Tag: ಭೂಗತ ಪಾತಕಿ

  • ಸೆನಗಲ್‍ನಿಂದ ಭೂಗತ ಪಾತಕಿ ರವಿ ಪೂಜಾರಿ ಎಸ್ಕೇಪ್?

    ಸೆನಗಲ್‍ನಿಂದ ಭೂಗತ ಪಾತಕಿ ರವಿ ಪೂಜಾರಿ ಎಸ್ಕೇಪ್?

    ಬೆಂಗಳೂರು: ನಕಲಿ ಪಾಸ್‍ಪೋರ್ಟ್ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನಗಲ್‍ನಲ್ಲಿ 4 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಕರಾವಳಿ ಮೂಲದ ಭೂಗತ ದೊರೆ ರವಿ ಪೂಜಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

    ಹೇಗೆ ಪರಾರಿಯಾಗಿದ್ದಾನೆ ಎನ್ನುವುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ನ್ಯಾಯಾಲಯದಿಂದ ಬೇಲ್ ಪಡೆದು ರವಿ ಪೂಜಾರಿ ಬಿಡುಗಡೆಹೊಂದಿದ್ದಾನೆ. ಈ ಸಂದರ್ಭವನ್ನೇ ಬಳಸಿಕೊಂಡು ಆತ ಸೆನೆಗಲ್ ನಿಂದ ಪರಾರಿಯಾಗಿದ್ದಾನೋ ಅಥವಾ ಜೈಲಿನಿಂದಲೇ ಪರಾರಿಯಾಗಿದ್ದಾನೋ ಎನ್ನುವುದು ಖಚಿತವಾಗಿಲ್ಲ. ರವಿ ಪೂಜಾರಿ ಪರಾರಿಯಾಗಿದ್ದಾನೆ ಎಂದು ಸೆನೆಗಲ್ ಪತ್ರಿಕೆಗಳು ವರದಿ ಮಾಡಿವೆ.

    ಈ ಕುರಿತು ಪೊಲೀಸ್ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ರವಿ ಪೂಜಾರಿ ಸೆನೆಗಲ್‍ನಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತವಾಗಿ ಯಾರೂ ತಿಳಿಸಿಲ್ಲ.

    ಈ ಸುದ್ದಿ ನಿಜವೇ ಆದರೆ ಹಲವಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ರವಿ ಪೂಜಾರಿಯನ್ನು ಕಾನೂನು ಹೋರಾಟದಡಿ ಗಡೀಪಾರು ಮಾಡುವ ಭಾರತದ ಪೊಲೀಸರ ಪ್ರಯತ್ನಕ್ಕೆ ತಣ್ಣೀರು ಬಿದ್ದಿದೆ. ರವಿ ಪೂಜಾರಿಯನ್ನು ಕರೆತರಲು ಬೆಂಗಳೂರು, ಮುಂಬೈ ಪೊಲೀಸರು ಕಳೆದ 3 ತಿಂಗಳಿಂದ ಸೆನಗಲ್‍ನಲ್ಲಿ ಭಾರೀ ಪ್ರಯತ್ನ ನಡೆಸಿದ್ದರು.

    ಆತನ ವಿರುದ್ಧ ದಾಖಲಾಗಿರೋ ಕೇಸ್‍ಗಳು, ಸಾಕ್ಷ್ಯಾಧಾರಗಳನ್ನು ಫ್ರೆಂಚ್ ಭಾಷೆಗೆ ಭಾಷಾಂತರ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಅಂತಿಮ ಹಂತದಲ್ಲಿದ್ದು, ಹಸ್ತಾಂತರ ಆಗುವ ನಿರೀಕ್ಷೆ ಇತ್ತು. ಈ ಮಧ್ಯೆ, ರವಿ ಪೂಜಾರಿ ಅರೆಸ್ಟ್ ಕ್ರೆಡಿಟ್‍ಗಾಗಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿ ನಡುವೆ ಫೆಬ್ರವರಿ ತಿಂಗಳಲ್ಲಿ ಭಾರೀ ಟ್ವೀಟ್ ಸಮರವೇ ನಡೆದಿತ್ತು.

  • `ನಮಸ್ತೆ ಇಂಡಿಯಾ’ ಹೆಸರಿಟ್ಟುಕೊಂಡೇ ದೇಶದ್ರೋಹದ ಕೆಲಸ ಮಾಡ್ತಿದ್ದ ರವಿಪೂಜಾರಿ..!

    `ನಮಸ್ತೆ ಇಂಡಿಯಾ’ ಹೆಸರಿಟ್ಟುಕೊಂಡೇ ದೇಶದ್ರೋಹದ ಕೆಲಸ ಮಾಡ್ತಿದ್ದ ರವಿಪೂಜಾರಿ..!

    ಬೆಂಗಳೂರು: ಆಫ್ರಿಕಾದ ಸೆನೆಗಲ್ ನಲ್ಲಿ ಸೆರೆ ಸಿಕ್ಕ ಮೋಸ್ಟ್ ವಾಂಟೆಡ್ ಗ್ಯಾಂಗ್‍ಸ್ಟರ್ ರವಿಪೂಜಾರಿ ತಾನು ಮಾಡುತ್ತಿದ್ದ ದಂಧೆಗೆ ಭಾರತದ ಹೆಸರನ್ನು ಬಳಸಿಕೊಳ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಸೆನೆಗಲ್‍ನಲ್ಲಿ ಬೀಡುಬಿಟ್ಟಿದ್ದ ಭೂಗತ ಪಾತಕಿ ರವಿ ಪೂಜಾರಿ ಅಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆದಿದ್ದನು. ಇದಕ್ಕೆ `ನಮಸ್ತೆ ಇಂಡಿಯಾ’ ಅನ್ನೋ ಹೆಸರಿಟ್ಟಿದ್ದನು. ಇಲ್ಲಿಂದಲೇ ಎಲ್ಲಾ ಬಾಲಿವುಡ್ ನಟರಿಗೆ, ಬಿಲ್ಡರ್‍ಗಳಿಗೆ ಬೆದರಿಕೆ ಹಾಕುತ್ತಿದ್ದನು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಡಾನ್ ರವಿ ಪೂಜಾರಿ ಬಂಧನದಿಂದ ನಿಟ್ಟಿಸಿರು ಬಿಟ್ಟ ಮಲ್ಪೆಯ ಕುಟುಂಬ

    ಭೂಗತ ಪಾತಕಿ ರವಿ ಪೂಜಾರಿ ಬಗ್ಗೆ ಸುಳಿವು ನೀಡಿದ್ದು ಮುಂಬೈನ ರೌಡಿ ಆಕಾಶ್ ಶೆಟ್ಟಿ. ವಾರದ ಹಿಂದೆ ಸಿನಿಮೀಯ ರೀತಿಯಲ್ಲಿ ಮುಂಬೈ ಪೊಲೀಸರಿಂದ ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ರೌಡಿ ಆಕಾಶ್ ಶೆಟ್ಟಿ, ರವಿಪೂಜಾರಿ ಬಗ್ಗೆ ಬಾಯಿಬಿಟ್ಟಿದ್ದನು. ಇದನ್ನೂ ಓದಿ: ಮುಂಬೈನ ರೌಡಿ ನೀಡಿದ್ದ ರವಿ ಪೂಜಾರಿಯ ಸುಳಿವು!

    ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಬಿಲ್ಡರ್ ಗಳಿಗೆ ಫೋನ್ ಮೂಲಕ ಧಮ್ಕಿ ಹಾಕ್ತಿದ್ದನು. 60ಕ್ಕೂ ಹೆಚ್ಚು ಕೇಸ್‍ಗಳಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ಚೋಟಾ ರಾಜನ್ ಜೊತೆ ಸೇರಿಕೊಂಡು ಅಂಡರ್ ವರ್ಲ್ಡ್ ಡಾನ್ ಆಗಿ ದುಬೈ, ಮಲೇಷ್ಯಾ, ಆಸ್ಟ್ರೇಲಿಯಾದಲ್ಲಿ ತಲೆ ಮರೆಸಿಕೊಳ್ತಿದ್ದನು. ಸದ್ಯ ಸೆನಗಲ್‍ನ ಸ್ಥಳೀಯ ಪೊಲೀಸರು ಭೂಗತ ಪಾತಕಿ ರವಿಪೂಜಾರಿಯನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಡಾನ್ ರವಿ ಪೂಜಾರಿ ಬಂಧನದಿಂದ ನಿಟ್ಟಿಸಿರು ಬಿಟ್ಟ ಮಲ್ಪೆಯ ಕುಟುಂಬ

    ಡಾನ್ ರವಿ ಪೂಜಾರಿ ಬಂಧನದಿಂದ ನಿಟ್ಟಿಸಿರು ಬಿಟ್ಟ ಮಲ್ಪೆಯ ಕುಟುಂಬ

    -ದೀಪಕ್ ಜೈನ್
    ಉಡುಪಿ: ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿಸಲಾಗಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ರಾಜಕೀಯ- ಸಿನೆಮಾ- ಉದ್ಯಮಿಗಳ ನೆಮ್ಮದಿ ಕೆಡಿಸಿದ್ದ ಪೂಜಾರಿಯ ಉಪಟಳಕ್ಕೆ ಬ್ರೇಕ್ ಬಿದ್ದಿದೆ. ರವಿ ಪೂಜಾರಿ ಬಂಧನ ಯಾರಿಗೆ ಖುಷಿ ಯಾರಿಗೆ ಬೇಸರವಾಗಿದೆಯೋ ಗೊತ್ತಿಲ್ಲ ಮಲ್ಪೆಯ ಈ ಕುಟುಂಬ ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

    ಆಫ್ರಿಕಾ.. ಆಸ್ಟ್ರೇಲಿಯಾ.. ದುಬೈನಲ್ಲಿ ಕುಳಿತು ಭಾರತದ ಮೂಲೆ ಮೂಲೆಯ ಶ್ರೀಮಂತರನ್ನು ಕಾಡುತ್ತಿದ್ದ ರವಿ ಪೂಜಾರಿ ಅಂದರ್ ಆಗಿದ್ದಾನೆ. ಆಫ್ರಿಕಾದ ಸೆನೆಗಲ್ ನಲ್ಲಿ ರವಿ ಪೂಜಾರಿಯ ಅರೆಸ್ಟ್ ಆಗಿದೆ. ಶೂಟೌಟ್, ಕೊಲೆ ಬೆದರಿಕೆ, ಹಫ್ತಾ ವಸೂಲಿಯಲ್ಲಿ ನೂರು ಪ್ರಕರಣಗಳು ರವಿ ಪೂಜಾರಿ ಮೇಲಿದೆ. ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ರವಿ ಪೂಜಾರಿ ಕರಾವಳಿ ಜಿಲ್ಲೆ ಉಡುಪಿಯ ಮಲ್ಪೆಯವನು.

    ಮಲ್ಪೆಯ ವಡಭಾಂಡೇಶ್ವರ ವಾರ್ಡ್ ನಲ್ಲಿರುವ ನೇರ್ಗಿಯ ನಿವಾಸಿ. ತಂದೆ ಕಟ್ಟಿಸಿದ ಮನೆ ಈಗಲೂ ಇದೆ. 11 ವರ್ಷದ ಹಿಂದೆ ರವಿ ಪೂಜಾರಿ ತಂದೆ ಸೂರ್ಯ ಪೂಜಾರಿ ತಾವಿದ್ದ ಮನೆಯನ್ನು ಮಾರಾಟ ಮಾಡಿದ್ದಾರೆ. ವಾಸುದೇವ ಎಂಬ ಮೀನುಗಾರಿಕಾ ವೃತ್ತಿ ಮಾಡುವವರಿಗೆ 25 ಲಕ್ಷ ರೂಪಾಯಿಗೆ ಮಾರಾಟ ಮಾಡಿ ಮುಂಬೈ ಸೇರಿಕೊಂಡಿದ್ದರು. ಅದಾಗಿ ಮನೆ ಖರೀದಿಸಿದ ಮಾಲಕರಿಗೆ ನಿರಂತರ ವಿಚಾರಣೆ ಆರಂಭವಾಗಿದೆ. ರವಿ ಪೂಜಾರಿ ಕುಟುಂಬಕ್ಕೂ ನಿಮಗೂ ಹೇಗೆ ಲಿಂಕ್ , ವ್ಯವಹಾರವಿದೆಯೇ..? ಈಗಲೂ ಸಂಪರ್ಕವಿದೆಯೇ..? ಹೀಗೆ ಕಳೆದ 10 ವರ್ಷಗಳಿಂದ ಮುಂಬೈ- ಮಂಗಳೂರು ಸಿಸಿಬಿ ನಿರಂತರ ವಿಚಾರಣೆ ಎಂಬ ಹಿಂಸೆ ಕೊಟ್ಟಿದ್ದಾರೆ. ಇದೀಗ ರವಿ ಪೂಜಾರಿ ಬಂಧನವಾಗಿದೆ ಎಂಬ ಸುದ್ದಿಕೇಳಿ ವಾಸುದೇವ ಸುಗುಣ ದಂಪತಿ ನೆಮ್ಮದಿಯ ನಗು ಬೀರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮನೆ ಮಾಲಕಿ ಸುಗುಣ, ಮನೆ ಖರೀದಿಸುವಾಗ ರವಿ ಪೂಜಾರಿ ಮನೆ ಅಂತ ನಮಗೆ ಗೊತ್ತಿರಲಿಲ್ಲ. 10 ವರ್ಷದಿಂದ ನಿರಂತರ ನಮಗೆ ಬರೀ ಟೆನ್ಶನ್. ಪೊಲೀಸರು ಆಗಾಗ ಬಂದು ರವಿಪೂಜಾರಿ ಬಗ್ಗೆ ವಿಚಾರಣೆ ಮಾಡುತ್ತಿದ್ದರು. ಮುಂಬೈ ಪೊಲೀಸರಂತು ಆಗಾಗ ಬಂದು ಪ್ರಶ್ನೆ ಮಾಡುತ್ತಿದ್ದರು. ಶೂ ಹಾಕಿಕೊಂಡು ಮನೆಯೊಳಗೆ ಬರ್ತಾಯಿದ್ರು. ನಮ್ಮ ಮನೆಗೆ ನಾವು ಚಪ್ಪಲಿ ಹಾಕಲ್ಲ. ಇವರ್ಯಾರು ಶೂ ಹಾಕಿಕೊಂಡು ಬರಲು ಅಂತ ಕೋಪ ಬರ್ತಾಯಿತ್ತು. ಕನ್ನಡ, ತುಳು ಬಾರದ ಪೊಲೀಸರು ನಮ್ಮತ್ರ ಎಂತ ಪ್ರಶ್ನೆ ಕೇಳೂದು ಅರ್ಥವಾಗುತ್ತಾ ಇರಲಿಲ್ಲ. ಈಗ ಆ ವ್ಯಕ್ತಿಯ ಬಂಧನವಾಗಿದೆ ಅಂತ ನೆಮ್ಮದಿಯಾಗಿದೆ. ಇನ್ನಾದ್ರೂ ಚಿಂತೆಯಿಲ್ಲದೆ ಭಯವಿಲ್ಲದೆ ಜೀವನ ನಡೆಸಬಹುದು ಎಂದು ಹೇಳಿದರು.

    ಮನೆ ಖರೀದಿಸಿದ ವಾಸುದೇವ ಮಾತನಾಡಿ, ನಮಗೆ ಭಯ ಇಲ್ಲ. 25 ಲಕ್ಷ ಕೊಟ್ಟು 20 ಸೆಂಟ್ಸ್ ಜಾಗದಲ್ಲಿ ಮನೆ ಸಮೇತ ಖರೀದಿ ಮಾಡಿದ್ದೇವೆ. 10 ವರ್ಷದ ಹಿಂದೆ ಅಗ್ರಿಮೆಂಟ್ ಆಗಿದೆ. ನಾವು ರವಿಪೂಜಾರಿಯನ್ನು ನೋಡ್ಲೇ ಇಲ್ಲ. ನಮಗೂ ಅವರಿಗೂ ಯಾವುದೇ ಲಿಂಕ್ ಇಲ್ಲ. ನಾವು ಸಮುದ್ರದಲ್ಲಿ ಕಸುಬು ಮಾಡುವವರು ನಮಗ್ಯಾಕೆ ಭಯ ಅಂತ ಹೇಳಿದರು.

    ರವಿ ಪೂಜಾರಿ ಉಡುಪಿಯ ಮಲ್ಪೆ ಮೂಲದವರಾದ್ರೂ ಪೂಜಾರಿ ಬಗ್ಗೆ ಸ್ಥಳೀಯರಿಗೆ ಗೊತ್ತಿರೋದು ಕಡಿಮೆ. ಐದಾರು ತಿಂಗಳ ಹಿಂದೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಧಮ್ಕಿ ಹಾಕಿ ಹಫ್ತಾಕ್ಕೆ ಬೇಡಿಕೆಯಿಟ್ಟಿದ್ದ. ದೊಡ್ಡ ಸುದ್ದಿಯಾಗಿ ಹಾಲಾಡಿ ಒಬ್ಬ ಸಜ್ಜನ ಅಂತ ತೀರ್ಮಾನಕ್ಕೆ ಬಂದು ಕ್ಷಮೆ ಕೇಳಿದ್ದ. ರವಿ ಪೂಜಾರಿ ಮೇಲೆ ಉಡುಪಿ ಜಿಲ್ಲೆಯಲ್ಲಿ 10 ಪ್ರಕರಣಗಳು ದಾಖಲಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

    ರವಿ ಪೂಜಾರಿ ಬಂಧನಕ್ಕೂ ಮೊದಲು ಆತನ ಸಹಚರರನ್ನು ಬಂಧಿಸಿ ತೀವ್ರವಾಗಿ ವಿಚಾರಣೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ಬಂಧನವಾಗಿದೆ. ರವಿ ಪೂಜಾರಿ ಹೆಸರು ಹೇಳಿಕೊಂಡು ಸಾಕಷ್ಟು ಯುವಕರ ಗುಂಪುಗಳು ಕರಾವಳಿಯಲ್ಲಿ ಕಾರ್ಯಾಚರಿಸುತ್ತಿತ್ತು. ರವಿಪೂಜಾರಿ ಬಂಧನದ ಮೂಲಕ ಅದಕ್ಕೆಲ್ಲಾ ಫುಲ್ ಸ್ಟಾಪ್ ಬೀಳಲಿದೆ ಅಂತ ಪೊಲೀಸರು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನವಜೋತ್ ಸಿಂಗ್‍ನನ್ನು ಪಾಕಿಸ್ತಾನಕ್ಕೆ ಕೊಟ್ಟು ಪಾತಕಿ ದಾವೂದ್‍ನನ್ನ ಭಾರತಕ್ಕೆ ತನ್ನಿ: ಶಾಸಕ ಯತ್ನಾಳ

    ನವಜೋತ್ ಸಿಂಗ್‍ನನ್ನು ಪಾಕಿಸ್ತಾನಕ್ಕೆ ಕೊಟ್ಟು ಪಾತಕಿ ದಾವೂದ್‍ನನ್ನ ಭಾರತಕ್ಕೆ ತನ್ನಿ: ಶಾಸಕ ಯತ್ನಾಳ

    -ಮನಸ್ಸು ಮಾಡಿದ್ರೆ ಅಂಬೇಡ್ಕರ್ ಇಸ್ಲಾಂ ಧರ್ಮ ಸೇರುತ್ತಿದ್ರು

    ಬಾಗಲಕೋಟೆ: ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ತಾನದವರು ತೆಗೆದುಕೊಂಡು ಭೂಗತ ಪಾತಕಿ ದಾವೂದ್ ಹಾಗೂ ಇನ್ನೊಬ್ಬ ಸಹಚರನನ್ನು ಭಾರತಕ್ಕೆ ಕೊಡಲಿ. ಆಗ ನಾವು ಎರಡು ಹೆಜ್ಜೆ ಮುಂದೆ ಬಂದು ಸ್ನೇಹ ಹಸ್ತ ಚಾಚುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಭಾರತದ ಬಗ್ಗೆ ದೇಶಭಕ್ತಿ ಇದ್ದರೆ ನವಜೋತ್ ಸಿಂಗ್ ಅವರನ್ನು ಪಕ್ಷದಿಂದ ತಕ್ಷಣವೇ ವಜಾ ಮಾಡಲಿ. ಅಷ್ಟೇ ಅಲ್ಲದೆ ದೇಶದ್ರೋಹಿ ಪ್ರಕರಣದಡಿ ಅವರ ಮೇಲೆ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈ ಬಾರಿ ಒಳ್ಳೆಯಕಾಲ ಆರಂಭವಾಗಿದೆ. ದೇಶದ ಎಲ್ಲ ರಾಜಕೀಯ ಪಕ್ಷಗಳು ವಿರೋಧ ಮಾಡುವುದನ್ನು ಕಡಿಮೆ ಮಾಡಿವೆ. ರಾಮನ ಶಕ್ತಿ ಏನು ಎನ್ನುವುದು ಎಲ್ಲ ಪಕ್ಷ ಹಾಗೂ ಜನಾಂಗದವರಿಗೆ ಗೊತ್ತಾಗಿದೆ. ಅಯೋಧ್ಯೆ, ಮಥುರಾ ಹಾಗೂ ಕಾಶಿಯಲ್ಲಿ ಕೃಷ್ಣ ಮಂದಿರ, ರಾಮ ಮಂದಿರ, ವಿಶ್ವನಾಥ್ ಮಂದಿರ ನಿರ್ಮಾಣವಾಗಬೇಕೆಂದು ಹಿಂದೂಗಳ ಭಾವನೆಯಾಗಿದೆ ಎಂದರು.

    ಕೆಲವು ಮುಸ್ಲಿಂ ಏಜೆಂಟರು ಈ ದೇಶದಲ್ಲಿದ್ದಾರೆ. ಅವರು ದಲಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಅವರು ಎಂದಿಗೂ ಹಿಂದೂಗಳ ಭಾವನೆಗೆ ನೋವಾಗದಂತೆ ನಡೆದುಕೊಂಡಿಲ್ಲ. ಒಂದು ವೇಳೆ ಅವರು ಮನಸ್ಸು ಮಾಡಿದ್ದರೆ ಇಸ್ಲಾಂ ಧರ್ಮವನ್ನೇ ಸ್ವೀಕಾರ ಮಾಡುತ್ತಿದ್ದರು. ಆದರೆ ಹಿಂದೂ ಧರ್ಮದ ಅಂಗವಾದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಕೆಲವರು ದಲಿತ ಹಾಗೂ ಅಲ್ಪಸಂಖ್ಯಾತ ಒಕ್ಕೂಟ ಮಾಡಿಕೊಂಡು ಹಿಂದೂಗಳನ್ನು ನಾಶ ಮಾಡುತ್ತೇವೆ ಅಂತ ಭಾಷಣದಲ್ಲಿ ಹೇಳುತ್ತಾರೆ. ಅಲ್ಲದೇ ರಾಮಮಂದಿರ ನಿರ್ಮಾಣ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ರುಂಡ ಕತ್ತರಿಸುತ್ತೇವೆ ಎನ್ನುತ್ತಾರೆ ಎಂದು ಕಿಡಿಕಾರಿದರು.

    ನಾವು ಹಿಂದೂಗಳೇನು ಬಳೆ ತೊಟ್ಕೊಂಡಿದ್ದಿವಾ? ಓವೈಸಿ ಅವರಪ್ಪನಂತಹ ಸಂಘಟನೆಗಳು ಹಿಂದೂಗಳಲ್ಲಿವೆ. ಯಾರು ರುಂಡ ಯಾರೂ ಕಡಿಯುತ್ತಾರೆ ಅಂತ ನಾವೂ ನೋಡುತ್ತೇವೆ. ನಮಗೂ ತಾಕತ್ತಿದೆ. ರುಂಡ ಅಲ್ಲ, ಈ ದೇಶದಲ್ಲಿರದಂತೆ ನೋಡಿಕೊಳ್ಳುತ್ತೇವೆ ಎಂದು ಶಾಸಕರು, ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಕಿಡಿಕಾರಿದರು.

    ಸಂಪುಟ ವಿಸ್ತರಣೆಯಾದರೂ, ಆಗದಿದ್ದರೂ ಸರ್ಕಾರ ಬೀಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆ ನಾವು ರೆಸಾರ್ಟ್ ರಾಜಕಾರಣದಿಂದ ದೂರ ಇರುತ್ತೇವೆ. ಉದ್ದೇಶಪೂರ್ವಕವಾಗಿ ನಮ್ಮ ನಾಯಕರ ಹೆಸರು ಕೆಡಿಸುವ ಕೆಲಸವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ಟೇಪ್ ಹಗರಣಕ್ಕೆ ಸಂಬಂಧಪಟ್ಟಂತೆ, ತಾಕತ್ತಿದ್ದರೆ ಧ್ವನಿ ಪರೀಕ್ಷೆ ಮಾಡಲಿ. ಅದು ಯಾರದು ಎಂಬ ಸತ್ಯ ಹೊರಬೀಳಲಿ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭೂಗತ ಪಾತಕಿ ಹೆಸರಲ್ಲಿ ರೋಲ್ ಕಾಲ್- ಇಬ್ಬರ ಬಂಧನ

    ಭೂಗತ ಪಾತಕಿ ಹೆಸರಲ್ಲಿ ರೋಲ್ ಕಾಲ್- ಇಬ್ಬರ ಬಂಧನ

    ಉಡುಪಿ: ಹಣಕ್ಕಾಗಿ ಬಿಲ್ಡರ್ ಗೆ ಬೆದರಿಕೆ ಒಡ್ಡಿದ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಧನರಾಜ್ ಕಟಪಾಡಿ (23) ಹಾಗೂ ಉಲ್ಲಾಸ್ ಮಲ್ಪೆ (25) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಕಳೆದ ಒಂದು ವಾರದಿಂದ ಪುತ್ತೂರು ಪಟ್ಟಣ ವಾಸುಕಿ ನಗರದ ನಿವಾಸಿ ಅಂಬಾಗಿಲು ಕ್ಲಾಸಿಕ್ ಬಿಲ್ಡರ್ ಆದ ಪ್ರಭಾಕರ ಪೂಜಾರಿಯವರಿಗೆ ಮೊದಲು ಕರೆ ಮಾಡಿ ವ್ಯವಹಾರದ ಬಗ್ಗೆ ಮಾತನಾಡಲು ಸಿಗುವಂತೆ ಹೇಳಿದ್ದಾರೆ. ಆದರೆ ದಿನ ಕಳೆದಂತೆ ಬಿಲ್ಡರ್ ಗೆ ಹಣದ ಬೇಡಿಕೆ ಇಡಲು ಶುರುಮಾಡಿ, ಸೋಮವಾರ ಮಲ್ಪೆಯಲ್ಲಿ ಸಿಗುವಂತೆ ಎಚ್ಚರಿಸಿದ್ದರು.

    ಆರೋಪಿಗಳು ಬಿಲ್ಡರ್ ಗೆ ಕರೆ ಮಾಡಿ ನೀನು ಬನ್ನಂಜೆ ರಾಜಾನ ಹೆಸರಿನಲ್ಲಿ ಹಣ ಮಾಡುತ್ತಿದ್ದಿಯಾ. ಆ ಹಣದಲ್ಲಿ ನಮಗೆ 25 ಲಕ್ಷ ರೂ. ಕೊಡಬೇಕೆಂದು ಬೆದರಿಕೆ ಹಾಕಿದ್ದರು. ಈ ಕುರಿತು ಪ್ರಭಾಕರ ಪೂಜಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸೂಚನೆಯಂತೆ ಪೂಜಾರಿ ಸೋಮವಾರ ಸಂಜೆ 5.30 ಕ್ಕೆ ಮಲ್ಪೆಯಲ್ಲಿ ಭೇಟಿಯಾಗಲು ತೆರಳಿದ್ದರು. ಈ ವೇಳೆ ಆರೋಪಿಗಳು ಪ್ರಭಾಕರ್ ಜತೆ ಖಾಸಗಿ ಹೋಟೆಲ್‍ವೊಂದರ ಮುಂಭಾಗ ನಿಂತು ಮಾತನಾಡುತ್ತಿದ್ದಾಗ, ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳಿಂದ ಒಂದು ಕಾರು ಹಾಗೂ 6 ಮೊಬೈಲ್ ಗಳನ್ನು ವಶಪಡಿಸಕೊಂಡಿದ್ದು, ಆರೋಪಿಗಳು ರೌಡಿ ವಿಕ್ಕಿ ಪೂಜಾರಿಯ ಬಂಟರೆಂದು ತಿಳಿಸಿದ್ದಾರೆ. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಮ್ಮನನ್ನು ನೋಡಲು ಬರ್ತಿದ್ದಾನೆ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ

    ಅಮ್ಮನನ್ನು ನೋಡಲು ಬರ್ತಿದ್ದಾನೆ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ

    ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾ ಪೆರೋಲ್ ಮೇಲೆ ಹೊರಬರಲಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಬನ್ನಂಜೆ ರಾಜ ಉಡುಪಿಗೆ ಬರಲಿದ್ದಾನೆ.

    ಜುಲೈ  8  ರಂದು ಆತ ಉಡುಪಿಗೆ ಬರಲು ನ್ಯಾಯಾಲಯದ ಮುಂದೆ ಅನುಮತಿ ಕೋರಿದ್ದಾನೆ. ಆತನಿಗೆ ನ್ಯಾಯಾಧೀಶರಿಂದ ವಿಶೇಷ ಅನುಮತಿಯೂ ಸಿಕ್ಕಿದೆ ಎಂದು ತಿಳಿದು ಬಂದಿದೆ. ಬನ್ನಂಜೆ ರಾಜ ಅನಾರೋಗ್ಯ ಪೀಡಿತ ತನ್ನ ತಾಯಿಯನ್ನು ನೋಡಲು ಆಗಮಿಸಲಿದ್ದಾನೆ.

    ಬನ್ನಂಜೆ ರಾಜಾ ಮೊರಾಕ್ಕೋದಲ್ಲಿ 2015ರಲ್ಲಿ ಬಂಧನಕ್ಕೊಳಗಾಗಿದ್ದನು. ಇದೀಗ ಈತನ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವ ಸಾಧ್ಯತೆಯಿದೆ. ಶೂಟೌಟ್ , ದರೋಡೆ , ಕೊಲೆ ಪ್ರಕರಣ ಸಹಿತ 16 ಕ್ರಿಮಿನಲ್ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

    ಬನ್ನಂಜೆ ರಾಜನ ಮೇಲೆ 45 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಉಡುಪಿ ಭೇಟಿ ಸಂದರ್ಭ ಬನ್ನಂಜೆಯ ಸಹಚರರು ಆಗಮಿಸುವ ಸಾಧ್ಯತೆಯಿದೆ.

  • ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜನ ಹುಟ್ಟುಹಬ್ಬ- ಉಡುಪಿಯಲ್ಲಿ ಎಸ್‍ಪಿ ಕಚೇರಿ ಪಕ್ಕದಲ್ಲೇ ಕಟೌಟ್

    ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜನ ಹುಟ್ಟುಹಬ್ಬ- ಉಡುಪಿಯಲ್ಲಿ ಎಸ್‍ಪಿ ಕಚೇರಿ ಪಕ್ಕದಲ್ಲೇ ಕಟೌಟ್

    ಉಡುಪಿ: ಇವತ್ತು ಅಂಡರ್ ವರ್ಲ್ಡ್ ಡಾನ್ ಉಡುಪಿ ಮೂಲದ ಬನ್ನಂಜೆ ರಾಜನ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಬನ್ನಂಜೆ ರಾಜನ ಅಭಿಮಾನಿ ಬಳಗ ಉಡುಪಿಯಲ್ಲಿ ‘ಅಣ್ಣ’ನ ಕಟೌಟ್ ಹಾಕಿದೆ. ಅದೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪಕ್ಕದಲ್ಲೇ ಕಟೌಟ್ ರಾರಾಜಿಸುತ್ತಿದೆ.

    ಎಸ್‍ಪಿ ಕಚೇರಿ ಜಂಕ್ಷನ್ ಗೆ ಹೋಗುವ ದಾರಿಯಲ್ಲೇ ಖತರ್ನಾಕ್ ಭೂಗತ ಪಾತಕಿಯ ಕಟೌಟ್ ಇರೋದು ವಿಪರ್ಯಾಸ. ಬಡವರ ರಕ್ಷಕ, ಸಮಾಜ ಸೇವಕ, ಮೆಚ್ಚಿನ ನಾಯಕ ಅಂತ ಬ್ಯಾನರ್ ನಲ್ಲಿ ನಮೂದಿಸಲಾಗಿದೆ. ಬನ್ನಂಜೆ ರಾಜ ಅಭಿಮಾನಿಗಳ ಬಳಗ ರಿಜಿಸ್ಟರ್ ಕೂಡಾ ಆಗಿರೋದು ಮತ್ತೊಂದು ವಿಪರ್ಯಾಸ.

    ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಅನುಭವಿಸುತ್ತಿದ್ದಾನೆ. ಈ ಕಟೌಟ್ ನೋಡಿದರೆ ಬನ್ನಂಜೆ ರಾಜ ಸಮಾಜ ಸೇವಕನಾಗಿ ರಾಜಕೀಯಕ್ಕೆ ಎಂಟ್ರಿ ಆಗ್ತಾನಾ ಅನ್ನೋ ಡೌಟ್ ಶುರುವಾಗಿದೆ.

    ಇವತ್ತು ಬೆಳಗ್ಗೆ ಬನ್ನಂಜೆ ರಾಜನ ಅಭಿಮಾನಿಗಳು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಕಂಬಳಿ ವಿತರಿಸುತ್ತಾರೆ ಎನ್ನಲಾಗಿದೆ. ಉಡುಪಿಯ ಮತ್ತು ಬೆಂಗಳೂರಿನ ಡಾನ್ ಅಭಿಮಾನಿಗಳು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅಂಡರ್ ವರ್ಲ್ಡ್ ಫೀಲ್ಡ್ ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಬನ್ನಂಜೆ ಎಂಟ್ರಿಗೆ ಈ ಹುಟ್ಟುಹಬ್ಬ ಆಚರಣೆ ಮೊದಲ ಹೆಜ್ಜೆ ಅನ್ನೋ ಚರ್ಚೆ ಕೂಡ ಶುರುವಾಗಿದೆ.

    ಅನಧಿಕೃತ ಬ್ಯಾನರ್-ಕಟೌಟ್ ಮೇಲೆ ಕಣ್ಣಿಡುವ, ಸಿಕ್ಕಾಪಟ್ಟೆ ಫೈನ್ ಹಾಕುವ ಉಡುಪಿ ನಗರಸಭೆ ಡಾನ್ ಕಟೌಟ್ ಗೆ ಬೆದರಿ ಸುಮ್ಮನಿದ್ಯಾ? ಅನ್ನೋದೇ ಪ್ರಶ್ನೆ. ಅದೂ ಎಸ್‍ಪಿ ಕಚೇರಿ ಪಕ್ಕದಲ್ಲೇ ಕಟೌಟ್ ಇರೋದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.