Tag: ಮನೆ ಕಳ್ಳತನ

  • ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಮೆಕ್ಯಾನಿಕ್ ಅರೆಸ್ಟ್

    ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಮೆಕ್ಯಾನಿಕ್ ಅರೆಸ್ಟ್

    ಬೆಂಗಳೂರು: ಓದಿದ್ದು 7ನೇ ತರಗತಿ ಆದರೆ ಮನೆ ದೋಚುವುದರಲ್ಲಿ ನಂಬರ್ 1 ಕಳ್ಳನಾಗಿದ್ದ ಗ್ಯಾರೇಜ್ ಮೆಕ್ಯಾನಿಕ್‍ನೊಬ್ಬನನ್ನು ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ.

    ಮುರುಳಿ ಬಂಧಿತ ಆರೋಪಿ. ಆರೋಪಿಯು ವರ್ಷಕ್ಕೆ ಒಂದೇ ಕಳ್ಳತನ, ಮಾಡುತ್ತಿದ್ದನು. ಉಳಿದ ಸಮಯ ಗ್ಯಾರೇಜ್‍ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ವರ್ಷಕ್ಕೆ ಒಂದರಂತೆ 13 ವರ್ಷದಲ್ಲಿ ಈತ 13 ಕಳ್ಳತನಗಳನ್ನು ಮಾಡಿದ್ದಾನೆ. 2009ರಲ್ಲಿ ಕಳ್ಳತನ ಶುರು ಮಾಡಿದ್ದವನು ಕೊನೆಗೆ 2022ರಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನು ತುಂಬಾ ಅಚ್ಚುಕಟ್ಟಾಗಿ ಯೋಜನೆ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದನು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

    ಪ್ರತಿನಿತ್ಯ ಯಾರೂ ಶಾಲೆಗೆ ಮಕ್ಕಳನ್ನು ಬಿಡಲು ಹೋಗುತ್ತಾರೆ ಅವರ ಮನೆಗಳನ್ನೇ ಈತ ಗುರಿಯಾಗಿಸಿಕೊಳ್ಳುತ್ತಿದ್ದನು. ಶಾಲೆಗೆ ಹೋಗುವಾಗ ಮೊದಲು ಅವರನ್ನು ಹಿಂಬಾಲಿಸುತ್ತಿದ್ದನು. ಪೋಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ಎಷ್ಟು ಸಮಯ ಹಿಡಿಯುತ್ತೆ ನೋಡಿಕೊಂಡು ಉಪಾಯ ಮಾಡುತ್ತಿದ್ದನು. 1 ಮನೆ ಕಳ್ಳತನ ಮಾಡಲು ಸುಮಾರು 1 ತಿಂಗಳು ಉಪಾಯ ಮಾಡುತ್ತಿದ್ದನು. ಇದನ್ನೂ ಓದಿ:  ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

    ನಂತರ ಆ ಮನೆಯ ಡೋರ್ ಕೀ ಮಾದರಿಯ ನಾಲ್ಕೈದು ನಕಲಿ ಕೀ ತಯಾರು ಮಾಡಿಸುತ್ತಿದ್ದನು. ನಂತರ ಪೊಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದರ ಒಳಗೆ ಮನೆ ದೋಚುತ್ತಿದ್ದನು. ಮುರುಳಿ ಒಂದು ಬಾರಿ ಕಳ್ಳತನ ಮಾಡಿದರೆ ಮತ್ತೆ ವರ್ಷವಿಡಿ ಕಳ್ಳತನದ ಸಹವಾಸಕ್ಕೆ ಹೋಗುತ್ತಿರಲಿಲ್ಲ.

    ಇಂತಹ ಚಾಲಾಕಿ ಕಳ್ಳನಿಂದ 3 ಠಾಣೆಯ ಪೊಲೀಸರು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ಒಂದು ಮನೆ ಕಳ್ಳತನದ ಕೇಸ್ ಆಗಿತ್ತು. ಈ ವೇಳೆ ಪೊಲೀಸರು ವಿಚಾರಣೆಗಾಗಿ ಆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳನ ಫಿಂಗರ್ ಪ್ರಿಂಟ್ ಶೇಖರಿಸಿದ್ದರು. ಜನವರಿ ತಿಂಗಳಿನ ಕೊನೆಯ ವಾರದ ಹಿಂದೆ ಆರ್ ಟಿ ನಗರ ಪೊಲೀಸರಿಗೆ ಸಿಕ್ಕಿ ಬಿದ್ದಾಗ ಈತನ ಫಿಂಗರ್ ಪ್ರಿಂಟ್ ಕಳ್ಳತನ ಕೇಸ್‍ನಲ್ಲಿ ಮ್ಯಾಚ್ ಆಗಿದೆ.

    ಆರೋಪಿಯನ್ನು ಪೊಲೀಸರು ಹೆಬ್ಬಾಳ ಕೇಸ್ ಬಗ್ಗೆ ವಿಚಾರಣೆ ಮಾಡುವಾಗ ಒಟ್ಟು 13 ಕಳ್ಳತನಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆರ್ ಟಿ ನಗರ, ಡಿಜೆಹಳ್ಳಿ, ಅಮೃತಹಳ್ಳಿ, ಹೆಬ್ಬಾಳ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಸದ್ಯ ಎಲ್ಲಾ ಪ್ರಕರಣಗಳಿಂದ ಒಟ್ಟು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸದ್ಯ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಅವನನ್ನು ಪಡೆದಿದ್ದು, ಮತ್ತಷ್ಟು ವಿಚಾರಣೆಗೆ ತಯಾರಾಗಿದ್ದಾರೆ.

  • ತಿಮ್ಮಪ್ಪನ ಸನ್ನಿಧಿಯಿಂದ್ಲೇ ಮನೆ ಸೆಕ್ಯೂರಿಟಿ ಗಾರ್ಡ್ ಕೈ ಚಳಕ ಗಮನಿಸಿ ತಂದೆಗೆ ಕರೆ ಮಾಡಿದ ಟೆಕ್ಕಿ..!

    ತಿಮ್ಮಪ್ಪನ ಸನ್ನಿಧಿಯಿಂದ್ಲೇ ಮನೆ ಸೆಕ್ಯೂರಿಟಿ ಗಾರ್ಡ್ ಕೈ ಚಳಕ ಗಮನಿಸಿ ತಂದೆಗೆ ಕರೆ ಮಾಡಿದ ಟೆಕ್ಕಿ..!

    – 3 ಲಕ್ಷ ನಗದು, ಲಕ್ಷಾಂತರ ಮೌಲ್ಯದ ನೆಕ್ಲೆಸ್, ವಾಚ್, ಲ್ಯಾಪ್‍ಟಾಪ್ ಕಳವು

    ಬೆಂಗಳೂರು: ಅನ್ನ ಹಾಕಿದ ಮನೆಗೆ ಸೆಕ್ಯೂರಿಟಿ ಗಾರ್ಡ್ ಮತ್ತು ಟೀಂ ಕನ್ನ ಹಾಕಿದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ತಿಮ್ಮಪ್ಪನ ಸನ್ನಿಧಿಯಿಂದಲೇ ಸೆಕ್ಯೂರಿಟಿ ಗಾರ್ಡ್ ಕರಾಮತ್ತು ವಿಕ್ಷೀಸಿದ ಮನೆ ಮಾಲೀಕನ ಮಗ ಟೆಕ್ಕಿ ಕಳ್ಳತನದ ಕರಾಮತ್ತು ಸಿಸಿಟಿವಿಯಲ್ಲಿ ಕಂಡು ತಂದೆಗೆ ಕರೆ ಮಾಡಿದ್ದಾರೆ. ಆದರೆ ತಂದೆ ಶ್ರೀನಿವಾಸ್ ಮನೆಗೆ ಬರುವಷ್ಟರಲ್ಲಿಯೇ ಖದೀಮರ ಗ್ಯಾಂಗ್ ಮನೆ ದೋಚಿ ಹೋಗಿತ್ತು.

    ಸಂಸಾರದೊಂದಿಗೆ ಮನೆ ಮಾಲೀಕ ದೀಪಕ್ ಹೊಸ ವರ್ಷಕ್ಕೆ ತಿರುಪತಿಗೆ ಹೋಗಿದ್ದರು. ತಿರುಪತಿಗೆ ಹೋಗುತ್ತಿರುವ ವಿಚಾರವನ್ನು ಮನೆ ಸೆಕ್ಯೂರಿಟಿ ಸಂಜಯ್ ಬಳಿ ಟೆಕ್ಕಿ ದೀಪಕ್ ಹೇಳಿ ಹೋಗಿದ್ದರು. ಇತ್ತ ಸೆಕ್ಯೂರಿಟಿ ಗಾರ್ಡ್ ಸಂಜಯ್, ಮಾಲೀಕರು ತಿರುಪತಿಗೆ ಹಾರುತ್ತಿದ್ದಂತೆ ಮನೆಗೆ ಕನ್ನ ಹಾಕುವುದಕ್ಕೆ ಗುಂಪು ಮಾಡಿಕೊಂಡಿದ್ದಾನೆ. ಮುಂಜಾನೆ ಸೆಕ್ಯೂರಿಟಿ ಗಾರ್ಡ್ ಸಂಜಯ್ ಹಾಗೂ ಗ್ಯಾಂಗ್ ಕೆ.ಜಿ ಹಳ್ಳಿಯಲ್ಲಿರೋ ಸುಹಾನ ಗ್ರೀನ್ಸ್ ಅಪಾರ್ಟ್ ಮೆಂಟ್ ದೀಪಕ್ ಮನೆಗೆ ಲಗ್ಗೆ ಇಟ್ಟಿದ್ದಾನೆ.

    ಮನೆಯ ಬೀರುನಲ್ಲಿದ್ದ ಲಾಕರ್ ಮುರಿದು ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾನೆ. ಮೂರು ಲಕ್ಷ ನಗದು, 700 ಸಿಂಗಾಪುರ ಡಾಲರ್ಸ್ , 5 ಲಕ್ಷ 30 ಮೌಲ್ಯದ ಟ್ಯಾಗ್ ಹ್ಯೂವರ್ ವಾಚ್, 1ಲಕ್ಷದ 80 ಸಾವಿರದ ಬೆಲೆ ಒಂದು ಲ್ಯಾಪ್ ಟಾಪ್, ಒಂದು ಲಾಂಗ್ ನೆಕ್ಲೆಸ್, ಅರ್ಮಾನಿ ಕಂಪನಿಯ 60 ಸಾವಿರ ಬೆಲೆಯ ಒಂದು ವಾಚ್ ಸೇರಿದಂತೆ ದುಬಾರಿ ಬೆಲೆ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ.

    ಘಟನೆ ಸಂಬಂಧ ಟೆಕ್ಕಿ ದೀಪಕ್ ತಂದೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖದೀಮ ಸೆಕ್ಯೂರಿಟಿ ಗಾರ್ಡ್ ಸಂಜಯ್ ನೇಪಾಳ ಮೂಲದವನಾಗಿದ್ದು, ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಮೂವರು ಖತರ್ನಾಕ್ ಮನೆಗಳ್ಳರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

    ಮೂವರು ಖತರ್ನಾಕ್ ಮನೆಗಳ್ಳರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

    ಹುಬ್ಬಳ್ಳಿ: ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಐನಾತಿ ಮನೆಗಳ್ಳರನ್ನು ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸರು ಬಂಧಿಸಿದ್ದಾರೆ.

    ಪ್ರೇಮ್‍ಕುಮಾರ್ ಭೀಮಪ್ಪ ಪೂಜಾರ, ವಿರೇಶ ಜಂಬುನಾಥ ಕಾಂಬಳೆ, ರಾಘವೇಂದ್ರ ಮಲ್ಲಪ್ಪ ಸಲಗಾರ ಬಂಧಿತ ಆರೋಪಿಗಳು. ಬಂಧಿತರಿಂದ ದ್ವಿಚಕ್ರ ವಾಹನ, ಲ್ಯಾಪ್‍ಟಾಪ್, ಟಿವಿ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮನೆಯಲ್ಲಿ ಯಾರೂ ಇಲ್ಲದನ್ನು ಅರಿತ ಚಾಲಾಕಿ ಕಳ್ಳರು ಬೀಗ ಮುರಿದು ಮನೆಗೆ ಕನ್ನ ಹಾಕುತ್ತಿದ್ದರು. ಈ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದವು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಮೂಲಕ ಮೂವರು ಮನೆಗಳ್ಳರನ್ನು ಬಂಧಿಸಿದ್ದಾರೆ.

  • ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ

    ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ

    ಮಂಗಳೂರು: ಹೊಟ್ಟೆ ತುಂಬಾ ತಿಂದು ಕುಳಿತಲ್ಲೇ ನಿದ್ದೆಗೆ ಜಾರಿದವರನ್ನು ನೋಡಿರಬಹುದು. ಆದರೆ ಇನ್ನೊಬ್ಬರ ಮನೆಯಲ್ಲಿ ಕಳ್ಳತನ ಮಾಡುಲು ಹೋಗಿ ನಿದ್ದೆಗೆ ಜಾರಿದ್ದನ್ನು ಕೇಳಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು, ಆರೋಪಿ ಮನೆ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಬಿಹಾರದ ಮಜೀಪುರ್ ಜಿಲ್ಲೆಯ ಅನಿಲ್ ಸಹಾನಿ (34) ಕಳ್ಳತನಕ್ಕೆ ಯತ್ನಿಸಿ, ಸಿಕ್ಕಿಬಿದ್ದ ಆರೋಪಿ. ಉಪ್ಪಿನಂಗಡಿಯ ಸುದರ್ಶನ್ ಎಂಬವರ ಮನೆಗೆ ಅನಿಲ್ ಸಹಾನಿ ಮಂಗಳವಾರ ಮಧ್ಯರಾತ್ರಿ ನುಗ್ಗಿದ್ದ. ಮನೆಯ ಹಂಚು ತೆಗೆದು ಒಳನುಗ್ಗಿದ್ದ ಅನಿಲ್ ಮನೆ ಛಾವಣಿಯ ದಿವಾನದಲ್ಲಿ ಮಲಗಿ ನಿದ್ದೆಗೆ ಜಾರಿದ್ದ.

    ಬುಧವಾರ ಬೆಳಗ್ಗೆ ಎದ್ದ ಸುದರ್ಶನ್ ಅವರು ದಿವಾನದಲ್ಲಿ ಮಲಗಿದ್ದ ಅನಿಲ್‍ನನ್ನು ಕಂಡು ಗಾಬರಿಗೊಂಡಿದ್ದರು. ಬಳಿಕ ಎರಡೇಟು ಬಿಗಿದಾಗ ನಿಜ ಬಾಯಿಬಿಟ್ಟ ಆರೋಪಿಯನ್ನು ಸುದರ್ಶನ್ ಅವರು ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಅನಿಲ್ ಸಹಾನಿ ಬೀಗದ ಕೀಲಿಕೈ ಹಿಡಿದುಕೊಂಡೇ ಮಲಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

  • ಮಹಿಳೆಯರು ಸೀರಿಯಲ್ ನೋಡೋ ಟೈಂನಲ್ಲೇ ಕಳ್ಳತನ ಮಾಡ್ತಿದ್ದ ಕಳ್ಳ ಅಂದರ್

    ಮಹಿಳೆಯರು ಸೀರಿಯಲ್ ನೋಡೋ ಟೈಂನಲ್ಲೇ ಕಳ್ಳತನ ಮಾಡ್ತಿದ್ದ ಕಳ್ಳ ಅಂದರ್

    ಬೆಂಗಳೂರು: ಮಹಿಳೆಯರು ಬೆಳಗ್ಗೆ ಮರುಪ್ರಸಾರವಾಗುವ ಸೀರಿಯಲ್ ಗಳು ನೋಡುತ್ತಿರುವಾಗ ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ಚಾಲಕಿ ಕಳ್ಳನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಉದಯ್ ನೀರ್ ಮಜ್ಜಿಗೆ ಅಲಿಯಾಸ್ ಉದಯ್ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಮಾರು ಅರ್ಧ ಕೆ.ಜಿ. ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಉದಯ್ ಆರಂಭದಿಂದಲೂ ಮನೆ ಕಳ್ಳತನ, ದರೋಡೆ, ರಾಬರಿ ಮಾಡಿ 8 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಂಟು ವರ್ಷ ಇದ್ದು, ಸನ್ನಡತೆಯ ಆಧಾರದ ಮೇಲೆ ಮೂರು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಮನೆಗೆ ಆಗಮಿಸಿದ್ದ.

    ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಉದಯ್ ಜೈಲಿಂದ ಬಂದ ಬಳಿಕವೂ ಕಳ್ಳತನ ಮಾಡುವುದನ್ನು ಮುಂದುವರಿಸಿದ್ದ. ಕಳೆದ ಎರಡುವರೆ ತಿಂಗಳಲ್ಲಿ ನಗರದ ಬಹುತೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉದಯ್ ಕೈಚಳಕ ತೋರಿಸಿದ್ದ. ಸಿಸಿಟಿವಿ ದೃಶ್ಯ ಆಧರಿಸಿ ನಗರದ ಬಹುತೇಕ ಪೊಲೀಸ್ ಠಾಣಾ ಪೊಲೀಸರು ಆರೋಪಿ ಉದಯ್ ನನ್ನು ಬಂಧಿಸಲು ಮುಂದಾಗಿದ್ದರು. ಆದರೆ ಪೊಲೀಸರ ಕೈಗೆ ಸಿಕ್ಕಿ ಬಿಳಬಾರದು ಎಂದು ಮೊಬೈಲ್ ಫೋನ್ ಕೂಡ ಬಳಸುತ್ತಿರಲಿಲ್ಲ.

    ಉದಯ್ ಸಹಚರನೊಬ್ಬನ ಹಿಂದೆ ಬಿದಿದ್ದ ಪೊಲೀಸರು ಕಳ್ಳರ ಪ್ಲಾನ್ ಬಗ್ಗೆ ಮಾಹಿತಿ ಪಡೆದಿದ್ದರು. ಆರೋಪಿ ರಾತ್ರಿ ಸಮಯದಲ್ಲಿ ಕಳ್ಳತನ ಮಾಡುವ ಬಗ್ಗೆ ಸ್ಕೆಚ್ ರೂಪಿಸುತ್ತಿದ್ದ. ಬೆಳಗ್ಗಿನ ಸಮಯ 10 ಗಂಟೆಯಿಂದ 12 ಗಂಟೆ ಸಮಯದಲ್ಲಿ ಆರೋಪಿ ಕಳ್ಳತನ ಮಾಡುತ್ತಿದ್ದ. ಕಾರಣ 10 ರಿಂದ 12 ಗಂಟೆ ಸಮಯದಲ್ಲಿ ಧಾರವಾಹಿಗಳು ಮರುಪ್ರಸಾರವಾಗುವ ಸಮಯ. ರಾತ್ರಿ ಸಮಯದಲ್ಲಿ ವಿವಿಧ ಕಾರಣಗಳಿಂದ ಧಾರಾವಾಹಿ ನೋಡಲು ಆಗದೇ ಇರುವ ಮಹಿಳೆಯರು ಧಾರಾವಾಹಿ ನೋಡುವಲ್ಲಿ ಮಗ್ನರಾಗಿತ್ತಾರೆ. ಆ ಸಮಯವನ್ನೇ ಉಪಯೋಗ ಮಾಡಿಕೊಳ್ಳುತ್ತಿದ್ದ ಆರೋಪಿ ಮನೆಯ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ.

    ಕೇವಲ ಮೂರು ತಿಂಗಳ ಅವಧಿಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಐದು ಕಡೆ ಸೇರಿದಂತೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉದಯ್ ಕೈಚಳಕ ತೋರಿಸಿದ್ದ. ಜಾಲಹಳ್ಳಿ ಪೊಲೀಸರು ಅಂತಿಮವಾಗಿ ಆರೋಪಿಯ ಸಹಚರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉದಯ್ ಸಹಚರರಿಗೆ ತಮಿಳುನಾಡಿನ ಸೆಲಂನಿಂದ ಲ್ಯಾಂಡ್ ಲೈನ್‍ನಲ್ಲಿ ಕರೆ ಮಾಡಿದ್ದ ಮಾಹಿತಿ ಲಭಿಸಿತ್ತು. ನಂಬರ್ ಜಾಡಿ ಹಿಡಿದು ಹೋರಾಟ ಪೊಲೀಸರು ತಮಿಳುನಾಡಿನ ಸೇಲಂ ಲಾಡ್ಜ್ ನಲ್ಲಿ ಒಂದರಲ್ಲಿ ಆರೋಪಿಯನ್ನು ಬಂಧಿಸಿದ್ದರು. ಸದ್ಯ ಆರೋಪಿ ಜಾಲಹಳ್ಳಿ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಅಂತರ್‌ರಾಜ್ಯ ಕಳ್ಳರ ಬಂಧನ – ಲಕ್ಷಾಂತರ ಮೌಲ್ಯದ ಬಂಗಾರ ವಶ

    ಅಂತರ್‌ರಾಜ್ಯ ಕಳ್ಳರ ಬಂಧನ – ಲಕ್ಷಾಂತರ ಮೌಲ್ಯದ ಬಂಗಾರ ವಶ

    ಕಾರವಾರ: ಕುಮಟ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕಣರದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

    ಗೋಪಿ ಹಾಗೂ ಡೇವಿಡ್ ಫ್ರಾನ್ಸಿಸ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಗೋಪಿ ಬೆಂಗಳೂರಿನ ಭುವನೇಶ್ವರ ನಗರದ ಮಾಗಡಿ ನಿವಾಸಿ ಎಂದು ತಿಳಿದು ಬಂದಿದ್ದು, ಇನ್ನೊಬ್ಬ ಆರೋಪಿ ಡೇವಿಡ್ ಫ್ರಾನ್ಸಿಸ್ ತಮಿಳುನಾಡು ಮೂಲದವನಾಗಿದ್ದಾನೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಗಜಾನನ ಗೌರಯ್ಯ ಅವರ ಕುಟುಂಬಸ್ಥರು ಜನವರಿ 01 ರಂದು ಸೌದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಮನೆಯಲ್ಲಿದ್ದ ಸುಮಾರು ಮೂರು ತೊಲೆ ಬಂಗಾರ ಹಾಗೂ ಒಂದಿಷ್ಟು ಹಣವನ್ನು ಕದ್ದು ಪರಾರಿಯಾಗಿದ್ದರು.

    ಈ ಬಗ್ಗೆ ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಕಾರ್ಯಾಚರಣೆಗೆ ಇಳಿದ ಕುಮಟ ಸಿಪಿಐ ಪರಮೇಶ್ವರ ಗುನಗಾ, ಪಿಎಸ್‍ಐ ಆನಂದ ಮೂರ್ತಿ ಅವರ ನೇತೃತ್ವದ ಪೊಲೀಸರ ತಂಡ ಪ್ರಕರಣ ನಡೆದ ಒಂದೇ ವಾರದಲ್ಲಿ ಕಳ್ಳತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಕಳ್ಳತನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು, ಈ ಹಿಂದೆ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನುವುದು  ತನಿಖೆ ವೇಳೆ ತಿಳಿದು ಬಂದಿದೆ.

    ಕುಮಟದಲ್ಲಿ ಕಳ್ಳತನ ಮಾಡುವ ಮುನ್ನ ಗೋವಾದಿಂದ ಬಂದಿರುವುದಾಗಿ ಹೇಳಲಾಗಿದ್ದು, ಕುಮಟಗೆ ಹೊರಡುವ ವೇಳೆ ಅಂಕೋಲಾದ ಕೇಬಲ್ ಆಫೀಸಿನ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು ಎಂದು ಪೊಲೀಸ್ ತನಿಖೆ ವೇಳೆ ಬಾಯಿ ಬಿಟ್ಟಿದ್ದಾರೆ. ಹೆಚ್ಚಿನ ತನಿಖೆ ಇನ್ನೂ ಪ್ರಗತಿಯಲ್ಲಿದೆ.

  • ಅನ್ನ ಹಾಕಿದ ಮನೆಯ ಋಣ ತೀರಿಸಲು ಪ್ರಯತ್ನಿಸಿದ ಶ್ವಾನ!

    ಅನ್ನ ಹಾಕಿದ ಮನೆಯ ಋಣ ತೀರಿಸಲು ಪ್ರಯತ್ನಿಸಿದ ಶ್ವಾನ!

    ಬೆಂಗಳೂರು: ನಗರದಲ್ಲಿ ಕಳ್ಳರು ಪೊಲೀಸರಿಗೆ ಹೆದರುತ್ತಾರೋ ಇಲ್ಲವೋ, ಆದರೆ ಬೀದಿ ನಾಯಿಗಳಿಗೆ ಹೆದರಲೇಬೇಕಾದ ಘಟನೆಯೊಂದು ನಗರದ ಹೊಸಗುಡ್ಡದ ಹಳ್ಳಿಯ ನೆಹರು ರಸ್ತೆಯಲ್ಲಿ ನಡೆದಿದೆ.

    ರಸ್ತೆಯಲ್ಲಿ ತಡರಾತ್ರಿ ಒಬ್ಬಂಟಿಯಾಗಿ ಓಡಾಡುವ ಜನರನ್ನು ಟಾರ್ಗೆಟ್ ಮಾಡಿ ಮಾರಕಾಸ್ತ್ರಗಳಿಂದ ಅವರನ್ನು ಬೆದರಿಸಿ ಹಣ ದೋಚಲು ಯತ್ನಿಸಿದ್ದ ಕಳ್ಳನೊಬ್ಬನನ್ನು ಹಿಮ್ಮೆಟಿಸಲು ಬೀದಿ ನಾಯಿಯೊಂದು ಯಶಸ್ವಿಯಾಗಿದೆ.

    ಖತರ್ನಾಕ್ ಕಳ್ಳನೊಬ್ಬ ಕೈಯಲ್ಲಿ ಮಚ್ಚು ಹಿಡಿದು ಹೊಸಗುಡ್ಡದಹಳ್ಳಿಯ ನೆಹರು ನಗರಕ್ಕೆ ಎಂಟ್ರಿ ಕೊಟ್ಟಿದ್ದ. ಈತನನ್ನು ನೋಡಿದ್ದೆ ತಡ ನಾಯಿ ಜೋರಾಗಿ ಬೊಗಳಲು ಆರಂಭ ಮಾಡಿದೆ. ಆದರೆ ಕೈಯಲ್ಲಿ ಆಯುಧ ಇದ್ದ ಕಾರಣ ನಾಯಿಯನ್ನು ಓಡಿಸಲು ಯತ್ನಿಸಿದ ಕಿಡಿಗೇಡಿ ರಣಧೀರನಂತೆ ಪೋಸ್ ಕೊಟ್ಟಿದ್ದಾನೆ. ಆದರೆ ನಾಯಿ ಸತತವಾಗಿ ಬೊಗಳಲು ಆರಂಭಿಸಿದ ಕಾರಣ ಕಳ್ಳ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.

    ನಾಯಿ ನಿರಂತರವಾಗಿ ಬೊಗಳಲು ಆರಂಭಿಸಿದ ಕಾರಣ ಸ್ಥಳೀಯರು ಮನೆಯ ಲೈಟ್ ಆನ್ ಮಾಡಿ ಹೊರ ಬರಲು ಪ್ರಯತ್ನಿಸಿದ್ದು, ಇದನ್ನು ಕಂಡ ಕಳ್ಳ ಸಿಕ್ಕಿ ಬೀಳುವ ಭಯದಿಂದ ಓಡಲು ಆರಂಭಿಸಿದ್ದಾನೆ. ನಾಯಿಯೂ ಕೂಡ ಆತನನ್ನು ಬೆನ್ನಟ್ಟಿ ಆ ರಸ್ತೆಯಿಂದಲೇ ಓಡಿಸಿದೆ. ಈ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯ ಒಂದೆರಡು ಮನೆಗಳ ತುತ್ತು ಅನ್ನ ತಿಂದಿರುವ ನಾಯಿ ಕಳ್ಳನನ್ನು ಓಡಿಸಿ ಋಣ ತೀರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv