Tag: ಮಂಜುನಾಥ್

  • ಕದ್ದುಮುಚ್ಚಿ: ಸ್ಟೀಲ್ ಉದ್ಯಮಿ ಮಂಜುನಾಥ್ ಮನಸಲ್ಲಿದ್ದದ್ದು ಉಕ್ಕಿನಂಥಾ ಸಿನಿಮಾಸಕ್ತಿ!

    ಕದ್ದುಮುಚ್ಚಿ: ಸ್ಟೀಲ್ ಉದ್ಯಮಿ ಮಂಜುನಾಥ್ ಮನಸಲ್ಲಿದ್ದದ್ದು ಉಕ್ಕಿನಂಥಾ ಸಿನಿಮಾಸಕ್ತಿ!

    ಬೆಂಗಳೂರು: ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನದ ಸ್ಪರ್ಶದೊಂದಿಗೇ ಕದ್ದುಮುಚ್ಚಿ ಎಂಬ ಹೊಸಬರ ಚಿತ್ರವೊಂದು ಸುದ್ದಿಯಲ್ಲಿದೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ಮತ್ತು ಬಿಗ್ ಬಾಸ್ ಫೇಮಿನ ಮೇಘಶ್ರೀ ಅಭಿನಯದ ಈ ಸಿನಿಮಾವೀಗ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಮೆಲುವಾಗಿ ತಾಕಿದೆ. ಬದುಕಿಗೆ ಹತ್ತಿರವಾದ, ಮನೋರಂಜನಾತ್ಮಕ ಅಂಶಗಳನ್ನೂ ಹೊಂದಿರುವ ಈ ಚಿತ್ರವನ್ನು ಅಕ್ಕರಾಸ್ಥೆಯಿಂದಲೇ ನಿರ್ಮಾಣ ಮಾಡಿರುವವರು ವಿ.ಜಿ ಮಂಜುನಾಥ್.

    ಸಿನಿಮಾ ಎಂಬುದರ ಸೆಳೆತವೇ ಮಾಯೆಯಂಥಾದ್ದು. ಅದು ಎತ್ತೆತ್ತಲ್ಲಿಂದಲೋ ಮನಸುಗಳನ್ನ ಸೆಳೆದು ಬಿಡುತ್ತದೆ. ಗೊತ್ತೇ ಆಗದಂತೆ ತನ್ನ ಭಾಗವಾಗಿಸಿಕೊಂಡು ಬಿಡುತ್ತದೆ. ಈ ಮಾತಿಗೆ ಹತ್ತಾರು ಉದಾಹರಣೆಗಳಿವೆಯಾದರೂ ಕದ್ದುಮುಚ್ಚಿ ಚಿತ್ರದ ನಿರ್ಮಾಪಕರಾದ ಮಂಜುನಾಥ್ ಅದಕ್ಕೆ ತಾಜಾ ಉದಾಹರಣೆಯಂಥವರು.

    ಆದಿಚುಂಚನಗಿರಿ ಸಮೀಪದ ವಡ್ಡರಹಳ್ಳಿಯವರಾದ ಮಂಜುನಾಥ್ ಅಪ್ಪಟ ರೈತಾಪಿ ವರ್ಗದಿಂದಲೇ ಬಂದವರು. ಈವತ್ತಿಗೂ ಅವರ ಬೇರುಗಳಿರೋದು ಅಲ್ಲಿಯೇ. ಆರಂಭ ಕಾಲದಲ್ಲಿ ಮಂಜುನಾಥ್ ಅವರ ಆಸಕ್ತಿಯಿದ್ದದ್ದು ಶಿಕ್ಷಣ ಕ್ಷೇತ್ರದತ್ತ. ಟಿಸಿಎಚ್ ಸೇರಿದಂತೆ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದ ಅವರು ಅಚಾನಕ್ಕಾಗಿ ಇಂಡಸ್ಟ್ರಿಯಲ್ ವಲಯಕ್ಕೆ ಪಾದಾರ್ಪಣೆ ಮಾಡಿದ್ದ 2000ನೇ ಇಸವಿಯಲ್ಲಿ. ಆದಿತ್ಯ ಬಿರ್ಲಾ ಕಂಪೆನಿಯ ಸ್ಟೀಲ್ ಸರಬರಾಜು ಉದ್ಯಮ ಆರಂಭಿಸಿ ಅದರಲ್ಲಿಯೇ ಪರಿಶ್ರಮ ಪಟ್ಟು ಗೆದ್ದ ಮಂಜುನಾಥ್ ಅವರ ಪ್ರಧಾನ ಕನಸಾಗಿದ್ದದ್ದು ಸಿನಿಮಾ.

    ಆರಂಭ ಕಾಲದಿಂದಲೂ ಮಂಜುನಾಥ್ ಅವರಿಗೆ ಸಿನಿಮಾ ಎಂದರೆ ಎಲ್ಲಿಲ್ಲದ ಪ್ರೀತಿ. ಅವರ ಮನೋರಂಜನೆಯ ಮೂಲವಾಗಿದ್ದದ್ದೂ ಕೂಡಾ ಸಿನಿಮಾಗಳೇ. ಅವರೊಬ್ಬ ಉದ್ಯಮಿಯಾಗಿ ಬೆಳೆದ ನಂತರ ಒಂದೊಳ್ಳೆ ಸಿನಿಮಾ ಮಾಡ ಬೇಕೆಂಬ ಹಂಬಲ ತೀವ್ರವಾಗಿತ್ತು. ಮನೋರಂಜನೆಯ ಅಂಶಗಳ ಜೊತೆಗೆ ಈ ಸಮಾಜಕ್ಕೆ ಸಂದೇಶ ಸಾರುವಂಥಾ ಕಥೆಯೊಂದು ಸಿಕ್ಕರೆ ಸಿನಿಮಾ ಮಾಡೋ ನಿರ್ಧಾರದೊಂದಿಗೆ ಮಂಜುನಾಥ್ ಮುಂದುವರೆಯುತ್ತಿದ್ದರು. ಅದೇ ಕಾಲಕ್ಕೆ ಸರಿಯಾಗಿ ನಿರ್ದೇಶಕ ವಸಂತ್ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದರು.

    ವಸಂತ್ ಹೇಳಿದ ಕಥೆ ಇಷ್ಟವಾಗಿ 2016ರಲ್ಲಿ ಅದು ಟೇಕಾಫ್ ಕೂಡಾ ಆಗಿತ್ತು. ಆದರೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬರಬೇಕೆಂಬ ಮನಸ್ಥಿತಿಯ ಮಂಜುನಾಥ್ ಎಲ್ಲದರಲ್ಲಿಯೂ ಅಕ್ಕರಾಸಕ್ತಿಯಿಂದಲೇ ಗಮನ ಹರಿಸಿದ್ದರು. ಆದ್ದರಿಂದಲೇ ಕೊಂಚ ತಡವಾದರೂ ಇಡೀ ಚಿತ್ರ ಚೆಂದಗೆ ಮೂಡಿ ಬಂದಿದೆ ಎಂಬ ಆತ್ಮತೃಪ್ತಿ ಮಂಜುನಾಥ್ ಅವರಲ್ಲಿದೆ.

    ನಗರ ಜೀವನದ ಜಂಜಾಟಗಳಿಂದ ರೋಸತ್ತು ಮತ್ಯಾವುದೋ ಮಾಯೆಯ ಬೆಂಬಿದ್ದು ಹೊರಡೋ ಯುವಕನ ಸುತ್ತಾ ಈ ಚಿತ್ರದ ಕಥೆ ಬಿಚ್ಚಿಕೊಳ್ಳುತ್ತದೆಯಂತೆ. ಆ ಹುಡುಕಾಟದಲ್ಲಿಯೇ ಭರ್ಜರಿ ಮನೋರಂಜನೆಯೊಂದಿಗೆ ಬದುಕಿಗೆ ಹತ್ತಿರವಾದ ಅಂಶಗಳೂ ಅನಾವರಣಗೊಳ್ಳುತ್ತಾ ಸಾಗುತ್ತವೆ. ಕಡೆಗೊಂದು ಪರಿಣಾಮಕಾರಿಯಾದ ಸಂದೇಶವನ್ನೂ ನೀಡಲಾಗಿದೆ. ಒಟ್ಟಾರೆಯಾಗಿ ಇದು ಹೊಸಾ ಸಾಧ್ಯತೆಗಳನ್ನು ಕಾಣಿಸುವಂಥಾ ಪಕ್ಕಾ ಕಮರ್ಶಿಯಲ್ ಚಿತ್ರ.

    ಅದೇನೇ ಅಡೆತಡೆಗಳು ಎದುರಾದರೂ ಮಂಜುನಾಥ್ ಯಾವುದಕ್ಕೂ ಕೊರತೆ ಮಾಡದಂತೆ ಕದ್ದುಮುಚ್ಚಿ ಚಿತ್ರವನ್ನ ರೂಪಿಸಿದ್ದಾರೆ. ಇದರಲ್ಲಿ ಕಲಾವಿದರದ್ದೊಂದು ದೊಡ್ಡ ದಂಡೇ ಇದೆ. ಕಾಮಿಡಿಯೂ ಈ ಚಿತ್ರದ ಪ್ರಧಾನ ಅಂಶ. ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕರ ಕಾಮಿಡಿ ಕಮಾಲ್ ಈ ಚಿತ್ರದಲ್ಲಿದೆ. ಇನ್ನುಳಿದಂತೆ ಬಿ.ವಿ ರಾಧಾ, ಸುಚೇಂದ್ರ ಪ್ರಸಾದ್ ಮುಂತಾದವರ ಅದ್ಧೂರಿ ತಾರಾಗಣವನ್ನ ಕದ್ದುಮುಚ್ಚಿ ಚಿತ್ರ ಹೊಂದಿದೆ.

    ಈ ಮೂಲಕ ಹೊಸಾ ಅಲೆಯ ಚೆಂದದ್ದೊಂದು ಚಿತ್ರವನ್ನ ನಿರ್ಮಾಣ ಮಾಡಿದ ಖುಷಿ ಮಂಜುನಾಥ್ ಅವರಿಗಿದೆ. ಈಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋದರಿಂದ ಇದೇ ತಿಂಗಳ ಇಪ್ಪತ್ತೆರಡನೇ ತಾರೀಕಿನಂದು ಈ ಚಿತ್ರವನ್ನ ತೆರೆಗಾಣಿಸುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಕೆಲಸ ಕೊಡ್ಸೋದಾಗಿ ಮೋಸ- ಕಾಂಗ್ರೆಸ್ ನಾಯಕರ ಆಪ್ತ ಸಿಸಿಬಿ ಬಲೆಗೆ

    ಸರ್ಕಾರಿ ಕೆಲಸ ಕೊಡ್ಸೋದಾಗಿ ಮೋಸ- ಕಾಂಗ್ರೆಸ್ ನಾಯಕರ ಆಪ್ತ ಸಿಸಿಬಿ ಬಲೆಗೆ

    ಬೆಂಗಳೂರು: ಕಾಂಗ್ರೆಸ್ ನಾಯಕರ ಆಪ್ತನೊಬ್ಬ ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಇದೀಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ.

    ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯ ಮುಂಜುನಾಥ್ ಮೋಸ ಮಾಡಿರೋ ವ್ಯಕ್ತಿ. ಈತನಿಗೆ ಸಿಎಂ ಸಿದ್ದರಾಮಯ್ಯರಿಂದ ಹಿಡಿದು, ನಗರ ಪೊಲೀಸ್ ಆಯುಕ್ತರ ತನಕ ಎಲ್ಲರೂ ದೋಸ್ತಿಗಳಾಗಿದ್ದಾರೆ.

    ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಕ್ಲೋಸ್ ಫ್ರೆಂಡ್ ಆಗಿರೋ ಮಂಜುನಾಥ್ ಒಂದು ಫೋನ್ ಮಾಡಿದ್ರೆ ಕಾಂಗ್ರೆಸ್ ಪಾಳಯವೇ ಈತನ ಮುಂದೆ ಬಂದು ನಿಲ್ಲುತ್ತೆ. ಕೈ ನಾಯಕರ ಜೊತೆಗಿನ ಫೋಟೋಗಳನ್ನು ತೋರಿಸಿ, ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ಕೊಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾನೆ. ಆದ್ರೆ ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರು ಮಂಜುನಾಥ್‍ನನ್ನು ಹೆಡೆಮುರಿ ಕಟ್ಟಿ, ಕಂಬಿ ಹಿಂದೆ ತಳ್ಳಿದ್ದಾರೆ.

    ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರ ಜೊತೆ ಫೋಟೋ ತೆಗಿಸಿಕೊಂಡಿರೋ ಮಂಜುನಾಥ್, ಯಾರದೇ ಹುಟ್ಟುಹಬ್ಬ ಬಂದ್ರು ಕೂಡ ಬ್ಯಾನರ್ ಹಾಕಿಸಿಕೊಳ್ತಿದ್ದ. ಬಿ ಗ್ರೂಪ್ ನೌಕರಿ ಸಿಗ್ಬೇಕು ಅಂದ್ರೆ 20 ಲಕ್ಷ, ಸಿ ಗ್ರೂಪ್‍ಗೆ 15 ಲಕ್ಷ ಅಂತ ರೇಟ್ ಫಿಕ್ಸ್ ಮಾಡ್ತಿದ್ದ. ಈತನ ಸಚಿವರೊಂದಿಗಿನ ಫೋಟೋ ನೋಡಿ ಮರುಳಾದ ಜನ ಕೆಲಸಕ್ಕಾಗಿ ಲಕ್ಷಾಂತರ ಹಣ ಕೊಟ್ಟು ಈಗ ಕಣ್ಕಣ್ಣು ಬಿಡುತ್ತಿದ್ದಾರೆ.


    ಮಂಜುನಾಥ್ ಬಂಧನವಾದ ವಿಷಯ ತಿಳಿಯುತ್ತಿದ್ದಂತೆ ಸರ್ಕಾರವೇ ಬಿದ್ದು ಹೋಯ್ತೇನೋ ಎನ್ನುವಂತೆ ಈತನನ್ನು ಬಿಡಿಸಲು ಪ್ರಯತ್ನ ನಡೆದಿದೆ. ಆದ್ರೆ ಸಾಕ್ಷಿ ಇದ್ದ ಕಾರಣ ಕಸ್ಟಡಿಗೆ ಪಡೆದಿರೋ ಸಿಸಿಬಿ ಪೊಲೀಸರು ಮಂಜುನಾಥ್‍ನಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಬಂದ ಶಾಸಕರಿಂದಲೇ ಪ್ರತಿಭಟನೆಗೆ ಸಾಥ್!

    ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಬಂದ ಶಾಸಕರಿಂದಲೇ ಪ್ರತಿಭಟನೆಗೆ ಸಾಥ್!

    ಕೋಲಾರ: ರಸ್ತೆ ದುರಸ್ಥಿಗೆ ಆಗ್ರಹಿಸಿ ಸಾರ್ವಜನಿಕರು ನಡೆಸುತ್ತಿದ್ದ ಪ್ರತಿಭಟನೆಯ ಅಹವಾಲು ಸ್ವೀಕರಿಸಲು ಬಂದ ಶಾಸಕರೇ ಪ್ರತಿಭಟನೆಯಲ್ಲಿ ಭಾಗಿಯಾದ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ.

    ಜಿಲ್ಲೆಯ ಮಾಲೂರು ಹೊರ ವಲಯದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ನೂರಾರು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಆರಂಭವಾಗಿ ನಾಲ್ಕು ಗಂಟೆಗಳಾದರೂ ಯಾವ ಅಧಿಕಾರಿಗಳು, ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಈ ವೇಳೆ ಮಾಲೂರು ಜೆಡಿಎಸ್ ಶಾಸಕ ಮಂಜುನಾಥ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ರಸ್ತೆ ದುರಸ್ಥಿಗೊಳಿಸುವ ಭರವಸೆ ನೀಡಿದರು.

    ಆದರೆ ಶಾಸಕರ ಭರವಸೆಗೆ ತೃಪ್ತರಾಗದ ಪ್ರತಿಭಟನಾಕಾರರು ಪ್ರಶ್ನೆಗಳ ಸುರಿಮಳೆಗೈದರು. ಈ ವೇಳೆ ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ. ಆದ್ದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದ್ದರು.

    ಶಾಸಕರ ಉತ್ತರಕ್ಕೆ ತೃಪ್ತರಾಗದ ಸಾರ್ವಜನಿಕರು ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದರಿಂದ ಶಾಸಕ ಮಂಜುನಾಥ್ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೋಲಾರ ಕಾಂಗ್ರೆಸ್ ಸಂಸದ ಕೆ.ಎಚ್ ಮುನಿಯಪ್ಪ ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಾಲೂರು – ಹೊಸಕೋಟೆ ಮುಖ್ಯ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ, ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತ್ತಿದ್ದವು.

  • ಫೈಟ್ ಮಾಡಿ ಕೊನೆಗೆ ನಾಗರಹಾವನ್ನು ಗುಳುಂ ಮಾಡಿತು ಹುಂಜ: ವಿಡಿಯೋ ನೋಡಿ

    ಫೈಟ್ ಮಾಡಿ ಕೊನೆಗೆ ನಾಗರಹಾವನ್ನು ಗುಳುಂ ಮಾಡಿತು ಹುಂಜ: ವಿಡಿಯೋ ನೋಡಿ

    ಕೋಲಾರ: ಬುಸುಗುಟ್ಟಿದ ನಾಗರಹಾವನ್ನು ಸಲೀಸಾಗಿ ಹುಂಜ ನುಂಗಿದ ಘಟನೆಯೊಂದು ವಕ್ಕಲೇರಿ ಗ್ರಾಮದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

    ಮಂಜುನಾಥ್ ಎಂಬುವವರ ಮನೆಯಲ್ಲಿರುವ ಹುಂಜ ಈ ಸಾಹಸ ಮಾಡಿದೆ. ಮನೆಯ ಹತ್ತಿರ ತಿರುಗಾಡುತ್ತಿದ್ದಾಗ ಅಲ್ಲಿ ನಾಗರಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ತನ್ನ ಮೇಲೆ ಬುಸುಗುಟ್ಟಿದ ನಾಗರಹಾವನ್ನು ಕಂಡು ಅದನ್ನು ಹಿಡಿಯಲು ಹುಂಜ ನಾಗರಹಾವಿನ ಜೊತೆ ಸೆಣಸಾಡಿದೆ.

    ನಾಗರಹಾವು ಹಾಗೂ ಹುಂಜ ಸೆಣಸಾಡಿ ಕೊನೆಯಲ್ಲಿ ನಾಗರಹಾವುವನ್ನೇ ಸಲಿಸಾಗಿ ನುಂಗಿ ನೀರು ಕುಡಿದಿದೆ. ಹುಂಜ ಹಾಗೂ ನಾಗರಹಾವಿನ ನಡುವಿನ ಕಾಳಗದ ಭಯಾನಕ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.

    http://www.youtube.com/watch?v=KALZ-I6b5pU

  • ವಿಡಿಯೋ: ಪ್ರಶ್ನೆ ಮಾಡಿದ ವ್ಯಕ್ತಿಯ ಹಂಡ್ತಿಯನ್ನೇ ಉದಾಹರಣೆ ತೆಗೆದುಕೊಂಡು ಏಕವಚನದಲ್ಲಿ ಶಾಸಕರ ಅವಾಜ್

    ವಿಡಿಯೋ: ಪ್ರಶ್ನೆ ಮಾಡಿದ ವ್ಯಕ್ತಿಯ ಹಂಡ್ತಿಯನ್ನೇ ಉದಾಹರಣೆ ತೆಗೆದುಕೊಂಡು ಏಕವಚನದಲ್ಲಿ ಶಾಸಕರ ಅವಾಜ್

    ಮೈಸೂರು: ಮತದಾರರು ಸಾರ್ವಜನಿಕವಾಗಿ ಶಾಸಕರನ್ನು ಪ್ರಶ್ನಿಸುವುದೇ ತಪ್ಪಾ? ಒಂದು ವೇಳೆ ಪ್ರಶ್ನಿಸಿದರೆ ಪ್ರಶ್ನೆ ಮಾಡಿದವರ ಕುಟುಂಬಸ್ಥರನ್ನು ಉದಾಹರಣೆಗೆ ತೆಗೆದುಕೊಂಡು ಏಕವಚನದಲ್ಲೆ ಗದರುವುದು ಶಾಸಕರ ಸುಸಂಸ್ಕೃತ ವರ್ತನೆಯಾ? ಇಂತಹ ಪ್ರಶ್ನೆ ಮೂಡಿಸುವಂತಹ ವೀಡಿಯೋ ಈಗ ವೈರಲ್ ಆಗಿದೆ.

    ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ. ಮಂಜುನಾಥ್ ಸರ್ಕಾರದ ಸಾರ್ವಜನಿಕ ಸಭೆಯಲ್ಲೆ ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದ ವ್ಯಕ್ತಿಗಳಿಗೆ ಹೀನಾಮಾನವಾಗಿ ಗದರಿಸಿದ್ದಾರೆ. ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ಸ್ವಚ್ಛತಾ ಸಂಭ್ರಮ ಕಾರ್ಯಕ್ರಮದಲ್ಲಿ ಶಾಸಕರು ಇಂತಹ ವರ್ತನೆ ಪ್ರದರ್ಶಿಸಿದ್ದಾರೆ.

    ಶಾಸಕರು ಭಾಷಣ ಮಾಡುವಾಗ ಮಧ್ಯ ವ್ಯಕ್ತಿಯೊಬ್ಬ ಶೌಚಾಲಯ ಕಟ್ಟುವ ವಿಚಾರದಲ್ಲಿ ಅಧಿಕಾರಿಯೊಬ್ಬರ ನಡೆ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಕೋಪಗೊಂಡ ಶಾಸಕರು, ಬರೋ ನೀನೇ ಮೈಕ್ ಮುಂದೆ ಮಾತಾಡು. ನಿನ್ನ ಹೆಂಡತಿ ಬೆಳಗ್ಗೆ ನಾಲ್ಕು ಗಂಟೆಗೆ ಬಯಲು ಪ್ರದೇಶದಲ್ಲಿ ಶೌಚಾಲಯಕ್ಕೆ ಕೂತಾಗ ಆಕೆಯನ್ನು ಅಲ್ಲಿಂದ್ದ ಎದ್ದೇಳಿಸಲು ಆ ಅಧಿಕಾರಿ ಬಂದು ವಿಷಲ್ ಊದಬೇಕಿತ್ತೇನೋ. ನೀನು ದೊಡ್ಡ ಸ್ವಾಭಿಮಾನಿ, ಸುಮ್ನೆ ನಿಂತುಕೋ ಎಂದು ದರ್ಪದಿಂದ ಮಾತಾಡಿದ್ದಾರೆ.

    ಸಭೆಯಲ್ಲಿ ನಂತರ ನಡೆದ ಕೆಲ ಗದ್ದಲದ ವೇಳೆಯೂ ತಮ್ಮನ್ನು ಪ್ರಶ್ನಿಸಿದವರ ಮೇಲೆ ಏಕ ವಚನದಲ್ಲೇ ಶಾಸಕರು ಹರಿಹಾಯ್ದಿದ್ದಾರೆ.

    https://www.youtube.com/watch?v=WErgp2oF7vA&feature=youtu.be

  • ನನ್ನ  ಮನೆಯಲ್ಲಿ ಸಿಕ್ಕಿದ ಹಣ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು: ರೌಡಿ ನಾಗನ ಮನಿ ಬಾಂಬ್

    ನನ್ನ ಮನೆಯಲ್ಲಿ ಸಿಕ್ಕಿದ ಹಣ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು: ರೌಡಿ ನಾಗನ ಮನಿ ಬಾಂಬ್

    – ಈ ವಿಡಿಯೋದಲ್ಲಿರುವ ಸತ್ಯಾಸತ್ಯತೆ ಪಬ್ಲಿಕ್ ಟಿವಿ ದೃಢೀಕರಿಸಲ್ಲ
    – ಮಂಜುನಾಥ್ ನನ್ನ ಪಿಎ ಅಲ್ಲ: ಸಿಎಂ

    ಬೆಂಗಳೂರು: ನನ್ನ ಮನೆಯಲ್ಲಿ ಸಿಕ್ಕಿದ ಹಣ ಸರ್ಕಾರಿ ಅಧಿಕಾರಿಗಳ ದುಡ್ಡು ಎನ್ನುವ ಸ್ಫೋಟಕ ಮಾಹಿತಿಯನ್ನು ರೌಡಿ ನಾಗ ತಿಳಿಸಿದ್ದಾನೆ.

    ವಿಡಿಯೋ ಹೇಳಿಕೆಯಲ್ಲಿ, ಮನೆಯಲ್ಲಿದ್ದ ಕಪ್ಪು ಹಣ ಸಿಎಂ ಪಿಎ ಮಂಜುನಾಥ್‍ಗೆ ಸೇರಿದ್ದು. ನನ್ನ ಮನೆಯಲ್ಲಿ ಐಎಎಸ್ ಅಧಿಕಾರಿಗಳೇ ಹಣವನ್ನು ಬಚ್ಚಿಡುತ್ತಿದ್ದರು ಎನ್ನುವ ಮನಿ ಬಾಂಬನ್ನು ನಾಗರಾಜ್ ಅಲಿಯಾಸ್ ರೌಡಿನಾಗ ಹೇಳಿದ್ದಾನೆ.

    ಐಪಿಎಸ್ ಅಧಿಕಾರಿಗಳೇ ಖುದ್ದು ನೋಟು ಬದಲಿಸಲು ನನ್ನ ಬಳಿ ಬಂದಿದ್ರು. ಕಾರ್ ಡೀಲರ್ ನಡೆಸುತ್ತಿರುವ ಕಿಶೋರ್, ಮಧು, ಉಮೇಶ್, ನವೀನ, ಗಣೇಶ ನನ್ನ ಬಳಿ ಹಣ ತೆಗೆದುಕೊಂಡು ಬಂದಿದ್ದರು. ಈ ಹಳೇ ನೋಟು ವಿನಿಮಯದ ದಂಧೆಯ ರೂವಾರಿ ಸಿಎಂ ಪಿಎ ಮಂಜುನಾಥ್. ಅಧಿಕಾರಿಗಳ ಬಣ್ಣ ಬಯಲಾಗುತ್ತೆ ಅಂತ ಕೊನೆಗೆ ನನ್ನನ್ನು ಸಾಯಿಸಲು ಬಂದಿದ್ರು. ಮನೆ ಮೇಲೆ ದಾಳಿ ಹೆಸರಲ್ಲಿ ನನ್ನನ್ನ ಕೊಲ್ಲೋಕೆ ಪೊಲೀಸರು ಸಂಚು ರೂಪಿಸಿದ್ರು. ನಾನು ತಪ್ಪು ಮಾಡಿಲ್ಲ. ನನ್ನನ್ನು ಬದುಕಲು ಬಿಡಿ ಎಂದ ರೌಡಿನಾಗ ವಿಡಿಯೋದಲ್ಲಿ ತಿಳಿಸಿದ್ದಾನೆ.

    ಇವರೆಲ್ಲ ನನ್ನ ಮನೆ ಬಳಿ ದುಡ್ಡು ತಂದಿದ್ದಕ್ಕೆ ಸಿಸಿಟಿವಿ ವಿಡಿಯೋ ಇದೆ. ಇವರ ಬಂಡವಾಳ ಬಯಲಾಗುತ್ತೆ ಅಂತಾ ನನ್ನನ್ನ ಶೂಟ್ ಮಾಡಲು ಬಂದಿದ್ರು. ನಾನು ಏನು ತಪ್ಪು ಮಾಡದಿದ್ದರೂ ನನ್ನನ್ನು ಅವರು ಬದುಕಲು ಬಿಡುತ್ತಿಲ್ಲ. ಉಮೇಶ್‍ನನ್ನು ನಾನು ಕಿಡ್ನ್ಯಾಪ್ ಮಾಡಿಲ್ಲ. ಇಬ್ಬರು ಗನ್ ಮ್ಯಾನ್ ಗಳು ಅವನ ಜೊತೆ ಇರ್ತಾರೆ ಇದು ಹೇಗೆ ಸಾಧ್ಯ..?ಇವರ ಅಕ್ರಮ ಹಣ ಮರೆ ಮಾಚಲು ನನ್ನನ್ನ ಮುಗಿಸಲು ಮಾಡ್ತಿರೊ ತಂತ್ರ ಇದು ಎಂದು ನಾಗ ವಿಡಿಯೋದಲ್ಲಿ ಹೇಳಿದ್ದಾನೆ.

    ಮಂಜುನಾಥ್ ನನ್ನ ಪಿಎ ಅಲ್ಲ: ನಾಗನ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರ್ರಿ ಅದು ಮಂಜುನಾಥ್? ಮಂಜುನಾಥ್ ನನ್ನ ಪಿಎ ಅಲ್ಲ. ಆ ಹೆಸರಿನವರು ಯಾರು ಇಲ್ಲ. ಬಾಂಬ್ ನಾಗನಿಗೂ ನಮಗೂ ಏನ್ರೀ ಸಂಬಂಧ? ಗೊತ್ತಿಲ್ಲದೇ ಏನೇನೂ ಕೇಳಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

    ದುಡ್ಡು ಕೊಟ್ಟಿಲ್ಲ: ರೌಡಿ ನಾಗ ಹೈಕೋರ್ಟ್ ನ್ಯಾಯಾಧೀಶರಿಗೆ ಕಿಕ್ ಬ್ಯಾಕ್ ನೀಡಿರುವ ಆರೋಪವನ್ನು ಆತನ ವಕೀಲ ಶ್ರೀ ರಾಮರೆಡ್ಡಿ ತಿರಸ್ಕರಿಸಿದ್ದಾರೆ. ನಾಗ ಯಾವುದೇ ಜಡ್ಜ್ ಗಳಿಗೆ ಹಣ ನೀಡಿಲ್ಲ. ನಾಗರಾಜ್ ಸಹಿಯನ್ನ ಸ್ಕ್ಯಾನ್ ಮಾಡಿ ಈ ರೀತಿ ಮಾಡಲಾಗಿದೆ. ನಾಗರಾಜ್‍ಗೆ ಜಾಮೀನು ಸಿಗಬಾರದು ಅಂತಾ ಈ ರೀತಿ ಮಾಡಲಾಗಿದೆ. ಇದೆಲ್ಲಾ ಕಾಸರಘಟ್ಟ ರಾಜಣ್ಣನದ್ದೇ ಕೃತ್ಯ ಎಂದು ಅವರು ಹೇಳಿದ್ದಾರೆ. ದುರುದ್ದೇಶ ಪೂರಿತವಾದ ಕೃತ್ಯದ ಬಗ್ಗೆ ರಿಜಿಸ್ಟ್ರಾರ್‍ಗೆ ಶ್ರೀರಾಮ ರೆಡ್ಡಿ ದೂರು ನೀಡಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೂ ಫ್ಯಾಕ್ಸ್ ಮುಖಾಂತರ ದೂರು ನೀಡಿದ್ದಾರೆ.

    ಇದನ್ನೂ ಓದಿ: ಬಾಂಬ್ ನಾಗನ ಕೊಠಡಿಯ ಮಂಚದ ಕಳಗೆ ಸಾವಿರ ಕೋಟಿ ಮೌಲ್ಯದ ಭೂ ದಾಖಲೆ ಪತ್ತೆ – ನಾಗನ ಹೈಫೈ ಮನೆ ಹೇಗಿದೆ ಗೊತ್ತಾ?

    ಇದನ್ನೂ ಓದಿ: ಬಾಂಬ್ ನಾಗನ ಮನೆಯಲ್ಲಿ ಬಗೆದಷ್ಟೂ ಸಿಕ್ತಿದೆ ಕೋಟಿ ಕೋಟಿ ಹಳೇ ನೋಟು