Tag: ಮಜಾಭಾರತ

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಗಿಚ್ಚಿ ಗಿಲಿಗಿಲಿ’ ನಟಿ ಪ್ರಿಯಾಂಕಾ ಕಾಮತ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಗಿಚ್ಚಿ ಗಿಲಿಗಿಲಿ’ ನಟಿ ಪ್ರಿಯಾಂಕಾ ಕಾಮತ್

    ಜಾಭಾರತ, ಗಿಚ್ಚಿ ಗಿಲಿಗಿಲಿ (Gichchi Giligili) ನಟಿ ಪ್ರಿಯಾಂಕಾ ಕಾಮತ್ (Priyanka Kamath) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಅಮಿತ್ ನಾಯಕ್ ಜೊತೆ ಪ್ರಿಯಾಂಕಾ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ನವಜೋಡಿಗೆ ಕಿರುತೆರೆ ನಟ-ನಟಿಯರು ಆಗಮಿಸಿ ಶುಭಹಾರೈಸಿದ್ದಾರೆ.

    ಕಳೆದ ಎರಡು ದಿನಗಳಿಂದ ಮೆಹೆಂದಿ ಶಾಸ್ತ್ರ, ಹಳದಿ ಶಾಸ್ತ್ರ ಮದುವೆ ಕುರಿತ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿವೆ. ಇದೀಗ ದಾಂಪತ್ಯ ಜೀವನಕ್ಕೆ ನಟಿ ಕಾಲಿಟ್ಟಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಅಮಿತ್- ಪ್ರಿಯಾಂಕಾ ಕಳೆದ ಜನವರಿಯಲ್ಲಿ ಪುತ್ತೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ನಂತರದಲ್ಲಿ ಏಳು-ಬೀಳಿನಲ್ಲಿ ಇವರಿಬ್ಬರು ಒಟ್ಟಿಗೆ ಸಾಥ್ ನೀಡಿದ್ದರು. ಇದೀಗ ಹೊಸ ಬಾಳಿಗೆ ನವಜೋಡಿ ಕಾಲಿಟ್ಟಿದ್ದಾರೆ. ಇದನ್ನೂ ಓದಿ:‘ಕಾಟೇರ’ ಮೂಲಕ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಮರಳಿದ ಗುರು ದೇಶಪಾಂಡೆ

    ಅಮಿತ್ ನಾಯಕ್ (Amith Nayak) ಮೂಲತಃ ಕುಂದಾಪುರದವರು. ಕಳೆದ ಒಂದು ವರ್ಷದಿಂದ ಈ ಜೋಡಿ ಸಾಕಷ್ಟು ಕಡೆ ಪ್ರವಾಸ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿತ್ತು.

    ನಟಿ ಪ್ರಿಯಾಂಕಾ ಮೂಲತಃ ಮಂಗಳೂರಿನವರು. ಅನಾರೋಗ್ಯದ ಸಮಸ್ಯೆಯಿಂದಾಗಿ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಗ ಅಮಿತ್ ಅವರು ಪ್ರಿಯಾಂಕಾ ನೆರವಿಗೆ ನಿಂತು ಸಂಗಾತಿಯ ಆರೈಕೆ ಮಾಡಿದ್ದರು. ಅದನ್ನು ನಟಿಯೇ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

  • ‘ಗಿಚ್ಚಿ ಗಿಲಿಗಿಲಿ’ ವೇದಿಕೆಯಲ್ಲಿ ಚಂದ್ರಪ್ರಭಾ ಮತ್ತೆ ಮದುವೆ- ಕಣ್ಣೀರಿಟ್ಟ ನಟ

    ‘ಗಿಚ್ಚಿ ಗಿಲಿಗಿಲಿ’ ವೇದಿಕೆಯಲ್ಲಿ ಚಂದ್ರಪ್ರಭಾ ಮತ್ತೆ ಮದುವೆ- ಕಣ್ಣೀರಿಟ್ಟ ನಟ

    ಜಾಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಮನೆ ಮಾತಾದ ನಟ ಚಂದ್ರಪ್ರಭಾ (Chandraprabha) ಅವರು ಇತ್ತೀಚಿಗೆ ಸೈಲೆಂಟ್‌ ಆಗಿ ಹಸೆಮಣೆ ಏರಿದ್ದರು. ತಮ್ಮ ಮದುವೆ (Wedding) ಬಗ್ಗೆ ಎಲ್ಲೂ ಹೇಳದೇ ಮುಚ್ಚಿಟ್ಟಿದ್ದಾರೆ ಎಂದು ನೆಟ್ಟಿಗರ ಕೆಂಗಣ್ಣಿಗೆ ನಟ ಗುರಿಯಾಗಿದ್ದರು. ಈಗ ತಮ್ಮ ಮದುವೆ ಬಗ್ಗೆ ಚಂದ್ರಪ್ರಭಾ ಅವರು ಮಾತನಾಡಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ 2 (Gicchi Giligili 2) ವೇದಿಕೆಯಲ್ಲಿ ನಟ ಮತ್ತೆ ಮದುವೆಯಾಗಿದ್ದಾರೆ.

    ಕಾಮಿಡಿ ಶೋ ಕಾರ್ಯಕ್ರಮದ ಮೂಲಕ ಸ್ಪರ್ಧಿಯಾಗಿ ಅಭಿಮಾನಿಗಳನ್ನ ನಗೆಗಡಲಲ್ಲಿ ತೇಲಿಸಿದ ನಟ ಚಂದ್ರಪ್ರಭಾ ಅವರು ಕೆಲ ದಿನಗಳ ಹಿಂದೆ ಭಾರತಿ ಎಂಬುವವರನ್ನ ಮದುವೆಯಾಗಿದ್ದರು. ಸರಳವಾಗಿ ಆಪ್ತರ ಸಮ್ಮುಖದಲ್ಲಿ ಚಂದ್ರಪ್ರಭಾ ಮದುವೆ ನೆರವೇರಿತ್ತು. ಆದರೆ ತಮ್ಮ ಮದುವೆ ಬಗ್ಗೆ ಎಲ್ಲೂ ಕೂಡ ನಟ ಪೋಸ್ಟ್ ಹಾಕಿರಲಿಲ್ಲ. ಮದುವೆ ಆಗಿರುವ ಬಗ್ಗೆ ಎಲ್ಲೂ ಸುಳಿವು ನೀಡಿರಲಿಲ್ಲ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚಂದ್ರಪ್ರಭಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

     

    View this post on Instagram

     

    A post shared by Chandraprabha G (@chandra_prabha_g)

    ಇದೀಗ ‘ಗಿಚ್ಚಿ ಗಿಲಿಗಿಲಿ 2’  ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಚಂದ್ರಪ್ರಭಾ ಅವರು ಮತ್ತೆ ಮಡದಿ ಭಾರತಿ ಪ್ರಿಯಾ (Bharathi Priya) ಜೊತೆ ಮದುವೆಯಾಗಿದ್ದಾರೆ. ನಾನು ಇಷ್ಟಪಟ್ಟ ಹುಡುಗಿ ಎಂದು ಹೇಳುವುದ್ದಕ್ಕಿಂತ, ನನ್ನನ್ನು ಹೆಚ್ಚಿಗೆ ಇಷ್ಟಪಡುತ್ತಿರುವ ವ್ಯಕ್ತಿ ಎಂದು ಹೇಳಲು ಖುಷಿಯಾಗುತ್ತದೆ. ಆಕೆಯನ್ನು ಕಣ್ಣೀರು ಹಾಕಿಸದಂತೆ ನೋಡಿಕೊಳ್ಳಬೇಕು ಅನ್ನೋದು ನನ್ನ ಆಸೆ ಎಂದು ಚಂದ್ರಪ್ರಭಾ ಮಾತನಾಡಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ನಮ್ಮ ತಂದೆ ಇರಬೇಕಿತ್ತು ನನ್ನ ಮದುವೆ ನೋಡಬೇಕಿತ್ತು. ನನ್ನ ಮದುವೆ ನೋಡಿ ಸಾಯಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು ಎಂದು ಚಂದ್ರಪ್ರಭಾ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಈ ವಾಹಿನಿಯ ‘ಗಿಚ್ಚಿ ಗಿಲಿಗಿಲಿ 2’ ವಾರಾಂತ್ಯದ ಚಂದ್ರಪ್ರಭಾ ಪ್ರೋಮೋ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೊಸ ಜೋಡಿಗೆ ಫ್ಯಾನ್ಸ್‌ ಶುಭಕೋರುತ್ತಿದ್ದಾರೆ.

  • ಗುಟ್ಟಾಗಿ ಹಸೆಮಣೆ ಏರಿದ ‘ಗಿಚ್ಚಿ ಗಿಲಿಗಿಲಿ’ ನಟ ಚಂದ್ರಪ್ರಭಾ

    ಗುಟ್ಟಾಗಿ ಹಸೆಮಣೆ ಏರಿದ ‘ಗಿಚ್ಚಿ ಗಿಲಿಗಿಲಿ’ ನಟ ಚಂದ್ರಪ್ರಭಾ

    ಕಿರುತೆರೆ ಜನಪ್ರಿಯ ಮಜಾಭಾರತ(Majabharatha), ಗಿಚ್ಚಿ ಗಿಲಿಗಿಲಿ, ಗಿಚ್ಚಿ ಗಿಲಿಗಿಲಿ 2, ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ಚಂದ್ರಪ್ರಭಾ (Chandraprabha) ಅವರು ಇದೀಗ ಗುಟ್ಟಾಗಿ ಮದುವೆ (Wedding) ಆಗಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪ್ರಸ್ತುತ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಚಂದ್ರಪ್ರಭಾ ಆಕ್ಟೀವ್ ಆಗಿದ್ದಾರೆ. ವೀಕೆಂಡ್ ಮೂಡ್‌ನಲ್ಲಿರುವ ಪ್ರೇಕ್ಷಕರಿಗೆ ತಮ್ಮ ಹಾಸ್ಯದ ಮೂಲಕ ಮನರಂಜನೆ ನೀಡುತ್ತಾರೆ. ಶೋನಲ್ಲಿ ಮದುವೆಯಾಗಿಲ್ಲ ಹೆಣ್ಣು ಕೊಡಿ, ಹುಡುಗಿ ಬೇಕು ಎಂದು ಆಗಾಗ ಹೇಳುತ್ತಿದ್ದರು. ಇದನ್ನೇ ಟಾಪಿಕ್ ಆಗಿ ಮಾತನಾಡಿದ್ದರು. ಈಗ ಅವರು ಸೈಲೆಂಟ್ ಹಸೆಮಣೆ ಏರಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

    ಕೆಲ ದಿನಗಳ ಹಿಂದೆ ಚಂದ್ರಪ್ರಭಾ ಅವರು ಭಾರತಿ ಪ್ರಿಯಾ ಎಂಬುವವರನ್ನು ಮದುವೆಯಾಗಿದ್ದಾರೆ. ಆದರೆ ಈ ಬಗ್ಗೆ ನಟ ಯಾವುದೇ ಅಪ್‌ಡೇಟ್ ನೀಡಿಲ್ಲ. ಮದುವೆಯಾಗಿರೋದನ್ನ (Wedding) ಯಾಕೆ ಮುಚ್ಚಿಟ್ರಿ? ಹೆಂಡತಿ ಸುಂದರವಾಗಿದ್ರೂ ಯಾಕೆ ಹೆಣ್ಣು ಬೇಕು ಅಂತೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಿಡಿಕಾರಿದ್ದಾರೆ.

    ಗುರುಹಿರಿಯರು-ಆಪ್ತರ ಸಮ್ಮುಖದಲ್ಲಿ ನಟ ಚಂದ್ರಪ್ರಭಾ ಮತ್ತು ಭಾರತಿ ಪ್ರಿಯಾ ಮದುವೆಯಾಗಿದ್ದಾರೆ. ಮದುವೆಯಾಗಿ ಒಂದು ವಾರ ಕಳೆದಿದೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಚಂದ್ರಪ್ರಭಾ ಉತ್ತರ ನೀಡುವವರೆಗೂ ಕಾದುನೋಡಬೇಕಿದೆ.

  • ಅದ್ದೂರಿಯಾಗಿ ನಡೆಯಿತು `ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಿಯಾಂಕಾ ಕಾಮತ್ ಎಂಗೇಜ್‌ಮೆಂಟ್

    ಅದ್ದೂರಿಯಾಗಿ ನಡೆಯಿತು `ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಿಯಾಂಕಾ ಕಾಮತ್ ಎಂಗೇಜ್‌ಮೆಂಟ್

    ಕಿರುತೆರೆಯ ಜನಪ್ರಿಯ ಶೋ `ಮಜಾಭಾರತ’ (Majabharatha) ಹಾಗೂ `ಗಿಚ್ಚಿ ಗಿಲಿಗಿಲಿ’ (Gicchigiligili) ರಿಯಾಲಿಟಿ ಶೋಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿ ವೀಕ್ಷಕರನ್ನ ನಗೆಗಡಲಲ್ಲಿ ತೇಲಿಸಿದ್ದ ಪ್ರಿಯಾಂಕಾ ಕಾಮತ್ ಅವರ ನಿಶ್ಚಿತಾರ್ಥ ನೆರವೇರಿದೆ. ಬಹುಕಾಲದ ಗೆಳೆಯ ಅಮಿತ್ ನಾಯಕ್ (Amith Nayak) ಜೊತೆ ಪ್ರಿಯಾಂಕಾ ಕಾಮತ್ (Priyanka Kamath) ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ಇದನ್ನೂ ಓದಿ: `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?

     

    View this post on Instagram

     

    A post shared by Mr Nayak (@amit_nayak71)

    ಕರಾವಳಿ ಕುವರಿ ಪ್ರಿಯಾಂಕಾ ಕಾಮತ್ ಅಲಿಯಾಸ್ ಪಿಕೆ `ಮಜಾಭಾರತ’ ಸೇರಿದಂತೆ ಸಾಕಷ್ಟು ಶೋಗಳ ಮೂಲಕ ಮನೆ ಮಾತಾಗಿದ್ದಾರೆ. ಇದೀಗ ಗುರುಹಿರಿಯರ ಒಪ್ಪಿಗೆ ಪಡೆದು ತಾವು ಪ್ರೀತಿಸಿದ ಹುಡುಗ ಅಮಿತ್ ನಾಯಕ್ ಜೊತೆ ಪ್ರಿಯಾಂಕಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸಾಕಷ್ಟು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ.

     

    View this post on Instagram

     

    A post shared by Pixel Stream (@pixel_stream)

    ಪ್ರಿಯಾಂಕಾ ಹಾಗೂ ಅಮಿತ್ ನಾಯಕ್ ಅವರ ನಿಶ್ಚಿತಾರ್ಥ ಸಮಾರಂಭ ಪುತ್ತೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಪ್ರಿಯಾಂಕಾ ಮತ್ತು ಅಮಿತ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಹೊಸ ಜೋಡಿಗೆ ನೆಟ್ಟಿಗರು ಶುಭಾಶಯ ತಿಳಿಸುತ್ತಿದ್ದಾರೆ.

     

    View this post on Instagram

     

    A post shared by Priyanka Kamath (@kamath.priyanka)

    ಇನ್ನೂ ಅಮಿತ್ ನಾಯಕ್ ಮೂಲತಃ ಕುಂದಾಪುರದವರು. ಮೆಕ್ಯಾನಿಕಲ್ ಎಂಜಿನಿಯರ್ ಓದಿರುವ ಅಮಿತ್ ನಾಯಕ್‌ಗೆ ಪ್ರವಾಸ ಮಾಡುವುದು ಎಂದರೆ ತುಂಬಾ ಇಷ್ಟ. ಕೆಲವು ಕಾಲದಿಂದ ಪ್ರಿಯಾಂಕಾ ಹಾಗೂ ಅಮಿತ್ ಪರಸ್ಪರ ಪ್ರೀತಿಸುತ್ತಿದ್ದರು. ಸದ್ಯ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂದು ಶುರುವಾಯ್ತು ವಿನೋದ್ ಪರ ಅಭಿಯಾನ

    `ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂದು ಶುರುವಾಯ್ತು ವಿನೋದ್ ಪರ ಅಭಿಯಾನ

    ಷ್ಟಪಟ್ಟು ಮಜಾಭಾರತ, ಗಚ್ಚಿಗಿಲಿಗಿಲಿ ರಿಯಾಲಿಟಿ ಮೂಲಕ ಗುರುತಿಸಿಕೊಂಡ ಪಕ್ಕಾ ಹಳ್ಳಿ ಪ್ರತಿಭೆ ವಿನೋದ್ ಗೊಬ್ಬರಗಾಲ(Vinod Gobbaragala). ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕಾಲಿಟ್ಟ ಮೇಲೆ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಗೊಬ್ಬರಗಾಲ ಎಲಿಮಿನೇಷನ್‌ನಿಂದ ಮನೆಮಂದಿ, ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡ್ತಿದ್ದಾರೆ.

    ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಇತರೆ ಸ್ಫರ್ಧಿಗಳಿಗೆ ಟಕ್ಕರ್ ಕೊಡುತ್ತಿದ್ದವರು ವಿನೋದ್ ಗೊಬ್ಬರಗಾಲ ಎಲಿಮಿನೇಷನ್‌ನಿಂದ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಗೊಬ್ಬರಗಾಲ ಆಟ ನೋಡಿದವರು ಬಿಗ್ ಬಾಸ್ ಫೀನಾಲೆಯಲ್ಲಿ ಇವರು ಇದ್ದೇ ಇರುತ್ತಾರೆ ಎಂದು ಅಂದಾಜಿಸಿದ್ದರು. ಆದರೆ ವಿನೋದ್ ಬಿಗ್ ಬಾಸ್‌ನಿಂದ ಔಟ್ ಆಗಿ ಬಂದ ಮೇಲೆ ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ(Badavara Makkalu Belibeku Kannayya) ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ವಿನೋದ್ ನಾ ಮತ್ತೆ ಬಿಗ್‌ ಬಾಸ್‌ಗೆ ವಾಪಸ್ ಕರೆಸಿ ಎನ್ನುತ್ತಿದ್ದಾರೆ ಫ್ಯಾನ್ಸ್. ಇದನ್ನೂ ಓದಿ: ಕೊನೆಗೂ ಮದುವೆ ಡೇಟ್ ಅನೌನ್ಸ್ ಮಾಡಿದ್ರು ನಟಿ ಕಿಯಾರಾ ಅಡ್ವಾಣಿ

    ಕಿರುತೆರೆಯ ಮಜಾಭಾರತ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿನೋದ್ ಗೊಬ್ಬರಗಾಲ ದೊಡ್ಮನೆಗೆ ಕಾಲಿಟ್ಟಿದ್ದರು. ಇದೀಗ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದರು. ಟಿವಿ ಲೋಕದಲ್ಲಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದ ಗೊಬ್ಬರಗಾಲ ಬಿಗ್ ಬಾಸ್ ಮನೆಯಲ್ಲೂ ಕಮಾಲ್ ಮಾಡಿದ್ದರು. ಇದೀಗ ಸಾನ್ಯ ಅಯ್ಯರ್ ಎಲಿಮಿನೇಷನ್ ನಂತರ ವಿನೋದ್ ಗೊಬ್ಬರಗಾಲ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದರು.

    ಮನರಂಜನೆ, ಟಾಸ್ಕ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಗೊಬ್ಬರಗಾಲ ಎಲಿಮಿನೇಷನ್ ಇದೀಗ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ವಿನೋದ್ ಗೊಬ್ಬರಗಾಲ ಈಗ ದೊಡ್ಮನೆಯಿಂದ ಹೊರಬಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ವಿನೋದ್ ಗೊಬ್ಬರಗಾಲ ಅವರ ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ಬಿಗ್ ಬಾಸ್ ವಿನೋದ್ ಗೊಬ್ಬರಗಾಲ ಅವರ ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ಜಾಭಾರತ, ಗಿಚ್ಚಿ ಗಿಲಿ ಗಿಲಿ, ಶೋ ಮೂಲಕ ಮೋಡಿ ಮಾಡಿರುವ ವಿನೋದ್ ಗೊಬ್ಬರಗಾಲ(Vinod Gobbaragala) ಇದೀಗ ಬಿಗ್ ಬಾಸ್ ಮನೆಗೆ(Bigg Boss House) ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಕಾಮಿಡಿ ಮೂಲಕ ಕಮಾಲ್ ಮಾಡುತ್ತಿರುವ ನಟ ವಿನೋದ್ ನಟನಾ ಕ್ಷೇತ್ರದ ಮೊದಲ ಸಂಭಾವನೆ ಕೇಳಿದ್ರೆ ನಿಜಕ್ಕೂ ಅಚ್ಚರಿಪಡುತ್ತೀರಾ.

    ವಿನೋದ್ ಅಪ್ಪಟ ಹಳ್ಳಿ ಪ್ರತಿಭೆ ಮೂಲತಃ ಮಂಡ್ಯದ (Mandya) ಗೊಬ್ಬರಗಾಲದವರಾಗಿದ್ದಾರೆ. ನಟನಾಗಿ ಕನಸು ಹೊತ್ತು ಬಂದಿದ್ದ ವಿನೋದ್‌ಗೆ ಮೊದಲು ಸಿಕ್ಕಿದ್ದೆ `ಮಜಾಭಾರತ'(Majabharatha) ಕಾಮಿಡಿ ರಿಯಾಲಿಟಿ ಶೋ, ಬಳಿಕ ಗಿಚ್ಚಿ ಗಿಲಿ ಗಿಲಿ ಶೋನ ರನ್ನರ್ ಅಪ್ ಆಗಿ ಗುರುತಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಗೊಬ್ಬರಗಾಲ ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ

     

    View this post on Instagram

     

    A post shared by BUD Pictures (@bud.picturess)

    ಸಾಕಷ್ಟು ಸವಾಲುಗಳನ್ನ ದಾಟಿ ಬಿಗ್ ಬಾಸ್ ಮನೆಯಲ್ಲಿ ಮನರಂಜಿಸುತ್ತಿರುವ ವಿನೋದ್ ಅವರು ತಮ್ಮ ಮೊದಲ ರಿಯಾಲಿಟಿ ಶೋನಲ್ಲಿ ಪ್ರತಿ ತಿಂಗಳು 12,750 ರೂಪಾಯಿಗಳನ್ನ ಗಳಿಸುತ್ತಿದ್ದರು. ತನ್ನ ಹುಟ್ಟೂರಿನಲ್ಲಿ ಕಾರ್ಪೆಂಟರ್, ಅಕ್ಕಸಾಲಿಗನಾಗಿ ಕೆಲಸ ಮಾಡಿದ್ದರು. ಬಳಿಕ ಬೆಂಗಳೂರಿನಲ್ಲಿ ಆಫೀಸ್ ಬಾಯ್ ಆಗಿ ಕೆಲಸ ನಿರ್ವಹಿಸಿರುತ್ತಾರೆ.

    ಬಳಿಕ ಸತತ ಪ್ರಯತ್ನದ ನಂತರ `ಮಜಾಭಾರತ’ ಮೂಲಕ ಗೊಬ್ಬರಗಾಲ ಮೋಡಿ ಮಾಡುತ್ತಾರೆ. ಹೀಗೆ ಒಂದೊಂದೇ ಅವಕಾಶಗಳನ್ನ ಸದುಪಯೋಗಪಡಿಸಿಕೊಂಡು ಈಗ ಬಿಗ್ ಬಾಸ್‌ನಲ್ಲಿ ವಿನೋದ್ ಹೈಲೆಟ್ ಆಗುತ್ತಿದ್ದಾರೆ. ಹುಟ್ಟೂರಿನಲ್ಲಿ ಮನೆ ಕಟ್ಟುವ ಕನಸು ಹೊತ್ತಿರುವ ವಿನೋದ್ ಬಿಗ್ ಬಾಸ್ (Bigg Boss) ಟ್ರೋಫಿ ಗೆಲ್ಲುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]