Tag: ಭಿಕ್ಷುಕ

  • ಅಂಗವಿಕಲ ಭಿಕ್ಷುಕನ ಬಳಿ ಕಂತೆ ಕಂತೆ ಹಣ ಪತ್ತೆ

    ಅಂಗವಿಕಲ ಭಿಕ್ಷುಕನ ಬಳಿ ಕಂತೆ ಕಂತೆ ಹಣ ಪತ್ತೆ

    ಬೆಂಗಳೂರು: ಅಂಗವಿಕಲ ಭಿಕ್ಷುಕನ ಬಳಿ ಇದ್ದ ಕೊಳಕು ಬಟ್ಟೆ ಗಂಟು ಎಸೆಯುವಾಗ ಕಂತೆ ಕಂತೆ ಹಣ ಪತ್ತೆಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಘಟನೆ ನಡೆದಿದೆ.

    ಪ್ರತಿದಿನ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಂಗವಿಕಲ ರಂಗಸ್ವಾಮಯ್ಯ ಬಳಿ ಹಣ ಪತ್ತೆಯಾಗಿದೆ. ರಂಗಸ್ವಾಮಯ್ಯ ಭಿಕ್ಷೆ ಬೇಡಿದ ಹಣ ಹಾಗೂ ಅಂಗವಿಕಲ ವೇತನವನ್ನೂ ಬಳಸದೆ ಹಣವನ್ನು ಕೂಡಿಟ್ಟಿದ್ದು, ಸುಮಾರು 60 ಸಾವಿರ ರೂ. ಗಂಟಿನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

    ಹಲವು ತಿಂಗಳುಗಳಿಂದ ಸಾನ್ನವಿಲ್ಲದೇ ಕೊಳಕು, ಹರಿದ ಬಟ್ಟೆಯಲ್ಲಿಯೇ ಜೀವನ ನಡೆಸುತ್ತಿದ್ದ ರಂಗಸ್ವಾಮಿ ಬಳಿ ಇದ್ದ ಬಟ್ಟೆ ಗಂಟನ್ನು ಎಸೆಯುವ ಸಂದರ್ಭದಲ್ಲಿ ಹಣ ಪತ್ತೆಯಾಗಿತ್ತು. ಇಷ್ಟು ದಿನ ಗ್ರಾಮಸ್ಥರು ಆತನಿಗೆ ಊಟ ನೀಡುತ್ತಿದ್ದರು. ಸದ್ಯ ರಂಗಸ್ವಾಮಯ್ಯನ ಹಣವನ್ನು ಗ್ರಾಮಸ್ಥರು ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಹಣ ದುರ್ಬಳಕೆ ಆಗುವುದನ್ನು ತಡೆಯುವ ಚಿಂತನೆ ನಡೆಸಿದ್ದಾರೆ. ಅಲ್ಲದೇ ಅನಾಥಾಶ್ರಮಕ್ಕೆ ಸೇರಿಸುವ ಯೋಚನೆಯನ್ನು ಮಾಡಿದ್ದಾರೆ.

  • ಭಿಕ್ಷುಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ

    ಭಿಕ್ಷುಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ

    ಮುಂಬೈ: ಭಿಕ್ಷುಕರೊಬ್ಬರು ಸಾವನ್ನಪ್ಪಿದ ಕುರಿತು ತಿಳಿಸಲು ಅವರ ಮನೆಗೆ ತೆರಳಿದ ಪೊಲೀಸರು ಹೌಹಾರಿದ್ದು, ಸಣ್ಣ ಗುಡಿಸಲಲ್ಲಿ ಲಕ್ಷಾಂತರ ರೂ. ನಾಣ್ಯಗಳನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

    ಶುಕ್ರವಾರ ರಾತ್ರಿ ಗೋವಂಡಿ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ವೇಗದ ರೈಲಿಗೆ ಡಿಕ್ಕಿ ಹೊಡೆದು ಬಿಕ್ಷುಕ ಬಿರ್ಭಿಚಂದ್ ಆಜಾದ್(62) ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಅವರ ಸಂಬಂಧಿಕರು ಹಾಗೂ ಇತರ ಭಿಕ್ಷುಕರಿಗೆ ತಿಳಿಸಲು ಗೀವಾಂಡಿ ರೈಲು ನಿಲ್ದಾಣದ ಬಳಿಯ ಅವರ ಗುಡಿಸಲಿಗೆ ತೆರಳಿದ ರೈಲ್ವೆ ಪೊಲೀಸರ ತಂಡಕ್ಕೆ ಫುಲ್ ಶಾಕ್ ಆಗಿದೆ. ಇದನ್ನೂ ಓದಿ: 10 ವರ್ಷ ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ

    ಭಿಕ್ಷುಕನ ಗುಡಿಸಲನ್ನು ಪ್ರವೇಶಿಸಿದ ನಂತರ ಯಾರೂ ಇಲ್ಲದ್ದನ್ನು ಕಂಡು ಪೊಲೀಸರು ಒಳಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಅಷ್ಟು ಸಣ್ಣ ಗುಡಿಸಲಲ್ಲಿಯೇ ಹತ್ತಾರು ಗನ್ನಿ ಬ್ಯಾಗ್‍ಗಳಲ್ಲಿ ಲಕ್ಷಾಂತರ ರೂ. ನಾಣ್ಯಗಳಿರುವುದು ಪೊಲೀಸರಿಗೆ ಕಂಡು ಬಂದಿದೆ. ಎಣಿಸಲು ಕುಳಿತ ಪೊಲೀಸರು ನಿಬ್ಬೆರಗಾಗಿದ್ದು, ಒಟ್ಟು 1.77 ಲಕ್ಷ ರೂ. ಸಿಕ್ಕಿದೆ.

    ಗುಡಿಸಲಿನಲ್ಲಿಟ್ಟಿದ್ದ ನಾಣ್ಯಗಳನ್ನು ಎಣಿಸಲು ಪೊಲೀಸರು ಸುಮಾರು 8 ಗಂಟೆಯನ್ನು ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲದೆ ವಿವಿಧ ಬ್ಯಾಂಕ್‍ಗಳಲ್ಲಿ ಸುಮಾರು 8.77 ಲಕ್ಷ ರೂ. ಮೌಲ್ಯದ ಎಫ್‍ಡಿ(ಫಿಕ್ಸಡ್ ಡಿಪಾಸಿಟ್) ಇಟ್ಟಿರುವ ರಶೀದಿಯನ್ನು ಗಮನಿಸಿದ ನಂತರ ಪೊಲೀಸರ ತಂಡ ಇನ್ನೂ ಆಘಾತಕ್ಕೊಳಗಾಗಿದೆ.

    ಆಜಾದ್ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಸಿನಿಯರ್ ಸಿಟಿಜನ್ ಕಾರ್ಡ್‍ಗಳನ್ನು ಪೊಲೀಸ್ ತಂಡ ರಾಜಸ್ತಾನದಲ್ಲಿ ಪತ್ತೆ ಮಾಡಿದೆ. ಆತನ ಕುಟುಂಬವನ್ನು ಪತ್ತೆ ಹಚ್ಚಲು ರಾಜಸ್ಥಾನಕ್ಕೆ ತೆರಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಜಾದ್ ಅವರ ದೇಹ ಮತ್ತು ವಸ್ತುಗಳನ್ನು ಅವರ ಸಂಬಂಧಿಕರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಜಾದ್ ಭಿಕ್ಷುಕರಾಗಿದ್ದು, ಹಲವು ವರ್ಷಗಳಿಂದ ಮುಂಬೈನಲ್ಲೇ ವಾಸಿಸುತ್ತಿದ್ದಾರೆ ಎಂದು ಅಲ್ಲಿನ ವ್ಯಾಪಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಮೃತಪಟ್ಟ ಭಿಕ್ಷುಕನ ಬ್ಯಾಗಲ್ಲಿ ಸಿಕ್ತು 3 ಲಕ್ಷ ರೂ.

    ಮೃತಪಟ್ಟ ಭಿಕ್ಷುಕನ ಬ್ಯಾಗಲ್ಲಿ ಸಿಕ್ತು 3 ಲಕ್ಷ ರೂ.

    ಹೈದರಾಬಾದ್: ಆಂಧ್ರಪ್ರದೇಶದ ಗುಂತಕಲ್ ನಗರದಲ್ಲಿ ಮೃತಪಟ್ಟ ಭಿಕ್ಷಕನೊಬ್ಬನ ಬ್ಯಾಗಿನಲ್ಲಿ 3 ಲಕ್ಷ ಹಣ ಸಿಕ್ಕಿರುವ ಅಚ್ಚರಿಯ ಘಟನೆಯೊಂದು ಶುಕ್ರವಾರ ಬೆಳಕಿಗೆ ಬಂದಿದೆ.

    ಮೃತ ಭಿಕ್ಷುಕನನ್ನು 70 ವರ್ಷದ ಬಶೀರ್ ಸಾಹೇಬ್ ಎಂದು ಗುರುತಿಸಲಾಗಿದೆ. ಬಶೀರ್ ಚಿತ್ತೂರು ಜಿಲ್ಲೆಯ ಮದನಪಲ್ಲಿ ಮೂಲದವರಾಗಿದ್ದು, ಮಸ್ತಾನ್ ವಾಲಿ ದರ್ಗಾ ಬಳಿ ಅನೇಕ ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದರು.

    ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಶೀರ್, ಕಳೆದ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ದರ್ಗಾ ಬಳಿ ಬಂದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಬಶೀರ್ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಬಶೀರ್ ಬ್ಯಾಗ್ ಸಿಕ್ಕಿದೆ. ಈ ಬ್ಯಾಗನ್ನು ಪರಿಶೀಲಿಸಿದಾಗ ಅದರೊಳಗಡೆ ಒಂದು ಐಡಿ ಕಾರ್ಡ್ ಸಿಕ್ಕಿದೆ. ಅಲ್ಲದೆ ಸಾಕಷ್ಟು ನಾಣ್ಯ ಹಾಗೂ ನೋಟುಗಳನ್ನು ಕಂಡು ಪೊಲೀಸರು ದಂಗಾಗಿದ್ದಾರೆ.

    ಬ್ಯಾಗಿನ ಒಳಗಡೆಯಿದ್ದ ಎಲ್ಲಾ ಹಣವನ್ನು ಎಣಿಕೆ ಮಾಡಿದಾಗ 3,22,670 ಲಕ್ಷ ರೂ. ದೊರೆತಿದೆ. ಇಷ್ಟೊಂದು ಹಣವಿದ್ದರೂ ಬಶೀರ್ ಯಾವುದೇ ಚಿಕಿತ್ಸೆ ಪಡೆದುಕೊಳ್ಳದೇ ಮೃತಪಟ್ಟಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

  • ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!

    ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!

    ರಾಂಚಿ: ತಿಂಗಳಿಗೆ 30 ಸಾವಿರ ರೂ ಸಂಪಾದಿಸಿ 3 ಹೆಂಡತಿಯರನ್ನು ಸಾಕುತ್ತಿರುವ ಭಿಕ್ಷುಕವೊಬ್ಬ ಜಾರ್ಖಂಡ್ ನ ರಾಂಚಿಯಲ್ಲಿ ಪತ್ತೆಯಾಗಿದ್ದಾನೆ.

    ಜಾರ್ಖಂಡ್‍ನ ರಾಂಚಿಯನ್ನು ತನ್ನ ‘ರಾಜಧಾನಿ’ ಮಾಡಿಕೊಂಡಿರುವ ಚೋಟು ಬೈರಕ್ (40) ಎಂಬ ಹೆಸರಿನ ಈ ‘ಕುಬೇರ ಭಿಕ್ಷುಕ’ನದು ವೈಭವೋಪೇತ ಬದುಕು. ಹೆಸರಿಗೆ ಮಾತ್ರ ಈತ ಚೋಟು ಆದರೆ ಸಂಪಾದನೆಯಲ್ಲಿ ಮಾತ್ರ ಮೋಟು ಆಗಿದ್ದಾನೆ.

    ಜಾರ್ಖಂಡ್‍ನ ಚಕ್ರಧರ್‍ಪುರ್ ರೈಲ್ವೆ ನಿಲ್ದಾಣವೇ ಈತನ ಭಿಕ್ಷಾಟನೆಯ ಅಡ್ಡವಾಗಿದ್ದು, ಜೊತೆಗೆ ಮೂವರು ಪತ್ನಿಯರನ್ನು ರಾಣಿಯರಂತೆ ಸಾಕುತ್ತಿದ್ದಾನೆ. ಕಡು ಬಡ ಕುಟುಂಬದಲ್ಲಿ ಜನಿಸಿದ್ದ ಈತನಿಗೆ ಹುಟ್ಟಿನಿಂದಲೇ ಸೊಂಟದಲ್ಲಿ ಬಲವಿರಲಿಲ್ಲ. ಆದ್ದರಿಂದ ಚಿಕ್ಕಂದಿನಿಂದಲೇ ಭಿಕ್ಷೆ ಬೇಡುವ ಕಾಯಕಕ್ಕಿಳಿದಿದ್ದಾನೆ. ಆರಂಭದಲ್ಲಿ ತಿಂಗಳಿಗೆ 1 ಸಾವಿರ ರೂ. ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ಆದಾಯಗಳಿಸುವ ಮಟ್ಟಕ್ಕೆ ಬೆಳೆದಿದ್ದಾನೆ.

    ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಇದೀಗ ಪಾತ್ರೆ ಅಂಗಡಿಯೊಂದನ್ನು ಬೇರೆ ತೆರೆದಿದ್ದಾನೆ. ಇನ್ನೊಂದು ವಿಶೇಷ ಸಂಗತಿ ಏನಪ್ಪಾ ಅಂದರೆ ಭಿಕ್ಷಾಟನೆ ಮತ್ತು ಪಾತ್ರೆ ಅಂಗಡಿ ‘ಬಿಸಿನೆಸ್’ ಜೊತೆ ಚೋಟು ಮಹಾಶಯ ವೆಸ್ಟಿಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಕೂಡ ಮಾಡುತ್ತಾನೆ. ಕಂಪನಿ ಈತನಿಗೆ ಐಡಿ ಕಾರ್ಡ್ ಕೂಡ ನೀಡಿದೆಯಂತೆ.

    ಚೋಟುಗೆ ಮೂವರು ಹೆಂಡತಿಯರಿದ್ದು, ಮೂವರಿಗೂ ಇಷ್ಟು ಹಣ ಎಂದು ಅವರಿಗೆ ನೀಡುತ್ತಾನೆ. ಮೊದಲ ಹೆಂಡತಿ ಪಾತ್ರೆ ಅಂಗಡಿಯಲ್ಲಿ ನೋಡಿಕೊಂಡರೆ, ಇನ್ನಿಬ್ಬರು ಹೆಂಡತಿಯರು ಚಿಕ್ಕಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.