Tag: ಭವ್ಯಾ ಗೌಡ

  • Bigg Boss Kannada 10: ದೊಡ್ಮನೆ ಆಟಕ್ಕೆ ‘ಗೀತಾ’ ಭವ್ಯಾ ಗೌಡ ಎಂಟ್ರಿ?

    Bigg Boss Kannada 10: ದೊಡ್ಮನೆ ಆಟಕ್ಕೆ ‘ಗೀತಾ’ ಭವ್ಯಾ ಗೌಡ ಎಂಟ್ರಿ?

    ‘ಗೀತಾ’ (Geetha) ಸೀರಿಯಲ್ ಮೂಲಕ ಮನೆ ಮಾತಾದ ನಟಿ ಭವ್ಯಾ ಗೌಡ (Bhavya Gowda) ಅವರು ಇದೀಗ ಬಿಗ್ ಬಾಸ್ ಮನೆಗೆ (Bigg Boss House) ಬರಲಿದ್ದಾರೆ. ಗೀತಾ ಆಗಿ ಸಿನಿಪ್ರಿಯರ ಮನ ಗೆದ್ದಿರುವ ನಟಿ, ದೊಡ್ಮನೆ ಆಟದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಪ್ಯಾರಿಸ್‌ನಲ್ಲಿ ಸ್ನೇಹಿತರ ಮದುವೆಯಲ್ಲಿ ಮಿಂಚಿದ ರಾಮ್ ಚರಣ್ ದಂಪತಿ

    ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದ ಭವ್ಯಾ ‘ಗೀತಾ’ ಧಾರಾವಾಹಿಯಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಮೊದಲ ಸೀರಿಯಲ್‌ನಲ್ಲೇ ಗಮನ ಸೆಳೆದ ಯುವ ನಟಿಗೆ ಸಿನಿಮಾ ಆಫರ್ಸ್‌ಗಳು ಸಿಗುತ್ತಿವೆ. ಹೀಗಿರುವಾಗ ಈ ಬಾರಿಯ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ನಟಿ ಭವ್ಯಾ ಕೂಡ ಬರುತ್ತಿದ್ದಾರೆ ಎನ್ನಲಾಗುತ್ತಿದೆ.

    ಕಳೆದ ಬಾರಿ ಮಿನಿ ಬಿಗ್ ಬಾಸ್ ಸೀಸನ್‌ನಲ್ಲಿ ನಟಿ ಭಾಗವಹಿಸಿದ್ದರು. ಈ ಬಾರಿ ಕೂಡ ದೊಡ್ಮನೆ ಆಟದಲ್ಲಿ ಅವರು ಇರುತ್ತಾರೆ ಎಂದು ಗಾಸಿಪ್ ಶುರುವಾಗಿದೆ. ಹಾಗಾದ್ರೆ ಗೀತಾ(Geetha Serial) ಸೀರಿಯಲ್‌ಗೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:ಕೀರ್ತಿ ಪಾಂಡಿಯನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ಅಶೋಕ್‌ ಸೆಲ್ವನ್‌

    ‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಹೊಸ ಸೀರಿಯಲ್ ಲಾಂಚ್ ಆಗಿದೆ. ಬೃಂದಾವನ ಎಂಬ ಸೀರಿಯಲ್ ಬರುತ್ತಿದೆ. ಟಿವಿಯಲ್ಲಿ ಈ ಶೋ ಇನ್ನೂ ಪ್ರಸಾರವಾಗಬೇಕಿದೆ. ಹಾಗಾಗಿ ಬಿಗ್ ಬಾಸ್ ಮನೆಗೆ (Bigg Boss Kannada) ನಟಿ ಬರುತ್ತಾರೆ ಎನ್ನಲಾಗುತ್ತಿದೆ.

    ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Amulya) ಸಂಬಂಧಿ ಆಗಿರುವ ಭವ್ಯಾಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಗೀತಾ ಸೀರಿಯಲ್ ಸಹನಟ ಧನುಷ್ ಗೌಡ ಜೊತೆಗಿನ ಸ್ನೇಹದ ವಿಚಾರವಾಗಿ ನಟಿ ಹೈಲೆಟ್ ಆಗಿದ್ದರು. ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಬಳಿಕ ಇದೆಲ್ಲಾ ಸುಳ್ಳು ಎಂದು ಈ ಜೋಡಿ ಡೇಟಿಂಗ್ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಯಲ್ ಲೈಫ್‌ನಲ್ಲಿಯೂ ಗೀತಾ, ವಿಜಯ್ ಲವ್ ಮಾಡ್ತಿದ್ದಾರಾ- ಸ್ಪಷ್ಟನೆ ನೀಡಿದ ಜೋಡಿ

    ರಿಯಲ್ ಲೈಫ್‌ನಲ್ಲಿಯೂ ಗೀತಾ, ವಿಜಯ್ ಲವ್ ಮಾಡ್ತಿದ್ದಾರಾ- ಸ್ಪಷ್ಟನೆ ನೀಡಿದ ಜೋಡಿ

    ನ್ನಡ ಕಿರುತೆರೆಯಲ್ಲಿ ‘ಗೀತಾ’ ಸೀರಿಯಲ್ ಮೂಲಕ ಮೋಡಿ ಮಾಡಿರುವ ಜೋಡಿ ಭವ್ಯಾ- ಧನುಷ್ ಗೌಡ (Dhanush Gowda) ಇದೀಗ ತಮ್ಮ ಬಗೆಗಿನ ಗಾಸಿಪ್ ಬಗ್ಗೆ ಮಾತನಾಡಿದ್ದಾರೆ. ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆಯಾಗಿದ್ದಾರೆ (Wedding) ಎಂಬ ಸುದ್ದಿಗೆ ಈ ಜೋಡಿ ಸ್ಪಷ್ಟನೆ ನೀಡಿದೆ. ಗೀತಾ ಮತ್ತು ವಿಜಯ್ ರಿಯಲ್ ಲೈಫ್‌ನಲ್ಲೂ ಲವ್ (Love) ಮಾಡ್ತಿದ್ದಾರಾ? ಎಂಬ ಅಭಿಮಾನಿಗಳ ಪ್ರಶ್ನೆಗೆ ಈಗ ಕ್ಲ್ಯಾರಿಟಿ ನೀಡಿದ್ದಾರೆ.

    ತಮ್ಮ ಬಗೆಗಿನ ಕೇಳಿರುವ ಸುದ್ದಿ ಬಗ್ಗೆ ‘ಗೀತಾ’ (Geetha Serial) ಸೀರಿಯಲ್ ಜೋಡಿ ಪ್ರತಿಕ್ರಿಯೆ ನೀಡಿದೆ. ನಾವಿಬ್ಬರೂ ಲವ್ ಮಾಡ್ತಿದ್ದೀವಿ. ಮದುವೆಯಾಗಿ ಈಗಾಗಲೇ ಮಕ್ಕಳಾಗಿದೆ. ಮಕ್ಕಳ ನಾಮಕರಣ ಮಾಡಿದ್ದೀವಿ. ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆ ಆಗಿದ್ದೀವಿ ಅಂತಾ ಕೇಳಿದ್ದೀವಿ. ನಾವು ಕೇಳಿರುವ ಕೆಟ್ಟ ಗಾಸಿಪ್‌ನಲ್ಲಿ ಇದೊಂದು ಎಂದಿದ್ದಾರೆ.

    ನಿಮ್ಮ ಮಗಳಿಗೆ ಮದುವೆ ಆಗಿದೆಯಂತೆ ಎಂದು ಕೆಲವರು ನಮ್ಮ ತಾಯಿಗೆ ಕರೆ ಮಾಡಿ ಕೇಳಿದ್ದರು. ನಮ್ಮಿಬ್ಬರ ಮನೆಯಲ್ಲೂ ನಮ್ಮ ಸ್ನೇಹಕ್ಕೆ ಬೆಂಬಲ ಇದೆ. ನಿಮಗೆ ನಿಮ್ಮ ಫ್ರೆಂಡ್‌ಶಿಪ್ ಬಗ್ಗೆ ನಂಬಿಕೆ ಇದ್ಯಾ? ಸಾಕು ಎಲ್ಲರನ್ನೂ ಮೆಚ್ಚಿಸುವ ಅವಶ್ಯಕತೆಯಿಲ್ಲ. ನಿಮಗೆ ನೀವು ಏನು ಅಂತಾ ಗೊತ್ತಿದ್ರೆ ಸಾಕು ಎಂದು ನಮ್ಮಿಬ್ಬರ ಕುಟುಂಬ ನಮಗೆ ಸಾಥ್ ನೀಡಿದ್ರು ಎಂದು ‘ಗೀತಾ’ ನಟಿ ಭವ್ಯಾ (Bhavya Gowda) ಮಾತನಾಡಿದರು. ಇದನ್ನೂ ಓದಿ:ಕಪ್ಪು ಸೀರೆಯುಟ್ಟು ಮಿಂಚಿದ ನಟಿ ಸಮಂತಾ

    ಇಲ್ಲದ ಈ ಕೆಟ್ಟ ಸುದ್ದಿ ವೈರಲ್ ಆದಾಗ, ಗೀತಾ ಸೀರಿಯಲ್ ಶುರುವಿನಲ್ಲಿ ವಿಜಯ್ ಜೊತೆ 8 ತಿಂಗಳು ಮಾತನಾಡೋದನ್ನೇ ಬಿಟ್ಟಿದ್ದೆ ಎಂದು ಭವ್ಯಾ ಹೇಳಿದರು. ನಮ್ಮ ಇಬ್ಬರಿಗೂ ವೈಯಕ್ತಿಕ ಬದುಕಿದೆ. ಈ ತರಹದ ಸುದ್ದಿ ನಮ್ಮ ಜೀವನಕ್ಕೂ ಹಾನಿ ಮಾಡುತ್ತೆ. ಕಡೆಗೆ ನಾವಿಬ್ಬರೂ ಕುಳಿತು ಮಾತನಾಡಿದ್ವಿ. ನಮ್ಮ ಇಬ್ಬರೂ ಲವ್ ಫಿಲಿಂಗ್ಸ್ ಇಲ್ಲ ಅಂದ ಮೇಲೆ ಬೇರೆ ಅವರಿಗೆ ಕ್ಲ್ಯಾರಿಟಿ ಕೊಡುವ ಅಗತ್ಯವಿಲ್ಲ ಎಂದು ಡಿಸೈಡ್ ಮಾಡಿ ಫ್ರೆಂಡ್‌ಶಿಪ್ ಮುಂದುವರೆಸಿದ್ವಿ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ನಟಿ ಭವ್ಯಾ- ಧನುಷ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಲವ್ ಮತ್ತು ಮದುವೆ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ಕ ಅಮೂಲ್ಯ ಬಗ್ಗೆ ‘ಗೀತಾ’ ಸೀರಿಯಲ್‌ ನಟಿ ಹೇಳಿದ್ದೇನು?

    ಅಕ್ಕ ಅಮೂಲ್ಯ ಬಗ್ಗೆ ‘ಗೀತಾ’ ಸೀರಿಯಲ್‌ ನಟಿ ಹೇಳಿದ್ದೇನು?

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮ್ಮನ ತ್ಯಾಗ ನೆನೆದು ಗಳಗಳನೆ ಅತ್ತ `ಗೀತಾ’ ನಟಿ ಭವ್ಯಾ ಗೌಡ

    ಅಮ್ಮನ ತ್ಯಾಗ ನೆನೆದು ಗಳಗಳನೆ ಅತ್ತ `ಗೀತಾ’ ನಟಿ ಭವ್ಯಾ ಗೌಡ

    ಕಿರುತೆರೆಯ ಪ್ರತಿಭಾನ್ವಿತ ನಟಿ ಭವ್ಯಾ ಗೌಡ (Actress Bhavya Gowda) ಅವರು `ಗೀತಾ’ (Geetha Serial) ಸೀರಿಯಲ್ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಬಣ್ಣದ ಬದುಕಿಗೆ ಬರುವ ಮುನ್ನ ಮತ್ತು ಬಂದ ಮೇಲೆ ಎದುರಿಸಿದ ಸಂಕಷ್ಟಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಅಮ್ಮನ ತ್ಯಾಗ ನೆನೆದು ನನ್ನಮ್ಮ ಸೂಪರ್ ಸ್ಟಾರ್ -2 ವೇದಿಕೆಯಲ್ಲಿ ಭವ್ಯಾ ಕಣ್ಣೀರಿಟ್ಟಿದ್ದಾರೆ.

    ಭವ್ಯಾ ಗೌಡ ಅವರು ಇತ್ತೀಚಿಗೆ ನನ್ನಮ್ಮ ಸೂಪರ್ ಸ್ಟಾರ್-2 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಈ ವೇಳೆ ಕೈ ಹಿಡಿಯಲಿರುವ ಹುಡುಗ ಹೇಗಿರಬೇಕು ಎಂದು ವೇದಿಕೆ ಮೇಲೆ ನಿರೂಪಕ ನಿರಂಜನ್ ದೇಶಪಾಂಡೆ ಕೇಳಿದ್ದಾರೆ. ಈಗಿನ ಕಾಲದ ಮಕ್ಕಳು ನಾವು ಇಷ್ಟ ಪಟ್ಟ ರೀತಿ ಏನೂ ಇಲ್ಲ ಅವರು ಆಯ್ಕೆ ಮಾಡುವುದನ್ನು ನಾವು ಒಪ್ಪಿಕೊಳ್ಳಬೇಕು ಖಂಡಿತ ಒಪ್ಪಿಕೊಳ್ಳುವೆ. ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಂಡರೆ ಸಾಕು ಎಂದು ಗೀತಾ ಅವರ ತಾಯಿ ಹೇಳಿದ್ದಾರೆ. ಅರೇಂಜ್ಡ್ ಮ್ಯಾರೇಜ್ ಆಗಬೇಕು ಅನ್ನೋ ಆಸೆ ತುಂಬಾ ಇದೆ ಎಂದು ಗೀತಾ ಹೇಳಿದ್ದಾರೆ.

    ಪ್ರತಿಯೊಬ್ಬರ ಜೀವನದಲ್ಲೂ ಅವರ ತಾಯಿನೇ ಸೂಪರ್ ಸ್ಟಾರ್. ನನ್ನ ಲೈಫಲ್ಲಿ ಅಮ್ಮ ಯಾಕೆ ಸ್ಟಾರ್ ಅಂದ್ರೆ ಎಲ್ಲನೂ ತ್ಯಾಗ ಮಾಡಿದ್ದಾರೆ. ನಾವು ನಾಲ್ಕು ಜನ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಿಂದ ಕಷ್ಟ ನೋಡಿಕೊಂಡು ಬೆಳೆದಿದ್ದೇವೆ. ನಾವು ನಾಲ್ಕು ಜನರನ್ನು ಬೆಳೆಸುವಾಗ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ನಿಮ್ಮ ಹೆಣ್ಣು ಮಕ್ಕಳು ಬೀದಿಗೆ ತರುತ್ತಾರೆ ಬಿಡು ಅಂತ ಮಾತನಾಡಿದ್ದಾರೆ. ಆ ನೋವನ್ನು ಬಚ್ಚಿಟ್ಟುಕೊಂಡು ಕಷ್ಟ ಪಟ್ಟು ಇಷ್ಟ ಪಟ್ಟು ಬೆಳೆಸಿದ್ದಾರೆ. ನಾನು ಸ್ಕ್ರೀನ್ ಮೇಲೆ ಬರಬೇಕು ಅನ್ನೋದು ನನ್ನ ತಾಯಿ ಆಸೆ ಆಗಿತ್ತು. ಸುಮ್ಮನೆ ಪ್ರಯತ್ನ ಪಟ್ಟೆ ಅವಕಾಶ ಸಿಗ್ತು. ಅವಕಾಶ ಸಿಕ್ಕಿದ ಮೇಲೆ ತುಂಬಾ ಅವಮಾನ ಎದುರಿಸಿದೆ. ದಿನ ಟ್ರೋಲ್ ಮಾಡುತ್ತಿದ್ದರು ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಿದ್ದರು. ಆಗ ಅಮ್ಮ ಒಂದು ಮಾತು ಹೇಳಿದ್ದರು “ನೀನು ಏನೆಂದು ನಿನಗೆ ಗೊತ್ತು ನನಗೆ ನಿನ್ನ ಬಗ್ಗೆ ಗೊತ್ತು” ಎಂದು ಹೇಳಿ ಧೈರ್ಯ ತುಂಬಿದರು. ನನ್ನ ತಾಯಿ (Mother) ಆಶೀರ್ವಾದದಿಂದ (Blessings) ಇಷ್ಟು ನಟನೆಯಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಗೀತಾ ನಟಿ ಭವ್ಯಾ ಮಾತನಾಡಿದ್ದಾರೆ. ಇದನ್ನೂ ಓದಿ: ಅಯ್ಯಂಗಾರ್‌ ಸಂಪ್ರದಾಯದಂತೆ ನಿರ್ದೇಶಕ ಎಸ್.ಕೆ ಭಗವಾನ್ ಅಂತ್ಯಕ್ರಿಯೆ

     

    View this post on Instagram

     

    A post shared by Bhavya Gowda (@bhavyagowda670)

    ಅಮ್ಮ ಮೊದಲು ನಿನಗೆ ಕ್ಷಮೆ ಕೇಳುವೆ. ಶೂಟಿಂಗ್ ಕೆಲಸ ಪ್ರೆಶರ್ ಕೋಪ ಎಲ್ಲವೂ ನಿನ್ನ ಮೇಲೆ ತೋರಿಸಿರುವೆ. ದಿನ ಬೆಳಗ್ಗೆ 4 ಗಂಟೆಗೆ ಎದ್ದು ಬಾಕ್ಸ್ ಪ್ಯಾಕ್ ಮಾಡುವೆ. ನೀನು ನನ್ನ ಮೇಲೆ ತುಂಬಾ ಪ್ರೀತಿ ತೋರಿಸುವೆ ನಾನು ತುಂಬಾ ಕಿರಿಕಿರಿ ಮಾಡಿದ್ದರೂ ಅದೇ ಪ್ರೀತಿ ನನಗೆ ಕೊಡುತ್ತಿರುವೆ. ನಿನ್ನ ಜೊತೆ ಸಮಯ ಕಳೆಯಲು ಆಗುತ್ತಿಲ್ಲ ಸಮಯ ಕೊಡುವೆ. ಹೈದರಾಬಾದ್‌ಗೆ ಹೋದಾಗ ಹುಷಾರಿಯಿಲ್ಲ ಅನ್ನೋ ವಿಚಾರ ನಿನ್ನಿಂದ ಮುಚ್ಚಿಟಾಗ ನೀನು ಫೋನ್ ಮಾಡಿ ಅತ್ತಿರುವೆ. ಇದಕ್ಕೆಲ್ಲಾ ಕ್ಷಮೆ ಕೇಳುವೆ. ನನ್ನ ಇರಿಟೇಷನ್ ನಾನೇ ಅನುಭವಿಸುವೆ ಇನ್ಮುಂದೆ ನಿನ್ನ ಮೇಲೆ ತೋರಿಸುವುದಿಲ್ಲ ಎಂದು ಭವ್ಯಾ ಮಾತನಾಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k