Tag: ಭಾರತ

  • ಜಾಗತಿಕ ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

    ಜಾಗತಿಕ ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

    ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.

    ಅಮೆರಿಕದ ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ (ಸಿಐಡಿ) ಅಧ್ಯಯನದ ಪ್ರಕಾರ 2025ರವರೆಗೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಹೊರಹೊಮ್ಮುವ ಆರ್ಥಿಕ ಶಕ್ತಿಯಾಗಿ ಭಾರತ ಉದಯಿಸಲಿದೆ. ಈ ಸಂದರ್ಭದಲ್ಲಿ ವಾರ್ಷಿಕ ಜಿಡಿಪಿ ಬೆಳವಣಿಗೆ ದರ ಶೇ.7.7 ಇರಲಿದೆ ಎಂದು ಅದು ಅಂದಾಜಿಸಿದೆ.

    ರಾಸಾಯನಿಕ, ವಾಹನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳ ಬೆಳವಣಿಗೆಯಿಂದ ಭಾರತದ ಆರ್ಥಿಕತೆ ಪ್ರಗತಿ ಕಾಣಲಿದೆ ಎಂದು ಅದು ಅಂದಾಜಿಸಿದೆ.

    ರಾಜಕೀಯ, ಭೌಗೋಳಿಕ, ಸಾಂಸ್ಥಿಕ ಕ್ಷೇತ್ರಗಳಿಂದಾಗಿ, ಭಾರತದ ಜೊತೆ ಇಂಡೋನೇಷ್ಯಾ, ವಿಯೆಟ್ನಾಂ, ಟರ್ಕಿ, ಉಗಾಂಡ, ಬಲ್ಗೇರಿಯಾ ದೇಶಗಳ ಆರ್ಥಿಕತೆಗಳು ವೇಗವಾಗಿ ಬೆಳವಣಿಗೆಯಾಗಲಿದೆ ಎಂದು ಸಿಐಡಿ ತಿಳಿಸಿದೆ.

     

  • ಗಂಗೂಲಿ ದಾಖಲೆ ಬ್ರೇಕ್ ಮಾಡಿ ಡ್ರೆಸ್ಸಿಂಗ್ ರೂಂನಲ್ಲಿ ಮೌನಕ್ಕೆ ಶರಣಾದ ಧೋನಿ: ವಿಡಿಯೋ ನೋಡಿ

    ಗಂಗೂಲಿ ದಾಖಲೆ ಬ್ರೇಕ್ ಮಾಡಿ ಡ್ರೆಸ್ಸಿಂಗ್ ರೂಂನಲ್ಲಿ ಮೌನಕ್ಕೆ ಶರಣಾದ ಧೋನಿ: ವಿಡಿಯೋ ನೋಡಿ

    ಆಂಟಿಗುವಾ: ಭಾರತದ ವಿರುದ್ಧದ ನಾಲ್ಕನೇಯ ಏಕದಿನ ಪಂದ್ಯವನ್ನು ವೆಸ್ಟ್ ಇಂಡೀಸ್ 11 ರನ್ ಗಳಿಂದ ಗೆದ್ದಿದ್ದು, ಈ ಪಂದ್ಯದಲ್ಲಿ ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಬೇಸರದಲ್ಲಿ ಕುಳಿತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹೌದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಸುಲಭ ಸವಾಲನ್ನು ಬೆನ್ನಟ್ಟಿದ್ದ ಭಾರತ 49.4 ಓವರ್ ಗಳಲ್ಲಿ 178 ರನ್ ಗಳಿಗೆ ಆಲೌಟ್ ಆಯ್ತು.

    ಈ ಪಂದ್ಯದಲ್ಲಿ ಧೋನಿ 54 ರನ್ ಹೊಡೆದಿದ್ದರು. ಧೋನಿ ಇಷ್ಟು ರನ್ ಹೊಡೆಯಲು 114 ಎಸೆತಗಳನ್ನು ಎದುರಿಸಿದ್ದರು. ಈ ಇನ್ನಿಂಗ್ಸ್ ನಲ್ಲಿ ಧೋನಿ ಒಂದೇ ಬೌಂಡರಿ ಹೊಡೆದಿದ್ದರು.

    ಪಂದ್ಯ ಸೋತ ಬಳಿಕ ಟೀಂ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್ ತಂಡವನ್ನು ಅಭಿನಂದಿಸುತ್ತಿದ್ದರೆ, ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಲ್ಲಿಯೇ ಇದ್ದರು. ಈ ವೇಳೆ ಆಟಗಾರರೊಬ್ಬರು ಕೈ ಕುಲುಕಿದಾಗಲೂ ಧೋನಿ ಮನಸ್ಸಿಲ್ಲದ ಮನಸ್ಸನಿಂದ ಶೇಕ್ ಹ್ಯಾಂಡ್ ಮಾಡಿದ್ದರು.

    ಗಂಗೂಲಿ ದಾಖಲೆ ಬ್ರೇಕ್: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಈ ಹಿಂದೆ 2005ರಲ್ಲಿ ಶ್ರೀಲಂಕಾ ವಿರುದ್ಧ  104 ಎಸೆತಗಳಲ್ಲಿ ಅರ್ಧಶತಕ ಹೊಡೆದಿದ್ದರು. ಇಲ್ಲಿಯವರೆಗೆ ಅತಿ ಹೆಚ್ಚು ಎಸೆತಗಳನ್ನು ಎದುರಿಸಿ 50 ರನ್ ಹೊಡೆದ ಟೀಂ ಇಂಡಿಯಾದ ಆಟಗಾರ ಎನ್ನುವ ದಾಖಲೆ ಸೌರವ್ ಗಂಗೂಲಿ ಹೆಸರಿನಲ್ಲಿತ್ತು. ಈಗ ಧೋನಿ 108 ಎಸೆತಗಳಲ್ಲಿ 50 ರನ್ ಹೊಡೆಯುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

    ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ ಎರಡನೇ ಪಂದ್ಯವನ್ನು ಭಾರತ 105 ರನ್ ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯವನ್ನು ಭಾರತ 93 ರನ್ ಗಳಿಂದ ಗೆದ್ದುಕೊಂಡಿತ್ತು. ನಾಲ್ಕನೇಯ ಪಂದ್ಯವನ್ನು ವಿಂಡೀಸ್ ಗೆದ್ದುಕೊಂಡಿದ್ದು, ಕೊನೆಯ ಪಂದ್ಯ ಜುಲೈ 6ರಂದು ನಡೆಯಲಿದೆ.

    https://twitter.com/CricGif17/status/881625413927133185

     

  • ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 95 ರನ್‍ಗಳ ಭರ್ಜರಿ ಜಯ

    ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 95 ರನ್‍ಗಳ ಭರ್ಜರಿ ಜಯ

    ಡರ್ಬಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 95 ರನ್‍ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆರಂಭಿಸಿದ ಭಾರತ 50 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ 38.1 ಓವರ್‍ಗಳಲ್ಲಿ 74 ರನ್ ಗಳಿಸಿ ಆಲೌಟ್ ಆಯ್ತು.

    ಟೀ ಇಂಡಿಯಾದ ಮಾರಕ ಬೌಲಿಂಗ್ ಗೆ ತತ್ತರಿಸಿದ ಪಾಕಿಸ್ತಾನ ಪರವಾಗಿ ಆರಂಭಿಕ ಆಟಗಾರ್ತಿ ನಹಿದಾ ಖಾನ್ 23 ರನ್ ಮತ್ತು  ಕೊನೆಯಲ್ಲಿ  ಸನಾ ಮಿರ್ 29 ರನ್ ಗಳಿಸಿ  ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ, ಉಳಿದವರು ಬೇಗನೆ ಔಟಾದರು.

     ಭಾರದ ಪರವಾಗಿ ಪೂನಂ ರಾವುತ್ 47 ರನ್, ದೀಪ್ತಿ ಶರ್ಮಾ 28 ರನ್, ಸುಷ್ಮಾ ವರ್ಮಾ 33 ರನ್ ಬಾರಿಸಿದರು. ಬೌಲಿಂಗ್ ನಲ್ಲಿ  ಏಕ್ತಾ ಬಿಷ್ತ್ 5 ವಿಕೆಟ್ ಪಡೆದು ಮಿಂಚಿದರು.

    ಆಡಿರುವ ಮೂರು ಪಂದ್ಯಗಳನ್ನು ಮಿಥಾಲಿ ರಾಜ್ ಪಡೆ ಗೆದ್ದುಕೊಂಡಿದೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯವನ್ನು 35 ರನ್ ಗಳಿಂದ ಗೆದ್ದಿದ್ದರೆ, ವಿಂಡೀಸ್ ವಿರುದ್ಧದ ಎರಡನೇ ಪಂದ್ಯವನ್ನು 7 ವಿಕೆಟ್‍ಗಳಿಂದ ಜಯಗಳಿಸಿತ್ತು.

     

  • ಇಸ್ರೇಲ್‍ಗೆ ಭೇಟಿ ನೀಡ್ತಿರೋ ಮೊದಲ ಭಾರತೀಯ ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ ಇಸ್ರೇಲಿ ಪ್ರಜೆಗಳು

    ಇಸ್ರೇಲ್‍ಗೆ ಭೇಟಿ ನೀಡ್ತಿರೋ ಮೊದಲ ಭಾರತೀಯ ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ ಇಸ್ರೇಲಿ ಪ್ರಜೆಗಳು

     

    ನವದೆಹಲಿ: ಪ್ರಧಾನಿ ಮೋದಿಯ ಐತಿಹಾಸಿಕ ಇಸ್ರೇಲ್ ಭೇಟಿಯ ಹಿನ್ನೆಲೆಯಲ್ಲಿ ಇಲ್ಲಿನ ಪ್ರಜೆಗಳು ಮೋದಿಗೆ ಹಿಂದಿಯಲ್ಲಿ ನಮಸ್ತೆ ಮೋದಿಜೀ ಎಂದು ಸ್ವಾಗತ ಕೋರಿದ್ದಾರೆ. ಇದರ ವಿಡಿಯೋವನ್ನ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ.

    ಜುಲೈ 4ರಿಂದ ಆರಂಭವಾಗಿ 3 ದಿನಗಳ ಭೇಟಿಗೆ ಮೋದಿ ಇಸ್ರೇಲ್‍ಗೆ ತೆರಳಲಿದ್ದಾರೆ. ಈ ಮೂಲಕ ಮೋದಿ ಇಸ್ರೇಲ್‍ಗೆ ಭೇಟಿ ನೀಡುತ್ತಿರೋ ಮೊದಲ ಭಾರತೀಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಬುಧವಾರ ಸಂಜೆ ವಿದೇಶಾಂಗ ಸಚಿವಾಲಯ ಮೋದಿ ಭೇಟಿಯನ್ನು ಅಧಿಕೃತವಾಗಿ ಘೊಷಿಸಿದೆ. ಜೆರುಸಲೆಂನಲ್ಲಿನ ಇಸ್ರೇಲ್ ಪ್ರಜೆಗಳು ಮೋದಿ ಅವರಿಗೆ ಸ್ವಾಗತ ಕೋರಿರುವ ವಿಡಿಯೋವನ್ನ ಬುಧವಾರ ರಾತ್ರಿ ಇಸ್ರೇಲ್ ರಾಯಭಾರ ಕಚೇರಿ ಹಂಚಿಕೊಂಡಿದೆ.

    ಮಹಿಳೆಯೊಬ್ಬರು ತಮ್ಮ ಎರಡೂ ಕೈಗಳನ್ನ ಜೋಡಿಸಿ, ನಮಸ್ತೇ ಮೋದಿಜೀ, ಇಸ್ರೇಲ್ ಮೆ ಆಪ್ ಕಾ ಸ್ವಾಗತ್ ಹೈ (ಇಸ್ರೇಲ್‍ಗೆ ನಿಮಗೆ ಸ್ವಾಗತ) ಎಂದು ಹೇಳಿದ್ದಾರೆ.

    ಮತ್ತೊಬ್ಬರು “ಭಾರತ್ ಔರ್ ಇಸ್ರೇಲ್ ಕೆ ಸಂಬಂಧೋ ಮೆ ವೃದ್ಧಿ ಹೋ ಔರ್ ಮಜ್‍ಬೂತ್ ಬನೆ (ಭಾರತ ಹಾಗು ಇಸ್ರೇಲ್ ನಡುವಿನ ಬಾಂಧವ್ಯ ವೃದ್ಧಿಸಲಿ ಹಾಗೂ ಗಟ್ಟಿಯಾಗಲಿ ಎಂದು ಆಶಿಸುತ್ತೇನೆ) ಎಂದಿದ್ದಾರೆ.

    ಇದಲ್ಲದೆ ರಾಯಭಾರ ಕಚೇರಿಯ ನವದೆಹಲಿ ಸಿಬ್ಬಂದಿ ಕೂಡ ಒಟ್ಟಾಗಿ ಹಿಂದಿಯಲ್ಲಿ ಆಪ್ ಕೀ ಯಾತ್ರಾ ಶುಭ್ ಹೋ (ನಿಮ್ಮ ಪ್ರಯಾಣ ಸುಖಕರವಾಗಿರಲಿ) ಎಂದು ಕೋರಿದ್ದಾರೆ. ಭಾರತದ ಇಸ್ರೇಲ್ ರಾಯಭಾರಿ ಡೇನಿಯಲ್ ಕಾರ್ಮನ್ ಕೂಡ ವಿಡಿಯೋದ ಕೊನೆಯಲ್ಲಿ ಹಿಂದಿ ಹಾಗೂ ಹಿಬ್ರೀವ್ ಭಾಷೆಯಲ್ಲಿ ಸ್ವಾಗತ ಕೋರಿದ್ದಾರೆ.

    ಈ ವಿಡಿಯೋವನ್ನ ಈಗಾಗಲೇ 5,700ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು 3,600ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಮೋದಿ ಕೂಡ ಗುರುವಾರ ಬೆಳಿಗ್ಗೆ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಬಹುತ್ ಬಹುತ್ ಧನ್ಯವಾದ್ ಎಂದಿದ್ದಾರೆ.

    ಇಸ್ರೇಲ್ ಪ್ರಜೆಗಳ ಈ ಕಾರ್ಯವನ್ನು ಭಾರತೀಯರು ಕೂಡ ಶ್ಲಾಘಿಸಿದ್ದಾರೆ.

    https://twitter.com/Dayweekaa/status/880265480291971072?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fnamaste-modi-ji-ahead-of-visit-israelis-welcome-pm-narendra-modi-in-hindi-1718456

  • ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಯಶಸ್ವಿ

    ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಯಶಸ್ವಿ

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರಾಕ್ರಮ ಮುಂದುವರಿದಿದ್ದು, ಹವಾಮಾನ ದತ್ತಾಂಶ, ಉಪಗ್ರಹ ಆಧರಿತ ಶೋಧ ಸೇವೆಗೆ ಬಳಕೆಯಾಗುವ ಜಿಸ್ಯಾಟ್-17 ಉಡಾವಣೆ ಯಶಸ್ವಿಯಾಗಿದೆ.

    ಫ್ರೆಂಚ್ ಗಯಾನದ ಕೌರೌ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ನಸುಕಿನ ಜಾವ 2.30ರ ವೇಳೆಗೆ 3,477 ಕೆ.ಜಿ ತೂಕದ ಜಿಸ್ಯಾಟ್-17 ಉಪಗ್ರಹವನ್ನು ಹೊತ್ತಕೊಂಡು ಏರಿಯಾನ್ 5 ರಾಕೆಟ್ ನಭಕ್ಕೆ ಹಾರಿತ್ತು.

    ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.

    ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋ ಉಡಾವಣೆ ಮಾಡಿದ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜೂನ್ 5ರಂದು ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ ಜಿಸ್ಯಾಟ್ -19 ಉಪಗ್ರಹಗಳು ಕಕ್ಷೆಗೆ ಸೇರಿದ್ದರೆ, ಜೂನ್ 23 ರಂದು ಪಿಎಸ್‍ಎಲ್‍ವಿ ಸಿ38 ರಾಕೆಟ್ ಮೂಲಕ ಕಾರ್ಟೋಸ್ಯಾಟ್ 2 ಉಪಗ್ರಹ ಕಕ್ಷೆ ಸೇರಿತ್ತು.

    ವಿದೇಶದಿಂದ ಉಪಗ್ರಹ ಉಡಾವಣೆ ಮಾಡಿದ್ದು ಯಾಕೆ?
    ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಉಡಾವಣೆ ಯಶಸ್ವಿಯಾಗುವುದಕ್ಕೂ ಮೊದಲು ಇಸ್ರೋ ತೂಕದ ಉಪಗ್ರಹಗಳ ಉಡಾವಣೆಗಾಗಿ ವಿದೇಶಿ ಸಂಸ್ಥೆಗಳನ್ನು ಅವಲಂಬಿಸಿತ್ತು. ಈ ಕಾರಣಕ್ಕೆ ಮೊದಲೇ ಒಪ್ಪಂದವಾಗಿದ್ದ ಹಿನ್ನೆಲೆಯಲ್ಲಿ ಇಸ್ರೋ 3,477 ಕೆ.ಜಿ ತೂಕದ ಉಪಗ್ರಹವನ್ನು ಫ್ರೆಂಚ್ ಗಯಾನ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಿದೆ.

    ಇನ್ನು ಮುಂದೆ ಅವಲಂಬನೆ ಅಗತ್ಯವಿಲ್ಲ:
    ಇಸ್ರೋ ಹೆಚ್ಚಾಗಿ ತನ್ನ ಉಪಗ್ರಹಗಳನ್ನು ಉಡಾವಣೆ ಮಾಡಲು ಪಿಎಸ್‍ಎಲ್‍ವಿ(ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್), ಮತ್ತು ಜಿಎಸ್‍ಎಲ್‍ವಿ(ಜಿಯೋಸಿಂಕ್ರೋನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಬಳಕೆ ಮಾಡುತ್ತದೆ. ಪಿಎಸ್‍ಎಲ್‍ವಿ 1500 ಕೆಜಿ ತೂಕ ಸಾಮರ್ಥ್ಯದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 4 ಸಾವಿರ ಕೆಜಿ ತೂಕದ ಉಪಗ್ರಹವನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. 640 ಟನ್ ತೂಕದ ಈ ರಾಕೆಟ್ ಪ್ರಯಾಣಿಕರಿಂದ ತುಂಬಿರುವ 5 ಜಂಬೋ ವಿಮಾನಗಳ ತೂಕಕ್ಕೆ ಸಮವಾಗಿದ್ದು, ಜೂನ್ 5ರಂದು ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ 3136 ಕೆಜಿ ತೂಕದ ಜಿಸ್ಯಾಟ್ -19 ಉಪಗ್ರಹಗಳು ಕಕ್ಷೆಗೆ ಸೇರಿತ್ತು.

    ಮೇ 5 ರಂದು ಜಿಎಸ್‍ಎಲ್‍ವಿ ಮಾರ್ಕ್ 2 ರಾಕೆಟ್‍ನೊಂದಿಗೆ 2,230 ಕೆಜಿ ತೂಕದ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್ 9 ಉಡಾವಣೆಯನ್ನು ಇಸ್ರೋ ಮಾಡಿತ್ತು.

    ಇದನ್ನೂ ಓದಿ: ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

  • ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?

    ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?

    ವಾಷಿಂಗ್ಟನ್: ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಂದು ವೈಟ್ ಹೌಸ್‍ನಲ್ಲಿ ಭೇಟಿ ಮಾಡಿದ್ರು. ಅವರು ವೈಟ್‍ಹೌಸ್‍ನಲ್ಲಿ ಭೇಟಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದ್ರೂ ಇಬ್ಬರ ನಡುವೆ ಇದ್ದ ಆತ್ಮೀಯತೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗ್ತಿದೆ.

    ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲೆಂಡ್ಸ್ ದೇಶಗಳ ಪ್ರವಾಸದ ಭಾಗವಾಗಿ ಮೋದಿ ಟ್ರಂಪ್ ಅವರನ್ನ ವೈಟ್‍ಹೌಸ್‍ನಲ್ಲಿ ಭೇಟಿ ಮಾಡಿದ್ರು. ಟ್ರಂಪ್ ಹಾಗೂ ಅಮೆರಿಕದ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಮೋದಿಯವರನ್ನ ಸ್ವಾಗತಿಸಿ ವೈಟ್‍ಹೌಸ್‍ಗೆ ಬರಮಾಡಿಕೊಂಡ್ರು.

    ಮೋದಿ ಮೆಲಾನಿಯಾ ಟ್ರಂಪ್‍ಗೆ ಕಾಶ್ಮೀರಿ ಶಾಲ್, ಕಾಂಗ್ರಾ ಕಣಿವೆಯ ಟೀ, ಜೇನುತುಪ್ಪ, ಹಾಗೂ ಬೆಳ್ಳಿಯ ಬ್ರೇಸ್‍ಲೆಟ್ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಟ್ರಂಪ್ ಅವರಿಗಾಗಿ ಪಂಜಾಬ್‍ನ ಹೊಶಿಯಾರ್‍ಪುರ್‍ನ ವಿಶೇಷತೆಯಾದ ಸುಂದರವಾದ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದರೊಂದಿಗೆ ಅಬ್ರಹಂ ಲಿಂಕನ್ ಅವರ ಸ್ಮರಣೆಗಾಗಿ 1965ರಲ್ಲಿ ವಿತರಿಸಲಾಗಿದ್ದ ಪೋಸ್ಟಲ್ ಸ್ಟ್ಯಾಂಪ್ ಕೂಡ ಉಡುಗೊರೆಯಾಗಿ ನೀಡಿದ್ದಾರೆ.

    ನಂತರ ಮೋದಿ ಹಾಗೂ ಟ್ರಂಪ್ ಉನ್ನತ ಮಟ್ಟದ ಮಾತುಕತೆಗಾಗಿ ಕ್ಯಾಬಿನೆಟ್ ರೂಮಿಗೆ ಹೋಗಿ ಚರ್ಚೆ ನಡೆಸಿದ್ರು. ಈ ವೇಳೆ ಟ್ರಂಪ್ ಅಮೆರಿಕದಿಂದ ಭಾರತ ಸೇನಾ ಸಲಕರಣೆಗಳನ್ನ ಕೊಳ್ಳುತ್ತಿರುವುದಕ್ಕೆ ಧನ್ಯವಾದ ತಿಳಿಸಿದ್ರು. ಇತ್ತೀಚೆಗೆ ಟಾಟಾ ಹಾಗೂ ಲಾಕ್‍ಹೀಡ್ ಮಾಟಿರ್ನ್ ನಡುವೆ ಭಾರತದಲ್ಲಿ ಎಫ್-16 ಫೈಟರ್ ಜೆಟ್‍ಗಳ ಉತ್ಪಾದನೆಗೆ ಒಪ್ಪಂದವಾಗಿತ್ತು.

    ನಂತರ ಮೋದಿ ಟ್ರಂಪ್ ಜೋಡಿ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದ್ರು. ವೈಟ್‍ಹೌಸ್‍ನಲ್ಲಿ ಭಾರತಕ್ಕೆ ನಿಜವಾದ ಸ್ನೇಹಿತನಿದ್ದಾನೆ ಎಂದು ಟ್ರಂಪ್ ಪುನರುಚ್ಛರಿಸಿದ್ರು. ಟ್ರಂಪ್ ಹೇಳಿಕೆಯ ಕೊನೆಯಲ್ಲಿ ಮೋದಿ ಟ್ರಂಪ್ ಅವರನ್ನ ತಬ್ಬಿಕೊಂಡು ಹಸ್ತಲಾಘವ ಮಾಡಿದ್ರು. ಸಾಮಾನ್ಯವಾಗಿ ಟ್ರಂಪ್ ವಿವಿಧ ದೇಶಗಳ ನಾಯಕರೊಂದಿಗೆ ಹಸ್ತಲಾಘವ ಮಾಡುವಾಗ ವಿಚಿತ್ರವಾಗಿ ಮಾಡುತ್ತಾರೆ ಎಂದು ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಮೋದಿ ತಬ್ಬಿಕೊಂಡಿದ್ದು ಒಂದು ಮಾಸ್ಟರ್‍ಸ್ಟ್ರೋಕ್ ಅಂತ ಮಾಧ್ಯಮಗಳು ವರದಿ ಮಾಡಿವೆ.

    ನಂತರ ಮೋದಿ ಮಾತನಾಡಿ ಭಯೋತ್ಪಾದನೆಯ ವಿರುದ್ಧದ ಹೋರಾಟವೇ ಮೊದಲ ಆದ್ಯತೆ ಅಂದ್ರು. ಕೊನೆಗೆ ಟ್ರಂಪ್ ಅವರಿಗೆ ಕುಟುಂಬದೊಂದಿಗೆ ಭಾರತಕ್ಕೆ ಭೇಟಿ ನೀಡಿ ಎಂದು ಆಹ್ವಾನಿಸಿದ್ರು.

    ಇನ್ನು ವೈಟ್‍ಹೌಸ್‍ನಲ್ಲಿ ಮೋದಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಮೂಲಕ ಮೋದಿ ವೈಟ್‍ಹೌಸ್‍ನಲ್ಲಿ ಟ್ರಂಪ್‍ರಿಂದ ಔತಣ ಕೂಟ ಪಡೆದ ಮೊದಲ ವಿದೇಶಿ ಗಣ್ಯರೆನಿಸಿಕೊಂಡ್ರು.

    ಇನ್ನು ಮೋದಿ ವೈಟ್‍ಹೌಸ್‍ನಿಂದ ಹೊರಡುವಾಗ ಮತ್ತೊಮ್ಮೆ ಟ್ರಂಪ್‍ರನ್ನ ತಬ್ಬಿಕೊಂಡ್ರು.

  • ಕೊಹ್ಲಿ ಆ ಟ್ವೀಟ್ ಡಿಲೀಟ್ ಮಾಡಿದ್ದು ಯಾಕೆ?

    ಕೊಹ್ಲಿ ಆ ಟ್ವೀಟ್ ಡಿಲೀಟ್ ಮಾಡಿದ್ದು ಯಾಕೆ?

    ಮುಂಬೈ: ಕುಂಬ್ಳೆ ರಾಜೀನಾಮೆಗೆ ಕೊಹ್ಲಿಯೆ ಕಾರಣ ಎನ್ನುವ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಕೊಹ್ಲಿ ಒಂದು ವರ್ಷದ ಹಿಂದೆ ತಾವು ಮಾಡಿದ್ದ ಟ್ವೀಟ್ ಒಂದನ್ನು ಡಿಲೀಟ್ ಮಾಡುವ ಮೂಲಕ ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ.

    ಹೌದು. ಕುಂಬ್ಳೆ ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾದ ಬಳಿಕ 2016ರ ಜೂನ್ 23ರಂದು ಕೊಹ್ಲಿ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. ಆದರೆ ಈಗ ಅವರ ಖಾತೆಯಲ್ಲಿ ಅಭಿನಂದಿಸಿದ ಆ ಟ್ವೀಟ್ ಈಗ ಮಾಯವಾಗಿದೆ.

    ನಿಮಗೆ ನಮ್ಮ ತಂಡಕ್ಕೆ ಹೃದಯಪೂರ್ವಕ ಸ್ವಾಗತಗಳು, ಭಾರತೀಯ ಕ್ರಿಕೆಟ್ ತಂಡದ ಜೊತೆ ನೀವು ಇರುವುದು ದೊಡ್ಡ ವಿಚಾರ ಎಂದು ಕುಂಬ್ಳೆ ಅವರಿಗೆ ಟ್ಯಾಗ್ ಮಾಡಿ ಅವರನ್ನು ಸ್ವಾಗತಿಸಿದ್ದರು.

    ಕುಂಬ್ಳೆ ರಾಜೀನಾಮೆ ಚರ್ಚೆಯ ನಡುವೆ ಈ ಟ್ವೀಟ್ ಈಗ ಡಿಲೀಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಜನರು ಕೊಹ್ಲಿಗೆ ಆ ಟ್ವೀಟನ್ನು ಡಿಲೀಟ್ ಮಾಡುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ.

    ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕ್ರಿಕೆಟ್ ಕೋಚ್ ಅನಿಲ್ ಕುಂಬ್ಳೆ ಮಧ್ಯೆ ಬಿರುಕು ಇರುವ ವಿಚಾರ ಚಾಂಪಿಯನ್ಸ್ ಟ್ರೋಫಿ ವೇಳೆ ತುಂಬಾ ಓಡಾಡಿತ್ತು. ಆದ್ರೆ, ಇಬ್ಬರೂ ಟೂರ್ನ್  ಮೆಂಟ್ ಮುಗಿಯುವ ವರೆಗೂ ಅದೇಕೋ ಮೌನತಾಳಿದ್ದರು. ಆದರೆ ಜೂನ್ 20 ರಂದು ಕೋಚ್ ಸ್ಥಾನಕ್ಕೆ ಕುಂಬ್ಳೆ ರಾಜೀನಾಮೆ ನೀಡಿದ್ದರು.

    ಇದನ್ನೂ ಓದಿ: ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

    ಇದನ್ನೂ ಓದಿ: ಪಾಕ್ ಗೆದ್ದ ಬಳಿಕ ಅಭಿಮಾನಿ ಉದ್ಧಟತನ: ಗರಂ ಶಮಿಯನ್ನು ಕೂಲ್ ಮಾಡಿದ ಧೋನಿ – ವಿಡಿಯೋ

    ಇದನ್ನೂ ಓದಿ: ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

     

     

     

  • ಪಾಕ್ ಗೆದ್ದ ಬಳಿಕ ಅಭಿಮಾನಿ ಉದ್ಧಟತನ: ಗರಂ ಶಮಿಯನ್ನು ಕೂಲ್ ಮಾಡಿದ ಧೋನಿ – ವಿಡಿಯೋ

    ಪಾಕ್ ಗೆದ್ದ ಬಳಿಕ ಅಭಿಮಾನಿ ಉದ್ಧಟತನ: ಗರಂ ಶಮಿಯನ್ನು ಕೂಲ್ ಮಾಡಿದ ಧೋನಿ – ವಿಡಿಯೋ

     

    ಓವಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಪಾಕ್ ವಿರುದ್ಧ ಭಾರತ ಸೋತ ಬಳಿಕ ಅಭಿಮಾನಿಗಳ ನಡುವೆ ವಾಕ್ಸಮರವೂ ಜೋರಾಗಿದೆ. ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಪಾಕ್ ಹಾಗೂ ಟೀಂ ಇಂಡಿಯಾ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದ ವಿಡಿಯೋ ಈಗ ವೈರಲ್ ಆಗಿದೆ.

    ಫಾದರ್ಸ್ ಡೇಯಂದು ನಡೆದಿದ್ದ ಫೈನಲ್ ಪಂದ್ಯ ಸೋತು ಡ್ರೆಸ್ಸಿಂಗ್ ರೂಂಗೆ ಮರಳುತ್ತಿದ್ದ ಟೀಂ ಇಂಡಿಯಾ ಆಟಗಾರರನ್ನು ಪಾಕ್ ಅಭಿಮಾನಿಗಳು ಕೆಣಕಿದ್ದು, ಭಾರತೀಯ ಆಟಗಾರರು ಕೇಳಿಸಿಕೊಳ್ಳುವಂತೆ ಪಾಕ್ ಅಭಿಮಾನಿಯೊಬ್ಬ “ಬಾಪ್ ಕೌನ್ ಹೇ …ಕೌನ್ ಹೇ ಬಾಪ್” ಎಂದು ಟೀಂ ಇಂಡಿಯಾ ಆಟಗಾರರನ್ನು ಕೆಣಕಿದ್ದಾನೆ.

    ಈ ವೇಳೆ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಶಮಿ ಪಾಕ್ ಅಭಿಮಾನಿ ಬಳಿ ಮಾತಿನ ಸಮರಕ್ಕೆ ಮುಂದಾಗಿದ್ದರು. ಆದರೆ ಹಿಂದಿನಿಂದ ಬಂದ ಮಿ. ಕೂಲ್ ಖ್ಯಾತಿಯ ಮಾಜಿ ನಾಯಕ ಧೋನಿ ಶಮಿ ಅವರನ್ನು ತಮ್ಮ ಜೊತೆ ಕರೆದುಕೊಂಡು ಹೋದರು.

    ಇದನ್ನೂ ಓದಿ: ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

    ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

    https://youtu.be/870P_55zaK0

  • ಹಡಗಿನಲ್ಲಿ ತೇಲಾಡುತ್ತಾ ಲವ್ವಾಯ್ತು: ಭಾರತದ ಭರತ್ ಜರ್ಮನ್ ಬ್ಯೂಟಿಗೆ ಉಡುಪಿಯಲ್ಲಿ ತಾಳಿ ಕಟ್ಟಿದ್ರು

    ಹಡಗಿನಲ್ಲಿ ತೇಲಾಡುತ್ತಾ ಲವ್ವಾಯ್ತು: ಭಾರತದ ಭರತ್ ಜರ್ಮನ್ ಬ್ಯೂಟಿಗೆ ಉಡುಪಿಯಲ್ಲಿ ತಾಳಿ ಕಟ್ಟಿದ್ರು

    ಉಡುಪಿ: ಆಕೆ ಜರ್ಮನ್ ಮೂಲದ ಸುಂದರಾಂಗ ಚೆಲುವೆ. ಆತ ಪಕ್ಕಾ ಇಂಡಿಯನ್. ಬಣ್ಣದಲ್ಲಿ ವ್ಯತ್ಯಾಸವಿದ್ದರೂ ಇಬ್ಬರ ಮನಸ್ಸುಗಳು ಮಾತ್ರ ಹೊಂದಾಣಿಕೆಯಾಗಿದೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ. ಸಮುದ್ರದಲ್ಲಿ ಒಪ್ಪಿಗೆಯಾಗಿ, ಭೂಮಿ ಮೇಲೆ ನಡೆದಿದೆ.

    ರೆಬೆಕಾ ಮರಿಯಾ ಜರ್ಮನಿ ಮೂಲದ ಸ್ಪುರದ್ರೂಪಿ ಚೆಲುವೆ. ಭರತ್ ಕುಮಾರ್ ಇಂಡಿಯನ್ ಜಂಟಲ್ ಮ್ಯಾನ್. ದೇಶ, ಭಾಷೆ, ಸಂಸ್ಕೃತಿಗೆ ಸಂಬಂಧವೇ ಇಲ್ಲದ ಇವರಿಬ್ಬರು ಉಡುಪಿಯಲ್ಲಿ ಮದುವೆಯಾಗಿದ್ದಾರೆ. ಜರ್ಮನಿಯ ಐಡಾ ಕಂಪನಿ ಬೆಲ್ಲಾ ಹಡಗಿನಲ್ಲಿ ಭರತ್ ಕುಮಾರ್ ಫುಡ್ ಆಂಡ್ ಬೇವರೇಜ್ ವಿಭಾದಲ್ಲಿ ಉದ್ಯೋಗಿ. ರೆಬೆಕಾ ಆರ್ಟ್ ಗ್ಯಾಲರಿಯಲ್ಲಿ ಕೆಲಸ ಮಾಡುವಾಕೆ. ಒಂದೇ ಹಡಗಿನಲ್ಲಿ ತೇಲಾಡುತ್ತಾ, ಓಡಾಡುತ್ತಾ ಇವರಿಬ್ಬರಿಗೂ ಲವ್ವಾಗಿದೆ.

    ಇಬ್ಬರೂ ತಮ್ಮ ತಮ್ಮ ಮನೆಯವರಲ್ಲಿ ವಿಷಯ ತಿಳಿಸಿದ್ದಾರೆ. ನಿಮಗೊಪ್ಪಿಗೆಯಾದರೆ ನಮಗೇನೂ ಸಮಸ್ಯೆಯಿಲ್ಲ ಅಂತ ಹೇಳಿದ ಇಬ್ಬರ ಪೋಷಕರು ಅಕ್ಷತೆ ಕಾಳು ಹಾಕಲು ಒಪ್ಪಿದ್ದಾರೆ. ಇಬ್ಬರ ಮದುವೆ ಭಾರತೀಯ ಸಂಸ್ಕೃತಿಯಂತೆ ನಡೆಯಿತು.

    ನಮ್ಮದು ಮೂರು ವರ್ಷದಿಂದ ಲವ್. ಶಿಪ್‍ನಲ್ಲಿ ಮೀಟಾಗಿದ್ದೆವು. ಡೇಟಿಂಗ್ ಹೋಗಿದ್ದೆವು. ಇಬ್ಬರಿಗೂ ನಾವಿಬ್ಬರು ಒಳ್ಳೆ ಜೋಡಿಯಾಗ್ತೇವೆ ಅಂತ ಅನ್ನಿಸ್ತು. ಇಬ್ಬರಿಗೂ ಎಂತ ಸಮಸ್ಯೆಯೂ ಇರಲಿಲ್ಲ. ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದೆ. ಆರ್ಟ್ ಗ್ಯಾಲರಿಸ್ಟ್ ಆಗಿ ರೆಬೆಕಾ ಕೆಲಸ ಮಾಡುತ್ತಿದ್ದರು. ಪ್ಯಾಕೇಜ್ ಟೂರ್ ತರ ಸಮುದ್ರಯಾನ ಮಾಡುತ್ತೇವೆ. ಇನ್ನೊಂದು ಮೂರ್ನಾಲ್ಕು ವರ್ಷ ಕೆಲಸ ಮಾಡಿ ಭಾರತದಲ್ಲೇ ನೆಲೆಸುವ ಆಲೋಚನೆಯಿದೆ ಎಂದು ಭರತ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.

    ಎರಡು ವರ್ಷದ ಹಿಂದೆ ರೆಬೆಕಾ ಉಡುಪಿಯ ಪಡುಬಿದ್ರೆಯ ಭರತ್ ಮನೆಗೆ ಬಂದಿದ್ದರು. ಆಗ ವಿಷಯ ಪ್ರಸ್ತಾಪವಾಗಿದೆ. ವರ್ಷದ ಹಿಂದೆ ಇಬ್ಬರಿಗೂ ಎಂಗೇಜ್‍ಮೆಂಟ್ ಆಗಿದೆ. ಈಗ ಮದುವೆಯೂ ಮುಗಿದಿದೆ. ಎರಡೂ ಕುಟುಂಬದವರು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಜರ್ಮನಿಯಿಂದ ರೆಬೆಕಾ ಪೋಷಕರು, ಸಂಬಂಧಿಕರು, ಗೆಳೆಯರು ಬಂದಿದ್ದರು. ಭಾರತೀಯ ಸಂಸ್ಕೃತಿಯ ಮದುವೆಯಲ್ಲಿ ಪಾಲ್ಗೊಂಡ ಜರ್ಮನ್ ನೆಂಟರು ಭಾರತೀಯ ಸಂಪ್ರದಾಯದ ಧಿರಿಸು ತೊಟ್ಟಿದ್ದರು. ಇಲ್ಲಿನ ಊಟ, ಹವಾಮಾನದ ಬಗ್ಗೆ ಮೆಚ್ಚಿಕೊಂಡರು.

    ಈ ಸಂದರ್ಭ ವಧುವಿನ ಸಂಬಂಧಿ ಇಯಾಗ ಮಾತನಾಡಿ, 10 ದಿನದ ಹಿಂದೆ ಇಲ್ಲಿಗೆ ಬಂದಾಗ ಜೋರು ಬಿಸಿಲಿತ್ತು. ಈಗ ಜೋರು ಮಳೆ ಬರ್ತಾಯಿದೆ. ಇಲ್ಲಿನ ವೆದರ್ ಗೆ ಅಡ್ಜಸ್ಟ್ ಆಗೋದಕ್ಕೆ ಕಷ್ಟ ಆಗ್ತಾಯಿದೆ. ಊಟ ಕೂಡಾ ಸಿಕ್ಕಾಪಟ್ಟೆ ಸ್ಪೈಸಿ. ಆದ್ರೂ ಇಷ್ಟ ಆಗ್ತಾಯಿದೆ ಎಂದು ಹೇಳಿದರು. ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ಬಹಳ ಖುಷಿಯಾಗಿದೆ. ಇಲ್ಲಿನ ಡೆಕೋರೇಷನ್, ಉಡುಗೆ ತೊಡುಗೆಯೆಲ್ಲಾ ಜರ್ಮನಿ ಮದುವೆಗಿಂತ ಡಿಫರೆಂಟ್ ಇದೆ ಅಂತ ಹೇಳಿದರು.

    ಭಾರತದ ಸಂಸ್ಕೃತಿಯನ್ನು ನೋಡಿ ಇಷ್ಟಪಟ್ಟು ಭಾರತದ ಹುಡುಗನನ್ನು ರೆಬೆಕಾ ಆಯ್ಕೆ ಮಾಡಿದರಂತೆ. ಭರತ್ ಕುಮಾರ್ ರೆಬೆಕಾಗೆ ತುಳು ಭಾಷೆ ಕಲಿಸುತ್ತಿದ್ದಾರೆ. ಮೂರ್ನಾಲ್ಕು ವರ್ಷ ಜರ್ಮನಿಯಲ್ಲೇ ಕೆಲಸ ಮಾಡಿ ಮತ್ತೆ ಭಾರತದಲ್ಲಿ ಸೆಟೆಲ್ ಆಗೋ ಆಲೋಚನೆ ಇಟ್ಟುಕೊಂಡಿದ್ದಾರೆ.

  • ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

    ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

    ಓವಲ್: ಜಡೇಜಾ ವಿರುದ್ಧ ಅಂಗಳದಲ್ಲಿ ಸಿಟ್ಟಾಗಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಟ್ವಿಟ್ಟರ್‍ನಲ್ಲೂ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ನಮ್ಮವರನ್ನು ನಮ್ಮವರೇ ಲೂಟಿ ಮಾಡಿದ್ರು, ಬೇರೆ ಅವರಿಗೆ ಎಲ್ಲಿದೆ ಆ ತಾಕತ್ತು ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾದ ಆಟಗಾರರು ಪೆವಿಲಿಯನ್ ಪರೇಡ್ ಮಾಡುತ್ತಿದ್ದರೆ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಕೆಚ್ಚೆದೆಯ ಪ್ರದರ್ಶನ ನೀಡಿದ್ದರು. ಆದರೆ ಜಡೇಜಾ ಅವರಿಂದಾಗಿ ರನ್ ಔಟ್ ಆಗಿದ್ದಕ್ಕೆ ಸಿಟ್ಟಾಗಿದ್ದ ಪಾಂಡ್ಯ ಮ್ಯಾಚ್ ಮುಗಿದ ಬಳಿಕ ಈ ಮೇಲಿನಂತೆ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು.

    ರನ್‍ಔಟ್ ಆಗಿದ್ದು ಹೇಗೆ?
    ಟೀಂ ಇಂಡಿಯಾದ ಮೊತ್ತ 152 ಆಗಿದ್ದಾಗ ಹಸನ್ ಅಲಿ ಎಸೆದ 26ನೇ ಓವರ್‍ನ ಮೂರನೇ ಎಸೆತವನ್ನು ಜಡೇಜಾ ಕವರ್‍ಗೆ ತಳ್ಳಿ ರನ್ ಕದಿಯಲು ಮುಂದಾದರು. ಜಡೇಜಾ ಓಡಲು ಆರಂಭಿಸುತ್ತಿದ್ದಂತೆ ನಾನ್ ಸ್ಟ್ರೈಕ್ ನಲ್ಲಿದ್ದ ಪಾಂಡ್ಯ ಸ್ಟ್ರೈಕ್‍ನತ್ತ ಓಡಲು ಆರಂಭಿಸಿದರು. ಅಷ್ಟರಲ್ಲಿ ಬಾಲ್ ಹಫೀಸ್ ಕೈ ಸೇರಿತ್ತು. ಹಫೀಸ್ ಕೈಗೆ ಬಾಲ್ ಸಿಕ್ಕಿದ್ದೆ ತಡ ನಾನ್ ಸ್ಟ್ರೈಕ್‍ರನತ್ತ ಓಡುತ್ತಿದ್ದ ಜಡೇಜಾ ತಮ್ಮ ನಿರ್ಧಾರ ಬದಲಾಯಿಸಿ ಸ್ಟ್ರೈಕ್‍ನತ್ತ ತಿರುಗಿದರು. ಇಬ್ಬರು ಸ್ಟ್ರೈಕ್‍ನತ್ತ ಓಡುವುದನ್ನು ಗಮನಿಸಿದ ಹಫೀಸ್ ಬಾಲನ್ನು ಬೌಲರ್ ಹಸನ್ ಅಲಿಗೆ ಎಸೆದರು. ಈ ವೇಳೆ ಜಡೇಜಾ ಸ್ಟ್ರೈಕ್ ತಲುಪಿ ಆಗಿತ್ತು. ಹೀಗಾಗಿ ಪಾಂಡ್ಯ ರನೌಟ್‍ಗೆ ಬಲಿಯಾದರು.

    ರನ್‍ಔಟ್ ಆದ ಕೂಡಲೇ ಅಲ್ಲೇ ಜಡೇಜಾ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ ಪಾಂಡ್ಯ ಡ್ರೆಸಿಂಗ್ ರೂಂಗೆ ಹೋಗುವವರೆಗೂ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದರು.

    ರಾತ್ರಿ ಟ್ವೀಟ್: ಪಂದ್ಯ ಮುಗಿದ ಬಳಿಕ ಪಾಂಡ್ಯ ತಮ್ಮ ಆಕ್ರೋಶವನ್ನು ಟ್ವಿಟ್ಟರ್‍ನಲ್ಲಿ ತೋರಿಸಿದ್ದಾರೆ. ರಾತ್ರಿ 10.15 ಟ್ವೀಟ್ ಮಾಡಿದ ತಕ್ಷಣ ಈ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ಟ್ವೀಟ್ ಡಿಲೀಟ್ ಮಾಡಿದ್ದರೂ ಜನ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

    ಧೋನಿ ಔಟಾಗುವ ವೇಳೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತ್ತು. ನಂತರ ಕ್ರೀಸಿಗೆ ಆಗಮಿಸಿದ್ದ ಪಾಂಡ್ಯ ಪಾಕ್ ಬೌಲರ್‍ಗಳ ಎಸೆತವನ್ನು ಮನಬಂದಂತೆ ಚಚ್ಚಲು ಆರಂಭಿಸಿದ್ದರು. ಪರಿಣಾಮ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು 43 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಈ ಭರ್ಜರಿ ಆಟದಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದರು.

    ಇದನ್ನೂ ಓದಿ: 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

     

     

     

    https://twitter.com/takentweets/status/876515488414785537