Tag: ಮದ್ಯ ಪ್ರದೇಶ

  • ಮುಹೂರ್ತದ ವೇಳೆ ಕರೆಂಟ್ ಕಟ್ – ಅಕ್ಕನ ಗಂಡ ತಂಗಿಗೆ, ತಂಗಿ ಗಂಡ ಅಕ್ಕನಿಗೆ

    ಮುಹೂರ್ತದ ವೇಳೆ ಕರೆಂಟ್ ಕಟ್ – ಅಕ್ಕನ ಗಂಡ ತಂಗಿಗೆ, ತಂಗಿ ಗಂಡ ಅಕ್ಕನಿಗೆ

    ಭೋಪಾಲ್: ಅಕ್ಕನಿಗೆ ನಿಶ್ಚಯವಾಗಿದ್ದ ವರನೊಂದಿಗೆ ತಂಗಿ ಮದುವೆಯಾಗಿದ್ದು, ತಂಗಿಗೆ ನಿಶ್ಚಯವಾದ ವರನೊಂದಿಗೆ ಅಕ್ಕ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

    ಹೌದು, ಮದುವೆ ವೇಳೆ ವಿದ್ಯುತ್ ವ್ಯತ್ಯಯವಾಗಿದ್ದು, ಅಕ್ಕ ತಂಗಿಗೆ ನೋಡಿದ್ದ ವರನನ್ನು, ತಂಗಿ ಅಕ್ಕನಿಗೆ ನೋಡಿದ್ದ ವರನನ್ನು ವಿವಾಹವಾಗಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರು ರಾತ್ರಿ ಮೊಬೈಲ್‍ನಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ: ಭಾರತೀಯ ರೈಲ್ವೆ

    MARRIAGE

    ರಮೇಶ್‍ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾಗೆ ಬೇರೆ, ಬೇರೆ ಊರಿನ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಭಾನುವಾರ ಮುಹೂರ್ತದ ವೇಳೆ ಕರೆಂಟ್ ಕಟ್ ಹೋಗಿದ್ದು, ಅಕ್ಕ, ತಂಗಿ ಇಬ್ಬರು ಒಂದೇ ಬಣ್ಣದ ಉಡುಗೆ ಮತ್ತು ಹೂ ಮುಡಿದುಕೊಂಡಿದ್ದರಿಂದ ಅದಲು, ಬದಲು ಆಗಿ ವರರ ಜೊತೆಗೆ ಮದುವೆಯಾಗಿದೆ.  ಇದನ್ನೂ ಓದಿ: ಕುಣಿಗಲ್‍ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು

    MARRIAGE

    ಮದುವೆ ವೇಳೆ ಪುರೋಹಿತರು ಕೂಡ ಬದಲಾಗಿದ್ದ ವಧುಗಳ ಕೈ ಹಿಡಿದು ವರರಿಗೆ ಅಗ್ನಿ ಕುಂಡಲವನ್ನು ಸುತ್ತಿಸಿದ್ದಾರೆ. ಆದರೆ ಈ ವೇಳೆ ಸಹ ವಧು ಬದಲಾಗಿರುವ ವಿಚಾರ ತಿಳಿದಿಲ್ಲ. ಆದರೆ ವಿವಾಹ ನಂತರ ವರರಿಬ್ಬರು ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ದಾಗ ಅದಲು, ಬದಲು ಆಗಿರುವ ವಿಚಾರ ತಿಳಿದುಬಂದಿದೆ. ಇದೀಗ ವಧು-ವರರು ಮರುದಿನ ಮತ್ತೊಮ್ಮೆ ವಿವಾಹ ಮಾಡುವಂತೆ ಕೇಳಿಕೊಂಡಿದ್ದಾರೆ.