Tag: ಮಂಕಾಳ್‌ ವೈದ್ಯ

  • ಹಣಕಾಸು ಇಲಾಖೆ ಅಧಿಕಾರಿಗಳು ಸಹಕಾರ ಕೊಡ್ತಿಲ್ಲ, ನಾನು ಹೇಗೆ ಜಾರಿ ಮಾಡಲಿ: ಮಂಕಾಳ್ ವೈದ್ಯ ಅಸಹಾಯಕತೆ

    ಹಣಕಾಸು ಇಲಾಖೆ ಅಧಿಕಾರಿಗಳು ಸಹಕಾರ ಕೊಡ್ತಿಲ್ಲ, ನಾನು ಹೇಗೆ ಜಾರಿ ಮಾಡಲಿ: ಮಂಕಾಳ್ ವೈದ್ಯ ಅಸಹಾಯಕತೆ

    ಬೆಂಗಳೂರು: ಹಣಕಾಸು ಇಲಾಖೆ (Finance Department) ಅಧಿಕಾರಿಗಳು ನನ್ನ ಇಲಾಖೆಗೆ ಸಹಕಾರ ಕೊಡುತ್ತಿಲ್ಲ. ಹಣಕಾಸು ಇಲಾಖೆಯವರು ದುಡ್ಡು ಕೊಡದೇ ನಾನು ಹೇಗೆ ಯೋಜನೆ ಅನುಷ್ಠಾನ ಮಾಡಲಿ ಎಂದು ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯ (Mankala Vaidya) ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.

    ಪ್ರಶ್ನೋತ್ತರ ಅವಧಿ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2024-25ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಘೋಷಣೆ ಮಾಡಿದ್ದ ಯೋಜನೆ ಅನುಷ್ಠಾನ ಮಾಡಲು ಎಫ್‌ಡಿ (ಹಣಕಾಸು ಇಲಾಖೆ) ಸಹಕಾರ ಕೊಡದ ಕಾರಣ ಕೆಲಸ ಆಗುತ್ತಿಲ್ಲ ಎಂದರು. ಮೀನುಗಾರಿಕೆ ಇಲಾಖೆಗೆ ಸಿಎಂ ಅವರು2024-25ನೇ ಸಾಲಿಗೆ 3 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ನಮ್ಮ ಇಲಾಖೆಯಿಂದ ಯೋಜನೆಗಳಿಗೆ ಡಿಪಿಆರ್ ಸಿದ್ಧ ಮಾಡಿ ಆರ್ಥಿಕ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಡದೇ ಕೇಂದ್ರ ಸರ್ಕಾರದ ಯೋಜನೆ ಅಡಿ ಕೆಲಸ ಪ್ರಾರಂಭ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ನಿಗದಿಯಾಗಿದ್ದ ಯೋಜನೆಗಳ ಡಿಪಿಆರ್ ಅನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ.ಕೇಂದ್ರ ಸರ್ಕಾರದ ಅನುದಾನ ಬಂದಿಲ್ಲ. ಹೀಗಾಗಿ ಯೋಜನೆ ಪ್ರಾರಂಭ ಮಾಡಲು ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸರ್ಕಾರದ ವೇತನ; ಸಮಿತಿ ರದ್ದಿಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಪ್ರತಿಭಟನೆ

    ಮಂಕಾಳ್ ವೈದ್ಯ ಮಾತಿಗೆ ಸದಸ್ಯ ನಾಗರಾಜ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು. 3 ಸಾವಿರ ಕೋಟಿ ಇದ್ದರೂ ಯಾಕೆ ಇಲಾಖೆ ಕೆಲಸ ಮಾಡುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸಚಿವರ ಮೇಲೆ ಏರು ಧ್ವನಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!

    ನಾಗರಾಜ್ ಯಾದವ್ ಮಾತಿಗೆ ಆಕ್ರೋಶಗೊಂಡ ಸಚಿವ ಮಂಕಾಳ್ ವೈದ್ಯ, ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ ಅಂದರೆ ನಾನೇನು ಮಾಡಲಿ. ನನ್ನ ಇಲಾಖೆ ತಪ್ಪೇನಿದೆ? ಹಣ ಕೊಡದೆ ಹೇಗೆ ಕೆಲಸ ಮಾಡೋದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ, ಶಕ್ತಿ ಯೋಜನೆಗೆ ಸರ್ಕಾರ 2,000 ಕೋಟಿ ಹಣ ಬಾಕಿ ಕೊಡಬೇಕು: ರಾಮಲಿಂಗಾ ರೆಡ್ಡಿ

  • ನಾನು ಬಹಳ ದುಬಾರಿ.. 50, 100 ಕೋಟಿಗೆಲ್ಲ ಸೇಲ್ ಆಗಲ್ಲ: ಸಚಿವ ಮಂಕಾಳ್ ವೈದ್ಯ

    ನಾನು ಬಹಳ ದುಬಾರಿ.. 50, 100 ಕೋಟಿಗೆಲ್ಲ ಸೇಲ್ ಆಗಲ್ಲ: ಸಚಿವ ಮಂಕಾಳ್ ವೈದ್ಯ

    ಕಾರವಾರ: ನಾನು ಬಹಳ ದುಬಾರಿ ಇದ್ದೇನೆ. 50, 100 ಕೋಟಿಗೆಲ್ಲ ನಾನು ಸೇಲ್ ಆಗಲ್ಲ. ಹಾಗಾಗಿ ನನ್ನನ್ನು ಬಿಜೆಪಿಯಯವರು ಸಂಪರ್ಕ ಮಾಡಿಲ್ಲ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಮಾತನಾಡಿದ ಅವರು, 2,500 ಕೋಟಿಗೆ ಸಿಎಂ ಹುದ್ದೆ, 100 ಕೋಟಿಗೆ ಶಾಸಕ ಸ್ಥಾನ ಬಿಜೆಪಿಯ ಸಂಪ್ರದಾಯ. ಈ ಮಾತಿನ ಹಿಂದೆ ಬಿಜೆಪಿಯ ನಾಯಕರೇ ಹೇಳಿದ್ರು. ಹಾಗಾಗಿ, ದುಡ್ಡಿನಲ್ಲಿ ಮತ್ತೆ ಸರ್ಕಾರ ಮಾಡುವ ಕನಸು ಕಾಣುತ್ತಿದ್ದಾರೆ. ನನಗಂತೂ ಇದುವರೆಗೂ ಬಿಜೆಪಿ ಯಾವ ನಾಯಕರೂ ಸಂಪರ್ಕ ಮಾಡಿಲ್ಲ ಎಂದರು.

    ಕೋವಿಡ್ ಹಗರಣ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಅಥವಾ ದೇಶದಲ್ಲಿ ವಸ್ತುವನ್ನ ಖರೀದಿ ಮಾಡಬೇಕಿತ್ತು. ಆದರೆ ಅಂದಿನ ಬಿಜೆಪಿ ಸರ್ಕಾರದಲ್ಲಿ ವಿದೇಶದಿಂದ ವಸ್ತು ಖರೀದಿ ಮಾಡಿದ್ದಾರೆ. ಇಲ್ಲಿ ರೇಟ್ 350 ರೂ. ಇಂಪೋರ್ಟ್ ರೇಟ್, 350 ರೂ. ಸ್ವದೇಶಿ ಎಂದು ಬಿಜೆಪಿಗರು ದೊಡ್ಡದಾಗಿ ಹೇಳುತ್ತಾರೆ. ಇದಕ್ಕಿಂತ ಪ್ರೂಫ್ ಏನು ಬೇಕು. ಈ ಹಗರಣದ ನೇರ ಕೈವಾಡ ಅಂದಿನ ಬಿಜೆಪಿ ಸರ್ಕಾರದ ಸಿಎಂ ಹಾಗೂ ಸಚಿವರಾಗಿದ್ದ ಶ್ರೀರಾಮುಲು, ಅದನ್ನು ಮುಚ್ಚಿಹಾಕಲು ಸುಧಾಕರ್‌ಗೆ ಸಚಿವರನ್ನಾಗಿ ಮಾಡಿದರು. ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

    ವಕ್ಛ್ ಬಗ್ಗೆ ಮಾತನಾಡಿವ ಬಿಜೆಪಿಗರು ಈ ಹಿಂದೆ ಸಿಎಂ ಆಗಿದ್ದ ಬೊಮ್ಮಾಯಿ ವಕ್ಛ್ ಆಸ್ತಿ ಯಾರಾದರು ದುರುಪಯೋಗ ಮಾಡಿಕೊಂಡರೆ ದೇವರಿಗೆ ಅನ್ಯಾಯ ಮಾಡಿದಂತೆ ಎಂದರು. ಈಗ ವಕ್ಛ್ ಆಸ್ತಿ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ದುರುಪಯೋಗ ಆಗಿದ್ದರೆ ಸರಿಪಡಿಸುತ್ತೇನೆ. ಎಲ್ಲೂ ದುರುಪಯೋಗ ಆಗದಿದ್ದರೆ ಇವರು ಹೇಳುವುದು ಸುಳ್ಳು ಎಂದು ತರಾಟೆಗೆ ತೆಗೆದುಕೊಂಡರು.