Tag: ಭಾರತ್ ಪೆಟ್ರೋಲಿಯಂ

  • ರಾಜ್ಯದಲ್ಲೂ ಶುರುವಾಯ್ತು ಡೀಸೆಲ್‌ ಅಭಾವ – ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್

    ರಾಜ್ಯದಲ್ಲೂ ಶುರುವಾಯ್ತು ಡೀಸೆಲ್‌ ಅಭಾವ – ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್

    ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ನೀರಿಗೆ ಅಭಾವ ಆಗೋದು ಸಹಜ, ಆದರೀಗ ರಾಜ್ಯದಲ್ಲಿ ಡೀಸೆಲ್ ಅಭಾವ ಶುರುವಾಗಿದೆ.

    ರಾಜ್ಯದ ಬಹುತೇಕ ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಡೀಸೆಲ್ ಕೊರತೆ ಎದುರಾಗಿದೆ. ಕಳೆದ 1 ವಾರದಿಂದ ಸಮಸ್ಯೆ ಉಂಟಾಗುತ್ತಿದ್ದು, ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬಿಪಿಸಿಎಲ್ ಬಂಕ್‌ನಲ್ಲಿ ಡೀಸೆಲ್ ನೋ ಸ್ಟಾಕ್ ಬೋರ್ಡ್ ಕಾಣುತ್ತಿವೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

    PETROL

    ಬಹುತೇಕ ಬಿಪಿಸಿಎಲ್ ಬಂಕ್‌ಗಳಲ್ಲಿ ಇದೇ ಸಮಸ್ಯೆ ಎದುರಾಗಿದೆ. ಇದ್ರಿಂದ ಅಕ್ಕ ಪಕ್ಕದ ಇಂಡಿಯನ್ ಆಯಿಲ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ಖಾಸಗಿ ಬಂಕ್‌ಗಳತ್ತ ಗ್ರಾಹಕರು ಮುಖ ಮಾಡಿದ್ದಾರೆ. ಇದನ್ನೂ ಓದಿ: ದೋಣಿ ಸಮಸ್ಯೆ – ಪ್ರಾಣ ಉಳಿಸಿಕೊಳ್ಳಲು ನೀರಿಗೆ ಹಾರಿದ ನಾಲ್ವರಲ್ಲಿ ಓರ್ವ ಯುವಕ ಸಾವು

    ಈ ಕುರಿತು ಮಾತನಾಡಿರುವ ಬಂಕ್ ಮಾಲೀಕ ಗಿರೀಶ್, ಬಿಪಿಸಿಎಲ್ ಸಂಸ್ಥೆ ವತಿಯಿಂದ ಡೀಸೆಲ್ ಸರಬರಾಜು ಕಡಿತ ಮಾಡುತ್ತಿದ್ದಾರೆ. ಕೇಳಿದಷ್ಟು ಡೀಸೆಲ್ ಸರಬರಾಜು ಮಾಡುತ್ತಿಲ್ಲ. ಡೀಸೆಲ್ ನಿಂದ 23 ರೂಪಾಯಿ ನಷ್ಠ ಸಂಭವಿಸುತ್ತಿದೆ. ಅಂತ ಡೀಸೆಲ್ ಪೂರೈಕೆ ಕಡಿಮೆ ಮಾಡಿದ್ದಾರೆ. ಸಂಸ್ಥೆಗೆ ಸಾವಿರಾರು ಕೋಟಿ ನಷ್ಟದ ಕಾರಣವೊಡ್ಡಿ ದಿನೇ ದಿನೇ ಡೀಸೆಲ್ ಪೂರೈಕೆ ಕಡಿತ ಮಾಡುತ್ತಿದ್ದಾರೆ. ಇದ್ರಿಂದ ಡೀಸೆಲ್‌ಗೆ ಅಭಾವ ಸೃಷ್ಟಿಯಾಗುತ್ತಿದೆ ಎಂದು ಹೇಳಿದ್ದಾರೆ.

    ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಕೆಲ ಬಂಕ್‌ಗಳಲ್ಲಿ ಡೀಸೆಲ್ ಸಿಗದೇ ಗ್ರಾಹಕರು ಪರದಾಡುವಂತಾಗಿದೆ.

  • ಪಿಎಂಯುವೈ ಗ್ರಾಹಕರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

    ಪಿಎಂಯುವೈ ಗ್ರಾಹಕರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

    ಬೆಂಗಳೂರು: ಪಿಎಂಯುವೈ(ಪ್ರಧಾನಮಂತ್ರಿ ಉಜ್ವಲ್ ಯೋಜನೆ) ಗ್ಯಾಸ್ ಸಿಲಿಂಡರ್ ಬಳಕೆ ಮಾಡುವವರು ಆತಂಕ ಪಡಬೇಕಿಲ್ಲ. ಯಾಕೆಂದರೆ ಈ ತಿಂಗಳಿನಿಂದ ಮೇ, ಜೂನ್ ತನಕ ಅಂದರೆ ಮೂರು ಕಂತುಗಳಲ್ಲಿ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಬಳಕೆದಾರರಿಗೆ ಹಂಚಿಕೆ ಮಾಡಲಾಗುತ್ತಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನ ಜನರಲ್ ಮ್ಯಾನೆಜರ್ ನೂರಾನಾ ಹೇಳಿಕೆ ನೀಡಿದ್ದಾರೆ. ಉಜ್ವಲ್ ಯೋಜನೆಯ ಗ್ರಾಹಕರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಂಚಿಕೆ ಮಾಡಲಾಗುತ್ತಿದೆ. 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಯೋಜನೆಯ ಗ್ರಾಹಕರಿಗೆ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ವಿತರಿಸಲಿದ್ದಾರೆ ಎಂದು ನೂರಾನಾ ಅವರು ಮಾಹಿತಿ ನೀಡಿದ್ದಾರೆ.

    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‍ನಿಂದ ಸಿಲಿಂಡರ್‌ಗಳನ್ನು ನೀಡಲಿದ್ದಾರೆ. ಆನ್‍ಲೈನ್ ಮೂಲಕ ಡೋರ್ ಟು ಡೋರ್ ಸೇವೆಯನ್ನು ಕಲ್ಪಿಸಿಕೊಂಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ 31 ಲಕ್ಷ ಮಂದಿ ಉಜ್ವಲ್ ಯೋಜನೆಯಲ್ಲಿ ಬರಲಿದ್ದು, ಈ ಪೈಕಿ 18 ಲಕ್ಷ ಗ್ರಾಹಕರಿಗೆ ಈಗಾಗಲೇ ಸಿಲಿಂಡರ್ ವಿತರಣೆಯನ್ನು ಮನೆ ಬಾಗಿಲಿಗೆ ಡಿಸ್ಟ್ರಿಬ್ಯೂಟರ್ಸ್ ಮಾಡುತ್ತಿದ್ದಾರೆ.

  • ಡಿಸೇಲ್ ಟ್ಯಾಂಕರ್‌ನಲ್ಲಿ  ಮಾರ್ಪಾಡು- ಕೆಎಸ್‌ಆರ್‌ಟಿಸಿಗೆ ವಂಚನೆ

    ಡಿಸೇಲ್ ಟ್ಯಾಂಕರ್‌ನಲ್ಲಿ ಮಾರ್ಪಾಡು- ಕೆಎಸ್‌ಆರ್‌ಟಿಸಿಗೆ ವಂಚನೆ

    ಶಿವಮೊಗ್ಗ: ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿಪೋಗೆ ಡೀಸೆಲ್ ಪೂರೈಕೆ ಮಾಡುವ ಟ್ಯಾಂಕರ್‌ನಲ್ಲಿ ಮಾರ್ಪಾಡು ಮಾಡಿ ಅತ್ಯಂತ ಚಾಣಾಕ್ಷತನದಿಂದ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ಈ ವಂಚನೆಯಲ್ಲಿ ಮುಖ್ಯವಾಗಿ ಮಂಗಳೂರು ಮೂಲದ ಟ್ಯಾಂಕರ್ ಮಾಲೀಕ ಹಾಗೂ ಚಾಲಕ, ಭಾರತ್ ಪೆಟ್ರೋಲಿಯಂ ಹಾಗೂ ಶಿವಮೊಗ್ಗ ಕೆಎಸ್ ಆರ್ ಟಿಸಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

    ಶಿವಮೊಗ್ಗ ಡಿಪೋಗೆ ಪೂರೈಕೆಯಾಗುತ್ತಿದ್ದ ಡೀಸೆಲ್ ಟ್ಯಾಂಕರ್ ನಲ್ಲಿ ತಲಾ ನಾಲ್ಕು ಸಾವಿರ ಲೀಟರ್ ಸಾಮಥ್ರ್ಯದ ಮೂರು ಕಂಪಾರ್ಟ್ ಮೆಂಟ್ ಗಳಿವೆ. ಇವುಗಳಲ್ಲಿ ತುಂಬಿರುವ ಡೀಸೆಲನ್ನು ಡಿಪ್ ಕೋಲಿನಿಂದ ಗೇಜ್ ಮಾಡಿ, ಅನ್ಲೋಡ್ ಮಾಡಲಾಗುತ್ತದೆ.

    ಈ ಲಾರಿಯಲ್ಲಿ ಡಿಪ್ ಕೋಲು ಹಾಕುವ ಜಾಗಕ್ಕೆ ಪ್ರತ್ಯೇಕವಾಗಿ ಪೈಪ್ ಕೂರಿಸಿದ್ದು, ಟ್ಯಾಂಕರ್ ನಲ್ಲಿ ಕಡಿಮೆ ಇದ್ದರೂ ಗೇಜ್ ನಲ್ಲಿ ಹೆಚ್ಚು ಅಳತೆ ತೋರಿಸಿದೆ. ಟ್ಯಾಂಕರ್ ನ ಕಂಪಾರ್ಟ್ ಮೆಂಟ್ ಒಳಗೆ ಅಕ್ರಮವಾಗಿ ಮಾರ್ಪಾಡು ಮಾಡಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಲಾರಿ ಚಾಲಕ ಡಿಪೋದಲ್ಲಿ ಲಾರಿ ಬಿಟ್ಟು ಪರಾರಿ ಆಗಿದ್ದಾನೆ.

    ಬಂಕ್ ಗೆ ಭಾರತ್ ಪೆಟ್ರೋಲಿಯಂ ಕಂಪನಿ ವಾರಕ್ಕೆ ಎರಡು ಮೂರು ಟ್ಯಾಂಕರ್ ಡೀಸೆಲ್ ಪೂರೈಕೆ ಮಾಡುತ್ತಿದೆ. ಮಂಗಳೂರಿನ ಬೈಕಂಪಾಡಿಯಲ್ಲಿ ಲೋಡ್ ಆದ ನಂತರ ಟ್ಯಾಂಕರ್ ಶಿವಮೊಗ್ಗದಲ್ಲಿ ಅನ್ ಲೋಡ್ ಆಗುತ್ತಿದೆ. ಕೆಎಸ್ ಆರ್ ಟಿಸಿ ನೀಡಿದ ದೂರಿನ ಅನುಸಾರ ಲೀಗಲ್ ಮೆಟ್ರಾಲಜಿ ವಿಭಾಗದವರು ಲಾರಿ ಪರಿಶೀಲನೆ ನಡೆಸಿ, ವಂಚನೆ ನಡೆದಿರುವುದು ಖಚಿತ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಮುಂಚೆ ಈ ಲಾರಿ ಎಷ್ಟು ಬಾರಿ ಶಿವಮೊಗ್ಗ ಡಿಪೋಗೆ ಬಂದಿದೆ. ಇದೇ ಮಾಲೀಕರ ಬಳಿ ಇರುವ ಇನ್ನಷ್ಟು ಲಾರಿಗಳಲ್ಲೂ ಇದೇ ರೀತಿಯ ವಂಚನೆ ಆಗಿದೆಯೇ? ಇದೂವರೆಗೂ ಈ ರೀತಿ ವಂಚನೆ ನಡೆದಿದ್ದರೆ ಶಿವಮೊಗ್ಗ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಏಕೆ ತಿಳಿಯಲಿಲ್ಲ? ಈ ರೀತಿ ಕಡಿಮೆ ಡೀಸೆಲ್ ಒಟ್ಟು ವಂಚನೆ ಪ್ರಮಾಣ ಎಷ್ಟು ಎಂಬುದನ್ನು ತನಿಖೆಯಿಂದ ಪತ್ತೆ ಹಚ್ಚಬೇಕಾಗಿದೆ.

  • ಪ್ರತಿದಿನ ಬದಲಾಗುವ ಪೆಟ್ರೋಲ್ ಬೆಲೆಯನ್ನು ತಿಳಿದುಕೊಳ್ಳುವುದು ಹೇಗೆ?

    ಪ್ರತಿದಿನ ಬದಲಾಗುವ ಪೆಟ್ರೋಲ್ ಬೆಲೆಯನ್ನು ತಿಳಿದುಕೊಳ್ಳುವುದು ಹೇಗೆ?

    ನವದೆಹಲಿ: ಜೂನ್ 16ರಿಂದ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ ಆಗಲಿದೆ. ಹೀಗಾಗಿ ಈ ಬೆಲೆಯನ್ನು ಗ್ರಾಹಕರು ತಿಳಿದುಕೊಳ್ಳುವುದು ಹೇಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    ಇಂಡಿಯನ್ ಆಯಿಲ್ :
    SMS: RSP < SPACE > DEALER CODE ಎಂದು ಟೈಪಿಸಿ, 9224992249 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್  ಎಂದಿರುವ ಕಡೆ ಡೀಲರ್ ಕೋಡ್ ಸಂಖ್ಯೆ ಹಾಕಬೇಕು.
    ವೆಬ್‍ಸೈಟ್ : www.iocl.com ವೆಬ್‍ಸೈಟ್‍ಗೆ ಭೇಟಿ ನೀಡಿ Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
    ಆ್ಯಪ್ : Fuel@loc ಆ್ಯಪ್ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದಾಗಿದೆ.

    ಭಾರತ್ ಪೆಟ್ರೋಲಿಯಂ
    SMS: RSP < SPACE > DEALER CODE ಎಂದು ಟೈಪಿಸಿ 9223112222 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್ ಎಂದಿರುವ ಕಡೆ ಡೀಲರ್ ಕೋಡ್
    ಸಂಖ್ಯೆ ಹಾಕಬೇಕು.
    ವೆಬ್‍ಸೈಟ್ : www.hindustanpetroleum.com ವೆಬ್‍ಸೈಟ್‍ಗೆ ಭೇಟಿ ನೀಡಿ, Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
    ಆ್ಯಪ್ : SmartDrive Mobli ಆ್ಯಪ್ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದು.

    ಹಿಂದುಸ್ತಾನ್ ಪೆಟ್ರೋಲಿಯಂ :
    SMS: RSP < SPACE > DEALER CODE ಎಂದು ಟೈಪಿಸಿ 9222201122 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್
    ಎಂದಿರುವ ಕಡೆ ಡೀಲರ್ ಕೋಡ್ ಸಂಖ್ಯೆ ಹಾಕಬೇಕು.
    ವೆಬ್‍ಸೈಟ್ : www.hindustanpetroleum.com ವೆಬ್‍ಸೈಟ್‍ಗೆ ಭೇಟಿ ನೀಡಿ, Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
    ಆ್ಯಪ್ : My HPCL ಆ್ಯಪ್‍ನಲ್ಲಿ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದು

    ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಾದ ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್‍ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರತಿ ದಿನ ದರ ಪರಿಷ್ಕರಣೆ ಆಗುತಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಜೂನ್ 16ರಿಂದ ದೇಶದ ಎಲ್ಲ ಕಡೆಗಳಲ್ಲಿ ಜಾರಿಗೊಳಿಸಲು ತೈಲ ಕಂಪೆನಿಗಳು ಮುಂದಾಗಿವೆ.

    ಪ್ರಮುಖ 5 ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಬಳಿಕ, ದೇಶದ ಉಳಿದ ಭಾಗದಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಏಪ್ರಿಲ್ ನಲ್ಲಿ ತಿಳಿಸಿದ್ದರು.

    ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು, ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಏಪ್ರಿಲ್ 5ರಂದು ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದರು.

    ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ದೇಶದಲ್ಲಿ ಸುಮಾರು 58 ಸಾವಿರ ಬಂಕ್‍ಗಳನ್ನು ಹೊಂದಿರುವ ಈ ತೈಲ ಕಂಪೆನಿಗಳು ಕಾರ್ಯರೂಪಕ್ಕೆ ತರಲು ಮುಂದಾಗಿದೆ.