Tag: ಮಂಗಳೂರು ಚಲೋ

  • ಬೆಂಗಳೂರು ಚಾರ್ಜ್ ಶೀಟ್ ಆಯ್ತು, ಈಗ ಬಿಜೆಪಿಯ ಮತ್ತೊಂದು ಎಡವಟ್ಟು ಬಹಿರಂಗ!

    ಬೆಂಗಳೂರು ಚಾರ್ಜ್ ಶೀಟ್ ಆಯ್ತು, ಈಗ ಬಿಜೆಪಿಯ ಮತ್ತೊಂದು ಎಡವಟ್ಟು ಬಹಿರಂಗ!

    ಮಂಗಳೂರು: ಬೆಂಗಳೂರು ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಮೇಲೆ ಆರೋಪ ಮಾಡುವ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಬಿಜೆಪಿ, ಇದೀಗ ಹಿಂದೂ ಕಾರ್ಯಕರ್ತರ ಹತ್ಯೆಯ ವಿಚಾರದಲ್ಲಿ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳುವ ಮೂಲಕ ಚರ್ಚೆಗೆ ಗ್ರಾಸವಾಗಿದೆ.

    ರಾಜ್ಯದಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಬಿಜೆಪಿ ನಾಯಕರು ಹೇಳಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಮಾರ್ಚ್ 6 ರಂದು ಮಂಗಳೂರಿನಲ್ಲಿ ನಡೆಯಲಿರುವ `ಮಂಗಳೂರು ಚಲೋ’ ಕಾರ್ಯಕ್ರಮದ ಮುದ್ರಿತ ಕರಪತ್ರದಲ್ಲಿ ಕೇವಲ 16 ಮಂದಿಯ ಭಾವಚಿತ್ರ ಸಹಿತ ವಿವರ ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಬಿಜೆಪಿಯ ಚಾರ್ಜ್ ಶೀಟ್ ನಲ್ಲಿ ಲೋಪ: ವೈರಲ್ ಆಯ್ತು ಎಡವಟ್ಟು

    ಮಾರ್ಚ್ 6 ಮಂಗಳೂರು ಚಲೋ ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಭಾಗವಹಿಸಲಿದ್ದಾರೆ. ಈ ಹಿಂದೆ 23 ಕಾರ್ಯಕರ್ತರ ಪಟ್ಟಿ ಮಾಡಿದ್ದ ಹಾಗೂ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಬಿಜೆಪಿಯು ಈಗ ಏಕಾಏಕಿ 7 ಮಂದಿಯನ್ನು ಕೈಬಿಟ್ಟಿದ್ದು ಯಾಕೆ ಎನ್ನುವುದು ಕೂಡಾ ವಿವಾದಕ್ಕೆ ಕಾರಣವಾಗಿದೆ.

  • ಇನ್ಸ್ ಪೆಕ್ಟರ್ ಮುಂದೆ ಮೇಜು ಕುಟ್ಟಿ ಸಂಸದ ನಳಿನ್ ಕುಮಾರ್ ಅವಾಜ್

    ಇನ್ಸ್ ಪೆಕ್ಟರ್ ಮುಂದೆ ಮೇಜು ಕುಟ್ಟಿ ಸಂಸದ ನಳಿನ್ ಕುಮಾರ್ ಅವಾಜ್

    ಮಂಗಳೂರು: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ಪೊಲೀಸ್ ಇನ್ಸ್ ಪೆಕ್ಟರ್ ಜೊತೆಗೆ ದರ್ಪದಲ್ಲಿ ಮಾತನಾಡಿ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.

    ಬಿಜೆಪಿ ಯುವ ಮೋರ್ಚಾದ ಬಿಜೆಪಿ ರ‍್ಯಾಲಿಯ ವೇಳೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಕದ್ರಿಯ ಗೋರಕ್ಷನಾಥ ಸಭಾಂಗಣದಲ್ಲಿ ಇರಿಸಿದ್ದರು.

    ಕಾರ್ಯಕರ್ತರನ್ನು ಬಿಡುಗಡೆ ಮಾಡಲು ತಡಮಾಡಿದ್ದಕ್ಕೆ ಆಕ್ರೋಶಗೊಂಡ ನಳಿನ್ ಕುಮಾರ್ ಕಟೀಲು ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಮೇಲೆ ಆಕ್ರೋಶವಾಗಿ ಮಾತನಾಡಿ ದರ್ಪವನ್ನು ತೋರಿಸಿದ್ದಾರೆ.

    ಈ ವೇಳೆ ಮಾರುತಿ ನಾಯಕ್ ಮೊಬೈಲ್ ಕರೆ ಮಾಡಲು ಮುಂದಾದಾಗ ಕಟೀಲು, ನಿಮ್ ಚಾರ್ಜ್, ನಮ್ಮ ಚಾರ್ಜ್ ಅಲ್ಲ. ಸಹಿ ಮಾಡಿ. ಜೋರು ಮಾಡಿದ್ರೆ ಈಗಲೇ ಬಂದ್ ಕಾಲ್ ಕೊಡ್ತೀನಿ, ನೀವೇ ಅನುಭವಿಸಬೇಕು. ಏನು ತಿಳ್ಕೊಂಡಿದ್ದಾರೆ ಕಮಿಷನರ್. ನೀವು ಏನು ತಿಳ್ಕೊಂಡಿದ್ದೀರಾ..? ಆಟ ಆಡ್ತೀರಾ ನಮ್ಮತ್ರ? ನಮ್ಮ ಸಂಘಟನೆಯವ್ರು ತೆಗೆದು ಬಿಸಾಕ್ತಾರೆ. ಕೊಡ್ರಿ ಈಚೆ. ಇನ್ನು ಅರ್ಧ ಗಂಟೆ ಲಾಕ್ ಮಾಡಿದ್ರೆ ಬಂದ್ ಕರೆ ಕೊಡ್ತೀನಿ. ನೀವೇ ಅನುಭವಿಸಬೇಕು. ಕೊಡ್ರಿ ಈಚೆ. ಇಲ್ಲಾಂದ್ರೆ ಬಂದ್ ಕರೆ ಕೊಡ್ತೀನಿ. ನೀವೇ ಜವಾಬ್ದಾರಿ ನಿನ್ನ ಹೆಸರಲ್ಲೇ ಬಂದ್ ಕಾಲ್ ಕೊಡ್ತೇನೆ. ಏನ್ ತಿಳ್ಕೊಂಡಿದ್ದಿ..? ಏನ್ ನಮ್ದು..? ಅರ್ಧ ಗಂಟೆ ಆಯ್ತು ಫೋನ್ ಮಾಡಿ ಎಂದು ಹೇಳಿ ದರ್ಪದಲ್ಲಿ ಮಾತನಾಡಿದ್ದಾರೆ.

    https://youtu.be/z0V_F1q5DDM

  • ಪ್ರತಿಪಕ್ಷಗಳು ಶಾಂತ ರೀತಿಯಲ್ಲಿ ಹೋರಾಟ ಮಾಡುವುದು ತಪ್ಪೇ: ಸರ್ಕಾರಕ್ಕೆ ಬಿಎಸ್‍ವೈ ಪ್ರಶ್ನೆ

    ಪ್ರತಿಪಕ್ಷಗಳು ಶಾಂತ ರೀತಿಯಲ್ಲಿ ಹೋರಾಟ ಮಾಡುವುದು ತಪ್ಪೇ: ಸರ್ಕಾರಕ್ಕೆ ಬಿಎಸ್‍ವೈ ಪ್ರಶ್ನೆ

    ಮಂಗಳೂರು: ನಗರದಲ್ಲಿ ಸಮಾವೇಶ ಬೇಕಾದ್ರೆ ನಡೆಸಲಿ. ಆದ್ರೆ ಬೈಕ್ ರ‍್ಯಾಲಿ ನಡೆಸಬಾರದು ಅಂತ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಬಂದೂಕುಗಳನ್ನಿಟ್ಟುಕೊಂಡು ಮಂಗಳೂರಿಗೆ ಬರ್ತಾ ಇದ್ದೇವಾ ಎಂದು ಪ್ರಶ್ನಿಸಿದ್ರು. ಮೋಟಾರ್ ಬೈಕ್ ನಲ್ಲಿ ಬಂದ್ದೇವೆ. ಯಾಕಂದ್ರೆ ರಾಜ್ಯದಲ್ಲಿ ಹಲವಾರು ಹಿಂದೂಗಳ ಕೊಲೆಯಾಗಿದೆ. ಆದ್ರೆ ಸರ್ಕಾರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದು, ಮನಬಂದಂತೆ ಆಡಳಿತ ನಡೆಸುತ್ತಿದೆ. ಈ ರಾಜ್ಯದ ಉದ್ದಗಲಕ್ಕೂ ನಮ್ಮ ಕಾರ್ಯಕರ್ತರು ಮೋಟಾರ್ ಬೈಕಿನಲ್ಲಿ ಬರುತ್ತೇವೆ ಅಂದಾಗ ಅದನ್ನು ತಡೆಯುತ್ತಾರೆ. ಇಲ್ಲಿ ಮೆರವಣಿಗೆ ಮಾಡ್ತೀವಿ ಅಂದ್ರೆ ಸೆಕ್ಷನ್ ಹಾಕಿದ್ದೀವಿ ಅಂತಾರೆ. ಹಾಗಾದ್ರೆ ಪ್ರತಿಪಕ್ಷಗಳ ಕರ್ತವ್ಯವೇನು? ನಾವು ನಮ್ಮ ಹೋರಾಟ ಮಾಡುವುದು ಬೇಡ್ವಾ? ಕಾನೂನು ಸುವ್ಯವಸ್ಥೆಯನನ್ನು ಹೋರಾಟ ಮಾಡಿದಾಗ ಅಥವಾ ಅದನ್ನು ಅಡ್ಡಿ ಮಾಡಿದಾಗ ಈ ರೀತಿ ಸರ್ಕಾರ ವರ್ತಿಸುವುದು ಸರಿಯಲ್ಲ. ಇಲ್ಲಿ ನಾವು ಅದನ್ನು ಮಾಡಲು ಹೊರಟಿಲ್ಲವಲ್ಲ. ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಅಂದ್ರೆ ಸರ್ಕಾರ ಬದುಕಿದೆಯೋ ಸತ್ತಿದೆಯೋ? ಪೊಲೀಸ್ ಇಲಾಖೆ ಇದೆಯೋ ಇಲ್ಲವೋ? ಅಂತ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಂದು ಮಾತನ್ನು ಮಾನ್ಯ ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಹೇಳಲು ಇಚ್ಚಿಸುತ್ತೇನೆ. ಅದೇನಂದ್ರೆ ನೀವು ವಿರೋಧ ಪಕ್ಷಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಬಹಳ ದಿನ ನಡೆಯಲ್ಲ. ಕಾನೂನು ಚೌಕಟ್ಟಿನಲ್ಲಿ ಯಾರನ್ನು ಬೇಕಾದ್ರೂ ಬಂಧಿಸಬಹುದು. ಯಾರ ಮೇಲೆ ಬೇಕಾದ್ರೂ ಕ್ರಮ ತೆಗೆದುಕೊಳ್ಳಬಹುದು. ಅದಕ್ಕೆ ಅಡ್ಡಿ ಮಾಡಿ ಅಂತ ನಾನು ಹೇಳುವುದಿಲ್ಲ. ಅದು ನಿಮಗೆ ಬಿಟ್ಟ ವಿಚಾರ. ನಾಡಿನ ಆರೂವರೆ ಕೋಟಿ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಅಂದ್ರು.

    ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಿತೂರಿಯಿಂದ ಈ ಘಟನಾವಳಿಗಳು ನಡೆಯುತ್ತಿವೆ. ಈ ರೀತಿಯ ಕೊಲೆಗಳು ಮುಂದುವರೆಯಬಾರದು. ಹೀಗಾಗಿ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈ ಬಿಡಬೇಕು ಅನ್ನೋದು ನಮ್ಮ ಉದ್ದೇಶ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾಯ್ತು ಯಾರು ಹೊಣೆ ಇದಕ್ಕೆ? ಈ ಸರ್ಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟಿದೆ ಎನ್ನುವುದಕ್ಕೆ ಕಲಬುರ್ಗಿ ಹತ್ಯೆಯ ಬಳಿಕ ಇದೀಗ ಗೌರಿ ಹತ್ಯೆ ಪ್ರತ್ಯಕ್ಷ ಸಾಕ್ಷಿ. ಗಣಪತಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಮತ್ತೊಮ್ಮೆ ನೀಡಿದ್ದಾರೆ. ಅಲ್ಲಿ ಸುಪ್ರೀಂ ಕೋರ್ಟ್ ಕೂಡಾ ಛೀಮಾರಿ ಹಾಕಿದೆ. ನೀವು ಈ ಸಂದರ್ಭಗಳಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ಸಿಐಡಿ ತನಿಖೆ ಸರಿಯಾದ ರೀತಿಯಲ್ಲಿ ಆಗಿಲ್ಲ. ಅದಕ್ಕೊಸ್ಕರ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸವುದಾಗಿ ಹೇಳಿದೆ ಅಂತ ಸರ್ಕಾರದ ವಿರುದ್ಧ ಗುಡುಗಿದ್ರು.

    ಭ್ರಷ್ಟ ಸಿಎಂ ಸರ್ಕಾರವನ್ನು ಹಾಗೂ ತೂಘಲಕ್ ದರ್ಬಾರನ್ನು ಕೊನೆಗೊಳಿಸುವವರೆಗೆ ನಮ್ಮ ಹೋರಾಟ ನಡೆಯುತ್ತದೆ ಅಂತ ಬಿಎಸ್ ವೈ ಎಚ್ಚರಿಸಿದರು.

    https://twitter.com/ShobhaBJP/status/905737124699193344

  • ವಿಡಿಯೋ: ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ಕಿಡಿ

    ವಿಡಿಯೋ: ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ಕಿಡಿ

    ಬೆಂಗಳೂರು: ಮಂಗಳೂರು ಚಲೋ ರ‍್ಯಾಲಿ ನಡೆಸುತ್ತಿರುವ ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ಕಿಡಿ ಕಾರಿದ್ದಾರೆ.

    ಮಂಗಳೂರಿಗೆ  ಹೋದ್ರೆ ರಾಜ್ಯದಲ್ಲಿರೋ ಸಮಸ್ಯೆ ಸರಿಹೋಗುತ್ತಾ? ವಿಧಾನಸೌಧಕ್ಕೆ ಹೋಗಿ, ಸಿಎಂ ಹತ್ತಿರ ಹೋಗಿ, ಇಲ್ಲ ಮೋದಿ ಹತ್ತಿರ ಹೋಗಿ. ಅದು ಬಿಟ್ಟು ಮಂಗಳೂರಿಗೆ ಹೋಗಿ ಏನ್ ಸಾಧನೆ ಮಾಡೋಕೆ ಹೊರಟಿದ್ರಾ ಅಂತ ಹುಚ್ಚ ವೆಂಕಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾಳೆ ಹುಬ್ಬಳಿ ರ‍್ಯಾಲಿ, ತುಮಕೂರು, ಮಂಡ್ಯ ರ‍್ಯಾಲಿ ಮಾಡಿ. ಏನ್ರಿ ಇದೆಲ್ಲಾ? ನಿಮಗೆ ರಾಜಕೀಯ ಗೊತ್ತಾ? ಅಂತ ಕಿಡಿ ಕಾರಿದ್ದಾರೆ. ಈ ಆಕ್ರೋಶದ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಹರಿಯಬಿಟ್ಟಿದ್ದಾರೆ.

    ರಮಾನಾಥ್ ರೈ ರಾಜೀನಾಮೆ, ಪಿಎಫ್‍ಐ ಮತ್ತು ಎಸ್‍ಡಿಪಿಐ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ರ‍್ಯಾಲಿಗೆ ಇವತ್ತು ಕೊನೆಯ ದಿನ. ನಿರ್ಬಂಧದ ನಡುವೆಯೂ `ಮಂಗಳೂರು ಚಲೋ’ ರ‍್ಯಾಲಿಗೆ ಬಿಜೆಪಿ ಕಸರತ್ತು ನಡೆಸಿದೆ. ಜ್ಯೋತಿ ವೃತ್ತದಿಂದ ಹಿಡಿದು ಸ್ಟೇಟ್ ಬ್ಯಾಂಕ್ ವೃತದವರೆಗೂ ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಕೊಲೆ ಮಾಡಿದವರ ಬಂಧನಕ್ಕೆ ಆಗ್ರಹಿಸಿದ್ದಾರೆ.

    ರ‍್ಯಾಲಿ ಗೆ ಪರ್ಮೀಷನ್ ನೀಡದ ಪೊಲೀಸರ ಜೊತೆ ಸಂಸದ ನಳೀನ್ ಕುಮಾರ್ ಕಟೀಲ್ ವಾಗ್ವಾದಕ್ಕಿಳಿದ ಘಟನೆಯೂ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಜ್ಯೋತಿ ವೃತ್ತದಲ್ಲಿ ಸಾವಿರಾರು ಪೊಲೀಸರು ಜಮಾಯಿಸಿದ್ದಾರೆ. 

  • ಬಿಜೆಪಿಯ ಮಂಗಳೂರು ಚಲೋಗೆ ಕ್ಷಣಗಣನೆ-ಸಮಾವೇಶಕ್ಕಷ್ಟೇ ಅನುಮತಿ, ರ‍್ಯಾಲಿಗಿಲ್ಲ ಪರ್ಮಿಷನ್!

    ಬಿಜೆಪಿಯ ಮಂಗಳೂರು ಚಲೋಗೆ ಕ್ಷಣಗಣನೆ-ಸಮಾವೇಶಕ್ಕಷ್ಟೇ ಅನುಮತಿ, ರ‍್ಯಾಲಿಗಿಲ್ಲ ಪರ್ಮಿಷನ್!

    ಮಂಗಳೂರು: ಇಂದು ನಡೆಯುವ ಮಂಗಳೂರು ಚಲೋ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ಪ್ರತಿಷ್ಠೆಯ ವೇದಿಕೆಯಾಗಿದೆ. ಗಲಭೆಯಿಂದ ತತ್ತರಿಸಿ ಕೆಲವೇ ದಿನಗಳ ಹಿಂದೆ ಸಹಜ ಸ್ಥಿತಿಗೆ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕಿತ್ತಾಟಕ್ಕೆ ತಯಾರಿಗಳು ನಡೆದಿದೆ. ಮತ್ತೆ ಶಾಂತಿಗೆ ತೊಡಕಾಗುತ್ತದೆ ಎಂದು ಪೊಲೀಸ್ ಇಲಾಖೆಯಿಂದ ಅನುಮತಿ ನೀಡದಿದ್ದರೂ, ಮಂಗಳೂರು ಚಲೋಗೆ ಬಿಜೆಪಿ ಪ್ರತಿಷ್ಠೆಯ ಪಣ ತೊಟ್ಟಿದೆ.

    ರಮಾನಾಥ್ ರೈ ರಾಜೀನಾಮೆ, ಪಿಎಫ್‍ಐ ಮತ್ತು ಎಸ್‍ಡಿಪಿಐ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ರ‍್ಯಾಲಿಗೆ ಇವತ್ತು ಕೊನೆಯ ದಿನ. ಈ ಬೈಕ್ ರ‍್ಯಾಲಿಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಇದರಿಂದ ಕೋಪಗೊಂಡಿರುವ ಬಿಜೆಪಿ ಬ್ರಿಗೇಡ್ ಮಂಗಳೂರು ಚಲೋ ಮಾಡಿಯೇ ಮಾಡುತ್ತೇವೆ. ನಮ್ಮನ್ನು ಪೊಲೀಸ್ ಶಕ್ತಿಯಿಂದ ತಡೆದರೂ ನಿಗದಿ ಮಾಡಿದಂತೆ ಇಂದು ಮಂಗಳೂರಿನಲ್ಲಿ ರ‍್ಯಾಲಿ ಮಾಡ್ತೇವೆ ಅಂತ ಪಟ್ಟು ಹಿಡಿದಿದೆ.

    ಬೆಳಗ್ಗೆ 11 ಗಂಟೆಗೆ ಜ್ಯೋತಿ ವೃತ್ತದಿಂದ 1 ಸಾವಿರ ಬೈಕ್ ಮತ್ತು 5 ಸಾವಿರ ಜನ ರ‍್ಯಾಲಿ ಮತ್ತು ಪಾದಯಾತ್ರೆ ಕೈಗೊಂಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕ್ತೀವಿ ಅಂತಾ ಬಿಜೆಪಿ ಹೇಳಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುವ ಸಭೆಯಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.

    ಮಂಗಳೂರು ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ರ‍್ಯಾಲಿ, ವಾಹನ ಜಾಥಾ ಮಾಡದಂತೆ ಮಂಗಳೂರು ಪೊಲೀಸ್ ಕಮೀಷನರ್ ಪೊಲೀಸ್ ಕಾಯ್ದೆ 35ರಡಿ ನಿರ್ಬಂಧ ಹೇರಿದ್ದಾರೆ. ಆದ್ರೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರ ಮಧ್ಯೆ ಮಾತ್ರ ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ನೆಹರು ಮೈದಾನದಲ್ಲಿ ಸಭೆಗೆ ಅನುಮತಿ ನೀಡಿದ್ದಾರೆ.

    ಮಂಗಳೂರು ನಗರದಲ್ಲಿ ಟೈಟ್ ಸೆಕ್ಯೂರಿಟಿ: ಮಂಗಳೂರು ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಇತರೆ ಜಿಲ್ಲೆಗಳ 7 ಎಸ್‍ಪಿಗಳು, 12 ಡಿವೈಎಸ್‍ಪಿಗಳು, 135 ಸಿಬ್ಬಂದಿಯ ಒಂದು ರಾಪಿಡ್ ಆಕ್ಷನ್ ಫೋರ್ಸ್ ತುಕಡಿ, 15 ಕೆಎಸ್‍ಆರ್‍ಪಿ, 12 ಸಿಎಆರ್ ತುಕಡಿ ಸೇರಿದಂತೆ ಒಟ್ಟು 4,500 ಪೊಲೀಸರನ್ನು ಭದ್ರತೆಗೆ ನಿಯೋಜನೆಗೊಳಿಸಲಾಗಿದೆ. ಭದ್ರತೆಗೆ ವಿಶೇಷ ಉಸ್ತುವಾರಿಯಾಗಿ ಈ ಹಿಂದೆ ಮಂಗಳೂರಿನಲ್ಲಿ ಕಮಿಷನರ್ ಆಗಿದ್ದ ಪ್ರಸ್ತುತ ಸಿಐಡಿ ಐಜಿಪಿ ಎಂ.ಚಂದ್ರಶೇಖರ್ ಆಗಮಿಸಿದ್ದಾರೆ.

    ಸಭೆಗೆ ಮಾತ್ರ ಡಿಸಿ ಅವಕಾಶ ಕೊಟ್ಟಿದ್ದು,ರ‍್ಯಾಲಿ ನಡೆಸಿದರೆ ಕ್ರಮಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಆದ್ರೆ ಪೊಲೀಸರ ಶಕ್ತಿಯನ್ನ ಮೆಟ್ಟಿ ಬೈಕ್ ರ‍್ಯಾಲಿ ನಡೆಸ್ತೇವೆ ಅಂತ ಬಿಜೆಪಿ ಹೇಳ್ತಿದೆ. ಹೀಗಾಗಿ ಮಂಗಳೂರು ಇವತ್ತು ಭಾರೀ ಕುತೂಹಲದ ಕೇಂದ್ರ ಬಿಂದುವಾಗಿದೆ.

    https://twitter.com/ShobhaBJP/status/905285694444142592

    https://twitter.com/ShobhaBJP/status/905041223064313856

  • ಉಡುಪಿ ಬೈಕ್ ರ‍್ಯಾಲಿಗೆ ಪೊಲೀಸರ ತಡೆ- 300 ಬೈಕ್ ವಶ

    ಉಡುಪಿ ಬೈಕ್ ರ‍್ಯಾಲಿಗೆ ಪೊಲೀಸರ ತಡೆ- 300 ಬೈಕ್ ವಶ

    ಉಡುಪಿ: ‘ಮಂಗಳೂರು ಚಲೋ’ ಬೈಕ್ ರ‍್ಯಾಲಿಗೆ ಉಡುಪಿಯಲ್ಲಿ ಹಿನ್ನಡೆಯಾಗಿದೆ. ಪೂರ್ವಯೋಜಿತ ಕಾರ್ಯಕ್ರಮದಂತೆ ಶಿವಮೊಗ್ಗ, ಹಾವೇರಿ ಭಾಗದ ಕಾರ್ಯಕರ್ತರು ಹೆಬ್ರಿ ಮೂಲಕ ಕಾರ್ಕಳ ತಲುಪಬೇಕಿತ್ತು.

    ಹುಬ್ಬಳ್ಳಿ, ಬೆಳಗಾವಿ ಭಾಗದ ಕಾರ್ಯಕರ್ತರು ಬೈಂದೂರು ಮೂಲಕ ಮಣಿಪಾಲಕ್ಕೆ ಬಂದು ತಂಗಬೇಕಿತ್ತು. ಆದರೆ ಆಯಾ ಜಿಲ್ಲೆಗಳಲ್ಲೇ ಕಾರ್ಯಕರ್ತರನ್ನು ಬಂಧಿಸಿದ ಕಾರಣ ಅನ್ಯ ಜಿಲ್ಲೆಯ ಪ್ರತಿಭಟನಾಕಾರರು ಉಡುಪಿ ಜಿಲ್ಲೆಯ ಪ್ರವೇಶ ಮಾಡಿಲ್ಲ. ಇದರ ಹೊರತಾಗಿಯೂ ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯ್ತು, ತಾಲೂಕಿನ ಐನೂರಕ್ಕೂ ಅಧಿಕ ಬೈಕ್ ಗಳು ರ‍್ಯಾಲಿಯಲ್ಲಿ ಭಾಗವಹಿಸಿದವು.

    ರ‍್ಯಾಲಿ ಪ್ರಾರಂಭವಾಗಿ ಕೆಲ ದೂರ ಸಂಚರಿಸಿದ ನಂತರ ಪೊಲೀಸರು ಅಡ್ಡಿಪಡಿಸಿದರು. ಶಾಸಕ ಸುನಿಲ್ ಕುಮಾರ್ ಸಹಿತ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವ ಮೂಲಕ ಬೈಕ್ ರ‍್ಯಾಲಿಗೆ ಅವಕಾಶ ನೀಡಿಲ್ಲ. ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಹೆಮ್ಮಾಡಿಯಲ್ಲೂ ರ‍್ಯಾಲಿ ನಡೆಸಲು ಮುಂದಾದ 200 ಕ್ಕೂ ಅಧಿಕ ಉಡುಪಿ ಜಿಲ್ಲೆಯ ಕಾರ್ಯಕರ್ತರನ್ನು ಬಂಧಿಸಲಾಯ್ತು. ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಇನ್ನೂ 6 ತಿಂಗಳು ಮಾತ್ರ, ಆಮೇಲೆ ನೋಡ್ಕೊಳ್ತೀನಿ: ಪೊಲೀಸ್ರಿಗೆ ಶಾಸಕ ಸಂಜಯ್ ಪಾಟೀಲ್ ಅವಾಜ್

    ಇನ್ನೂ 6 ತಿಂಗಳು ಮಾತ್ರ, ಆಮೇಲೆ ನೋಡ್ಕೊಳ್ತೀನಿ: ಪೊಲೀಸ್ರಿಗೆ ಶಾಸಕ ಸಂಜಯ್ ಪಾಟೀಲ್ ಅವಾಜ್

    ಬೆಳಗಾವಿ: ಇಂದು ನಗರದಲ್ಲಿ ಬಿಜೆಪಿಯಿಂದ ಮಂಗಳೂರು ಚಲೋ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ತಡೆಯಲು ಮುಂದಾದ ಪೊಲೀಸರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್, ಇನ್ನೂ ಕೇವಲ ಆರು ತಿಂಗಳು ಮಾತ್ರ ಮುಂದಿನ ದಿನಗಳಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಅವಾಜ್ ಹಾಕಿದ್ದಾರೆ.

    ಪೊಲೀಸರು ಸಮಾಧಾನ ಮಾಡಲು ಪ್ರಯತ್ನಿಸಿದಾಗ ಸುಮ್ಮನಾಗದ ಶಾಸಕರು ನಮ್ಮನ್ನೇಕೆ ಬಂಧಿಸುತ್ತಿದ್ದೀರಿ, ನಾವೇನು ಪ್ರತಿಭಟನೆ ಮಾಡುತ್ತಿಲ್ಲ. ಬೈಕ್ ರ‍್ಯಾಲಿಗಾಗಿ ಒಂದೆಡೆ ಸೇರಿದ್ದೇವೆ. ನಾವು ಪ್ರತಿಭಟನೆ ಮಾಡಿದ್ದನ್ನು ನೀವು ನೋಡಿದ್ದೇವೆ. ನಮ್ಮ ಮೈ ಮುಟ್ಟುವಂತಿಲ್ಲ. ನಾವು ನಿಜ ಹೇಳುವವರು ಒಂದೇ ತಂದೆ-ತಾಯಿಗೆ ಹುಟ್ಟಿದವರು. ಸುಮ್ಮನೆ ನಮ್ಮಲೇ ಆರೋಪ ಮಾಡಬೇಡಿ ಎಂದು ಎಸಿಪಿ ಜಯಕುಮಾರ್ ಅವರ ವಿರುದ್ಧ ಕೋಪಗೊಂಡರು.

    ಇದನ್ನೂ ಓದಿ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

    ಬೆಳಗಾವಿಯಲ್ಲಿ ಇಂದು ರ‍್ಯಾಲಿಗೆ ನಿರ್ಬಂಧ ಹೇರಲಾಗಿತ್ತು. ಆದರೂ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ನಗರ ಪ್ರವೇಶಕ್ಕೆ ಪ್ರಯತ್ನಿಸಿದ್ರು. ಹೀಗಾಗಿ ಎಸಿಪಿ ಜಯಕುಮಾರ್ ಅವರು ಚನ್ನಮ್ಮ ವೃತ್ತದಲ್ಲಿಯೇ ಬಿಜೆಪಿ ಕಾರ್ಯಕರ್ತರನ್ನು ತೆಡೆದಿದ್ದರು. ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಬದಲಾಗುತ್ತಿದ್ದಂತೆ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದುಕೊಂಡರು.

    https://youtu.be/nPG6S4OrTz8

  • ಮಂಗಳೂರು ಚಲೋಗೆ ‘ಹ್ಯಾಂಡ್’ ಬ್ರೇಕ್: ಶನಿವಾರ ಕರ್ನಾಟಕ ಬಂದ್?

    ಮಂಗಳೂರು ಚಲೋಗೆ ‘ಹ್ಯಾಂಡ್’ ಬ್ರೇಕ್: ಶನಿವಾರ ಕರ್ನಾಟಕ ಬಂದ್?

    ಬೆಂಗಳೂರು: ಯುವ ಮೋರ್ಚಾದ ಮಂಗಳೂರು ಚಲೋ ಬೈಕ್ ರ‍್ಯಾಲಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರಾಜ್ಯ ಬಿಜೆಪಿ ನಾಯಕರು ಸೆಪ್ಟೆಂಬರ್ 9 ರಂದು ಕರ್ನಾಟಕ ಬಂದ್ ನಡೆಸಲು ಚಿಂತನೆ ನಡೆಸಿದ್ದಾರೆ.

    ಬೆಂಗಳೂರು ಮತ್ತು ರಾಜ್ಯದ ಹಲವು ಕಡೆಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮವನ್ನು ಟೀಕಿಸಿ ಬಂದ್ ಕರೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

    ಏನಿದು ಮಂಗಳೂರು ಚಲೋ? ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿತ್ತು. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಈ ರ‍್ಯಾಲಿಯನ್ನು ಬಿಜೆಪಿ ಆಯೋಜಿಸಿತ್ತು.

    https://youtu.be/6vmiYWGCGow

    https://youtu.be/VO7l6AMHDww

    https://youtu.be/CDVIA-TBxKk

    https://twitter.com/ShobhaBJP/status/904911381194915840

     

     

  • ಕರಂದ್ಲಾಜೆ ಹಿಂದೂಗಳ ಪರ ಇಲ್ಲ `ಇವ್ರ’ ಪರ ಇದ್ದಾರೆ: ಸಿಎಂ

    ಕರಂದ್ಲಾಜೆ ಹಿಂದೂಗಳ ಪರ ಇಲ್ಲ `ಇವ್ರ’ ಪರ ಇದ್ದಾರೆ: ಸಿಎಂ

    ಬೆಂಗಳೂರು: ಶೋಭಾ ಕರಂದ್ಲಾಜೆ ಹಿಂದೂಗಳ ಪರ ಇಲ್ಲ. ಸಮಾಜ ಹಾಳು ಮಾಡುವವರ ಪರ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬಿಜೆಪಿ ಮಂಗಳೂರು ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವ ಪರವಾಗಿಲ್ಲ. ಶಾಂತಿ ಕದಡುವ ಪ್ರಯತ್ನ ಮಾಡ್ತಿದ್ದಾರೆ. ಬೈಕ್ ರ‍್ಯಾಲಿಯಿಂದ ಸಾಮರಸ್ಯ ಹಾಳಾಗುತ್ತೆ ಅಂದ್ರು.

    ಇದನ್ನೂ ಓದಿ: ಬಿಜೆಪಿಯ ‘ಸ್ಟಾರ್’ಗಳು ಇವರಂತೆ: ದರ್ಶನ್ ಕೈ ಸೇರ್ಪಡೆಗೆ ಸಿಟಿ ರವಿ ಹೇಳಿದ್ದು ಹೀಗೆ

    ಬೈಕ್ ರ‍್ಯಾಲಿಯಿಂದಾಗಿ ಟ್ರಾಫಿಕ್ ಗೆ ತೊಂದರೆಯಾಗುತ್ತೆ, ಹಾಗಾಗಿ ಬೈಕ್ ರ‍್ಯಾಲಿಗೆ ಅನುಮತಿ ನೀಡಿಲ್ಲ. ಸಮಾವೇಶಕ್ಕೆ ನಮ್ಮ ಅಭ್ಯಂತರವಿಲ್ಲ. ಮಂಗಳೂರು ಚಲೋ ಮಾಡೋ ಬದಲು ದೆಹಲಿ ಚಲೋ ಮಾಡಲಿ ನಾವು ಕೈ ಜೋಡಿಸುತ್ತೇವೆ. ರೈತರ ಸಾಲ ಮನ್ನಾಕ್ಕಾಗಿ ದೆಹಲಿ ಚಲೋ ಮಾಡಲಿ. ನಾವು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ವಿ. ಬೇಕಿದ್ರೆ ಪಾದಯಾತ್ರೆ ಮಾಡಿಕೊಳ್ಳಲಿ. ನಮ್ಮ ಅಭ್ಯಂತರ ಇಲ್ಲ. ಶಾಂತಿ ಕದಡುವ ಯಾವುದೇ ಕೆಲಸವನ್ನ ಸರ್ಕಾರ ಸಹಿಸಲ್ಲ ಎಂದರು.

    ಯಾರಪ್ಪ ಬಂದ್ರು ರ‍್ಯಾಲಿ ತಡೆಯೊಲ್ಲ ಅನ್ನೊ ಬಿಎಸ್ ವೈ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, ಯಡಿಯೂರಪ್ಪ ಹಾಗೇ ಏಕವಚನ ದಲ್ಲಿ ನನಗೆ ಮಾತನಾಡಲು ಬರಲ್ಲ. ಅವರ ಭಾಷೆ, ಕೆಟ್ಟಪದ ನಮಗೆ ಬರಲ್ಲ. ಅವರು ಶಾಂತಿ ಕಾಪಾಡುವ ಪರ ಇಲ್ಲ ಎಂದರು.

    https://www.youtube.com/watch?v=nWAl5y1BfXw

    https://www.youtube.com/watch?v=CDVIA-TBxKk

     

  • ಬಿಜೆಪಿ ಯುವಾ ಮೋರ್ಚಾದ ಬೈಕ್  ರ‍್ಯಾಲಿ  ದಕ್ಷಿಣ ಕನ್ನಡ ಪ್ರವೇಶಿಸುವಂತಿಲ್ಲ

    ಬಿಜೆಪಿ ಯುವಾ ಮೋರ್ಚಾದ ಬೈಕ್  ರ‍್ಯಾಲಿ  ದಕ್ಷಿಣ ಕನ್ನಡ ಪ್ರವೇಶಿಸುವಂತಿಲ್ಲ

    ಬೆಂಗಳೂರು: ಬಿಜೆಪಿ ಯುವಾ ಮೋರ್ಚಾ ಆಯೋಜಿಸಿದ್ದ ಮಂಗಳೂರು ಚಲೋ ಬೈಕ್ ರ‍್ಯಾಲಿಗೆ ದಕ್ಷಿಣ ಕನ್ನಡ ಪೊಲೀಸರು ತಡೆ ನೀಡಿದ್ದಾರೆ.

    ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಆದೇಶ ಹೊರಡಿಸಿದ್ದು, ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ತಡೆ ನೀಡಲಾಗಿದ್ದು, ರ‍್ಯಾಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಬಾರದು ಎಂದು ಸೂಚಿಸಿದ್ದಾರೆ.

    ಮೈಸೂರು, ಮಡಿಕೇರಿ ಭಾಗದಿಂದ ಬೈಕ್ ರ‍್ಯಾಲಿ ಮೂಲಕ ಬರುವ ಕಾರ್ಯಕರ್ತರಿಗೆ ಸೆ.6ರಂದು ಸುಳ್ಯ ತಾಲೂಕಿನ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸುಳ್ಯ ಪೊಲೀಸರು ಹಾಲ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ:  ನಿಮ್ಮ ಯಾವುದೇ ಬೆದರಿಕೆಗೆ ನಾವು ಜಗ್ಗಲ್ಲ: ಸಿಎಂ ವಿರುದ್ಧ ಪ್ರತಾಪ್ ಸಿಂಹ ಕೆಂಡಾಮಂಡಲ

    ಏನಿದು ಮಂಗಳೂರು ಚಲೋ?
    ಆರೆಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿದೆ. ಸೆಪ್ಟೆಂಬರ್ 5 ರಿಂದ ಬಿಜೆಪಿ ಬೈಕ್ ರ‍್ಯಾಲಿ ಆರಂಭವಾಗಲಿದ್ದು, ಬೆಂಗಳೂರು, ಹುಬ್ಬಳ್ಳಿಯಿಂದ ರ‍್ಯಾಲಿ ಹೊರಟರೆ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರಿನಿಂದ ಸೆಪ್ಟೆಂಬರ್ 6ರಂದು ರ‍್ಯಾಲಿ ಹೊರಡಲಿದೆ. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದ್ದು, ಬಿಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ.