Tag: ಭಾರತ

  • ಜಿಎಸ್‍ಟಿ ಇಫೆಕ್ಟ್: ಬಜಾಜ್ ಬೈಕ್ ಗಳ ಬೆಲೆ ಇಳಿಕೆ

    ಜಿಎಸ್‍ಟಿ ಇಫೆಕ್ಟ್: ಬಜಾಜ್ ಬೈಕ್ ಗಳ ಬೆಲೆ ಇಳಿಕೆ

    ಮುಂಬೈ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಜಾಜ್ ಆಟೊ ಕಂಪೆನಿ ತನ್ನ ಮೋಟಾರ್ ಸೈಕಲ್ಸ್ ಗಳ ಬೆಲೆಯನ್ನು ಕಡಿಮ ಮಾಡಿದೆ.

    ಎಲ್ಲ ಮೋಟರ್ ಸೈಕಲ್ ಗಳ ಬೆಲೆಯನ್ನು 4,500ರವರೆಗೆ ತಗ್ಗಿಸಲಾಗಿದೆ ಎಂದು ಬಜಾಜ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜಿಎಸ್‍ಟಿಯಲ್ಲಿನ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ತಕ್ಷಣದಿಂದ ಜಾರಿಗೆ ಬರುವಂತೆ ದರವನ್ನು ಕಡಿತಗೊಳಿಸಲಾಗಿದೆ ಎಂದು ಅದು ತಿಳಿಸಿದೆ.

    ಆದರೆ ಬೈಕ್‍ಗಳ ಮಾದರಿ ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ದರ ಕಡಿತದ ಲಾಭ ಬೇರೆಬೇರೆಯಾಗಿರುತ್ತದೆ. ಗ್ರಾಹಕರು ಬಜಾಜ್ ಅಟೋ ಡೀಲರ್‍ಗಳಿಗೆ ತೆರಳಿ ವಿವರವನ್ನು ಪಡೆಯಬಹುದು. ಅಷ್ಟೇ ಅಲ್ಲದೇ ಜೂನ್ 14 ಮತ್ತು ಜೂನ್ 30ರ ನಡುವಿನ ಬುಕ್ಕಿಂಗ್ ಅನುಕೂಲವನ್ನು ಪಡೆಯಬಹುದು ಎಂದು ಬಜಾಜ್ ಹೇಳಿದೆ.

    35,183 ಬೆಲೆಯ 100 ಸಿಸಿಗಳಿಂದ ಹಿಡಿದು ಗರಿಷ್ಠ 1.53 ಲಕ್ಷ ರೂ. ಬೆಲೆಯ ಡೊಮಿನರ್ 400 ಬೈಕ್‍ಗಳನ್ನು ಬಜಾಜ್ ಮಾರಾಟ ಮಾಡುತ್ತಿದೆ.

    ಈಗಾಗಲೇ ಆಟೊಮೊಬೈಲ್ ಕ್ಷೇತ್ರದ ಕಂಪೆನಿಗಳಾದ ಫೋರ್ಡ್ ಇಂಡಿಯಾ, ಆಡಿ, ಬಿಎಂಡಬ್ಲ್ಯೂ ಮತ್ತು ಮರ್ಸಿಡಿಸ್ ಬೆಂಝ್ ಕಂಪೆನಿಗಳು ತಮ್ಮ ವಾಹನಗಳ ಮೇಲೆ 10 ಸಾವಿರ ರೂ. ದರವನ್ನು ಕಡಿತಗೊಳಿಸಿದೆ.

    ಜಿಎಸ್‍ಟಿಯಲ್ಲಿ ಆಟೊಮೊಬೈಲ್ ಉತ್ಪನ್ನಗಳ ಮೇಲೆ ಶೇ.28 ರಷ್ಟು ತೆರಿಗೆಯನ್ನು ಹಾಕಲಾಗುತ್ತದೆ. ಐಶಾರಾಮಿ ಕಾರುಗಳ ಮೇಲೆ ಶೇ.15 ರಷ್ಟು ಹೆಚ್ಚುವರಿ ಸೆಸ್ ವಿಧಿಸಿದರೆ, ಮೊಟಾರ್ ಸೈಕಲ್ 350 ಸಿಸಿಗಿಂತಲೂ ಹೆಚ್ಚಿನದ್ದಾಗಿದ್ದರೆ ಹೆಚ್ಚುವರಿಯಾಗಿ ಶೇ.3 ರಷ್ಟು ಸೆಸ್ ವಿಧಿಸಲಾಗಿದೆ.

    ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

  • ಟೀಂ ಇಂಡಿಯಾವನ್ನು ನಾಯಿಗೆ ಹೋಲಿಸಿ ಕೆಣಕಿದ ಬಾಂಗ್ಲಾದ ಹುಚ್ಚು ಅಭಿಮಾನಿ

    ಟೀಂ ಇಂಡಿಯಾವನ್ನು ನಾಯಿಗೆ ಹೋಲಿಸಿ ಕೆಣಕಿದ ಬಾಂಗ್ಲಾದ ಹುಚ್ಚು ಅಭಿಮಾನಿ

    ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾವನ್ನು ಕೆಣಕಿದ್ದಾರೆ.

    ಗುರುವಾರ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಈ ಪಂದ್ಯದ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ಬಾಂಗ್ಲಾವನ್ನು ಹುಲಿಗೆ, ಭಾರತವನ್ನು ನಾಯಿಗೆ ಹೋಲಿಸಿ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಹುಲಿಗೆ ಬಾಂಗ್ಲಾದ ಧ್ವಜ ಹೊದಿಸಿದ್ದರೆ, ನಾಯಿಗೆ ಭಾರತದ ರಾಷ್ಟ್ರಧ್ವಜ ಹೊದಿಸಿ ಫೇಸ್‍ಬುಕ್‍ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾನೆ.

    ಈ ಸುದ್ದಿ ಪ್ರಕಟವಾಗಿದ್ದೆ ತಡ ಭಾರತೀಯ ಅಭಿಮಾನಿಗಳು, ನಾವು ಯವಾಗಲೂ ಹುಲಿಗಳು, ನೀವು ಫೋಟೋ ಶಾಪ್ ಎಕ್ಸ್ ಪರ್ಟ್ ಗಳು ಎಂದು ಟೀಕಿಸಿ ಕಮೆಂಟ್ ಮಾಡುತ್ತಿದ್ದಾರೆ.

    ಭಾರತ ತಂಡಕ್ಕೆ ಬಾಂಗ್ಲಾದೇಶದಲ್ಲಿ ಈ ರೀತಿಯಾಗಿ ಅವಮಾನ ಮಾಡುವುದು ಇದು ಹೊಸದೆನಲ್ಲ. 2015ರಲ್ಲಿ ಬಾಂಗ್ಲಾ ವಿರುದ್ಧ 1-2 ಅಂತರಿಂದ ಭಾರತ ಏಕದಿನ ಸರಣಿ ಸೋತಿತ್ತು. ಈ ಸಂದರ್ಭದಲ್ಲಿ ಬಾಂಗ್ಲಾ ಸುದ್ದಿಪತ್ರಿಕೆ ಪ್ರೊತೋಮ್ ಅಲೊ ಟೀಂ ಇಂಡಿಯಾ ಆಟಗಾರರ ಅರ್ಧಬೋಳಿಸಿದ ತಲೆಯ ಜಾಹೀರಾತನ್ನು ಪ್ರಕಟಿಸಿತ್ತು.

    3 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ ಮುಸ್ತಫಿಜುರ್ ಜಾಹೀರಾತಿನಲ್ಲಿ ಕಟರ್ ಹಿಡಿದುಕೊಂಡಿದ್ದು, ಅವರ ಕೆಳಗೆ ರಹಾನೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಧೋನಿ, ಶಿಖರ್ ಧವನ್ ಬ್ಯಾನರ್ ಹಿಡಿದು, ನಾವು ಅದನ್ನು ಬಳಸಿದ್ದೇವೆ, ನೀವೂ ಬಳಸಬಹುದು ಎಂಬ ಉಪಶೀರ್ಷಿಕೆ ಹೊಂದಿತ್ತು. ಮುಸ್ತಫಿಜುರ್ ಚಿತ್ರದ ಪಕ್ಕದಲ್ಲಿ, ಟೈಗರ್ ಸ್ಟೇಷನರಿ, ಮೇಡ್ ಇನ್ ಬಾಂಗ್ಲಾದೇಶ್, ಮುರ್ತಫಿಜ್ ಕಟ್ಟರ್ ಮಿರ್‍ಪುರದ ಸ್ಟೇಡಿಯಂ ಮಾರ್ಕೆಟ್‍ನಲ್ಲಿ ಲಭ್ಯವಿದೆ ಎನ್ನುವ ಶೀರ್ಷಿಕೆ ಜಾಹೀರಾತಿನಲ್ಲಿತ್ತು.

    ಕಳೆದ ವರ್ಷ ಬೌಲರ್ ಟಸ್ಕಿನ್ ಧೋನಿ ತಲೆಯನ್ನು ಹಿಡಿದುಕೊಂಡಿದ್ದ ಫೋಟೋ ಒಂದನ್ನು ಅಭಿಮಾನಿಯೊಬ್ಬ ಪ್ರಕಟಿಸಿ ಟೀಂ ಇಂಡಿಯಾವನ್ನು ಕೆಣಕಿದ್ದ.

  • ಹರಿಣಗಳನ್ನು ಬಗ್ಗು ಬಡಿದು ಸೆಮಿಗೆ ಟೀಂ ಇಂಡಿಯಾ ಎಂಟ್ರಿ

    ಹರಿಣಗಳನ್ನು ಬಗ್ಗು ಬಡಿದು ಸೆಮಿಗೆ ಟೀಂ ಇಂಡಿಯಾ ಎಂಟ್ರಿ

    ಓವಲ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಎಂದೇ ಬಿಂಬಿಸಲ್ಪಟ್ಟಿದ್ದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‍ಗಳಿಂದ ಬಗ್ಗು ಬಡಿದು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 44.3 ಓವರ್‍ಗಳಲ್ಲಿ 191 ರನ್‍ಗಳಿಗೆ ಆಲೌಟ್ ಆಯ್ತು. ಸುಲಭ ಸವಾಲನ್ನು ಪಡೆದ ಭಾರತ ಶಿಖರ್ ಧವನ್ ಮತ್ತು ನಾಯಕ ಕೊಹ್ಲಿ ಅವರ ಅರ್ಧಶತಕದಿಂದಾಗಿ 38 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 193 ರನ್‍ಗಳಿಸಿ ಗುರಿ ಮುಟ್ಟಿತು.

    ರೋಹಿತ್ ಶರ್ಮಾ 12 ರನ್‍ಗಳಿಸಿ ಔಟಾದಾಗ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ವಿಕೆಟ್‍ಗೆ ಧವನ್ ಮತ್ತು ಕೊಹ್ಲಿ 148 ಎಸೆತಗಳಲ್ಲಿ 128 ರನ್ ಜೊತೆಯಾಟವಾಡುವ ಮೂಲಕ ಭದ್ರ ಆಡಿಪಾಯ ಹಾಕಿದರು. 61 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಧವನ್ 78 ರನ್(83 ಎಸೆತ, 12 ಬೌಂಡರಿ, 1 ಸಿಕ್ಸರ್)ಗಳಿಸಿದ್ದಾಗ ಇಮ್ರಾನ್ ತಾಹಿರ್ ಎಸೆತದಲ್ಲಿ ಬಲವಾಗಿ ಹೊಡೆಯಲು ಹೋಗಿ ಡು ಪ್ಲಸೆಸ್‍ಗೆ ಕ್ಯಾಚ್ ನೀಡಿ ಔಟಾದರು.

    ಕೊಹ್ಲಿ ಮಿಂಚು: ಪಾಕ್ ವಿರುದ್ಧದ ಪಂದ್ಯದಲ್ಲಿ ಔಟಾಗದೇ 81 ರನ್ ಗಳಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. 71 ಎಸೆತದಲ್ಲಿ 50 ಅರ್ಧಶತಕ ಪೂರ್ಣಗೊಳಿಸಿದ ಕೊಹ್ಲಿ ಅಂತಿಮವಾಗಿ 76 ರನ್(101 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದ ಔಟಾಗದೇ ಉಳಿದರು. ಯವರಾಜ್ ಸಿಂಗ್ ಮತ್ತು ಕೊಹ್ಲಿ ಮುರಿಯದ ಮೂರನೇ ವಿಕೆಟ್‍ಗೆ 47 ಎಸೆತಗಳಲ್ಲಿ 42 ರನ್ ಜೊತೆಯಾಟ ಆಡಿದರು. 23 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದ ಯುವಿ ತಾಹಿರ್ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‍ಗಳು ಕೈಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ಉತ್ತಮವಾಗಿದ್ದ ಕಾರಣ ಗೆಲುವು ಸಾಧಿಸಿದೆ. ಮೂರು ರನ್ ಔಟ್ ಆಫ್ರಿಕಾದ ಸೆಮಿಫೈನಲ್ ಬಾಗಿಲನ್ನು ಬಂದ್ ಮಾಡಿತು.

    115 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಆಫ್ರಿಕಾ ಕೊನೆಯ 9 ವಿಕೆಟ್ ಗಳನ್ನು 75 ರನ್‍ಗಳ ಅಂತರದಲ್ಲಿ ಕಳೆದುಕೊಂಡಿತು. ಎಬಿಡಿ ವಿಲಿಯರ್ಸ್ 16 ರನ್‍ಗಳಿಸಿದ್ದಾಗ ರನೌಟ್ ಆದರೆ, ನಂತರ ಬಂದ ಡೇವಿಡ್ ಮಿಲ್ಲರ್ 1 ರನ್‍ಗಳಿಸಿ ರನ್ ಔಟ್‍ಗೆ ಬಲಿಯಾಗಿದ್ದು ಭಾರತಕ್ಕೆ ನೆರವಾಯಿತು.

    ಭಾರತದ ಪರ ಭುವನೇಶ್ವರ್ ಕುಮಾರ್ 23 ರನ್ ನೀಡಿ 2 ವಿಕೆಟ್ ಪಡೆದರೆ ಬುಮ್ರಾ 28 ರನ್ ನೀಡಿ 2 ವಿಕೆಟ್ ಪಡೆದರು. ಜಡೇಜಾ, ಅಶ್ವಿನ್, ಹಾರ್ದಿಕ್ ಪಾಂಡ್ಯಾ ತಲಾ ಒಂದೊಂದು ವಿಕೆಟ್ ಪಡೆದರು. 6 ಲೆಗ್‍ಬೈ, 10 ವೈಡ್ ಎಸೆಯುವ ಮೂಲಕ ಭಾರತ ಇತರೇ ರೂಪದಲ್ಲಿ 16 ರನ್ ನೀಡಿತು. ಜಸ್‌ಪ್ರೀತ್‌ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

    ಎ ಗುಂಪಿನಿಂದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ಬಾಂಗ್ಲಾ ವಿರುದ್ಧ ಸೆಣಸಲಿದ್ದರೆ, ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ಮಂಗಳವಾರ ಪಂದ್ಯದ ವಿಜೇತ ತಂಡ ಇಂಗ್ಲೆಂಡ್ ಜೊತೆ ಆಡಬೇಕಿದೆ.

  • ಲಂಕಾಗೆ 7 ವಿಕೆಟ್‍ಗಳ ಭರ್ಜರಿ ಜಯ

    ಲಂಕಾಗೆ 7 ವಿಕೆಟ್‍ಗಳ ಭರ್ಜರಿ ಜಯ

    ಓವಲ್: ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ  ಶ್ರೀಲಂಕಾ  7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.

    ಗೆಲ್ಲಲು 322 ರನ್‍ಗಳ ಕಠಿಣ ಸವಾಲನ್ನು ಪಡೆದ ಲಂಕಾ 48.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ.

    11 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟಿಗೆ 139 ಎಸೆತಗಳಲ್ಲಿ 159 ರನ್ ಜೊತೆಯಾಟವಾಡುವ ಮೂಲಕ ಗುಣತಿಲಕ ಮತ್ತು ಕುಸಲ್ ಮೆಂಡಿಸ್ ಭದ್ರ ಅಡಿಪಾಯ ಹಾಕಿದರು.

    ಗುಣತಿಲಕ 76 ರನ್(72 ಎಸೆತ, 7 ಬೌಂಡರಿ, 2ಸಿಕ್ಸರ್) ಸಿಡಿಸಿ ರನ್ ಔಟ್ ಔಟಾದರೆ, ಮೆಂಡಿಸ್ 89 ರನ್(93 ಎಸೆತ, 11 ಬೌಂಡರಿ, 1 ಸಿಕ್ಸರ್) ಸಿಡಿಸಿ ರನ್ ಔಟ್ ಆದರು.

    ಕುಸಲ್ ಪಿರೇರಾ 47 ರನ್‍ಗಳಿಸಿ ನಿವೃತ್ತರಾದರೆ, ಆಂಜಲೋ ಮಾಥ್ಯುಸ್ ಔಟಾಗದೇ 52 ರನ್(44 ಎಸೆತ, 6 ಬೌಂಡರಿ) ಗುಣರತ್ನೆ ಔಟಾಗದೇ 34 ರನ್(21 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಭುನವೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದರೆ, ಭಾರತ 11 ಲೆಗ್ ಬೈ, 5 ವೈಡ್, 1 ನೋಬಾಲ್ ಎಸೆಯುವ ಮೂಲಕ ಇತರೆ ರೂಪದಲ್ಲಿ 17 ರನ್ ಬಿಟ್ಟುಕೊಟ್ಟಿತ್ತು.

    ರನ್ ಏರಿದ್ದು ಹೇಗೆ?
    50 ರನ್ – 10.3 ಓವರ್
    100 ರನ್ – 19.2 ಓವರ್
    150 ರನ್ – 25.4 ಓವರ್
    200 ರನ್ – 33.4 ಓವರ್
    250 ರನ್ – 40.3 ಓವರ್
    300 ರನ್ – 45.5 ಓವರ್
    322 ರನ್ – 48.4 ಓವರ್

    ಉತ್ತಮ ಮೊತ್ತ: ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಶಿಖರ್ ಧವನ್ ಶತಕ, ರೋಹಿತ್ ಶರ್ಮಾ ಮತ್ತು ಧೋನಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತ್ತು.

    ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 149 ಎಸೆತಗಳಲ್ಲಿ 138 ರನ್‍ಗಳ ಜೊತೆಯಾಟ ಆಡಿದರು. ಮಲಿಂಗ ಎಸೆತದಲ್ಲಿ ಔಟಾಗುವ ವೇಳೆ ರೋಹಿತ್ ಶರ್ಮಾ 78 ರನ್(79 ಎಸೆತ, 6 ಬೌಂಡರಿ, 3ಸಿಕ್ಸರ್) ಸಿಡಿಸಿದ್ದರು.

    ನಂತರ ಬಂದ ವಿರಾಟ್ ಕೊಹ್ಲಿ 5 ಎಸೆತದ ಎದುರಿಸಿ ಶೂನ್ಯಕ್ಕೆ ಔಟಾದರು. ಮೂರನೇ ವಿಕೆಟ್‍ಗೆ ಶಿಖರ್ ಧವನ್ ಮತ್ತು ಯುವರಾಜ್ 46 ಎಸೆತಗಳಲ್ಲಿ 40 ರನ್ ಜೊತೆಯಾಟ ಆಡಿದರು. ಇದರಲ್ಲಿ ಯುವರಾಜ್ ಪಾಲು 7 ರನ್.

    ಯುವರಾಜ್ ಔಟಾದ ಬಳಿಕ ಕ್ರೀಸಿಗೆ ಬಂದ ಧೋನಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಧೋನಿ ಮತ್ತು ಧವನ್ 4ನೇ ವಿಕೆಟಿಗೆ 64 ಎಸೆತಗಳಲ್ಲಿ 82 ರನ್ ಪೇರಿಸಿದರು.

    ಶಿಖರ್ ಧವನ್ ಶತಕ: 69 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಧವನ್ 112 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ಬಾಳ್ವೆಯ 10 ನೇ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ 125 ರನ್(128 ಎಸೆತ, 6 ಬೌಂಡರಿ, 3ಸಿಕ್ಸರ್) ಗಳಿಸಿದ್ದಾಗ ಮೆಂಡಿಸ್‍ಗೆ ಕ್ಯಾಚ್ ನೀಡಿ ಔಟಾದರು.

    ಧೋನಿ 63 ರನ್(52 ಎಸೆತ, 7 ಬೌಂಡರಿ, 2ಸಿಕ್ಸರ್), ಕೇಧಾರ್ ಜಾಧವ್ ಔಟಾಗದೇ 25 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಕೊನೆಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಾರಣ ತಂಡದ ಮೊತ್ತ 300 ರನ್‍ಗಳ ಗಡಿ ದಾಟಿತು. ಲಸಿತ್ ಮಾಲಿಂಗ, 2 ವಿಕೆಟ್ ಪಡೆದರೆ, ಲಕ್ಮಲ್, ಪ್ರದೀಪ್, ಪಿರೇರಾ ಗುಣರತ್ನೆ ತಲಾ ಒಂದೊಂದು ವಿಕೆಟ್ ಪಡೆದರು.

    ರನ್ ಏರಿದ್ದು ಹೀಗೆ:
    50 ರನ್ – 10.2 ಓವರ್
    100 ರನ್ – 19.2 ಓವರ್
    150 ರನ್- 27.1 ಓವರ್
    200 ರನ್ – 37.6 ಓವರ್
    250 ರನ್ – 42.4 ಓವರ್
    300 ರನ್ – 48.2 ಓವರ್
    321 ರನ್ – 50 ಓವರ್

    ಬಿ ಗುಂಪಿನ ಎಲ್ಲ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿದೆ. ಜೂನ್ 11 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಭಾರತ ಗೆದ್ದಲ್ಲಿ ಸೆಮಿಫೈನಲ್ ಪ್ರವೇಶಿಸಲಿದೆ.

     

     

  • ಶಿಖರ್ ಧವನ್ 125 ರನ್: ಶ್ರೀಲಂಕಾಗೆ 322 ರನ್ ಗುರಿ

    ಶಿಖರ್ ಧವನ್ 125 ರನ್: ಶ್ರೀಲಂಕಾಗೆ 322 ರನ್ ಗುರಿ

    ಓವಲ್: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಶ್ರೀಲಂಕಾಗೆ 322 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಶಿಖರ್ ಧವನ್ ಶತಕ, ರೋಹಿತ್ ಶರ್ಮಾ ಮತ್ತು ಧೋನಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದೆ.

    ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 149 ಎಸೆತಗಳಲ್ಲಿ 138 ರನ್‍ಗಳ ಜೊತೆಯಾಟ ಆಡಿದರು. ಮಲಿಂಗ ಎಸೆತದಲ್ಲಿ ಔಟಾಗುವ ವೇಳೆ ರೋಹಿತ್ ಶರ್ಮಾ 78 ರನ್(79 ಎಸೆತ, 6 ಬೌಂಡರಿ, 3ಸಿಕ್ಸರ್) ಸಿಡಿಸಿದ್ದರು.

    ನಂತರ ಬಂದ ವಿರಾಟ್ ಕೊಹ್ಲಿ 5 ಎಸೆತದ ಎದುರಿಸಿ ಶೂನ್ಯಕ್ಕೆ ಔಟಾದರು. ಮೂರನೇ ವಿಕೆಟ್‍ಗೆ ಶಿಖರ್ ಧವನ್ ಮತ್ತು ಯುವರಾಜ್ 46 ಎಸೆತಗಳಲ್ಲಿ 40 ರನ್ ಜೊತೆಯಾಟ ಆಡಿದರು. ಇದರಲ್ಲಿ ಯುವರಾಜ್ ಪಾಲು 7 ರನ್.

    ಯುವರಾಜ್ ಔಟಾದ ಬಳಿಕ ಕ್ರೀಸಿಗೆ ಬಂದ ಧೋನಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಧೋನಿ ಮತ್ತು ಧವನ್ 4ನೇ ವಿಕೆಟಿಗೆ 64 ಎಸೆತಗಳಲ್ಲಿ 82 ರನ್ ಪೇರಿಸಿದರು.

    ಶಿಖರ್ ಧವನ್ ಶತಕ: 69 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಧವನ್ 112 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ಬಾಳ್ವೆಯ 10 ನೇ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ 125 ರನ್(128 ಎಸೆತ, 6 ಬೌಂಡರಿ, 3ಸಿಕ್ಸರ್) ಗಳಿಸಿದ್ದಾಗ ಮೆಂಡಿಸ್‍ಗೆ ಕ್ಯಾಚ್ ನೀಡಿ ಔಟಾದರು.

    ಧೋನಿ 63 ರನ್(52 ಎಸೆತ, 7 ಬೌಂಡರಿ, 2ಸಿಕ್ಸರ್), ಕೇಧಾರ್ ಜಾಧವ್ ಔಟಾಗದೇ 25 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಕೊನೆಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಾರಣ ತಂಡದ ಮೊತ್ತ 300 ರನ್‍ಗಳ ಗಡಿ ದಾಟಿತು.

    ಲಸಿತ್ ಮಾಲಿಂಗ,  2 ವಿಕೆಟ್ ಪಡೆದರೆ, ಲಕ್ಮಲ್, ಪ್ರದೀಪ್, ಪಿರೇರಾ ಗುಣರತ್ನೆ ತಲಾ ಒಂದೊಂದು ವಿಕೆಟ್ ಪಡೆದರು.

    ರನ್ ಏರಿದ್ದು ಹೀಗೆ:
    50 ರನ್ – 10.2 ಓವರ್
    100 ರನ್ – 19.2 ಓವರ್
    150 ರನ್- 27.1 ಓವರ್
    200 ರನ್ – 37.6 ಓವರ್
    250 ರನ್ – 42.4 ಓವರ್
    300 ರನ್ – 48.2 ಓವರ್
    321 ರನ್ – 50 ಓವರ್

  • ಜೂನ್ 16ರಿಂದ ದೇಶಾದ್ಯಂತ ಪ್ರತಿದಿನ ಪರಿಷ್ಕರಣೆ ಆಗುತ್ತೆ ಪೆಟ್ರೋಲ್, ಡೀಸೆಲ್ ದರ

    ಜೂನ್ 16ರಿಂದ ದೇಶಾದ್ಯಂತ ಪ್ರತಿದಿನ ಪರಿಷ್ಕರಣೆ ಆಗುತ್ತೆ ಪೆಟ್ರೋಲ್, ಡೀಸೆಲ್ ದರ

    ನವದೆಹಲಿ: ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಜೂನ್ 16ರಿಂದ ಪ್ರತಿದಿನ ಪರಿಷ್ಕರಣೆಯಾಗಲಿದೆ.

    ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಾದ ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್‍ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರತಿ ದಿನ ದರ ಪರಿಷ್ಕರಣೆ ಆಗುತಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಜೂನ್ 16ರಿಂದ ದೇಶದ ಎಲ್ಲ ಕಡೆಗಳಲ್ಲಿ ಜಾರಿಗೊಳಿಸುತ್ತೇವೆ ಎಂದು ಭಾರತೀಯ ತೈಲ ಕಂಪೆನಿಗಳು ಹೇಳಿವೆ.

    ಪ್ರಮುಖ 5 ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಬಳಿಕ, ದೇಶದ ಉಳಿದ ಭಾಗದಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಏಪ್ರಿಲ್ ನಲ್ಲಿ ತಿಳಿಸಿದ್ದರು.

    ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು, ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಏಪ್ರಿಲ್ 5ರಂದು ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದರು.

    ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ದೇಶದಲ್ಲಿ ಸುಮಾರು 58 ಸಾವಿರ ಬಂಕ್‍ಗಳನ್ನು ಹೊಂದಿರುವ ಈ ತೈಲ ಕಂಪೆನಿಗಳು ಕಾರ್ಯರೂಪಕ್ಕೆ ತರಲು ಮುಂದಾಗಿದೆ.

    ಗ್ರಾಹಕರಿಗೆ ಲಾಭವೇ?
    ಪ್ರಸ್ತುತ ಈಗ ಪ್ರತಿ 15ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಭಾರೀ ಬೆಲೆ ಏರಿಕೆಯಾದರೆ, ಕೆಲವೊಮ್ಮೆ ಭಾರೀ ಇಳಿಕೆಯಾಗುತ್ತದೆ. ಏರಿಕೆಯಾದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ದಿನ ದರವನ್ನು ಪರಿಷ್ಕರಿಸಿದರೆ ಪ್ರತಿದಿನ ಕೆಲ ಪೈಸೆ ಏರಿಕೆಯಾಗಬಹುದು ಇಲ್ಲವೇ ಕೆಲ ದಿನ ಕೆಲ ಪೈಸೆ ಇಳಿಕೆಯಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಅಷ್ಟೇನು ಹೊರೆ ಬೀಳುವುದಿಲ್ಲ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಅಥವಾ ಏರಿಕೆಯಾದರೂ ವಿಶೇಷವಾಗಿ ಚುನಾವಣೆಯ ಸಂದರ್ಭದಲ್ಲಿ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ತೈಲ ಕಂಪೆನಿಗಳು ಈ ಅವಧಿಯಲ್ಲಿ ದರ ಪರಿಷ್ಕರಣೆಗೆ ಮುಂದಾಗುವುದಿಲ್ಲ. ಒಂದು ವೇಳೆ ಪ್ರತಿದಿನ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಬಂದರೆ ಚುನಾವಣೆಯ ಅವಧಿಯಲ್ಲೂ ದರವನ್ನು ಏರಿಕೆ, ಇಳಿಕೆ ಮಾಡುವ ಸ್ವಾಂತಂತ್ರ್ಯ ಇವುಗಳಿಗೆ ಸಿಗಲಿದೆ.

    ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮಾರ್ಚ್ 31ರಂದು ಭಾರೀ ಇಳಿಕೆಯಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ದರವನ್ನು ಪರಿಷ್ಕರಿಸುತ್ತಿದ್ದ ತೈಲ ಕಂಪೆನಿಗಳು ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಮಾತ್ರ ಪರಿಷ್ಕರಿಸಲಾಗಿತ್ತು.

    ಭಾರತ ಸರ್ಕಾರ 2010 ರಲ್ಲಿ ಪೆಟ್ರೋಲ್ ನಿಯಂತ್ರಣ ಮುಕ್ತಗೊಳಿಸಿದರೆ, 2014ರಲ್ಲಿ ಡೀಸೆಲ್ ಅನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತ್ತು.

    ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

  • ಕೊಹ್ಲಿಯನ್ನು ನಮ್ಗೆ ಕೊಡಿ, ಇಡೀ ನಮ್ಮ ತಂಡ ಕೊಡ್ತೀವಿ: ಪಾಕ್ ಪತ್ರಕರ್ತ

    ಕೊಹ್ಲಿಯನ್ನು ನಮ್ಗೆ ಕೊಡಿ, ಇಡೀ ನಮ್ಮ ತಂಡ ಕೊಡ್ತೀವಿ: ಪಾಕ್ ಪತ್ರಕರ್ತ

    ನವದೆಹಲಿ: ವಿರಾಟ್ ಕೊಹ್ಲಿಯನ್ನು ನಮಗೆ ಕೊಟ್ಟು ಇಡೀ ಪಾಕ್ ತಂಡವನ್ನೇ ಭಾರತ ತೆಗೆದುಕೊಳ್ಳಲಿ ಎಂದು ಪಾಕ್ ಪತ್ರಕರ್ತ ನಜರಾನಾ ಗಫರ್ ಟ್ವೀಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನಕ್ಕೆ ಕೊಟ್ಬಿಡಿ.ಬೇಕಿದ್ರೆ ಇದಕ್ಕೆ ಬದಲಾಗಿ ಇಡೀ ಪಾಕ್ ತಂಡವನ್ನು ಭಾರತ ತೆಗೆದುಕೊಳ್ಳಲಿ. ಒಂದು ವರ್ಷದ ಮಟ್ಟಿಗೆ ಕೊಹ್ಲಿಯನ್ನು ಕೊಟ್ಬಿಡಿ ಎಂದು ಹೀಗಂತ ತಂಡದ ಸೋಲಿನ ಹತಾಶೆಯಲ್ಲಿ ಪಾಕ್ ಪತ್ರಕರ್ತ ನಜರಾನಾ ಗಫರ್ ಟ್ವಿಟ್ ಮಾಡಿದ್ದಾರೆ.

    ಇದಕ್ಕೆ ಭಾರೀ ಪ್ರಮಾಣದಲ್ಲಿ ಪರ ವಿರೋಧದ ಟ್ವೀಟ್‍ಗಳು ಹರಿದುಬಂದಿವೆ. ಟೀಂ ಇಂಡಿಯಾದ ಕಟ್ಟಾ ಅಭಿಮಾನಿಯಿಬ್ಬರು ರೀ ಟ್ವೀಟ್ ಮಾಡಿದ್ದು, ‘K’ ಅಕ್ಷರದಿಂದ ಕಾಶ್ಮೀರ ಬೇಕು ಅಂತಿದ್ರಿ.. ಇದೀಗ ‘K’ ಅಕ್ಷರದ ಕೊಹ್ಲಿಯೂ ಬೇಕಾ.. ಅವರೆಡು ನಿಮಗೆ ಸಿಗಲ್ಲ ಎಂದು ಕಿಚಾಯಿಸಿದ್ದಾರೆ.

    ಮತ್ತೊಬ್ಬರು ನಾವು ಭಿಕ್ಷುಕರನ್ನು ಪ್ರೋತ್ಸಾಹಿಸುವುದಿಲ್ಲ. ನಿಮ್ಮ ತಂಡವನ್ನು ಜಿಂಬಾಬ್ವೆ ಸಹ ಖರೀದಿಸಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಪಾಕಿಸ್ತಾನದ ಮಂದಿ ನಜರಾನಾ ಗಫರ್ ಮುಗಿ ಬಿದ್ದಿದ್ದು, ಈ ರೀತಿ ಅವಮಾನ ಮಾಡಿ ಟ್ವೀಟ್ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

     

     

  • ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

    ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

    – ಜನರ ನಂಬಿಕೆಯ ಜೊತೆ ಪಾಕ್ ಐಎಸ್‍ಐ ಆಟ
    – ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ ಉಗ್ರರಿಗೆ ಸಂದಾಯ

    ಜೈಪುರ: ರಾಜಸ್ಥಾನ ಹೆಸರು ಕೇಳಿದರೆ ಸಾಕು, ಎಲ್ಲರಿಗೂ ನೆನಪಾಗುವುದು ಅಲ್ಲಿನ ಅರಮನೆಗಳು ಮತ್ತು ಮನಮೋಹಕ ಸಂಸ್ಕೃತಿ ವಿಚಾರಗಳು. ಆದರೆ ಈಗ ಅಲ್ಲಿನ ಗ್ರಾಮಗಳ ದೇವಾಲಯಗಳಿಂದ ಪಾಕಿಸ್ತಾನದ ಉಗ್ರರಿಗೆ ಹಣ ರವಾನೆಯಾಗುತ್ತಿರುವ ಶಾಕಿಂಗ್ ವಿಚಾರ ಕೇಳಿಬಂದಿದೆ.

    ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ರಾಜಸ್ಥಾನ ಗಡಿ ಭಾಗದ ಹಳ್ಳಿಗಳ ದೇವಾಲಯಗಳಿಂದ ಹಣ ಸಂಗ್ರಹವಾಗುತ್ತಿದೆ ಎಂಬ ಮಾಹಿತಿ ಈಗ ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿದೆ.

    ಭಕ್ತರು ದೇವಾಲಯಗಳಲ್ಲಿ ಕಾಣಿಕೆ ಹಾಕುತ್ತಾರೆ ಎನ್ನುವುದು ಎಲ್ಲಿರಿಗೂ ತಿಳಿದಿರುವ ವಿಚಾರ. ಈಗ ಭಕ್ತರ ನಂಬಿಕೆಯ ಮೇಲೆ ಪಾಕಿಸ್ತಾನ ಗೂಢಚರ್ಯೆ ಸಂಸ್ಥೆ ಐಎಸ್‍ಐ ಆಟವಾಡುತ್ತಿದ್ದು, ಐಎಸ್‍ಐನ ಏಜೆಂಟ್ ಗಳು ರಾಜಸ್ಥಾನದ ಗಡಿಯಲ್ಲಿರುವ ಕೆಲವು ಹಳ್ಳಿಗಳ ದೇವಾಲಯಗಳಲ್ಲಿ ಕಾಣಕೆ ಹುಂಡಿಯನ್ನು ಇರಿಸಿದ್ದಾರೆ. ಇಲ್ಲಿ ಸಂಗ್ರಹವಾದ ಹಣ ನೇರವಾಗಿ ಉಗ್ರರ ಕೈ ಸೇರುತ್ತಿದೆ ಎನ್ನುವ ಅಂಶವನ್ನು ರಾಜಸ್ಥಾನ ಗುಪ್ತಚರ ಇಲಾಖೆ ತಿಳಿಸಿದೆ.

    ಪತ್ತೆಯಾಗಿದ್ದು ಹೇಗೆ?
    ಕಳೆದ ವಾರ ಬಾರ್ಮರ್ ಜಿಲ್ಲೆಯ ಗಡಿಭಾಗದ ಗ್ರಾಮವೊಂದರಲ್ಲಿ ಐಎಸ್‍ಐ ಎಜೆಂಟ್ ದೀನಾ ಖಾನ್ ಎಂಬಾತನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಚೋತನ್ ಎಂಬ ಹಳ್ಳಿಯಲ್ಲಿ ಸುಮಾರು 3.5 ಲಕ್ಷ ರೂ. ಕಾಣಿಕೆ ಹುಂಡಿಯಿಂದ ದೇಣಿಗೆ ಸಂಗ್ರಹ ಮಾಡಿ ನಾನು ಹಂಚಿದ್ದೇನೆ ಎಂದು ಹೇಳಿದ್ದಾನೆ.

    ದೀನಾ ಖಾನ್‍ನನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿಗಳು ಆತನಿಗೆ ಕರೆ ಮಾಡಿ ಹಣವನ್ನು ಹಂಚುವುಂತೆ ನಿರ್ದೇಶಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಾಣಿಕೆ ಹುಂಡಿಯೇ ಯಾಕೆ?
    ಹವಾಲಾ ಮೂಲಕ ಹಣ ಸಾಗಿಸಲು ಈಗ ತುಂಬಾ ಕಷ್ಟವಾಗಿದೆ. ಅಲ್ಲದೇ ಇದರಿಂದ ಸಿಕ್ಕಿಬೀಳುವ ಅಪಾಯ ಹೆಚ್ಚು. ಹೀಗಾಗಿ ಸುಲಭವಾಗಿ ಹಣ ಸಂಗ್ರಹ ಮಾಡಲು ಕಾಣಿಕೆ ಹುಂಡಿಗಳನ್ನು ಇಡುತ್ತಿದ್ದೇವೆ ಎಂದು ಆತ ತಿಳಿಸಿದ್ದಾನೆ.

    ರಾಜಸ್ಥಾನ ಗಡಿ ಭಾಗದಲ್ಲಿರುವ ಹಲವು ದೇವಾಲಯಗಳಲ್ಲಿ ಉಗ್ರರಿಗೆ ಹಣವನ್ನು ಸಂದಾಯ ಮಾಡಲು ಕಾಣಿಕೆ ಡಬ್ಬಿಗಳನ್ನು ಇಟ್ಟಿದ್ದಾರೆ ಎನ್ನುವ ಶಂಕೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.

  • ಹೂಡಿಕೆಗೆ ಪ್ರಾಶಸ್ತ್ಯ: ಚೀನಾ ಹಿಂದಿಕ್ಕಿ ನಂಬರ್ ಒನ್ ಆಯ್ತು ಭಾರತ

    ಹೂಡಿಕೆಗೆ ಪ್ರಾಶಸ್ತ್ಯ: ಚೀನಾ ಹಿಂದಿಕ್ಕಿ ನಂಬರ್ ಒನ್ ಆಯ್ತು ಭಾರತ

    ಸಿಂಗಾಪುರ: 2017ರ ಜಾಗತಿಕ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ(ಜಿಆರ್‍ಡಿಐ) ಪ್ರಕಟವಾಗಿದ್ದು ಬಂಡವಾಳ ಹೂಡಿಕೆಗೆ ಪ್ರಾಶಸ್ತ್ಯ ಕಲ್ಪಿಸಿದ 30 ಅಭಿವೃದ್ಧಿ ಶೀಲ ದೇಶಗಳ ಪೈಕಿ ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಆರ್ಥಿಕತೆ ಏರಿಕೆ, ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದ ಕಾರಣ ಭಾರತಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ ಎಂದು ಜಿಆರ್‍ಡಿಐ ತಿಳಿಸಿದೆ.

    ಆರ್ಥಿಕ ಬೆಳವಣಿಗೆ ಕಡಿಮೆಯಾದ ಹಿನ್ನೆಲೆಯಲ್ಲಿ ಚೀನಾ ಎರಡನೇ ಸ್ಥಾನಕ್ಕೆ ಜಾರಿದೆ. 2015ರ ಸೂಚ್ಯಂಕದಲ್ಲಿ ಭಾರತ 13 ಸ್ಥಾನ ಏರಿಕೆಯಾಗಿ ಪಟ್ಟಿಯಲ್ಲಿ 15ನೇ ಸ್ಥಾನಗಳಿಸಿತ್ತು.

    ವಾರ್ಷಿಕ ಶೇ.20ರ ದರದಲ್ಲಿ ಭಾರತ ಅಭಿವೃದ್ಧಿಯಾಗುತ್ತಿದ್ದು ಕಳೆದ ವರ್ಷ 3 ಟ್ರಿಲಿಯನ್ ಡಾಲರ್ ಗಡಿಯನ್ನು ದಾಟಿದ್ದು, 2020ರ ವೇಳೆ ಇದು ದ್ವಿಗುಣವಾಗಲಿದೆ ಎಂದು ಅದು ಅಂದಾಜಿಸಿದೆ.

    ನಗರೀಕರಣ, ಮಧ್ಯಮ ವರ್ಗದ ಕುಟುಂಬಗಳಲ್ಲಿ ಆದಾಯ ಏರಿಕೆ, ಎಫ್‍ಡಿಐ ನಿಂದಾಗಿ ಭಾರತದ ಆರ್ಥಿಕತೆ ಏರಿಕೆಯಾಗುತ್ತಿದೆ ಎಂದು ಅದು ತಿಳಿಸಿದೆ. ಒಂದು ವೇಳೆ ವಾರ್ಷಿಕವಾಗಿ ಈ ಶೇ.30ರ ದರದಲ್ಲಿ ಅಭಿವೃದ್ಧಿಯಾದರೆ 2020ರ ವೇಳೆ 48 ಶತಕೋಟಿ ಡಾಲರ್ ತಲುಪಬಹುದು ಎಂದು ಜಿಆರ್‍ಡಿಐ ಅಂದಾಜಿಸಿದೆ.

    ಕ್ಯಾಶ್‍ಲೆಸ್ ವ್ಯವಹಾರಕ್ಕೆ ಕೇಂದ್ರ ಸರ್ಕಾರದ ಉತ್ತೇಜನ ಮತ್ತು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಿಂದಾಗಿ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ ದರ ಏರಿಕೆಯಾಗಲಿದೆ ಎಂದು ಹೇಳಿದೆ.

  • ಮಳೆ ಮಧ್ಯೆ ರನ್ ಹೊಳೆ: ಭಾರತಕ್ಕೆ 124 ರನ್‍ಗಳ ಭರ್ಜರಿ ಜಯ

    ಮಳೆ ಮಧ್ಯೆ ರನ್ ಹೊಳೆ: ಭಾರತಕ್ಕೆ 124 ರನ್‍ಗಳ ಭರ್ಜರಿ ಜಯ

    ಎಜ್‍ಬಾಸ್ಟನ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 124 ರನ್‍ಗಳ ಭರ್ಜರಿ ಜಯ ಸಾಧಿಸಿದೆ.

    ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಡಕ್‌ವರ್ತ್‌ ಲೂಯಿಸ್‌ ನಿಯಮದ ಅನುಸಾರ ಮೊದಲು ಬ್ಯಾಟ್ ಮಾಡಿದ ಭಾರತ 48 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 319 ರನ್‍ಗಳಿಸಿತ್ತು. ಮತ್ತೆ ಮಳೆ ಸುರಿದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ 41 ಓವರ್ ಗಳಲ್ಲಿ 289 ರನ್‍ಗಳ ಗುರಿಯನ್ನು ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಪಾಕಿಸ್ತಾನ 33.4 ಓವರ್‍ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಯ್ತು.

    ಪಾಕಿಸ್ತಾನದ ಪರ ಆರಂಭಿಕ ಆಟಹಾರ ಅಜರ್ ಅಲಿ 50 ರನ್( 65 ಎಸೆತ, 6 ಬೌಂಡರಿ) ಹೊಡೆದರೆ ಮಹಮ್ಮದ್ ಹಫೀಸ್ 33 ರನ್(43 ಎಸೆತ, 2 ಬೌಂಡರಿ) ಹೊಡೆದರು.

    ಭಾರತದ ಪರ ಉಮೇಶ್ ಯಾದವ್ 3 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಇತರೇ ರೂಪದಲ್ಲಿ ಭಾರತ 8 ರನ್‍ಗಳನ್ನು ನೀಡಿತ್ತು.

    ಭರ್ಜರಿ ಮೊತ್ತ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರ ಆಕರ್ಷಕ ಅರ್ಧಶತಕದಿಂದಾಗಿ 48 ಓವರ್‍ಗಳಲ್ಲಿ 319 ರನ್ ಗಳಿಸಿತ್ತು.

    ರೋಹಿತ್ ಶರ್ಮಾ ಮತ್ತು ವಿರಾಟ್ ಶಿಖರ್ ಧವನ್ ಮೊದಲನೇ ವಿಕೆಟ್‍ಗೆ 147 ಎಸೆತಗಳಲ್ಲಿ 136 ರನ್ ಜೊತೆಯಾಟವಾಡಿದರು. ಶಿಖರ್ ಧವನ್ 68 ರನ್(65 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದಾಗ ಕ್ಯಾಚ್ ನೀಡಿ ಔಟಾದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ರೋಹಿತ್ ಶರ್ಮಾ 91 ರನ್( 119 ಎಸೆತ, 7 ಬೌಂಡರಿ, 2ಸಿಕ್ಸರ್) ಗಳಿಸಿದಾಗ ರನ್ ಔಟ್ ಆದರು.

    ಯುವಿ ಕೊಹ್ಲಿ ಜುಗಲ್‍ಬಂದಿ: ಯುವರಾಜ್ ಕ್ರೀಸ್‍ಗೆ ಬಂದ ಬಳಿಕ ಭಾರತದ ರನ್ ವೇಗ ಹೆಚ್ಚಾಯಿತು. 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವಿ ಅಂತಿಮವಾಗಿ 53 ರನ್(32 ಎಸೆತ, 8 ಬೌಂಡರಿ, 1 ಸಿಕ್ಸರ್) ಗಳಿಸಿ ಎಲ್‍ಬಿಯಾದರು. ಇವರಿಬ್ಬರು ಮೂರನೇ ವಿಕೆಟ್‍ಗೆ 58 ಎಸೆತಗಳಲ್ಲಿ 93 ರನ್ ಸೂರೆಗೈದರು. ಅದರಲ್ಲೂ ವಾಹಬ್ ಎಸೆದ 46ನೇ ಓವರ್‍ನ 5 ಎಸೆತಗಳಲ್ಲಿ 20ರನ್ ಬಂದಿತ್ತು.

    ಕೊಹ್ಲಿ ಕಮಾಲ್: ಆರಂಭದಲ್ಲಿ ನಿಧನವಾಗಿ ಆಡುತ್ತಿದ್ದ ಕೊಹ್ಲಿ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬಳಿಕ ಆಕ್ರಮಣಕಾರಿ ಆಟವನ್ನು ಆಡಲಾರಂಭಿಸಿದರು. ಅಂತಿಮವಾಗಿ 81 ರನ್( 68 ಎಸೆತ, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ಔಟಾಗದೇ ಉಳಿದರು.

    ಕೊನೆಯಲ್ಲಿ ಸಿಡಿದ ಪಾಂಡ್ಯಾ: ಹಾರ್ದಿಕ್ ಪಾಂಡ್ಯಾ 20 ರನ್(6 ಎಸೆತ, 3 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು. ಮುರಿಯದ ನಾಲ್ಕನೇ ವಿಕೆಟ್‍ಗೆ ಕೊಹ್ಲಿ ಮತ್ತು ಪಾಂಡ್ಯಾ 10 ಎಸೆತಗಳಲ್ಲಿ 34 ರನ್ ಸೂರೆಗೈದರು. ಇಮಾದ್ ವಾಸೀಂ ಎಸೆದ 48 ನೇ ಓವರ್‍ನಲ್ಲಿ ಪಾಂಡ್ಯಾ ಮೂರು ಸಿಕ್ಸರ್ ಹೊಡೆದರೆ, ಕೊಹ್ಲಿ ಬೌಂಡರಿ ಹೊಡೆದ ಪರಿಣಾಮ ಈ ಓವರ್‍ನಲ್ಲಿ 23 ರನ್ ಬಂದಿತ್ತು.

    ಹಸನ್ ಅಲಿ 1 ವಿಕೆಟ್ ಪಡೆದರೆ, ಶಾದಬ್ ಖಾನ್ 1 ವಿಕೆಟ್ ಪಡದರು. ಇತರೇ ರೂಪದಲ್ಲಿ 6 ರನ್ ಬಂದಿತ್ತು. 9ನೇ ಓವರ್ ಮತ್ತು 34ನೇ ಓವರ್‍ನಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು 48 ಓವರ್‍ಗೆ ಇಳಿಸಲಾಗಿತ್ತು.

    32 ಎಸೆತಗಳಲ್ಲಿ 53 ರನ್ ಸಿಡಿಸಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ಯುವರಾಜ್ ಸಿಂಗ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

    ಎಷ್ಟು ಓವರ್‍ಗೆ ಎಷ್ಟು ರನ್?
    50 ರನ್ 10.4 ಓವರ್
    100 ರನ್ 19.3 ಓವರ್
    150 ರನ್ 27.3 ಓವರ್
    200 ರನ್ 37.5 ಓವರ್
    250 ರನ್ 44.2 ಓವರ್
    300 ರನ್ 47.1 ಓವರ್
    319 ರನ್ 48 ಓವರ್