Tag: ಭ್ರೂಣ

  • ಧಾರವಾಡ: ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

    ಧಾರವಾಡ: ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

    ಧಾರವಾಡ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ 14 ದಿನದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ ವೇಳೆ ವೈದ್ಯಲೋಕಕ್ಕೆ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

    ಹೌದು. 14 ದಿನದ ಈ ಮಗುವಿಗೆ ತೀವ್ರ ಹೊಟ್ಟೆ ನೋವು ಇರುವ ಕಾರಣ, ಮಗುವಿನ ಪೋಷಕರು ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ಮಗುವನ್ನ ತಂದಿದ್ದಾರೆ. ವೈದ್ಯರು ಕೂಡಾ ಮಗುವಿನ ಹೊಟ್ಟೆಯಲ್ಲಿ ಗಂಟು ಇರಬೇಕು ಎಂದು ಶಸ್ತ್ರ ಚಿಕಿತ್ಸೆ ಕೂಡಾ ಮಾಡಿದ್ದಾರೆ. ಆದರೆ ಇದೇ ವೇಳೆ ವೈದ್ಯರಿಗೆ ಕೂಡಾ ಒಂದು ಅಚ್ಚರಿ ಕಾದಿತ್ತು. ಅದೇನಂದ್ರೆ ಈ 14 ದಿನದ ಗಂಡು ಮಗುವಿನ ಹೊಟ್ಟೆಯಲ್ಲಿ ಇನ್ನೊಂದು ಭ್ರೂಣ ಇತ್ತು. ವೈದ್ಯರು ಈ ಮಗುವಿನ ಶಸ್ತ್ರ ಚಿಕಿತ್ಸೆ ಮಾಡಿ ಸದ್ಯ ಭ್ರೂಣವನ್ನ ಹೊರಗೆ ತೆಗೆದಿದ್ದಾರೆ.

    ಇನ್ನು ವಿಶ್ವದ 80 ಪ್ರಕರಣಗಳಲ್ಲಿ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆದಿದ್ದು ಈ ಪ್ರಕರಣ ಕೂಡಾ ಸೇರಿಕೊಂಡಿದೆ. ಈ ರೀತಿ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆಯಲು ಕಾರಣ ಕೂಡಾ ಇದೆ. ಅವಳಿ ಮಕ್ಕಳು ಹುಟ್ಟುವ ಸಂದರ್ಭದಲ್ಲಿ ಒಂದೇ ಮಗು ಬೆಳವಣಿಗೆ ಆದಾಗ, ಇನ್ನೊಂದು ಭ್ರೂಣ ಮಗುವಿನ ಹೊಟ್ಟೆ ಸೇರಿ ಈ ರೀತಿ ಆಗುತ್ತೆ ಅನ್ನೊದು ವೈದ್ಯರ ಹೇಳಿಕೆ. ಸದ್ಯ ಎರಡು ತಿಂಗಳ ಭ್ರೂಣವನ್ನ ಈ ಮಗುವಿನ ಹೊಟ್ಟೆಯಿಂದ ಹೊರ ತೆಗೆದು ಮಗುವಿಗೆ ಚಿಕತ್ಸೆ ನೀಡಿ ಮನೆಗೆ ಕಳಿಸಲಾಗಿದೆ.

    ಒಟ್ಟಿನಲ್ಲಿ ಇಂಥದೊಂದು ಅಪರೂಪದ ಘಟನೆ ನಡೆದಿದ್ದು, ವೈದ್ಯರಿಗೆ ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲೂ ಇದು ಚರ್ಚೆಗೆ ಗ್ರಾಸವಾಗಿದೆ. ಧಾರವಾಡದ ಎಸ್‍ಡಿಎಂ ವೈದ್ಯರು ಇದೇ ಮೊದಲ ಬಾರಿಗೆ ಇಂಥದೊಂದು ಪ್ರಕರಣ ನೋಡಿ, ಅದನ್ನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ, ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ. ಆದರೆ ವಿಶ್ವದಲ್ಲೇ ಇದು 80 ನೇ ಪ್ರಕರಣ ಎಂದು ಹೇಳಬಹುದು.

    https://youtu.be/x8mtIlk7PgE

  • ಬೆಳಗಾವಿ: ಜಮೀನಿನಲ್ಲಿ ಹೂತಿಟ್ಟಿದ್ದ 19ಕ್ಕೂ ಹೆಚ್ಚು ಭ್ರೂಣಗಳ ಪತ್ತೆ

    ಬೆಳಗಾವಿ: ಜಮೀನಿನಲ್ಲಿ ಹೂತಿಟ್ಟಿದ್ದ 19ಕ್ಕೂ ಹೆಚ್ಚು ಭ್ರೂಣಗಳ ಪತ್ತೆ

    ಚಿಕ್ಕೋಡಿ: ಬೆಳಗಾವಿ ಗಡಿಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಮಹಿಶಾಳ ಗ್ರಾಮದಲ್ಲಿ ಬರೋಬ್ಬರಿ 19 ಭ್ರೂಣಗಳ ಶವ ಪತ್ತೆಯಾಗಿದ್ದು, ಸುತ್ತಮುತ್ತಲ ಜನ ಬೆಚ್ಚಿಬಿದ್ದಿದ್ದಾರೆ.

    ಕಾಗವಾಡದಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದ ಭಾರತಿ ಆಸ್ಪತ್ರೆಯ ವೈದ್ಯ ಡಾ.ಬಾಬಾಸಾಹೇಬ್ ಕಾನೂನು ಬಾಹಿರವಾಗಿ ಭ್ರೂಣ ಹತ್ಯೆ ಮಾಡ್ತಿರೋದು ಬೆಳಕಿಗೆ ಬಂದಿದೆ.

    ಕಳೆದ 9 ವರ್ಷಗಳಿಂದ ಈ ಭಾಗದ ನೂರಾರು ಮಹಿಳೆಯರಿಗೆ ಈತ ಗರ್ಭಪಾತ ಮಾಡಿಸುತ್ತಿದ್ದಾನೆ ಎನ್ನಲಾಗಿದೆ. 2 ದಿನಗಳ ಹಿಂದೆ ಈ ಆಸ್ಪತ್ರೆಗೆ ಗರ್ಭಪಾತ ಮಾಡಿಸಲು ಬಂದ ಮಹಿಳೆ ಮೃತಪಟ್ಟಿದ್ದರು. ಈ ಬಗ್ಗೆ ಆ ಮಹಿಳೆಯ ತಂದೆ ಮೀರಜ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪೊಲೀಸರು ಆ ಮಹಿಳೆಯ ಗಂಡನನ್ನು ವಶಕ್ಕೆ ಪಡೆದು ಆಸ್ಪತ್ರೆ ಮೇಲೆ ದಾಳಿ ನಡೆಸಿ ಅಲ್ಲಿ ಗರ್ಭಪಾತಕ್ಕೆ ಬಳಸುವ ಎಲ್ಲಾ ಸಾಮಗ್ರಿಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

    ವೈದ್ಯ ಬಾಬಾಸಾಹೇಬ್ ಮಹಿಳೆಯರ ಗರ್ಭಪಾತ ಮಾಡಿ ಗ್ರಾಮದಲ್ಲಿರುವ ಕಾಲುವೆ ಬಳಿಯ ಜಮೀನಿನಲ್ಲಿ ಹೂತಿಡುತ್ತಿದ್ದ. ಪೊಲೀಸರು ಜೆಸಿಬಿ ಮೂಲಕ ಹೂತಿಟ್ಟಿದ್ದ 19ಕ್ಕೂ ಹೆಚ್ಚು ಭ್ರೂಣಗಳನ್ನು ಹೊರ ತೆಗೆದಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಆರೋಪಿ ಡಾಕ್ಟರ್ ಬಾಬಾ ಸಾಹೇಬ ಖಿದ್ರಾಪುರೆಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ.