Tag: ಭಾರತ

  • ಮಳೆಯಿಂದ ಅಡಚಣೆಯಾದ್ರೂ ಭರ್ಜರಿ ಬ್ಯಾಟಿಂಗ್: ಪಾಕಿಗೆ 320 ರನ್ ಗುರಿ

    ಮಳೆಯಿಂದ ಅಡಚಣೆಯಾದ್ರೂ ಭರ್ಜರಿ ಬ್ಯಾಟಿಂಗ್: ಪಾಕಿಗೆ 320 ರನ್ ಗುರಿ

    ಎಜ್‍ಬಾಸ್ಟನ್: ಮಧ್ಯೆ ಮಧ್ಯೆ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದರೂ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತವನ್ನು ಪೇರಿಸಿದ್ದು, ಪಾಕಿಸ್ತಾನಕ್ಕೆ 320 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರ ಆಕರ್ಷಕ ಅರ್ಧಶತಕದಿಂದಾಗಿ 48 ಓವರ್‍ಗಳಲ್ಲಿ 319 ರನ್ ಗಳಿಸಿದೆ.

    ರೋಹಿತ್ ಶರ್ಮಾ ಮತ್ತು ವಿರಾಟ್ ಶಿಖರ್ ಧವನ್ ಮೊದಲನೇ ವಿಕೆಟ್‍ಗೆ 147 ಎಸೆತಗಳಲ್ಲಿ 136 ರನ್ ಜೊತೆಯಾಟವಾಡಿದರು. ಶಿಖರ್ ಧವನ್ 68 ರನ್(65 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದಾಗ ಕ್ಯಾಚ್ ನೀಡಿ ಔಟಾದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ರೋಹಿತ್ ಶರ್ಮಾ 91 ರನ್( 119 ಎಸೆತ, 7 ಬೌಂಡರಿ, 2ಸಿಕ್ಸರ್) ಗಳಿಸಿದಾಗ ರನ್ ಔಟ್ ಆದರು.

    ಯುವಿ ಕೊಹ್ಲಿ ಜುಗಲ್‍ಬಂದಿ: ಯುವರಾಜ್ ಕ್ರೀಸ್‍ಗೆ ಬಂದ ಬಳಿಕ ಭಾರತದ ರನ್ ವೇಗ ಹೆಚ್ಚಾಯಿತು. 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವಿ ಅಂತಿಮವಾಗಿ 53 ರನ್(32 ಎಸೆತ, 8 ಬೌಂಡರಿ, 1 ಸಿಕ್ಸರ್) ಗಳಿಸಿ ಎಲ್‍ಬಿಯಾದರು. ಇವರಿಬ್ಬರು ಮೂರನೇ ವಿಕೆಟ್‍ಗೆ 58 ಎಸೆತಗಳಲ್ಲಿ 93 ರನ್ ಸೊರೆಗೈದರು. ಅದರಲ್ಲೂ ವಾಹಬ್ ಎಸೆದ 46ನೇ ಓವರ್‍ನ 5 ಎಸೆತಗಳಲ್ಲಿ 20ರನ್ ಬಂದಿತ್ತು.

    ಕೊಹ್ಲಿ ಕಮಾಲ್: ಆರಂಭದಲ್ಲಿ ನಿಧನವಾಗಿ ಆಡುತ್ತಿದ್ದ ಕೊಹ್ಲಿ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬಳಿಕ ಆಕ್ರಮಣಕಾರಿ ಆಟವನ್ನು ಆಡಲಾರಂಭಿಸಿದರು. ಅಂತಿಮವಾಗಿ 81 ರನ್( 68 ಎಸೆತ, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ಔಟಾಗದೇ ಉಳಿದರು.

    ಕೊನೆಯಲ್ಲಿ ಸಿಡಿದ ಪಾಂಡ್ಯಾ: ಹಾರ್ದಿಕ್ ಪಾಂಡ್ಯಾ 20 ರನ್(6 ಎಸೆತ, 3 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು. ಮುರಿಯದ ನಾಲ್ಕನೇ ವಿಕೆಟ್‍ಗೆ ಕೊಹ್ಲಿ ಮತ್ತು ಪಾಂಡ್ಯಾ 10 ಎಸೆತಗಳಲ್ಲಿ 34 ರನ್ ಸೂರೆಗೈದರು. ಇಮಾದ್ ವಾಸೀಂ ಎಸೆದ 48 ನೇ ಓವರ್‍ನಲ್ಲಿ ಪಾಂಡ್ಯಾ ಮೂರು ಸಿಕ್ಸರ್ ಹೊಡೆದರೆ, ಕೊಹ್ಲಿ ಬೌಂಡರಿ ಹೊಡೆದ ಪರಿಣಾಮ ಈ ಓವರ್‍ನಲ್ಲಿ 23 ರನ್ ಬಂದಿತ್ತು.

    ಹಸನ್ ಅಲಿ 1 ವಿಕೆಟ್ ಪಡೆದರೆ, ಶಾದಬ್ ಖಾನ್ 1 ವಿಕೆಟ್ ಪಡದರು. ಇತರೇ ರೂಪದಲ್ಲಿ 6 ರನ್ ಬಂದಿತ್ತು. 9ನೇ ಓವರ್ ಮತ್ತು 34ನೇ ಓವರ್‍ನಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು 48 ಓವರ್‍ಗೆ ಇಳಿಸಲಾಗಿತ್ತು.

    ರನ್ ಓವರ್
    50 ರನ್ 10.4 ಓವರ್
    100 ರನ್ 19.3 ಓವರ್
    150 ರನ್ 27.3 ಓವರ್
    200 ರನ್ 37.5 ಓವರ್
    250 ರನ್ 44.2 ಓವರ್
    300 ರನ್ 47.1 ಓವರ್
    319 ರನ್ 48 ಓವರ್

  • ಲಂಡನ್‍ನಲ್ಲಿ ಉಗ್ರರ ದಾಳಿಗೆ 6 ಮಂದಿ ಸಾವು – ಭಾರತ ಕ್ರಿಕೆಟ್ ತಂಡದ ಹೋಟೆಲ್ ಲಾಕ್‍ ಡೌನ್

    ಲಂಡನ್‍ನಲ್ಲಿ ಉಗ್ರರ ದಾಳಿಗೆ 6 ಮಂದಿ ಸಾವು – ಭಾರತ ಕ್ರಿಕೆಟ್ ತಂಡದ ಹೋಟೆಲ್ ಲಾಕ್‍ ಡೌನ್

    ಲಂಡನ್: ಭಾರತ-ಪಾಕ್ ಕ್ರಿಕೆಟ್ ಪಂದ್ಯದ ಆರಂಭಕ್ಕೂ ಮೊದಲೇ ಲಂಡನ್‍ನಲ್ಲಿ ಉಗ್ರರು ದಾಳಿ ನಡೆಸಿ ಕುಕೃತ್ಯ ಮೆರೆದಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ಬರ್ಮಿಂಗ್‍ಹ್ಯಾಮ್‍ನಲ್ಲಿನ ಭಾರತ ಕ್ರಿಕೆಟ್ ತಂಡದ ಹೋಟೆಲನ್ನು ಮುಚ್ಚಲಾಗಿದೆ. ಹ್ಯಾಟ್ ರೆಜೆಂನ್ಸಿ ಹೋಟೆಲ್‍ನೊಳಗೆ ಯಾವುದೇ ಕಾರ್ ಅಥವಾ ಅತಿಥಿಗಳನ್ನ ಒಳಗೆ ಬಿಡುತ್ತಿಲ್ಲ.

    ಇಂದು ಮಧ್ಯಾಹ್ನ ಎಡ್ಜ್ ಬಸ್ಟನ್ ಸ್ಟೇಡಿಯಂನಲ್ಲಿ ಭಾರತ ಪಾಕಿಸ್ತಾನ ನಡುವೆ ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿಯ ಪಂದ್ಯ ನಿಗದಿಯಾಗಿದೆ.

    ಶನಿವಾರದಂದು ಲಂಡನ್‍ನ ಮೂರು ಪ್ರತ್ಯೇಕ ಸ್ಥಳದಲ್ಲಿ ಸಿಕ್ಕ ಸಿಕ್ಕವರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದು ಕೆಲವರಿಗೆ ಚಾಕು ಇರಿದಿದ್ದಾರೆ. ಉಗ್ರರು ಲಂಡನ್ ಬ್ರಿಡ್ಜ್ ಬಳಿ ಅತೀ ವೇಗದಲ್ಲಿ ವ್ಯಾನ್ ಚಾಲನೆ ಮಾಡಿದ್ದು, ಪಾದಾಚಾರಿಗಳ ಮೇಲೆ ವ್ಯಾನ್ ಹರಿಸಿದ್ದಾರೆ. ಅಲ್ಲದೆ ಬರೋ ಮಾರ್ಕೆಟ್ ಬಳಿ ಹಲವರಿಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ 6 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೂವರು ಉಗ್ರರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

    ಒಂದು ತಿಂಗಳ ಹಿಂದಷ್ಟೇ ಲಂಡನ್ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಹೋಗಿ ಉಗ್ರರು ವಿಫಲರಾಗಿದ್ರು.

    ಬಹು ದಿನಗಳ ನಂತರ ಸಾಂಪ್ರದಾಯಿಕ ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ಲಂಡನ್‍ನಲ್ಲಿ ಆರಂಭಗೊಂಡಿವೆ. 2016ರ ವಿಶ್ವ ಟಿ-ಟ್ವೆಂಟಿಯಲ್ಲಿ ನಂತರ ಭಾರತ ಮತ್ತು ಪಾಕ್ ಎರಡು ದೇಶಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸಹ ಇಂದಿನ ಪಂದ್ಯಕ್ಕೆ ಮಹತ್ವ ನೀಡಿದೆ.

    ಭಾರತ ಹಾಗೂ ಪಾಕಿಸ್ತಾನ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಟ್ರೋಫಿಗೆ ಸೆಣಸಿದ್ದು, ಒಂದು ಬಾರಿ ಭಾರತ ಗೆದ್ರೆ ಪಾಕಿಸ್ತಾನ 2 ಬಾರಿ ಗೆದ್ದಿದೆ. ಈಗ 2ನೇ ಜಯಕ್ಕೆ ಭಾರತ ಕಾತರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಯುವರಾಜ್ ಸಿಂಗ್ ಬ್ಯಾಟಿಂಗ್ ಫಾರ್ಮ್‍ನಲ್ಲಿದ್ರೆ, ಹಾರ್ದಿಕ್ ಪಾಂಡ್ಯ, ಜಸ್ಪೀತ್ ಬೂಮ್ರಾ ಬಾಲ್ ದಾಳಿಗೆ ಸಜ್ಜಾಗಿದ್ದಾರೆ.

    ಅತ್ತ ಪಾಕಿಸ್ತಾನ ತಂಡದ ಆಟಗಾರರು ಸಹ ನಾವೇನು ಕಡಿಮೆಯಿಲ್ಲ ಎಂದು ಅವರು ಅಖಾಡಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಬರ್ಮಿಂಗ್ ಹ್ಯಾಮ್‍ನಲ್ಲಿ ರಿಯಲ್ ವಾರ್ ನಡೆಯಲಿದೆ.

     

  • ಇಂದು ನಡೆಯಲಿದೆ ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ- ಮಿಸ್ ಮಾಡ್ಕೊಬೇಡಿ!

    ಇಂದು ನಡೆಯಲಿದೆ ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ- ಮಿಸ್ ಮಾಡ್ಕೊಬೇಡಿ!

    ಬೆಂಗಳೂರು: ಬಹು ದಿನಗಳ ನಂತರ ಸಾಂಪ್ರದಾಯಿಕ ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.

    ಈಗಾಗಲೇ ಐಸಿಸಿ ಚಾಂಪಿಯನ್ ಟ್ರೋಪಿ ಪಂದ್ಯಾವಳಿಗಳು ಲಂಡನ್‍ನಲ್ಲಿ ಆರಂಭಗೊಂಡಿವೆ. 2016ರ ವಿಶ್ವ ಟಿ-ಟ್ವೆಂಟಿಯ ನಂತರ ಭಾರತ ಮತ್ತು ಪಾಕ್ ಎರಡು ದೇಶಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸಹ ಇಂದಿನ ಪಂದ್ಯಕ್ಕೆ ಮಹತ್ವ ನೀಡಿದೆ.

    ಭಾರತ ಹಾಗೂ ಪಾಕಿಸ್ತಾನ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಟ್ರೋಫಿಗೆ ಸೆಣಸಿದ್ದು, ಒಂದು ಬಾರಿ ಭಾರತ ಗೆದ್ರೆ ಪಾಕಿಸ್ತಾನ 2 ಬಾರಿ ಗೆದ್ದಿದೆ. ಈಗ 2ನೇ ಜಯಕ್ಕೆ ಭಾರತ ಕಾತರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಯುವರಾಜ್ ಸಿಂಗ್ ಬ್ಯಾಟಿಂಗ್ ಫಾರ್ಮ್‍ನಲ್ಲಿದ್ರೆ, ಹಾರ್ದಿಕ್ ಪಾಂಡ್ಯ, ಜಸ್ಪೀತ್ ಬೂಮ್ರಾ ಬಾಲ್ ದಾಳಿಗೆ ಸಜ್ಜಾಗಿದ್ದಾರೆ.

    ಅತ್ತ ಪಾಕಿಸ್ತಾನ ತಂಡದ ಆಟಗಾರರು ಸಹ ನಾವೇನು ಕಡಿಮೆಯಿಲ್ಲ ಎಂದು ಅವರು ಅಖಾಡಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಬರ್ಮಿಂಗ್ ಹ್ಯಾಮ್‍ನಲ್ಲಿ ರಿಯಲ್ ವಾರ್ ನಡೆಯಲಿದೆ.

  • ಇಂಡೋ, ಪಾಕ್ ಕ್ರಿಕೆಟ್: ಗೆಲುವು ಯಾರಿಗೆ? ಹಿಂದಿನ ಪಂದ್ಯಗಳಲ್ಲಿ ಗೆದ್ದವರು ಯಾರು?

    ಇಂಡೋ, ಪಾಕ್ ಕ್ರಿಕೆಟ್: ಗೆಲುವು ಯಾರಿಗೆ? ಹಿಂದಿನ ಪಂದ್ಯಗಳಲ್ಲಿ ಗೆದ್ದವರು ಯಾರು?

    ಎಜ್‍ಬಾಸ್ಟನ್: ಭಾರತ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಭಾನುವಾರ ಇಂಗ್ಲೆಂಡಿನ ಎಜ್‍ಬಾಸ್ಟನ್ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 3 ಗಂಟೆಗೆ ಆರಂಭವಾಗಲಿರುವ ಈ ಪಂದ್ಯ ವೀಕ್ಷಿಸಲು ಜನರು ಈಗ ತುದಿಗಾಲಿನಲ್ಲಿ ನಿಂತಿದ್ದಾರೆ.

    ವಿಶೇಷ ಏನೆಂದರೆ 2013ರ ಚಾಂಪಿಯನ್ಸ್ ಟ್ರೋಫಿ ವೇಳೆ ಇದೇ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಭಾರತ ಜಯಗಳಿಸಿತ್ತು. ಹೀಗಾಗಿ 50 ಓವರ್‍ಗಳ ಪಂದ್ಯವಾಗಿರುವುದರಿಂದ ಈ ಹಿಂದಿನ ಮೂರು ದೊಡ್ಡ ಟೂರ್ನಿಯಲ್ಲಿ ಯಾವ ತಂಡ ಗೆದ್ದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    2015ರ ವಿಶ್ವಕಪ್:
    ಆಸ್ಟ್ರೇಲಿಯಾದ ಆಡಿಲೆಡ್‍ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 107 ರನ್(126 ಎಸೆತ, 8 ಬೌಂಡರಿ) ಹೊಡೆದಿದ್ದರು. 301ರನ್‍ಗಳ ಗುರಿಯನ್ನು ಪಡೆದ ಪಾಕಿಸ್ತಾನ 47 ಓವರ್‍ಗಳಲ್ಲಿ 224 ರನ್‍ಗಳಿಗೆ ಆಲೌಟ್ ಆಯ್ತು. ಮೊಹಮ್ಮದ್ ಶಮಿ 35 ರನ್‍ಗಳಿಗೆ 4 ವಿಕೆಟ್ ಪಡೆದಿದ್ದರು. ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಈ ಮೂಲಕ 6 ವಿಶ್ವಕಪ್‍ನಲ್ಲಿ ಭಾರತ ಪಾಕ್ ವಿರುದ್ಧ ಜಯಗಳಿಸಿದ ಸಾಧನೆ ಮಾಡಿತು.

    2014ರ ಏಷ್ಯಾಕಪ್:
    ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯ ಕಪ್‍ನಲ್ಲಿ ಭಾರತವನ್ನು ಒಂದು ವಿಕೆಟ್‍ನಿಂದ ಪಾಕಿಸ್ತಾನ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತ್ತು. ಭಾರತದ ಪರ ಅಂಬಾಟಿ ರಾಯಡು 58 ರನ್ ಹೊಡೆದಿದ್ದರೆ, ರವೀಂದ್ರ ಜಡೇಜಾ ಔಟಾಗದೇ 52 ರನ್ ಹೊಡೆದಿದ್ದರು. ಪಾಕಿಸ್ತಾನ 49.4 ಓವರ್ ಗಳಲ್ಲಿ 249 ರನ್ ಗಳಿಸಿ 1 ವಿಕೆಟ್‍ಗಳ ಜಯವನ್ನು ಸಂಪಾದಿಸಿತ್ತು. ಮೊಹಮ್ಮದ್ ಹಫೀಸ್ 75ರನ್ ಭಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    2013ರ ಚಾಂಪಿಯನ್ಸ್ ಟ್ರೋಫಿ:
    ಇಂಗ್ಲೆಂಡಿನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ 165 ರನ್‍ಗಳಿಗೆ ಆಲೌಟ್ ಆಗಿತ್ತು. ಮಳೆ ಬಂದ ಹಿನ್ನೆಲೆಯಲ್ಲಿ ಡಕ್‍ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 22 ಓವರ್ ಗಳಲ್ಲಿ 102 ರನ್‍ಗಳ ಟಾರ್ಗೆಟ್ ನೀಡಲಾಗಿತ್ತು. ಭಾರತ 19.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ವಿಜಯಿ ಆಯ್ತು. 8 ಓವರ್ ಎಸೆದು 2 ಮೇಡನ್ ಮಾಡಿ 19 ರನ್ ನೀಡಿ 2 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  • ಐಟಿ ಕಂಪೆನಿಗಳ ಹೊಸ ಜಾಬ್ ಆಫರ್‍ಗೆ ಟೆಕ್ಕಿಗಳು ಶಾಕ್!

    ಐಟಿ ಕಂಪೆನಿಗಳ ಹೊಸ ಜಾಬ್ ಆಫರ್‍ಗೆ ಟೆಕ್ಕಿಗಳು ಶಾಕ್!

    ಬೆಂಗಳೂರು: “ನೀವು ಕೆಲಸ ತೊರೆಯಿರಿ ಅಥವಾ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೋ ಅವರ ಹೆಸರನ್ನು ರೆಫರ್ ಮಾಡಿ” ಇದು ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡುತ್ತಿರುವ ಹೊಸ ಆಫರ್.

    ಐಟಿ ಕಂಪೆನಿಗಳು ಕೆಲ ಉದ್ಯೋಗಿಗಳನ್ನು ಕಿತ್ತು ಹಾಕಲು ಮುಂದಾಗುತ್ತಿದ್ದು, ಈಗ ಸಹೋದ್ಯೋಗಿಗಳ ನಡುವೆ ವೈಮನಸ್ಸು ತರುವ ಕೆಲಸಕ್ಕೆ ಕೈ ಹಾಕಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    ಕಂಪೆನಿಗಳು ಈಗ ತಮಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಅಸಮರ್ಥ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಒಂದೊಂದೆ ತಂತ್ರವನ್ನು ಅನುಸರಿಸಲು ಆರಂಭಿಸಿದೆ. ಈಗ ಉದ್ಯೋಗಿಯೊಬ್ಬ ತನ್ನ ಉದ್ಯೋಗವನ್ನು ಉಳಿಸಿಕೊಳ್ಳಲು ಬೇರೆ ಒಬ್ಬ ಉದ್ಯೋಗಿಯನ್ನು ಮನೆಗೆ ಕಳುಹಿಸಬೇಕಾದ ಸಂದರ್ಭ ಒದಗಿ ಬಂದಿದೆ ಎಂದು ಮಾಧ್ಯಮವೊಂದು ಉದ್ಯೋಗಿಗಳ ಹೇಳಿಕೆಯನ್ನು ಆಧಾರಿಸಿ ವರದಿ ಮಾಡಿದೆ.

    ಕಂಪೆನಿಗೆ ವೆಚ್ಚದಾಯಕವಾಗಿರುವ ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಕೆಲಸದಿಂದ ಕಿತ್ತು ಹಾಕುವಂತೆ ಕಂಪೆನಿಯ ಹಿರಿಯ ಅಧಿಕಾರಿಗಳು ಎಚ್‍ಆರ್‍ಗೆ ಆದೇಶಿಸಿದ್ದಾರೆ. ಇದರಂತೆ ಕೆಲ ಕಂಪೆನಿಗಳ ಎಚ್‍ಆರ್‍ಗಳು ಕೆಲ ಉದ್ಯೋಗಿಗಳಿಗೆ ಕರೆ ಮಾಡಿ, ಕಡಿಮೆ ವೇತನ ಪಡೆದು ಕೆಲಸವನ್ನು ತೊರೆಯುವಂತೆ ಹೇಳಿದ್ದಾರೆ. ಇನ್ನು ಕೆಲ ಕಂಪೆನಿಗಳು, ನಿಮಗೆ ಇಷ್ಟೊಂದು ವೇತನ ನೀಡಲು ಕಷ್ಟವಾಗುತ್ತದೆ. ಹೀಗಾಗಿ ಒಂದೋ ನೀವು ಕಂಪೆನಿ ತೊರೆಯಿರಿ, ಇಲ್ಲವೇ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೆಂದು ರೆಫರ್ ಮಾಡಿ ಎಂದು ಹೇಳಿದ್ದಾರೆ.

    ಎಚ್‍ಆರ್‍ಗಳ ಮೂಲಕ ಈ ಆಟವನ್ನು ಆಡಿ ಕಂಪೆನಿಗಳು ಮನರಂಜನೆಯನ್ನು ತೆಗೆದುಕೊಳ್ಳುತ್ತಿದ್ದರೆ, ಉದ್ಯೋಗಿಗಳು ತಮ್ಮ ನೋವಿನ ವಿಚಾರವನ್ನು ಮಾಧ್ಯಮಗಳಲ್ಲಿ ತೋಡಿಕೊಂಡಿದ್ದಾರೆ.

    ಕಂಪೆನಿಗಳ ಆಟ ಹೀಗಿರುತ್ತೆ:
    ಬೆಂಗಳೂರಿನ ನೊಂದ ಐಟಿ ಉದ್ಯೋಗಿಯೊಬ್ಬರು ಕಂಪೆನಿ ಹೇಗೆ ಉದ್ಯೋಗಿಗಳ ಜೊತೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ವಿವರಿಸುತ್ತಾ, ಕಳೆದ ತಿಂಗಳ 23ರಂದು ಎಚ್‍ಆರ್ ಮ್ಯಾನೇಜರ್ ಅವರನ್ನು ಭೇಟಿಯಾಗುವಂತೆ ನನಗೆ ಕರೆ ಬಂತು. ಹೀಗಾಗಿ ನಾನು ಹೈದರಾಬಾದ್‍ನಲ್ಲಿರುವ ಎಚ್‍ಆರ್ ಮುಖ್ಯಸ್ಥರ ಜೊತೆ ವಿಡಿಯೋ ಚಾಟ್ ಮಾಡುತ್ತಿರುವಾಗ, “ನೀನು ಉದ್ಯೋಗವನ್ನು ತೊರೆಯಬೇಕು. ನಿನಗೆ 2 ವಾರ ಸಮಯವಕಾಶ ಮತ್ತು 2 ತಿಂಗಳ ಮೂಲ ವೇತನ ನೀಡುತ್ತೇವೆ” ಎಂದರು.

    ಇದಾದ ಬಳಿಕ 29ರಂದು ಕರೆ ಮಾಡಿ “ಇನ್ನು ಯಾಕೆ ರಾಜೀನಾಮೆ ನೀಡಿಲ್ಲ” ಎಂದು ಪ್ರಶ್ನಿಸಿದರು. ನಾನು “ರಾಜೀನಾಮೆ ನೀಡುವುದಿಲ್ಲ” ಎಂದೆ. ಇದಕ್ಕೆ ಅವರು “ನಿಮ್ಮ ಕಾಂಟ್ರಾಕ್ಟ್ ಟರ್ಮಿನೇಟ್ ಮಾಡುತ್ತೇವೆ. ಈ ರೀತಿ ಮಾಡಿದರೆ ಮುಂದೆ ಬೇರೆ ಯಾವ ಕಂಪೆನಿಯಲ್ಲೂ ಕೆಲಸ ಸಿಗುವುದಿಲ್ಲ” ಎಂದು ಬೆದರಿಸಿದರು. 31 ರಂದು ಕರೆ ಮಾಡಿ, “ನಿನ್ನ ಬದಲಿಗೆ ಬೇರೊಬ್ಬ ಉದ್ಯೋಗಿಯನ್ನು ರೆಫರ್ ಮಾಡು, ಆತನನ್ನು ಕೆಲಸದಿಂದ ತೆಗೆದು ಹಾಕಲಾಗುವುದು” ಎನ್ನುವ ವಿಚಿತ್ರ ಆಫರ್ ನೀಡಿದರು.

    ಅದೇ ದಿನ ನನಗೆ ಆಟೋಮೇಟೆಡ್ ಇಮೇಲ್ ಬಂತು. ಅದರಲ್ಲಿ “ಕಂಪನಿಯಲ್ಲಿ ಇದು ನಿನ್ನ ಕೊನೆಯ ದಿನ. ಇಂದಿನಿಂದ ನಿನಗೆ ನೀಡಿರುವ ಕಂಪನಿ ಇಮೇಲ್ ಐಡಿ ಹಾಗೂ ಇತರ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ” ಎಂದು ತಿಳಿಸಲಾಗಿತ್ತು. ಆದರೆ ಈ ಮೇಲ್ ಬಗ್ಗೆ ಎಚ್.ಆರ್. ಕಡೆಯಿಂದ ಯಾವುದೇ ಅಧಿಕೃತ ಕರೆ ಬರಲಿಲ್ಲ ಎಂದು ಅವರು ತಮ್ಮ ನೋವನ್ನು ತೊಡಿಕೊಂಡಿದ್ದಾರೆ.

    ಇದನ್ನೂ ಓದಿ:ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ

    ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

  • ಗುಡ್‍ನ್ಯೂಸ್: ಮುಂದಿನ ವರ್ಷ ಸ್ವದೇಶಿ ಜಿಪಿಎಸ್ ಸಾರ್ವಜನಿಕ ಬಳಕೆಗೆ ಲಭ್ಯ: ನಾವಿಕ್ ವಿಶೇಷತೆ ಏನು?

    ಗುಡ್‍ನ್ಯೂಸ್: ಮುಂದಿನ ವರ್ಷ ಸ್ವದೇಶಿ ಜಿಪಿಎಸ್ ಸಾರ್ವಜನಿಕ ಬಳಕೆಗೆ ಲಭ್ಯ: ನಾವಿಕ್ ವಿಶೇಷತೆ ಏನು?

    ನವದೆಹಲಿ: ಭಾರತದ ಸ್ವದೇಶಿ ಜಿಪಿಎಸ್ ನಾವಿಕ್(ನಾವಿಗೇಷನ್ ವಿಥ್ ಕಾನ್‍ಸ್ಟೇಲೇಶನ್) 2018ರ ಮೊದಲಾರ್ಧದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.

    ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ(ಐಆರ್‍ಎನ್‍ಎಸ್‍ಎಸ್)7 ಉಪಗ್ರಹಗಳನ್ನು ಹೊಂದಿದ್ದು ಈಗ ನಿಖರತೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುತ್ತಿದ್ದು, ಮುಂದಿನ ವರ್ಷ ಮೊದಲಾರ್ದದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ ಅಹಮದಾಬಾದ್‍ನಲ್ಲಿರುವ ಸ್ಪೇಸ್ ಅಪ್ಲಿಕೇಶನ್ ಸೆಂಟರ್(ಎಸ್‍ಎಎಸ್) ನಿರ್ದೇಶಕ ತಪನ್ ಮಿಶ್ರಾ ಹೇಳಿದ್ದಾರೆ.

    ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ ‘ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್‍ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

    ಐಆರ್‍ಎನ್‍ಎಸ್‍ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2016ರ ಏಪ್ರಿಲ್ 28ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ ‘ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.

    ಯೋಜನೆಗೆ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡುಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ.

    ಲಾಭ ಏನು?
    ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಪ್ರಸ್ತುತ ವಿಶ್ವದಲ್ಲಿ ಅಮೆರಿಕ,(ಜಿಪಿಎಸ್), ಯುರೋಪಿಯನ್ ಒಕ್ಕೂಟ(ಗೆಲಿಲಿಯೊ), ರಷ್ಯಾ(ಗ್ಲೋನಾಸ್), ಚೀನಾ(ಬೈಡೂ) ಜಿಪಿಎಸ್ ವ್ಯವಸ್ಥೆಯನ್ನು ಹೊಂದಿತ್ತು. ಐದನೇ ದೇಶವಾಗಿ ಭಾರತ ಈ ಪಟ್ಟಿಗೆ ಸೇರ್ಪಡೆಯಾಗಿದೆ.

  • ಇನ್ನು ಐದು ವರ್ಷದಲ್ಲಿ  ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ನವದೆಹಲಿ: ಈ ಸುದ್ದಿ ಓದಿದ್ರೆ ನಿಮಗೆ ಶಾಕ್ ಮತ್ತು ಸಂತೋಷ ಎರಡೂ ಆಗಬಹುದು. ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬೆಲೆ ಭಾರೀ ಇಳಿಕೆಯಾಗಲಿದ್ದು, 2022ರ ವೇಳೆಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ರೂಪಾಯಿಗಿಂತ ಕಡಿಮೆ ಆಗಲಿದೆ ಎಂದು ಅಮೆರಿಕದ ಖ್ಯಾತ ಉದ್ಯಮಿ ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

    ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾಗಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಲಿದೆ ಎಂದು ಅವರು ಊಹಿಸಿದ್ದಾರೆ.

    ಕಡಿಮೆ ಹೇಗೆ ಆಗುತ್ತೆ?
    ಮುಂದಿನ ವರ್ಷ ಗಳಲ್ಲಿ ಸೆಲ್ಫ್ ಡ್ರೈವ್ ಕಾರುಗಳಿಂದಾಗಿ ತೈಲದ ಬಳಕೆ ಗಣನೀಯವಾಗಿ ಇಳಿಕೆಯಾಗಲಿದೆ. 10 ವರ್ಷದ ಒಳಗಡೆ ಒಂದು ಬ್ಯಾರೆಲ್ ತೈಲದ ಬೆಲೆ 25 ಡಾಲರ್ ತಲುಪಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಮುಂದೆ ಈಗ ಬಳಕೆಯಲ್ಲಿರುವ ಹಳೇ ಮಾದರಿಯ ಕಾರುಗಳನ್ನು ಬಳಸುವುದಿಲ್ಲ. ಸೆಲ್ಫ್ ಡ್ರೈವ್ ಎಲೆಕ್ಟ್ರಿಕ್ ಕಾರುಗಳು ಅತಿ ಹೆಚ್ಚು ಪ್ರಮಾಣದಲ್ಲಿ ರಸ್ತೆಗೆ ಇಳಿಯಲಿದೆ. ಈ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಕಡಿಮೆ ಇರಲಿದೆ ಎಂದು ಅವರು ಹೇಳಿದ್ದಾರೆ.

    2030ರ ವೇಳೆಗೆ ಶೇ.95ರಷ್ಟು ಜನ ಸ್ವಂತ ಬಳಕೆಗಾಗಿ ಕಾರನ್ನು ಇಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಆಟೋಮೊಬೈಲ್ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಎಲೆಕ್ಟ್ರಿಕ್ ಕಾರುಗಳು ರಸ್ತೆಗೆ ಇಳಿದ ಬಳಿಕ ಜಾಗತಿಕ ತೈಲ ಉದ್ಯಮ ಕುಸಿದು ಬೀಳಲಿದೆ ಎಂದು ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

    ಯಾರು ಈ ಟೋನಿ ಸೆಬಾ?
    ಅಮೆರಿಕದ ಸಿಲಿಕಾನ್ ವ್ಯಾಲಿಯ ಉದ್ಯಮಿಯಾಗಿರುವ ಟೋನಿ ಸೆಬಾ ಸ್ಟಾಂಡ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಮಸಾಚುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿವಿಯಿಂದ ಕಂಪ್ಯೂಟರ್ ಎಂಜಿನಿಯರಿಂಗ್ ನಲ್ಲಿ ಬಿಎಸ್ ಪದವಿಯನ್ನು ಪಡೆದಿರುವ ಇವರು ಹಲವು ಪುಸ್ತಕ ಬರೆದಿದ್ದಾರೆ. ನೂರಕ್ಕೂ ಅಧಿಕ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದಾರೆ.

    ಸೆಬಾ ಅವರ ಮಾತನ್ನು ನಂಬಬೇಕೇ?
    ಮುಂದೆ ಸೌರಶಕ್ತಿಯ ಬಳಕೆ ಹೆಚ್ಚಾಗಲಿದೆ. ಅಷ್ಟೇ ಅಲ್ಲದೇ ಕಡಿಮೆ ದರದಲ್ಲಿ ಸೋಲಾರ್‍ನಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಈ ಹಿಂದೆ ಟೋನಿ ಸೆಬಾ ಹೇಳಿದ್ದು ಈಗ ನಿಜವಾಗಿದೆ.

    ಭವಿಷ್ಯ ನಿಜವಾಗುತ್ತಾ?
    ಈಗಾಗಲೇ ಹಲವಾರು ಕಂಪೆನಿಗಳು ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿ ಪಡಿಸುತ್ತಿವೆ. ಇದರ ಜೊತೆಗೆ ಗೂಗಲ್, ಆಪಲ್ ನಂತಹ ಟೆಕ್ ದಿಗ್ಗಜ ಕಂಪೆನಿಗಳು ಸೆಲ್ಫ್ ಡ್ರೈವಿಂಗ್ ಕಾರು ತಯಾರಿಕೆಗೆ ಉತ್ತೇಜನ ನೀಡಲು ಕಾರು ತಯಾರಕಾ ಕಂಪೆನಿಗಳ ಜೊತೆ ಕೈ ಜೋಡಿಸಿವೆ. ಹೀಗಾಗಿ ಮುಂದಿನ ಕೆಲವೇ ವರ್ಷದಲ್ಲಿ ಎಲೆಕ್ಟ್ರಿಕ್ ಕಾರುಗಳು ರಸ್ತೆಯನ್ನು ಅಕ್ರಮಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ.

    ಭಾರತ ಸೇರಿದಂತೆ, ಯುರೋಪ್ ಖಂಡದ ಕೆಲ ದೇಶಗಳು 2030ರ ವೇಳೆಗೆ ಪೆಟ್ರೋಲ್ ಕಾರನ್ನು ನಿಷೇಧಿಸಲು ಮುಂದಾಗಿವೆ. ನಿಷೇಧದಿಂದಾಗಿ ಕಚ್ಚಾ ತೈಲದ ಆಮದು ಕಡಿಮೆಯಾಗಲಿದ್ದು, ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ಬೆಲೆ ಕಡಿಮೆಯಾದರೆ ಕಚ್ಚಾ ತೈಲದಿಂದಲೇ ಈಗ ದೇಶದ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಅರಬ್ ದೇಶಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

    ಮುಂದೆ ಶೇ.95ರಷ್ಟು ಜನ ಸ್ವಂತಕ್ಕಾಗಿ ಕಾರನ್ನು ಬಳಸುವುದಿಲ್ಲ ಎಂದು ಟೋನಿ ಸೆಬಾ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಈ ಮಾತು ನಿಜವಾಗಬಹುದು ಎನ್ನುತ್ತಾರೆ ಕೆಲ ಮಂದಿ. ಕ್ಯಾಬ್ ವ್ಯವಸ್ಥೆ ಆರಂಭಗೊಂಡ ಸಂದರ್ಭದಲ್ಲಿ ಸುರಕ್ಷತೆ, ಇಂಟರ್‍ನೆಟ್ ಇತ್ಯಾದಿ ವಿಚಾರಗಳನ್ನು ಹೇಳಿ ಈ ಉದ್ಯಮ ಬೇರೆ ಕಡೆ ಯಶಸ್ವಿಯಾದರೂ ಭಾರತದಲ್ಲಿ ಕಷ್ಟ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಮಹಾನಗರಗಳಲ್ಲಿ ಕ್ಯಾಬ್ ಗಳನ್ನೇ ಜನ ಹೆಚ್ಚು ಬಳಕೆ ಮಾಡುತ್ತಿದ್ದು, ಉದ್ಯಮ ಯಶಸ್ವಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಕಾರು ಖರೀದಿಸದೇ ಪ್ರಯಾಣಕ್ಕಾಗಿ ಕ್ಯಾಬ್ ಕಾರುಗಳನ್ನೇ ಅವಲಂಬಿಸಿದರೆ ಆಶ್ಚರ್ಯ ಏನಿಲ್ಲ ಅಂತಾರೆ ಕೆಲವರು.

    ಭಾರತದಲ್ಲಿ ಪೆಟ್ರೋಲ್ ಬೆಲೆ ನಿಗದಿಯಾಗುವುದು ಹೇಗೆ?
    ಡಾಲರ್, ರೂಪಾಯಿ ವಿನಿಮಯ ಬೆಲೆ, ಅಬಕಾರಿ ಸುಂಕ, ವ್ಯಾಟ್, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮೀಷನ್ ಲೆಕ್ಕ ಹಾಕಿ ಪೆಟ್ರೋಲ್ ದರ ಈಗ ನಿಗದಿಯಾಗುತ್ತದೆ.

    ಇದನ್ನೂ ಓದಿ: ತನ್ನ ಈ ವಿಶಿಷ್ಟ ಸೇವೆಯಿಂದ ದೇಶದ ಗಮನ ಸೆಳೆದ ಮಂಗ್ಳೂರಿನ ಕ್ಯಾಬ್ ಡ್ರೈವರ್

    ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    [Elite_video_player id=”1″]

  • ಕಿರುಕುಳ ನೀಡಿ, ಗನ್ ತೋರಿಸಿ ಮದುವೆ: ಪಾಕ್ ಪ್ರಜೆಯನ್ನು ವರಿಸಿದ್ದ ಭಾರತೀಯ ಮಹಿಳೆ ತವರಿಗೆ ವಾಪಾಸ್

    ಕಿರುಕುಳ ನೀಡಿ, ಗನ್ ತೋರಿಸಿ ಮದುವೆ: ಪಾಕ್ ಪ್ರಜೆಯನ್ನು ವರಿಸಿದ್ದ ಭಾರತೀಯ ಮಹಿಳೆ ತವರಿಗೆ ವಾಪಾಸ್

    ನವದೆಹಲಿ: ಬಲವಂತವಾಗಿ ಪಾಕ್ ಪ್ರಜೆಯನ್ನು ಮದುವೆಯಾಗಿದ್ದ ಭಾರತೀಯ ಯುವತಿಯೊಬ್ಬರು ಇದೀಗ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಉಜ್ಮಾ ಎಂಬವರೇ ಇಂದು ವಾಘಾ ಗಡಿಯ ಮೂಲಕ ಭದ್ರತೆಯೊಂದಿಗೆ ತವರಿಗೆ ಕಾಲಿಟ್ಟ ಯುವತಿಯಾಗಿದ್ದಾರೆ.

    ಏನಿದು ಪ್ರಕರಣ?: 20 ವರ್ಷದ ಉಜ್ಮಾ ಎಂಬವರು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಸಂದರ್ಭದಲ್ಲಿ ಪಾಕ್ ಪ್ರಜೆ ತಹೀರ್ ಆಲಿ ಎಂಬಾತ ಕಿರುಕುಳ ನೀಡಿ, ಗನ್ ತೋರಿಸಿ ಬಲವಂತವಾಗಿ ಮದುವೆಯಾಗಿದ್ದನು. ಈ ಸಂಬಂಧ ಪತಿಯ ವಿರುದ್ಧ ಉಜ್ಮಾ ಇಸ್ಲಾಮಾಬಾದ್ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಪತಿ ತಾಹೀರ್ ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾನೆ. ಅಲ್ಲದೇ ದಾಖಲೆಗಳನ್ನು ಆತ ಕಸಿದುಕೊಂಡಿದ್ದಾನೆ. ಹೀಗಾಗಿ ನನಗೆ ಭಾರತಕ್ಕೆ ತೆರಳಲು ರಕ್ಷಣೆ ಕೊಡಬೇಕು ಹಾಗೂ ತಾಯ್ನಡಿಗೆ ಹಿಂದಿರುಗಲು ನಕಲು ಪ್ರತಿಗಳನ್ನು ಒದಗಿಸಿಕೊಡಬೇಕೆಂದು ಮೇ 12ಕ್ಕೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿ ಸ್ವೀಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್ ನ್ಯಾಯಾಧೀಶ ಮೋಶಿನ್ ಅಕ್ತಾರ್ ಕಯಾನಿ ಅವರಿದ್ದ ಪೀಠ, ಪ್ರಕರಣವನ್ನು ಕೈಗೆತ್ತಿಕೊಂಡು ಬುಧವಾರ ಉಜ್ಮಾ ಅವರಿಗೆ ಭಾರತಕ್ಕೆ ಮರಳಲು ಅವಕಾಶ ನೀಡಿತ್ತು. ಅಲ್ಲದೇ ಪೊಲೀಸರು ಕೂಡ ವಾಘಾ ಗಡಿಯವರೆಗೆ ಆಕೆಯ ಜೊತೆಗಿದ್ದು ರಕ್ಷಣೆ ಕೊಡಬೇಕೆಂದು ಕೋರ್ಟ್ ಆದೇಶ ಮಾಡಿತ್ತು. ನ್ಯಾಯಾಲಯದ ಅನುಮತಿಯಂತೆ ಉಜ್ಮಾ ಇಂದು ಬಿಗಿ ಭದ್ರತೆಯೊಂದಿಗೆ ವಾಘಾ ಗಡಿ ದಾಟಿ ಭಾರತದ ಮಣ್ಣಿಗೆ ಕೈ ಮುಗಿದು ತಾಯ್ನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಉಜ್ಮಾ ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಅಲ್ಲದೆ, ಭಾರತದ ಮಗಳು ಎಂದು ಕರೆದಿದ್ದಾರೆ. ಪಾಕಿಸ್ತಾನದಲ್ಲಿ ಇಷ್ಟೆಲ್ಲಾ ಸಂಕಷ್ಟಗಳನ್ನು ಅನುಭವಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆಂದು ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

    ಈ ಕುರಿತು ಉಜ್ಮಾ ಸಹೋದರ ವಾಸಿಮ್ ಅಹಮದ್ ಮಾಧ್ಯಮಗಳೊಂದಿಗೆ ಮಾತನಾಡಿ, `ಸಹೋದರಿ ಸೇಫ್ ಆಗಿ ತಾಯ್ನಾಡಿಗೆ ಮರಳುತ್ತಿರುವುದು ಸಂತಸ ತಂದಿದೆ. ಆದ್ರೆ ವಿಮಾನ ವಿಳಂಬಗೊಂಡಿರುವುದರಿಂದ ಆಕೆ ದೆಹಲಿಗೆ ಯಾವಾಗ ಬರುತ್ತಾಳೆ ಅಂತಾ ಗೊತ್ತಿಲ್ಲ. ಇನ್ನು ಆಕೆಯ ಹಿಂದಿರುಗುವಿಕೆಗೆ ಸಹಕರಿಸಿದ ಭಾರತ ಸರ್ಕಾರ ಹಾಗೂ ಆಕೆ ಪಾಕಿಸ್ತಾನದಲ್ಲಿದ್ದ ಸಂದರ್ಭದಲ್ಲಿ ಆಕೆಯೊಂದಿಗೆ ಫೋನ್ ಮೂಲಕ ನಿರಂತರ ಸಂಪರ್ಕ ಹೊಂದಿದ್ದ ವಿದೇಶಾಂಗ ಸಚಿವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

     

     

  • ಚೀನಾ ಅಲ್ಲ, ಭಾರತವೇ ಈಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ ಅಂತಿದ್ದಾರೆ ಈ ಸಂಶೋಧಕ

    ಚೀನಾ ಅಲ್ಲ, ಭಾರತವೇ ಈಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ ಅಂತಿದ್ದಾರೆ ಈ ಸಂಶೋಧಕ

    -ಪ್ರಕೃತಿ ಸಿಂಹ
    ನವದೆಹಲಿ: ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ ಯಾವುದು? ಈ ಪ್ರಶ್ನೆಗೆ ಸಾಕಷ್ಟು ವರ್ಷಗಳಿಂದಲೂ ಚೀನಾ ಅಂತ ಸರಳವಾಗಿ ಉತ್ತರಿಸುತ್ತಿದ್ವಿ. ಆದ್ರೆ ಈಗ ಚೀನಾದ ಅಧಿಕೃತ ಅಂದಾಜು ಜನಸಂಖ್ಯೆಯೇ ತಪ್ಪು. ಆದ್ದರಿಂದ ಭಾರತವೇ ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶ ಎಂದು ಸಂಶೋಧಕರೊಬ್ಬರು ಹೇಳಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

    1. ಯಾರು ಹೇಳಿದ್ದು?
    ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕರಾದ ಯೀ ಫುಕ್ಸಿಯಾನ್ ಸೋಮವಾರದಂದು ಚೀನಾದ ಪೆಕಿಂಗ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂತಹದ್ದೊಂದು ಹೇಳಿಕೆಯನ್ನ ನೀಡಿದ್ದಾರೆ.

    2. ಅಂಕಿ ಅಂಶ ಏನು ಹೇಳುತ್ತೆ?
    ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಚೀನಾದಲ್ಲಿ 1991ರಿಂದ 2016ರವರೆಗೆ ಆಗಿರುವ ಜನನದ ಸಂಖ್ಯೆ 37.76 ಕೋಟಿ. ಆದ್ರೆ ಅಧಿಕೃತ ಅಂಕಿ ಅಂಶದ ಪ್ರಕಾರ 46.48 ಕೋಟಿ ಅಂತ ಇದೆ. ಇದರ ಪ್ರಕಾರ ಚೀನಾದ ಅಧಿಕೃತ ಒಟ್ಟು ಜನಸಂಖ್ಯೆ ಅಂದಾಜು 138 ಕೋಟಿ. ಇದು ತಪ್ಪು ಲೆಕ್ಕವಾಗಿದ್ದು, ಅದರ ಬದಲು ಚೀನಾದ ಒಟ್ಟು ಜನಸಂಖ್ಯೆಯಲ್ಲಿ 9 ಕೋಟಿಯಷ್ಟು ಜನಸಂಖ್ಯೆ ಕಡಿಮೆ ಇರಬೇಕು. ಹೀಗಾದಾಗ ಚೀನಾದ ಜನಸಂಖ್ಯೆ 129 ಕೋಟಿಯಾಗುತ್ತದೆ. ಇದು ಭಾರತದ 132 ಕೋಟಿ ಜನಸಂಖ್ಯೆ ಅಂದಾಜಿಗಿಂತಲೂ ಕಡಿಮೆ ಎಂದು ಯೀ ಹೇಳಿದ್ದಾರೆ.

    3. ಇದರ ಪರಿಣಾಮ ಏನು?
    ಚೀನಾ, ಭಾರತ ಹಾಗೂ ಇನ್ನಿತರ ದೇಶಗಳ ಮಾಧ್ಯಮಗಳು ಬೇಗನೆ ಈ ಸುದ್ದಿಯನ್ನ ಪ್ರಕಟಿಸಿವೆ. ಯೀ ಅವರು ಹೇಳುತ್ತಿರುವುದು ನಿಜವೇ ಆದರೆ ಇದರ ಪರಿಣಾಮಗಳು ಮಹತ್ವದ್ದಾಗಿರಲಿವೆ. ಭಾರತ ಚೀನಾದ ಜನಸಂಖ್ಯೆಯನ್ನ ಮೀರಿಸಿದೆ ಎಂದು ಮಾತ್ರವಲ್ಲ ಚೀನಾದ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಕ್ಷೀಣತೆ ಹಲವರು ಅಂದುಕೊಂಡಿದ್ದಕ್ಕಿಂತ ಕೆಟ್ಟದಾಗಿದ್ದು, ಸಾರ್ವಜನಿಕವಾಗಿ ಬಹಿರಂಗಪಡಿಸದೆ ಮುಚ್ಚಿಡಲಾಗಿತ್ತು ಎಂಬುದನ್ನು ಅರ್ಥೈಸುತ್ತದೆ ಎಂದು ವರದಿಯಾಗಿದೆ. 2022ರ ವೇಳೆಗೆ ಭಾರತ ಚೀನಾದ ಜನಸಂಖ್ಯೆಯನ್ನ ಮೀರಿಸಲಿದೆ ಎಂದು ಅಮೆರಿಕ ಈ ಹಿಂದೆಯೇ ಅಂದಾಜಿಸಿತ್ತು.

    4. ಈ ಹಿಂದೆಯೇ ಹೇಳಿದ್ರಾ?
    ಈ ಬಗೆಗಿನ ವಿವಾದ ಆಶ್ಚರ್ಯವೇನೂ ಅಲ್ಲ ಎಂದು ಯೀ ಹೇಳಿದ್ದಾರೆ. ಚೀನಾದ ಅಧಿಕೃತ ಜನಸಂಖ್ಯೆ ಅಂದಾಜು ತಪ್ಪಾಗಿದೆ ಎಂಬುದನ್ನ ನನ್ನ 2013ನೇ ಆವೃತ್ತಿಯ ಪುಸ್ತಕ ‘ಬಿಗ್ ಕಂಟ್ರಿ ವಿತ್ ಎಂಪ್ಟಿ ನೆಸ್ಟ್’ನಲ್ಲಿ ಉಲ್ಲೇಖಿಸಿದ್ದೆ ಎಂದು ಯೀ ಹೇಳಿದ್ದಾರೆ. ಅಲ್ಲದೆ ಅದಕ್ಕೂ ಮುಂಚಿನ ಜನಸಂಖ್ಯೆ ಅಂದಾಜು ಕೂಡ ತಪ್ಪಾಗಿದೆ. 2003ರಲ್ಲಿ ಚೀನಾದ ಅಧಿಕೃತ ಜನಸಂಖ್ಯೆ ಪ್ರಕಟಣೆಯಲ್ಲಿನ ದತ್ತಾಂಶ ನೈಜ ಜನಸಂಖ್ಯೆಗಿಂತ ಹೆಚ್ಚಿದೆ ಎಂಬುದು ನನಗೆ ಗೊತ್ತಿತ್ತು ಎಂದು ಯೀ ಹೇಳಿದ್ದಾರೆ.

    5. ಯಾರು ಈ ಸಂಶೋಧಕ ಯೀ?
    ಚೀನಾದ ಹುನಾನ್ ಪ್ರಾಂತ್ಯದಲ್ಲಿ ಜನಿಸಿದ ಯೀ 1999ರಲ್ಲಿ ಅಮೆರಿಕಕ್ಕೆ ಹೋಗಿ ನೆಲೆಸಿದ್ರು. ಮಿನೆಸ್ಸೋಟಾ ಟ್ವಿನ್ ಸಿಟೀಸ್‍ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡಿದ್ರು. ನಂತರ ವಿಸ್ಕಾನ್ಸಿನ್‍ನ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಿ ಬಳಿಕ 2002ರಲ್ಲಿ ವಿಜ್ಞಾನಿಯಾಗಿ ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯಕ್ಕೆ ಹೋದ್ರು. ಚೀನಾದ ಕುಟುಂಬ ಯೋಜನೆ ಹಾಗೂ ಒಂದೇ ಮಗು ನೀತಿಯನ್ನು ಯೀ ಟೀಕಿಸಿದ್ರು.

    6. ಚೀನಾದ ಕುಟುಂಬ ಯೋಜನೆಗಳಿಂದ ಏನು ನಷ್ಟ?
    ಚೀನಾದ ಕುಟುಂಬ ಯೋಜನೆಗಳಿಂದ ದೇಶದ ಆರ್ಥಿಕ ಬೆಳವಣಿಗೆ ಸೀಮಿತಗೊಳ್ಳುತ್ತಿದೆ. ಇದರಿಂದ ಅಮೆರಿಕಗೆ ಸ್ಪರ್ಧೆಯೊಡ್ಡಲು ಸಾಧ್ಯವೇ ಇಲ್ಲ. ಚೀನಾದಲ್ಲಿ ಶೀಘ್ರವೇ ಗುಣಾತ್ಮಕ ಜನನ ಪ್ರಮಾಣ ಇರಲಿದ್ದು, ಮಿತ್ರ ರಾಷ್ಟ್ರ ಜಪಾನ್‍ನಂತೆ ಜನಸಂಖ್ಯೆ ಕ್ಷೀಣಿಸಲಿದೆ ಎಂದು ಯೀ ತಮ್ಮ ಬರವಣಿಗೆಗಳಲ್ಲಿ ಹೇಳಿದ್ದರು.

    7. ಯೀ ವಾದಕ್ಕೆ ಚೀನಾ ಹೇಳೋದೇನು?
    ಚೀನಾದ ಪ್ರಜೆಯಾಗಿಯೇ ಉಳಿದಿರೋ ಯೀ ತಮ್ಮ ಅಭಿಪ್ರಾಯದಿಂದ ಚೀನಾದೊಂದಿಗೆ ಸಂಘರ್ಷವೂ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಅವರ ‘ಬಿಗ್ ಕಂಟ್ರಿ ವಿತ್ ಎಂಪ್ಟಿ ನೆಸ್ಟ್’ ಪುಸ್ತಕ 2007ರಲ್ಲಿ ಮೊದಲು ಪ್ರಕಟಣೆಗೊಂಡು, ಆರಂಭದಲ್ಲಿ ಮೇನ್‍ಲ್ಯಾಂಡ್ ಚೀನಾದಲ್ಲಿ ಬ್ಯಾನ್ ಆಗಿತ್ತು. ತನ್ನ ಸಂಬಂಧಿಕರೊಬ್ಬರಿಗೆ ದೇಶದ ಆದೇಶದಂತೆ ಬಲವಂತ ಗರ್ಭಪಾತ ಮಾಡಿಸಲು ಮುಂದಾದಾಗ ಅದರಿಂದ ಪಾರಾಗಲು ಅವರಿಗೆ ಯೀ ಸಹಾಯ ಮಾಡಿದ್ರು. ಆದ್ದರಿಂದ ದೇಶಕ್ಕೆ ಮರಳಿ ಬಂದ್ರೆ ಬಂಧನ ಎದುರಿಸಬೇಕಾಗುತ್ತದೆ ಅಂತ 2010ರಲ್ಲಿ ಎಚ್ಚರಿಕೆ ನೀಡಲಾಗಿತ್ತು ಎಂದು ಯೀ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಗೆ ಹೇಳಿದ್ದಾರೆ.

    ನಂತರ 2015ರಲ್ಲಿ ಯೀ ಅವರ ಕೆಲವು ವಾದಗಳನ್ನ ಚೀನಾ ಪರಿಗಣಿಸಿದಂತಿದ್ದು, ಒಂದೇ ಮಗು ನಿಯಮವನ್ನ ಕೈಬಿಟ್ಟು ಎಲ್ಲಾ ದಂಪತಿಗಳು ಇಬ್ಬರು ಮಕ್ಕಳನ್ನು ಹೊಂದಬಹುದು ಎಂದು ಹೇಳಿತು. ಕಳೆದ ವರ್ಷ ಯೀ ಚೀನಾಗೆ ಅತಿಥಿಯಾಗಿ ಭೇಟಿ ನೀಡಿದ್ದರು. ಆದ್ರೆ ಕೆಲವು ತಿಂಗಳ ನಂತರ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನ ಮುಚ್ಚಲಾಗಿತ್ತು.

    8.  ತಜ್ಞರು ಏನ್ ಹೇಳ್ತಾರೆ?
    ಯೀ ಅವರ ಚೀನಾದ ಜನಸಂಖ್ಯೆ ಅಂದಾಜಿನ ಮೇಲೆ ಕೆಲವರು ಪ್ರಶ್ನೆ ಎತ್ತಿದ್ದಾರೆ. ಅವರ ಸಂಖ್ಯೆಗಳನ್ನ ಮುಖಬೆಲೆಯಂತೆ ತೆಗೆದುಕೊಳ್ಳಬಾರದು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜನಸಂಖ್ಯಾಶಾಸ್ತ್ರಜ್ಞ ವಾಂಗ್ ಫೆಂಗ್ ದಿ ಗಾರ್ಡಿಯನ್ ಪತ್ರಿಕೆಗೆ ಹೇಳಿದ್ದಾರೆ. ಚೀನಾ ಸರ್ಕಾರ ನೀಡಿರುವ ಜನಸಂಖ್ಯೆಯೇ ಸರಿಯಾಗಿದೆ ಎಂದು ವಾಂಗ್ ಅವರು ಹೇಳಿದ್ದಾರೆ. ಆದ್ರೆ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ನ ಪ್ರಕಾರ ಸೋಮವಾರದ ಪೆಕಿಂಗ್ ವಿವಿ ಕಾರ್ಯಕ್ರಮದಲ್ಲಿ ಹಲವಾರು ತಜ್ಞರು ಸರ್ಕಾರದ ಜನಸಂಖ್ಯೆ ಅಂದಾಜು ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

  • ನಾವೂ ಭಾರತದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ: ಪಾಕ್‍ನಿಂದ ನಕಲಿ ವಿಡಿಯೋ ರಿಲೀಸ್

    ನಾವೂ ಭಾರತದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ: ಪಾಕ್‍ನಿಂದ ನಕಲಿ ವಿಡಿಯೋ ರಿಲೀಸ್

    ನವದೆಹಲಿ: ಭಾರತದ ದಾಳಿಗೆ ಜಮ್ಮು-ಕಾಶ್ಮೀರದ ನೌಶೇರಾ ಸೆಕ್ಟರ್ ನಲ್ಲಿ ಪ್ರತಿದಾಳಿ ನಡೆಸಿ ಅಲ್ಲಿನ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಅಂತಾ ಪಾಕಿಸ್ತಾನ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

    ಸುಮಾರು 87 ಸೆಕೆಂಡ್ ಇರೋ ಈ ವಿಡಿಯೋವನ್ನು ಮೇ 23ರಂದು ಪಾಕಿಸ್ತಾನಿ ವಕ್ತಾರರೊಬ್ಬರು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನದ ಮುಗ್ಧ ನಾಗರಿಕರ ಮೇಲೆ ದಾಳಿ ನಡೆಸಿದ ಪ್ರತೀಕಾರವಾಗಿ ನಾವು ಮೇ 13ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಪಾಕಿಸ್ತಾನದ ಸೇನಾ ಬಂಕರ್ ಗಳ ಮೇಲೆ ದಾಳಿ ನಡೆಸಿದ ವಿಡಿಯೋವನ್ನು ಭಾರತ ಬಹಿರಂಗಪಡಿಸಿದ ಮರುದಿನವೇ ಪಾಕಿಸ್ತಾನ ಈ ವಿಡಿಯೋವನ್ನು ಬಹಿರಂಗಪಡಿಸಿದೆ. ಆದ್ರೆ ಇದೊಂದು ನಕಲಿ ವಿಡಿಯೋ ಅಂತಾ ಭಾರತದ ಸೇನಾ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಭಾರತೀಯ ಸೇನೆಯಿಂದ ಪಾಕ್ ಸೇನಾ ಪೋಸ್ಟ್ ಗಳ ಧ್ವಂಸ: ವಿಡಿಯೋ ನೋಡಿ

    ಭಾರತದ ಸೇನಾ ನೆಲೆಗಳು ಅತ್ಯಂತ ಧೃಡವಾದ ಗೋಡೆಗಳನ್ನ ಹೊಂದಿದ್ದು, ಗನ್ ಗಳ ದಾಳಿಯನ್ನು ಕೂಡ ತಡೆದುಕೊಳ್ಳುವ ಸಾಮರ್ಥ್ಯ  ಹೊಂದಿದೆ. ಅಲ್ಲದೇ ಇಷ್ಟೊಂದು ಪ್ರಮಾಣದ ದಾಳಿಯಾದರೆ ಅದು ಮೇಲ್ಭಾಗದಲ್ಲೇ ಸ್ಫೋಟವಾಗುತ್ತದೆ. ಈ ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಅದರಲ್ಲಿ ಎಡಿಟ್ ಮಾಡಿರೋ ಮಾರ್ಕ್‍ಗಳು ಕಂಡುಬರುತ್ತದೆ. ಐಇಡಿ ದಾಳಿ ಆದರೆ ಮಾತ್ರ ರೀತಿಯ ಸ್ಫೋಟವಾಗುತ್ತದೆ. ಆರ್ಟಿಲರಿ ಗನ್ ಮೂಲಕ ದಾಳಿ ಎಸಗಿದರೆ ಆ ರೀತಿಯ ಸ್ಫೋಟ ಕಂಡು ಆಗುವುದಿಲ್ಲ ಎಂದು ಸೇನಾ ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.