Tag: ಭುವನ್ ಪೊನ್ನಣ್ಣ

  • ಅದ್ಭುತ ಕಥೆಯ ಸುಳಿವು ಬಿಚ್ಚಿಟ್ಟ ರಾಂಧವ ಟ್ರೇಲರ್!

    ಅದ್ಭುತ ಕಥೆಯ ಸುಳಿವು ಬಿಚ್ಚಿಟ್ಟ ರಾಂಧವ ಟ್ರೇಲರ್!

    ಬೆಂಗಳೂರು: ಮೊದಲ ಪ್ರಯತ್ನವೊಂದರಲ್ಲಿ ಯಾವುದೇ ಸಿನಿಮಾವಾದರೂ ಕಾಲೂರಿ ನಿಲ್ಲುವುದೇ ಕಷ್ಟ. ಅಂಥಾದ್ದರಲ್ಲಿ ಯಾವ ಸ್ಟಾರ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ಅಬ್ಬರಿಸೋದೆಂದರೆ ಅದೊಂದು ಪವಾಡವೇ. ಅಂಥಾದ್ದೊಂದು ಪವಾಡವನ್ನು ವಾಸ್ತವದಲ್ಲಿಯೇ ಸೃಷ್ಟಿಸೋದರಲ್ಲಿ ರಾಂಧವ ಚಿತ್ರತಂಡ ಈಗಾಗಲೇ ಗೆದ್ದಿದೆ. ಇದೇ ಇಪ್ಪತ್ಮೂರನೇ ತಾರೀಕಿನಂದು ತೆರೆಗಾಣಲಿರೋ ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ. ಬಿಡುಗಡೆಯ ಕಡೆಯ ಕ್ಷಣಗಳಲ್ಲಿ ಅದ್ಭುತ ಕಥಾಹಂದರದ ಸುಳಿವು ಬಿಚ್ಚಿಡುತ್ತಲೇ ನಿಗೂಢ ಅಂಶಗಳನ್ನು ಬಚ್ಚಿಟ್ಟುಕೊಂಡಿರೋ ಈ ಟ್ರೇಲರ್ ನೋಡಿದ ಪ್ರತಿಯೊಬ್ಬರೂ ಥ್ರಿಲ್ ಆಗಿದ್ದಾರೆ.

    ಸುನಿಲ್ ಆಚಾರ್ಯ ನಿರ್ದೇಶನದ ಚೊಚ್ಚಲ ಚಿತ್ರ ರಾಂಧವ. ಬಿಗ್‍ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣರಿಗೂ ನಾಯಕನಾಗಿ ಇದು ಮೊದಲ ಹಾಗೂ ಮಹತ್ತರ ಸಿನಿಮಾ. ಎರಡು ವರ್ಷಗಳಿಗೂ ಹೆಚ್ಚು ಕಾಲದ ನಿರಂತರ ಶ್ರಮ, ಶ್ರದ್ಧೆಯ ಫಲವಾಗಿ ಈ ಚಿತ್ರವೀಗ ಗೆಲುವಿನ ಸ್ಪಷ್ಟ ಸೂಚನೆಯೊಂದಿಗೆ ಥೇಟರಿನ ಹಾದಿಯಲ್ಲಿದೆ. ಈವರೆಗೂ ರಾಂಧವನ ಟೀಸರ್, ಟ್ರೇಲರ್‍ಗಳು ಬಂದಿವೆ. ಆದರೆ ಅದರಲ್ಲಿ ಕಥೆಯ ಬಗ್ಗೆ ಯಾವ ಸುಳಿವನ್ನೂ ಕೂಡಾ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಬಿಡುಗಡೆಯಾಗಿರೋ ಟ್ರೇಲರ್‍ನಲ್ಲಿ ಕಥೆಯ ಬಗ್ಗೆ ಒಂದು ಅಂದಾಜು ಮೂಡಿಕೊಳ್ಳುತ್ತದೆ. ಆದರೆ ಕಥೆ ಸಾಗೋ ಪಥ ಮಾತ್ರ ನಿಗೂಢ. ಇದುವೇ ಈ ಟ್ರೇಲರ್‍ನ ಶಕ್ತಿ ಎನ್ನಲಡ್ಡಿಯಿಲ್ಲ.

    ಈ ಟ್ರೇಲರ್ ನಲ್ಲಿಯೇ ಭುವನ್ ಪೊನ್ನಣ್ಣರ ಅಭಿನಯದ ಝಲಕ್‍ಗಳೂ ಅನಾವರಣಗೊಂಡಿವೆ. ಪಕ್ಷಿತಜ್ಞ ರಾಬರ್ಟ್ ಗೂಬೆಯೊಂದರ ಬೆಂಬಿದ್ದು ಒಡೆಯನ ಸಮುದ್ರ ಸಂಸ್ಥಾನಕ್ಕೆ ಹೋದಾಗ ಅಲ್ಲೆದುರಾಗೋ ವಿಚಿತ್ರ ಜಗತ್ತು, ಆತನನ್ನು ಕಾಡೋ ಜನ್ಮಾಂತರಗಳ ಪ್ರಶ್ನೆಗಳೊಂದಿಗೆ ಒಂದಷ್ಟು ಪಾತ್ರಗಳನ್ನೂ ಕೂಡಾ ಈ ಟ್ರೇಲರ್ ಕಾಣಿಸಿದೆ. ಈ ಮೂಲಕ ಮತ್ತಷ್ಟು ಪ್ರೇಕ್ಷರನ್ನೂ ರಾಂಧವ ತಲುಪಿಕೊಂಡಿದ್ದಾನೆ. ಈ ಟ್ರೇಲರ್‍ನೊಂದಿಗೆ ಈ ಚಿತ್ರ ಭರ್ಜರಿಯಾಗಿಯೇ ಪ್ರೇಕ್ಷಕರತ್ತ ದಾಪುಗಾಲಿಟ್ಟಿದೆ. ಇದನ್ನು ಕಂಡ ಎಲ್ಲರೊಳಗೂ ಬೇಗನೆ ಈ ಸಿನಿಮಾ ನೋಡಬೇಕೆಂಬ ಬಯಕೆ ಹುಟ್ಟುವಂತಿದೆ. ಅದು ರಾಂಧವನ ಗೆಲುವಿನ ಲಕ್ಷಣವಾಗಿಯೂ ಕಾಣಿಸುತ್ತಿದೆ.

  • ರಾಂಧವನಿಗಾಗಿ ಗೃಹಬಂಧನ ವಿಧಿಸಿಕೊಂಡಿದ್ದರಂತೆ ಭುವನ್!

    ರಾಂಧವನಿಗಾಗಿ ಗೃಹಬಂಧನ ವಿಧಿಸಿಕೊಂಡಿದ್ದರಂತೆ ಭುವನ್!

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ರಾಂಧವ. ಯಾರೇ ಆದರೂ ಮೊದಲ ಹೆಜ್ಜೆಯಲ್ಲಿಯೇ ನಿರ್ವಹಿಸಲು ಹಿಂದೇಟು ಹಾಕುವಂಥಾ ಪಾತ್ರಗಳೊಂದಿಗೇ ಭುವನ್ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಸುನಿಲ್ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಭುವನ್ ಮೂರು ಶೇಡ್‍ಗಳ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಪಾತ್ರಗಳಿಗೆ ಅವರು ರೆಡಿಯಾದ ರೀತಿಯೇ ಒಂದು ಮಜವಾದ ಕಥೆ.

    ಹಾಗಂತ ಭುವನ್ ಹೀಗೆ ಇಂಥಾ ಪಾತ್ರಗಳಿಗೆ ಅಣಿಗೊಂಡಿದ್ದರ ಹಿಂದೆ ಬರೀ ಚೇತೋಹಾರಿ ಅನುಭವಗಳು ಮಾತ್ರವೇ ಇಲ್ಲ. ಅಲ್ಲಿ ಸಂಕಟದ, ಮನೋವ್ಯಾಕುಲದ ಅನುಭವಗಳೂ ದಂಡಿಯಾಗಿವೆ. ಇಂಥಾ ಒಂದಷ್ಟು ಅನುಭವಗಳನ್ನು ಖುದ್ದು ಭುವನ್ ಹಂಚಿಕೊಂಡಿದ್ದಾರೆ. ರಾಂಧವದಲ್ಲಿ ಭುವನ್ ಪಾತ್ರಕ್ಕೆ ಒಟ್ಟು ಮೂರು ಶೇಡುಗಳಿವೆ. ಅದರಲ್ಲಿ ರಾಬರ್ಟ್, ರಾಜ ರಾಂಧವ ಮತ್ತು ರಾಣಾ ಎಂಬ ಶೇಡುಗಳಿಗೆ ಭುವನ್ ತಿಂಗಳ ಕಾಲ ರೆಡಿಯಾಗಿದ್ದಾರೆ.

    ಅದರಲ್ಲಿಯೂ ರಾಬರ್ಟ್ ಪಾತ್ರ ಭುವನ್ ನಿಜವಾದ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ. ರಾಬರ್ಟ್ ಪಕ್ಷಿ ಶಾಸ್ತ್ರಜ್ಞ. ಆತ ಮಾತಾಡೋದೇ ಕಡಿಮೆ. ಎಲ್ಲ ಭಾವನೆಗಳನ್ನೂ ಕೂಡಾ ಎಕ್ಸ್ ಪ್ರೆಷನ್ ಮೂಲಕವೇ ತೋರಿಸಿ ಮೌನವಾಗಿರೋದು ಆ ಪಾತ್ರದ ವಿಶೇಷತೆ. ಅದನ್ನು ಸೀದಾ ಸೆಟ್ಟಿಗೆ ಹೋಗಿ ನಿರ್ವಹಿಸೋದು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ತಯಾರಿ ಬೇಕೆಂಬುದು ಭುವನ್‍ಗೆ ಮನವರಿಕೆಯಾಗಿತ್ತು. ಆದ್ದರಿಂದಲೇ ಮೌನವನ್ನು ಮನನ ಮಾಡಿಕೊಳ್ಳಲು ತಿಂಗಳುಗಳ ಕಾಲ ಏಕಾಂತದಲ್ಲಿರಲು ಅವರು ನಿರ್ಧರಿಸಿದ್ದರು.

    ಇದರನ್ವಯ ಮನೆಯೊಳಗೆ ಬಂಧಿಯಾದ ಭುವನ್ ಮೂರೂವರೆ ತಿಂಗಳ ಕಾಲ ಹೊರಗೇ ಬಂದಿರಲಿಲ್ಲ. ಹೆಚ್ಚಾಗಿ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಅಡುಗೆ ಮಾಡಿ ಹಾಕುವವರೊಬ್ಬರು ಬಿಟ್ಟರೆ ಬೇರ್ಯಾರೂ ಅವರ ಸಂಪರ್ಕದಲ್ಲಿರಲಿಲ್ಲ. ಪ್ರತೀ ದಿನ ಗೆಳೆಯರೊಂದಿಗೆ ಕಲೆತು ಖುಷಿಗೊಳ್ಳುತ್ತಿದ್ದ ಭುವನ್‍ಗೆ ಮೂರೂವರೆ ತಿಂಗಳಾಗೋ ಹೊತ್ತಿಗೆಲ್ಲ ಹುಚ್ಚು ಹಿಡಿಯುವಂಥಾ ಪರಿಸ್ಥಿತಿ ಬಂದೊದಗಿತ್ತು. ಆದರೆ ಹಾಗೆ ಹೊರ ಬರೋ ಹೊತ್ತಿಗೆಲ್ಲ ಭುವನ್ ರಾಬರ್ಟ್ ಪಾತ್ರವಾಗಿ ಬದಲಾಗಿದ್ದರಂತೆ. ಇಂಥಾ ತಯಾರಿಯೊಂದಿಗೇ ರಾಬರ್ಟ್ ಪಾತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿದೆಯಂತೆ.

  • ರಾಂಧವನಿಗೆ ಪರಭಾಷೆಗಳಲ್ಲಿಯೂ ಬೇಡಿಕೆ!

    ರಾಂಧವನಿಗೆ ಪರಭಾಷೆಗಳಲ್ಲಿಯೂ ಬೇಡಿಕೆ!

    ಪೌರಾಣಿಕ ಹಾಗೂ ಆಧುನಿಕ ಕಥೆಗಳ ಮಹಾಸಂಗಮದ ಸುಳಿವಿನೊಂದಿಗೇ ಭರ್ಜರಿ ಟಾಕ್ ಕ್ರಿಯೇಟ್ ಮಾಡಿರೋ ಚಿತ್ರ ರಾಂಧವ. ಬಿಗ್ ಬಾಸ್ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರೋ ಈ ಚಿತ್ರ ಇದೇ ಆಗಸ್ಟ್ ಹದಿನೈದರಂದು ಬಿಡುಗಡೆಯಾಗುತ್ತಿದೆ. ಕನ್ನಡದ ಪ್ರೇಕ್ಷಕರಂತೂ ರಾಂಧವನ ಜೊತೆಗೇ ಸ್ವಾತಂತ್ರ್ಯದ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ. ಇದೇ ಹೊತ್ತಿನಲ್ಲಿ ಪರಭಾಷೆಗಳಿಂದ ಡಬ್ಬಿಂಗ್ ಮತ್ತು ರೀಮೇಕ್ ಹಕ್ಕುಗಳಿಗಾಗಿ ಭಾರೀ ಬೇಡಿಕೆಯೂ ಶುರುವಾಗಿದೆ.

    ಕನ್ನಡದಲ್ಲಿ ಮಾತ್ರವಲ್ಲ, ಪರಭಾಷಾ ಚಿತ್ರರಂಗಗಳಲ್ಲಿಯೂ ಪೌರಾಣಿಕ ಕಥಾ ಹಂದರದ ಹತ್ತಿರ ಹೋಗೋ ಸಾಹಸ ಮಾಡುವವರು ಕಡಿಮೆ. ಆದರೆ ಅಂಥಾ ಚಿತ್ರಗಳಿಗಾಗಿ ಪ್ರೇಕ್ಷಕರು ಮಾತ್ರ ಸದಾ ಹಂಬಲಿಸುತ್ತಿರುತ್ತಾರೆ. ಈ ಕಾರಣದಿಂದಲೇ ರಾಂಧವ ಕನ್ನಡದ ಗಡಿ ದಾಟಿ ಬೇರೆ ಭಾಷೆಗಳಲ್ಲಿಯೂ ಹವಾ ಸೃಷ್ಟಿಸಿದೆ. ಈಗಾಗಲೇ ಇದರಲ್ಲಿ ಭುವನ್ ಪೊನ್ನಣ್ಣ ನಿರ್ವಹಿಸಿರೋ ಪಾತ್ರದ ಸುಳಿವು, ದೃಷ್ಯ ಶ್ರೀಮಂತಿಕೆ ಕಂಡು ಪರಭಾಷಾ ಚಿತ್ರರಂಗದ ಮಂದಿ ಬೆರಗಾಗಿದ್ದಾರೆ. ಬೇರೆ ಬೇರೆ ಬಾಷೆಗಳಿಂದ ನಿರ್ಮಾಪಕ ಸನತ್ ಕುಮಾರ್ ಅವರಿಗೆ ಕರೆಗಳು ಬರುತ್ತಿವೆ. ಆದರೆ ಸದ್ಯಕ್ಕವರು ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ.

    ರಾಂಧವ ಕನ್ನಡದ ಹೆಮ್ಮೆಯ ಚಿತ್ರವಾಗಿ ದಾಖಲಾಗುತ್ತದೆಂಬ ಲಕ್ಷಣ ಆರಂಭದಿಂದಲೂ ಕಾಣಿಸುತ್ತಿದೆ. ಇದೀಗ ಪರಭಾಷೆಗಳಿಂದ ಕೇಳಿ ಬರುತ್ತಿರುವ ಡಬ್ಬಿಂಗ್ ಮತ್ತು ರೀಮೇಕ್ ರೈಟ್ಸ್ ಗಾಗಿನ ಬೇಡಿಕೆ ಅದನ್ನು ನಿಜವಾಗಿಸುವ ಲಕ್ಷಣದಂತೆಯೂ ಕಾಣಿಸುತ್ತಿದೆ. ರಾಂಧವನನ್ನು ಹೊಸಬರೇ ಸೇರಿ ರೂಪಿಸಿದ್ದರೂ ಅದರ ಛಾಯೆ ಈವರೆಗಿನ ಕೆಲಸ ಕಾರ್ಯಗಳಲ್ಲಿ ಎಲ್ಲಿಯೂ ಕಾಣಿಸಿಲ್ಲ. ಅದೆಷ್ಟೋ ವರ್ಷಗಳಿಂದ ಚಿತ್ರರಂಗದಲ್ಲಿ ಪಳಗಿದವರಂತೆಯೇ ಸುನಿಲ್ ಆಚಾರ್ಯ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಅಂತೂ ರೀಮೇಕ್ ಮತ್ತು ಡಬ್ಬಿಂಗ್ ರೈಟ್ಸ್ ಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗೋ ಸಾಧ್ಯತೆಗಳಿವೆ.

  • ಆಡಿಯೋ ಲಾಂಚ್ ಮೂಲಕ ಐತಿಹಾಸಿ ಹೆಜ್ಜೆಯಿಟ್ಟ ರಾಂಧವ!

    ಆಡಿಯೋ ಲಾಂಚ್ ಮೂಲಕ ಐತಿಹಾಸಿ ಹೆಜ್ಜೆಯಿಟ್ಟ ರಾಂಧವ!

    ಬೆಂಗಳೂರು: ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಇದೇ ಆಗಸ್ಟ್ ಹದಿನೈದರಂದು ಬಿಡುಗಡೆಯಾಗಲು ರೆಡಿಯಾಗಿದೆ. ಭುವನ್ ಪೊನ್ನಣ್ಣ ನಾನಾ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿರೋ ರೀತಿ, ಕಥೆಯ ಬಗ್ಗೆ ಚಿತ್ರತಂಡ ಜಾಹೀರು ಮಾಡಿರೋ ಒಂದಷ್ಟು ಸುಳಿವುಗಳ ಮೂಲಕವೇ ರಾಂಧವ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಇನ್ನೇನು ಬಿಡುಗಡೆಗೆ ಒಂದಷ್ಟು ದಿನಗಳು ಬಾಕಿಯಿರುವಾಗಲೇ ರಾಂಧವನ ಆಡಿಯೋ ಲಾಂಚ್ ಮಾಡಲಾಗಿದೆ. ಈ ಕಾರ್ಯಕ್ರಮದ ಮೂಲಕವೇ ಚಿತ್ರತಂಡ ಐತಿಹಾಸಿಕ ಹೆಜ್ಜೆಯೊಂದರ ಮೂಲಕ ಗಮನ ಸೆಳೆದಿದೆ.

    ಸಿನಿಮಾಗಳ ಯಾವುದೇ ಸಮಾರಂಭವಿದ್ದರೂ ಅಲ್ಲಿ ತಾರೆಯರದ್ದೇ ಕಾರುಬಾರು. ಆಡಿಯೋ ಬಿಡುಗಡೆಯಂಥಾದ್ದಕ್ಕೂ ಸ್ಟಾರ್‍ಗಳನ್ನು ಮಾತ್ರವೇ ಕರೆಸುವಂಥಾ ಪರಿಪಾಠವೂ ಬೆಳೆದು ಬಂದಿದೆ. ಆದರೆ ರಾಂಧವ ತಂಡ ಆಡಿಯೋ ಬಿಡುಗಡೆ ಮಾಡಿಸಿರೋದು ಈ ನಾಡಿನ ಅನ್ನದಾತರಾದ ರೈತರು ಮತ್ತು ದೇಶ ಕಾಯಲು ಬದುಕನ್ನೇ ಮುಡಿಪಾಗಿಟ್ಟಿರುವ ಯೋಧರಿಂದ. ಈ ಮೂಲಕ ರಾಂಧವ ಚಿತ್ರತಂಡ ಹೊಸ ಪರಂಪರೆಗೆ ನಾಂದಿ ಹಾಡಿದೆ.

    ಹೀಗೆ ಹೊಸ ರೀತಿಯಲ್ಲಿ, ರೈತರು ಮತ್ತು ಯೋಧರು ಬಿಡುಗಡೆಗೊಳಿಸಿರೋ ರಾಂಧವ ಚಿತ್ರದ ಹಾಡುಗಳಿಗೆ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳೇ ಬರುತ್ತಿವೆ. ಈವರೆಗೂ ಗಾಯಕರಾಗಿದ್ದ ಶಶಾಂಕ್ ಶೇಷಗಿರಿ ತಮ್ಮ ಗೆಳೆಯ ಸುನೀಲ್ ಆಚಾರ್ಯ ನಿರ್ದೇಶನ ಮಾಡಿರೋ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಬಡ್ತಿ ಹೊಂದಿದ್ದಾರೆ. ಈ ಮೊದಲ ಹೆಜ್ಜೆಯಲ್ಲಿಯೇ ತಾಜಾತನದಿಂದ ಕೂಡಿರುವ ಸಂಗೀತದ ಪಟ್ಟುಗಳೊಂದಿಗೆ ಹಾಡುಗಳನ್ನು ಕಟ್ಟಿ ಕೊಡುವ ಮೂಲಕ ಭರವಸೆಯನ್ನೂ ಮೂಡಿಸಿದ್ದಾರೆ. ನಿರ್ದೇಶಕ ಸುನೀಲ್ ಆಚಾರ್ಯರ ಕಥೆಗೆ, ಕಲ್ಪನೆಗೆ ಪೂರಕವಾಗಿ ಮೂಡಿ ಬಂದಿರೋ ಈ ಹಾಡುಗಳು ಸೂಪರ್ ಹಿಟ್ ಆಗುವತ್ತ ಮುನ್ನುಗ್ಗುತ್ತಿವೆ.

  • ಅವಹೇಳನ ಮಾಡಿದ ತಮಿಳನಿಗೆ ಸೆಡ್ಡು ಹೊಡೆದ ರಾಜ ರಾಂಧವ!

    ಅವಹೇಳನ ಮಾಡಿದ ತಮಿಳನಿಗೆ ಸೆಡ್ಡು ಹೊಡೆದ ರಾಜ ರಾಂಧವ!

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ನಟಿಸಿರೋ ರಾಂಧವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎರಡು ತಲೆಮಾರುಗಳ ರೋಚಕ ಕಥೆ ಹೊಂದಿರೋ ಈ ಚಿತ್ರದಲ್ಲಿ ಭುವನ್ ಮಹಾ ಪರಾಕ್ರಮಿ ರಾಜನಾಗಿಯೂ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಭಿನ್ನಾತಿಭಿನ್ನವಾದ ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರೋ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ನೀಡಲು ರಾಂಧವ ಚಿತ್ರ ತಂಡ ತಯಾರಾಗಿದೆ.

    ನಿರ್ದೇಶಕ ಸುನೀಲ್ ಆಚಾರ್ಯ ನಾಳೆ ಸಂಜೆ ಆರು ಘಂಟೆಗೆ ರಾಂಧವನ ಅಚ್ಚರಿದಾಯಕ ವೀಡಿಯೋ ಒಂದನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ತೀರ್ಮಾನಿಸಿದ್ದಾರೆ. ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಬರಡು ಭೂಮಿಗೆ ಹೋಲಿಸಿದ್ದ ತಮಿಳನೊಬ್ಬನಿಗೆ ರಾಜ ರಾಂಧವ ಮಾಡಿದ್ದೇನೆಂಬುದರ ವಿವರ ಆ ವೀಡಿಯೋದಲ್ಲಿ ಜಾಹೀರಾಗಲಿದೆಯಂತೆ. ಕನ್ನಡತನವನ್ನು ಅವಹೇಳನ ಮಾಡಿದ ತಮಿಳನಿಗೆ ರಾಜ ರಾಂಧವ ಮಾಡಿದ್ದೇನೆಂಬ ಕುತೂಹಲ ನಾಳೆ ಸಂಜೆ ಆರು ಘಂಟೆಗೆ ತಣಿಯಲಿದೆ.

    ಈ ವೀಡಿಯೋ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಮೂಲಕವೇ ರಾಂಧವನಾಗಿ ಭುವನ್ ಅಬ್ಬರಿಸಿರೋ ರೀತಿ ಮತ್ತು ಇಡೀ ಕಥೆಯ ಸ್ಪೆಷಾಲಿಟಿಯೂ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆಯಂತೆ. ಅಷ್ಟಕ್ಕೂ ಈ ಚಿತ್ರದ ಹಿಂದೆ ಅಖಂಡ ಎರಡು ವರ್ಷಗಳ ಕಾಲದ ಅಗಾಧ ಪರಿಶ್ರಮವಿದೆ. ಇದಕ್ಕಾಗಿ ನಿರ್ದೇಶಕ ಸುನೀಲ್ ಆಚಾರ್ಯ ಸೇರಿದಂತೆ ಇಡೀ ಚಿತ್ರ ತಂಡ ನಿರಂತರವಾಗಿ ಶ್ರಮ ವಹಿಸಿದೆ.

    ಇನ್ನು ಭುವನ್ ಅವರಂತೂ ಈ ಚಿತ್ರಕ್ಕಾಗಿ ಎರಡು ವರ್ಷಗಳನ್ನೂ ಪಣವಾಗಿಟ್ಟಿದ್ದಾರೆ. ಇದರಲ್ಲಿನ ಪಾತ್ರ ಪಳಗಿದ ನಟರಿಗೂ ಕಷ್ಟವಾಗುವಂಥಾದ್ದು. ಇಲ್ಲಿ ಅವರಿಗೆ ಒಂದಷ್ಟು ಶೇಡಿನ ಪಾತ್ರಗಳಿವೆ. ಅದನ್ನು ಭುವನ್ ಯಾವ ರೀತಿಯಲ್ಲಿ ನಿರ್ವಹಿಸಿದ್ದಾರೆಂಬುದಕ್ಕೆ ನಾಳೆ ಹೊರ ಬರೋ ವೀಡಿಯೋದಲ್ಲಿ ಸಾಕ್ಷಿಗಳು ಸಿಗಲಿವೆ.

    https://www.youtube.com/watch?v=eRpnWE0j_mQ

  • ಜೂನ್ ಹದಿನೇಳಂದು ಬಿಡುಗಡೆಯಾಗಲಿದೆ ‘ರಾಂಧವ’ ಟೈಟಲ್ ಸಾಂಗ್!

    ಜೂನ್ ಹದಿನೇಳಂದು ಬಿಡುಗಡೆಯಾಗಲಿದೆ ‘ರಾಂಧವ’ ಟೈಟಲ್ ಸಾಂಗ್!

    ಬೆಂಗಳೂರು: ಬಿಗ್ ಬಾಸ್ ಶೋ ಸ್ಪರ್ಧಿಯಾಗಿದ್ದ ಭುವನ್ ಪೊನ್ನಣ್ಣ ನಟಿಸಿರೋ ಬಹು ನಿರೀಕ್ಷಿತ ಚಿತ್ರ ರಾಂಧವ. ಸುನಿಲ್ ಆಚಾರ್ಯ ಚೊಚ್ಚಲ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್ ಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಗೀಗ ಮುಹೂರ್ತ ನಿಗದಿಯಾಗಿದೆ. ಇದೇ ಜೂನ್ ಹದಿನೇಳರಂದು ರಾಂಧವನ ವಿಶಿಷ್ಟವಾದ ಟೈಟಲ್ ಸಾಂಗ್ ಎಲ್ಲರನ್ನು ತಲುಪಿಕೊಳ್ಳಲಿದೆ.

    ಈಗ ಬಿಡುಗಡೆಯಾಗಿರೋ ಎರಡೆರಡು ಟ್ರೈಲರ್ ಮೂಲಕವೇ ಈ ಚಿತ್ರ ವಿಶಿಷ್ಟವಾದ ಕಥೆಯನ್ನೊಳಗೊಂಡಿದೆ ಎಂಬ ವಿಚಾರವನ್ನು ಜಾಹೀರು ಮಾಡಿದೆ. ಭುವನ್ ಪೊನ್ನಣ್ಣ ಕಾಣಿಸಿಕೊಂಡಿರೋ ಗೆಟಪ್ಪುಗಳೇ ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಅದನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿಯೇ ಜೂನ್ ಹದಿನೇಳರ ಸೋಮವಾರ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ಬಿಡುಗಡೆಯಾಗಲಿದೆ.

    https://www.youtube.com/watch?v=eRpnWE0j_mQ

    ಸುನಿಲ್ ಆಚಾರ್ಯ ಆರಂಭದಲ್ಲಿ ಕಾದಂಬರಿಯೊಂದನ್ನು ಪುಸ್ತಕವಾಗಿಸಿ ಆ ನಂತರದಲ್ಲಿ ಆ ರೋಚಕ ಕಥೆಯನ್ನು ಸಿನಿಮಾ ಆಗಿ ಕಟ್ಟಿ ಕೊಟ್ಟಿದ್ದಾರೆ. ಇದೇನು ಮಾಮೂಲಿ ಶೈಲಿಯ ಚಿತ್ರವಲ್ಲ. ಭುವನ್ ಪೊನ್ನಣ್ಣ ಮೊದಲ ಹೆಜ್ಜೆಯಲ್ಲಿಯೇ ಸವಾಲಿನ ಪಾತ್ರವನ್ನು ಆರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ನಾನಾ ಶೇಡುಗಳಿವೆಯಂತೆ. ಅದಕ್ಕಾಗಿ ಅವರು ವರ್ಷಗಟ್ಟಲೆ ತಯಾರಿಯನ್ನೂ ನಡೆಸಿದ್ದಾರೆ.

    ಇಂಥಾ ಸಕಾರಾತ್ಮಕ ಸಂಗತಿಗಳಿಂದಲೇ ಸುದ್ದಿ ಕೇಂದ್ರದಲ್ಲಿರುವ ರಾಂಧವ ಹಾಡಿನ ಮೂಲಕ ಸದ್ದು ಮಾಡಲು ರೆಡಿಯಾಗಿದ್ದಾನೆ. ಈ ಚಿತ್ರಕ್ಕೆ ಯುವ ಗಾಯಕ ಶಶಾಂಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಕನ್ನಡ ಮಾತ್ರವಲ್ಲದೇ ಬಾಲಿವುಡ್ ಮಟ್ಟದಲ್ಲಿಯೂ ಹೆಸರು ಮಾಡಿರೋ ಶಶಾಂಕ್ ಈ ಮೂಲಕ ಸಂಗೀತ ನಿರ್ದೇಶಕರಾಗಿಯೂ ಹೊಮ್ಮಿದ್ದಾರೆ. ಈ ಚಿತ್ರವನ್ನು ಸನತ್ ಕುಮಾರ್ ನಿರ್ಮಾಣ ಮಾಡಿದ್ದಾರೆ.