Tag: ಮನೆಮದ್ದು

  • ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು

    ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು

    ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಾತಾವರಣದಿಂದಾಗಿ ಆರೋಗ್ಯವು (Health) ಹದಗೆಡುತ್ತಿದೆ. ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆ ಅನೇಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ನೆಗಡಿ, ಜ್ವರ ಬೇಗ ಕಡಿಮೆ ಆದರೂ ಒಣ ಕೆಮ್ಮು (Dry Cough) ಹಾಗೇ ಇರುತ್ತದೆ. ಈ ಒಣ ಕೆಮ್ಮಿನ ಕಿರಿಕಿರಿಯಿಂದ ಮುಕ್ತಿ ಪಡೆಯಲು ಕೆಲವು ಔಷಧಿಗಳನ್ನು ಸಿಂಪಲ್ ಆಗಿ ಮನೆಯಲ್ಲೇ ತಯಾರಿಸಿ.

    ತುಳಸಿ: ಹಲವು ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ ಹಲವು ರೋಗಗಳಿಗೆ ಉತ್ತಮ ಮದ್ದಾಗಿದೆ. ಕೆಮ್ಮನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಯಮಿತವಾಗಿ ತುಳಸಿ ಎಲೆಗಳನ್ನು ಸೇವಿಸಿ ಚೆನ್ನಾಗಿ ಅಗೆಯಬೇಕು. ಇದಕ್ಕೆ ಚಿಟಿಕೆ ಉಪ್ಪು ಅಥವಾ ಕಾಳುಮೆಣಸಿನ ಪುಡಿಯೊಂದಿಗೆ ಸೇವಿಸಿದರೆ ಕೆಮ್ಮು ಬೇಗ ಕಡಿಮೆಯಾಗುತ್ತದೆ.

    ಬಿಸಿ ನೀರು, ಉಪ್ಪು: ಒಣ ಕೆಮ್ಮಿನಿಂದ ಉಂಟಾಗುವ ಅಸ್ವಸ್ಥತೆ ಮತ್ತು ಕಿರಿಕಿರಿ ಕಡಿಮೆ ಮಾಡಲು ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡಿ. ಇದರಿಂದಾಗಿ ಬಾಯಿ ಮತ್ತು ಗಂಟಲಿನ ಬ್ಯಾಕ್ಟೀರಿಯಾ ತೊಲಗಲು ಸಹಾಯ ಮಾಡುತ್ತದೆ. ಒಂದು ಟೀಸ್ಪೂನ್ ಟೇಬಲ್ ಉಪ್ಪನ್ನು ದೊಡ್ಡ ಗಾಜಿನ ಬೆಚ್ಚಗಿನ ನೀರಿನಲ್ಲಿ ಕರಗಿಸಿ, ಗಾರ್ಗ್ಲ್‌ ಮಾಡಿ. ಇದರಿಂದ ಕೆಮ್ಮು ಕಡಿಮೆ ಆಗುತ್ತದೆ. ಇದನ್ನೂ ಓದಿ: ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ

    ಜೇನುತುಪ್ಪ, ಶುಂಠಿ: ಕೆಮ್ಮಿಗೆ ಜೇನುತುಪ್ಪ ಮತ್ತು ಶುಂಠಿ ಎರಡೂ ಅತ್ಯುತ್ತಮ ಔಷಧವೆಂದು ಸಾಬೀತಾಗಿದೆ. ಅಗತ್ಯ ಪ್ರಮಾಣದ ಶುಂಠಿ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೇ, ಕಡಿಮೆ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಒಂದು ಚಮಚ ಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಈ ರಸ ಕುಡಿಯುವುದರಿಂದ ಬಹುಬೇಗ ಕೆಮ್ಮು ಕಡಿಮೆ ಮಾಡುತ್ತದೆ.

    ತುಪ್ಪ ಮತ್ತು ಕರಿ ಮೆಣಸು: ತುಪ್ಪವು ಗಂಟಲನ್ನು ಮೃದುವಾಗಿಡುವ ಕೆಲಸ ಮಾಡುತ್ತದೆ. ಜೊತೆಗೆ ಕೆಮ್ಮು ಹೆಚ್ಚು ಕಾಣಿಸಿಕೊಂಡರೆ ಕರಿ ಮೆಣಸು ಉತ್ತಮ ಔಷಧವಾಗಿದೆ. ಕರಿಮೆಣಸಿನ ಪುಡಿಯ ಜೊತೆ ತುಪ್ಪ ಬೆರೆಸಿ ತಿಂದರೆ ಒಣ ಕೆಮ್ಮಿನಿಂದ ಮುಕ್ತಿ ಪಡೆಯಬಹುದು. ನಿಯಮಿತವಾಗಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    ಈರುಳ್ಳಿ ರಸ: ಈರುಳ್ಳಿ ಕೇವಲ ಆಹಾರಕ್ಕೆ ಪರಿಮಳವೊಂದೇ ಅಲ್ಲದೇ, ಔಷಧಿಗೂ ಬಳಸುತ್ತಾರೆ. ಈರುಳ್ಳಿ ಸಾರವು ಉರಿಯೂತದ ಪರಿಣಾಮವನ್ನು ಹೊಂದಿದೆ. ಇದರಿಂದಾಗಿ ಶ್ವಾಸನಾಳವನ್ನು ಸಡಿಲಗೊಳಿಸುತ್ತದೆ. ಇದು ಕೆಮ್ಮು ಸೆಳೆತವನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿ, ಮಿಶ್ರಣ ಮಾಡಬೇಕು. ಈ ಒಂದು ಚಮಚ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ತೆಗೆದುಕೊಳ್ಳಿ.

    ಏಲಕ್ಕಿ: ಒಣ ಕೆಮ್ಮಿಗೆ ಏಲಕ್ಕಿ ಪರಿಣಾಮಕಾರಿ ಆಯುರ್ವೇದ ಪರಿಹಾರವಾಗಿದೆ. ಇದು ಗಂಟಲನ್ನು ಶಮನಗೊಳಿಸಲು ಮತ್ತು ಉಸಿರಾಟದ ಪ್ರದೇಶವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಏಲಕ್ಕಿ ಶ್ವಾಸನಾಳದ ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನೂ ಓದಿ: ಸೆಣಬಿನ ಬೀಜದ ಎಣ್ಣೆ ಬಗ್ಗೆ ತಿಳಿದಿದ್ದೀರಾ? ಇದರಲ್ಲಿದೆ ತ್ವಚೆ ಸೌಂದರ್ಯದ ಗುಟ್ಟು

    Live Tv
    [brid partner=56869869 player=32851 video=960834 autoplay=true]

  • ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ

    ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ

    ಮ್ಮ ದೇಹದ ಪ್ರಮುಖ ಅಂಗ ಹೊಟ್ಟೆ. ನಮಗೆ ದಿನವೀಡಿ ಕೆಲಸ ಮಾಡಲು ಉತ್ಸಾಹ ಇರಬೇಕು ಎಂದು ಅದಕ್ಕೆ ಸೇವಿಸುವ ಆಹಾರ ಆಗಿರುತ್ತದೆ. ಆದರೆ ಕೆಲವೊಮ್ಮೆ ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ವಿಪರೀತ ಉಷ್ಣ ಹೀಗೆ ಹತ್ತು ಹಲವು ಕಾರಣದಿಂದಾಗಿ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮ ಬಿರದೇ ಕೆಲವು ಮನೆಮದ್ದುಗಳನ್ನು ಅನುಸರಿಸಿ.

    ನಿಂಬೆ ಚಹಾ: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ಇದರಿಂದಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ನಿಂಬೆ ಚಹಾ ಮಾಡಿಕೊಂಡು ಕುಡಿಯಬೇಕು. ಆ ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸ ನಮ್ಮ ಹೊಟ್ಟೆ ಸೇರಿದಾಗ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.

    ಪುದೀನ ಎಲೆ: ತಾಜಾ ಪುದೀನ ಎಲೆಗಳು ಸಹ ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಳ್ಳೆಯ ಮನೆಮದ್ದು ಆಗಿದೆ. ಕೆಲವೊಮ್ಮೆ ನಮ್ಮ ಜೀಣಾರ್ಂಗದಲ್ಲಿ ಮಾಂಸ ಖಂಡಗಳ ಭಾಗದಲ್ಲಿ ಗ್ಯಾಸ್ಟ್ರಿಕ್‍ನ ಸಮಸ್ಯೆಯಿಂದ ವಿಪರೀತ ನೋವು ಉಂಟಾಗುತ್ತದೆ. ಜೊತೆಗೆ ಎದೆಯುರಿತದ ತರಹ ಭಾಸವಾಗುತ್ತದೆ. ಇಂತಹ ಸಮಯದಲ್ಲಿ ಪುದೀನ ಎಲೆಗಳನ್ನು ಸೇವಿಸಬೇಕು. ಈ ಪುದಿನ ಎಲೆಗಳಲ್ಲಿ ಆಂಟಿ- ಸ್ಪಸ್ಮೊಡಿಕ್ ಲಕ್ಷಣಗಳು ಹೆಚ್ಚಾಗಿದ್ದು, ಈ ರೀತಿಯ ಸಮಸ್ಯೆಗಳಿಗೆ ಬಹು ಬೇಗನೆ ಮುಕ್ತಿ ಕೊಡುತ್ತೇವೆ. ಪುದೀನ ಎಲೆಗಳಲ್ಲಿರುವ ಗಿಡಮೂಲಿಕೆಗಳು ಮನುಷ್ಯನ ಕರುಳಿನ ಮತ್ತು ಹೊಟ್ಟೆಯ ಏರಿಳಿತಗಳನ್ನು ನಿಯಂತ್ರಣ ಮಾಡುವ ಶಕ್ತಿಯನ್ನು ಹೊಂದಿವೆ.

    ಶುಂಠಿ ತಿನ್ನಿ: ಶುಂಠಿಯ ಬೇರುಗಳನ್ನು ಹಾಗೆ ಹಲ್ಲಿನಿಂದ ಬೇಕಾದರೂ ಜಗಿದು ತಿನ್ನಬಹುದು ಅಥವಾ ಶುಂಠಿಯನ್ನು ಸಣ್ಣಗೆ ಚೂರುಗಳನ್ನಾಗಿ ಮಾಡಿಕೊಂಡು ಅದರಿಂದ ಚಹ ತಯಾರಿಸಿಕೊಂಡು ಕುಡಿಯಬಹುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ರೋಗಗಳಿಂದ ಮುಕ್ತಿ ಪಡೆಯಿರಿ. ಜೊತೆಗೆ ಶುಂಠಿ ಹೃದ್ರೋಗವನ್ನು ತಡೆಯುತ್ತದೆ, ಮುಟ್ಟಿನ ನೋವನ್ನು ನಿವಾರಿಸುತ್ತದೆ.

    ಜೀರಿಗೆ ಕಷಾಯ: ಜೀರಿಗೆ ಕಷಾಯವು ಜಠರಕ್ಕೆ ಒಳ್ಳೆಯದು. ಇದರ ಜೊತೆಗೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವಿಕೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ಜೀರಿಗೆ ಕಷಾಯವನ್ನು ಮಾಡಿ ಕುಡಿಯುವುದು ಉತ್ತಮ ಪರಿಹಾರವಾಗಿದೆ. ಜೀರಿಗೆಯಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಇರುವುದರಿಂದ, ಜೀರ್ಣಶಕ್ತಿ ಹೆಚ್ಚಿಸಿ, ನಮ್ಮ ಆರೋಗ್ಯ ಮತ್ತು ದೇಹದ ತೂಕ ಎರಡನ್ನೂ ಸಹ ಇದು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ. ಇದನ್ನೂ ಓದಿ: ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಕರಿಬೇವಿನಲ್ಲಿದೆ ಪರಿಹಾರ

    ಇಂಗು: ಅಸ್ತಮಾ ಇದ್ದವರಿಗೆ ಇದು ಒಳ್ಳೆಯ ಮನೆಮದ್ದಾಗಿದೆ. ಅಷ್ಟೇ ಅಲ್ಲದೇ ಹೊಟ್ಟೆ ಉಬ್ಬರ ಸೇರಿದಂತೆ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂಗಿನಿಂದ ಮಾಡಿದಂತಹ ಆಯುರ್ವೇದಿಕ್ ಕಷಾಯವು ಹೊಟ್ಟೆಯ ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ಸೆಳೆತದಿಂದ ಪರಿಹಾರ ನೀಡುವುದು. ಇದನ್ನೂ ಓದಿ: ದೇಹವನ್ನು ಹೈಡ್ರೇಟ್ ಮಾಡುವ ‘ತುಳಸಿ ಕಷಾಯ’ ಮಾಡಿ ಕುಡಿಯಿರಿ

    Live Tv

  • ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ಡೀ ದಿನ ಕುಳಿತೇ ಕೆಲಸ ಮಾಡುವುದರಿಂದ ಬೊಜ್ಜು ಬಂದು, ತೂಕದಲ್ಲಿ ಹೆಚ್ಚಾಗಿ ಆರೋಗ್ಯದಲ್ಲೂ ಅನೇಕ ವ್ಯತ್ಯಾಸ ಕಾಣುತ್ತೇವೆ. ಕೆಲವೊಬ್ಬರಿಗೆ ಈ ದೇಹ ತೂಕ ಮುಜುಗರ ಉಂಟು ಮಾಡುತ್ತವೆ. ಇದರಿಂದಾಗಿ ಇದನ್ನು ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಆದರೆ ತೂಕ ಇಳಿಸಲು ಹೋಗಿ ಪೋಷಕಾಂಶ ಕೊರತೆಯಿಂದ ಅನೇಕ ರೋಗಗಳಿಗೆ ನಾಂದಿಯಾಗುತ್ತದೆ. ಆದರೆ ಮನೆಯಲ್ಲೇ ಸುಲಭವಾಗಿ ಕೆಲವು ಆರೋಗ್ಯಪೂರ್ಣವಾದ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ತೂಕದಲ್ಲಿ ಗಣನೀಯ ಇಳಿಕೆಯನ್ನು ಕಾಣಬಹುದು.

    ಸೋಂಪು: ಸೋಂಪು ಚಯಾಪಚಯಗಳು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆ ಉಬ್ಬುವಿಕೆ ಸಮಸ್ಯೆ ಇದ್ದವರಿಗೆ ಇದು ರಾಮಬಾಣವಾಗಿದೆ. ಇಷ್ಟೇ ಅಲ್ಲದೇ ತೂವನ್ನು ಅತೀ ವೇಗವಾಗಿ ಕಡಿಮೆಗೊಳಿಸಲು ಇದು ಸಹಾಯ ಮಾಡುತ್ತದೆ. ಪ್ರತಿನಿತ್ಯ ಒಂದು ಚಮಚ ಸೋಂಪನ್ನು ನೀರಿನಲ್ಲಿ ರಾತ್ರಿ ನೆನೆಸಬೇಕು. ಬೆಳಗ್ಗೆ ಆ ಮಿಶ್ರಣವನ್ನು ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

    ಗ್ರೀನ್ ಟೀ: ನೀವು ಸಾಮಾನ್ಯವಾಗಿ ಕುಡಿಯುವ ಚಹಾ ಬದಲಿಗೆ ಗ್ರೀನ್ ಟೀಯನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ. ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಗಣನೀಯವಾಗಿ ತೂಕವನ್ನು ಇಳಿಸಬಹುದು. ಕೊಬ್ಬನಾಂಶವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ: ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು

    ಲೆಮನ್ ವಾಟರ್: ತೂಕ ಇಳಿಕೆಗೆ ನಿಂಬೆ ಹಣ್ಣು ಸಹಾಯಕವಾಗಿದ್ದು, ನಿಂಬೆ ಹಣ್ಣಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣವು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯಕವಾಗಿದೆ. ಜೊತೆಗೆ ಇದು ದೇಹಕ್ಕೆ ಆಕಾರವನ್ನು ತರುತ್ತದೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚನೆ ನೀರಿಗೆ ನಿಂಬೆ ರಸ ಹಾಕುವ ಮೂಲಕ ಕುಡಿಯಿರಿ. ಆಗ ನಿಮ್ಮ ತೂಕದಲ್ಲಿ ವ್ಯತ್ಯಾಸ ಕಾಣಬಹುದು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    ತರಕಾರಿ ಜ್ಯೂಸ್: ಡಯಟ್ ಮಾಡುವವರಿಗೆ ತರಕಾರಿ ಜ್ಯೂಸ್‍ಗಳನ್ನು ಹೆಚ್ಚು ಕುಡಿಯಲು ಜಿಮ್ ಟ್ರೇನರ್‍ಗಳು ಸಲಹೆ ನೀಡುತ್ತಾರೆ. ಇದರಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತದೆ. ಕ್ಯಾರೆಟ್, ಬೀಟ್ರೂಟ್, ಹಾಗಲಕಾಯಿಯಂತಹ ತರಕಾರಿ ರಸವು ಪೌಷ್ಟಿಕಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    ಬ್ಲ್ಯಾಕ್ ಕಾಫಿ: ಬ್ಲ್ಯಾಕ್ ಕಾಫಿಯನ್ನು ಸೇವಿಸುವುದದರಿಂದ ಎನರ್ಜಿಯನ್ನು ಹೆಚ್ಚಿಸುತ್ತದೆ. ನೀವು ವರ್ಕೌಟ್‍ಗಳನ್ನು ಮುಗಿಸಿದ ನಂತರ ಬ್ಲ್ಯಾಕ್ ಕಾಫಿಯನ್ನು ಕುಡಿದರೆ ಒಳ್ಳೆಯದು. ಇದರಿಂದ ಗಣನೀಯವಾಗಿ ತೂಕ ಇಳಿಕೆಯಾಗುತ್ತದೆ.

  • ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    ಮ್ಮ ಅಡುಗೆ ಮನೆಯಲ್ಲಿರುವ ಎಷ್ಟೋ ಪದಾರ್ಥಗಳೇ ಔಷಧಿಯಾಗಿದೆ. ಇದನ್ನು ನಮ್ಮ ಹಿರಿಯರು ಉಪಯೋಗಿಸಿಕೊಂಡು ಗಟ್ಟಿ ಮುಟ್ಟಗಿರುತ್ತಿದ್ದರು. ಆಧುನಿಕ ಪ್ರಪಂಚದಲ್ಲಿ ಸರಿಯಾದ ಸಮಯಕ್ಕೆ ಊಟ, ತಿಂಡಿ, ನಿದ್ದೆ ಮಾಡದೆ ರೋಗ ರುಜಿನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾದ ಅಜೀರ್ಣ, ಗ್ಯಾಸ್, ಎಸಿಡಿಟಿಯಂತಹ ಸಮಸ್ಯೆಗಳು ಹೆಚ್ಚಾಗಿವೆ. ಇದಕ್ಕೆಲ್ಲಾ ನಾವು ಸುಲಭವಾಗಿ ಮನೆಯಲ್ಲಿ ಮದ್ದು ಮಾಡಿಕೊಂಡು ಬೇಗ ಹುಷಾರಾಗಬಹುದು. ಅದ್ಯಾವುದೆಂದು ನಾವು ತಿಳಿಯೋಣ.

    ಶುಂಠಿ: ಇದು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವ ಪ್ರಸಿದ್ಧ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಯುರ್ವೇದ ಚಿಕಿತ್ಸೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ನಿವಾರಣೆಗೆ ಸೂಕ್ತ ಔಷಧ ಪದಾರ್ಥಗಳಲ್ಲಿ ಒಂದು. ನೀವು ಪ್ರತಿನಿತ್ಯ ಊಟ ಮಾಡುವಾಗ ಹಸಿ ಶುಂಠಿಗೆ ಉಪ್ಪು, ನಿಂಬೆ ರಸ ಸೇರಿಸಿ ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಸಹಾಯವಾಗಿತ್ತದೆ. ಜೊತೆಗೆ ಶುಂಠಿ ಟೀ ಕುಡಿಯುವುದರಿಂದ ಶೀತ ಸೇರಿದಂತೆ ಅನೇಕ ರೋಗಗಳಿಂದ ಮುಕ್ತಿ ಪಡೆಯಲು ನೈಸರ್ಗಿಕ ಪರಿಹಾರವಾಗಿದೆ.

    ದಾಲ್ಚಿನಿ: ದಾಲ್ಚಿನಿಯು ತಿನ್ನಲು ಸ್ವಲ್ಪ ಖಾರವಾಗಿದ್ದರೂ, ಇದು ದೇಹಕ್ಕೆ ಉತ್ತಮವಾಗಿದೆ. ಸಾಮಾನ್ಯವಾಗಿ ಇದು ನೆಗಡಿಗೆ ಉತ್ತಮ ಔಷಧಿಯಾಗಿದೆ. ಜೊತೆಗೆ ಗಂಟಲು ನೋವು, ಹೊಟ್ಟೆಗೆ ಸಂಬಂಧಿಸಿದ ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಮನೆಮದ್ದಾವಾಗಿದೆ.

    ಜೀರಿಗೆ: ಹೊಟ್ಟೆ ನೋವಿಗೆ ಉತ್ತಮ ಮನೆ ಮದ್ದು ಎಂದಾಕ್ಷಣ ನೆನಪಾಗುವುದು ಜೀರಿಗೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಹೊಟ್ಟೆ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯವಾಗಿದೆ. ಜೊತೆಗೆ ಮಲಬದ್ಧತೆ ನಿವಾರಣೆಯಾಗುತ್ತದೆ.

    ಕೊತ್ತಂಬರಿ ಸೊಪ್ಪು: ಆಸಿಡಿಟಿಯಿಂದ ಬಳಲುವವರಿಗೆ ಇದು ಉತ್ತಮ ಮನೆಮದ್ದಾಗಿದೆ. ಇದು ಹೊಟ್ಟೆ ಉಬ್ಬನ್ನು ನಿವಾರಿಸಲು ಉತ್ತಮ ಚಿಕಿತ್ಸೆಯಾಗಿದೆ. ಹೊಟ್ಟೆಯಲ್ಲಿನ ಹುಳುಗಳನ್ನು ಕೊಂದು ಹಸಿವನ್ನು ಹೆಚ್ಚಿಸುತ್ತದೆ.

    ಇಂಗು: ಒಂದು ಚಿಟಿಕೆ ಇಂಗನ್ನು ತೆಗೆದರೆ ಸಾಕು ಇಡೀ ಮನೆಯನ್ನೇ ಆವರಿಸುವಷ್ಟು ಸುವಾಸನೆಯನ್ನು ಹೊಂದಿದೆ. ಇದು ದೇಹಕ್ಕೂ ಇದರ ಸುವಾಸನೆಯಷ್ಟೇ ಒಳ್ಳೆಯದಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ ಹೊಟ್ಟೆನೋವು, ಉಬ್ಬುವಿಕೆ, ಗ್ಯಾಸ್‍ನಂತಹ ಹೊಟ್ಟೆ ಸಮಸ್ಯೆ ಮಾಯವಾಗಲು ರಾಮಾಬಾಣವಾಗಿದೆ.

    ಅರಿಶಿನ: ಇದು ನಮ್ಮ ಅಡುಗೆ ಮನೆಯಲ್ಲಿ ಮೆಡಿಕಲ್ ಸ್ಟೋರ್ ಇದ್ದಂತೆ. ಎಲ್ಲಾ ರೋಗಗಳಿಗೂ ಉತ್ತಮ ಮನೆಮದ್ದಾಗಿದೆ. ಇದು ಆಯುರ್ವೇದ ಪರಿಹಾರಗಳಲ್ಲಿ ಅರಿಶಿನಕ್ಕೆ ಹೆಚ್ಚು ವೈಶಿಷ್ಟ್ಯವಿದೆ. ಚರ್ಮವನ್ನು ಸುಂದರಗೊಳಿಸಲು ಶೀತ, ಮಧುಮೇಹ, ಹೃದ್ರೋಗ ಮತ್ತು ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಅರಿಶಿನವನ್ನು ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ. ಅರಿಶಿನ ಆಹಾರದ ರುಚಿ ಮತ್ತು ಬಣ್ಣವನ್ನು ಹೆಚ್ಚಿಸುತ್ತದೆ. ಇದು ಪಿತ್ತವನ್ನು ಕಡಿಮೆ ಮಾಡಲು ಒಳ್ಳೆಯದು. ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ

    ಏಲಕ್ಕಿ: ಖಾರ ಅಥವಾ ಸಿಹಿ ತಿನಿಸುಗಳಿಗೆ ಸಾಮಾನ್ಯವಾಗಿ ಬಳಸುವ ತಿನಿಸೆಂದರೆ ಏಲಕ್ಕಿ. ಇದು ಬಾಯಿಯ ದುರ್ವಾಸನೆ ಮುಕ್ತಗೊಳಿಸಲು ಸಹಾಯವಾಗಿದೆ. ಚಹಾದಲ್ಲಿ ಇದನ್ನು ಸೇರಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ಜೊತೆಗೆ ವಾತ ಹಾಗೂ ಕಫವನ್ನು ಕಡಿಮೆಗೊಳಿಸುತ್ತದೆ. ಇದನ್ನೂ ಓದಿ: ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ

  • ತ್ವಚೆ ಡಲ್ ಆಗಿದೆಯಾ ಮೊಟ್ಟೆಯ ಫೇಸ್ ಪ್ಯಾಕ್ ಬಳಸಿ

    ತ್ವಚೆ ಡಲ್ ಆಗಿದೆಯಾ ಮೊಟ್ಟೆಯ ಫೇಸ್ ಪ್ಯಾಕ್ ಬಳಸಿ

    ರಾಸಾಯನಿಕ ಅಂಶ ಇರುವ ಕ್ರೀಮ್‍ಗಳನ್ನು ಬಳಸುವುದರಿಂದ ಅದು ನಿಮ್ಮ ತ್ವಚೆಯನ್ನು ಅತ್ಯಂತ ಶುಷ್ಕ ಮತ್ತು ದುರ್ಬಲವಾಗುವಂತೆ ಮಾಡುತ್ತದೆ. ಆದ್ದರಿಂದ ತ್ವಚೆಯನ್ನು ಆರೋಗ್ಯವಾಗಿಡುವ ಫೇಸ್ ಪ್ಯಾಕ್ ಬಳಸಿ. ನೀವು ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ನಿಮ್ಮ ತ್ವಚೆ ಅಂದವಾಗಿ ಕಾಣುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಬಹುಶಃ ನೈಸರ್ಗಿಕ ಪದಾರ್ಥಗಳಿಗೆ ಪರ್ಯಾಯವಾಗಿ ಮತ್ತೊಂದಿಲ್ಲ ಎಂದೇ ಹೇಳಬಹುದು.

    ಮೊಡವೆಗಳು, ಚರ್ಮ ಸುಕ್ಕುಗಟ್ಟುವುದು ಹೀಗೆ ಇನ್ನಿತರ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತವೆ. ಇದರಿಂದ ಮುಖದ ಸೌಂದರ್ಯ ಹಾಳಾಗುವುದು ಮಾತ್ರವಲ್ಲದೆ ಚರ್ಮದ ಮೃದುತ್ವ ಕೂಡ ಮೊದಲಿನಂತೆ ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲು ನೀವು ಮೊಟ್ಟೆಯಿಂದ ತಯಾರಿಸುವ ಕೆಲವು ಫೇಸ್ ಮಾಸ್ಕ್‌ಗಳನ್ನು ಬಳಸಿ.

    * ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ನೀರಿನಿಂದ ತೊಳೆಯಿರಿ. ಒಂದು ಕೋಳಿ ಮೊಟ್ಟೆಯನ್ನು ತೆಗೆದುಕೊಂಡು ಅದರ ಬಿಳಿಭಾಗವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಬೇಕು. ಸುಮಾರು 10 ರಿಂದ 15 ನಿಮಿಷಗಳು ಇದನ್ನು ಹಾಗೆ ಇರಲು ಬಿಟ್ಟು, ಶುದ್ಧವಾದ ನೀರಿನಿಂದ ನಂತರ ಮುಖ ತೊಳೆದುಕೊಳ್ಳಿ. ನಿಮ್ಮ ರಕ್ತಸಂಚಾರವನ್ನು ಅತ್ಯುತ್ತಮಗೊಳಿಸುವ ಮತ್ತು ನಿಮ್ಮ ತ್ವಚೆಗೆ ಮೊದಲಿಗಿಂತ ಹೊಳಪಿನ ಪ್ರಭಾವವನ್ನು ಒದಗಿಸುವ ಗುಣವನ್ನು ಇದು ಪಡೆದಿರುವುದರಿಂದ ನಿಮ್ಮ ಚರ್ಮದ ಮೇಲಿನ ಸುಕ್ಕುಗಳು ಮಾಯವಾಗಿ ನಿಮ್ಮ ತ್ವಚೆ ಸದೃಢತೆಯಿಂದ ಕೂಡಿರುತ್ತದೆ. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

    * ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಮೊಟ್ಟೆಯ ಬಿಳಿ ಭಾಗ, ಕ್ಯಾರೆಟ್ ಪೆಸ್ಟ್, ಹಾಲನ್ನು ಹಾಕಿ ಮಿಶ್ರಣ ಮಾಡಿ ಗಟ್ಟಿಯಾದ ಪೇಸ್ಟ್‍ನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಸುಮಾರು 15 ರಿಂದ 20 ನಿಮಿಷಗಳ ಇದನ್ನು ಹಾಗೆ ಇರಲು ಬಿಟ್ಟು ನಂತರ ತಂಪಾದ ನೀರಿನಲ್ಲಿ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಈ ಫೇಸ್ ಮಾಸ್ಕ್ ನಿಮ್ಮ ತ್ವಚೆಗೆ ಸುಕ್ಕನ್ನು ಹೊಗಲಾಡಿಸುತ್ತದೆ.

    * ಮೊಟ್ಟೆಯ ಬಿಳಿ ಭಾಗ, ಕಡಲೆಹಿಟ್ಟು ಮತ್ತು ಕೆಲವು ಹನಿಗಳಷ್ಟು ನಿಂಬೆಹಣ್ಣಿನ ರಸವನ್ನು ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರು ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ಕಾಲಹಾಗೇ ಬಿಟ್ಟು ನಂತರ ಮುಖವನ್ನು ತೊಳೆಯಿರಿ. ನಿಂಬೆಹಣ್ಣಿಗೆ ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಸ್ವಚ್ಛಮಾಡುವ ಗುಣಲಕ್ಷಣಗಳು ಇರುವುದರಿಂದ ಚರ್ಮದಲ್ಲಿ ಕಂಡುಬರುವ ಕೊಳೆ ಮತ್ತು ತ್ವಚೆಯ ರಂಧ್ರಗಳಲ್ಲಿ ಕಂಡುಬರುವ ಕಲುಷಿತ ಅಂಶಗಳು ಇಲ್ಲವಾಗುತ್ತವೆ.

  • ಹಲಸಿನ ಹಣ್ಣಿನಲ್ಲಿದೆ ಮನೆಮದ್ದಿನ ಅಂಶ

    ಹಲಸಿನ ಹಣ್ಣಿನಲ್ಲಿದೆ ಮನೆಮದ್ದಿನ ಅಂಶ

    ಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣು ಎಂದರೆ ಹಲಸಿನಹಣ್ಣಾಗಿದೆ. ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳು ಸಿಗಲಿವೆ. ಹಲವು ಕಾಯಿಲೆಗಳಿಗೆ ಬೇಕಾಗಿರುವ ಮದ್ದಿನ ಗುಣವನ್ನು ಹಲಸಿನ ಹಣ್ಣುಹೊಂದಿದೆ. ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವಗಳು ದೇಹಕ್ಕೆ ತುಂಬಾ ಒಳ್ಳೆಯದು. ಯಾವೇಲ್ಲಾ ರೋಗಗಳಿಗೆ ಮದ್ದು ಗೊತ್ತಾ? ಇದನ್ನೂ ಓದಿ: ಮನೆಯಲ್ಲಿ ಮಾಡಿ ಹಲಸಿನ ಹಣ್ಣಿನ ಇಡ್ಲಿ

    * ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಕಣ್ಣಿನ ಪೊರೆಯಂತಹ ಸಮಸ್ಯೆಗಳಿಗೆ ಈ ಹಣ್ಣನ್ನು ಸೇವಿಸುವುದು ಉತ್ತಮ. ಇದನ್ನೂ ಓದಿ: ವ್ಯಾಪಾರಿಗಳ ಮೇಲೆ ಖಾಕಿ ಖದರ್-ಕಾಲಿನಿಂದ ತರಕಾರಿ ಒದ್ದು ಪಿಎಸ್‍ಐ ದರ್ಪ

    *ಕಡಿಮೆ ಕೊಬ್ಬು, ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

    *ಹಲಸಿನ ಹಣ್ಣಿನಲ್ಲಿ ಫೈಬರ್ ಅಧಿಕವಾಗಿರುತ್ತದೆ. ಹೀಗಾಗಿ, ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಈ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

    *ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಈ  ವಿಟಮಿನ್ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು

    *ಹಲಸಿನ ಹಣ್ಣು ಅಲ್ಸರೇಟಿವ್, ಆಂಟಿ-ಸೆಪ್ಟಿಕ್, ಉರಿಯೂತ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

    * ಡಯಾಬಿಟೀಸ್ ಕಾಯಿಲೆಯನ್ನು ಹಲಸಿನಹಣ್ಣು ಕಡಿಮೆಮಾಡುತ್ತದೆ.

    * ಹೃದಯ ಸಮಸ್ಯೆ, ರಕ್ತದೊತ್ತಡ ಇರುವವರು ಈ ಹಣ್ಣನ್ನು ಸೇವಿಸಬಹುದು. ಈ ಸಮಸ್ಯೆಗಳಿಗೆ ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ.

    * ಮೂಳೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಚರ್ಮದ ಮೇಳೆ ಆಗುವ ಕಪ್ಪು ಕಲೆಗಳನ್ನು ಹೊಡೆದೋಡಿಸುತ್ತದೆ.

  • ಉತ್ತಮ ಆರೋಗ್ಯಕ್ಕೆ ಲವಂಗ ಮದ್ದು

    ಉತ್ತಮ ಆರೋಗ್ಯಕ್ಕೆ ಲವಂಗ ಮದ್ದು

    ನಾವು ಮನೆಮದ್ದನ್ನು ಮಾಡುವುದರಿಂದ ಕೆಲವೊಮ್ಮೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುಬಹುದು. ಭಾರತೀಯರ ಮಸಾಲೆ ಪದಾರ್ಥವಾಗಿ ಬಳಕೆಯಾಗುವ ಲವಂಗ ಕೇವಲ ಖಾದ್ಯದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ.

    ಆಯುರ್ವೇದದಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದು, ತಲತಲಾಂತರಗಳಿಂದ ಬಳಸಲಾಗುತ್ತಿದೆ. ರುಚಿಕರವಾದ ಲವಂಗವನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸುವ ಶಕ್ತಿಯನ್ನು ಹೊಂದಿದೆ.

    * ರಾತ್ರಿ ಮಲಗುವ ಮುನ್ನ ಎರಡು ಲವಂಗ ಅಗಿದು, ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯುವುದ ರಿಂದ ಹಲಾವರು ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದಾಗಿದೆ.

    * ಗಂಟಲು ನೋವು ನೋವನ್ನು ನಿವಾರಿಸಲು ಸಹ ಲವಂಗ ಸಹಾಯ ಮಾಡುತ್ತದೆ.

    * ಲವಂಗವು ಇಮ್ಯೂನ್ ಬೂಸ್ಟರ್ ಹೊಂದಿರುತ್ತದೆ. ಹೀಗಾಗಿ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    * ಲವಂಗವನ್ನು ರಾತ್ರಿ ಸೇವಿಸುವುದರಿಂದ ಮಲಬದ್ಧತೆ, ಅತಿಸಾರ, ಅಸಿಡಿಟಿಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

    * ಜೀರ್ಣಕ್ರಿಯೆಯನ್ನು ಸಹ ಸುಧಾರಿಸುವ ಶಕ್ತಿಯನ್ನು ಲವಂಗ ಹೊಂದಿದೆ.

    * ಆಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವುದರಿಂದ ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

    * ಲವಂಗ ಬಾಯಿಯ ಆರೋಗ್ಯಕ್ಕೆ ಸಹ ಒಳ್ಳೆಯದು.ಬಾಯಿಯಲ್ಲಿ ಇಡುವುದರಿಂದ ದುರ್ವಾಸನೆ ಸಹ ಹೋಗುತ್ತದೆ.

    * ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಸೇವಿಸುವುದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ. ಹಲ್ಲು ನೋವಿರುವ ಜಾಗದಲ್ಲಿ ನೀವು ಲವಂಗ ಇರಿಸಿಕೊಳ್ಳಬಹುದು.

  • ನಿಮ್ಮದು ಆಯ್ಲಿ ಸ್ಕಿನ್ ಆಗಿದ್ರೆ ಈ 5 ಫೇಸ್‍ಪ್ಯಾಕ್ ಟ್ರೈ ಮಾಡಿ ನೋಡಿ

    ನಿಮ್ಮದು ಆಯ್ಲಿ ಸ್ಕಿನ್ ಆಗಿದ್ರೆ ಈ 5 ಫೇಸ್‍ಪ್ಯಾಕ್ ಟ್ರೈ ಮಾಡಿ ನೋಡಿ

    ಯ್ಲಿ ಸ್ಕಿನ್/ ಎಣ್ಣೆ ಚರ್ಮದ ಮುಖ ನಿಮ್ಮದಾಗಿದ್ರೆ ಅದರ ಫಜೀತಿ ಎಂತದ್ದು ಅಂತ ನಿಮಗೆ ಗೊತ್ತೇ ಇರುತ್ತೆ. ಬೆಳಗ್ಗೆ ಎಷ್ಟೇ ಫ್ರೆಶ್ ಆಗಿ ರೆಡಿಯಾದ್ರೂ ಮಧ್ಯಾಹ್ನದ ವೇಳೆಗೆ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾಗಿ ಡಲ್ ಆಗಿ ಕಾಣುತ್ತದೆ. ಇದಲ್ಲದೆ ಮೊಡವೆಯ ಸಮಸ್ಯೆಯೂ ಉಂಟಾಗುತ್ತದೆ. ಅದಕ್ಕಾಗಿ ಮನೆಯಲ್ಲೇ ಸಿಗೋ ಕೆಲ ವಸ್ತುಗಳಿಂದ ತಯಾರಿಸಬಹುದಾದ ಸಿಂಪಲ್ ಫೇಸ್‍ಪ್ಯಾಕ್‍ಗಳು ಇಲ್ಲಿವೆ. ಒಮ್ಮೆ ಟ್ರೈ ಮಾಡಿ ನೋಡಿ

    1. ಕಡಲೆಹಿಟ್ಟು- ಮೊಸರು – ಕಿತ್ತಳೆ ಸಿಪ್ಪೆ
    ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಕಪ್‍ಗೆ 1 ಚಮಚ ಕಡಲೆಹಿಟ್ಟು, 1 ಚಮಚ ಕಿತ್ತಲೆ ಸಿಪ್ಪೆಯ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.(ಒಣಗಿದ ಪುಡಿ ಇಲ್ಲವಾದ್ರೆ ಕಿತ್ತಲೆಹಣ್ಣಿನ ರಸ ಅಥವಾ ಹಸಿ ಕಿತ್ತಲೆ ಸಿಪ್ಪೆಯ ಪೇಸ್ಟ್ ಬಳಸಬಹುದು). ಒಮ್ಮೆ ಮುಖವನ್ನ ತೊಳೆದು, ಶುಭ್ರವಾದ ಬಟ್ಟೆಯಿಂದ ನೀರಿನಂಶ ಇಲ್ಲದಂತೆ ಒರೆಸಿ. ನಂತರ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಫೇಸ್‍ಪ್ಯಾಕ್ ಹಚ್ಚಿ 20 ನಿಮಿಷ ರಿಲ್ಯಾಕ್ಸ್ ಮಾಡಿ. ಫೇಸ್‍ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದು ರೋಸ್‍ವಾಟರ್ ಹಚ್ಚಿಕೊಳ್ಳಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ವ್ಯತ್ಯಾಸ ಕಾಣುತ್ತದೆ.

    2. ಮುಲ್ತಾನಿ ಮಿಟ್ಟಿ
    ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಬೇಕಾಗುವಷ್ಟು ರೋಸ್‍ವಾಟರ್ ಬೆರೆಸಿ ಚೆನ್ನಾಗಿ ಕಲಸಿ. ಇದನ್ನ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ ಸಂಪೂರ್ಣವಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನ ವಾರಕ್ಕೆ ಒಂದು ಬಾರಿ ಮಾಡಬಹುದು.

    3. ನಿಂಬೆ ರಸ ಜೇನುತುಪ್ಪ
    ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆರಸ ಬೆರೆಸಿ ಫೇಸ್‍ಪ್ಯಾಕ್ ಮಾಡಿ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ.

    4. ಪುದೀನಾ
    ಪುದೀನಾವನ್ನ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಬರೆಸಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ತೊಳೆಯಿರಿ. ಇದನ್ನ ನಿಯಮಿತವಾಗಿ ಬಳಸಿದ್ರೆ ಮೊಡವೆ ಕಲೆ ಕೂಡ ಕಡಿಮೆಯಾಗುತ್ತದೆ.

    5. ಸೌತೇಕಾಯಿ
    2 ಚಮಚ ಸೌತೇಕಾಯಿ ರಸಕ್ಕೆ 1 ಚಮಚ ನಿಂಬೆರಸ ಬೆರೆಸಿ ಇದನ್ನ ಹತ್ತಿಯಲ್ಲಿ ತೆಗೆದುಕೊಂದು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಮುಖ ತೊಳೆಯಿರಿ.

  • ಸನ್ ಟ್ಯಾನ್ ನಿವಾರಣೆಗೆ ಇಲ್ಲಿವೆ 6 ಸುಲಭ ಟಿಪ್ಸ್

    ಸನ್ ಟ್ಯಾನ್ ನಿವಾರಣೆಗೆ ಇಲ್ಲಿವೆ 6 ಸುಲಭ ಟಿಪ್ಸ್

    ಬೇಸಿಗೆಯಲ್ಲಿ ಎರಡು ನಿಮಿಷ ಬಿಸಿಲಿನಲ್ಲಿ ಓಡಾಡಿದ್ರೂ ಸಾಕು ಚರ್ಮಕ್ಕೆ ಹಾನಿಯಾಗುತ್ತೆ. ಹಾಗಂತ ಹೊರಗಡೆ ಓಡಾಡದೆ ಇರೋಕಾಗಲ್ಲ. ಬಿಸಿಲಲ್ಲಿ ಸುತ್ತಾಡಿ ಚರ್ಮ ಕಪ್ಪಾಯಿತು ಅಂತ ಬ್ಲೀಚ್ ಬಳಸಿದ್ರೆ ತೊಂದರೆಯೇ ಹೆಚ್ಚು. ಹೀಗಾಗಿ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳನ್ನ ಬಳಸಿ ಹೇಗೆ ಸನ್ ಟ್ಯಾನ್ ನಿವಾರಿಸಿಕೊಳ್ಳಬಹುದು ಅನ್ನೋದಕ್ಕೆ ಇಲ್ಲಿದೆ 6 ಸುಲಭ ಟಿಪ್ಸ್

    1. ನಿಂಬೆ ರಸ
    ನಿಂಬೆಹಣ್ಣನ್ನು ಕಟ್ ಮಾಡಿ ಟ್ಯಾನ್ ಆಗಿರುವ ಭಾಗದ ಮೇಲೆ ಉಜ್ಜಿ. 5-10 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ 2 ರಿಂದ 3 ವಾರ ಮಾಡಿದರೆ ಕ್ರಮೇಣವಾಗಿ ಸನ್ ಟ್ಯಾನ್ ಕಡಿಮೆಯಾಗುತ್ತದೆ.

    2. ಸೌತೇಕಾಯಿ, ನಿಂಬೆ ರಸ, ರೋಸ್ ವಾಟರ್
    ಒಂದು ಬೌಲ್‍ನಲ್ಲಿ ಸೌತಕಾಯಿಯ ತಿರುಳು, ಒಂದು ಚಮಚ ನಿಂಬೆ ರಸ ಹಾಗೂ ಒಂದು ಚಮಚ ರೋಸ್ ವಾಟರ್ ಹಾಕಿ ಕಲಸಿಕೊಂಡು ಅದನ್ನ ಟ್ಯಾನ್ ಆಗಿರುವ ಭಾಗಗಳಿಗೆ ಹಚ್ಚಿ, 10 ನಿಮಿಷದ ಬಳಿಕ ತೊಳೆಯಿರಿ.

    3. ಕಡಲೆಹಿಟ್ಟು, ಅರಿಶಿಣ
    2 ಚಮಚ ಕಡಲೆಹಿಟ್ಟಿಗೆ ಒಂದು ಚಿಟಿಕೆ ಅರಿಶಿಣ ಬೆರೆಸಿ ಹಾಲು ಅಥವಾ ರೋಸ್ ವಾಟರ್ ಹಾಕಿ ಕಲಸಿಕೊಳ್ಳಿ. ಈ ಮಿಶ್ರಣವನ್ನ ಮುಖ ಕೈ ಕಾಲು ಹಾಗೂ ಟ್ಯಾನ್ ಆದ ಭಾಗಗಳಿಗೆ ಹಚ್ಚಿ 15-20 ನಿಮಿಷದ ಬಳಿಕ ತೊಳೆಯಿರಿ.

    4. ಟೊಮೆಟೋ, ಆಲೋವೆರಾ, ಮೈಸೂರು ಬೇಳೆ
    1 ಚಮಚ ಮೈಸೂರು ಬೇಳೆಯನ್ನ ನೀರಿನಲ್ಲಿ ನೆನೆಸಿಟ್ಟು ನಂತರ ರುಬ್ಬಿಕೊಳ್ಳಿ. (ಮೈಸೂರು ಬೇಳೆ ಕೇಸರಿ ಬಣ್ಣದಲ್ಲಿರುತ್ತದೆ. ಅಂಗಡಿಗಳಲ್ಲಿ ಲಭ್ಯ)
    ರುಬ್ಬಿಕೊಂಡ ನಂತರ ಅದಕ್ಕೆ ಟೊಮೆಟೋ ರಸ ಹಾಗೂ ಆಲೋವೆರಾ (ಲೋಳೆರಸ)ವನ್ನ ಸಮಪ್ರಮಾಣದಲಿ ಬೆರೆಸಿ ಕಲಸಿಕೊಳ್ಳಿ. ಇದನ್ನ ಟ್ಯಾನ್ ಆದ ಭಾಗಗಳಿಗೆ ಹಚ್ಚಿ 30 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

    5. ಆಲೂಗಡ್ಡೆ ರಸ, ನಿಂಬೆ ರಸ, ಅಕ್ಕಿ ಹಿಟ್ಟು
    2 ಚಮಚ ಅಕ್ಕಿಹಿಟ್ಟು, 2 ಚಮಚ ಆಲೂಗಡ್ಡೆ ರಸ ಹಾಗೂ 1 ಚಮಚ ನಿಂಬೆ ರಸವನ್ನ ಮಿಕ್ಸ್ ಮಾಡಿಕೊಂಡು ಟ್ಯಾನ್ ಆದ ಭಾಗಗಳ ಮೇಲೆ ದಪ್ಪ ಪದರದಂತೆ ಹಚ್ಚಿ 30 ನಿಮಿಷಗಳ ಬಳಿಕ ತೊಳೆಯಿರಿ.

    6. ಪರಂಗಿ ಹಣ್ಣು, ಜೇನುತುಪ್ಪ
    ಅರ್ಧ ಕಪ್‍ನಷ್ಟು ಪಪ್ಪಾಯ ಹಣ್ಣಿನ ಪೇಸ್ಟ್‍ಗೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿಕೊಳ್ಳಿ. ಇದನ್ನ ಟ್ಯಾನ್ ಆಗಿರುವ ಭಾಗಗಳಿಗೆ ಹಚ್ಚಿ 30 ನಿಮಿಷದ ಬಳಿಕ ತೊಳೆಯಿರಿ.