Tag: ಮದುವೆ ಮಂಟಪ

  • ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

    ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

    ನವದೆಹಲಿ: ಮದುವೆ ಮಂಟಪಕ್ಕೆ ಅಣ್ಣಂದಿರ ಕೈ ಮೇಲೆ ಪಾದವಿಟ್ಟು ವಧು ನಡೆದುಕೊಂಡು ಬರುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಹೃದಯಸ್ಪರ್ಶಿ ವೀಡಿಯೋ ನೋಡಿ ನೆಟ್ಟಿಗರು ಸಂತೋಷಗೊಂಡಿದ್ದಾರೆ.

    ಮದುವೆ ಎಂದರೆ ಎಲ್ಲ ವಧು-ವರರಿಗೂ ಸಂಭ್ರಮದ ದಿನ. ಈ ದಿನ ತುಂಬಾ ವಿಶೇಷವಾಗಿರಬೇಕು ಎಂದು ಅವರ ಮನೆಯರು ಕಷ್ಟ ಪಡುತ್ತಿರುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಮದುವೆಯ ದಿನದಂದು ವಧುವನ್ನು ತನ್ನ ಸಹೋದರರು ಅತ್ಯಂತ ಪ್ರೀತಿಯಿಂದ ಭಿನ್ನವಾಗಿ ಸ್ವಾಗತಿಸುತ್ತಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ಈ ವೀಡಿಯೊವನ್ನು ಇನ್‍ಸ್ಟಾಗ್ರಾಮ್‍ನ ‘ವಿಟ್ಟಿ_ವೆಡ್ಡಿಂಗ್’ ನಲ್ಲಿ, ಚಿಕ್ಕ ಹುಡುಗಿ ನಮ್ಮ ತಂಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ವಧು ತನ್ನ ಅಣ್ಣಂದಿರ ಕೈ ಮೇಲೆ ಪಾದವನ್ನು ಇಟ್ಟುಕೊಂಡು ಮದುವೆ ಮಂಟಪಕ್ಕೆ ನಡೆದುಕೊಂಡು ಬರುವುದು ಸಖತ್ ವೈರಲ್ ಆಗಿದೆ. ವಧು ಕೆಂಪು ಲೆಹೆಂಗಾ ಧರಿಸಿದ್ದು, ವಧು ಅಣ್ಣಂದಿರ ಕೈ ಮೇಲೆ ನಡೆದುಕೊಂಡು ಬರುವಾಗ ‘ಮೇರಾ ಭಾಯ್ ತು’ ಸಾಂಗ್ ಪ್ಲೇ ಆಗುತ್ತದೆ.

    ವಧು ಹೂವಿನಿಂದ ಮಾಡಿದ ದಾರಿಯಲ್ಲಿ ಬರುತ್ತಿದ್ದು, ವಧುವಿನ ಸಹೋದರರು ದಾರಿಯುದ್ದಕ್ಕೂ ಮೊಣಕಾಲುಗಳ ಮೇಲೆ ಕುಳಿತಿರುವುದನ್ನು ಕಾಣಬಹುದು. ಜನರು ವಧುವಿನ ಮೇಲೆ ಹೂವು ಹಾಕುತ್ತಿದ್ದು, ಅವರ ಸಹೋದರರು ತಮ್ಮ ಚಿಕ್ಕ ಸಹೋದರಿ ನಡೆಯುವ ದಾರಿಯಲ್ಲಿ ತಮ್ಮ ಅಂಗೈಯನ್ನು ಇಟ್ಟಿರುತ್ತಾರೆ. ಆಗ ಆಕೆ ಅವರ ಕೈ ಮೇಲೆ ನಡೆದುಕೊಂಡು ಬಂದಿದ್ದು, ನೆಟ್ಟಿಗರು ಈ ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್

    ನೆಟ್ಟಿಗರು ಇಂತಹ ಒಡಹುಟ್ಟಿದವರನ್ನು ಪಡೆಯಲು ನೀನು ತುಂಬಾ ಅದೃಷ್ಟಶಾಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ

    ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ

    ಲಕ್ನೋ: ಮದುವೆ ಮಂಟಪದೊಳಗೆ ನುಗ್ಗಿದ ಪಾಗಲ್ ಪ್ರೇಮಿ ತನ್ನ ಪ್ರೇಯಸಿಗೆ ಸಿಂಧೂರವನ್ನು ಇಟ್ಟ ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

    ಹೀರೋಯಿನ್ ಅನ್ನು ಹೀರೋ, ಮದುವೆ ಸಮಯದಲ್ಲಿ ಹೇಗಾದರೂ ಮಾಡಿ ವಿವಾಹ ಆಗುವ ದೃಶ್ಯಗಳನ್ನು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರೇಯಸಿಯ ಮದುವೆ ನಿಲ್ಲಿಸಲು ಬಂದಿದ್ದಾನೆ. ಈ ವೇಳೆ ವಧುವಿನ ಕಡೆಯವರು ಪ್ರೇಮಿಯನ್ನು ತಡೆಯಲು ಮುಂದಾದಾಗ ವಧುವಿಗೆ ಬಲವಂತವಾಗಿ ಸಿಂಧೂರವನ್ನು ಇಟ್ಟಿದ್ದಾನೆ. ಈಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

    ಡಿಸೆಂಬರ್ 1 ರಂದು ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಈ ಘಟನೆ ನಡೆದಿದ್ದು, ವಧು-ವರರು ಮಾಲೆ ಹಾಕಿಕೊಳ್ಳುತ್ತಿದ್ದ ವೇಳೆ ವಧುವಿನ ಪ್ರೇಮಿ ಸ್ಥಳಕ್ಕೆ ಬಂದಿದ್ದಾನೆ. ಅಲ್ಲದೇ ಅವನು ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಮುಖವನ್ನು ಮರೆಮಾಚುತ್ತಾ, ವಧುವಿನ ಹಣೆಯ ಮೇಲೆ ಬಲವಂತವಾಗಿ ಸಿಂಧೂರವನ್ನು ಹಾಕಲು ಪ್ರಯತ್ನಿಸಿದ್ದಾನೆ. ಇದನ್ನು ತಡೆಯಲು ಕುಟುಂಬದವರು ಮುಂದಾಗಿದ್ದು, ಜೇಬಿನಲ್ಲಿ ಇದ್ದ ಸಿಂಧೂರವನ್ನು ತೆಗೆದು ವಧುವಿನ ಹಣೆಗೆ ಇಟ್ಟಿದ್ದಾನೆ.

    ವರದಿಗಳ ಪ್ರಕಾರ, ಆ ವ್ಯಕ್ತಿ ವಧುವಿನ ಮಾಜಿ ಪ್ರೇಮಿಯಾಗಿದ್ದು, ಹಣ ಸಂಪಾದಿಸಲು ಬೇರೆ ನಗರಕ್ಕೆ ಹೋಗಿದ್ದನು. ಅವನು ಇಲ್ಲದೇ ಇರುವುದನ್ನು ತಿಳಿದ ಯುವತಿಯ ಕುಟುಂಬ ಅವಳನ್ನು ಬೇರೆಯವರಿಗೆ ಮದುವೆ ಮಾಡಲು ನಿಶ್ಚಯಿಸಿದೆ. ಆದರೆ ಯುವತಿ ತನ್ನ ಹೆತ್ತವರಿಗೆ ಅರ್ಥಮಾಡಿಸಲು ಪ್ರಯತ್ನಿಸಿದರೂ, ಅವರು ಆಕೆಯ ಮಾತನ್ನು ಕೇಳಲಿಲ್ಲ. ಈ ಹಿನ್ನೆಲೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾಮಿಸಿದ ಪ್ರೇಮಿ ಮದುವೆಯನ್ನು ನಿಲ್ಲಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ: ಪ್ರಿಯಾಂಕ್ ಖರ್ಗೆ

    ವಿವಾಹದ ವೇಳೆ ಪ್ರೇಮಿ ವೇದಿಕೆಯ ಮೇಲೆ ಗಲಾಟೆ ಮಾಡಿದ್ದರಿಂದ ಕುಟುಂಬ ಸದಸ್ಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅದು ಅಲ್ಲದೇ ಯುವತಿ ಮದುವೆಯಾದ ನಂತರ ಆತನನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

  • ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!

    ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!

    – ಸಿಟ್ಟುಮಾಡ್ಕೊಂಡಿರೋ ವಧು ವೀಡಿಯೋ ವೈರಲ್

    ಲ್ಲರ ಜೀವನದಲ್ಲೂ ಮದುವೆ ಎಂಬುದು ಬಹಳ ಪ್ರಮುಖವಾದ ಘಟ್ಟ. ಹೀಗಾಗಿ ವಿವಾಹದ ದಿನದ ಪ್ರತಿ ಸೆಕೆಂಡನ್ನು ಸ್ಮರಣೀಯ ಮತ್ತು ತುಂಬಾ ವಿಶೇಷವಾಗಿಸಲು, ವಧು-ವರರು ಪ್ರಯತ್ನವನ್ನು ಪಡುತ್ತಾರೆ. ಅಂತಹ ಒಂದು ಘಟನೆಯಲ್ಲಿ ವಧು ಮಂಟಪ ಪ್ರವೇಶಕ್ಕೆ ಆಯ್ಕೆ ಮಾಡಿದ ಹಾಡನ್ನು ಹಾಕುವವರೆಗೂ ಹಾಲ್ ಪ್ರವೇಶಿಸಲು ನಿರಾಕರಿಸಿರುವ ಪ್ರಸಂಗವೊಂದು ನಡೆದಿದೆ.

    ಈ ಘಟನೆಯ ವಿಡಿಯೋ ತುಣುಕು ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋಗ್ರಫಿ ಪೇಜ್‍ನಿಂದ “ದಿ ವೆಡ್ಡಿಂಗ್‍ಬ್ರಿಗೇಡ್” ಹೆಸರಿನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಸೇರಲು ಮಂಗಳೂರಿಗರ ಹಿಂದೇಟು – ಹೊಸ ಆಫರ್ ನೀಡಿದ್ರು ಎನ್. ಶಶಿಕುಮಾರ್

    ವೀಡಿಯೋದಲ್ಲೇನಿದೆ..?: ವಧು ತನ್ನ ಸ್ನೇಹಿತರು, ಒಡಹುಟ್ಟಿದವರು ಮತ್ತು ಸೋದರಸಂಬಂಧಿಗಳೊಂದಿಗೆ ಮದುವೆ ಹಾಲ್ ಗೆ ಎಂಟ್ರಿ ಕೊಡಲು ಮುಂದಾಗಿದ್ದಾಳೆ. ಆದರೆ ಇದ್ದಕ್ಕಿಂದತೆ ಮುಂದೆ ಚಲಿಸಲು ನಿರಾಕರಿಸುತ್ತಾಳೆ. ಯಾಕಂದರೆ ಕೆ ತಾನು ಸೆಲೆಕ್ಟ್ ಮಾಡಿಟ್ಟ ಹಾಡನ್ನು ಅಲ್ಲಿ ಪ್ಲೇ ಮಾಡಲಿಲ್ಲ. ಇದರಿಂದ ಸಿಟ್ಟಿಗೆದ್ದ ವಧು, ನಾನು ಆಯ್ಕೆ ಮಾಡಿರುವ ಹಾಡನ್ನು ಪ್ಲೇ ಮಾಡುವವರೆಗೂ ನಾನು ಹಾಲ್ ಗೆ ತೆರಳಲ್ಲಿ ಎಂದು ಹಠ ಹಿಡಿಯುತ್ತಾಳೆ. ಅಲ್ಲದೆ ತಾನು ಮೊದಲೇ ಹೇಳಿದ ಹಾಡನ್ನು ಯಾಕೆ ಹಾಕಲಿಲ್ಲ ಎಂದು ಹೇಳುತ್ತಾ ತನ್ನ ಜೊತೆಗಿದ್ದವರ ಮುಂದೆ ಭಾವುಕಳಾಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

    ಈ ವಿಡಿಯೋ ಇದುವರೆಗೆ 17 ಸಾವಿರಕ್ಕೂ ಅಧಿಕ ಲೈಕ್‍ಗಳನ್ನು ಪಡೆದುಕೊಂಡಿದೆ. ಸುಮಾರು 316 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಸಾಕಷ್ಟು ಕಾಮೆಂಟ್ ಗಳು ಕೂಡ ಬಂದಿದ್ದು, ನೆಟ್ಟಿಗರು ವಧುವಿನ ಬೆಂಬಲಕ್ಕೆ ಸಂಪೂರ್ಣವಾಗಿ ನಿಂತಿದ್ದಾರೆ. ವಧು ಆಯ್ಕೆ ಮಾಡಿದ ಹಾಡನ್ನು ಪ್ಲೇ ಮಾಡಬೇಕಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅವಳು ನಾಟಕದ ರಾಣಿ ಎಂದು ಜರಿದಿದ್ದಾರೆ. ಮತ್ತೆ ಕೆಲವರು ಇದೊಂದು ಸ್ಕ್ರಿಪ್ಟ್ ಮಾಡಿದ ಮದುವೆ ಎಂದೂ ಕರೆದರು.

  • ಮದುವೆ ಮಂಟಪದಲ್ಲೇ ಕೈ ಕೊಟ್ಟ ವರ, ಕಾದು ಕಾದು ಸುಸ್ತಾದ ವಧು – ಇದು ಲವ್ ಸೆಕ್ಸ್ ದೋಖಾ ಕಥೆ

    ಮದುವೆ ಮಂಟಪದಲ್ಲೇ ಕೈ ಕೊಟ್ಟ ವರ, ಕಾದು ಕಾದು ಸುಸ್ತಾದ ವಧು – ಇದು ಲವ್ ಸೆಕ್ಸ್ ದೋಖಾ ಕಥೆ

    ಉಡುಪಿ: ಮದುವೆಯಾಗುವುದಾಗಿ ನಂಬಿಸಿ, ದಿನಾಂಕವನ್ನು ಫಿಕ್ಸ್ ಮಾಡಿ ಎಲ್ಲರೂ ಮಂಟಪಕ್ಕೆ ಬಂದಿದ್ದಾರೆ. ಆದರೆ ಮದುವೆ ಗಂಡೇ ಬರಲಿಲ್ಲ. ಇದರಿಂದ ಮದುವೆ ಮಂಟಪದ ಮುಂದೆ ವಧು ಕಾದು ಕಾದು ಸುಸ್ತಾದ್ರೆ ಅತ್ತ ಕೊನೆಗೂ ವರ ಬರದೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

    ಲಲಿತಾ ಮದುವೆ ಸಭಾಂಗಣ ಮುಂದೆ ಕಾದು ಕಾದು ಸುಸ್ತಾದ ವಧು. ಮಂಜುನಾಥ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಪರಾರಿಯಾದವನು. ಇವರಿಬ್ಬರೂ ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಿಜಿಸ್ಟರ್ ಮದುವೆ ಕೂಡ ಮಾಡಿಕೊಂಡಿದ್ದು, ಈಗ ಕುಟುಂಬಸ್ಥರು ಸೇರಿ ಸಾಂಪ್ರದಾಯಿಕವಾಗಿ ಮದುವೆ ಮಾಡಲು ಮುಂದಾಗಿದ್ದರು. ಆದರೆ ಈ ಸಂದರ್ಭದಲ್ಲಿ ಮಂಜುನಾಥ ಕೈಕೊಟ್ಟು ಪರಾರಿಯಾಗಿದ್ದಾನೆ.

    ಲಲಿತಾ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದರು. ಅದೇ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕೆಲಸಕ್ಕೆ ಮಂಜುನಾಥ ಬಂದಿದ್ದ. ಆಗಿನಿಂದಲೇ ಅವರ ಮಧ್ಯ ಪ್ರೀತಿ ಪ್ರಾರಂಭವಾಗಿತ್ತು. ಲಲಿತಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮನೆಯಿಂದಲೇ ಊಟವನ್ನೂ ತಂದು ಕೊಡುತ್ತಿದ್ದ. ಇವರಿಬ್ಬರೂ ದೇವಸ್ಥಾನ, ಪಾರ್ಕ್ ಮುಂತಾದ ಕಡೆಗಳಲ್ಲಿ ಸುತ್ತಾಡಿದ್ದರು. ಕೆಲವು ತಿಂಗಳ ಹಿಂದೆ ಇವರಿಬ್ಬರ ನಡುವೆ ದೈಹಿಕ ಸಂಪರ್ಕವು ಕೂಡ ನಡೆದಿತ್ತು.

    ಲಲಿತಾ ಹಾಗೂ ಮಂಜುನಾಥ್ ಒಡನಾಟ ಕುಟುಂಸ್ಥರಿಗೆ ಗೊತ್ತಾದ ನಂತರ ಅವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದು, ಸೆಪ್ಟೆಂಬರ್ 25 ರಂದು ರಿಜಿಸ್ಟರ್ ಮ್ಯಾರೇಜ್ ಮಾಡಿಸಿದ್ದರು. ರಿಜಿಸ್ಟರ್ ಮ್ಯಾರೇಜ್ ಆದ ಎರಡು ದಿನಗಳ ಬಳಿಕ ಮನೆಗೆ ಹೋಗಿ ಮಂಜುನಾಥ ತನ್ನ ಮದುವೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ್ದ. ಈ ಸಂದರ್ಭದಲ್ಲಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಇವರಿಬ್ಬರ ಕುಟುಂಬದವರು ಸೇರಿ ಅಕ್ಟೋಬರ್ 6 ರಂದು ಅಂಪಾರಿನ ಶ್ರೀ ವಾಸುಕಿ ಸುಬ್ರಹ್ಮಣ್ಯ ಮತ್ತು ನಾಗಯಕ್ಷಿ ದೇವಸ್ಥಾನದಲ್ಲಿ ಮದುವೆ ನಿಗದಿಪಡಿಸಿದ್ದರು. ಕುಟುಂಬಸ್ಥರು, ಸ್ನೇಹಿತರು ಹಾಗೂ ಲಲಿತಾ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಗಳೆಲ್ಲರೂ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು.

    ಮದುಮಗನೇ ನಾಪತ್ತೆ: ಮದುವೆಗೆ ಎಲ್ಲಾ ತಯಾರಿಯೂ ಆಗಿತ್ತು. ಆದರೆ ಮದುಮಗ ಮಂಜುನಾಥ್ ಮಾತ್ರ ಮದುವೆ ಮಂಟಪಕ್ಕೆ ಬರಲೇ ಇಲ್ಲ. ಮಂಟಪದ ಮುಂದೆ ಕಾದು ಕಾದು ಸುಸ್ತಾದ ಲಲಿತಾ ನಾನು ಕಾನೂನು ರೀತಿಯಲ್ಲಿ ಮದುವೆಯಾಗಿದ್ದೇನೆ. ನನ್ನ ಗಂಡನನ್ನು ಕರೆಸಿ ಎಂದು ಮಂಜುನಾಥನ ಮನೆ ಮುಂದೆ ಧರಣಿ ಕುಳಿತ್ತಿದ್ದಾರೆ. ನನ್ನ ಕುಟುಂಬದವರಿಗೆ ಅನ್ಯಾಯ ಆಗಿದೆ ಎಂದು ಮದುವೆಗೆಂದು ಪ್ರಿಂಟ್ ಮಾಡಿದ ಬ್ಯಾನರ್ ಮತ್ತು ಆಮಂತ್ರಣ ಪತ್ರಿಕೆ ಹಿಡಿದು ನ್ಯಾಯ ಕೊಡಿಸಿ ಎಂದು ಗಂಡನ ಮನೆಯ ಮುಂದೆ ನಿಂತು ಅಂಗಲಾಚಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಈ ಕುರಿತು ಮಾತುಕತೆ ನಡೆಸೋಣ. ಮನೆಯ ಮುಂದೆ ಗಲಾಟೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಆದರೂ ಲಲಿತಾ ಮತ್ತು ಕುಟುಂಬಸ್ಥರು ಹಠವಿಡಿದು ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥನ ಭಾವ ಚಂದ್ರ ಮತ್ತು ಲಲಿತಾ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

    ಕುಂದಾಪುರ ಠಾಣೆಯಲ್ಲಿ ಯುವತಿ ತನಗೆ ಮೋಸವಾಗಿದೆ ಎಂದು ದೂರು ನೀಡಿದ್ದಾರೆ. ಅತ್ತ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಕಾಣೆಯಾಗಿದ್ದಾನೆ ಎಂಬ ದೂರು ಕೂಡ ದಾಖಲಾಗಿದೆ.

  • ಹಣೆಗೆ ರಿವಾಲ್ವರ್ ಇಟ್ಟು ಮಂಟಪದಿಂದ ವರನನ್ನೇ ಎತ್ತಾಕೊಂಡೋದ್ಲು ಯುವತಿ!

    ಹಣೆಗೆ ರಿವಾಲ್ವರ್ ಇಟ್ಟು ಮಂಟಪದಿಂದ ವರನನ್ನೇ ಎತ್ತಾಕೊಂಡೋದ್ಲು ಯುವತಿ!

    ಲಕ್ನೋ: 25 ವರ್ಷದ ಯುವತಿಯೊಬ್ಬಳು ಕಲ್ಯಾಣ ಮಂಟಪದಿಂದ ವರನನ್ನೇ ಕಿಡ್ನಾಪ್ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಉತ್ತರಪ್ರದೇಶದ ಬುಂದೇಲ್‍ಖಂಡ್‍ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಸಹಚರರೊಡನೆ ಎಸ್‍ಯುವಿ ಕಾರಿನಲ್ಲಿ ಮದುವೆ ಮಂಟಪಕ್ಕೆ ಬಂದ ಯುವತಿ ವರನ ಹಣೆಗೆ ರಿವಾಲ್ವರ್ ಇಟ್ಟು, ಈತ ನನ್ನನ್ನು ಪ್ರೀತಿಸುತ್ತಾನೆ. ಆದ್ರೆ ಬೇರೆಯವರೊಂದಿಗೆ ಮದುವೆ ಆಗುವ ಮೂಲಕ ನನಗೆ ಮೋಸ ಮಾಡ್ತಿದ್ದಾನೆ. ಇದು ನಡೆಯೋಕೆ ನಾನು ಬಿಡೋದಿಲ್ಲ ಎಂದು ಹೇಳಿ ವರನನ್ನ ಕಿಡ್ನಾಪ್ ಮಾಡಿದ್ದಾಳೆ.

    ಮಹಿಂದ್ರಾ ಸ್ಕಾರ್ಪಿಯೋ ವಾಹನ ಹೊರಡುತ್ತಿದ್ದಂತೆ ಮದುವೆಗೆ ಸಿದ್ಧಗೊಂಡಿದ್ದ ವಧು ಭಾರತಿ ಯಾದವ್, ದುಃಖದಿಂದ ತನ್ನ ಹಣೆಬರಹ ಚೆನ್ನಾಗಿಲ್ಲ. ನನ್ನ ಶತ್ರುಗೂ ಈ ರೀತಿ ಶಿಕ್ಷೆಯಾಗಬಾರದು ಎಂದು ಹೇಳಿದ್ದಾರೆ.

    ವರ ಅಶೋಕ್ ಯಾದವ್ ಈವರೆಗೆ ಪತ್ತೆ ಆಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಕೆಲವು ತಿಂಗಳ ಹಿಂದೆ ಅಶೋಕ್‍ಗೆ ಕೆಲಸದ ಸ್ಥಳದಲ್ಲಿ ಯುವತಿಯ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಕೆಲವರು ಈ ಜೋಡಿ ಮದುವೆಯೂ ಆಗಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಮನೆಯವರ ಒತ್ತಾಯದಿಂದ ಅವರು ನೋಡಿದ ಹುಡುಗಿಯನ್ನ ಮದುವೆಯಾಗಲು ಅಶೋಕ್ ಒಪ್ಪಿದ್ದರು ಎಂದು ವರದಿಯಾಗಿದೆ.

    ಘಟನೆಯಿಂದ ಮದುವೆಗೆ ಬಂದಿದ್ದ ಅತಿಥಿಗಳು ಶಾಕ್ ಆಗಿದ್ದಾರೆ. ಇದೇ ವೇಳೆ ಮಾತನಾಡಿದ ವರನ ತಂದೆ ರಮ್ಹತ್ ಯಾದವ್, ನನ್ನ ಮಗನ ಬಗ್ಗೆ ಹಿಂದಿನಿಂದಲೂ ಅನುಮಾನವಿತ್ತು. ಆತ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ನಾನು ಭೇಟಿ ಮಾಡುವಾಗ, ನನ್ನನ್ನು ಆತನ ಮನೆಗೆ ಕರೆದುಕೊಂಡು ಹೋಗ್ತಿರ್ಲಿಲ್ಲ. ದೇವಸ್ಥಾನದಲ್ಲಿ ಭೇಟಿ ಮಾಡ್ತಿದ್ದ. ಅಲ್ಲೇ ಹೋಟೆಲ್‍ನಲ್ಲಿ ಊಟ ಮಾಡಿಸಿ ಮನೆಗೆ ಕಳಿಸ್ತಿದ್ದ ಎಂದಿದ್ದಾರೆ.

    ವಧುವಿನ ಕಡೆಯವರು ವರನ ಅಹರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಅದರಲ್ಲೂ ಕೆಲವು ಪೊಲೀಸರು ವರನನ್ನೇ ಅಪಹರಿಸಿದ ರಿವಾಲ್ವರ್ ರಾಣಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೋಸ ಮಾಡಿದ್ರೆ ಅದಕ್ಕೆ ಶಿಕ್ಷೆ ಆಗುತ್ತೆ ಅನ್ನೋದನ್ನ ಕೆಲ ಮಹಿಳೆಯರು ಹುಡುಗರಿಗೆ ಕಲಿಸುತ್ತಾರೆ ಅನ್ನೋದನ್ನ ಈ ಯುವತಿ ತೋರಿಸಿಕೊಟ್ಟಿದ್ದಾಳೆ ಎಂದಿದ್ದಾರೆ.

  • ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದುರ್ಮರಣ

    ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದುರ್ಮರಣ

    ಜೈಪುರ: ಭಾರೀ ಮಳೆ ಹಾಗೂ ಚಂಡಮಾರುತದಿಂದಾಗಿ ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಇಲ್ಲಿನ ಭರತ್‍ಪುರ ಜಿಲ್ಲೆಯ ಸೆವರ್ ರೋಡ್‍ನ ಅನ್ನಪೂರ್ಣ ಮ್ಯಾರೇಜ್ ಹೋಮ್‍ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ, ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 26 ಮಂದಿ ಸಾವನ್ನಪ್ಪಿದ್ದು, 28 ಮಂದಿಗೆ ಗಂಭೀರ ಗಾಯಗಳಾಗಿದೆ.

    ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಚಂಡಮಾರುತ ಅಪ್ಪಳಿಸಿದೆ. ಮಳೆಯಿಂದಾಗಿ ಕೆಲವರು ಮಂಟಪದ ಪಕ್ಕದಲ್ಲಿದ್ದ ಶೆಡ್‍ನಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಮಂಟಪದ ಗೋಡೆ ಇದ್ದಕ್ಕಿದ್ದಂತೆ ಶೆಡ್ ಮೇಲೆ ಕುಸಿದು ಬಿದ್ದಿದ್ದು, 26 ಮಂದಿಯನ್ನ ಬಲಿ ಪಡೆದಿದೆ. ಮೃತಪಟ್ಟವರಲ್ಲಿ 11 ಮಂದಿ ಪುರುಷರು, ಏಳು ಮಂದಿ ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಂಟಪದ ಗೋಡೆ ಸುಮಾರು 90 ಅಡಿ ಉದ್ದ ಹಾಗೂ 12-13 ಅಡಿ ಎತ್ತರವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹವಾಮಾನ ಇದ್ದಕ್ಕಿದ್ದಂತೆ ಬದಲಾಗಿ ಬಿರುಗಾಳಿ ಶುರುವಾಗಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

    ದುರಂತಕ್ಕೆ ಮುಖ್ಯಮಂತ್ರಿ ವಸುಂಧರಾ ರಾಜೆ ವಿಷಾದ ವ್ಯಕ್ತಪಡಿಸಿದ್ದಾರೆ.