Tag: ಮಂಗಳೂರು ಮಹಾನಗರ ಪಾಲಿಕೆ

  • ಬಡವರನ್ನು ಬೀದಿ ಪಾಲು ಮಾಡಿದ್ರೆ ಜೋಕೆ: ಮಂಗಳೂರು ಮಹಾನಗರ ಪಾಲಿಕೆಗೆ ರಾಕೇಶ್ ಮಲ್ಲಿ ಎಚ್ಚರಿಕೆ

    ಬಡವರನ್ನು ಬೀದಿ ಪಾಲು ಮಾಡಿದ್ರೆ ಜೋಕೆ: ಮಂಗಳೂರು ಮಹಾನಗರ ಪಾಲಿಕೆಗೆ ರಾಕೇಶ್ ಮಲ್ಲಿ ಎಚ್ಚರಿಕೆ

    ಮಂಗಳೂರು: ಕಳೆದ 32 ವರ್ಷಗಳಿಂದ ರವಿವಾರ ಸಂತೆ ವ್ಯಾಪಾರ ಮಾಡುತ್ತಿದ್ದ ಬಡವರನ್ನು ಯಾವುದೇ ಕಾರಣಕ್ಕೂ ಬೀದಿ ಪಾಲು ಮಾಡಬಾರದು. ಮತ್ತೆ ರವಿವಾರ ಸಂತೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಪಾಲಿಕೆ ವಿರುದ್ಧ ನಿರಂತರ ಹೋರಾಟ ಅನಿವಾರ್ಯ ಎಂದು ಮಂಗಳೂರು ಮಹಾನಗರ ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಎಚ್ಚರಿಸಿದ್ದಾರೆ.

    ಸುರತ್ಕಲ್ ನಲ್ಲಿ ರವಿವಾರ ನಡೆಯುತ್ತಿದ್ದ ಸಂತೆ ವ್ಯಾಪಾರ ಬಂದ್ ಮಾಡಿರುವುದನ್ನು ವಿರೋಧಿಸಿ ಇಂಟಕ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರಾಕೇಶ್ ಮಲ್ಲಿ, ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಯವರಿಗೆ ರವಿವಾರ ಸಂತೆಗೆ ಅನುಮತಿ ನೀಡಲು ಮನವಿ ಮಾಡಲಾಗುವುದು. ಅನುಮತಿ ನೀಡದೆ ಹೋದಲ್ಲಿ ಹೋರಾಟದ ಹಾದಿ ತುಳಿಯ ಬೇಕಾಗುತ್ತದೆ ಎಂದು ಪಾಲಿಕೆಯ ವಿರುದ್ಧ ಕಿಡಿಕಾರಿದ್ದಾರೆ.

    ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸುಪ್ರೀಂ ಕೋರ್ಟ್ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದೆ. ಅದಲ್ಲದೆ ಇದೀಗ ಸರ್ಕಾರದಿಂದ ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ. ಆದರೆ ಸುರತ್ಕಲ್‍ನಲ್ಲಿ ಮಾತ್ರ ಮಂಗಳೂರು ಮಹಾನಗರ ಪಾಲಿಕೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುತ್ತಿದೆ. ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ಮಾಡುವ ಬಡವರ ವಿರುದ್ಧ ಯಾರಿಗೆ ದ್ವೇಷವಿದೆ ಎಂಬುದು ಅರ್ಥವಾಗುತ್ತಿಲ್ಲ. ಸ್ಟೇಟ್ ಬ್ಯಾಂಕ್ ನಲ್ಲಿ ನಿತ್ಯವೂ ವ್ಯಾಪಾರವಿದೆ. ಇಲ್ಲಿನ ಸಂತೆಗಳಲ್ಲಿ ಉತ್ತರ ಕರ್ನಾಟಕದ ಸಾವಿರಾರು ಕುಟುಂಬಗಳು ಬದುಕಿನ ಹಾದಿ ಕಂಡುಕೊಂಡಿದೆ. ತಕ್ಷಣವೇ ಪಾಲಿಕೆ ರವಿವಾರದ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

    ಇಂಟಕ್‍ನ ದ.ಕ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ ಕೊರೊನಾ ಸಂದರ್ಭ ನಾವು ಸರ್ಕಾರದ ನಿರ್ದೇಶನ ಪಾಲಿಸಿದ್ದೆವು. ಆ ಬಳಿಕ ಪಾಲಿಕೆ ಏಕಾಏಕಿ ರವಿವಾರ ಸಂತೆಗೆ ನಿರ್ಭಂಧ ಹೇರಿತ್ತು. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಆದರು ಸಮಸ್ಯೆ ಬಗೆಹರಿದಿಲ್ಲ ಈಗಿನ ಆಡಳಿತ ಪಕ್ಷಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇಂಟಕ್ ಮುಖಂಡರಾದ ಅಬೂಬಕರ್ ಕೃಷ್ಣಾಪುರ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ, ಜಯಕರ್ನಾಟಕ ಸಂಘಟನೆಯ ವೈ. ರಾಘವೇಂದ್ರ ರಾವ್, ಇನ್ನಿತರ ಪ್ರಮುಖ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

  • ಆಡಳಿತರೂಢ ಕಾಂಗ್ರೆಸ್ಸಿಗೆ ಸೋಲು – ಬಿಜೆಪಿ ತೆಕ್ಕೆಗೆ ಮಂಗಳೂರು ಪಾಲಿಕೆ

    ಆಡಳಿತರೂಢ ಕಾಂಗ್ರೆಸ್ಸಿಗೆ ಸೋಲು – ಬಿಜೆಪಿ ತೆಕ್ಕೆಗೆ ಮಂಗಳೂರು ಪಾಲಿಕೆ

    ಮಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿ ಭಾರೀ ಗೆಲುವು ಕಂಡಿದೆ.

    ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳ ಪೈಕಿ 44 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜಯಭೇರಿ ಬಾರಿಸಿದೆ. ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದರೂ ಸಹ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ.

    ಈ ಮೂಲಕ ಕಾಂಗ್ರೆಸ್ಸಿಗೆ ಭಾರೀ ಮುಖಭಂಗವಾಗಿದ್ದು, ಕೇವಲ 14 ವಾರ್ಡ್‌ಗಳನ್ನು ಮಾತ್ರ ಗೆದ್ದಿದೆ. ಬಿಜೆಪಿ ಭರ್ಜರಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಏರಿದೆ. ಬಹುಮತ ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಒಟ್ಟು 60 ವಾರ್ಡ್‍ಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14, ಜೆಡಿಎಸ್ ಶೂನ್ಯ ಹಾಗೂ ಇತರೆ 02 ಸ್ಥಾನಗಳನ್ನು ಪಡೆದುಕೊಂಡಿವೆ.

    ಯಾರ್ಯಾರು ಜಯಗಳಿಸಿದ್ದಾರೆ?
    ಸುರತ್ಕಲ್ (ಪಶ್ಚಿಮ) ಶೋಭಾ ರಾಜೇಶ್(ಬಿಜೆಪಿ), ಸುರತ್ಕಲ್ (ಪೂರ್ವ) ಎ.ಶ್ವೇತಾ (ಬಿಜೆಪಿ), ಕಾಟಿಪಳ್ಳ(ಪೂರ್ವ) ಲೋಕೇಶ್ ಬೊಳ್ಳಾಜೆ(ಬಿಜೆಪಿ), ಕಾಟಿಪಳ್ಳ(ಕೃಷ್ಣಾಪುರ) ಲಕ್ಷ್ಮಿ ಶೇಖರ್ (ಬಿಜೆಪಿ), ಕಾಟಿಪಳ್ಳ(ಉತ್ತರ) ಶಂಶಾದ್ ಅಬೂಬ್‍ಕ್ಕರ್ (ಎಸ್‍ಡಿಪಿಐ), ಇಡ್ಯಾ(ಪೂರ್ವ) ಸರಿತಾ ಶಶಿಧರ್ (ಬಿಜೆಪಿ), ಇಡ್ಯಾ (ಪಶ್ಚಿಮ) ನಯನ ಆರ್ ಕೋಟ್ಯಾನ್ (ಬಿಜೆಪಿ), ಹೊಸಬೆಟ್ಟು-ವರೂಣ್ ಚೌಟ(ಬಿಜೆಪಿ), ಕುಳಾಯಿ-ಜಾನಕಿ ಯಾನೆ ವೇದಾವತಿ (ಬಿಜೆಪಿ), ಕುಂಜತ್ತಬೈಲ್ (ದಕ್ಷಿಣ) ಸುಮಂಗಲ(ಬಿಜೆಪಿ), ಬೈಕಂಪಾಡಿ-ಸುಮಿತ್ರಾ (ಬಿಜೆಪಿ), ಬಂಗ್ರ ಕೂಳೂರು- ಕಿರಣ್ ಕುಮಾರ್ (ಬಿಜೆಪಿ), ಪಣಂಬೂರು ಸುನಿತಾ(ಬಿಜೆಪಿ), ದೇರೇಬೈಲ್(ಉತ್ತರ) ಮನೋಜ್ ಕುಮಾರ್ (ಬಿಜೆಪಿ).

    ಪಂಜಿಮೊಗರು- ಅನಿಲ್ ಕುಮಾರ್ (ಕಾಂಗ್ರೆಸ್), ಕಾವೂರು ಎ.ಗಾಯತ್ರಿ (ಬಿಜೆಪಿ), ಕುಂಜತ್ತಬೈಲ್(ಉತ್ತರ) ಶರತ್ ಕುಮಾರ್ (ಬಿಜೆಪಿ), ಪಚ್ಚನಾಡಿ- ಸಂಗೀತಾ ಆರ್.ನಾಯಕ್(ಬಿಜೆಪಿ), ಮರಕಡ-ಲೋಹಿತ್ ಅಮಿನ್ (ಬಿಜೆಪಿ), ತಿರುವೈಲ್-ಹೇಮಲತಾ ರಘು ಸಾಲಿಯಾನ್ (ಬಿಜೆಪಿ), ದೇರೆಬೈಲು(ಪಶ್ಚಿಮ) ಜಯಲಕ್ಷ್ಮಿ ವಿ.ಶೆಟ್ಟಿ(ಬಿಜೆಪಿ), ಪದವು(ಪಶ್ಚಿಮ) ವನಿತಾ ಪ್ರಸಾದ್ (ಬಿಜೆಪಿ), ದೇರೆಬೈಲು(ನೈರುತ್ಯ) ಗಣೇಶ್ (ಬಿಜೆಪಿ), ಕದ್ರಿ ಪದವು- ಜಯಾನಂದ ಅಂಚನ್(ಬಿಜೆಪಿ), ಬೋಳೂರು ಜಗದೀಶ ಶೆಟ್ಟಿ(ಬಿಜೆಪಿ), ದೇರೆಬೈಲು(ಪೂರ್ವ) ರಂಜನಿ ಕೋಟ್ಯಾನ್(ಬಿಜೆಪಿ), ಮಣ್ಣಗುಡ್ಡ- ಸಂಧ್ಯಾ(ಬಿಜೆಪಿ), ಕಂಬ್ಳ-ಲೀಲಾವತಿ (ಬಿಜೆಪಿ), ದೇರೆಬೈಲು(ದಕ್ಷಿಣ) ಎಂ.ಶಶಿಧರ ಹೆಗ್ಡೆ(ಕಾಂಗ್ರೆಸ್), ಕೊಡಿಯಾಲ್ ಬೈಲ್- ಸುಧೀರ್ ಶೆಟ್ಟಿ(ಬಿಜೆಪಿ), ಬಜಾರ್-ಅಶ್ರಾಫ್(ಕಾಂಗ್ರೆಸ್), ಬೋಳಾರ್- ಭಾನುಮತಿ(ಬಿಜೆಪಿ), ಜೆಪ್ಪು- ಎಸ್.ಭರತ್ ಕುಮಾರ್ (ಬಿಜೆಪಿ), ಜಪ್ಪಿನಮೊಗರು- ವೀಣಾ ಮಂಗಳ(ಬಿಜೆಪಿ).

    ಮಂಗಳಾದೇವಿ- ಪ್ರೇಮಾನಂದ ಶೆಟ್ಟಿ(ಬಿಜೆಪಿ), ಹ್ಯೂಗೆ ಬಜಾರ್- ರೇವತಿ(ಬಿಜೆಪಿ), ಬಂಗ್ರೆ- ಮುನೀಬ್ ಬಂಗ್ರೆ(ಎಸ್‍ಡಿಪಿಐ), ಡೊಂಗರಕೇರಿ- ಎಂ.ಜಯಶ್ರೀ ಕುಡ್ವ(ಬಿಜೆಪಿ), ಕುದ್ರೋಳಿ- ಸಂಶುದ್ದೀನ್(ಕಾಂಗ್ರೆಸ್), ಬಂದರ್- ಝೀನತ್ ಸಂಶುದ್ದೀನ್(ಕಾಂಗ್ರೆಸ್), ಪೋರ್ಟ್- ಅಬ್ದುಲ್ ಲತೀಫ್(ಕಾಂಗ್ರೆಸ್), ಕಂಟೋನ್ಮೆಂಟ್- ದಿವಾಕರ(ಬಿಜೆಪಿ), ಮಿಲಾಗ್ರೀಸ್- ಅಬ್ದುಲ್ ರವೂಫ್(ಕಾಂಗ್ರೆಸ್), ಕಂಕನಾಡಿ ವೆಲೆನ್ಸಿಯಾ- ಸಂದೀಪ್(ಬಿಜೆಪಿ), ಕಂಕನಾಡಿ- ಟಿ.ಪ್ರವೀಣ್ ಚಂದ್ರ ಆಳ್ವಾ(ಕಾಂಗ್ರೆಸ್), ಅಳಪೆ(ಉತ್ತರ) ರೂಪ ಶ್ರೀ ಪೂಜಾರಿ(ಬಿಜೆಪಿ), ಕಣ್ಣೂರು- ಚಂದ್ರಾವತಿ(ಬಿಜೆಪಿ), ಬಿಜೈ- ಪ್ರಶಾಂತ್ ಆಳ್ವ(ಬಿಜೆಪಿ), ಕದ್ರಿ (ಉತ್ತರ) ಶಖಿಲ ಕಾವ(ಬಿಜೆಪಿ), ಕದ್ರಿ(ದಕ್ಷಿಣ) ಕದ್ರಿ ಮನೋಹರ ಶೆಟ್ಟಿ(ಬಿಜೆಪಿ), ಶಿವಭಾಗ್- ಕಾವ್ಯ ನಟರಾಜ ಆಳ್ವ (ಬಿಜೆಪಿ), ಪದವು (ಸೆಂಟ್ರಲ್) ಕಿಶೋರ್ ಕೊಟ್ಟಾರಿ(ಬಿಜೆಪಿ), ಪದವು(ಪೂರ್ವ) ಕೆ.ಭಾಸ್ಕರ್ (ಕಾಂಗ್ರೆಸ್), ಮರೋಳಿ- ಕೇಶವ(ಕಾಂಗ್ರೆಸ್), ಬೆಂದೂರ್- ನವೀನ್ ಆರ್.ಡಿಸೋಜ(ಕಾಂಗ್ರೆಸ್), ಫಳ್ನೀರ್- ಜೆಸಿಂತಾ ವಿಜಯ ಆಲ್ಫ್ರೆಡ್ (ಕಾಂಗ್ರೆಸ್), ಕೋರ್ಟ್- ಎ.ಸಿ.ವಿನಯ ರಾಜ್(ಕಾಂಗ್ರೆಸ್), ಸೆಂಟ್ರಲ್ ಮಾರ್ಕೆಟ್- ಪೂರ್ಣಿಮಾ(ಬಿಜೆಪಿ).