Tag: ಬ್ರಹ್ಮರಥೋತ್ಸವ

  • ಅರ್ಚಕ ಕುಟುಂಬಗಳ ನಡುವೆ ಪ್ರತಿಷ್ಠೆಯ ಜಗಳ  – ಗೌರಿಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ರದ್ದು

    ಅರ್ಚಕ ಕುಟುಂಬಗಳ ನಡುವೆ ಪ್ರತಿಷ್ಠೆಯ ಜಗಳ – ಗೌರಿಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ರದ್ದು

    ಕೋಲಾರ: ಎರಡು ಅರ್ಚಕ ಕುಟುಂಬಗಳ ನಡುವೆ ಇರುವ ಪ್ರತಿಷ್ಠೆಯಿಂದ ಗೌರಿಗಂಗಾಧರೇಶ್ವರ ಸ್ವಾಮಿ (Gowri Gangadhareshwara Swami Temple) ಬ್ರಹ್ಮರಥೋತ್ಸವಕ್ಕೆ (Brahma Rathotsava) ತಡೆಯಾಜ್ಞೆ ತಂದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ (Kolara) ತಾಲೂಕು ತೇರಹಳ್ಳಿ ಗ್ರಾಮದ ಪುರಾತನ ಗೌರಿಗಂಗಾಧರೇಶ್ವರ ಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಮಾರ್ಚ್‌ 17 ರಂದು ನಡೆಯಬೇಕಿತ್ತು. ಆದರೆ ಅರ್ಚಕರ ಕುಟುಂಬಗಳ ನಡುವಿನ ವಿವಾದದ ನಡೆದ ಕಾರಣ ಹೈಕೋರ್ಟ್‌ (High Court) ತಡೆಯಾಜ್ಞೆ ನೀಡಿದ್ದು ಬ್ರಹ್ಮರಥೋತ್ಸವವನ್ನು ಮುಂದೂಡಲಾಗಿದೆ. ಇದನ್ನೂ ಓದಿ: ಆಪರೇಷನ್‌ಗೆ ಸಿದ್ದರಿದ್ವಿ ಒಳ್ಳೆಯ ಹುಲಿಗಳು ಇದ್ದವು, ನಮ್ಮವರೇ ಕೆಲವರು ಒಪ್ಪಲಿಲ್ಲ: ಡಿಕೆಶಿ

    ಅರ್ಚಕರಾದ ಮಂಜುನಾಥ್ ದೀಕ್ಷಿತ್ ಹಾಗೂ ಚಂದ್ರಶೇಖರ ದೀಕ್ಷಿತ್ ನಡುವೆ ರಥೋತ್ಸವ ಮಾಡುವ ವಿಚಾರದಲ್ಲಿ ಮೊದಲಿನಿಂದಲೂ ವಿವಾದ ಇತ್ತು. ಆದರೆ ಮುಜರಾಯಿ ತಹಶಿಲ್ದಾರ್ ಮಾರ್ಚ್ 17 ರಂದು ಬ್ರಹ್ಮರಥೋತ್ಸವಕ್ಕೆ ಅನುಮತಿ ನೀಡಿದ್ದರು.

    ಆಗಮ ಶಾಸ್ತ್ರದ ಪ್ರಕಾರ ಒಂದೇ ವರ್ಷದಲ್ಲಿ ಎರಡು ಬಾರಿ ಬ್ರಹ್ಮರಥೋತ್ಸವ ಮಾಡಬಾರದೆಂದು ಕೋರಿ ಮಂಜುನಾಥ್ ದೀಕ್ಷಿತ್‌ ಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್ ತಡೆಯಾಜ್ಞೆ ಹಿನ್ನಲೆ ನಿಗದಿ ಮಾಡಿದ್ದ ಬ್ರಹ್ಮರಥೋತ್ಸವ ರದ್ದು ಮಾಡಿ ತಹಶೀಲ್ದಾರ್ ಆದೇಶ ಮಾಡಿದ್ದಾರೆ. ಇದನ್ನೂ ಓದಿ: WPL 2024: ಅಂಪೈರ್‌ ಎಡವಟ್ಟು – ಫಿಕ್ಸಿಂಗ್‌ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್‌

    ಸದ್ಯ ಗ್ರಾಮಸ್ಥರ ಮನವೊಲಿಸಿ ಮುಜರಾಯಿ ಅಧಿಕಾರಿಗಳು ಬ್ರಹ್ಮರಥೋತ್ಸವವ ದಿನಾಂಕವನ್ನು ಮುಂದೂಡಿದ್ದಾರೆ.

  • ಇತಿಹಾಸ ಪ್ರಸಿದ್ಧ ದೇವರಹೋಸಹಳ್ಳಿ ಬ್ರಹ್ಮರಥೋತ್ಸವ – ಹಿಂದೂ, ಮುಸ್ಲಿಂ ಭಾವೈಕ್ಯ ಸಾಕ್ಷಿ

    ಇತಿಹಾಸ ಪ್ರಸಿದ್ಧ ದೇವರಹೋಸಹಳ್ಳಿ ಬ್ರಹ್ಮರಥೋತ್ಸವ – ಹಿಂದೂ, ಮುಸ್ಲಿಂ ಭಾವೈಕ್ಯ ಸಾಕ್ಷಿ

    ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತೀದೊಡ್ಡ ಬ್ರಹ್ಮರಥೋತ್ಸವ ಕೋವಿಡ್ ನಂತರ ಯಶಸ್ವಿಯಾಗಿದೆ. ಸುಮಾರು 1 ಲಕ್ಷ ಭಕ್ತರ ಸಮ್ಮುಖದಲ್ಲಿ ದೇವರಹೊಸಹಳ್ಳಿಯ ಶ್ರೀ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ವೈಭವಯುತವಾದ ಬ್ರಹ್ಮರಥೋತ್ಸವ ಸಂಪನ್ನವಾಗಿದೆ.

    ಬ್ರಹ್ಮರಥೋತ್ಸವದಲ್ಲಿ ಒಂದೆಂಡೆ ಸಾಲು-ಸಾಲು ಭಕ್ತರು, ಜಾನಪದ ಕಲಾ ಪ್ರಕಾರಗಳು, ಅರವಂಟಿಕೆಗಳು, ನೆಲಮಂಗಲ ತಾಲೂಕಿನ ದೇವರಹೊಸಹಳ್ಳಿಯ ಬ್ರಹ್ಮರಥೋತ್ಸವ ಇಂದು ಮಿಥುನ ಲಗ್ನದಲ್ಲಿ 01.30ಕ್ಕೆ ಸಂಪನ್ನಗೊಂಡಿತ್ತು. ಪ್ರಕೃತಿ ಮಡಿಲಿನಲ್ಲಿರುವ ಶ್ರೀ ವೀರಭದ್ರ ಸ್ವಾಮಿಗೆ ಹಲವಾರು ಭಕ್ತರು ಉಘೇ ಹೇಳಿದರು. ಮುಜರಾಯಿ ಇಲಾಖೆ, ಪೆÇಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಗ್ನಿಶಾಮಕ ಠಾಣೆಯ ಸಹಕಾರದೊಂದಿಗೆ, ಕೋವಿಡ್ ನಂತರ ಅತ್ಯಂತ ದೊಡ್ಡ ಬ್ರಹ್ಮರಥೋತ್ಸವ ಯಶಸ್ವಿಯಾಯಿತು. ಇದನ್ನೂ ಓದಿ: ಬಿಹಾರ ದಿವಸ್ ಆಚರಣೆಯಲ್ಲಿ ಆಹಾರ ಸೇವಿಸಿದ 100 ಮಕ್ಕಳು ಆಸ್ಪತ್ರೆಗೆ ದಾಖಲು

    ಪ್ರಧಾನ ಅರ್ಚಕರಾದ ಜಗಜ್ಯೋತಿ ಬಸವೇಶ್ವರ್ ಈ ವೇಳೆ ಮಾತನಾಡಿದ್ದು, ಗೂಳೂರಿನ ಪ್ರಾಂತ್ಯದ ಅಂದಿನ ಚಿಕ್ಕದೇವರಾಜ ಅರಸರು 1652ರಲ್ಲಿ ಜೀರ್ಣೋದ್ಧಾರ ಮಾಡಿದ ಸುಮಾರು 500 ವರ್ಷಗಳ ಪುರಾತನ ಇತಿಹಾಸವಿರುವ ದೇವಾಲಯವಾಗಿದೆ. ಕಳೆದ ಬಾರಿ ಕೋವಿಡ್‍ನಿಂದಾಗಿ ಬೆಳಗಿನ ಜಾವವೇ ರಥೋತ್ಸವ ಎಳೆದಿದ್ದರು ಎಂದು ವಿವರಿಸಿದರು.

    ಕೋವಿಡ್‍ನಿಂದ ಮುಕ್ತವಾದ ಈ ವರ್ಷ ಸರಿಯಾದ ವೇಳೆಯಲ್ಲಿ ರಥೋತ್ಸವ ನಡೆಯಿತು. ಇಂದು ರಾತ್ರಿ ಕಲ್ಯಾಣೋತ್ಸವ, ನಾಳೆ ಮುತ್ತಿನ ಪಲ್ಲಕ್ಕಿ, ಸಿಂಹವಾಹನದ ಜೊತೆಗೆ ಸೋಮವಾರದವರೆಗೆ ಎಲ್ಲ ಪ್ರಕ್ರಿಯೆ ನಡೆದು, ಮಂಗಳವಾರ ದೆವ್ವದ ಜಾತ್ರೆಯಿಂದ ಕೊನೆಗಾಣುತ್ತದೆ ಎಂದರು. ಇದನ್ನೂ ಓದಿ:  ವಿಸ್ತಾರವಾದ, ಪ್ರತ್ಯೇಕವಾದ ನಿಲ್ಲುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್

    ರಾಜ್ಯದ ಕೆಲವು ದೇವಾಲಯದ ಜಾತ್ರೆ ವೇಳೆ ಮುಸ್ಲಿಂ ಸಮುದಾಯದ ಜನರು ಅಂಗಡಿ ತೆರೆಯಲು ಅವಕಾಶ ನೀಡಿಲ್ಲ. ಆದರೆ ಇಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ಬೇಧ-ಭಾವವಿಲ್ಲದೆ ಎಲ್ಲರು ಒಟ್ಟಾಗಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು ಭಾವೈಕ್ಯತೆಗೆ ಕಾರಣವಾಗಿದೆ.

  • ಉಡುಪಿ ಕೃಷ್ಣ ಮಠದಲ್ಲಿ ಹಗಲು ಉತ್ಸವ – ಅಷ್ಟಮಠಾಧೀಶರು ಭಾಗಿ

    ಉಡುಪಿ ಕೃಷ್ಣ ಮಠದಲ್ಲಿ ಹಗಲು ಉತ್ಸವ – ಅಷ್ಟಮಠಾಧೀಶರು ಭಾಗಿ

    ಉಡುಪಿ: ಅಷ್ಟಮಠಗಳ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಮಠದ ವಾರ್ಷಿಕೋತ್ಸವ ನಡೆಯಿತು. ಕೃಷ್ಣನ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಹಗಲಿನಲ್ಲಿ ಒಂದು ಉತ್ಸವವನ್ನು ಮಾಡಿದ್ದರು. ಆ ಪರಂಪರೆ ಇಂದಿಗೂ ಮುಂದುವರೆದಿದ್ದು, ಕೊರೊನಾ ಸಾಂಕ್ರಾಮಿಕದ ನಡುವೆ ಸಾಂಪ್ರದಾಯಕ್ಕೆ ಚ್ಯುತಿ ಬರದಂತೆ ಉತ್ಸವ ನಡೆಸಲಾಯಿತು.

    ದೇವಾಲಯಗಳ ನಗರಿ ಉಡುಪಿಯಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ ನಡೆಯಿತು. ಕೃಷ್ಣ ಮುಖ್ಯಪ್ರಾಣ ದೇವರನ್ನು ರಥದಲ್ಲಿಟ್ಟು ಸಾಂಪ್ರದಾಯಿಕ ಹಗಲು ಉತ್ಸವ ಮಾಡಲಾಯಿತು. 8 ಶತಮಾನದ ಹಿಂದೆ ಆಚಾರ್ಯ ಮಧ್ವರು ಉಡುಪಿ ಕೃಷ್ಣ ಮಠವನ್ನು ಸ್ಥಾಪನೆ ಮಾಡಿದರು. ಸಂಕ್ರಾಂತಿಯಂದು ಕಡೆಗೋಲು ಕೃಷ್ಣನ ಪ್ರತಿಷ್ಠಾಪನೆ ಮಾಡಿದ ಮಾರನೆ ದಿನ ಬೆಳಗ್ಗೆ ಹಗಲು ಉತ್ಸವ ನಡೆಸಿದ್ದಾರೆ. ಈ ಪ್ರತೀತಿ ಇಂದಿಗೂ ನಡೆದುಕೊಂಡು ಬರುತ್ತಿದೆ. ಇದನ್ನೂ ಓದಿ: ನೇತಾಜಿ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭ

    ಕೆಲ ಭಕ್ತರಿಂದ ನಿಯಮ ಉಲ್ಲಂಘನೆ
    ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ವ್ಯಾಪಿಸಿರುವ ಕಾರಣ ಉತ್ಸವದಲ್ಲಿ ಸಾವಿರಾರು ಜನ ಭಾಗಿಯಾಗುತ್ತಿಲ್ಲ. ಉಡುಪಿ ಜಿಲ್ಲಾಡಳಿತ ಸಾಂಪ್ರದಾಯಿಕ ಆಚರಣೆಗೆ ಅವಕಾಶ ಕೊಟ್ಟಿರುವುದರಿಂದ ಇಂದು 500 ರಿಂದ 600 ಜನ ರಥೋತ್ಸವದಲ್ಲಿ ಭಾಗಿಯಾದರು.  ಭಾಗವಹಿಸಿದ್ದ ಬಹುತೇಕ ಜನ ಮಾಸ್ಕ್‌ ಧರಿಸಿದ್ದರೂ ಕೆಲವರು ಮಾಸ್ಕ್‌ ಧರಿಸದೇ ಕೋವಿಡ್‌ ನಿಯಮವನ್ನು ಉಲ್ಲಂಘಿಸಿದ್ದರು.

    ರಥ ಎಳೆಯುವ ಸಂದರ್ಭ ಮತ್ತು ರಥದಿಂದ ಪ್ರಸಾದ ಸ್ವೀಕರಿಸುವ ಸಂದರ್ಭ ಭಕ್ತರು ಕೊರೊನಾ ನಿಯಮ ಪಾಲಿಸಿಲ್ಲ. ಪ್ರತಿ ವರ್ಷ ನಡೆಯುವ ಹಗಲು ಉತ್ಸವದಲ್ಲಿ 10 ರಿಂದ 20 ಸಾವಿರ ಜನ ಪಾಲ್ಗೊಳ್ಳುತ್ತಾರೆ. ಅದ್ಧೂರಿ ಅವಕಾಶ ಇರದ ಕಾರಣ ಕೆಲ ಭಕ್ತರಿಗೆ ನೋವಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಮಠದ ಭಕ್ತ ರವಿಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ರಾಜಭವನದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದ ರಾಜ್ಯಪಾಲರು

    ಅಷ್ಟಮಠಗಳ ಯತಿಗಳು ಉತ್ಸವದಲ್ಲಿ ಭಾಗಿಯಾಗಿ ದೇವರಿಗೆ ಪೂಜೆ ಸಲ್ಲಿಸಿದರು. ಕೃಷ್ಣನ ಪ್ರಸಾದವನ್ನು ತೇರಿನಿಂದಲೇ ವಿತರಣೆ ಮಾಡಿದರು. ಎರಡು ವರ್ಷಗಳ ಕಾಲ ಉಡುಪಿ ಕೃಷ್ಣನ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠಕ್ಕಿತ್ತು. ಜನವರಿ 18 ರಿಂದ ಮುಂದಿನ ಎರಡು ವರ್ಷ ಅಧಿಕಾರ ಕೃಷ್ಣಾಪುರ ಮಠಕ್ಕೆ ಹಸ್ತಾಂತರ ಆಗಲಿದೆ.

  • ಹುಟ್ಟೂರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತು ಸಾಗಿದ ನಟ ಅರ್ಜುನ್ ಸರ್ಜಾ ಕುಟುಂಬ

    ಹುಟ್ಟೂರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತು ಸಾಗಿದ ನಟ ಅರ್ಜುನ್ ಸರ್ಜಾ ಕುಟುಂಬ

    ತುಮಕೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಹುಟ್ಟೂರಿನ ಜಾತ್ರೆಯಲ್ಲಿ ದೇವರ ಪಲ್ಲಕ್ಕಿ ಹೊತ್ತು ಸಾಗಿ ಕೃತಾರ್ಥರಾಗಿದ್ದಾರೆ.

    ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ಅಹೋಬಲ ಲಕ್ಷ್ಮಿ ನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಅರ್ಜುನ್ ಸರ್ಜಾ ದಂಪತಿ ಹಾಗೂ ಧ್ರುವ ಸರ್ಜಾ ದಂಪತಿ ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ದಂಪತಿ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಲ್ಲಕ್ಕಿ ಹೊತ್ತರು. ನಂತರ ತೇರು ಎಳೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಉಭಯ ನಟರಿಗೆ ಅಭಿಮಾನಿಗಳು ಸುತ್ತುವರೆದು ಸೆಲ್ಫಿಗಾಗಿ ಮುಗಿಬಿದ್ದರು.

    ಬ್ರಹ್ಮರಥೋತ್ಸವಕ್ಕೆ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ, ತಹಶೀಲ್ದಾರ್ ಮೋಹನ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸವಿತಾ ಸೇರಿದಂತೆ ಮತ್ತಿತರ ಗಣ್ಯರು ಚಾಲನೆ ನೀಡಿದರು.

    ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದಿತ್ತು. ರಥೋತ್ಸವದ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು ಮತ್ತು ಹೂವನ್ನು ಎಸೆಯುವುದು ಕಂಡು ಬಂದಿತು. ಭಕ್ತರಿಗೆ ಅನ್ನ ದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತವು ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು.

  • ವಿಜೃಂಭಣೆಯಿಂದ ಜರುಗಿದ ದೇವರಾಯನದುರ್ಗದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

    ವಿಜೃಂಭಣೆಯಿಂದ ಜರುಗಿದ ದೇವರಾಯನದುರ್ಗದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

    ತುಮಕೂರು: ಪ್ರವಾಸಿಗರ ಸ್ವರ್ಗ, ಯಾತ್ರಾರ್ಥಿಗಳ ಆತ್ಮ ಎಂದೇ ಕರೆಯಿಸಿಕೊಳ್ಳುವ ತಾಲೂಕಿನ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಇಂದು ಸಾವಿರಾರು ಸಂಖ್ಯೆ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

    ಬ್ರಹ್ಮರಥೋತ್ಸವಕ್ಕೆ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ, ತಹಶೀಲ್ದಾರ್ ಮೋಹನ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸವಿತಾ ಸೇರಿದಂತೆ ಮತ್ತಿತರ ಗಣ್ಯರು ಚಾಲನೆ ನೀಡಿದರು.

    ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದಿತ್ತು. ರಥೋತ್ಸವದ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು ಮತ್ತು ಹೂವನ್ನು ಎಸೆಯುವುದು ಕಂಡು ಬಂದಿತು. ಭಕ್ತರಿಗೆ ಅನ್ನ ದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತವು ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು.

    ಡಿಡಿ ಹಿಲ್ಸ್ ಎಂದೇ ಖ್ಯಾತಿಯಾಗಿರುವ ಈ ಅರಣ್ಯ ಪ್ರದೇಶ ಅಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಬೆಟ್ಟ ಗುಡ್ಡಗಳ ಈ ತಾಣದ ನಡುವೆ ನರಸಿಂಹ ಸ್ವಾಮಿ ದೇವಾಲಯ ಇದೆ. ಹಾಗಾಗಿ ಈ ಜಾತ್ರೆ ಪ್ರಾಮುಖ್ಯತೆ ಪಡೆದುಕೊಂಡಿದೆ.

  • ಅದ್ದೂರಿಯಾಗಿ ನಡೆದ ಮಂಗ್ಳೂರು ರಥೋತ್ಸವ

    ಅದ್ದೂರಿಯಾಗಿ ನಡೆದ ಮಂಗ್ಳೂರು ರಥೋತ್ಸವ

    ಮಂಗಳೂರು: ನಗರದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.

    ವೆಂಕಟರಮಣ ದೇವಸ್ಥಾನದ ಪ್ರಧಾನ ದೇವರಾದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಪ್ರಯುಕ್ತ ಶ್ರೀ ದೇವರಿಗೆ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶತ ಕಲಶಾಭಿಷೇಕ, ಗಂಗಾಭಿಷೇಕ, ಪವಮಾನಾಭಿಷೇಕ, ಕನಕಾಭಿಷೇಕಗಳು ನೆರವೇರಿದವು.

    ಬ್ರಹ್ಮರಥೋತ್ಸವ ಪ್ರಯುಕ್ತ ಪ್ರಾತಃ ಕಾಲದಲ್ಲಿ ವಿಶೇಷ ಮಹಾ ಪ್ರಾರ್ಥನೆ ನಡೆದು ಬಳಿಕ ಶ್ರೀ ದೇವಳದ ಅರ್ಚಕರಿಂದ ಶ್ರೀದೇವರಿಗೆ ಪಂಚಾಮೃತ ಅಭಿಷೇಕ ನಡೆಯಿತು. ತದನಂತರ ಶ್ರೀದೇವರು ಯಜ್ಞಕ್ಕೆ ಛಿತೈಸಿ, ಯಜ್ಞ ಮಂಟಪದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಮಹಾ ಪೂರ್ಣ ಆಹುತಿ ನಡೆಯಿತು.

    ಸಾಯಂಕಾಲ ಕಾಶಿ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮ ರಥೋತ್ಸವ ಜರಗಿತು. ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡರು. ದೇವಳದ ಮೊಕ್ತೇಸರರಾದ ಸಿ.ಎಲ್ ಶೆಣೈ, ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್, ಹೈದರಾಬಾದಿನ ಉದ್ಯಮಿ ಅನಂತ್ ಪೈ, ಮುಂಡ್ಕುರು ರಾಮದಾಸ್ ಕಾಮತ್, ಮಾಜಿ ಮೊಕ್ತೇಸರರಾದ ಪದ್ಮನಾಭ ಪೈ ಮತ್ತಿತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

  • ಅದ್ಧೂರಿಯಾಗಿ ಸಾಗಿದ 99 ನೇ ವರ್ಷದ ಗಣಪತಿ ಬ್ರಹ್ಮರಥೋತ್ಸವ

    ಅದ್ಧೂರಿಯಾಗಿ ಸಾಗಿದ 99 ನೇ ವರ್ಷದ ಗಣಪತಿ ಬ್ರಹ್ಮರಥೋತ್ಸವ

    ಮಡಿಕೇರಿ: ಜಿಲ್ಲೆಯ ಗಡಿಭಾಗ ಕುಶಾಲನಗರದಲ್ಲಿ ಐತಿಹಾಸಿಕ ಗಣಪತಿ ದೇವಾಲಯದ 99ನೇ ವರ್ಷದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು.

    ಅಭಿಜಿನ್ ಲಗ್ನದಲ್ಲಿ ಅರಂಭವಾದ ಗಣಪತಿ ರಥಕ್ಕೆ ಸಾವಿರಾರು ಭಕ್ತರು ಬಾಳೆಹಣ್ಣು ಎಸೆದು ಭಕ್ತಿಭಾವ ಮೆರೆದರು. ಇದಕ್ಕೂ ಮೊದಲು ದೇವಾಲಯದ ಒಳಗಿನಿಂದ ಬೆಳ್ಳಿಯ ಗಣಪತಿ ಉತ್ಸವ ಮೂರ್ತಿಯನ್ನು ಹೊರಗೆ ತರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಗಣಪತಿಬಪ್ಪಾ ಮೋರಿಯಾ ಎಂದು ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.

    ದೇವಾಲಯ ಮುಂಭಾಗ ನೂರಾರು ಅಯ್ಯಪ್ಪ ಭಕ್ತ ಮಾಲಾಧಾರಿಗಳು ಓಂ ಆಕಾರದಲ್ಲಿ ಕರ್ಪೂರ ಹಚ್ಚಿ ಭಜಿಸಿದರು. ಒಂದುಗಂಟೆಗೆ ಸರಿಯಾಗಿ ಆರಂಭವಾದ ರಥೋತ್ಸವಕ್ಕೆ ಸಾವಿರಾರು ಭಕ್ತರು ತೆಂಗಿನ ಕಾಯಿಗಳನ್ನು ಈಡುಗಾಯಿ ಹೊಡೆದು ತಮ್ಮ ಇಷ್ಟಾರ್ಥಗಳು ಫಲಿಸಲೆಂದು ಹರಕೆ ತೀರಿಸಿದರು.

    ಗಣಪತಿ ದೇವಾಲಯದಿಂದ ರಥಬೀದಿಯ ಮೂಲಕ ಆಂಜನೇಯ ದೇವಾಲಯದವರೆಗೆ ಸಾವಿರಾರು ಭಕ್ತರು ರಥ ಎಳೆದು ಭಕ್ತಿ ಮೆರೆದರು. ದೇಶದಲ್ಲಿಯೇ ಇದು ಪ್ರತೀ ವರ್ಷದ ಮೊದಲ ಮತ್ತು ಗಣಪತಿ ರಥೋತ್ಸವ ಎನ್ನೋದು ವಿಶೇಷ. ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಬಾಬು ನೇತೃತ್ವದಲ್ಲಿ ರಥೋತ್ಸವ ನೆರವೇರಿತು.

  • ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಬ್ರಹ್ಮರಥೋತ್ಸವ ಹರಕೆ

    ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಬ್ರಹ್ಮರಥೋತ್ಸವ ಹರಕೆ

    ಉಡುಪಿ: ಹಲವಾರು ವಿಚಾರದಲ್ಲಿ ಹರಕೆ ಹೊತ್ತು ಕೃಷ್ಣಮಠದಲ್ಲಿ ಭಕ್ತರು ಉತ್ಸವ ಮಾಡಿಸುತ್ತಾರೆ. ಮನಸ್ಸಿನಲ್ಲಿ ಅಂದುಕೊಂಡಿದ್ದು ನೆರವೇರಿದರೆ ಮಠಕ್ಕೆ ಬಂದು ರಥೋತ್ಸವ ನೆರವೇರಿಸುತ್ತಾರೆ. ಉಡುಪಿಯಲ್ಲಿ ಬೇರೆಯದ್ದೇ ಒಂದು ಕಾರಣಕ್ಕೆ ಬ್ರಹ್ಮ ರಥೋತ್ಸವದ ಹರಕೆ ನಡೆದಿದೆ. ಹರಕೆ ಹೊರಲು ಕಾರಣ ಕೇಳಿದ್ರೆ ನೀವು ಅಚ್ಚರಿಪಡುತ್ತೀರಿ.

    ಉಡುಪಿ ಕೃಷ್ಣಮಠದ ರಥಬೀದಿಯಲ್ಲಿ ರಥೋತ್ಸವ ಸಂಭ್ರಮ. ಜೈಕಾರ ಹಾಕುತ್ತಾ ಬ್ರಹ್ಮರಥ ಎಳೆದ ಯುವಕರು. ಈ ಬ್ರಹ್ಮರಥದ ಉತ್ಸವಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ದೆಹಲಿಯಲ್ಲಿರುವ ಪ್ರಧಾನಿಗೂ ಉಡುಪಿಯಲ್ಲಿರುವ ಕೃಷ್ಣ ಮುಖ್ಯಪ್ರಾಣನ ಉತ್ಸವಕ್ಕೂ ಏನು ಸಂಬಂಧ ಅಂತ ತಲೆಕೆಡಿಸಿಕೊಳ್ಳಬೇಡಿ. ಸಂಬಂಧ ಇದೆ. ಉಡುಪಿಯ ಸುಮಾರು 10 ಮಂದಿ ಪ್ರಧಾನಿ ಮೋದಿ ಅಭಿಮಾನಿಗಳು ಉಡುಪಿಯಲ್ಲಿ ಬ್ರಹ್ಮರಥೋತ್ವವದ ಹರಕೆ ಹೊತ್ತಿದ್ದಾರೆ. ಪ್ರಧಾನಿ ಮೋದಿ ಮುಂದಿನ ಅವಧಿಗೂ ಪ್ರಧಾನಿಯಾಗಲಿ ಎಂದು ಈ ಹರಕೆ ಹೊತ್ತಿದ್ದಾರೆ. ಅದರಂತೆ ಅಷ್ಟಮಠಗಳ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಸೇವೆ ನೀಡಿದ್ದಾರೆ.

    ಮೋದಿ ತನಗಾಗಿ ಅಥವಾ ತನ್ನ ಕುಟುಂಬಕ್ಕಾಗಿ ಹಗಲು ರಾತ್ರಿ ದುಡಿಯುತ್ತಿಲ್ಲ. ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರು ಮತ್ತೆ ಪ್ರಧಾನಿಯಾದರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ಈ ಕಾರಣಕ್ಕಾಗಿ ನಮ್ಮದೊಂದು ಪುಟ್ಟ ಸೇವೆ. ಭಗವಂತನ ಆಶೀರ್ವಾದ ಅವರ ಮೇಲಿರಲಿ ಎಂಬ ಕಾರಣಕ್ಕೆ ಬ್ರಹ್ಮರಥೋತ್ಸವ ಸೇವೆ ನೀಡಿದ್ದೇವೆ ಎಂದು ಹರಕೆ ಹೊತ್ತ ತಂಡದ ಸದಸ್ಯ ಅನಿರುದ್ಧ್ ಐತಾಳ್ ಹೇಳಿದರು.

    ಸುಮಾರು 10 ಯುವಕರು ಬ್ರಹ್ಮರಥೋತ್ಸವ ಸೇವೆಯನ್ನು ಕೃಷ್ಣಮಠದಲ್ಲಿ ಬುಕ್ ಮಾಡಿಸಿದ್ದಾರೆ. ಕಾಕತಾಳೀಯ ಎಂಬಂತೆ ಮಧ್ಯಂತರ ಬಜೆಟ್ ದಿನವೇ ಹರಕೆ ತೀರಿಸುವ ಇವರಿಗೆ ಅವಕಾಶ ಸಿಕ್ಕಿದೆ. ಬ್ರಹ್ಮರಥೋತ್ಸವದಲ್ಲಿ ಕೃಷ್ಣಮಠದ ಪರ್ಯಾಯ ಪಲಿಮಾರು ಸ್ವಾಮೀಜಿ, ಅದಮಾರು ಸ್ವಾಮೀಜಿ ಕೂಡಾ ಪಾಲ್ಗೊಂಡರು. ರಥಬೀದಿಯಲ್ಲಿ ದೇಸಿ ಪಟಾಕಿ ಸೇವೆ ಕೂಡಾ ನೆರವೇರಿತು. ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ ಅಂತ ಪ್ರಾರ್ಥಿಸಲಾಯ್ತು.

    ಕೇವಲ ಉಡುಪಿಯ ಯುವಕರ ಕನಸಲ್ಲ ಇದು. ಇಡೀ ದೇಶದ ಯುವ ಪೀಳಿಗೆ ಇಂತಹ ಕನಸು ಕಾಣುತ್ತಿದೆ. ಪಾರದರ್ಶಕ ಮತ್ತು ಪಕ್ಷಪಾತವಿಲ್ಲದ ಆಡಳಿತದ ಅಪೇಕ್ಷೆಯನ್ನು ದೇಶದ ಜನ ಮಾಡುತ್ತಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದೆ ಎಂಬ ಭಾವನೆ ಜನರಲ್ಲಿದೆ ಎಂದು ಕೃಷ್ಣಮಠದ ಭಕ್ತ ವಾಸುದೇವ ಭಟ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು. ಪ್ರಧಾನಿ ಮೋದಿಗಾಗಿ ಬ್ರಹ್ಮರಥೋತ್ಸವ ನಡೆಯುತ್ತಿರುವ ವಿಷಯ ತಿಳಿದ ವಿದೇಶಿ ಪ್ರವಾಸಿಗರು ಕೂಡಾ ಉತ್ಸವದಲ್ಲಿ ಪಾಲ್ಗೊಂಡರು. ತಮ್ಮದೇ ಶೈಲಿಯಲ್ಲಿ ರಥದ ಮುಂದೆ ಸಂಭ್ರಮಪಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಭಕ್ತನಿಂದ ತಿಮ್ಮಪ್ಪನಿಗೆ 1008 ಸ್ವರ್ಣ ನಾಣ್ಯಗಳ ಹಾರ ಕಾಣಿಕೆ!

    ಭಕ್ತನಿಂದ ತಿಮ್ಮಪ್ಪನಿಗೆ 1008 ಸ್ವರ್ಣ ನಾಣ್ಯಗಳ ಹಾರ ಕಾಣಿಕೆ!

    ತಿರುಪತಿ: ತಿಮ್ಮಪ್ಪನ ವಾರ್ಷಿಕ ಬ್ರಹ್ಮ ರಥೋತ್ಸವ ಶುರುವಾಗಿದ್ದು ಭಕ್ತಾಧಿಗಳು ಹಲವು ಕಾಣಿಕೆಯನ್ನು ಒಪ್ಪಿಸುತ್ತಿದ್ದಾರೆ. ಅಂತೆಯೇ ವಿಜಯವಾಡ ಮೂಲದ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ ಸುಮಾರು 8.36 ಕೋಟಿ ರೂಪಾಯಿ ಮೌಲ್ಯದ ‘ಸಹಸ್ರ ನಾಮ ಮಾಲಾ’ (ಸ್ವರ್ಣ ಹಾರ) ಕಾಣಿಕೆಯಾಗಿ ಅರ್ಪಿಸಿದ್ದಾರೆ.

    ರಾಮಲಿಂಗ ರಾಜು ಎಂಬವರು ಹಬ್ಬ ಮೊದಲನೇ ದಿನದಂದೇ ಸುಮಾರು 28 ಕೆ.ಜಿ ತೂಕದ ವೆಂಕಟೇಶ್ವರನ 1008 ಪವಿತ್ರ ನಾಮಗಳ 1008 ಸ್ವರ್ಣ ನಾಣ್ಯಗಳಿಂದ ಸಿದ್ಧಪಡಿಸಿರುವ ಹಾರವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಉಪಸ್ಥಿತಿಯಲ್ಲಿ ತಿಮ್ಮಪ್ಪನಿಗೆ ಸಮರ್ಪಿಸಿದ್ದಾರೆ.

    ದೇವಸ್ಥಾನದ ಆಡಳಿತ ಮಂಡಳಿ ಹೇಳುವಂತೆ, ಪ್ರತೀ ವರ್ಷದ ಬ್ರಹ್ಮ ರಥೋತ್ಸವ ಹಬ್ಬದಂದು ಭಕ್ತಾದಿಗಳು ವಿವಿಧ ರೀತಿಯ ಕಾಣಿಕೆಯನ್ನು ತಿಮ್ಮಪ್ಪನಿಗೆ ಒಪ್ಪಿಸುತ್ತಾರೆ. ಅಂತೆಯೆ ರಾಮಲಿಂಗ ರಾಜು ಕೂಡ ದೇವರಿಗೆ ಕಾಣಿಕೆ ನೀಡಿದ್ದಾರೆ.

    ಪ್ರತಿವರ್ಷ ಆಂಧ್ರ ಸರ್ಕಾರ ತಿಮ್ಮಪ್ಪನಿಗೆ ಹಲವಾರು ಕಾಣಿಕೆಯನ್ನು ನೀಡುತ್ತಾ ಬರುತ್ತಿದೆ. ಮೊದಲ ದಿನವಾದ್ದರಿಂದ ಸರ್ಕಾರದ ಪರವಾಗಿ ಚಂದ್ರಬಾಬು ನಾಯ್ಡು ತಿಮ್ಮಪ್ಪನಿಗೆ ರೇಷ್ಮೆ ಉಡುಪನ್ನು ಕಾಣಿಕೆ ನೀಡಿದೆ ಎಂದು ದೇವಸ್ಥಾನ ಮಂಡಳಿಯ ಮೂಲಗಳು ತಿಳಿಸಿವೆ.