Tag: ಬ್ರಹ್ಮಾಸ್ತ್ರ

  • ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಬ್ರಹ್ಮಾಸ್ತ್ರ 2’ ಬಗ್ಗೆ ಅಪ್‌ಡೇಟ್ ಕೊಟ್ಟ ರಣಬೀರ್ ಕಪೂರ್

    ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಬ್ರಹ್ಮಾಸ್ತ್ರ 2’ ಬಗ್ಗೆ ಅಪ್‌ಡೇಟ್ ಕೊಟ್ಟ ರಣಬೀರ್ ಕಪೂರ್

    ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್‌ (Alia Bhatt) ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರದ ಸೀಕ್ವೆಲ್‌ ಯಾವಾಗ ಬರಲಿದೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.  ‘ಬ್ರಹ್ಮಾಸ್ತ್ರ’ ಸೀಕ್ವೆಲ್ ಬರೋದಾಗಿ ರಣಬೀರ್‌ ಖಚಿತಪಡಿಸಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಅಂತೂ ಇಂತೂ ಅಭಿಮಾನಿಗಳ ಕಾತರಕ್ಕೆ ಬ್ರೇಕ್‌ ಬಿದ್ದಿದೆ. ‘ಬ್ರಹ್ಮಾಸ್ತ್ರ 2’ ಬಗ್ಗೆ ಇಂಟರೆಸ್ಟಿಂಗ್‌ ಸುದ್ದಿಯನ್ನ ರಣಬೀರ್‌ ಹಂಚಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ರಣಬೀರ್ ಕಪೂರ್ ಮಾತನಾಡಿ, ‘ಬ್ರಹ್ಮಾಸ್ತ್ರ 2’ (Brahmastra 2) ಬರುವ ಬಗ್ಗೆ ಖಚಿತಪಡಿಸಿದ್ದಾರೆ. ಚಿತ್ರದ ನಿರ್ದೇಶಕ ಅಯಾನ್ ‘ವಾರ್ 2’ ಚಿತ್ರೀಕರಣದಲ್ಲಿ ಬ್ಯುಸಿಯಿದ್ದು, ಸಿನಿಮಾ ರಿಲೀಸ್ ಆದ್ಮೇಲೆ ‘ಬ್ರಹ್ಮಾಸ್ತ್ರ 2’ಗೆ ಚಾಲನೆ ಸಿಗಲಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.

    ಇನ್ನೂ 2022ರಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ಬಿಗ್ ಬಿ, ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಅನೇಕರು ನಟಿಸಿದ್ದರು. ಈ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು.

  • ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ 1 ವರ್ಷ- ಚಿತ್ರತಂಡದಿಂದ ಗುಡ್ ನ್ಯೂಸ್

    ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ 1 ವರ್ಷ- ಚಿತ್ರತಂಡದಿಂದ ಗುಡ್ ನ್ಯೂಸ್

    ಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ನಟನೆಯ ಬ್ರಹ್ಮಾಸ್ತ್ರ (Brahmastra Film) ಸಿನಿಮಾ 2022ರಲ್ಲಿ ತೆರೆಕಂಡಿತ್ತು. ಈ ಸಿನಿಮಾ ಇದೀಗ ಒಂದು ವರ್ಷ ಪೂರೈಸಿದೆ. ಈ ಖುಷಿಯಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ, ಬ್ರಹ್ಮಾಸ್ತ್ರ ಪಾರ್ಟ್ 2, 3 ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಅಯಾನ್ ಮುಖರ್ಜಿ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಾರ್ಟೂನ್ ಚಿತ್ರಗಳು, ವಿಡಿಯೋಗಳನ್ನು ಹಂಚಿಕೊಂಡಿದ್ದು, ಬ್ರಹ್ಮಾಸ್ತ್ರ 2 ಮತ್ತು 3 ಕೆಲಸ ಚಾಲ್ತಿಯಲ್ಲಿದೆ ಎಂದಿದ್ದಾರೆ. ಸದ್ಯಕ್ಕೆ ಬ್ರಹ್ಮಾಸ್ತ್ರ 2 & 3 ಸಿನಿಮಾಗಳ ಕಾನ್ಸೆಪ್ಟ್ ಆರ್ಟ್ ವರ್ಕ್ ನಡೆಯುತ್ತಿದ್ದು, ಕಾನ್ಸೆಪ್ಟ್ ಆರ್ಟ್ ವರ್ಕ್ ಮುಗಿದ ಕೂಡಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮೂಲಕ ರಣ್‌ಬೀರ್‌-ಆಲಿಯಾ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ.  ಇದನ್ನೂ ಓದಿ:ವಿಕ್ಕಿ ವರುಣ್ ನಟಿಸಿ, ನಿರ್ದೇಶನ ಮಾಡಿರುವ ‘ಕಾಲಾಪತ್ಥರ್’ ಸಾಂಗ್ ರಿಲೀಸ್

    ಅಯಾನ್ ಮುಖರ್ಜಿ ಈಗ ಹಂಚಿಕೊಂಡಿರುವ ಕಾರ್ಟೂನ್ ಚಿತ್ರ- ವಿಡಿಯೋಗಳಲ್ಲಿ ಶಿವ ಭಕ್ತನೊಬ್ಬ ಆಯುಧ ಹಿಡಿದು ದೈತ್ಯಾಕಾರದ ಅಸುರನನ್ನು ಕೊಲ್ಲಲು ಯತ್ನಿಸುತ್ತಿರುವ ದೃಶ್ಯಗಳಿವೆ. ಆ ವ್ಯಕ್ತಿಗೆ ಮಹಿಳೆಯೊಬ್ಬಾಕೆ ಬೆಂಬಲವಾಗಿ ನಿಂತಿರುವುದು ಸಹ ಕಾಣುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾವು ಅಗ್ನಿ ಅಸ್ತ್ರ, ವಾಯು ಅಸ್ತ್ರ, ಜಲ ಅಸ್ತ್ರ ಹೀಗೆ ಬೇರೆ ಬೇರೆ ಆಯುಧಗಳ ಕುರಿತಾದ ಕತೆಯನ್ನು ಒಳಗೊಂಡಿತ್ತು. ರಣ್‌ಬೀರ್ ಅಗ್ನಿ ಅಸ್ತ್ರ ಸಂರಕ್ಷಕನಾಗಿ ಪಾತ್ರದಲ್ಲಿ ನಟಿಸಿದ್ದರು. ಮುಂದುವರೆದ ಭಾಗದಲ್ಲಿ ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಳ್ಳಲಿದ್ದಾರೆ.

    ರಣ್‌ಬೀರ್ (Ranbir Kapoor) ಶಿವ ಪಾತ್ರಕ್ಕೆ ಜೀವತುಂಬಿದ್ದು, ಆಲಿಯಾ ಭಟ್ ಇಶಾ ರೋಲ್‌ನಲ್ಲಿ ನಟಿಸಿದ್ದರು. ಮೌನಿ ರಾಯ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಉಳಿದಂತೆ ಬಿಗ್ ಬಿ, ಶಾರುಖ್ ಖಾನ್, ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಣ್‌ವೀರ್ ಜೊತೆ ಕಾಶ್ಮೀರದಲ್ಲಿ ಸುತ್ತಾಡಿದ ಆಲಿಯಾ ಭಟ್

    ರಣ್‌ವೀರ್ ಜೊತೆ ಕಾಶ್ಮೀರದಲ್ಲಿ ಸುತ್ತಾಡಿದ ಆಲಿಯಾ ಭಟ್

    `ಬ್ರಹ್ಮಾಸ್ತ್ರʼ (Bramastra Film) ನಟಿ ಆಲಿಯಾ ಭಟ್ (Alia Bhatt) ಅವರು ಮುದ್ದು ಮಗಳು ರಾಹಾ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಚಿತ್ರೀಕರಣದಿಂದ ದೂರವಿದ್ದರು. ಇದೀಗ ಕಾಶ್ಮೀರದಲ್ಲಿ ರಣ್‌ವೀರ್ ಸಿಂಗ್ (Ranveer Singh) ಜೊತೆ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಕಾಶ್ಮೀರದ ಸುಂದರ ತಾಣದಲ್ಲಿ ರಣ್‌ವೀರ್ ಜೊತೆ ಆಲಿಯಾ ಸುತ್ತಾಡುತ್ತಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗಾಗಿ ಆಲಿಯಾ ಭಟ್ ಕಾಶ್ಮೀರಕ್ಕೆ ಬಂದಿದ್ದಾರೆ. ರಣ್‌ಬೀರ್ ಕಪೂರ್ (Ranbir Kapoor) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ, ಮದುವೆಯಾಗಿ ಎರಡೇ ತಿಂಗಳಿಗೆ ತಾವು ಪ್ರೆಗ್ನೆಂಟ್ ಆಗಿರುವ ವಿಚಾರವನ್ನ ನಟಿ ತಿಳಿಸಿದ್ದರು. ಹಾಗಾಗಿ ಆಲಿಯಾ ಚಿತ್ರದ ಶೂಟಿಂಗ್‌ಗೆ ಬ್ರೇಕ್ ಬಿದ್ದಿತ್ತು. ಸಿನಿಮಾ ಚಿತ್ರೀಕರಣ ಮುಗಿದಿತ್ತು. ಆದರೆ ಚಿತ್ರದ ಸಾಂಗ್ಸ್ ಬಾಕಿಯಿತ್ತು. ಅದಕ್ಕಾಗಿ ಈಗ ಕಾಶ್ಮೀರಗೆ ಆಲಿಯಾ ಬಂದಿದ್ದಾರೆ.

     

    View this post on Instagram

     

    A post shared by Instant Bollywood (@instantbollywood)

    ಗುಲ್‌ಮರ್ಗ್‌ನಲ್ಲಿ ಕೆಂಪು ಬಣ್ಣದ ಬಟ್ಟೆ ಧರಿಸಿ ಆಲಿಯಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಲಿಯಾ ಭಟ್ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ಅವರು ಕಾಶ್ಮೀರದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ತಾವು ಕಾಶ್ಮೀರದಲ್ಲಿ ಶೂಟ್ ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಿದ್ದರು. ಇದನ್ನೂ ಓದಿ:ಮದುವೆಯ ಬಳಿಕ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

    `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಹಲವು ಕಾರಣದಿಂದ ವಿಶೇಷ ಎನಿಸಿಕೊಂಡಿದೆ. ಕರಣ್ ಜೋಹರ್ ಅವರು ನಿರ್ದೇಶನಕ್ಕೆ ಕಂಬ್ಯಾಕ್ ಮಾಡುತ್ತಿರುವ ಸಿನಿಮಾ. ‘ಬ್ರಹ್ಮಾಸ್ತ್ರ’ ಯಶಸ್ಸಿನ ನಂತರ ಆಲಿಯಾ ಭಟ್ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹೀಗಾಗಿ, ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಇನ್ನು, ರಣವೀರ್ ಸಿಂಗ್ ವೃತ್ತಿ ಜೀವನಕ್ಕೆ ಈ ಚಿತ್ರದಿಂದ ಒಂದು ದೊಡ್ಡ ಗೆಲುವು ಬೇಕಿದೆ.

  • ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆ: ‘ಬ್ರಹ್ಮಾಸ್ತ್ರ’ದಲ್ಲಿ ನಟಿಸುತ್ತಿಲ್ಲ ರಾಕಿಂಗ್ ಸ್ಟಾರ್

    ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆ: ‘ಬ್ರಹ್ಮಾಸ್ತ್ರ’ದಲ್ಲಿ ನಟಿಸುತ್ತಿಲ್ಲ ರಾಕಿಂಗ್ ಸ್ಟಾರ್

    ಣಬೀರ್ ಕಪೂರ್ ಮುಖ್ಯ ಭೂಮಿಕೆಯ ಬ್ರಹ್ಮಾಸ್ತ್ರ ಸಿನಿಮಾದ ಮುಂದುವರೆದ ಭಾಗ ಕೂಡ ಅತೀ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ಹೇಳಲಾಗಿತ್ತು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt) ಕಾಂಬಿನೇಷನ್ ನ ಈ ಸಿನಿಮಾದಲ್ಲಿ ದೇವ್ ಎನ್ನುವ ಪ್ರಮುಖ ಪಾತ್ರವೊಂದು ಬರಲಿದ್ದು, ಈ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಅದರಲ್ಲೂ ಖುದ್ದಾಗಿ ನಿರ್ಮಾಪಕ ಕರಣ್ ಜೋಹಾರ್ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಜೊತೆಯಾಗಿ ಬಂದು ಯಶ್ ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.

    ಕರಣ್ ಜೋಹಾರ್ (Karan Johar) ಮತ್ತು ಅಯಾನ್ ಬೆಂಗಳೂರಿಗೆ ಬಂದು ಯಶ್ (Yash) ಅವರನ್ನು ಭೇಟಿ ಮಾಡಿ, ಕಥೆ ಹೇಳಿದರೂ ಯಶ್ ಆ ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ. ದೇವ್ ಈ ಸಿನಿಮಾದಲ್ಲಿ ಮಹತ್ವದ ಪಾತ್ರವಾದರೂ, ಯಶ್ ಅವರು ಕೇಳಿದಷ್ಟು ಸಂಭಾವನೆಯನ್ನು ಕೊಡಲು ಕರಣ್ ಸಿದ್ಧವಿದ್ದರೂ, ಆ ಪಾತ್ರವನ್ನು ತಾವು ಮಾಡುವುದಿಲ್ಲ ಎಂದು ಯಶ್ ಹೇಳಿರುವ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಯಶ್ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಇದನ್ನೂ ಓದಿ:ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತು ಸಖತ್ ಚರ್ಚೆ ಶುರುವಾಗಿದೆ. ಯಾವಾಗ ಯಶ್ ಸಿನಿಮಾ ಶುರುವಾಗಲಿದೆ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಈ ಹೊತ್ತಿನಲ್ಲಿ ಯಶ್ ಬ್ರಹ್ಮಾಸ್ತ್ರ (Brahmastra) ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳಿಗೆ ಖುಷಿ ಸಂಗತಿ ಆಗಿತ್ತು. ಆದರೆ, ಆ ಸಿನಿಮಾದಲ್ಲೂ ಯಶ್ ನಟಿಸುತ್ತಿಲ್ಲ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

    ಇತ್ತ ಬೇರೆ ಸಿನಿಮಾವನ್ನೂ ಯಶ್ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಅವರ ಸಿನಿಮಾಗೆ ಬಂಡವಾಳ ಹೂಡಲು ಹಲವು ಕಂಪೆನಿಗಳು ಮುಂದೆ ಬಂದರೂ, ಇನ್ನೂ ಯಶ್ ಕತೆ ಒಪ್ಪಿಕೊಂಡಿಲ್ಲವಂತೆ. ಅಲ್ಲದೇ,  ನಿರ್ದೇಶಕರಿಗಾಗಿಯೂ ಹುಡುಕಾಟ ಶುರು ಮಾಡಿದ್ದಾರಂತೆ. ಕಥೆ ಮತ್ತು ನಿರ್ದೇಶಕರು ಪಕ್ಕಾ ಆದ ನಂತರವೇ ಹೊಸ ಸಿನಿಮಾದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನುವುದು ನಯಾ ಸಮಾಚಾರ. ಅಂದುಕೊಂಡಂತೆ ಆಗಿದ್ದರೆ ನರ್ತನ್ ಜೊತೆಗಿನ ಸಿನಿಮಾ ಇಷ್ಟೊತ್ತಿಗಾಗಲೇ ಸೆಟ್ಟೇರಬೇಕಿತ್ತು. ಅದು ಕೂಡ ಆಗಿಲ್ಲ ಎನ್ನುವುದು ನಿರಾಸೆ ಸಂಗತಿ.

    Live Tv
    [brid partner=56869869 player=32851 video=960834 autoplay=true]

  • ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಕನಸೆಲ್ಲ ನುಚ್ಚುನೂರು: ಮೌನವೇ ಲೇಸು ಅಂತಿದ್ದಾರೆ ಫ್ಯಾನ್ಸ್

    ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಕನಸೆಲ್ಲ ನುಚ್ಚುನೂರು: ಮೌನವೇ ಲೇಸು ಅಂತಿದ್ದಾರೆ ಫ್ಯಾನ್ಸ್

    ಬಾಲಿವುಡ್ (Bollywood) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅಂದುಕೊಂಡ ಕನಸುಗಳೆಲ್ಲ ಹಳ್ಳ ಹಿಡಿಯುತ್ತಿವೆ. ದಿ ಕಾಶ್ಮೀರ್ ಫೈಲ್ಸ್ ಗೆಲುವು ಅವರಿಗೆ ದುಡ್ಡು ಮಾತ್ರ ತಂದುಕೊಟ್ಟಿದೆ. ಉಳಿದಂತೆ ಎಲ್ಲ ಕೆಲಸಗಳು ಅಂದುಕೊಂಡಂತೆ ನಡೆಯುತ್ತಿಲ್ಲ. ಹಾಗಾಗಿ ಸ್ವಲ್ಪ ದಿನ ಸುಮ್ಮನೆ ಇರಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಏನೂ ಮಾತನಾಡದೇ ಸುಮ್ಮನಿದ್ದರೆ ಎಲ್ಲವೂ ಅಂದುಕೊಂಡಂತೆ ಆಗುತ್ತವೆ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರಂತೆ.

    ಭಾರತದಲ್ಲಿ ಸಿನಿಮಾ ಸಕ್ಸಸ್ ಆದರೂ, ಬೇರೆ ದೇಶಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಆಗದಂತೆ ತಡೆಯಲಾಯಿತು. ಅಲ್ಲದೇ, ವಿಶ್ವವಿದ್ಯಾಲಯವೊಂದರಲ್ಲಿ ಸಿನಿಮಾ ಬಗ್ಗೆ ಮಾತನಾಡಬೇಕಿದ್ದ ವಿವೇಕ್ ಅವರ ಭಾಷಣವನ್ನೇ ರದ್ದುಗೊಳಿಸಲಾಯಿತು. ಇದಕ್ಕೆಲ್ಲ ಕಾರಣ ಅವರು ಆಡುತ್ತಿರುವ ಮಾತುಗಳು ಎನ್ನಲಾಗುತ್ತಿದೆ. ಅಲ್ಲದೇ, ಬಾಲಿವುಡ್ ಸಿನಿಮಾ ರಂಗದ ಮೇಲೆ ಸಲ್ಲದ ಆರೋಪಗಳನ್ನೂ ಅವರು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೂ ಅವರಿಗೆ ತೊಂದರೆ ಆಗುತ್ತಿವೆಯಂತೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ (Brahmastra) ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ವಿವೇಕ್ ಅಗ್ನಿಹೋತ್ರಿ ಮೊನ್ನೆಯಷ್ಟೇ ಅವಮಾನ ಅನುಭವಿಸಿದ್ದಾರೆ. ಈ ವಿವಾದದಲ್ಲಿ ನಾನಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ದೂರವೇ ಉಳಿದರು. ಇನ್ಮುಂದೆ ಬಾಕ್ಸ್ ಆಫೀಸ್ ವಿಚಾರವನ್ನು ನಾನು ಮಾತನಾಡಲಾರೆ ಎಂದೂ ಅವರು ಹೇಳಿದ್ದಾರೆ. ಇದೀಗ ಮತ್ತೊಂದು ಹೊಡೆತ ಅವರಿಗೆ ಬಿದ್ದಿದೆ.

    ಸೋಷಿಯಲ್ ಮೀಡಿಯಾದಲ್ಲಿ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾವನ್ನು ಆಸ್ಕರ್ (Oscar) ಪ್ರಶಸ್ತಿಗಾಗಿ ಕಳುಹಿಸಿ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದರು. ಈ ಸಿನಿಮಾದ ಬಗ್ಗೆ ಕ್ಯಾಂಪೇನ್ ಕೂಡ ಮಾಡಲಾಗಿತ್ತು. ಬಹುತೇಕ  ಇದೇ ಸಿನಿಮಾ ರೇಸ್ ನಲ್ಲಿ ಇರುತ್ತದೆ ಎಂದೂ ನಂಬಲಾಗಿತ್ತು. ಆದರೆ, ವಿವೇಕ್ ಆಡಿದ ಮಾತುಗಳಿಂದಾಗಿ ಆಸ್ಕರ್ ಅಂಗಳಕ್ಕೆ ಹೋಗಲು ಸಿನಿಮಾ ಸಾಧ್ಯವಾಗಿಲ್ಲ ಎನ್ನುತ್ತಿವೆ ಮೂಲಗಳು. ವಿದೇಶಿ ನೆಲದಲ್ಲಿ ಈ ರೀತಿಯ ಸಿನಿಮಾಗಳಿಗೆ ಎನ್ ಕ್ರೇಜ್ ಮಾಡುವುದಿಲ್ಲ ಎಂಬ ಅಭಿಪ್ರಾಯ ಬಂದಿರುವ ಹಿನ್ನೆಲೆಯಲ್ಲಿ ಕಳುಹಿಸಲು ಸಾಧ್ಯವಾಗಿಲ್ಲ ಎನ್ನುವುದು ಸದ್ಯಕ್ಕಿರುವ ಸುದ್ದಿ.

     

    Live Tv
    [brid partner=56869869 player=32851 video=960834 autoplay=true]

  • ಸೋಲು ಒಪ್ಪಿಕೊಂಡು, ನನ್ನನ್ನು ಬಿಟ್ಟು ಬಿಡಿ ಎಂದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ಸೋಲು ಒಪ್ಪಿಕೊಂಡು, ನನ್ನನ್ನು ಬಿಟ್ಟು ಬಿಡಿ ಎಂದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek AgniHotri) ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳ ಮೇಲೆ ಮುಗಿಬಿದ್ದಿದ್ದರು. ಅದರಲ್ಲೂ ಹಿಂದೂ ವಿರೋಧಿ ನಟರ ಮತ್ತು ನಿರ್ದೇಶಕರ ಸಿನಿಮಾಗಳ ಬಗ್ಗೆ ವಿವಾದ ಆಗುವಂತಹ ಕಾಮೆಂಟ್ ಗಳನ್ನು ಮಾಡುತ್ತಿದ್ದರು. ಹೀಗಾಗಿ ಕಂಗನಾ ರಣಾವತ್ (Kangana Ranaut) ಅವರ ಪಟ್ಟಿಗೆ ಇವರನ್ನು ಸೇರಿಸಲಾಗಿತ್ತು. ಈ ಇಬ್ಬರೂ ಸೇರಿಕೊಂಡು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ಮೇಲೆ ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ದರು.

    ಬ್ರಹ್ಮಾಸ್ತ್ರ (Brahmastra) ಸಿನಿಮಾ 250 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ ಎನ್ನುವ ಸುದ್ದಿಯನ್ನು ಕಂಗನಾ ಮತ್ತು ಅಗ್ನಿಹೋತ್ರಿ ಇಬ್ಬರಿಗೂ ಅರಗಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಬಾಕ್ಸ್ ಆಫೀಸ್ ರಿಪೋರ್ಟ್ ಸುಳ್ಳು ಎಂದು ವಾದಿಸುತ್ತಿದ್ದರು. 650 ಕೋಟಿಗೂ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾ 250 ಕೋಟಿ ಗಳಿಸಿದರು ಹೇಗೆ ಗೆದ್ದಂತೆ ಎಂದು ಪ್ರಶ್ನೆಯನ್ನು ಮಾಡಿದ್ದರು. ಹಾಗಾಗಿ ಬ್ರಹ್ಮಾಸ್ತ್ರ ಸಿನಿಮಾ ಗೆದ್ದಿಲ್ಲ ಎನ್ನುವುದು ಅವರ ವಾದವಾಗಿತ್ತು. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಈಗ ಬ್ರಹ್ಮಾಸ್ತ್ರ ಚಿತ್ರವು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಮೀರಿಸಿದೆ ಅಂತೆ. ಹಾಗಾಗಿಯೇ ಎರಡೂ ಸಿನಿಮಾಗಳನ್ನು ಹೋಲಿಕೆ ಮಾಡುತ್ತಾ, ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ನಿರ್ದೇಶಕನನ್ನು ಟ್ರೋಲ್ ಮಾಡುತ್ತಿದ್ದರು. ಕೊನೆಗೂ ನೀವೇ ಸೋತಿದ್ದು, ರಣಬೀರ್ (Ranbir Kapoor) ಗೆದ್ದರು ಎಂದು ಕಾಮೆಂಟ್ ಮಾಡಲಾಗುತ್ತಿದೆ. ಹಾಗಾಗಿ ಈ ಆಟದಲ್ಲಿ ನಾನಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ವಿವೇಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದೂ ಅವರು ಹೇಳಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕಲೆಕ್ಷನ್ ಅನ್ನು ಬ್ರಹ್ಮಸ್ತ್ರಾ ಸಿನಿಮಾ ನಿಜವಾಗಿಯೂ ಮೀರಿಸಿದೆಯಾ? ಈವರೆಗೂ ಅದು 250 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿದೆಯಾ? ಈ ಕುರಿತು ಅಧಿಕೃತವಾಗಿ ಸಿನಿಮಾ ಟೀಮ್ ಹೇಳದೇ ಇದ್ದರೂ, ಬಾಲಿವುಡ್ ವಿಮರ್ಶೆಕರು ಈ ಕುರಿತಾಗಿ ಸುದ್ದಿಗಳನ್ನು ಮಾಡಿದ್ದಾರೆ. ಹಾಗಾಗಿ ಈ ಪ್ರಮಾಣದಲ್ಲಿ ಹಣ ಬಂದಿದೆ ಎಂದು ಟ್ರೋಲ್ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬ್ರಹ್ಮಾಸ್ತ್ರ’ ಕೆಳಗಿಟ್ಟು ಮಥುರಾದ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್

    ‘ಬ್ರಹ್ಮಾಸ್ತ್ರ’ ಕೆಳಗಿಟ್ಟು ಮಥುರಾದ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್

    ಬಾಲಿವುಡ್ ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಇತ್ತೀಚಿನ ದಿನಗಳಲ್ಲಿ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ (Brahmastra) ಸಿನಿಮಾದ ಹಿಂದೆ ಬಿದ್ದಿದ್ದರು. ಈ ಸಿನಿಮಾದ ಕಲೆಕ್ಷನ್, ಗೆಲುವಿನ ವಿಚಾರವಾಗಿ ದಿನಕ್ಕೊಂದು ಕ್ಯಾತೆ ತಗೆಯುತ್ತಿದ್ದರು. ಇದೀಗ ವಿವಾದಿತ ಬ್ರಹ್ಮಾಸ್ತ್ರವನ್ನು ಕೆಳಗಿಟ್ಟು ದೇವರ ದರ್ಶನಕ್ಕೆ ಹೋಗಿದ್ದಾರೆ. ಇಡೀ ಕುಟುಂಬ ಸಮೇತ ಮಥುರಾ (Mathura) ವೃಂದಾವನ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ (Banke Bihari Temple) ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

    ಬಂಕೆ ಬಿಹಾರಿ ದೇವಸ್ಥಾನಕ್ಕೆ ಕಂಗನಾ (Kangana Ranaut)ಭೇಟಿ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಹಲವಾರು ಬಾರಿ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ. ಈ ಬಾರಿ ಕುಟುಂಬ ಸಮೇತ ಬಂದಿರುವುದು ವಿಶೇಷ.  ಕಂಗನಾ ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ, ಅವರು ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲೂ ಪಾಲ್ಗೊಂಡು ಭಜನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ದೇವಸ್ಥಾನಕ್ಕೆ ಕಂಗನಾ ಬರುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಅನೇಕರು ಅಲ್ಲಿಗೆ ಆಗಮಿಸಿದ್ದರು. ನೆಚ್ಚಿನ ನಟಿಯ ಜೊತೆ ಸೆಲ್ಫಿ ತಗೆಸಿಕೊಂಡರು. ಕಂಗನಾ ಯಾರಿಗೂ ನಿರಾಸೆ ಮಾಡದೇ ಎಲ್ಲರೊಂದಿಗೆ ಫೋಟೋ ಕ್ಲಿಸಿಕೊಂಡಿದ್ದು ವಿಶೇಷ. ಅಭಿಮಾನಿಗಳಿಂದ ಕಂಗನಾ ಅವರನ್ನು ಬಿಡಿಸಿಕೊಳ್ಳಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಆ ಪ್ರಮಾಣದಲ್ಲಿ ಅಭಿಮಾನಿಗಳು ನೆರೆದಿದ್ದರು.

    ಪೂಜೆ ಮುಗಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ, ‘ರಾಧೆ (Radhe), ಕೃಷ್ಣ ಅವರ ದರ್ಶನ ಸಿಕ್ಕಿದ್ದು ನನ್ನ ಪುಣ್ಯ. ಹಾಗಾಗ್ಗೆ ಈ ದೇವಸ್ಥಾನಕ್ಕೆ ಬರುತ್ತಲೇ ಇರುತ್ತೇನೆ. ಏನೋ ಒಂದು ರೀತಿಯಲ್ಲಿ ನೆಮ್ಮದಿ ನನಗೆ. ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ’ ಎಂದು ಹೇಳಿದರು. ಯಾವುದೇ ರಾಜಕೀಯ ಪ್ರೇರಿತ ಪ್ರಶ್ನೆಗಳಿಗೆ ಅವರು ಉತ್ತರ ಕೊಡದೇ ಅಲ್ಲಿಂದ ನಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬ್ರಹ್ಮಾಸ್ತ್ರ’ ಕಲೆಕ್ಷನ್ ವಿಚಾರ: ಕಂಗನಾಗೆ ಸಖತ್ ತಿರುಗೇಟು ಕೊಟ್ಟ ರಣಬೀರ್ ಕಪೂರ್

    ‘ಬ್ರಹ್ಮಾಸ್ತ್ರ’ ಕಲೆಕ್ಷನ್ ವಿಚಾರ: ಕಂಗನಾಗೆ ಸಖತ್ ತಿರುಗೇಟು ಕೊಟ್ಟ ರಣಬೀರ್ ಕಪೂರ್

    ಳೆ ನಿಂತರು ಮಳೆಹನಿ ನಿಲ್ಲದು ಎನ್ನುವಂತೆ ಬಾಲಿವುಡ್ ನ ಬ್ರಹ್ಮಾಸ್ತ್ರ (Brahmastra) ಸಿನಿಮಾದ ವಿವಾದ ಸದ್ಯಕ್ಕಂತೂ ಮುಗಿಯುತ್ತಿಲ್ಲ. ಬಾಯ್ಕಾಟ್ ನಿಂದ ಶುರುವಾದ ಈ ಕೋಳಿ ಜಗಳ ಇದೀಗ ಸಿನಿಮಾದ ಕಲೆಕ್ಷನ್ ವರೆಗೂ ಬಂದು ನಿಂತಿದೆ. ಈ ಸಿನಿಮಾ ಬಜೆಟ್ ಮತ್ತು ಅದು ಮಾಡಿರುವ ಕಲೆಕ್ಷನ್ (Collection) ಇಟ್ಟುಕೊಂಡು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut) ಹಗ್ಗ ಜಗ್ಗಾಟ ನಡೆಸಿದ್ದಾರೆ. ಪದೇ ಪದೇ ಸಿನಿಮಾ ಗಳಿಸಿದ ದುಡ್ಡಿನ ಬಗ್ಗೆಯೇ ಪ್ರಶ್ನೆ ಕೇಳಿದ್ದಾರೆ.

    ಸಿನಿಮಾದ ಬಜೆಟ್ (Budget) ಅಂದಾಜು 600 ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿನಿಮಾ 250 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ ಎನ್ನುವ ಮಾತೂ ಇದೆ. ಹಾಗಾಗಿ ಸಿನಿಮಾ ಹೇಗೆ ಗೆಲ್ಲುವುದಕ್ಕೆ ಸಾಧ್ಯ? ಅಷ್ಟಕ್ಕೂ 250 ಕೋಟಿನೂ ಹಣ ಬಂದಿಲ್ಲ ಎಂದು ಕಂಗನಾ ಲೇವಡಿ ಮಾಡಿದ್ದಾರೆ. ಅದು ಸಖತ್ ಟ್ರೋಲ್ ಕೂಡ ಆಗುತ್ತಿದೆ. ಕಂಗನಾ ಪದೇ ಪದೇ ಈ ವಿಚಾರ ಮಾತನಾಡುತ್ತಿದ್ದರೂ ಈವರೆಗೂ ಸಿನಿಮಾ ಟೀಮ್ ನಿಂದ ಯಾರೂ ಉತ್ತರ ಕೊಡುವುದಕ್ಕೆ ಹೋಗಿರಲಿಲ್ಲ. ಇದೇ ಮೊದಲ ಬಾರಿಗೆ ರಣಬೀರ್ ಕಪೂರ್ (Ranbir Kapoor) ಮಾತನಾಡಿದ್ದಾರೆ. ಇದನ್ನೂ ಓದಿಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ

    ತಮ್ಮ ಸಿನಿಮಾದ ಬಜೆಟ್ 600 ಕೋಟಿಗೂ ಅಧಿಕ ಎನ್ನುವುದನ್ನು ಮೊದಲು ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಈ ಸಿನಿಮಾ ಮೂರು ಭಾಗದಲ್ಲಿ ಮೂಡಿ ಬರುತ್ತಿದೆ. ಹಾಗಾಗಿ ಸೆಟ್, ಪ್ರಾಪರ್ಟಿ, ವಿಎಫ್ ಎಕ್ಸ್ ಮತ್ತು ಇತರೆ ಕೆಲಸಗಳಿಗೆ ಆ ಪ್ರಮಾಣದ ಬಜೆಟ್ ಬಳಸಲಾಗಿದೆ. ಮೂರು ಸಿನಿಮಾಗಳಿಗೆ ಅದನ್ನು ವಿಭಾಗಿಸಿದರೆ, ಇನ್ನೂರು ಕೋಟಿ ಕೂಡ ಬಜೆಟ್ ಆಗುವುದಿಲ್ಲ. ಈಗ ಸಿನಿಮಾ ಗೆದ್ದಿದೆಯಾ ಅಥವಾ ಸೋತಿದೆಯಾ ಅಂತ ಅಂದಾಜಿಸಲಿ ಎಂದಿದ್ದಾರೆ ರಣಬೀರ್.

    Live Tv
    [brid partner=56869869 player=32851 video=960834 autoplay=true]

  • ಪತಿ ರಣ್‌ಬೀರ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಆಲಿಯಾ ಭಟ್

    ಪತಿ ರಣ್‌ಬೀರ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಆಲಿಯಾ ಭಟ್

    ಬಾಲಿವುಡ್‌ನ ಮುದ್ದಾದ ಜೋಡಿ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಸದ್ಯ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ಇನ್ನೂ ಪತಿ ಜತೆಗಿನ ವಿಶೇಷ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Alia Bhatt ????☀️ (@aliaabhatt)

    ಬಿಟೌನ್‌ನ ಸೂಪರ್ ಜೋಡಿ ಆಲಿಯಾ ದಂಪತಿ ಇದೀಗ `ಬ್ರಹ್ಮಾಸ್ತ್ರʼ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಈ ಸಂಭ್ರಮದ ನಡುವೆ ಪತಿ ಜೊತೆಗಿನ ರೊಮ್ಯಾಂಟಿಕ್ ಪೋಟೋವೊಂದನ್ನ ಆಲಿಯಾ ಶೇರ್ ಮಾಡಿದ್ದಾರೆ. ಇವರಿಬ್ಬರ ಬ್ಲ್ಯಾಕ್‌ ಆ್ಯಂಡ್ ವೈಟ್ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಚೆಂದದ ಜೋಡಿಯ ಚೆಂದದ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಅಂಬರೀಶ್ ನೆಚ್ಚಿನ ಶ್ವಾನ ‘ಬುಲ್ ಬುಲ್’ ಕೂಡ ನಿಧನ: ‘ಕನ್ವರ್’ ಹುಡುಕಿಕೊಂಡು ಹೊರಟ ಬುಲ್ ಬುಲ್

     

    View this post on Instagram

     

    A post shared by Alia Bhatt ????☀️ (@aliaabhatt)

    ಇನ್ನೂ `ಬ್ರಹ್ಮಾಸ್ತ್ರ’ ಚಿತ್ರದ ಸಕ್ಸಸ್ ನಂತರ ರಣ್‌ಬೀರ್ ಮತ್ತು ಆಲಿಯಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಅವರ ಮುಂಬರುವ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬ್ರಹ್ಮಾಸ್ತ್ರ’ ಸಿನಿಮಾ ಪ್ರಚಾರ ಮಾಡಿ, ಗೆಲ್ಲಿಸೋಕೆ 10 ಕೋಟಿ ಹಣ ಪಡೆದ್ರಾ ನಿರ್ದೇಶಕ ರಾಜಮೌಳಿ?

    ‘ಬ್ರಹ್ಮಾಸ್ತ್ರ’ ಸಿನಿಮಾ ಪ್ರಚಾರ ಮಾಡಿ, ಗೆಲ್ಲಿಸೋಕೆ 10 ಕೋಟಿ ಹಣ ಪಡೆದ್ರಾ ನಿರ್ದೇಶಕ ರಾಜಮೌಳಿ?

    ಕ್ಷಿಣದ ಖ್ಯಾತ ನಿರ್ದೇಶಕ, ಹಿಟ್ ಚಿತ್ರಗಳನ್ನು ಚಿತ್ರೋದ್ಯಮಕ್ಕೆ ನೀಡಿರುವ ರಾಜಮೌಳಿ ಕುರಿತು ಗುರುತರ ಆಪಾದನೆಯೊಂದು ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಹಿಂದಿಯ ಬ್ರಹ್ಮಾಸ್ತ್ರ (Brahmastra) ಸಿನಿಮಾವನ್ನು ಪ್ರಚಾರ ಮಾಡಲು ಮತ್ತು ಗೆಲ್ಲಿಸಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರು ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

    ಅಂದುಕೊಂಡಂತೆ ಆಗಿದ್ದರೆ, ಹೈದರಾಬಾದ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ದೊಡ್ಡ ಇವೆಂಟ್ ನಡೆಯಬೇಕಿತ್ತು. ಅದರ ನೇತೃತ್ವವನ್ನು ರಾಜಮೌಳಿ (Rajamouli) ಮತ್ತು ಜ್ಯೂನಿಯರ್ ಎನ್.ಟಿ.ಆರ್ ವಹಿಸಿದ್ದರು. ಆದರೆ, ಭದ್ರತೆಯ ಕಾರಣದಿಂದಾಗಿ ಇವೆಂಟ್ ನಡೆಯಲಿಲ್ಲ. ಲಕ್ಷಾಂತರ ಜನರು ಇವೆಂಟ್ ಗೆ ಸೇರುವುದರಿಂದ ಭದ್ರತೆ ಕೊಡುವುದು ಕಷ್ಟ ಎಂದು ಸರಕಾರ ತಿಳಿಸಿದ್ದರಿಂದ ಅನಿವಾರ್ಯವಾಗಿ ಕಾರ್ಯಕ್ರಮವನ್ನು ರದ್ದು ಮಾಡಿತ್ತು ಚಿತ್ರತಂಡ. ಇದನ್ನೂ ಓದಿ:ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

    ಆದರೂ, ಬ್ರಹ್ಮಾಸ್ತ್ರ ಸಿನಿಮಾ ತಮ್ಮದೇ ಎನ್ನುವಂತೆ ಪ್ರಚಾರ ಮಾಡಿದರು ರಾಜಮೌಳಿ. ಸಿನಿಮಾ ಟೀಮ್ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ದಕ್ಷಿಣದ ಥಿಯೇಟರ್ ಗಳು ಸಿಗುವಂತೆ ನೋಡಿಕೊಂಡರು. ಕರ್ನಾಟಕವೂ ಸೇರಿದಂತೆ ಹಲವು ಕಡೆ ಹಿಂದಿಗಿಂತ ಬೇರೆ ಭಾಷೆಯ, ಅದರಲ್ಲೂ ತೆಲುಗು ಡಬ್ ಸಿನಿಮಾ ಹೆಚ್ಚು ಬಿಡುಗಡೆ ಆಗುವಂತೆ ನೋಡಿಕೊಂಡರು. ಇದಕ್ಕೆಲ್ಲ ರಾಜಮೌಳಿ ಹತ್ತು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]