Tag: ಮನ್ ಕೀ ಬಾತ್

  • ಮನ್ ಕೀ ಬಾತ್ ಕೇಳುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಕಾರ್ಯಕರ್ತ

    ಮನ್ ಕೀ ಬಾತ್ ಕೇಳುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಕಾರ್ಯಕರ್ತ

    ಮಂಗಳೂರು: ಮದುವೆ ಮನೆ ಎಂದರೆ ಪರಸ್ಪರ ಮಾತು, ನಗು, ಮಕ್ಕಳ ಹರಟೆ ಎಲ್ಲವೂ ಇರುತ್ತೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮದುವೆ ಹಾಲ್ ನಲ್ಲಿ ಮಾತ್ರ ಮೋದಿ ಅವರ ಮನ್ ಕೀ ಬಾತ್ ಕೇಳಿಸುತಿತ್ತು.

    ಹೌದು. ಸುಳ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತ ಜಯರಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ 53ನೇ ಮನದ ಮಾತು ಕೇಳುತ್ತಲೇ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಭಾನುವಾರ ಸುಳ್ಯ ನಗರದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಜಯರಾಮ ಹಸೆಮಣೆ ಏರಿದ್ದರು.

    ಮೋದಿಯ ಮನ್ ಕೀ ಬಾತ್ ದಿನವಾಗಿದ್ದರಿಂದ ಮದುವೆಗೆ ಆಗಮಿಸಿದ್ದ ಜನರಿಗೆ ಮೋದಿಯ ರೇಡಿಯೋ ಮಾತು ಕೇಳುವಂತೆ ವ್ಯವಸ್ಥೆ ಮಾಡಿದ್ದರು. 11.30ರ ವೇಳೆಗೆ ಧಾರಾ ಮುಹೂರ್ತದಲ್ಲಿ ಮದುವೆಯಾದ ಜಯರಾಮ, ಅತ್ತ ಮೋದಿ ಮಾತು ಕೇಳುತ್ತಲೇ ಹಸೆಮಣೆ ತುಳಿದಿದ್ದಾರೆ.

    ನವ ವಧುವರರು ಪ್ರಧಾನಿ `ಮನ್ ಕಿ ಬಾತ್’ ಆಲಿಸಲು ಮಂಟಪ ಬಿಟ್ಟು ರೇಡಿಯೋ ಬಳಿ ಬಂದು ಸೇರಿದ ಎಲ್ಲ ಬಂಧುಗಳೊಂದಿಗೆ ಕುಳಿತು ಮೋದಿಯ ಮನದ ಮಾತಿಗೆ ಸಾಕ್ಷಿಗಳಾದರು. ಮನದ ಮಾತು ಕೇಳಿಸುವುದಕ್ಕಾಗಿ ವಿಶೇಷವಾಗಿ ರೇಡಿಯೋ ಮತ್ತು ಸ್ಪೀಕರ್ ವ್ಯವಸ್ಥೆ ಮಾಡಿದ್ದರು. ಸೇರಿದ ನೂರಾರು ಬಂಧು ಮಿತ್ರರು ಒಂದೆಡೆ ಕೂತು ಮನದ ಮಾತನ್ನು ಆಲಿಸಿ ನವ ಜೋಡಿಯನ್ನು ಆಶೀರ್ವದಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನ್‍ಕೀ ಬಾತ್ ಆರಂಭದಲ್ಲೇ ಸಿದ್ದಗಂಗಾ ಶ್ರೀಗಳನ್ನು ಸ್ಮರಿಸಿ ಗೌರವ ಸಲ್ಲಿಸಿದ ಮೋದಿ

    ಮನ್‍ಕೀ ಬಾತ್ ಆರಂಭದಲ್ಲೇ ಸಿದ್ದಗಂಗಾ ಶ್ರೀಗಳನ್ನು ಸ್ಮರಿಸಿ ಗೌರವ ಸಲ್ಲಿಸಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ನೆನಪಿಸಿಕೊಂಡಿದ್ದಾರೆ.

    ಮನ್‍ಕೀ ಬಾತ್ ಆರಂಭದಲ್ಲೇ ಶ್ರೀಗಳನ್ನು ನೆನೆದ ಮೋದಿ, ಜನವರಿ 21ರಂದು ದೇಶಕ್ಕೆ ಶಾಕಿಂಗ್ ನ್ಯೂಸ್ ಎಂಬಂತೆ 111 ವರ್ಷದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ಬಂತು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತಿನಂತೆ ಶಿವಕುಮಾರ ಸ್ವಾಮೀಜಿ ಬದುಕಿದ್ದರು. ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಹೇಳಿ ಸ್ಮರಿಸಿಕೊಂಡರು.

    ಇಂಗ್ಲಿಷ್, ಸಂಸ್ಕೃತ, ಕನ್ನಡದಲ್ಲಿ ವಿದ್ವಾಂಸರಾಗಿದ್ದ ಶ್ರೀಗಳು ಸಾವಿರಾರು ಜನರ ಬಾಳಿಗೆ ಬೆಳಕು ನೀಡಿದ್ದಾರೆ. ಆಧ್ಯಾತ್ಮ, ದಾಸೋಹ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕೃಷಿ ಮೇಳ, ಪಶು ಮೇಳವನ್ನು ಆಯೋಜಿಸುವ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸಿದ್ದರು ಎಂದು ಹೇಳಿದರು.

    ನನಗೆ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿತ್ತು ಎಂದು ಹೇಳಿ ಗುರುಗಳ ಗುರುವಂದನಾ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಭಾಗವಹಿಸಿದ್ದನ್ನು ಮೋದಿ ಉಲ್ಲೇಖಿಸಿದರು. ಅಷ್ಟೇ ಅಲ್ಲದೇ ಶ್ರೀಗಳ ಬಗ್ಗೆ ಕಲಾಂ ಬರೆದ ಕವಿತೆಯನ್ನು ಓದಿ ಮತ್ತೊಮ್ಮೆ ಶಿವಕುಮಾರ ಸ್ವಾಮೀಜಿ ಅವರಿಗೆ ಗೌರವವನ್ನು ಸಲ್ಲಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    https://www.youtube.com/watch?v=FQVmZkPXCOo&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರವನ್ನು ಅಸ್ಥಿರಗೊಳಿಸುವ ಸಿಎಂ ಹೇಳಿಕೆ ಸರಿಯಾಗಿದೆ: ದಿನೇಶ್ ಗುಂಡೂರಾವ್

    ಸರ್ಕಾರವನ್ನು ಅಸ್ಥಿರಗೊಳಿಸುವ ಸಿಎಂ ಹೇಳಿಕೆ ಸರಿಯಾಗಿದೆ: ದಿನೇಶ್ ಗುಂಡೂರಾವ್

    ಶಿವಮೊಗ್ಗ: ಕಾಂಗ್ರೆಸ್ ಪ್ರಚೋದನಾ ರಾಜಕೀಯ ಮಾಡುತ್ತಿಲ್ಲ, ಅಭಿವೃದ್ಧಿಯ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಮಾತನಾಡಿದ ಅವರು ಸಮನ್ವಯ ಸಮಿತಿ ಸದಸ್ಯರು ಯಾರಾಗಬೇಕು ಎಂಬುದು ಚರ್ಚಾಸ್ಪದ ವಿಷಯವಲ್ಲ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇಂದಿಗೂ ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ. ಸಿಎಂ ಹೇಳಿಕೆ ಸರಿಯಾಗಿಯೇ ಇದ್ದು, ಬಿಜೆಪಿ ಈ ಕೆಲಸ ಮಾಡುತ್ತಿದೆ. ಈ ಪ್ರಯತ್ನವನ್ನು ಬಿಟ್ಟು ಉತ್ತಮ ಪ್ರತಿಪಕ್ಷವಾಗಿ ಕೆಲಸ ಮಾಡುವುದನ್ನು ಬಿಜೆಪಿ ಕಲಿಯಬೇಕು ಎಂದರು.

    ಯಡಿಯೂರಪ್ಪ ಜನಪರ ಹೋರಾಟ ಮಾಡಿಲ್ಲ. ಲೋಕಸಭೆಯಲ್ಲಿ ರಾಜ್ಯದ ಪರವಾಗಿ ಮಾತನಾಡಿಲ್ಲ. ಯಡಿಯೂರಪ್ಪ ಹಾಗೂ ಬಿಜೆಪಿ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿವೆ ಎಂದು ಟೀಕಿಸಿದರು.

    ಸಮನ್ವಯ ಸಮಿತಿ ಶೀಘ್ರವೇ ಸಭೆ ಸೇರಲಿದ್ದು, ರೈತರ ಸಾಲ ಮನ್ನಾ ಬಿಟ್ಟು ಬೇರೆ ಯಾವುದೇ ಪ್ರಮುಖ ನಿರ್ಧಾರವನ್ನು ಸಿಎಂ ಕೈಗೊಂಡಿಲ್ಲ. ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ಅಭಿನಂದನೆ ಸಲ್ಲಿಸಬೇಕು. ಈ ತನಿಖೆಯಿಂದ ಹತ್ಯೆ ಹಿಂದೆ ಇರುವವರು ಯಾರು ಎಂಬುದು ಬೆಳಕಿಗೆ ಬಂದಿದೆ. ಬಿಜೆಪಿ ಆರ್‍ಎಸ್‍ಎಸ್ ದೇಶವನ್ನು ತಪ್ಪು ಹಾದಿಗೆ ತೆಗೆದುಕೊಂಡು ಹೋಗುತ್ತಿದೆ. ದೇಶದ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಪ್ರಧಾನ ಮಂತ್ರಿ ಮನ್ ಕೀ ಬಾತ್ ನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುತ್ತಿಲ್ಲ ಎಂದು ದೂಷಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರು ಬಾಲೆಗೆ ಫಿದಾ ಆದ್ರು ಪ್ರಧಾನಿ ಮೋದಿ

    ಬೆಂಗ್ಳೂರು ಬಾಲೆಗೆ ಫಿದಾ ಆದ್ರು ಪ್ರಧಾನಿ ಮೋದಿ

    ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರು ಬಾಲೆಯ ಸಂಸ್ಕೃತ ಭಾಷೆಗೆ ಫಿದಾ ಆಗಿದ್ದಾರೆ. ಭಾನುವಾರ ನಡೆದ ಮನ್ ಕೀ ಬಾತ್ ನಲ್ಲಿ ಗಿರಿನಗರದ ನಿವಾಸಿ ಚಿನ್ಮಯಿ ಕುರಿತು ನಾಲ್ಕು ನಿಮಿಷ ಮಾತನಾಡಿದ್ದಾರೆ.

    ಗಿರಿನಗರದ ವಿಜಯಭಾರತಿ ಶಾಲೆಯಲ್ಲಿ ಹತ್ತನೆ ತರಗತಿ ಓದ್ತಾ ಇರುವ ಚಿನ್ಮಯಿ ಪ್ರಧಾನಿ ಜೊತೆ ಸಂಸ್ಕೃತ ಭಾಷೆ ವೈಶಿಷ್ಟ್ಯತೆ, ಸಂಸ್ಕೃತ ಭಾಷೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತಾ ಸಂಸ್ಕೃತದಲ್ಲಿಯೇ ಕೇಳಿದ್ದಳು. ಚಿನ್ಮಯಿ ಸಂಸ್ಕೃತ ಪಾಂಡಿತ್ಯಕ್ಕೆ ಮೋದಿ ಖುಷಿ ವ್ಯಕ್ತಪಡಿಸಿ ಸುಮಾರು ನಾಲ್ಕು ನಿಮಿಷ ಇಪ್ಪತ್ತು ಸಕೆಂಡ್ ಗಳ ಕಾಲ ಸಂಸ್ಕೃತ ಭಾಷೆಯ ವೈಶಿಷ್ಟ್ಯದ ಬಗ್ಗೆ ಮಾತಾನಾಡಿದ್ದಾರೆ. ಚಿನ್ಮಯಿಯ ಜ್ಞಾನಕ್ಕೆ ತಲೆದೂಗಿದ ಮೋದಿ ಸಂಸ್ಕೃತವನ್ನು ನಿತ್ಯ ಭಾಷೆಯಾಗಿ ಬಳಸುವ ಶಿವಮೊಗ್ಗದ ಮತ್ತೂರು ಗ್ರಾಮದ ಬಗ್ಗೆಯೂ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದ್ದಾರೆ.

    ಭಾನುವಾರ ಸಂಸ್ಕೃತ ದಿನವಾಗಿದ್ದರಿಂದ ಪ್ರಧಾನಿಗಳಿಗೆ ಭಾಷೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದೆ. ಪ್ರಧಾನಿಗಳು ಸಂಸ್ಕೃತದಲ್ಲಿ ಉತ್ತರಿಸಿದರು. ಅವರ ಜೊತೆ ಮಾತನಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತಿದೆ ಎಂದು ಚಿನ್ಮಯಿ ಪಬ್ಲಿಕ್ ಟಿವಿಗೆ ಹೇಳಿದ್ದಾಳೆ. ಇತ್ತ ಚಿನ್ಮಯಿ ಪೋಷಕರು ಸಹ ಮಗಳು ದೇಶದ ಪ್ರಧಾನಿಗಳ ಜೊತೆ ಮಾತನಾಡಿದ್ದಕ್ಕೆ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

  • 2018 ಗಣರಾಜೋತ್ಸವಕ್ಕೆ ಆಸಿಯಾನ್ ರಾಷ್ಟ್ರಗಳ ನಾಯಕರ ಆಗಮನ: ಪ್ರಧಾನಿ ಮೋದಿ

    2018 ಗಣರಾಜೋತ್ಸವಕ್ಕೆ ಆಸಿಯಾನ್ ರಾಷ್ಟ್ರಗಳ ನಾಯಕರ ಆಗಮನ: ಪ್ರಧಾನಿ ಮೋದಿ

    ನವದೆಹಲಿ: 2018, ಜನವರಿ 26 ರ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಆಸಿಯಾನ್ (ಆಗ್ನೇಯ ಏಷ್ಯಾ ದೇಶಗಳ ಸಂಘಟನೆ) ಒಕ್ಕೂಟದ 10 ರಾಷ್ಟ್ರಗಳ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

    ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 2018 ಜನವರಿ 26ರಂದು ನಡೆಯೋ ಗಣರಾಜೋತ್ಸವ ಕಾರ್ಯಕ್ರಮ ದೇಶದ ಇತಿಹಾಸದಲ್ಲೇ ಸ್ಮರಣೀಯವಾಗಿ ಉಳಿಯುತ್ತದೆ. ಆಸಿಯಾನ್ ರಾಷ್ಟ್ರಗಳ ಪ್ರಮುಖ ನಾಯಕರು ದೇಶದ ಮಹತ್ವದ ಸಮಾರಂಭಕ್ಕೆ ಸಾಕ್ಷಿಯಾಲಿದ್ದಾರೆ ಎಂದು ತಿಳಿಸಿದರು.

    ಅಲ್ಲದೇ 2017 ವರ್ಷವು ಆಸಿಯಾನ್ ರಾಷ್ಟ್ರ ಒಕ್ಕೂಟ ಹಾಗೂ ಭಾರತಕ್ಕೆ ವಿಶೇಷವಾದ ವರ್ಷವಾಗಿದ್ದು, ಆಸಿಯಾನ್ ರಾಷ್ಟ್ರ ಒಕ್ಕೂಟ ರಚನೆಯಾಗಿ 50 ವರ್ಷಗಳು ಹಾಗೂ ಭಾರತ ಈ ಒಕ್ಕೂಟವನ್ನು ಸೇರಿ 25 ವರ್ಷಗಳು ಪೂರ್ಣಗೊಳ್ಳಲಿದೆ ಎಂದು ಹೇಳಿದರು.

    ಇದೇ ವೇಳೆ ಮುಂದಿನ ವರ್ಷದ ಆಗಸ್ಟ್ 15 ಅನ್ನು ಗುರಿಯಾಗಿಸಿಕೊಂಡು ದೆಹಲಿಯಲ್ಲಿ ಅಣಕು ಸಂಸತ್ ನಡೆಸುವ ವಿಷಯವನ್ನು ಪ್ರಸ್ತಾಪಿಸಿದರು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಜಿಲ್ಲೆಗಳಿಂದ ಯುವ ಪೀಳಿಗೆಯನ್ನು ಆಯ್ಕೆ ಮಾಡುವ ಮೂಲಕ ಮುಂದಿನ 5 ವರ್ಷಗಳಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬುವುದರ ಬಗ್ಗೆ ಯುವ ಸಮುದಾಯದಿಂದ ಸಲಹೆಗಳನ್ನು ಪ್ರಸ್ತುತ ಪಡಿಸಲಾಗುವುದು ಎಂದರು.

  • ಮನ್ ಕೀ ಬಾತ್ ಒಂದು ಕಾರ್ಯಕ್ರಮವೇ: ಮೋದಿ ವಿರುದ್ಧ ಸಿಎಂ ವಾಗ್ದಾಳಿ

    ಮನ್ ಕೀ ಬಾತ್ ಒಂದು ಕಾರ್ಯಕ್ರಮವೇ: ಮೋದಿ ವಿರುದ್ಧ ಸಿಎಂ ವಾಗ್ದಾಳಿ

    ಬೆಂಗಳೂರು: ಮನ್ ಕೀ ಬಾತ್ ಅದು ಒಂದು ಕಾರ್ಯಕ್ರಮವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆ ಹಾಗೂ ಶಾಸ್ತ್ರಿ ಪುತ್ಥಳಿಗೆ ಗೌರವ ಸಲ್ಲಿಸಿದರು. ಈ ವೇಳೆ ಕನ್ನಡಿಗರು ‘ಕಾಮ್ ಕೀ ಬಾತ್’ ಎಂದು ಹಿಂದಿ ಹೆಸರು ಇಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿಯವರ ಮನ್ ಕೀ ಬಾತ್‍ಗೆ ಪ್ರತಿಯಾಗಿ ಪ್ರಾಸ ಬರುವಂತೆ ಕಾಮ್ ಕೀ ಬಾತ್ ಎಂದು ಹೇಳಿದ್ದೇನೆ ಅಷ್ಟೇ ಎಂದರು.

    ಮಾತನ್ನು ಮುಂದುವರಿಸಿ, ಮನ್ ಕೀ ಬಾತ್ ಅದು ಒಂದು ಕಾರ್ಯಕ್ರಮವೇ? ಪ್ರಧಾನಿ ಅವರು ಏನು ಮಾಡದೇ ಮನ್ ಕೀ ಬಾತ್ ಮಾಡುತ್ತಿದ್ದಾರೆ. ನಾವು ಕೆಲಸ ಮಾಡಿ ಕಾಮ್ ಕೀ ಬಾತ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಮತ್ತೆ ಕನ್ನಡ ಪಾಠ: ಕಾಮ್ ಕೀ ಬಾತ್ ಹೆಸರು ಇಡುವ ಬಗ್ಗೆ ಸಮರ್ಥಿಸಿದ ಅವರು, ಅನ್ಯ ಭಾಷೆಯ ಶಬ್ಧಗಳಿಗೆ ‘ಉ’ ಕಾರ ಸೇರಿಸಿದರೆ ಅದು ಕನ್ನಡ ಶಬ್ದ ಆಗುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಬಸ್ – ಬಸ್ಸು, ಕಾರ್ – ಕಾರು ಎಂದು ಹೇಳುವುದಿಲ್ಲವೇ? ಹಾಗೆ ಕಾಮ್ ಕಿ ಬಾತ್ ಎನ್ನುವುದು ಕನ್ನಡ ಪದವೇ ಎಂದು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

    ಗಾಂಧಿ ನಾಯಕತ್ವದಲ್ಲಿ ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರರು ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ಗಾಂಧೀಜಿ ನಮಗೆ ಮಾತ್ರ ಅಲ್ಲ ಅವರು ವಿಶ್ವನಾಯಕರು. ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದರೆ ಅದು ಗಾಂಧೀಜಿ ಕೊಡುಗೆ. ಅಂತಹ ಮಹಾನ್ ನಾಯಕರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಒಬ್ಬ ಮತಾಂಧನ ಗುಂಡಿಗೆ ಅವರು ಬಲಿಯಾದರು. ಗಾಂಧೀಜಿ ಅವರನ್ನು ಮರೆತರೆ ದೇಶವೇ ಇಲ್ಲ ಎಂದು ಹೇಳಿ ಸ್ಮರಿಸಿದರು.

    ಲಾಲ್ ಬಹದ್ದೂರ್ ಶಾಸ್ತ್ರಿಯವರೂ ಕೂಡಾ ದೇಶ ಕಂಡಂತಹ ಪ್ರಾಮಾಣಿಕ ಪ್ರಧಾನಿ. ಬಹಳ ಮೌಲ್ಯಯುತವಾಗಿ ಬದುಕಿದ್ದ ಶಾಸ್ತ್ರೀಜಿ ಅವರ ಜೈಜವಾನ್ ಜೈಕಿಸಾನ್ ಘೋಷಣೆ ಜನಪ್ರಿಯ. ರೈತರಿಗೆ, ಸೈನಿಕರಿಗೆ ಬಹಳ ಗೌರವ ಕೊಡುತ್ತಿದ್ದರು ಎಂದು ಕೊಂಡಾಡಿದರು.

  • ಮೋದಿಯ ಮನ್ ಕೀ ಬಾತ್‍ನಿಂದ ಆಲ್ ಇಂಡಿಯಾ ರೇಡಿಯೋ ಗಳಿಸಿದ ಆದಾಯ ಇಷ್ಟು

    ಮೋದಿಯ ಮನ್ ಕೀ ಬಾತ್‍ನಿಂದ ಆಲ್ ಇಂಡಿಯಾ ರೇಡಿಯೋ ಗಳಿಸಿದ ಆದಾಯ ಇಷ್ಟು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಆಲ್ ಇಂಡಿಯಾ ರೇಡಿಯೋ ಕೋಟಿ ಕೋಟಿ ಆದಾಯ ಗಳಿಸಿದೆ.

    ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಬುಧವಾರದಂದು ಲೋಕಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದ್ದು, ಮನ್ ಕೀ ಬಾತ್ ಕಾರ್ಯಕ್ರಮದಿಂದ ಆಲ್ ಇಂಡಿಯಾ ರೇಡಿಯೋ ಕಳೆದ ಎರಡು ವರ್ಷಗಳಲ್ಲಿ 10 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದ್ದಾರೆ.

    ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ 2015-16ರ ಹಣಕಾಸು ವರ್ಷದಲ್ಲಿ ಆಲ್ ಇಂಡಿಯಾ ರೇಡಿಯೋ 4.78 ಕೋಟಿ ರೂ. ಗಳಿಸಿದೆ. ಹಾಗೇ 2016-17ನೇ ಹಣಕಾಸು ವರ್ಷದಲ್ಲಿ 5.19 ಕೋಟಿ ರೂ ಆದಾಯ ಗಳಿಸಿದೆ ಎಂದು ಹೇಳಿದ್ದಾರೆ.

    ಕಾರ್ಯಕ್ರಮದ ಪ್ರಸಾರ ಸಂಪೂರ್ಣವಾದ ಬಳಿಕ ಪ್ರಾದೇಶಿಕ ಆವೃತ್ತಿಯನ್ನು 18 ಭಾಷೆಗಳು ಹಾಗೂ 33 ಉಪಭಾಷೆಗಳಲ್ಲಿ ಅದೇ ದಿನ ಪ್ರಸಾರ ಮಾಡಲಾಗುತ್ತದೆ. ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲೂ ಕಾರ್ಯಕ್ರಮ ಪ್ರಸಾರವಾಗುತ್ತದೆ. ದೇಶದ ಜನರಿಗಾಗಿ ಟ್ರಾನ್ಸ್‍ಮಿಟ್ಟರ್‍ಗಳ ಮೂಲಕ ಹಾಗೂ ವಿಶ್ವದಾದ್ಯಂತ ಕೇಳುಗರಿಗಾಗಿ ಅಂತರ್ಜಾಲ ಹಾಗೂ ಶಾರ್ಟ್ ವೇವ್ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಜಾಹಿರಾತುಗಳಿಂದ ರೇಡಿಯೋಗೆ ಆದಾಯ ಹರಿದು ಬರುತ್ತದೆ. 2014ರ ಅಕ್ಟೋಬರ್ 3 ರಂದು ಮೋದಿಯ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು. ಪ್ರತಿ ತಿಂಗಳು ನಿರ್ದಿಷ್ಟ ಭಾನುವಾರದಂದು ಕಾರ್ಯಕ್ರಮ ಪ್ರಸಾರವಾಗುತ್ತದೆ. ಕಾರ್ಯಕ್ರಮದಲ್ಲಿ ಮೋದಿ ಭಾಷಣದ ಮುಂಚೆ ಹಾಗೂ ನಂತರ ಹಲವಾರು ಬ್ರ್ಯಾಂಡ್‍ಗಳು ಲಕ್ಷಾಂತರ ಕೇಳುಗರನ್ನ ತಲುಪಲು ಜಾಹಿರಾತು ನೀಡಲು ಬಯಸುತ್ತವೆ.

    ಕಾರ್ಯಕ್ರಮದಲ್ಲಿ ಮೋದಿ ರಾಷ್ಟ್ರ ಹಾಗೂ ಸಾಮಾಜದ ಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡ್ತಾರೆ. 2015ರ ಜನವರಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಅಲ್ಲದೆ ಯಾವ ವಿಷಯದ ಬಗ್ಗೆ ನಾನು ಮಾತನಾಡ್ಬೇಕು ಎಂದು ಮೋದಿ ಜನರಿಗೆ ಸಲಹೆ ಕೇಳಿದ್ದು, ನರೇಂದ್ರ ಮೋದಿ ಹಾಗೂ ಮೈ ಗವರ್ನಮೆಂಟ್ ವೆಬ್‍ಸೈಟ್ ಮತ್ತು ಆ್ಯಪ್ ಮೂಲಕ ಜನರು ಸೂಚಿಸಿದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ತಾರೆ.

  • ಹೊಸ ಭಾರತಕ್ಕೆ ವಿಐಪಿ ಅಲ್ಲ, Every Person Important: ಮೋದಿ

    ಹೊಸ ಭಾರತಕ್ಕೆ ವಿಐಪಿ ಅಲ್ಲ, Every Person Important: ಮೋದಿ

    ನವದೆಹಲಿ: ದೇಶದಲ್ಲಿ ಕೆಲವರನ್ನು ಗಣ್ಯ ವ್ಯಕ್ತಿಗಳೆಂದು ಗುರುತಿಸುವ ಬದಲು ಎಲ್ಲರನ್ನೂ ಗಣ್ಯರೆಂದು ಪರಿಗಣಿಸಬೇಕಿದೆ ಎಂದು ಮೋದಿ ಕೆಂಪು ದೀಪ ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.

    31ನೇ ವಾರದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹನಗಳ ಮೇಲೆ ಕೆಂಪು ದೀಪ ಬಳಕೆ ವಿಐಪಿ ಸಂಸ್ಕೃತಿ. ಕೆಂಪು ದೀಪಗಳ ಬಳಕೆ ನಿಷೇಧಿಸಿದ ನಂತರ ನನಗಿದು ಮನವರಿಕೆಯಾಯಿತು. ಕೆಂಪು ದೀಪ ಬಳಕೆ ನಿಷೇಧಿಸಿದ್ದಕ್ಕೆ ಜಬಲ್‍ಪುರ್ ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಅಭಿನಂದನೆ ಸಲ್ಲಿಸಿದ್ದಾರೆ ಅಂತಾ ಅವರು ಹೇಳಿದ್ರು.

    ಹವಾಮಾನ ವೈಪರೀತ್ಯ ಹಾಗೂ ಬೇಸಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ದೇಶದ ನಾಗರಿಕರಿಗೆ ಕಿವಿಮಾತು ಹೇಳಿದ್ರು. ಹವಾಮಾನ ವೈಪರೀತ್ಯ ದೇಶದ ಆರ್ಥಿಕಾಭಿವೃದ್ಧಿಗೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಜೆ ದಿನದಲ್ಲಿ ಹೊಸ ಆವಿಷ್ಕಾರಗಳನ್ನ ಕೈಗೊಳ್ಳಬೇಕು. ಮಕ್ಕಳು, ಯುವಜನತೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು. ಗಾಳಿ, ನೀರಿನ ಮಾಲಿನ್ಯ ತಡೆಯುವುದು ಇಂದಿನ ಮೂಲಭೂತ ಸಮಸ್ಯೆಯಾಗಿದೆ. ಜಗತ್ತಿನಲ್ಲಿ ತಾಪಮಾನ ಏರಿಕೆಯಿಂದ ಋತುಮಾನದಲ್ಲಿ ಬದಲಾವಣೆಗಳು ಆಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಮೇ-ಜೂನ್ ನಲ್ಲಿನ ಬಿಸಿಲು ತಾಪ ಇದೀಗ ಏಪ್ರಿಲ್-ಮೇನಲ್ಲೇ ಆಗುತ್ತಿದೆ. ಇದರಿಂದಾಗಿ ಅಂತರ್ಜಲ ಕುಸಿಯುತ್ತಿದ್ದು ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕೈಲಾದಷ್ಟು ನೀರು, ಆಹಾರ ವ್ಯವಸ್ಥೆ ಮಾಡಬೇಕು ಅಂತಾ ಅಂದ್ರು.

    ಬಡವರ ಬಳಿಗೆ ಹೋಗಿ ಅವರ ಸಂಕಷ್ಟ ಅರಿತು ನೆರವಾಗಬೇಕು. ಯುವಕರು ರೋಬೋಟ್ ನಂತೆ ವರ್ತಿಸಬಾರದು. ತಂತ್ರಜ್ಞಾನದಿಂದಾಗಿ ಮನೆಯೊಳಗಿದ್ದರೂ ದೂರವಾದಂತಿದ್ದಾರೆ. ದೇಶವನ್ನು ಸುತ್ತಬೇಕು. ವೈವಿಧ್ಯತೆಯನ್ನು ಅರಿಯಬೇಕು ಎಂದು ಸಲಹೆ ನೀಡಿದ ಅವರು, ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ಕಲಿಯಿರಿ ಅಂತಾ ಹೇಳಿದ್ದಾರೆ. ಇದೇ ವೇಳೆ ಸಂತ ರಾಮಾನುಜ ಆಚಾರ್ಯರ ಜನ್ಮ ದಿನಾಚರಣೆಯನ್ನೂ ಪ್ರಧಾನಿ ಸ್ಮರಿಸಿದರು.

  • ಮನ್ ಕೀ ಬಾತ್‍ನಲ್ಲಿ ಮೈಸೂರಿಗನ ಬಗ್ಗೆ ಮೋದಿ ಮೆಚ್ಚುಗೆ ಮಾತು!

    ಮನ್ ಕೀ ಬಾತ್‍ನಲ್ಲಿ ಮೈಸೂರಿಗನ ಬಗ್ಗೆ ಮೋದಿ ಮೆಚ್ಚುಗೆ ಮಾತು!

    ಬೆಂಗಳೂರು: 2017ನೇ ವರ್ಷದ 2ನೇ ಹಾಗೂ ಮನ್ ಕೀ ಬಾತ್‍ನ 29ನೇ ಸರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಸಂತೋಷ್ ಎಂಬವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂತೋಷ್ ಬಗ್ಗೆ ಮೋದಿ ಅವರು ಏನು ಹೇಳಿದ್ರು ಅನ್ನೋದನ್ನು ಅವರ ಮಾತುಗಳಲ್ಲೇ ಓದಿ.

    ಮೈಸೂರಿನ ಸಂತೋಷ್ ಎಂಬವರು ನರೇಂದ್ರ ಮೋದಿ ಆಪ್‍ನಲ್ಲಿ ಲಕ್ಕಿ ಗ್ರಾಹಕ್ ಯೋಜನೆಯಡಿ 1000 ರೂಪಾಯಿ ಪ್ರಶಸ್ತಿ ಸಿಕ್ಕಿದ್ದರ ಬಗ್ಗೆ ಬರೆದಿದ್ದರು. ಇದರ ಜೊತೆಗೆ ಅವರು ಹೇಳಿರುವ ಒಂದು ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕೆಂದೆನಿಸುತ್ತಿದೆ. ನನಗೆ ಒಂದು ಸಾವಿರ ರೂಪಾಯಿ ಬಹುಮಾನ ಸಿಕ್ಕಿತ್ತು. ಇದೇ ವೇಳೆ ಬಡ ವೃದ್ಧ ಮಹಿಳೆಯೊಬ್ಬರ ಮನೆಗೆ ಬೆಂಕಿ ಬಿದ್ದ ವಿಚಾರವೂ ನನ್ನ ಗಮನಕ್ಕೆ ಬಂತು. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಅಗ್ನಿಗಾಹುತಿಯಾಗಿದ್ದವು. ಇದನ್ನು ತಿಳಿದಾಗ ನನಗೆ ಸಿಕ್ಕಿದ ಹಣ ಈ ಮಹಿಳೆಯ ಹಕ್ಕು ಎಂದೆನಿಸಿತು. ಹೀಗಾಗಿ ನಾನು 1 ಸಾವಿರ ರೂಪಾಯಿಯನ್ನು ಆ ವೃದ್ಧೆಗೆ ನೀಡಿದೆ. ನನಗೆ ಇದರಿಂದ ತುಂಬಾ ಸಂತಸವಾಗಿದೆ ಸಂತೋಷ್‍ಜೀ. ನಿಮ್ಮ ಹೆಸರು ಮತ್ತು ನಿಮ್ಮ ಕೆಲಸ ನಮಗೆಲ್ಲರಿಗೂ ಸಂತಸ ನೀಡಿದೆ. ನೀವು ಬಹುದೊಡ್ಡ ಪ್ರೇರಣೆಯ ಕೆಲಸ ಮಾಡಿದ್ದೀರಿ.