆ ಮುರಿದ ಕನ್ನಡಿಗ ಮಯಂಕ್ ಅಗರ್ ವಾಲ್

    ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಕನ್ನಡಿಗ ಮಯಂಕ್ ಅಗರ್ ವಾಲ್ ಬ್ಯಾಟಿಂಗ್ ದಿಗ್ಗಜ ಸಚಿನ್ ದಾಖಲೆ ಮುರಿದಿದ್ದಾರೆ.

    ಸೌರಾಷ್ಟ್ರ ವಿರುದ್ಧದ ಫೈನಲ್ ನಲ್ಲಿ 90 ರನ್ ಹೊಡೆಯುವ ಮೂಲಕ ಈ ಟೂರ್ನಿಯಲ್ಲಿ ಒಟ್ಟು 723 ರನ್ ಗಳಿಸಿದ್ದಾರೆ. ಈ ಮೂಲಕ ದೊಡ್ಡ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇಲ್ಲಿಯವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಪಟ್ಟ ಸಚಿನ್ ತೆಂಡೂಲ್ಕರ್ ಗೆ ಸಿಕ್ಕಿತ್ತು. 2003 ರ ವಿಶ್ವಕಪ್‍ನಲ್ಲಿ ಒಟ್ಟು 623 ರನ್ ಹೊಡೆಯುವ ಮೂಲಕ ಈ ವಿಶಿಷ್ಟ ದಾಖಲೆಯನ್ನು ಸಚಿನ್ ಭಾರತದ ಪರ ಬರೆದಿದ್ದರು.

    ಭಾರತದ ಪರ ಕ್ರಿಕೆಟ್ ನ ಮೂರು ಮಾದರಿಗಳಲ್ಲಿ (ಏಕದಿನ, ರಣಜಿ, ಟಿ20) ಈ ಬಾರಿ ಮಯಂಕ್ 2,218 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿದೆ. ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ 109, 84, 28, 102, 89, 140, 81, 140, 81, ಮತ್ತು ಫೈನಲ್ ಪಂದ್ಯದಲ್ಲಿ 90 ರನ್ ಗಳಿಸಿ 723 ರನ್ ಗಳಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿದ ಆಟಗಾರ ಎಂಬ ದಾಖಲೆ ಪಡೆದರು. ಕಳೆದ ವರ್ಷ ಈ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ 607ರನ್‍ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

    ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಶ್ರೀಲಂಕಾ, ಬಾಂಗ್ಲಾದೇಶದ ನಡುವಿನ ತ್ರಿಕೋನ ಟಿ20 ಸರಣಿಗೆ ಭಾರತದ ಆಯ್ಕೆ ಸಮಿತಿ ಮಯಂಕ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕದ ಕೋಚ್ ಶಶಿಕಾಂತ್, ಮಯಂಕ್ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಯ್ಕೆ ಆಗದೇ ಇದ್ದರೂ ಆತನ ಆಟದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದು ಹೊಗಳಿದ್ದರು.

     

  • ಮತ್ತೆ ಮಿಂಚಿದ ಮಯಂಕ್: ಸೌರಾಷ್ಟ್ರ ಸೋಲಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

    ಮತ್ತೆ ಮಿಂಚಿದ ಮಯಂಕ್: ಸೌರಾಷ್ಟ್ರ ಸೋಲಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

    ನವದೆಹಲಿ: ಸೌರಾಷ್ಟ್ರ ವಿರುದ್ಧ ಕರ್ನಾಟಕ 41 ರನ್ ಗಳಿಂದ ಜಯಗಳಿಸುವ ಮೂಲಕ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಮೂರನೇ ಬಾರಿ ಗೆದ್ದುಕೊಂಡಿದೆ.

    ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಕರ್ನಾಟಕ 45.5 ಓವರ್ ಗಳಲ್ಲಿ 253 ರನ್ ಗಳಿಗೆ ಆಲೌಟ್ ಆಗಿತ್ತು. 254 ರನ್ ರನ್‍ಗಳ ಗುರಿಯನ್ನು ಪಡೆದ ಸೌರಾಷ್ಟ್ರ 46.3 ಓವರ್ ಗಳಲ್ಲಿ 212 ರನ್ ಗಳಿಸಿ ಆಲೌಟ್ ಆಯಿತು.

    ಸರಣಿ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಮಯಂಕ್ ಅಗರ್ ವಾಲ್ 90 ರನ್(79 ಎಸೆತ, 11 ಬೌಂಡರಿ, 3 ಸಿಕ್ಸರ್), ಪವನ್ ದೇಶಪಾಂಡೆ 49 ರನ್(60 ಎಸೆತ, 4 ಬೌಂಡರಿ, 1 ಸಿಕ್ಸರ್), ರವಿಕುಮಾರ್ ಸಮರ್ಥ್ 48 ರನ್(65 ಎಸೆತ, 1 ಬೌಂಡರಿ, 1 ಸಿಕ್ಸರ್) ಶ್ರೇಯಸ್ ಗೋಪಾಲ್ 31 ರನ್(28 ಎಸೆತ, 6 ಬೌಂಡರಿ) ಸಿಡಿಸಿ ಔಟಾದರು.

    ಸೌರಾಷ್ಟ್ರ ನಾಯಕ ಚೇತೇಶ್ವರ ಪೂಜಾರ 94 ರನ್(127 ಎಸೆತ, 10 ಬೌಂಡರಿ, 1 ಸಿಕ್ಸರ್) ಸಿಡಿಸಿ 9ನೇಯವರಾಗಿ ಔಟಾದರು. ಕರ್ನಾಟಕದ ಪರವಾಗಿ ಕೆ.ಗೌತಮ್ ಮತ್ತು ಕೃಷ್ಣಾ 3 ವಿಕೆಟ್ ಕಿತ್ತರೆ, ಸ್ಟುವರ್ಟ್ ಬಿನ್ನಿ ಮತ್ತು ದೇಶಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು.

    2013-14ರಲ್ಲಿ, 2015-16 ರಲ್ಲಿ ಕರ್ನಾಟಕ ಚಾಂಪಿಯನ್ ಆಗಿತ್ತು. ಈಗ ಕರುಣ್ ನಾಯರ್ ನೇತೃತ್ವದಲ್ಲಿ ಮೂರನೇ ಬಾರಿ ಕರ್ನಾಟಕ ಟ್ರೋಫಿಯನ್ನು ಗೆದ್ದುಕೊಂಡಿದೆ.

    27 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ‘ಎ’ ಗುಂಪಿನಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ರಾಜ್ಯ ತಂಡ ಹೈದರಾಬಾದ್ ತಂಡವನ್ನು ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತ್ತು. ನಾಲ್ಕರ ಘಟ್ಟದಲ್ಲಿ 9 ವಿಕೆಟ್‍ಗಳಿಂದ ಮಹಾರಾಷ್ಟ್ರವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.