Tag: ಮನೋಹರ್

  • ಕಾಂಗ್ರೆಸ್ ಕಚೇರಿಯಲ್ಲಿ ಬಡಿದಾಟ- ನಾರಾಯಣಸ್ವಾಮಿ ಮೇಲೆ ಮನೋಹರ್ ಬೆಂಬಲಿಗರಿಂದ ಹಲ್ಲೆ

    ಕಾಂಗ್ರೆಸ್ ಕಚೇರಿಯಲ್ಲಿ ಬಡಿದಾಟ- ನಾರಾಯಣಸ್ವಾಮಿ ಮೇಲೆ ಮನೋಹರ್ ಬೆಂಬಲಿಗರಿಂದ ಹಲ್ಲೆ

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಹೈ ಡ್ರಾಮಾ ನಡೆದಿದ್ದು, ರಾಮಲಿಂಗಾರೆಡ್ಡಿ ಜೊತೆ ಮಾತನಾಡುವ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಮೇಲೆ ಕಾಂಗ್ರೆಸ್ ಮುಖಂಡ ಮನೋಹರ್ ಹಲ್ಲೆ ನಡೆಸಿದ್ದಾರೆ.

    ಕಾಂಗ್ರೆಸ್ ನೂತನ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದರು. ರಾಮಲಿಂಗಾರೆಡ್ಡಿ ಜೊತೆ ಮಾತನಾಡುವ ವಿಷಯದಲ್ಲಿ ಎಂಎಲ್‌ಸಿ ನಾರಾಯಣ ಸ್ವಾಮಿ ಹಾಗೂ ಮನೋಹರ್ ನಡುವೆ ವಾಗ್ವಾದ ನಡೆದಿದೆ. ಹೀಗಾಗಿ ರಾಮಲಿಂಗಾರೆಡ್ಡಿ ಕೆಪಿಸಿಸಿ ಕಚೇರಿಯಿಂದ ಹೊರ ಹೋದ ನಂತರ ನಾರಾಯಣ ಸ್ವಾಮಿ ಹಾಗೂ ಮನೋಹರ್ ನಡುವೆ ಗಲಾಟೆ ನಡೆದಿದೆ.

    ಗಲಾಟೆ ವೇಳೆ ಎಂಎಲ್‌ಸಿ ನಾರಾಯಣ ಸ್ವಾಮಿಗೆ ಮನೋಹರ್ ಹಾಗೂ ಬೆಂಬಲಿಗರು ಹೊಡೆದು ಹಲ್ಲೆ ನಡೆಸಿದ್ದಾರೆ. ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಎರಡೂ ಕಡೆಯವರನ್ನು ಕೂರಿಸಿ ಮಾತನಾಡಿ, ರಾಜೀ ಮಾಡಿಸಿ ಸಮಾಧಾನ ಪಡಿಸಿದ್ದಾರೆ. ಬಳಿಕ ನಾರಾಯಣ ಸ್ವಾಮಿಯವರು ತಮ್ಮ ಸರ್ಕಾರಿ ಕಾರಿನಲ್ಲಿ ಕೆಪಿಸಿಸಿ ಕಚೇರಿಯಿಂದ ತೆರಳಿದ್ದಾರೆ. ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

  • ಆತ್ಮಹತ್ಯೆ ಮಾಡಿಕೊಳ್ಳೋ ಮಗಳಲ್ಲ, ಗಂಡು ಮಗನಂತೆ ಧೈರ್ಯವಂತಳು: ಲಕ್ಷ್ಮಿ ದೊಡ್ಡಮ್ಮ

    ಆತ್ಮಹತ್ಯೆ ಮಾಡಿಕೊಳ್ಳೋ ಮಗಳಲ್ಲ, ಗಂಡು ಮಗನಂತೆ ಧೈರ್ಯವಂತಳು: ಲಕ್ಷ್ಮಿ ದೊಡ್ಡಮ್ಮ

    ಕೋಲಾರ: ಸಿಐಡಿ, ಡಿವೈಎಸ್‍ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಗಳು ಎದ್ದಿದ್ದು, ಆಕೆ ಆತ್ಮಹತ್ಯೆ ಮಾಡಿಕೊರ್ಳಳುವ ಮಗಳಲ್ಲ, ಆಕೆ ಗಂಡು ಮಗನಂತೆ ಧೈರ್ಯವಂತೆ ಎಂದು ದೊಡ್ಡಮ್ಮ ನಾರಾಯಣಮ್ಮ ಹೇಳಿದ್ದಾರೆ.

    ಕೋಲಾರದ ತಮ್ಮ ನಿವಾಸದ ಬಳಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಕ್ಷ್ಮೀಗೆ ಯಾರೊ ಏನೋ ಮಾಡಿದ್ದಾರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ಮನೆಯಲ್ಲೆ ಮಾಡಿಕೊಳ್ಳುತ್ತಿದ್ದಳು. ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳುವ ಮಗಳಲ್ಲ, ಆಕೆ ಗಂಡು ಮಗನಂತೆ ಧೈರ್ಯವಂತಳು. ಅದು ಬಿಟ್ಟು ಸ್ನೇಹಿತರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ರು.

    ಪೊಲೀಸ್ ಕೆಲಸಕ್ಕೆ ಸೇರಿದ ಮೇಲೆ ಆಕೆಗೆ ಸ್ವಲ್ಪ ಕೋಪ ಇತ್ತು. ಆದರೆ ಹೀಗೆ ಮಾಡಿಕೊಳ್ಳುವಂತ ಮಗಳಲ್ಲ. ಭಾನುವಾರ ಬರುವುದಾಗಿ ಹೇಳಿದ್ದಳು. ಆದರೆ ಅಷ್ಟರಲ್ಲಿ ಹೀಗಾಗಿದೆ. ಮಕ್ಕಳು ಇಲ್ಲ ಅನ್ನೋ ಕೊರಗುವ ಮಗಳಲ್ಲ ಆಕೆ. ಇನ್ನೂ ಇಲಾಖೆ ಬಡ್ತಿ ವಿಚಾರ ಗೊತ್ತಿಲ್ಲ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಲಕ್ಷ್ಮಿ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್- ಪ್ರಾಣ ಹೋಗೋ ಮುನ್ನ ಕಾರಲ್ಲಿ ಆಸ್ಪತ್ರೆಗೆ ಕರೆತಂದಿದ್ದ ಸ್ನೇಹಿತರು!

    ಲಕ್ಷ್ಮಿ ಅವರು ಕಳೆದ 8 ವರ್ಷದ ಹಿಂದೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಪೋಷಕರಿಂದ ದೂರ ಇದ್ದ ಲಕ್ಷ್ಮೀ, ಬೆಂಗಳೂರಿನಲ್ಲಿ ವಾಸವಾಗಿದ್ದರು. ನಿನ್ನೆ ಮನೋಹರ್ ಮನೆಯಲ್ಲಿ ಲಕ್ಷ್ಮಿ ಸೇರಿ ಐವರು ಸೇರಿ ಪಾರ್ಟಿ ಮಾಡಿದ್ರು. ಪಾರ್ಟಿ ನಂತರ 10 ಗಂಟೆಗೆ ರೂಂಗೆ ತೆರಳಿದ್ದ ಲಕ್ಷ್ಮಿ ಇಂದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಲಕ್ಷ್ಮಿ ಆತ್ಮಹತ್ಯೆಯ ಹಿಂದೆ ಅನುಮಾನಗಳು ಹುಟ್ಟಿಕೊಂಡಿದ್ದು, ಮನೋಹರ್, ಪ್ರಜ್ವಲ್ ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    https://www.youtube.com/watch?v=EYEpW8uZsx8&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

  • ದರ್ಶನ್ ಜೊತೆ ದಿ ವಿಲನ್ ನಿರ್ಮಾಪಕರ ಮಾತುಕತೆ!

    ದರ್ಶನ್ ಜೊತೆ ದಿ ವಿಲನ್ ನಿರ್ಮಾಪಕರ ಮಾತುಕತೆ!

    ಓರ್ವ ನಿರ್ಮಾಪಕ ಮತ್ತು ಯಾವುದೇ ಸ್ಟಾರ್ ನಟನನ್ನು ಭೇಟಿಯಾದರೂ ತಕ್ಷಣವೇ ಹೊಸ ಸಿನಿಮಾ ಶುರುವಾಗಲಿದೆಯಾ ಎಂಬ ಪ್ರಶ್ನೆ ಮೊಳೆತುಬಿಡುತ್ತೆ. ಹಾಗಿರುವಾಗ ಕನ್ನಡ ಚಿತ್ರರರಂಗದ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡಿರೋ ಸಿ.ಆರ್.ಮನೋಹರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾದರೆ ಅದೇ ಧಾಟಿಯ ಆಲೋಚನೆ ಬರೋದರಲ್ಲಿ ಯಾವ ಅಚ್ಚರಿಯೂ ಇಲ್ಲ.

    ಸಿ.ಆರ್. ಮನೋಹರ್ ರಾಜರಾಜೇಶ್ವರಿ ನಗರದಲ್ಲಿರೋ ಮನೆಗೆ ಭೇಟಿ ನೀಡಿ ದರ್ಶನ್ ಅವರ ಜೊತೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಫೋಟೋಗಳನ್ನು ಮನೋಹರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡುತ್ತಿದ್ದಂತೆಯೇ ಇದು ಹೊಸ ಸಿನಿಮಾ ಸಂಬಂಧಿತ ಮಾತುಕತೆ ಎಂಬರ್ಥದಲ್ಲಿ ಚರ್ಚೆಯೂ ಶುರುವಾಗಿದೆ. ಆದರೆ ಈ ಬಗ್ಗೆ ಮನೋಹರ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

    ಅವರು ಸಾಕಷ್ಟು ದಿನಗಳಿಂದಲೂ ದರ್ಶನ್ ಅವರನ್ನು ಭೇಟಿ ಮಾಡಬೇಕೆಂಬ ಇರಾದೆ ಹೊಂದಿದ್ದರಂತೆ. ಆದರೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಈ ಭೇಟಿಯ ಸಂದರ್ಭದಲ್ಲಿ ಯಾವುದೇ ಸಿನಿಮಾದ ಮಾತುಕತೆಯೂ ನಡೆದಿಲ್ಲ. ಇದೊಂದು ಔಪಚಾರಿಕ ಭೇಟಿಯಷ್ಟೇ ಅಂತ ಮನೋಹರ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈಗ ದರ್ಶನ್ ಸಾಲು ಸಾಲಾಗಿ ಮೂರ್ನಾಲಕ್ಕು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮನೋಹರ್ ಕೂಡಾ ಹೊಸ ಸಿನಿಮಾ ಶುರು ಮಾಡಿದ್ದಾರೆ. ಆದ್ದರಿಂದ ಇವರಿಬ್ಬರ ಕಾಂಬಿನೇಷನ್ನಿನ ಚಿತ್ರ ಸದ್ಯಕ್ಕೆ ಶುರುವಾಗೋ ಲಕ್ಷಣಗಳಿಲ್ಲ.

    ಆದರೆ ಈ ಭೇಟಿಯೇ ಮನೋಹರ್ ನಿರ್ಮಾಣದಲ್ಲಿ ದರ್ಶನ್ ಅವರದ್ದೊಂದು ಸಿನಿಮಾ ಮೂಡಿ ಬರುವ ಮುನ್ಸೂಚನೆ ಎಂಬುದನ್ನು ಮಾತ್ರ ತಳ್ಳಿ ಹಾಕುವಂತಿಲ್ಲ. ಮನೋಹರ್ ಈಗಾಗಲೇ ದೊಡ್ಡ ಬಜೆಟ್ಟಿನ ಚಿತ್ರಗಳ ಮೂಲಕ ಸದ್ದು ಮಾಡಿರುವ ನಿರ್ಮಾಪಕರು. ರೋಗ್, ವಜ್ರಕಾಯ, ಶಿವಂ, ದಿ ವಿಲನ್ ಮುಂತಾದ ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರಾದ ಮನೋಹರ್ ಅವರಿಗೆ ದರ್ಶನ್ ಚಿತ್ರ ನಿರ್ಮಾಣ ಮಾಡೋ ಆಸೆಯಂತೂ ಇದೆಯಂತೆ.

  • ಪ್ರಯಾಣಿಕರ ಗಮನಕ್ಕೆ: ಯಾರ ಗಮನಕ್ಕೂ ಬಾರದ ನಿಗೂಢವಿದೆ ಇಲ್ಲಿ…!

    ಪ್ರಯಾಣಿಕರ ಗಮನಕ್ಕೆ: ಯಾರ ಗಮನಕ್ಕೂ ಬಾರದ ನಿಗೂಢವಿದೆ ಇಲ್ಲಿ…!

    ಸದ್ಯ ಪ್ರೇಕ್ಷಕರ ವಲಯದಲ್ಲಿ ಕುತೂಹಲದ ತೀವ್ರತೆಯನ್ನು ಕಾಯ್ದಿಟ್ಟುಕೊಂಡಿರುವ ಚಿತ್ರ ‘ಪ್ರಯಾಣಿಕರ ಗಮನಕ್ಕೆ’. ಅರ್ಜುನ್ ಸರ್ಜಾ ಕುಟುಂಬದ ಭರತ್ ಸರ್ಜಾ ನಾಯಕನಾಗಿರುವ ಈ ಚಿತ್ರ ತೆರೆ ಕಾಣುವ ಸನಿಹದಲ್ಲಿರುವಾಗಲೇ ಚಿತ್ರ ತಂಡ ಕಥೆಯ ಬಗೆಗಿನ ಕೆಲ ಸುಳಿವನ್ನು ಬಿಟ್ಟುಕೊಡುವ ಮೂಲಕ ಪ್ರೇಕ್ಷಕರು ಮತ್ತಷ್ಟು ಆಕರ್ಷಿತರಾಗುವಂತೆಯೂ ಮಾಡುತ್ತಿದೆ.

    ಮನೋಹರ್ ನಿರ್ದೇಶನದ ಈ ಚಿತ್ರದ ಶೀರ್ಷಿಕೆ, ಪೋಸ್ಟರುಗಳು ಇದೊಂದು ಹೊಸಾ ಅಲೆಯ ಚಿತ್ರ ಎಂಬುದನ್ನು ಜಾಹೀರು ಮಾಡಿವೆ. ಇದು ಒಂದು ಪ್ರಯಾಣದ ಸಂದರ್ಭದಲ್ಲಿ ಮುಖಾಮುಖಿಯಾಗುವ ಕೆಲ ಪಾತ್ರಗಳ ನಟುವೆ ನಡೆಯೋ ಕಥಾ ಹಂದರ ಹೊಂದಿದೆ. ಒಂದು ಬಸ್ಸಿನೊಳಗೆ ಬೇರೆ ಬೇರೆ ಥರದ ಬದುಕು ಭಾವಗಳನ್ನು ಅನಾವರಣಗೊಳಿಸಿರೋ ಈ ಚಿತ್ರದಲ್ಲಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ನದ್ದೇ ಪ್ರಧಾನ ಪಾತ್ರ.

    ಕಣ್ಣೆದುರೇ ಇದ್ದರೂ ಕಣ್ಣರಳಿಸಿ ನೋಡದಂಥಾ ಅದೆಷ್ಟೋ ವೈಚಿತ್ರ್ಯಗಳು ನಮ್ಮ ಸುತ್ತಲೇ ಇರುತ್ತವೆ. ಅಂಥವನ್ನೆಲ್ಲ ತೀರಾ ಸಹಜವಾಗಿ ಕಾಣಿಸಬೇಕೆಂಬ ಉದ್ದೇಶದಿಂದ ಚಿತ್ರ ತಂಡ ಹಲವಾರು ರಿಸ್ಕಿ ಸವಾಲುಗಳನ್ನೂ ಯಶಸ್ವಿಯಾಗಿ ಸ್ವೀಕರಿಸಿದೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರಯಾಣದ ಪರಿಕಲ್ಪನೆಗೆ ಅತ್ಯಂತ ಸೂಕ್ತ ಸ್ಥಳ. ಇಲ್ಲಿ ಕತ್ತಲಾವರಿಸುತ್ತಲೇ ಬೇರೆಯದ್ದೇ ಲೋಕ ತೆರೆದುಕೊಳ್ಳುತ್ತದೆ. ಅದನ್ನು ಹಾಗೆಯೇ ಸೆರೆ ಹಿಡಿಯುವ ಉದ್ದೇಶದಿಂದ ಅದೆಷ್ಟೋ ರಾತ್ರಿಗಳಲ್ಲಿ ಕ್ಯಾಮೆರಾ ಮರೆಯಾಗಿಸಿಕೊಂಡು ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆಯಂತೆ. ಇಂಥಾ ಹಲವಾರು ವಿಶಿಷ್ಟವಾದ ಪ್ರಯೋಗಗಳ ಮೊತ್ತವಾಗಿ ಮೂಡಿ ಬಂದಿರೋ ಈ ಚಿತ್ರ ಥೇಟರು ತಲುಪೋ ಕ್ಷಣಗಳು ಸಮೀಪಿಸುತ್ತಿವೆ.

    https://youtu.be/tw-Yw-0l40w

    https://youtu.be/nSFjVroEYKk

  • ಭಾರತೀಯ ಸೇನೆಗೂ ಉಪಯುಕ್ತವಾಯ್ತು ಮಣಿಪಾಲದ ಪ್ರೊಫೆಸರ್ ಕಂಡುಹಿಡಿದ ಹೊಸ ದೂರದರ್ಶಕ

    ಭಾರತೀಯ ಸೇನೆಗೂ ಉಪಯುಕ್ತವಾಯ್ತು ಮಣಿಪಾಲದ ಪ್ರೊಫೆಸರ್ ಕಂಡುಹಿಡಿದ ಹೊಸ ದೂರದರ್ಶಕ

    ಉಡುಪಿ: ಮನುಷ್ಯನಿಗೆ ಸಾಧನೆ ಮಾಡಬೇಕು ಎಂಬ ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಇಂದಿನ ಪಬ್ಲಿಕ್ ಹೀರೋನೇ ಸಾಕ್ಷಿ.

    ಲ್ಯಾಬ್ ಇನ್ಸ್‍ಸ್ಟ್ರಕ್ಟರ್ ಆಗಿ ಕೆಲಸ ಮಾಡುತ್ತಿರುವ ಉಡುಪಿಯ ಮಣಿಪಾಲದ ಪ್ರೊ. ಮನೋಹರ್ ಪೇಟೆಂಟ್‍ಗಳ ಮೇಲೆ ಪೇಟೆಂಟ್ ಪಡೆದುಕೊಂಡಿದ್ದಾರೆ. ಭಾರತೀಯ ಸೇನೆಗೂ ಇವರ ಅನ್ವೇಷಣೆ ಉಪಯುಕ್ತವಾಗಿದೆ. ಪ್ರೊ. ಮನೋಹರ್ ಎಂಐಟಿ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಸ್ವತಃ ಸಂಶೋಧನೆ ಮಾಡಿ, ದೂರದರ್ಶಕವನ್ನು ಕಂಡು ಹಿಡಿದಿದ್ದಾರೆ.

    ಈ ಬೈನಾಕ್ಯುಲರ್ ಒಳಗೆ 9 ಲೆನ್ಸ್ ಅಳವಡಿಸಿದ್ದಾರೆ. ಪಿವಿಸಿ ಪೈಪ್, ಭೂತಕನ್ನಡಿಗಳನ್ನು ಬಳಸಿಕೊಂಡು ಈ ಸಾಧನೆ ಮಾಡಿದ್ದಾರೆ. ಬೇರೆ ದೂರದರ್ಶಕಗಳಲ್ಲಿ ತಲೆಕೆಳಗಾಗಿ ದೃಶ್ಯಗಳು ಕಂಡರೆ, ಮನೋಹರ್ ಕಂಡುಹಿಡಿದಿರೋ ಬೈನಾಕುಲರ್‍ನಲ್ಲಿ ಕಣ್ಣಿನಲ್ಲಿ ಕಾಣಿಸುವಂತೆಯೇ ನೋಡಬಹುದು. ಮಣಿಪಾಲ ವಿವಿಯ ಎಂಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಮನೋಹರ್ ವಿಜ್ಞಾನಿಗಳು ಮಾಡುವ ಸಾಧನೆಯನ್ನು ಮಾಡಿದ್ದಾರೆ. ಈಗ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಣೆ ಮಾಡಿದ್ದು ಮಿಲಿಟರಿ ಅಧಿಕಾರಿಗಳ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ.

    ಮನೋಹರ್ ಅವರ ಸಾಧನೆಗೆ ಭಾರತ ಸರ್ಕಾರದಿಂದ ಪೇಟೆಂಟ್ ಸಿಕ್ಕಿದೆ. ಭಾರತೀಯ ಸೇನೆಯಿಂದ 200 ದೂರದರ್ಶಕಗಳನ್ನು ಸಿದ್ಧಪಡಿಸಿಕೊಡುವಂತೆ ಆರ್ಡರ್ ಬಂದಿದೆ. 10 ಕಿಲೋಮೀಟರ್ ದೂರದಲ್ಲಿರುವ ಬೋರ್ಡ್‍ಗಳನ್ನು ಮನೋಹರ್ ಅವರ ಸಾಧನದಲ್ಲಿ ನೋಡಬಹುದು, ದೂರದಲ್ಲಿರುವ ಬೋರ್ಡ್‍ಗಳನ್ನು ಓದಬಹುದು. ಶತ್ರು ರಾಷ್ಟ್ರದ ವಾಹನಗಳು ನಮ್ಮ ದೇಶದತ್ತ ಬರುತ್ತಿದ್ರೆ ಅದನ್ನು ಓದಿ ಗುರುತಿಸಬಹುದು. ಚಂದ್ರನ ಮೇಲಿನ ಗುಳಿಗಳನ್ನು ಸ್ಪಷ್ಟವಾಗಿ ನೋಡಬಹುದು. ಶನಿಗ್ರಹದ ವರ್ತುಲಗಳನ್ನು ನೋಡಬಹುದು. ಗ್ರಹಣಗಳಾದಾಗ ಈ ದೂರದರ್ಶಕದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡುವ ಕೆಲಸವನ್ನು ಪ್ರೊ. ಮನೋಹರ್ ಮಾಡುತ್ತಾ ಬಂದಿದ್ದಾರೆ.

    ಸೂಕ್ಷ್ಮದರ್ಶಕ ಮತ್ತು ದೂರ ದರ್ಶಕವನ್ನು ಬಹಳ ಕಡಿಮೆ ವೆಚ್ಚದಲ್ಲಿ ತಯಾರಿಸಿದ್ದು ಮನೋಹರ್ ಅವರ ಸಾಧನೆ. ಇಡೀ ಟೆಲಿಸ್ಕೋಪ್ ಒಂದೇ ಟ್ಯೂಬ್‍ನಲ್ಲಿ ಫಿಕ್ಸ್ ಮಾಡಿದ ಚಾಕಚಕ್ಯತೆಯನ್ನು ಸ್ಕೆಚ್ ಮಾಡಿದ್ದಾರೆ. 40 ರಿಂದ 50 ಕಿಲೋಮೀಟರ್ ವರೆಗಿನ ಯುದ್ಧಭೂಮಿಗೆ ಬಹಳ ಉಪಯುಕ್ತವಾಗಿದೆ. ಚಂದ್ರಗ್ರಹಣ, ಸೂರ್ಯಗ್ರಹಣ, ಗ್ರಹಗಳು, ಸಮುದ್ರ ಹೀಗೆ ಎಲ್ಲವನ್ನೂ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಮರದ ಕಟ್ಟಿಂಗ್ ಗೇಜ್ ನಿರ್ಮಾಣ ಮಾಡಿದ್ದು, ಆ ಸಾಧನಕ್ಕೂ ಪೇಟೆಂಟ್ ಸಿಕ್ಕಿದೆ. ಒಟ್ಟಿನಲ್ಲಿ ಇಂಡಿಯಾ, ಅಮೆರಿಕಾ ಸೇರಿದಂತೆ 37 ದೇಶಗಳ ಪೇಟೆಂಟ್ ಸಿಕ್ಕ ಮಹಾನ್ ಸಾಧನ ನಮ್ಮ ನಡುವೆ ಇರೋದು ಹೆಮ್ಮೆಯ ಸಂಗತಿ.

    https://www.youtube.com/watch?v=debF78Eud0g

  • ಹಳ್ಳಿ ಹೈದನಿಗೆ ಓಲಿದ ಬಂತು ರಾಷ್ಟ್ರ ಮಟ್ಟದ ಪ್ರಶಸ್ತಿ- ಬಾಲಕನಿಗೆ ಈಗ ಭವಿಷ್ಯದ್ದೇ ಚಿಂತೆ!

    ಹಳ್ಳಿ ಹೈದನಿಗೆ ಓಲಿದ ಬಂತು ರಾಷ್ಟ್ರ ಮಟ್ಟದ ಪ್ರಶಸ್ತಿ- ಬಾಲಕನಿಗೆ ಈಗ ಭವಿಷ್ಯದ್ದೇ ಚಿಂತೆ!

    ಚಿಕ್ಕಬಳ್ಳಾಪುರ: ಬಡ ಕುಟುಂಬದಲ್ಲಿ ಜನಿಸಿದ ಬಾಲಕ. ನಟನೆ ಆನ್ನೋದು ಆತನ ಗೊತ್ತಿರಲಿಲ್ಲ. ಆದ್ರೆ ಆಕಸ್ಮಿಕವಾಗಿ ಸಿಕ್ಕ ಅವಕಾಶದಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅತ್ಯುನ್ನತ ಬಾಲ ನಟ ಪ್ರಶಸ್ತಿ ಪಡದುಕೊಂಡ ಕನ್ನಡನಾಡಿನ ಹೆಮ್ಮೆಯ ಪ್ರತಿಭೆ. ಪ್ರಶಸ್ತಿ ಏನೋ ಬಂತು ಆದ್ರೆ ಮುಂದೇನು ಅನ್ನೋ ಭವಿಷ್ಯದ ಚಿಂತೆ ಎಂದು ಬಾಲಕನನ್ನು ಕಾಡುತ್ತಿದೆ.

    ರೈಲ್ವೇ ಚಿಲ್ಡ್ರನ್ ಅನ್ನೋ ಒಂದು ಸಾಮಾಜಿಕ ಕಳಿಕಳಿಯ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಸಿ ಅತ್ಯುತ್ತಮ ರಾಷ್ಟ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡ ಬಾಲಕನ ಹೆಸರು ಕೆ.ಮನೋಹರ್. ಮನೋಹರ್ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಡಲಬಂಡೆ ಗ್ರಾಮದ ನಿವಾಸಿ. ಕೃಷ್ಣಪ್ಪ-ಗಾಯಿತ್ರಮ್ಮ ದಂಪತಿಯ ಪುತ್ರ. ಬದುಕಿನ ಬಂಡಿಗೆ ಕೂಲಿ ಅರಸಿ ಬೆಂಗಳೂರಿನ ಮಹಾನಗರಕ್ಕೆ ಬಂದವರು. ಈ ವೇಳೆ ಜಕ್ಕೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಮನೋಹರ್‍ಗೆ ‘ರೈಲ್ವೇ ಚಿಲ್ಡ್ರನ್’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

    ಕಾರಣಾಂತರಗಳಿಂದ ಮನೆ ಬಿಟ್ಟು ಹೋಗೋ ಬಹುತೇಕ ಬಾಲಕರು ರೈಲ್ವೇ ಸ್ಟೇಷನ್ ಸೇರಿ ಮಾದಕ ವಸ್ತುಗಳ ಚಟಕ್ಕೆ ದಾಸಾರಾಗಿ ಬದಕು ಹಾಳೋ ಮಾಡಿಕೊಳ್ಳೋ ಹುಡುಗರ ಬದುಕಿನ ಕಥೆ ಅನಾವಾರಣ ಮಾಡಿದ ಸಿನಿಮಾ ಕಥೆ. ಹೀಗಾಗಿ ಮನೆ ಬಿಟ್ಟು ಬರುವ ಬಾಲಕರ ಮನಃ ಪರಿವರ್ತನೆಗೆ ಅಂತಲೇ ಸಾಮಾಜಿಕ ಕಳಕಳಿಯಿಂದ ನಿರ್ಮಾಣ ಮಾಡಲಾದ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟನೆ ಮನೋಹರ್ ಮಾಡಿದ್ದನು.

    ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡದುಕೊಂಡಿರೋ ಮನೋಹರ್ ಸದ್ಯ ದೊಡ್ಡಬಳ್ಳಾಪುರದ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿದ್ದು, ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 10 ನೇ ತರಗತಿ ವ್ಯಾಸಂಗ ಮಾಡಲಿದ್ದಾನೆ. ತೋಡಲಬಂಡೆ ಪುಟ್ಟ ಮನೆಯಲ್ಲಿ ವಾಸವಾಗಿರೋ ಕೃಷ್ಣಪ್ಪ ಗಾಯತ್ರಮ್ಮ ದಂಪತಿಗೆ ಮಗನ ಭವಿಷ್ಯದ್ದೇ ಚಿಂತೆ. ಮಗನ ಭವಿಷ್ಯ ಹಾಗೂ ಬದುಕಿನ ಬಂಡಿಗೆ ಊರೂರು ಅಲೆದು ಕೂಲಿ ಕೆಲಸ ಮಾಡುತ್ತಿದ್ದಾರೆ. ಮಗನಿಗೆ ಪ್ರಶಸ್ತಿಗಳು ಓಲಿದು ಬಂದಿದೆ ಆಂದ್ರೂ ಆ ಪ್ರಶಸ್ತಿಗಳ ಮೌಲ್ಯ, ಬೆಲೆ ಅರಿಯಲಾಗದಷ್ಟು ಅಮಾಯಕತನ ಈ ದಂಪತಿಯದು.

    ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನನಾಗಿರೋ ಮನೋಹರ್ ಗೂ ಮುಂದೆ ತಾನು ಏನು? ಹೇಗೆ? ತನ್ನ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಪ್ರಶ್ನೆ ಕಾಡ್ತಿದೆ. ಹೀಗಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅದ್ಬುತ ನಟನೆಯಿಂದ ಅತ್ಯುನ್ನುತ ಪ್ರಶಸ್ತಿ ಗಳಿಸಿಕೊಂಡಿರೋ ಬಾಲಕನ ಭವಿಷ್ಯಕ್ಕೆ ಸಹೃದಯ ಕನ್ನಡಿಗರು ಸಹಾಯ ಮಾಡಬೇಕಿದೆ. ಮನೋಹರ್ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆ ಜೊತೆಗೆ ಕಲೆ, ನಟನೆ, ಅಭಿನಯದ ಸಿನಿಮಾ ರಂಗದ ಶಿಕ್ಷಣ ಕೂಡ ದೊರಕುವಂತಹ ಕೆಲಸ ಆಗಬೇಕಿದೆ.

    ಇಂದು ಮನೋಹರ್ ರಾಷ್ಟ್ರ ಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದು ಕರುನಾಡ ಕೀರ್ತಿ ಪತಾಕೆಯನ್ನ ಹಾರಿಸಿದ್ದಾನೆ. ಆದ್ರೆ ಬಡತನದಿಂದ ಮನೋಹರ್ ಪ್ರತಿಭೆ ಬಾಡಿ ಹೋಗದಿರಲಿ. ಸಹೃದಯಿ ದಾನಿಗಳು, ಮನೋಹರ್ ಸಹಾಯಕ್ಕೆ ಸಾಥ್ ಕೊಟ್ಟು ಅವನ ಭವಿಷ್ಯ ಉಜ್ವಲವಾಗುವಂತೆ ಮಾಡಲಿ ಎಂಬುದೇ ನಮ್ಮ ಆಶಯ.

    https://www.youtube.com/watch?v=7HIYFNqTRMI

     

  • ಹಳ್ಳಿ ಹೈದನಿಗೆ ಒಲಿದು ಬಂತು ರಾಷ್ಟ್ರ ಪ್ರಶಸ್ತಿ

    ಹಳ್ಳಿ ಹೈದನಿಗೆ ಒಲಿದು ಬಂತು ರಾಷ್ಟ್ರ ಪ್ರಶಸ್ತಿ

    – ರೈಲ್ವೇ ಚಿಲ್ಡ್ರನ್ ಚಿತ್ರದ ಅಭಿನಯಕ್ಕೆ ಮನೋಹರ್‍ಗೆ ಪ್ರಶಸ್ತಿ

    ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ 64 ನೇ ರಾಷ್ಟ್ರೀಯ ಮಟ್ಟದ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಅದರಲ್ಲಿ ಶ್ರೇಷ್ಠ ಬಾಲ ನಟ ಪ್ರಶಸ್ತಿ ಕನ್ನಡಿಗನ ಪಾಲಾಗಿದೆ. ಕುಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಬಾಲಕ ಕೆ ಮನೋಹರ್ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆಯುವ ಮೂಲಕ ಕನ್ನಡಿಗರ ಖುಷಿಗೆ ಕಾರಣವಾಗಿದ್ದಾನೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೋಡಲಬಂಡೆ ಗ್ರಾಮದ ಮನೋಹರ್, ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕೃಷ್ಣಪ್ಪ ಗಾಯತ್ರಿ ದಂಪತಿಯ ಪುತ್ರ. ಬಡ ಕುಟುಂಬದಲ್ಲಿ ಜನಿಸಿರುವ ಈ ಬಾಲಕನ ಕಲಾ ಪ್ರತಿಭೆಗೆ ಇದೀಗ ರಾಷ್ಟ್ರ ಮಟ್ಟದ ಅತ್ಯುನ್ನತ ಬಾಲ ನಟ ಪ್ರಶಸ್ತಿ ಒಲಿದು ಬಂದಿದೆ.

    `ರೈಲ್ವೆ ಚಿಲ್ಡ್ರನ್’ ಎಂಬ ಸಿನಿಮಾದಲ್ಲಿ ನಟನೆ ಮಾಡಿರುವ ಮನೋಹರ್‍ನ ಮನೋಜ್ಞ ಆಭಿನಯಕ್ಕೆ ಈ ಪ್ರಶಸ್ತಿ ಬಂದಿದೆ. ಈತ ಯಲಹಂಕ ಬಳಿಯ ಜಕ್ಕೂರು ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುವಾಗ `ರೈಲ್ವೆ ಚಿಲ್ಡ್ರನ್’ ಸಿನಿಮಾದ ನಿರ್ದೇಶಕ ಪೃಥ್ವಿ ಕೊಕನೂರು ಶಾಲೆಗೆ ಭೇಟಿ ನೀಡಿದ್ರು. ತನ್ನ ಸಿನಿಮಾಕ್ಕೆ ಕೆಲ ಬಾಲಕರನ್ನ ಆಯ್ದುಕೊಂಡು ಆಡಿಷನ್ ಮಾಡಿದ್ರು. ಅಗ ಅಂತಿಮ ಸುತ್ತಿನಲ್ಲಿ ಮನೋಹರ್ ಆಯ್ಕೆಯಾಗಿದ್ದ.

    ನಟನೆಯ ಗಂಧ-ಗಾಳಿಯೇ ಗೊತ್ತಿಲ್ಲದ ಮನೋಹರ್‍ಗೆ ಸಿನಿಮಾದಲ್ಲಿ ನಟನೆ ಮಾಡೋದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದ್ರೆ ಚಿತ್ರತಂಡ ಮತ್ತು ಡಾನ್ ಬಾಸ್ಕೊ ಸಂಸ್ಥೆ ಕೊಟ್ಟ ತರಬೇತಿಯಿಂದ ನಟನೆ ಮಾಡೋದು ಸುಲಭವಾಯ್ತಂತೆ. ಸದ್ಯ ಮನೋಹರ್ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮುಗಿಸಿದ್ದು ಮುಂದಿನ ಶೈಕ್ಷಣಿಕ ಸಾಲಿನಿಂದ 10 ನೇ ತರಗತಿಗೆ ಸೇರಲಿದ್ದಾನೆ.

    ಶಾಲೆಯ ಪಕ್ಕದಲ್ಲಿರುವ ಹಾಸ್ಟೆಲ್ ನಲ್ಲಿ ನೆಲೆಸಿ ವಿದ್ಯಾಭ್ಯಾಸ ಮಾಡುತ್ತಿರೋ ಮನೋಹರ್, ಸಿನಿಮಾದಲ್ಲಿ ನಟನೆ ಮಾಡಿ ಎರಡು ವರ್ಷಗಳೇ ಕಳೆದು ಹೋಗಿತ್ತು. ಕನಸಿನಲ್ಲೂ ತನಗೆ ಪ್ರಶಸ್ತಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ಇದೀಗ ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿರೋದು ತನ್ನ ಖುಷಿಗೆ ಕಾರಣವಾಗಿದೆ ಅಂತಾನೆ.

    ಒಟ್ಟಿನಲ್ಲಿ ಮನೋಹರ್‍ನ ಈ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಬೆಟ್ಟದ ಹೂವು ಸಿನಿಮಾಗೆ ಪುನೀತ್ ರಾಜ್ ಕುಮಾರ್ ರಾಷ್ಟ್ರ ಮಟ್ಟದ ಬಾಲ ನಟ ಪ್ರಶಸ್ತಿ ಪಡೆದಿದ್ದರು. ಅದೇ ರೀತಿ ಇಂದು ಮನೋಹರ್ ರಾಷ್ಟ್ರ ಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದು ಕರುನಾಡ ಕೀರ್ತಿ ಪತಾಕೆಯನ್ನ ಹಾರಿಸಿದ್ದಾನೆ.