Tag: ಮನುಷ್ಯ

  • ವನ್ಯ ಜೀವಿಗಳು, ಮನುಷ್ಯನ ಸಂಘರ್ಷ ದಿನೇ ದಿನೇ ಹೆಚ್ಚಳಕ್ಕೆ ಕಾರಣ – ತಜ್ಞರ ಅಭಿಪ್ರಾಯವೇನು?

    ವನ್ಯ ಜೀವಿಗಳು, ಮನುಷ್ಯನ ಸಂಘರ್ಷ ದಿನೇ ದಿನೇ ಹೆಚ್ಚಳಕ್ಕೆ ಕಾರಣ – ತಜ್ಞರ ಅಭಿಪ್ರಾಯವೇನು?

    ಮಾನವ ವನ್ಯಜೀವಿ (Wild Animals) ಸಂಘರ್ಷ ನಿರಂತರವಾಗಿ ಗತಕಾಲದಿಂದಲೂ ನಡೆಯುತ್ತಾ ಬಂದಿದೆ. ಮಾನವನ (Human) ಅನುಕೂಲಕ್ಕಾಗಿ ಅಭಿವೃದ್ಧಿ ಯೋಜನೆಗಳು ವನ್ಯಜೀವಿಗಳು ಮತ್ತು ಮಾನವರ ನಡುವೆ ನಡೆಯುವ ಸಂಘರ್ಷಕ್ಕೆ ಮೂಲ ಕಾರಣವಾಗಿದೆ. ಮತ್ತೊಂದು ಕಡೆ ಅರಣ್ಯ ಇಲಾಖೆ ವತಿಯಿಂದ ಕಾಯ್ದೆ ಕಾನೂನುಗಳು ಜಾರಿಗೆ ತಂದು ವನ್ಯ ಪ್ರಾಣಿಗಳ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿದ್ದು ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆ ವನ್ಯಜೀವಿಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಪ್ರಾಣಿಗಳು ಕಾಡಿನಿಂದ ಹೊರಬರಲು ಕಾಡಂಚಿನ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಮನುಷ್ಯರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಅರಣ್ಯ ಭೂಮಿಯಲ್ಲಿ ಮನುಷ್ಯನ ಮಿತಿ ಮೀರಿದ ಹಸ್ತಕ್ಷೇಪದಿಂದ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿ ನಾಡಿನ ಕಡೆ ಮುಖ ಮಾಡುತ್ತಿವೆ. ಇದೇ ಕಾರಣಕ್ಕೆ ಬೇಟೆ, ಉರುಳಿಗೆ ಸಿಕ್ಕು ಚಿರತೆ ಸಾವು ಎಂಬ ಸುದ್ದಿಗಳನ್ನು ಕಾಣುತ್ತೇವೆ. ಒಂದು ಕಡೆ ಅರಣ್ಯ ಇಲಾಖೆಯ ಬಹುಭಾಗದ ಭೂಮಿ ಸಾಗುವಾನಿ ಮರಗಳೇ ಹೆಚ್ಚಾಗಿದ್ದು, ಇದು ಎಷ್ಟರ ಮಟ್ಟಿಗೆ ವನ್ಯ ಜೀವಿಗಳಿಗೆ ಉಪಕಾರವಾಗಿದೆ ಎಂಬ ಪ್ರಶ್ನೆ ಸಹ ಮೂಡುತ್ತದೆ.

    ಎಷ್ಟೋ ಕಡೆಗಳಲ್ಲಿ ಕೃಷಿಭೂಮಿಗಾಗಿ ನೂರಾರು ಎಕರೆ ಕಾಡನ್ನು ನಾಶ ಮಾಡುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲ ಒಂದು ತಡೆ ಎಂಬುದೇ ಇಲ್ಲವಾಗಿ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕಿವೆ. ಅಲ್ಲದೇ ಆಹಾರಕ್ಕಾಗಿ ಕೃಷಿ ಭೂಮಿಗೆ ಬಂದ ಎಷ್ಟೋ ಪ್ರಾಣಿಗಳು ವಿದ್ಯುತ್, ಗುಂಡು, ಉರುಳು ಹಾಗೂ ವಿಷದಂತಹ ದಾಳಿಗೆ ಸಿಲುಕುತ್ತಿವೆ. ಹೀಗೆ ಸುಮಾರು ಪ್ರತಿದಿನ ಭಾರತದಲ್ಲಿ 50ಕ್ಕೂ ಹೆಚ್ಚು ವನ್ಯಜೀವಿಗಳು ಸಾವಿಗೀಡಾಗುತ್ತಿವೆ ಎಂಬ ವರದಿ ಇದೆ. ಕಳೆದ 2022 ರಿಂದ ಕರ್ನಾಟಕದಲ್ಲಿ ವನ್ಯಜೀವಿಗಳ ದಾಳಿಗೆ ಸುಮಾರು 31 ಜನರ ಸಾವಾಗಿದೆ. ಹೀಗೆ ನಿರಂತರ ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷ ಒಂದಲ್ಲ ಒಂದು ರೀತಿಯಾಗಿ ಮುಂದುವರಿಯುತ್ತಲೇ ಇದೆ.

    ಆನೆಗಳ ಹಾವಳಿ ಎಂಬ ವರದಿ ಬಂದಾಗ ಈ ಮಾತು ನೆನಪಾಗುತ್ತದೆ. ಆನೆಗಳು ತಮ್ಮ ಹಿಂದಿನ ತಲೆಮಾರು, ಅಂದರೆ ಅಜ್ಜ ಅಜ್ಜಿ ಆ ಜಾಗದಲ್ಲಿ ಓಡಾಡಿದ್ದರೆ ಮಾತ್ರ ಅಲ್ಲಿಗೆ ಬರುತ್ತವೆ ಎಂಬ ಮಾತಿದೆ. ಹೀಗೆ ಆನೆಗಳು ಬರುವ ಹೊತ್ತಿಗೆ ಆ ಕಾಡಿನ ಜಾಗದಲ್ಲಿ ಊಹಿಸಲಾಗದಷ್ಟು ಎತ್ತರದ ಕಟ್ಟಡಗಳು ತಲೆ ಎತ್ತಿ ಅವುಗಳನ್ನು ಕಂಗಲಾಗಿಸುತ್ತವೆ. ಹುಲಿ, ಚಿರತೆ ಹಾಗೂ ಮಂಗಗಳದ್ದೂ ಇದೇ ಕತೆಯಾಗಿ ಕಾಣುತ್ತದೆ.

    ಈಗ ಒಂದು ಸಲ ಭಾರೀ ಸುದ್ದಿಯಾದ ಅರ್ಜುನ ಎಂಬ ಆನೆಯ ಸಾವಿನಲ್ಲಿ ನೋಡುವಾಗ, ಇಲ್ಲಿ ಅರ್ಜುನನ ತಪ್ಪೇನಿದೆ? ಆತ ಸೆರೆ ಹಿಡಿಯಲು ಹೊರಟಿದ್ದು ಯಾರನ್ನ? ತನ್ನಂತೆ ಬಂಧಿಯಾಗಲು ಇನ್ನೊಂದು ಆನೆಯನ್ನ. ಇಲ್ಲಿ ಆಯುಧವಾಗಿ ಅರ್ಜುನ ಬಳಕೆಯಾದ ಕೊನೆಗೆ ಸೋತ, ಮನುಷ್ಯನ ಸಂಪರ್ಕ ಅರ್ಜುನನಿಗೆ ಮುಳ್ಳಾಗಿದ್ದು ಚರ್ಚೆ ಆಗುವುದೇ ಇಲ್ಲ. ಒಂದು ಕಡೆ ತೇಜಸ್ವಿಯವರ ಬರಹದಲ್ಲಿ ವನ್ಯಜೀವಿಗಳ ಜೊತೆ ಮನುಷ್ಯನ ಸ್ನೇಹ ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಬರೆಯುತ್ತಾರೆ. ಒಮ್ಮೆ ನೋಡಿದರೆ ಇದು ಸರಿ. ಮನುಷ್ಯನ ಸ್ನೇಹ ಪ್ರಾಣಿಗಳಿಗೆ ವರವಾಗುವುದಕ್ಕಿಂತ ಶಾಪವಾಗಿಯೇ ಪರಿಣಮಿಸುತ್ತದೆ. ಬಹುಶಃ ಇದೇ ಕಾರಣಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಯಾವುದೇ ಕಾಡು ಪ್ರಾಣಿಗಳನ್ನು ಸಾಕಲು ಮನುಷ್ಯರಿಗೆ ಅನುಮತಿಯನ್ನು ನಿರಾಕರಿಸಲಾಗಿದೆ. ಇದರೊಂದಿಗೆ ಮನುಷ್ಯ ಹಾಗೂ ವನ್ಯಜೀವಿಗಳ ಸಂಘರ್ಷಕ್ಕೆ ಕೊನೆ ಹಾಡಲು ಸೂಕ್ತ ಮಾರ್ಗ ಕಂಡುಕೊಳ್ಳುವಲ್ಲಿ ವ್ಯವಸ್ಥೆ ಸೋತಿದೆ ಎಂಬುದು ಪರಿಸರ ಪ್ರಿಯರ ಬೇಸರಕ್ಕೂ ಕಾರಣವಾಗಿದೆ.

    ಪ್ರಾಣಿಗಳ ಅಸಹಜ ಸಾವಿನ ಬಗ್ಗೆ ಕಾನೂನು ಏನು ಹೇಳುತ್ತದೆ?
    ಪ್ರಾಣಿ ಸಾವಿನ ಬಗ್ಗೆ ಅನುಮಾನವಿದ್ದಾಗ ಮರಣೋತ್ತರ ಪರೀಕ್ಷೆ ನಡೆಸಬೇಕು. ಮರಣೋತ್ತರ ಪರೀಕ್ಷೆಯಲ್ಲಿ ಗುಂಡೇಟಿನ ಸತ್ಯ ಸಂಪೂರ್ಣವಾಗಿ ತಿಳಿಯುವುದಿಲ್ಲ. ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳಿಗೆ ಮೆಟಲ್ ಡಿಟೆಕ್ಟರ್ ಟೆಸ್ಟ್ ಮಾಡುತ್ತಾರೆ. ಮರಣೋತ್ತರ ಪರೀಕ್ಷೆಗೂ ಮುನ್ನ ಮೆಟಲ್ ಡಿಟೆಕ್ಟರ್ ಟೆಸ್ಟ್ ನಡೆಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಮಾರ್ಗಸೂಚಿಯೇ ಇದೆ. ಅರ್ಜುನ ಆನೆ ಸಾವಿನ ವಿಚಾರದಲ್ಲಿ ಇದ್ಯಾವುದು ಕೂಡ ಪಾಲನೆ ಮಾಡಿಲ್ಲ ಎಂಬುದು ಗಮನಾರ್ಹ ಅಂಶ.

    ಕರ್ನಾಟಕ ಸರ್ಕಾರ ಕೈಗೊಂಡ ನೂತನ ಕ್ರಮಗಳು
    ಕಾಡಾನೆ ಹಾವಳಿ ತಡೆಗೆ ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕೇಳಲಾಗಿದೆ. ಎಷ್ಟು ಬೇಡಿಕೆಯಿದೆಯೋ ಅಷ್ಟನ್ನು ಮಂಜೂರು ಮಾಡಿ ಈ ವರ್ಷ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲು ತೀರ್ಮಾನ ಮಾಡಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುದಾನದ ಕೊರತೆಯಿದ್ದರೂ ಈ ಬಜೆಟ್‍ನಲ್ಲೇ ಹೆಚ್ಚುವರಿಯಾಗಿ 100 ಕೋಟಿ ರೂ. ಪಡೆದು 120 ಕಿ.ಮೀ. ರೈಲ್ವೆ ಕಂಬಿ ಅಳವಡಿಕೆಗೆ ತೀರ್ಮಾನ ಮಾಡಲಾಗಿದೆ.

    ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದು, ರೈಲ್ವೆ ಕಂಬಿ ಅಳವಡಿಕೆಗೆ ಗುತ್ತಿಗೆ ನೀಡಿದರೂ ಕಂಬಿಗಳು ತುರ್ತಾಗಿ ಸಿಗುವುದಿಲ್ಲ. ಈ ಬಗ್ಗೆ ಕೇಂದ್ರಕ್ಕೆ ಸಾಕಷ್ಟು ಬಾರಿ ಪತ್ರ ಬರೆದು, ಹಳೆಯ ರೈಲ್ವೆ ಕಂಬಿಗಳನ್ನು ನಮಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಕೇಂದ್ರ ಸ್ಪಂದಿಸಿಲ್ಲ. ಶೀಘ್ರದಲ್ಲೇ ರೈಲ್ವೆ ಕಂಬಿ ತರಿಸಿಕೊಂಡು ಅಮೂಲ್ಯವಾಗಿರುವ ಜನರ ಜೀವ ರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವರು ಭರವಸೆ ನೀಡಿದ್ದಾರೆ.

    ಕಾಡಾನೆಗಳಿಂದ ಹಾವಳಿಯಿಂದ ಉಂಟಾಗಿರುವ ಬೆಳೆಹಾನಿಗೆ ಬಾಕಿ ಇರುವ 85 ಲಕ್ಷ ರೂ. ತಕ್ಷಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ. ಬೆಂಗಳೂರಿನಲ್ಲೇ ಎರಡರಿಂದ ಎರಡೂವರೆ ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇಡೀ ರಾಜ್ಯದಲ್ಲಿ ಒಂದುವರೆಯಿಂದ ಎರಡು ಲಕ್ಷ ಎಕರೆ ಒತ್ತುವರಿಯಾಗಿದೆ. ಅನೇಕ ಪ್ರಕರಣಗಳು ಹೈಕೋರ್ಟ್‍ನಲ್ಲಿವೆ ಕೆಲವೊಂದಕ್ಕೆ ತಡೆಯಾಜ್ಞೆ ಇದೆ. ಹಲವರು ಮನೆ ಕಟ್ಟಿಕೊಂಡಿದ್ದಾರೆ. ಬಡವರನ್ನು ಹೊರತುಪಡಿಸಿ ದೊಡ್ಡ ಮಟ್ಟಮಟ್ಟದಲ್ಲಿ ಒತ್ತುವರಿಯಾಗಿರುವ ಕಡೆ ತೆರವುಗೊಳಿಸಲು ತೀರ್ಮಾನ ಮಾಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶ ಭೂಮಿಯನ್ನು ದುರುದ್ದೇಶಪೂರಿತವಾಗಿ ಬೇರೆಯವರಿಗೆ ಹಂಚಿಕೆ ಮಾಡಲು ಯಾವುದೇ ರೀತಿಯಲ್ಲೂ ಕಾನೂನು ಬದ್ಧ ಹಕ್ಕುಗಳಿಲ್ಲ. ಯಾರ್ಯಾರು ಕಾನೂನು ಮೀರುತ್ತಾರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ ಎಂದು ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar kandre) ಹೇಳಿದ್ದರು.

  • ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ನಂತರ ಸಾವು

    ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ನಂತರ ಸಾವು

    ವಾಷಿಂಗ್ಟನ್‌: ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಎರಡು ತಿಂಗಳ ನಂತರ ಮೃತಪಟ್ಟಿದ್ದಾರೆ ಎಂದು ಚಿಕಿತ್ಸೆ ನೀಡಿದ ಆಸ್ಪತ್ರೆ ತಿಳಿಸಿದೆ.

    ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕ ಮೇರಿಲ್ಯಾಂಡ್‍ನ 57 ವರ್ಷದ ಡೇವಿಡ್ ಬೆನೆಟ್‍ಗೆ ಜ.7ರಂದು ಹಂದಿ ಹೃದಯವನ್ನು ಅಳವಡಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆಯಾದ ಮೂರು ದಿನಗಳ ನಂತರ ರೋಗಿಯು ಚೇತರಿಸಿಕೊಂಡಿದ್ದರು. ಅವರಿಗೆ ಅಳವಡಿಸಲಾದ ಹೃದಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಮಾ.8 ರಂದು ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಕೆಲವು ದಿನಗಳ ಹಿಂದೆ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ವೈದ್ಯರು ಹೆಚ್ಚು ನಿಗಾವಹಿಸಿ ಚಿಕಿತ್ಸೆ ಮುಂದುವರಿಸಿದರಾದರೂ, ಅವರು ಚೇತರಿಸಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ನಂತರ ಅವರು ಮೃತಪಟ್ಟಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಕಸಿ ಮಾಡಲಾದ ಹೃದಯವು ಯಾವುದೇ ತೊಂದರೆಯ ಲಕ್ಷಣಗಳಿಲ್ಲದೆ ಹಲವಾರು ವಾರಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಸಿನ್ ತಂಡವು ಮನುಷ್ಯನಿಗೆ ಮೊದಲ ಬಾರಿಗೆ ಹಂದಿಯ ಹೃದಯ ಕಸಿ ಮಾಡಿತ್ತು. ಹೊಸ ಜೀನ್ ಎಡಿಟಿಂಗ್ ಉಪಕರಣಗಳಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಇದನ್ನೂ ಓದಿ: ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

    ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ಬೆನೆಟ್‌ ಆ ಸಂದರ್ಭದಲ್ಲಿ, ಸಾಯುವುದು ಅಥವಾ ಈ ಕಸಿ ಮಾಡಿಸಿಕೊಳ್ಳುವುದು ನನ್ನ ಕೊನೆಯ ಆಯ್ಕೆಯಾಗಿತ್ತು. ಆದರೆ ನಾನು ಬದುಕಲು ಬಯಸುತ್ತೇನೆ. ಬದುಕಲು ನನಗೆ ಇದು ಒಂದೇ ಆಯ್ಕೆಯಾಗಿತ್ತು ಎಂದು ಪ್ರತಿಕ್ರಿಯಿಸಿದ್ದರು.

    ಹಂದಿಯ ಕೆಲವು ಅಂಗಗಳಲ್ಲಿ ಮನುಷ್ಯನ ಅಂಗಗಳಿಗೆ ಹೋಲುವ ರಚನೆಗಳಿವೆ. ಅದರಲ್ಲಿಯೂ ಮನುಷ್ಯನ ಹೃದಯ ಮತ್ತು ಹಂದಿ ಹೃದಯ ಒಂದೇ ಗಾತ್ರವನ್ನು ಹೊಂದಿರುತ್ತೆ. ಪ್ರಸ್ತುತ ಹಂದಿಗಳಿಂದ ಮಾನವರಿಗೆ ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಕಸಿ ಮಾಡಲು ಸಂಶೋಧನೆ ನಡೆಸಲಾಗುತ್ತಿದೆ. ಹಿಂದೆಯೂ ಈ ರೀತಿ ಕೆಲವು ಪ್ರಯೋಗಗಳನ್ನು ಮಾಡಲಾಗಿತ್ತು. ಇದನ್ನೂ ಓದಿ: ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ

  • ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಚಿಕಾಗೋ: ಇದೇ ಮೊದಲ ಬಾರಿ ಮನುಷ್ಯನಿಗೆ ಹಂದಿ ಹೃದಯದ ಕಸಿ ಮಾಡಿದ್ದು, ಈಗ ಆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

    ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕ ವ್ಯಕ್ತಿಗೆ ಹಂದಿ ಹೃದಯವನ್ನು ಅಳವಡಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸುತ್ತ ಈ ಚಿಕಿತ್ಸೆ ಯಶಸ್ವಿಯಾಗಿದ್ದು, ಚಿಕಿತ್ಸೆಯಾದ ಮೂರು ದಿನಗಳ ನಂತರ ರೋಗಿಯು ಚೇತರಿಸಿಕೊಂಡಿದ್ದಾರೆ. ಅವರಿಗೆ ಅಳವಡಿಸಲಾದ ಹೃದಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಸಿನ್ ತಂಡವು ನಡೆಸಿದ ಶಸ್ತ್ರಚಿಕಿತ್ಸೆಯು ಹಂದಿಯಿಂದ ಮನುಷ್ಯನಿಗೆ ಮೊದಲ ಬಾರಿಗೆ ಹೃದಯ ಕಸಿ ಮಾಡಿದ್ದು, ಯಶಸ್ವಿಯಾಗಿದೆ. ಹೊಸ ಜೀನ್ ಎಡಿಟಿಂಗ್ ಉಪಕರಣಗಳಿಂದ ಶಸ್ತ್ರ ಚಿಕಿತ್ಸೆ ಸಾಧ್ಯವಾಯಿತು.

    ಮೇರಿಲ್ಯಾಂಡ್‍ನ 57 ವರ್ಷದ ಡೇವಿಡ್ ಬೆನೆಟ್‍ಗೆ, ಹೃದಯ ಕಸಿ ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಾಯುವುದು ಅಥವಾ ಈ ಕಸಿ ಮಾಡಿಸಿಕೊಳ್ಳುವುದು ನನ್ನ ಕೊನೆಯ ಆಯ್ಕೆಯಾಗಿತ್ತು. ಆದರೆ ನಾನು ಬದುಕಲು ಬಯಸುತ್ತೇನೆ. ಬದುಕಲು ನನಗೆ ಇದು ಒಂದೇ ಆಯ್ಕೆಯಾಗಿತ್ತು ಎಂದು ವಿವರಿಸಿದರು.

    Surgeon Muhammad M. Mohiuddin, MD leads a team placing a genetically-modified pig heart into a storage device at the Xenotransplant lab before its transplant on David Bennett, a 57-year-old patient with terminal heart disease, at University of Maryland Medical Center in Baltimore, Maryland, U.S. January 7, 2022. Picture taken January 7, 2022. University of Maryland School of Medicine (UMSOM)/Handout via REUTERS.

    ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಗೆ ಕಸಿ ಮಾಡಿದ ಡಾ.ಬಾಟ್ರ್ಲಿ ಗ್ರಿಫಿತ್ ಈ ಕುರಿತು ಮಾತನಾಡಿದ್ದು, ಇದು ಒಂದು ಮಹತ್ವದ ಶಸ್ತ್ರಚಿಕಿತ್ಸೆಯಾಗಿದೆ. ಅಂಗಗ ದಾನ ಮಾಡುವ ಹಲವು ದಾನಿಗಳಿದ್ದರೂ, ಹೃದಯ ದಾನ ಮಾಡುವವರು ತುಂಬಾ ಕಡಿಮೆ. ಈಗ ಈ ರೀತಿಯ ಹೊಸ ಪ್ರಯೋಗದಿಂದ ಅಂಗಗಳ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ವಿವರಿಸಿದರು.

    ಈ ರೀತಿ ಪ್ರಯೋಗ ಮಾಡಬೇಕಾದರೆ ನಾವು ಜಾಗರೂಕತೆಯಿಂದ ಮುಂದುವರಿಯಬೇಕು. ಆದರೆ ಈ ಶಸ್ತ್ರಚಿಕಿತ್ಸೆ ಪ್ರಪಂಚದಲ್ಲಿ ಮೊದಲ ಬಾರಿಗೆ ಮಾಡಲಾಗಿದೆ. ಇದು ಯಶಸ್ವಿಯಾಗಿರುವುದರಿಂದ ಇನ್ನೂ ಹೊಸ ರೀತಿಯ ಪ್ರಯೋಗ ಮಾಡುವುದಕ್ಕೆ ನಾವು ಆಶಾವಾದಿಯಾಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಹಂದಿಗಳು ಬಹಳ ಹಿಂದಿನಿಂದಲೂ ಮನುಷ್ಯನಿಗೆ ಕಸಿ ಮಾಡುವ ಮೂಲವಾಗಿದೆ. ಏಕೆಂದರೆ ಅವುಗಳ ಅಂಗಗಳು ಮನುಷ್ಯರಿಗೆ ಹೋಲುತ್ತವೆ. ಅದರಲ್ಲಿಯೂ ಮನುಷ್ಯನ ಹೃದಯ ಮತ್ತು ಹಂದಿ ಹೃದಯ ಒಂದೇ ಗಾತ್ರವನ್ನು ಹೊಂದಿರುತ್ತೆ. ಪ್ರಸ್ತುತ ಹಂದಿಗಳಿಂದ ಮಾನವರಿಗೆ ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಕಸಿ ಮಾಡಲು ಸಂಶೋಧನೆ ನಡೆಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ:  : Mekedatu Padyatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

    ಹಿಂದೆಯೂ ಈ ರೀತಿ ಕೆಲವು ಪ್ರಯೋಗಗಳನ್ನು ಮಾಡಲಾಗಿದ್ದು, ಹಂದಿಯ ಸೋಂಕಿನ ಅಪಾಯದಿಂದ ಮನುಷ್ಯನಿಗೆ ಕಸಿ ಮಾಡಿದ ಹಿಂದಿನ ಪ್ರಯತ್ನಗಳು ವಿಫಲವಾಗಿತ್ತು. ಆದರೆ ಈ ಪ್ರಯೋಗದಲ್ಲಿ ದಾನಿ ಹಂದಿಯ ಹೃದಯ ಅತಿಯಾದ ಬೆಳವಣಿಗೆಯನ್ನು ತಡೆಯಲು ನಾವು ಹಂದಿ ಜೀನ್ ಅನ್ನು ತೆಗೆದಿದ್ದೇವೆ. ನಮ್ಮ ಎಲ್ಲ ಪ್ರಯತ್ನಗಳಿಗೆ ಇಂದು ಯಶಸ್ಸು ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ನಿವೃತ್ತ ನೌಕರನ ಸ್ನೇಹ ಬೆಳೆಸಿದ ಕಾಗೆ- ಮನೆಯ ಸದಸ್ಯನಾದ ಕಥೆ!

    ನಿವೃತ್ತ ನೌಕರನ ಸ್ನೇಹ ಬೆಳೆಸಿದ ಕಾಗೆ- ಮನೆಯ ಸದಸ್ಯನಾದ ಕಥೆ!

    ಕಾರವಾರ: ಕಾಗೆ ಎಂದರೆ ಸಾಕು ಎಲ್ಲರೂ ಅದನ್ನು ಓಡಿಸುತ್ತಾರೆ. ಕಾಗೆ ಮನೆಯಲ್ಲಿ ಕೂಗಿದರೆ ಸಾವು ಸಂಭವಿಸುತ್ತದೆ, ನೆಂಟರು ಬರುತ್ತಾರೆ ಎಂದೆಲ್ಲಾ ನಂಬಿಕೆ ಇಂದಿಗೂ ನಮ್ಮ ಗ್ರಾಮಗಳಲ್ಲಿವೆ. ಮಹಾಲಯ ಅಮವ್ಯಾಸೆ ದಿನ ಪೂರ್ವಜರನ್ನು ಸ್ಮರಿಸಿ ಕಾಗೆಗೆ ಎಡೆ ನೀಡುವ ಸಂಪ್ರದಾಯ ಸಹ ಇದೆ. ಆದರೆ ಇಲ್ಲೊಂದು ಕಥೆ ವಿಭಿನ್ನವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಮಾಧವನಗರದ ನಿವೃತ್ತ ಸರ್ಕಾರಿ ನೌಕರ ವಿಠಲ್ ಶಟ್ಟಿ ಅವರು, ಕಳೆದ ಹತ್ತು ವರ್ಷದಿಂದ ಕಾಗೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಇದೀಗ ಈ ಕಾಗೆ ಮನೆಯ ಸದಸ್ಯನಂತಾಗಿದ್ದು, ಪ್ರತಿ ದಿನ ಇವರ ಮನೆಯಲ್ಲಿ ಆಹಾರ ಸೇವಿಸಲು ಬರುತ್ತಿದೆ. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

    Crow Friendship Karwar publictv

    ಬಾಂಧವ್ಯ ಬೆಳೆದಿದ್ದು ಹೇಗೆ?

    ಕಳೆದ ಹತ್ತು ವರ್ಷದ ಹಿಂದೆ ಒಂದು ಕಾಲು ತುಂಡಾದ ಕಾಗೆ ತನ್ನ ಮರಿಗಳೊಂದಿಗೆ ಇವರ ಮನೆಯ ಬಳಿ ಹಾರಾಡುತಿತ್ತು. ಈವೇಳೆ ಅದರೊಂದಿಗಿದ್ದ ಮರಿ ಕಾಗೆ ಅಸ್ವಸ್ಥವಾಗಿ ಇವರ ಮನೆಯ ಬಳಿ ಕುಳಿತಿದೆ. ಇದನ್ನು ಗಮನಿಸಿದ ಅವರು ಕಾಗೆಗೆ ಉಪಚರಿಸಿದ್ದಾರೆ. ಉಪಚಾರದಿಂದ ಚೇತರಿಸಿಕೊಂಡಿದ್ದ ಕಾಗೆ ಮರಿ ಪ್ರತಿ ದಿನ ಇವರ ಮನೆಗೆ ಬರುತಿತ್ತು. ಹೀಗಾಗಿ ಮನೆಯಲ್ಲಿ ಇವರು ತಾವು ತಿನ್ನುವ ರೊಟ್ಟಿ ,ಅನ್ನವನ್ನು ನೀಡುತಿದ್ದರು. ಹೀಗೆ ಕಾಗೆಯೊಂದಿಗೆ ಸ್ನೇಹ ಬೆಳೆಸಿಕೊಂಡ ಅವರು ಪ್ರತಿ ದಿನ ಮನೆಯ ಜನರೊಂದಿಗೆ ಇದಕ್ಕೂ ಸಹ ಉಪಹಾರ ನೀಡುವುದನ್ನು ಬೆಳಸಿಕೊಂಡಿದ್ದು, ಇದೀಗ ಗೆಳೆತನ ಆಪ್ತವಾಗಿದೆ. ಸಲುಗೆಯಲ್ಲಿ ಇವರ ಕೈಮೇಲೆ ಕುಳಿತು ಆಹಾರ ಸೇವಿಸಿ ತೆರಳುತ್ತದೆ. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ

     Crow Friendship Karwar publictv

    ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳು ಈ ಜೀವ ಸಂಕುಲಗಳ ಸರಪಳಿ, ಅವುಗಳನ್ನು ಪ್ರೀತಿಯಿಂದ ನೋಡಿಕೊಂಡರೆ, ಪ್ರೀತಿ ಸಂಪಾದಿಸುವುದು ಸುಲಭವಾಗಿದೆ. ಈ ಕಾಗೆಯನ್ನು ಒಂದು ದಿನ ನೋಡದಿದ್ದರೂ ಮನಸ್ಸು ಪರಿತಪ್ಪಿಸುತ್ತದೆ. ಇದರೊಂದಿಗೆ ಬೆರೆತ ಬಾಂಧವ್ಯ ಅಂತದ್ದು ಎಂದು ವಿಠಲ್ ಶಟ್ಟಿಯವರು ವಿವರಿಸುವಾಗ ಅವರ ಪ್ರೀತಿ ಎದ್ದು ಕಾಣುತ್ತದೆ. ಬಾಂಧವ್ಯಗಳನ್ನೇ ಮರೆತಿರುವ ಇಂದಿನ ದಿನಗಳಲ್ಲಿ ಇವರ ಈ ಪ್ರೀತಿ ಮಾದರಿಯಾಗಿದೆ.  ಇದನ್ನೂ ಓದಿ: ಸಂಜನಾ ಕ್ಯಾಬ್ ಕಿರಿಕ್- ಸ್ಪಷ್ಟನೆ ಕೊಟ್ಟ ನಟಿ

  • ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಗಾಂಧಿನಗರ: ಆಗ ತಾನೇ ಜನಿಸಿದ ಮೇಕೆ ಮರಿಯೊಂದು ಮಾನವನಂತೆ ಮುಖ ಹೊಂದಿರುವ ಫೋಟೋ ಹಾಗೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು. ಮಾನವನಂತೆ ಮುಖವಿರುವ ಮೇಕೆ ಮರಿಯೊಂದು ಜನಿಸಿರುವ ವಿಚಿತ್ರ ಘಟನೆ ಗುಜರಾತ್‍ನ ಸಾಂಗ್ದ್ ತಾಲೂಕಿನ ಟ್ಯಾಪಿ ನದಿಸಮೀಪದ ಸೆಲ್ಟಿಪಾಡಾ ಗ್ರಾಮದಲ್ಲಿ ನಡೆದಿದೆ. ಮೇಕೆಯಂತೆಯೇ, ಮೇಕೆ ಮರಿ ನಾಲ್ಕು ಕಾಲು ಹಾಗೂ ಕಿವಿಗಳನ್ನು ಹೊಂದಿದೆ. ಆದರೆ ಉಳಿದ ಅರ್ಧ ಭಾಗ ನೋಡಲು ಮನುಷ್ಯನಂತೆ ಕಾಣಿಸುತ್ತದೆ.

    ಈ ಮೇಕೆಯು ರೈತ ಅಜಯ್ಭಾಯ್ ಎಂಬವರ ಮನೆಯಲ್ಲಿ ಜನಿಸಿದ್ದು, ಹಣೆ, ಕಣ್ಣು, ಬಾಯಿ ಮತ್ತು ಗಲ್ಲ ಸೇರಿದಂತೆ ಕೆಲವು ಭಾಗಗಳು ಮನುಷ್ಯರಂತೆ ಇದೆ. ಅಲ್ಲದೆ ಮೇಕೆ ಬಾಲವನ್ನು ಸಹ ಹೊಂದಿಲ್ಲ. ಆದರೆ ಮೇಕೆ ಜನಿಸಿದ ಬಳಿಕ ಕೇವಲ ಹತ್ತು ನಿಮಿಷಗಳ ಕಾಲ ಮಾತ್ರ ಬದುಕಿತ್ತು.

    ವೈರಲ್ ಆಗಿರುವ ವೀಡಿಯೋದಲ್ಲಿ, ಮೇಕೆ ಮರಿಯನ್ನು ಗ್ರಾಮಸ್ಥರು ಸಮಾಧಿ ಮಾಡುವ ಮುನ್ನ ಪೂಜೆ ಮಾಡುವುದನ್ನು ಕಾಣಬಹುದಾಗಿದೆ. ಇದು ಪೂರ್ವಜರ ಜನ್ಮ ಎಂದು ಅವರು ಭಾವಿಸಿದ್ದಾರೆ.

  • ಆನೆಯನ್ನೇ ಅಟ್ಟಿಸಿಕೊಂಡು ಓಡಿದ ಜನರ ಹಿಂಡು- ವೀಡಿಯೋ ವೈರಲ್, ಅರಣ್ಯಾಧಿಕಾರಿ ಗರಂ

    ಆನೆಯನ್ನೇ ಅಟ್ಟಿಸಿಕೊಂಡು ಓಡಿದ ಜನರ ಹಿಂಡು- ವೀಡಿಯೋ ವೈರಲ್, ಅರಣ್ಯಾಧಿಕಾರಿ ಗರಂ

    ಕೆಲದಿನಗಳ ಹಿಂದೆ ಆನೆಯೊಂದನ್ನು ಊರಿನ ಜನರೆಲ್ಲ ಸೇರಿ ಅಟ್ಟಿಸಿಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಅರಣ್ಯ ಅಧಿಕಾರಿಯೊಬ್ಬರು ಅಟ್ಟಿಸಿಕೊಂಡು ಹೋಗಿರುವ ಜನರ ವಿರುದ್ಧ ಕಿಡಿಕಾರಿದ್ದಾರೆ.

    ಆನೆಯನ್ನು ಜನರ ಗುಂಪು ಓಡಿಸಿಕೊಂಡು ಹೋಗುತ್ತಿರುವ ವೀಡಿಯೋವನ್ನು ನೋಡಿ ಮರು ಟ್ವೀಟ್ ಮಾಡಿರುವ ಅರಣ್ಯಾಧಿಕಾರಿ ಸುಧಾ ರಾಮನ್ ಅವರು, ಯಾವುದೇ ಪದಗಳಿಲ್ಲ, ಈ ವೀಡಿಯೋದಲ್ಲಿ ಯಾರು ಪ್ರಾಣಿಯಂತೆ ಕಾಣುತ್ತಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ಈ ವೀಡಿಯೋವನ್ನು ಗಮನಿಸಿದಾಗ ಆನೆಯೊಂದು ರಾತ್ರಿ ಹೊತ್ತಿನಲ್ಲಿ ರಸ್ತೆಯಲ್ಲಿ ಓಡುತ್ತಿದ್ದು, ಆನೆಯ ಹಿಂದೆ ಬಹುದೊಡ್ಡ ಸಂಖ್ಯೆಯ ಜನರ ಗುಂಪು ಆನೆಯನ್ನೆ ಅಟ್ಟಾಡಿಸಿಕೊಂಡು ಬರುತ್ತಿದ್ದು, ಈ ದೃಶ್ಯವನ್ನು ಸೆರೆ ಹಿಡಿದಿರುವ ಸ್ಥಳೀಯ ಜೋರಾಗಿ ನಗುತ್ತಿರುವುದು ಕೇಳಿ ಬರುತ್ತಿದೆ.

    ಅರಣ್ಯಧಿಕಾರಿ ಸುಧಾ ರಾಮನ್ ಈ ವೀಡಿಯೋವನ್ನು ನೋಡಿ ಟ್ವಿಟ್ಟರ್‍ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಮನುಷ್ಯರು ಪ್ರಾಣಿಗಳಂತೆ ವರ್ತಿಸಬಾರದು. ಈ ದೃಶ್ಯದಲ್ಲಿ ಯಾರು ಪ್ರಾಣಿಗಳ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬುದು ತಿಳಿದು ಬರುತ್ತಿದೆ. ಈ ಕುರಿತು ದೇಶದಾದ್ಯಂತ ಈಗಾಗಲೇ ಅರಣ್ಯ ಇಲಾಖೆ ಜಾಗೃತಿ ಮೂಡಿಸುತ್ತಿದ್ದು, ಮನುಷ್ಯನಂತೆ ಪ್ರಾಣಿಗಳಿಗೂ ಅದರದೇ ಆದ ಒತ್ತಡದ ಜೀವನ ಇರುತ್ತದೆ. ನಾವು ಬುದ್ಧಿವಂತರಾದ ಮನುಷ್ಯರು ಇದನ್ನು ಅರ್ಥಮಾಡಿಕೊಂಡು ಇತರರಿಗೂ ಅರ್ಥ ಮಾಡಿಸಬೇಕೆಂದು ಬರೆದುಕೊಂಡಿದ್ದಾರೆ.

  • ಅಂಧನಿಗೆ ದಾರಿ ಮಾಡಿಕೊಟ್ಟ ನಾಯಿ -ವಿಡಿಯೋ ವೈರಲ್

    ಅಂಧನಿಗೆ ದಾರಿ ಮಾಡಿಕೊಟ್ಟ ನಾಯಿ -ವಿಡಿಯೋ ವೈರಲ್

    ಮುಂಬೈ: ಹಲವು ಬಾರಿ ವಿಕಲಚೇತನರಿಗೆ ಯಾರೂ ಸಹಾಯ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ಅಂಧ ವ್ಯಕ್ತಿಗೆ ನಾಯಿ ಸಹಾಯ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ನಾಯಿ ಅಂಧನಿಗೆ ಸಹಾಯ ಮಾಡುವ ವಿಡಿಯೋವನ್ನು ಪುಣೆಯ ಪೊಲೀಸ್ ಆಯಕ್ತರು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಂಧ ವ್ಯಕ್ತಿಯೊಬ್ಬರು ನಡೆದು ಹೋಗುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ದೊಡ್ಡ ಕೋಲು ಬಿದ್ದಿರುತ್ತದೆ. ಇದನ್ನು ನಾಯಿಯ ಮುಂದೆ ತೆರಳಿದ ಮಾಲೀಕ ನೋಡುವುದಿಲ್ಲ. ಆದರೆ ನಾಯಿ ಅಂಧ ಬರುತ್ತಿರುವುದನ್ನು ನೋಡುತ್ತದೆ.

    ಮನುಷ್ಯರಿಗಿಂತ ಪ್ರಾಣಿಗಳಿಗೆ ಸಹಾಯ ಮನೋಭಾವ ಹೆಚ್ಚು ಎಂಬುದನ್ನು ನಾಯಿ ತೋರಿಸಿದೆ. ಅಲ್ಲದೆ ನಾಯಿಗಳು ತುಂಬಾ ಸೂಕ್ಷ್ಮ, ಪ್ರಮಾಣಿಕ ಹಾಗೂ ಪರೋಪಕಾರಿ ಎಂಬುದನ್ನು ಮತ್ತೊಮೆ ತೋರಿಸಿದೆ. ಅಂಧ ವ್ಯಕ್ತಿ ಆ ಕೋಲಿನ ಬಳಿ ಬರುವುದಕ್ಕೂ ಮೊದಲು ತಕ್ಷಣವೇ ನಾಯಿ ಮರಳಿ ಬಂದು ದಾರಿಗೆ ಅಡ್ಡಲಾಗಿ ಬಿದ್ದಿದ್ದ ಕೋಲನ್ನು ಬಾಯಿಯಿಂದ ತೆಗೆಯುತ್ತದೆ. ಈ ಮೂಲಕ ಅಂಧನಿಗೆ ದಾರಿ ಮಾಡಿಕೊಡುತ್ತದೆ.

    ನಾಯಿ ತನ್ನ ಮಾಲೀಕನೊಂದಿಗೆ ಹೋಗುತ್ತಿರುತ್ತದೆ. ಎದುರುಗಡೆಯಿಂದ ನಾಯಿ ಅಂಧ ವ್ಯಕ್ತಿ ನಡೆದು ಬರುತ್ತಿರುತ್ತಾರೆ. ನಡು ದಾರಿಯಲ್ಲಿ ದೊಡ್ಡ ಕೋಲು ಬಿದ್ದಿದೆ ಎಂಬುದು ಆತನಿಗೆ ತಿಳಿದಿರುವುದಿಲ್ಲ. ತನ್ನಷ್ಟಕ್ಕೆ ತಾನು ಕೋಲು ಹಿಡಿದು ಬರುತ್ತಿರುತ್ತಾನೆ. ಮುಂದೆ ಅಂಧ ವ್ಯಕ್ತಿ ಬರುತ್ತಿದ್ದಾನೆ ಕೋಲು ತಗೆಯಬೇಕು ಎಂಬ ಅರಿವು ನಾಯಿಯ ಮಾಲೀಕನಿಗೆ ಇರುವುದಿಲ್ಲ. ಆದರೆ ನಾಯಿ ಇದ್ದಕ್ಕಿದ್ದಂತೆ ಓಡಿ ಬಂದು ದಾರಿ ಮಧ್ಯೆ ಬಿದ್ದಿದ್ದ ಕೋಲನ್ನು ಬಾಯಿಯಿಂದ ಎತ್ತಿ ರಸ್ತೆ ಬದಿಗೆ ಹಾಕುತ್ತದೆ. ಆಗ ಅಂಧ ಸರಾಗವಾಗಿ ಮುಂದೆ ನಡೆಯುತ್ತಾನೆ.

    ನಾಯಿಯ ಈ ಸಹಾಯ ಮನೋಭಾವವನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದು, ಕಮೆಂಟ್ ಮಾಡಿ ನಾಯಿಯ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬರು ಕಮೆಂಟ್ ಮಾಡಿ, ಮತ್ತೊಬ್ಬರ ತೊಂದರೆಯನ್ನು ಜಗತ್ತು ಹೇಗೆ ನಿವಾರಿಸುತ್ತದೆ ಎಂಬುದನ್ನು ಇದರ ಮೂಲಕ ತಿಳಿಯಬಹುದಾಗಿದೆ ಎಂದಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಮಾನುಷ್ಯನಿಗೆ ಯಾರು ಒಳ್ಳೆಯ ಸ್ನೇಹಿತ ಎಂಬುದನ್ನು ನಾಯಿಯನ್ನು ನೋಡಿ ಮಾನವರು ಕಲಿಯಬೇಕು ಎಂದು ತಿಳಿಸಿದ್ದಾರೆ.

  • ಮನುಷ್ಯ ಪ್ರಕೃತಿಯ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾನೆ: ವಿ. ಸೋಮಣ್ಣ

    ಮನುಷ್ಯ ಪ್ರಕೃತಿಯ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾನೆ: ವಿ. ಸೋಮಣ್ಣ

    ಮಡಿಕೇರಿ: ಪ್ರತೀ ಜೀವಿಗೂ ಬದುಕುವ ಸ್ವಾತಂತ್ರ್ಯವಿದೆ. ಆದರೆ ಇಂದು ಮಾನವೀಯತೆ ದುರ್ಬಲವಾಗುತ್ತಿದ್ದು, ಮನುಷ್ಯ ಪ್ರಕೃತಿಯ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾನೆ ಎಂದು ವಸತಿ ಸಚಿವ ವಿ. ಸೋಮಣ್ಣ ವಿಷಾಧ ವ್ಯಕ್ತಪಡಿಸಿದರು.

    ಮಡಿಕೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಮಾತನಾಡಿದ ಅವರು, ಕೇರಳದ ಮಲ್ಲಾಪುರಂನಲ್ಲಿ ಕಿಡಿಗೇಡಿಗಳು ಅನಾನಸ್ ಹಣ್ಣಿಗೆ ಸ್ಫೋಟಕ ಇಟ್ಟು ಗರ್ಭಿಣಿ ಆನೆಗೆ ತಿನ್ನುವಂತೆ ಮಾಡಿ ಬಳಿಸ ಸ್ಪೋಟಿಸಿದ್ದಾರೆ. ಇದರಿಂದ ಆನೆ ನೋವಿನಿಂದ ನೀರಿನಲ್ಲಿ ಸಾವನ್ನಪ್ಪಿತು. ಇದು ಅತ್ಯಂತ ನೋವಿನ ಮತ್ತು ದುರದೃಷ್ಟಕರ ಸಂಗತಿ. ಇಂತಹ ಹೇಯ ಕೃತ್ಯಗಳು ಎಂದೂ ನಡೆಯಬಾರದು ಮಾನವ ಇದನ್ನು ಎಚ್ಚೆತ್ತುಕೊಳ್ಳಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.

    ಕೊಡಗು ವಿಶೇಷವಾದ ಪ್ರಾಕೃತಿಕ ಸಂಪತ್ತು ಹೊಂದಿ ದೇಶಕ್ಕೆ ಅಷ್ಟೇ ಅಲ್ಲ ವಿಶ್ವದ ಪರಿಸರಕ್ಕೆ ಕೊಡುಗೆ ನೀಡಿದೆ. ಪರಿಸರದಲ್ಲಿ ಮನುಷ್ಯ ಅಷ್ಟೇ ಅಲ್ಲ, ಮರ, ಗಿಡ ಪ್ರಾಣಿ ಪಕ್ಷಿಗಳು ಸ್ವತಂತ್ರವಾಗಿ ಬದುಕುವುದಕ್ಕೆ ಅವಕಾಶವಿದೆ ಎಂದರು.

    ಇದೇ ವೇಳೆ ಮಡಿಕೇರಿಯ ಮರುನಿರ್ಮಾಣಗೊಂಡಿರುವ ಗ್ರಂಥಾಲಯದ ಮುಂಭಾಗದಲ್ಲಿ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಗಿಡಗಳನ್ನು ನೆಟ್ಟು ನೀರೆರದರು.

  • ಖಂಡಿತ ಫೋಟೋಶಾಪ್ ಅಲ್ಲ: ಮಾನವನ ಮುಖವನ್ನೇ ಹೋಲುವ ಈ ನಾಯಿ ನೋಡಿ ದಂಗಾದ ಜನ!

    ಖಂಡಿತ ಫೋಟೋಶಾಪ್ ಅಲ್ಲ: ಮಾನವನ ಮುಖವನ್ನೇ ಹೋಲುವ ಈ ನಾಯಿ ನೋಡಿ ದಂಗಾದ ಜನ!

    ವಾಷಿಂಗ್ಟನ್: ಇದು ಫೋಟೋಶಾಪ್ ಮಾಡಿರೋ ಚಿತ್ರವಲ್ಲ, ಅಥವಾ ಫೇಸ್‍ಸ್ವಾಪ್ ಮಾಡಿರೋ ಫೋಟೋ ಕೂಡ ಅಲ್ಲ. ಮಾನವನ ಮುಖವನ್ನೇ ಹೋಲುವ ಈ ನಾಯಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ.

    ಶಿಹ್ ತ್ಸು ಜಾತಿಗೆ ಸೇರಿದ ಈ ನಾಯಿಯ ಹೆಸರು ಯೋಗಿ. ಒಂದು ತಿಂಗಳ ಹಿಂದಷ್ಟೇ ಈ ನಾಯಿಗೆ ವರ್ಷ ತುಂಬಿದ್ದು, ಫೋಟೋದಲ್ಲಿ ಇದರ ಮುಖ ಬಹುತೇಕ ಮನುಷ್ಯನಂತೆಯೇ ಕಾಣುತ್ತದೆ. 8 ವರ್ಷದ ಮತ್ತೊಂದು ನಾಯಿ ಡಾರಿಯಾ ಜೊತೆಯಿರುವ ಈ ನಾಯಿಯ ಫೋಟೋವನ್ನ ರೆಡ್ಡಿಟ್‍ನಲ್ಲಿ ಹಂಚಿಕೊಂಡಾಗಿನಿಂದ ಜನ ಇದನ್ನ ನೋಡಿ ಹುಬ್ಬೇರಿಸಿದ್ದಾರೆ.

    ನಾಯಿಯ ಮಾಲೀಕರ ಸ್ನೇಹಿತರೊಬ್ಬರು ಇದನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಈ ನಾಯಿಯ ಮುಖ ಮನುಷ್ಯನಂತೆಯೇ ಎಂದು ಬರೆದುಕೊಂಡಿದ್ದರು. ನಂತರ ಫೋಟೋ ನೋಡಿದವರೆಲ್ಲರೂ ಇದನ್ನ ಒಪ್ಪಿಕೊಂಡಿದ್ದಾರೆ.

    ಈ ನಾಯಿಗೆ ಥೇಟ್ ಮನುಷ್ಯನಂತೆಯೇ ಕಣ್ಣಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಮಿಶೆಲ್ ಎಂಬವರೊಬ್ಬರು ಕಮೆಂಟ್ ಮಾಡಿ, ಕೇವಲ ಕಣ್ಣಷ್ಟೇ ಅಲ್ಲ, ಅದರ ನಗು ನೋಡಿ. ಕಾರ್ಪೊರೇಟ್‍ನಲ್ಲಿ ಕೆಲಸ ಮಾಡೋ ಮಧ್ಯವಯಸ್ಕ ವ್ಯಕ್ತಿಯೊಬ್ಬರು ನಗುವಂತಿದೆ ಎಂದಿದ್ದಾರೆ. ಅಲ್ಲದೆ ಜನ ಈ ನಾಯಿಯ ಮುಖವನ್ನ ಸಂಗೀತಗಾರ ಎಡ್ ಶೀರನ್ ಹಾಗೂ ಮುಂತಾದ ಸೆಲೆಬ್ರಿಟಿಗಳೊಂದಿಗೆ ಹೋಲಿಸಿದ್ದಾರೆ.

    ಈಗಿನ ಡಿಜಿಟಲ್ ಯುಗದಲ್ಲಿ ಎಂತಹ ಫೋಟೋವನ್ನ ಕೂಡ ಫೋಟೋಶಾಪ್ ಮಾಡಬಹುದು. ಆದ ಕಾರಣ ಪತ್ರಿಕೆಯೊಂದು ನಾಯಿಯ ಮಾಲೀಕರಾದ ಮ್ಯಾಸಚೂಸೆಟ್ಸ್ ನಿವಾಸಿಯಾದ ಚಾಂಟಲ್ ಡೆಸ್ಜಾರ್ಡಿನ್ಸ್ ಅವರನ್ನ ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ಫೋಟೋವನ್ನ ಖಂಡಿತವಾಗಿಯೂ ಎಡಿಟ್ ಮಾಡಿಲ್ಲ. ಅವು ನನ್ನ ನಾಯಿಯ ನಿಜವಾದ ಫೋಟೋಗಳೇ. ಡಿಸೆಂಬರ್‍ನಲ್ಲಿ ಈ ಫೋಟೋ ಹಾಕಿದ್ದೆ. ನಾನು ಫೋಟೋಗ್ರಾಫರ್ ಅಲ್ಲ, ಇದನ್ನ ಫೋಟೋಶಾಪ್ ಮಾಡಿಲ್ಲ. ನಾಯಿಯ ಕಣ್ಣು ಹಾಗೂ ಅದು ಕ್ಯಾಮೆರಾಗೆ ಪೋಸ್ ಕೊಟ್ಟಿರೋ ರೀತಿ ಹಾಗಿದೆ ಎಂದಿದ್ದಾರೆ.

    ಕಳೆದ ಏಪ್ರಿಲ್‍ನಲ್ಲಿ ನಾಯಿಯನ್ನ ತಂದಿದ್ದು, ಇದು ಬೇರೆ ಎಲ್ಲಾ ನಾಯಿಗಳಂತೆಯೇ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ನಾಯಿಗೆ ಮನುಷ್ಯನಂತೆ ಮುಖವಿದೆ ಎಂಬುದನ್ನ ಇದಕ್ಕೂ ಮುಂಚೆ ನಾನು ಗಮನಿಸಿಯೇ ಇರಲಿಲ್ಲ. ನನಗೆ ಅದು ವಿಭಿನ್ನವಾಗಿ ಕಾಣಿಸಿರಲಿಲ್ಲ ಎಂದಿದ್ದಾರೆ.

    ಈಗಲೂ ಚಾಂಟಲ್ ನಾಯಿಯನ್ನ ಎಂದಿನಂತೆಯೇ ನೋಡುತ್ತಿದ್ದಾರೆ. ಆದ್ರೆ ಇತರರು ಮಾತ್ರ ನಾಯಿಗೆ ಮನುಷ್ಯನಂತೆ ಮುಖವಿರುವುದನ್ನ ಅಲ್ಲಗಳೆಯಲು ಆಗುತ್ತಿಲ್ಲ.

    https://twitter.com/lettiemarie17/status/973357300281987072?ref_src=twsrc%5Etfw&ref_url=https%3A%2F%2Fwww.mirror.co.uk%2Fnews%2Fweird-news%2Fdog-human-face-causing-havoc-12180670&tfw_creator=joshbythesea&tfw_site=MirrorWeirdNews