Tag: ಮತಾಂತರ

  • ಸಿಲಿಕಾನ್ ಸಿಟಿಯಲ್ಲಿ ಮತಾಂತರದ ಕಿರಿಕ್-ಮತಾಂತರದ ಆರೋಪದಲ್ಲಿ ದೇಗುಲವೇ ಆಯ್ತು ರಣರಂಗ

    ಸಿಲಿಕಾನ್ ಸಿಟಿಯಲ್ಲಿ ಮತಾಂತರದ ಕಿರಿಕ್-ಮತಾಂತರದ ಆರೋಪದಲ್ಲಿ ದೇಗುಲವೇ ಆಯ್ತು ರಣರಂಗ

    ಬೆಂಗಳೂರು: ಸಿಲಿಕಾನ್ ಸಿಟಿಯ ಕೊಡಿಗೆಹಳ್ಳಿಯ ಗೂಡಾಂಜನೇಯ ದೇವಸ್ಥಾನದಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ದೇವಾಲಯದ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿ ಕೆಲಕಾಳ ಗಲಾಟೆಯೂ ನಡೆಯಿತು.

    ಎನ್‍ಜಿಓವೊಂದರ ಸದಸ್ಯರು ನಾಲ್ಕು ದಿನಗಳಿಂದ ಸುಮಾರು ಮೂವತ್ತರಿಂದ ನಲವತ್ತು ಜನರನ್ನು ದೇವಾಸ್ಥಾನದ ಕಲ್ಯಾಣ ಮಂಟಪದಲ್ಲಿ ಕೂಡಿಹಾಕಿದ್ದಾರೆ. ಸ್ಥಳೀಯ ಜನ ಇದ್ರಿಂದ ಕುತೂಹಲಗೊಂಡು ನೋಡಿದಾಗ ಕ್ರಿಶ್ಚಿಯನ್ ಮತದ ಭೋದನೆ ನಡೆಯತ್ತಿತ್ತು ಅಂತಾ ಆರೋಪಿಸಿ ಕಲ್ಯಾಣಮಂಟಪದ ಬಾಗಿಲು ಮುರಿದು ಒಳಹೊಕ್ಕು ಗಲಾಟೆ ಮಾಡಿದ್ದಾರೆ. ಅಲ್ಲಿದ್ದ ಎನ್‍ಜಿಓ ದವರ ಮೇಲೆಯೂ ಹಲ್ಲೆ ನಡೆಸಿದ್ದಾರೆ.

    ಸರ್ಕಾರ ಹಾಗೂ ನಾವು ಜಂಟಿಯಾಗಿ ಜೀತಕ್ಕಿಟ್ಟ ಕಾರ್ಮಿಕರನ್ನು ರಕ್ಷಿಸಿ ಇಲ್ಲಿ ಕರೆತಂದಿದ್ದೇವೆ. ಒರಿಸ್ಸಾಗೆ ರೈಲು ಸಿಗದ ಕಾರಣ ಇಲ್ಲಿ ಇಟ್ಟಿದ್ದೇವೆ ಅಂತಾ ಎನ್‍ಜಿಓ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಜನರು ಮಾತ್ರ ನಂಬೋದಕ್ಕೆ ತಯಾರಿರಲಿಲ್ಲ, ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಇವರು ಕಾರ್ಮಿಕರನ್ನು ರಕ್ಷಣೆ ಮಾಡಿ ಇಲ್ಲಿ ಇಟ್ಟಿದ್ದೇವೆ. ಮತಾಂತರ ನಡೆದ್ರೇ ತನಿಖೆ ನಡೆಸುತ್ತೇವೆ ಅಂತಾ ತಿಳಿಸಿದ್ದಾರೆ.

  • ಮೌಲ್ವಿಗಳಿಂದ ಹಿಂದೂ ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರ!

    ಮೌಲ್ವಿಗಳಿಂದ ಹಿಂದೂ ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರ!

    ವಿಜಯಪುರ: ಇತ್ತೀಚೆಗೆ ಮತಾಂತರ ಮಾಡಿಸಿಕೊಂಡು ಜಿಹಾದ್ ಕೆಲಸಗಳನ್ನು ಮಾಡಿಸುತ್ತಿರುವ ಆರೋಪಗಳು ಒಂದಲ್ಲ ಒಂದುಕಡೆ ಕೇಳಿ ಬರುತ್ತಲೇ ಇವೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ವಿಜಯಪುರದಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ.

    ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ನಿವಾಸಿ ಲಕ್ಷ್ಮಿಕಾಂತನನ್ನು ಮುಸ್ಲಿಂ ಮೌಲ್ವಿಗಳು ಮತಾಂತರ ಮಾಡಿದ್ದಾರೆ ಎಂದು ಆತನ ತಂದೆ ಲಕ್ಕಪ್ಪ ಸಿಂಧೆ ಆರೋಪಿಸಿದ್ದಾರೆ. ಮೊದಲಿನಿಂದಲೂ ಲಕ್ಷ್ಮಿಕಾಂತ ಮುಸ್ಲಿಂ ಹುಡುಗರೊಂದಿಗೆ ಓಡಾಡುತ್ತಿದ್ದ. ಆದರೆ ಇದೀಗ ಕಳೆದ ಒಂದು ವಾರದ ಹಿಂದೆ ಆತನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಲಾಗಿದೆ ಎಂದು ಲಕ್ಕಪ್ಪ ಸಿಂಧೆ ಆತಂಕ ವ್ಯಕ್ತಪಡಿಸಿದ್ದಾರೆ.

    ಆರು ದಿನಗಳಿಂದ ಮಗ ಮನೆಗೆ ಬಂದಿಲ್ಲ, ಆತನಿಗೆ ಮುಸ್ಲಿಂ ಧರ್ಮದ ಬಗ್ಗೆ ಹೇಳಿ, ವಶೀಕರಣ ಮಾಡಿಕೊಂಡಿದ್ದಾರೆ. ಆತನಿಗೆ ತಮ್ಮ ಧರ್ಮದ ಬಗ್ಗೆ ತಲೆಯಲ್ಲಿ ತುಂಬಿ ಆತನ ತಲೆ ಕೆಡಿಸಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಂಡಿದ್ದಾರೆ ಎಂದು ಲಕ್ಕಪ್ಪ ಕುಟುಂಬ ಆರೋಪಿಸಿದೆ.

    ಇದರಲ್ಲಿ ಮುಖ್ಯವಾಗಿ ಇಂಡಿ ಪಟ್ಟಣದ ಮೌಲ್ವಿ ಸಾಜೀರ್ ಮುಲ್ಲಾ ಅವರದ್ದೆ ಕೈವಾಡ ಇದೆ ಎಂದು ಆರೋಪಿಸಲಾಗಿದೆ. ತಮ್ಮ ಮಗನನ್ನು ಮತಾಂತರ ಮಾಡಿಕೊಂಡಿದ್ದಲ್ಲದೆ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಎಸ್.ಪಿ ಅವರಿಗೆ ಲಕ್ಕಪ್ಪ ಸಿಂಧೆ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ.

  • ಸಿಎಂ ಮನೆಯಂಗಳದಲ್ಲೇ ಮತಾಂತರ ನಡೆಯುತ್ತಿದೆ: ಸಂಸದೆ ಶೋಭಾ ಆರೋಪ

    ಸಿಎಂ ಮನೆಯಂಗಳದಲ್ಲೇ ಮತಾಂತರ ನಡೆಯುತ್ತಿದೆ: ಸಂಸದೆ ಶೋಭಾ ಆರೋಪ

    ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಂಗಳದಲ್ಲೇ ಮತಾಂತರ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಸಮಾಜದ್ರೋಹಿ ಸಂಘಟನೆಗಳಿಗೆ ರಕ್ಷಣೆ ನೀಡಿ ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ಶನಿವಾರ ಮಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಐಸಿಸ್ ಸಂಘಟನೆಗೆ ಜನರನ್ನು ನೇಮಕ ಮಾಡುವ ಪ್ರಮುಖ ಕೇಂದ್ರವಾಗಿ ಪರಿವರ್ತನೆಯಾಗಿದೆ. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಸಿಎಂ ಸಿದ್ದರಾಮಯ್ಯನವರ ಸರ್ಕಾರ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಅಲ್ಲದೇ ಪೊಲೀಸ್ ಪಡೆ ಎಸಿಬಿಯನ್ನು ದುರುಪಯೋಗ ಮಾಡಕೊಳ್ಳಲಾಗುತ್ತಿದೆ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಹಾಕಿದೆ ಎಂದು ವಾಗ್ದಾಳಿ ನಡೆಸಿದರು.

    ಬೆಂಗಳೂರಿನ ಹೆಬ್ಬಾಳದಲ್ಲಿದ್ದ ಅಕ್ಷತಾ ಅನ್ನುವ ಹುಡುಗಿ ಆಯೆಷಾ ಆಗಿದ್ದಾಳೆ. ಹೆಬ್ಬಾಳದ ಸಿರಾಜುದ್ದೀನ್ ಎಂಬ ಯುವಕ, ಝಾಕಿರ್ ನಾಯ್ಕ್ ವಿಡಿಯೋಗಳನ್ನು ತೋರಿಸಿ ಮತಾಂತರ ಮಾಡಿದ್ದ. ಐಸಿಸ್ ಸಂಘಟನೆ ಸೇರುವಂತೆ ಕಳುಹಿಸಿಕೊಟ್ಟಿದ್ದ. ಅಲ್ಲದೇ ಐಸಿಸ್ ಉಗ್ರರು ಅತ್ಯಾಚಾರ ಮಾಡಿದರು ನೀನು ಅಲ್ಲಿಯೇ ಇರಬೇಕು ಎಂದು ಹೇಳಿದ್ದ ಎಂದು ಕೇರಳ ಹೈಕೋರ್ಟ್‍ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಅಕ್ಷತಾ ಕೋರ್ಟ್‍ಗೆ ನೀಡಿರುವ ದೂರಿನಲ್ಲಿ ತನ್ನನ್ನು ಹೇಗೆ ಮತಾಂತರ ಮಾಡಿದ್ದಾರೆ ಎಂದು ಸಂಪೂರ್ಣವಾಗಿ ವಿವರಿಸಿದ್ದಾರೆ. ಅಕ್ಷತಾ ಐಸಿಸ್ ಎಂಬ ರಾಕ್ಷಸ ಸಂಘಟನೆಯಿಂದ ತಪ್ಪಿಸಿಕೊಂಡು ಅಹಮದಾಬಾದ್ ಬಂದಿದ್ದು, ಪೋನ್ ಮೂಲಕ ತನ್ನ ಪೋಷಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೇ ತನಗಾದ ಕಷ್ಟಗಳನ್ನು ಕೋರ್ಟ್‍ನ ಮುಂದೆ ವಿವರಿಸಿ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ ಎಂದು ತಿಳಿಸಿದರು.

  • ಹಿಂದೂ ಧರ್ಮಕ್ಕೆ ವಾಪಸ್ಸಾದ ಮಂಗ್ಳೂರಿನ ಕ್ರೈಸ್ತ ಕುಟುಂಬ

    ಹಿಂದೂ ಧರ್ಮಕ್ಕೆ ವಾಪಸ್ಸಾದ ಮಂಗ್ಳೂರಿನ ಕ್ರೈಸ್ತ ಕುಟುಂಬ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲೊಂದು ಘರ್ ವಾಪಾಸಿ ನಡೆದಿದೆ.

    ನಗರದ ಪದವಿನಂಗಡಿಯ ಕ್ರಿಶ್ಚಿಯನ್ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮರು ಮತಾಂತರ ಆಗಿದೆ. 40 ವರ್ಷಗಳ ಹಿಂದೆ ಅರುಣ್ ಮೊಂತೆರೋ ಅವರ ತಾಯಿ ಐಡಿ ಥಾಮಸ್ ಕ್ರೈಸ್ತಧರ್ಮ ಎಲ್ಲಕ್ಕಿಂತ ಶ್ರೇಷ್ಠವೆಂದು ಹಿಂದೂ ಧರ್ಮ ತೊರೆದಿದ್ದರು. ನಂತರ ಈ ಕುಟುಂಬ ಹಿಂದೂ ಧರ್ಮದ ಎಲ್ಲಾ ಸಂಪ್ರದಾಯವನ್ನು ಕಳಚಿಕೊಂಡಿತ್ತು. ಆದ್ರೆ ಈಗ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ ಆಗಿದ್ದಾರೆ.

    ಪದವಿನಂಗಡಿಯ ಹಿಂದೂ ಜಾಗರಣ ವೇದಿಕೆಯ ಸದಸ್ಯರನ್ನು ಈ ಕುಟುಂಬ ಸಂಪರ್ಕಿಸಿ ಘರ್ ವಾಪಸಿಯಾಗಿದ್ದಾರೆ. ಅರುಣ್ ಮೊಂತೆರೋ, ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 5 ಜನ ಘರ್ ವಾಪಾಸಿಯಾದರು.

    ಘರ್ ವಾಪಸಿ ನಂತರ ಅರುಣ್ ಮೊಂತೆರೋ ಅರುಣ್ ಪೂಜಾರಿ ಎಂದು, ಪತ್ನಿ ಸುನೀತ ಸಂಗೀತ ಆಗಿ, ತಾಯಿ ಐಡಾ ಥೋಮಸ್ ಗೌರಿ ಪೂಜಾರ್ತಿಯಾಗಿ, ಇಬ್ಬರು ಗಂಡು ಮಕ್ಕಳು ಅಜಯ್ ಪೂಜಾರಿ- ಅನೀಶ್ ಪೂಜಾರಿಯಾಗಿ ಬದಲಾಗಿದ್ದಾರೆ.

  • ವಿಡಿಯೋ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪದ ಮಗನಿಗೆ ತಂದೆಯಿಂದ ಹಲ್ಲೆ

    ವಿಡಿಯೋ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪದ ಮಗನಿಗೆ ತಂದೆಯಿಂದ ಹಲ್ಲೆ

    ಮೈಸೂರು: ಮತಾಂತರಕ್ಕೆ ಒಪ್ಪದ ಮಗನಿಗೆ ತಂದೆ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಲ್ಲಿ ನಡೆದಿದೆ.

    ಪವಿತ್ ಎಂಬಾತನೇ ತಂದೆ ರವಿಯಿಂದ ಹಲ್ಲೆಗೊಳಗಾದ ಮಗ. ಬುಡುಕಟ್ಟು ಜನಾಂಗದ ರವಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಪುತ್ರ ಪವಿತ್ ಮತಾಂತರಗೊಳ್ಳದೇ ಹಿಂದೂ ಧರ್ಮದಲ್ಲಿ ಮುಂದುವರೆದಿದ್ದನು.

    ರವಿ ಮಾತ್ರ ಮತಾಂತರಗೊಳ್ಳುವಂತೆ ಮಗನ ಮೇಲೆ ಒತ್ತಡ ಹಾಕುತ್ತಿದ್ದರು. ದೇವಸ್ಥಾನಕ್ಕೆ ಬಂದಿದ್ದ ಮಗ ಪವಿತ್‍ನನ್ನು ಕಂಡ ರವಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದು, ರವಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=S0JyvLDfqcA