ಬಳ್ಳಾರಿ: ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ತೆಲುಗು ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಆನಂದ್ ಸಿಂಗ್ ತಮ್ಮ ಬಿಡುವಿಲ್ಲದ ಪ್ರಚಾರದ ಮಧ್ಯೆ ಮಹೇಶ್ ಬಾಬು ಅಭಿನಯದ ಭರತ್ ಅನೆ ನೇನು ತೆಲುಗು ಚಿತ್ರವನ್ನು ಹೊಸಪೇಟೆಯ ಚಲನಚಿತ್ರ ಮಂದಿರದಲ್ಲಿ ನೋಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕೆಲ ಮುಖಂಡರು ಆನಂದ್ ಸಿಂಗ್ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕರಾಗಿರುವ ಇವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಬ್ದುಲ್ ವಾಹಬ್ ಅವರನ್ನು 30637 ಮತಗಳ ಅಂತರದಿಂದ ಸೋಲಿಸಿದ್ದರು.
ಈ ಬಾರಿ ಬಿಜೆಪಿ ಯಿಂದ ಹೆಚ್ ಆರ್ ಗವಿಯಪ್ಪ ಮತ್ತು ಜೆಡಿಎಸ್ ನಿಂದ ದೀಪಕ್ ಸಿಂಗ್ ಕಣದಲ್ಲಿದ್ದಾರೆ.
ಹೈದರಾಬಾದ್: ಟಾಲಿವುಡ್ ನಲ್ಲಿ ಸಂಚಲನ ಮೂಡಿಸುತ್ತಿರುವ ಸಿನಿಮಾ ‘ಭರತ್ ಅನೆ ನೇನು’. ಶುಕ್ರವಾರ ಚಿತ್ರ ಬಿಡುಗಡೆ ಆಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ.
ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ನಟ ಜೂನಿಯರ್.ಎನ್ಟಿಆರ್ ಸಹ ಭರತ್ ಅನೆ ನೇನು ಸಿನಿಮಾ ನೋಡಿ ಮೆಚ್ಚುಗೆಯನ್ನು ತಿಳಿಸಿದ್ದಾರೆ.
ಮಹೇಶ್ ಬಾಬು ನಟನೆ ಉತ್ತಮವಾಗಿದ್ದು, ಚಿತ್ರ ಪರದೆಯ ಮೇಲೆ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಪ್ರತಿಯೊಂದು ಪಾತ್ರಗಳು ಮತ್ತು ದೃಶ್ಯಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಸರಳ ರೀತಿಯಲ್ಲಿ ತಿಳಿಸಲಾಗಿದೆ. ಚಿತ್ರದ ಬಹುತೇಕ ಎಲ್ಲ ದೃಶ್ಯಗಳು ಅತ್ಯದ್ಭುತವಾಗಿ ಮೂಡಿಬಂದಿದೆ. ಇಂತಹ ಸಿನಿಮಾ ನೀಡಿದ ಕೊರಟಾಲ ಶಿವ, ಮಹೇಶ್ ಬಾಬು ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಅಂತಾ ರಾಜಮೌಳಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಈ ಐದು ಕಾರಣಗಳಿಗಾಗಿ ‘ಭರತ್ ಅನೆ ನೇನು’ ಚಿತ್ರವನ್ನು ನೋಡಬೇಕೆಂದು ಮಹೇಶ್ ಬಾಬು ಅಭಿಮಾನಿಗಳು ಹೇಳುತ್ತಿದ್ದಾರೆ
Raising issues like Local Governance in a commercial film requires a lot of thought. Truly appreciate @sivakoratala garu and @urstrulyMahesh for their conviction. Press meet scene is the best amongst many good moments in #BharatAneNenu.
ಇತ್ತ ಭರತ್ ಅನೆ ನೇನು ಸಿನಿಮಾ ನೋಡಿದ ಮೇಲೆ ಜೂ.ಎನ್ಟಿಆರ್ ಸಹ ಟ್ವೀಟ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಭರತ್ ಅನೆ ನೇನು ಚಿತ್ರತಂಡಕ್ಕೆ ನನ್ನ ಶುಭಾಶಯಗಳು. ಪ್ರಾಮಾಣಿಕ ಕಥೆಯುಳ್ಳ ಎವರ್ ಗ್ರೀನ್ ಸಿನಿಮಾ ನೀಡಿದ ನಿಮಗೆಲ್ಲರಿಗೂ ಧನ್ಯವಾದ ಅಂತಾ ಟ್ವೀಟ್ ಮಾಡಿದ್ದಾರೆ.
ಕೊರಟಾಲ ಶಿವ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಮಹೇಶ್ ಬಾಬುಗೆ ಜೊತೆಯಾಗಿ ಬಾಲಿವುಡ್ ಚೆಲುವೆ ಕೈರಾ ಅದ್ವಾನಿ ನಟಿಸಿದ್ದಾರೆ. ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಬಾಲಿವುಡ್ ನಟ ಫರ್ಹಾನ್ ಅಖ್ತರ್ ಹಾಡಿರುವುದು ಈ ಚಿತ್ರದ ಮತ್ತೊಂದು ವಿಶೇಷ. ರಾಮ್ಚರಣ್ ಅಭಿನಯದ `ರಂಗಸ್ಥಳಂ’ ಸಿನಿಮಾಗೂ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು.
. @urstrulyMahesh delivered his best performance. Casting is very good. Everyone fit in perfectly. Congratulations Danayya garu and the team of #BharatAneNenu.
ಈ ವರ್ಷ ವಿದೇಶದಲ್ಲಿ ಬಿಡುಗಡೆಯಾದ ಭಾರತೀಯ ಸಿನಿಮಾಗಳ ಟಾಪ್ 5ರಲ್ಲಿ ಎರಡನೇ ಸ್ಥಾನವನ್ನು ಭರತ್ ಅನೆ ನೇನು ಹೊಂದಿದೆ. ಮೊದಲ ಸ್ಥಾನವನ್ನು ಬಾಲಿವುಡ್ `ಪದ್ಮಾವತ್’ ಹೊಂದಿದೆ.
Blending social responsibility with commercial elements is not an easy job. Kudos to @sivakoratala for balancing both aspects beautifully. And congratulations to @urstrulyMahesh for delivering a flawless performance.
ಹೈದರಾಬಾದ್: ಟಾಲಿವುಡ್ನ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಬಹು ನಿರೀಕ್ಷಿತ ‘ಭರತ ಅನೆ ನೇನು’ ನಾಳೆ ದೇಶಾದ್ಯಂತ ರಿಲೀಸ್ ಆಗಲಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಬಾಲಿವುಡ್ ಚೆಲುವೆ ಕೈರಾ ಅದ್ವಾನಿ ನಟನೆಯ ಮೊದಲ ತೆಲಗು ಸಿನಿಮಾ ಇದಾಗಿದೆ. ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿರುವ ಭರತ್ ಅನೆ ನೇನು ಸಿನಿ ರಸಿಕರಲ್ಲಿ ಕುತೂಹಲದ ಬುಗ್ಗೆಯನ್ನು ಹುಟ್ಟುಹಾಕಿದೆ.
ಈಗಾಗಲೇ ಟ್ರೇಲರ್ ಮತ್ತು ಮೇಕಿಂಗ್ ವಿಡಿಯೋಗಳಿಂದ ಭರತ್ ಅನೆ ನೇನು ತಾನು ಎಲ್ಲರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಿದೆ ಅಂತಾ ಸಿನಿ ರಸಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ತಮ್ಮ ನೆಚ್ಚಿನ ನಟನನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳ ತುದಿಗಾಲಲ್ಲಿ ನಿಂತಿದ್ದಾರೆ. ಈ ಐದು ಕಾರಣಗಳಿಗಾಗಿ ‘ಭರತ್ ಅನೆ ನೇನು’ ಚಿತ್ರವನ್ನು ನೋಡಬೇಕೆಂದು ಮಹೇಶ್ ಬಾಬು ಅಭಿಮಾನಿಗಳು ಹೇಳುತ್ತಿದ್ದಾರೆ.
1. ಈ ತಿಂಗಳ ಬ್ಲಾಕ್ಬಾಸ್ಟರ್ ಸಿನಿಮಾ: ಏಪ್ರಿಲ್ ನಲ್ಲಿ ಬಿಡಗಡೆ ಆಗುತ್ತಿರುವ ಅದ್ಧೂರಿ ವೆಚ್ಚದ ಮಲ್ಟಿ ಸ್ಟಾರ್ ಗಳನ್ನು ಹೊಂದಿರುವ ಸಿನಿಮಾ ಇದಾಗಿದೆ. ಏಪ್ರಿಲ್ 27ಕ್ಕೆ ಬಿಡುಗಡೆ ಆಗಬೇಕಿದ್ದ ‘ಕಾಳಾ ಕರಿಕಾಳನ್’ ಕಾರಣಾಂತರಗಳಿಂದ ಮುಂದೂಡಲಾಗಿದೆ. ಅಲ್ಲು ಅರ್ಜುನ್ ಅಭಿನಯದ ‘ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ’ ಮೇ 4ರಂದು ತೆರೆಕಾಣಲಿದೆ.
2. ಕೊರಟಾಲ ಶಿವಾ: ಈ ಹಿಂದೆ ಬ್ಲಾಕ್ಬಾಸ್ಟರ್ ಸಿನಿಮಾ ನೀಡಿರುವ ಕೊರಟಾಲ ಶಿವಾ ನಿರ್ದೇಶನದಲ್ಲಿ ಭರತ್ ಅನೆ ನೇನು ಮೂಡಿ ಬಂದಿದೆ. ಪ್ರಭಾಸ್ ಅಭಿನಯದ ‘ಮಿರ್ಚಿ’ ಚಿತ್ರದ ಮೂಲಕ ನಿರ್ದೇಶನದ ಕೆರಿಯರ್ ಆರಂಭಿಸಿರುವ ಕೊರಟಾಲ ಶಿವಾ ಶ್ರೀಮಂತುಡು ಮತ್ತು ಜನತಾ ಗ್ಯಾರೇಜ್ ನಂತಹ ಬ್ಲಾಕ್ಬಾಸ್ಟರ್ ಸಿನಿಮಾ ನೀಡಿದ್ದಾರೆ. ಸಿನಿಮಾ ಕಥೆಯಲ್ಲಿ ಹಿಡಿತದ ಜೊತೆಗೆ ಪ್ರಬುದ್ಧತೆಯನ್ನು ಕಾಯ್ದುಕೊಳ್ಳುವ ಶಿವಾ ಈ ಬಾರಿಯೂ ಎಂದಿನಿಂತೆ ಚಿತ್ರದ ನಿರೀಕ್ಷೆ ಹುಟ್ಟಲು ಕಾರಣರಾಗಿದ್ದಾರೆ.
3. ಮಹೇಶ್ ಬಾಬು: ಇನ್ನು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಮಹೇಶ್ ಬಾಬು ಚಿತ್ರದ ಮೇನ್ ಅಟ್ರ್ಯಾಕ್ಷನ್ ಸ್ಟಾರ್. ತಮ್ಮ ನೆಚ್ಚಿನ ನಟನ ಸಿನಿಮಾ ಬರುತ್ತೆ ಎಂಬ ವಿಷಯ ತಿಳಿಯುತ್ತಲೆ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಸಾಲು ಹೆಚ್ಚುತ್ತಾರೆ. ಚಿತ್ರದಲ್ಲಿ ಮಹೇಶ್ ಬಾಬು ರಾಜಕಾರಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
4. ಶ್ರೀಮಂತಡು ಬಳಿಕ ಒಂದಾದ ಜೋಡಿ: ಟಾಲಿವುಡ್ ನಲ್ಲಿ ಶ್ರೀಮಂತುಡು ಎಂಬ ಸೂಪರ್ ಹಿಟ್ ಸಿನಿಮಾ ನೀಡಿರುವ ಜೋಡಿ ಇಂದು ಜೊತೆಯಾಗಿದ್ದಾರೆ. ಕೊರಟಾಲ ಶಿವಾ ಮತ್ತು ಮಹೇಶ್ ಬಾಬು ಒಂದಾಗಿದ್ದರಿಂದ ಸಿನಿಮಾ ಸೂಪರ್ ಹಿಟ್ ಆಗಲಿದೆ ಅಂತಾ ಹೇಳಲಾಗುತ್ತಿದೆ.
5. ಮ್ಯೂಸಿಕ್: ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ರಾಮ್ಚರಣ್ ಅಭಿನಯದ ‘ರಂಗಸ್ಥಳಂ’ ಸಿನಿಮಾಗೂ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಬಾಲಿವುಡ್ ನಟ ಫರ್ಹಾನ್ ಅಖ್ತರ್ ಹಾಡಿರುವುದು ಈ ಚಿತ್ರದ ಮತ್ತೊಂದು ವಿಶೇಷ.