Tag: ಬ್ರಹ್ಮಚಾರಿ

  • ನವಿರುಹಾಸ್ಯದೊಂದಿಗೆ ಪ್ರೇಕ್ಷಕರ ಮನಗೆದ್ದ ಬ್ರಹ್ಮಚಾರಿ!

    ನವಿರುಹಾಸ್ಯದೊಂದಿಗೆ ಪ್ರೇಕ್ಷಕರ ಮನಗೆದ್ದ ಬ್ರಹ್ಮಚಾರಿ!

    ಬೆಂಗಳೂರು: ಕೆಲವೇಕೆಲ ನಿರ್ದೇಶಕರಿಗೆ ಮಾತ್ರವೇ ಇಡೀ ಸಿನಿಮಾದ ತುಂಬಾ ಹಾಸ್ಯರಸವನ್ನು ಪರಿಣಾಮಕಾರಿಯಾಗಿ ಜಿನುಗಿಸುವ ಕಲೆ ಸಿದ್ಧಿಸಿರುತ್ತದೆ. ಅಂಥವರ ಸಾಲಿನಲ್ಲಿ ಚಂದ್ರಮೋಹನ್ ಕೂಡಾ ಸೇರಿಕೊಳ್ಳುತ್ತಾರೆ. ಈ ವಿಚಾರವನ್ನು ‘ಬ್ರಹ್ಮಚಾರಿ’ ಚಿತ್ರದ ಅಮೋಘ ಪ್ರದರ್ಶನವೇಸಾಕ್ಷೀಕರಿಸುವಂತಿದೆ. ಇದರೊಂದಿಗೆ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವಜೋಡಿಯೂ ಮಸ್ತಾಗಿರೋ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದಿದೆ.

    ಆರಂಭದಿಂದಕಡೇಯವರೆಗೂ ಕಚಗುಳಿಯಿಡುತ್ತಾ ಸಾಗುವ ನವಿರು ಹಾಸ್ಯ ಬೆರೆತ ಮನೋರಂಜನಾತ್ಮಕಕಥೆಗೆ ಪ್ರೇಕ್ಷಕರೆಲ್ಲ ಮನ ಸೋತಿದ್ದಾರೆ. ಈ ಬಲದಿಂದಲೇ ಭರ್ಜರಿ ಗೆಲುವುದಕ್ಕಿಸಿಕೊಳ್ಳುವ ಹುಮ್ಮಸ್ಸಿನೊಂದುಗೆ ಬ್ರಹ್ಮಚಾರಿ ಮುಂದುವರೆಯುತ್ತಿದ್ದಾನೆ. ಇದು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿರುವ ಚಿತ್ರ. ಅವರು ನಿರ್ಮಾಣ ಮಾಡಿದ್ದಾರೆಂದರೆ ಅದ್ದೂರಿಯಾಗಿರುತ್ತದೆ, ಕಥೆಯೂ ಭಿನ್ನವಾಗಿರುತ್ತದೆಂಬ ಪ್ರೇಕ್ಷಕರ ನಂಬಿಕೆ ಬ್ರಹ್ಮಚಾರಿಯ ಮೂಲಕವೂ ಮುಂದುವರೆದಿದೆ.

    ಇದರೊಂದಿಗೆ ಅಯೋಗ್ಯ ಚಿತ್ರದಿಂದ ಶುರುವಾದ ನೀನಾಸಂ ಸತೀಶ್ ಅವರ ಮಹಾ ಗೆಲುವಿನ ಪರ್ವವೂ ಅನೂಚಾನವಾಗಿಯೇ ಮುಂದುವರೆಯುತ್ತಿದೆ. ಗಂಡಸರ ಬೆಡ್‍ರೂಂ ಸಮಸ್ಯೆಗಳನ್ನೇ ಕೇಂದ್ರವಾಗಿಟ್ಟುಕೊಂಡ ಚಿತ್ರಗಳು ಕಾಶೀನಾಥ್ ಜಮಾನದಲ್ಲಿಯೇ ಬಂದಿವೆ. ಇದೂ ಕೂಡಾ ಅದೇ ಜಾಡಿನದ್ದಾದರೂ ಬ್ರಹ್ಮಚಾರಿಯನ್ನು ಚಂದ್ರಮೋಹನ್ ಬೇರೆಯದ್ದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆರಂಭಿಕವಾಗಿ ಫಸ್ಟ್ ನೈಟ್ ಟೀಸರ್ ಮುಂತಾದವುಗಳ ಮೂಲಕ ಸದ್ದು ಮಾಡಿದ್ದ ಚಿತ್ರ ಬ್ರಹ್ಮಚಾರಿ. ನಂತರ ಟ್ರೇಲರ್‍ನಲ್ಲಿ ಕಾಣಿಸಿದ್ದ ಸಂಭಾಷಣೆಗಳನ್ನು ಕಂಡು ಫ್ಯಾಮಿಲಿ ಪ್ರೇಕ್ಷಕರು ಕೊಂಚ ಕಸಿವಿಸಿಗೊಂಡಂತಿದ್ದರು. ಆದರೆ ಇಡೀ ಚಿತ್ರದಲ್ಲಿ ಒಂದೇ ಒಂದು ವಲ್ಗರ್ ಅನ್ನಿಸುವಂಥಾದೃಷ್ಯ, ಡೈಲಾಗುಗಳಿಲ್ಲವೆಂದು ಚಿತ್ರತಂಡ ಅಡಿಗಡಿಗೆ ಹೇಳಿಕೊಂಡು ಬಂದಿತ್ತು. ಅದೂಕೂಡಾ ನಿಜವಾಗಿದೆ. ಈ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾಮಿಲಿ ಪ್ರೇಕ್ಷಕರು ಈ ಸಿನಿಮಾನೋಡಿ ಎಂಜಾಯ್ ಮಾಡಲಾರಂಭಿಸಿದ್ದಾರೆ.

    ಯಾವುದೇ ಸಿನಿಮಾಗಳಿಗಾದರೂ ಫ್ಯಾಮಿಲಿಪ್ರೇಕ್ಷಕರ ಸಾಥ್ ಸಿಕ್ಕರೆ ಗೆಲುವು ಸಲೀಸಾಗುತ್ತದೆ. ಈ ಪ್ರೀತಿಯಿಂದಲೇ ಬ್ರಹ್ಮಚಾರಿಯಶಸ್ವಿಯಾಗಿ ಎರಡನೇ ವಾರವನ್ನು ಪೂರೈಸಿಕೊಂಡು ಮುಂದುವರೆಯೋತವಕದಲ್ಲಿದ್ದಾನೆ. ರಾಜ್ಯಾದ್ಯಂತ ಈ ಕ್ಷಣಕ್ಕೂ ಸದರಿ ಚಿತ್ರ ಹೌಸ್ ಪುಲ್ ಪ್ರದರ್ಶನವನ್ನೇಕಾಣುತ್ತಿದೆ.

  • ನೋವನ್ನು ನಗೆಯಿಂದ ಶೃಂಗರಿಸಿಕೊಂಡ ಭರ್ಜರಿ ಬ್ರಹ್ಮಚಾರಿ!

    ನೋವನ್ನು ನಗೆಯಿಂದ ಶೃಂಗರಿಸಿಕೊಂಡ ಭರ್ಜರಿ ಬ್ರಹ್ಮಚಾರಿ!

    ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ತೆರೆ ಕಂಡಿದೆ. ಸಂಪೂರ್ಣವಾಗಿ ನಗುವಿನೊಂದಿಗೆ ಫಾಮಿಲಿ ಪ್ಯಾಕೇಜಿನಂತೆ ಮೂಡಿ ಬಂದಿರುವ ಬ್ರಹ್ಮಚಾರಿಯನ್ನು ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಈ ಹಿಂದೆಯೇ ಟೀಸರ್ ಮತ್ತು ಟ್ರೇಲರ್ ಗಳ ಮೂಲಕ ಬ್ರಹ್ಮಚಾರಿ ಕಥೆಯ ಬಗ್ಗೆ ಒಂದು ಅಂದಾಜು ಪ್ರೇಕ್ಷಕರಲ್ಲಿ ಮೂಡಿಕೊಂಡಿತ್ತು. ಆದರೆ ಇಲ್ಲಿ ಅದ್ಯಾವುದಕ್ಕೂ ನಿಲುಕದಂತಹ ಸೊಗಸಾದ ಕಥೆಯಿದೆ. ನಿರ್ಮಾಪಕ ಉದಯ್ ಕೆ ಮೆಹ್ತಾರ ಅದ್ಧೂರಿ ನಿರ್ಮಾಣ, ಚಂದ್ರಮೋಹನ್ ಅವರ ಮಾಂತ್ರಿಕ ನಿರ್ದೇಶನ ಮತ್ತು ನೀನಾಸಂ ಸತೀಶ್, ಅದಿತಿ ಪ್ರಭುದೇವ ಅವರ ಚೆಂದದ ನಟನೆಯೊಂದಿಗೆ ಬ್ರಹ್ಮಚಾರಿ ಕಳೆಗಟ್ಟಿಕೊಂಡಿದ್ದಾನೆ.

    ಬ್ರಹ್ಮಚಾರಿಗಿರೋದು ಯಾವ ಸಮಸ್ಯೆ ಅನ್ನೋದು ಪ್ರೇಕ್ಷಕರಿಗೆಲ್ಲ ಈ ಹಿಂದೆಯೇ ಗೊತ್ತಾಗಿ ಹೋಗಿತ್ತು. ಆದರೆ ಯಾರೂ ಊಹಿಸಿರದ ರೀತಿಯಲ್ಲಿ ಚಂದ್ರಮೋಹನ್ ಈ ಸಿನಿಮಾವನ್ನು ರೂಪಿಸಿದ್ದಾರೆ. ಯಾರೊಂದಿಗೂ ಹೇಳಿಕೊಳ್ಳಲು ಮುಜುಗರ ಪಡುವಂತಹ ಲೈಂಗಿಕ ಸಮಸ್ಯೆಗಳ ಬಗ್ಗೆ ಎಂಬತ್ತರ ದಶಕದಲ್ಲಿಯೇ ಒಂದಷ್ಟು ಸಿನಿಮಾಗಳು ಬಂದಿದ್ದವು. ಕಾಶೀನಾಥ್ ಅಂಥಾದ್ದೊಂದು ಪರಿಣಾಮಕಾರಿ ಪ್ರಯೋಗಗಳನ್ನು ಮಾಡಿದ ಮೊದಲಿಗರಾಗಿಯೂ ಗುರುತಿಸಿಕೊಂಡಿದ್ದಾರೆ. ಬ್ರಹ್ಮಚಾರಿ ಅದೇ ಜಾಡಿನಲ್ಲಿದ್ದರೂ ಅಪರೂಪದ ಚಿತ್ರವಾಗಿ ದಾಖಲಾಗುವಂತಿದೆ.

    ಈ ಚಿತ್ರದಲ್ಲಿ ನೀನಾಸಂ ಸತೀಶ್ ರಾಮು ಎಂಬ ಪಾತ್ರಕ್ಕೆ ಜೀವ ತುಂಬಿದ್ದರೆ, ಅದಿತಿ ಪ್ರಭುದೇವ ಸುನೀತಾ ಕೃಷ್ಣಮೂರ್ತಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ರಾಮು ಶ್ರೀರಾಮಚಂದ್ರನ ಭಕ್ತ. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಶ್ರೀರಾಮ ಚಂದ್ರನ ಆದರ್ಶಗಳನ್ನು ಪಾಲಿಸುತ್ತಾ ಮುಂದುವರಿಯುವ ಪ್ರತಿಜ್ಞೆಯನ್ನೂ ಕೈಗೊಂಡಿರುವಾತ. ಆದರೆ ಕಾಲ ಸರಿದು ಬೆಳೆದು ನಿಂತ ರಾಮುಗೆ ಸುನಿತಾ ಕೃಷ್ಣಮೂರ್ತಿ ಎಂಬ ಹುಡುಗಿಯ ಪರಿಚಯವಾಗುತ್ತದೆ. ಆಕೆ ಯುವ ಬರಹಗಾರ್ತಿಯಾಗಿದ್ದುಕೊಂಡು ಒಂದಷ್ಟು ಖ್ಯಾತಿ ಹೊಂದಿರೋ ಹುಡುಗಿ. ಸೂಕ್ಷ್ಮ ಮನಸ್ಥಿತಿಯವಳೂ ಹೌದು. ಇಂತಹ ಸುನೀತಾಳೆಂದಿಗಿನ ರಾಮುವಿನ ಪರಿಚಯ ಮದುವೆಯ ಹೊಸ್ತಿಲು ದಾಟಿಕೊಳ್ಳುತ್ತದೆ. ಹಾಗೆ ಇವರಿಬ್ಬರು ಮದುವೆಯಾಗಿ ಪ್ರಸ್ಥದ ಕೋಣೆ ತಲುಪಿಕೊಳ್ಳುತ್ತಲೇ ಬ್ರಹ್ಮಚಾರಿಯ ಸಮಸ್ಯೆಯೊಂದಿಗೆ ಅಸಲೀ ಕಥೆಯೂ ಆರಂಭವಾಗುತ್ತದೆ.

    ಇಲ್ಲಿ ರಾಮುವನ್ನು ಬಾಧಿಸುತ್ತಿರೋ ಲೈಂಗಿಕ ಸಮಸ್ಯೆಯ ಸುತ್ತ ಕಥೆ ಬಿಚ್ಚಿಕೊಂಡರೂ ಎಲ್ಲಿಯೂ ವಲ್ಗಾರಿಟಿಯ ಸೋಂಕಿಲ್ಲ. ಚುರುಕಿನ ನಿರೂಪಣೆ, ಅದಕ್ಕೆ ತಕ್ಕುದಾದಂತಹ ಸಂಭಾಷಣೆಗಳೊಂದಿಗೆ ಇಲ್ಲಿನ ದೃಶ್ಯಗಳು ಭರಪೂರ ನಗುವಿನೊಂದಿಗೆ ಮುಂದುವರಿಯುತ್ತದೆ. ಇದರಲ್ಲಿಯೇ ಊಹಿಸಲಾಗದ ಟ್ವಿಸ್ಟುಗಳನ್ನಿಡುವ ಮೂಲಕ ನಿರ್ದೇಶಕರು ಈ ನಗುವಿನ ಯಾನವನ್ನು ಮತ್ತಷ್ಟು ರೋಚಕವಾಗಿಸಿದ್ದಾರೆ. ಇಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ತಮ್ಮ-ತಮ್ಮ ಪಾತ್ರಗಳನ್ನು ನಿರ್ವಹಿಸಿರುವ ರೀತಿ. ಅವರಿಬ್ಬರೂ ನಟಿಸಿರುವ ಸೊಗಸೇ ಈ ಚಿತ್ರದ ಪ್ರಧಾನ ಶಕ್ತಿ. ನೀನಾಸಂ ಸತೀಶ್‍ರಂತಹ ಲೀಡ್ ನಟರು ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳೋದೇ ಅಪರೂಪ. ಅಂತಹದ್ದನ್ನು ಒಪ್ಪಿಕೊಂಡು, ಆ ಪಾತ್ರವನ್ನೇ ಒಳಗಿಳಿಸಿಕೊಂಡಂತೆ ನಟಿಸಿರೋ ರೀತಿ ಯಾರನ್ನಾದರೂ ಸೆಳೆಯುವಂತಿದೆ.

    ಬ್ರಹ್ಮಚಾರಿಯ ಮೂಲಕ ನಿರ್ದೇಶಕ ಚಂದ್ರಮೋಹನ್ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ತಾವು ಕಾಮಿಡಿ ಜಾಣರಿಗೇ ಹೊಸ ದಿಕ್ಕು ತೋರಿಸಬಲ್ಲ ಕಸುವು ಹೊಂದಿರುವ ನಿರ್ದೇಶಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಛಾಯಾಗ್ರಹಣ, ಧರ್ಮವಿಶ್ ಸಂಗೀತ, ಹಿನ್ನೆಲೆ ಸಂಗೀತ ಎಲ್ಲವೂ ಇದರ ಅಂದ ಹೆಚ್ಚಿಸಿವೆ. ಶಿವರಾಜ್ ಕೆ ಆರ್ ಪೇಟೆ, ಅಚ್ಯುತ್ ಕುಮಾರ್, ದತ್ತಣ್ಣನ ಪಾತ್ರಗಳೂ ತಲೆದೂಗುವಂತೆ ಮೂಡಿ ಬಂದಿವೆ. ಇದು ಔಟ್ ಆಂಡ್ ಔಟ್ ನಗು ತುಂಬಿಕೊಂಡಿರೋ ಚಿತ್ರ. ಮನಸಾರೆ ನಕ್ಕು ಹಗುರಾಗೋ ಅವಕಾಶವನ್ನು ಖಂಡಿತಾ ಕಳೆದುಕೊಳ್ಳಬೇಡಿ.

    ರೇಟಿಂಗ್: 4/5

  • ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಂದ್ರ ಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಔಟ್ ಆಂಡ್ ಔಟ್ ಮನೋರಂಜನಾತ್ಮಕ ಸಿನಿಮಾ ಅನ್ನೋದು ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಭರಪೂರ ಹಾಸ್ಯವಿದ್ದರೂ ವಲ್ಗಾರಿಟಿಯ ಸೋಂಕಿಲ್ಲದ ಈ ಚಿತ್ರ ಹಾಸ್ಯ ಧಾಟಿಯಾಚೆಗೂ ಗಹನವಾದ ಕಥೆಯೊಂದಿಗೆ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ರೂಪಿಸಿದ್ದಾರೆ. ಇದುವರೆಗೂ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಅದಿತಿ ಪ್ರಭುದೇವ ಈ ಮೂಲಕ ಮೊದಲ ಬಾರಿ ಹಾಸ್ಯಾತ್ಮಕ ಸಿನಿಮಾದ ಭಾಗವಾಗಿದ್ದಾರೆ.

    ಅದಿತಿ ಪ್ರಭುದೇವ ಪಾಲಿಗೆ ಇದೊಂದು ಹೊಸ ಜಾನರಿನ ಸಿನಿಮಾ. ಆರಂಭದಲ್ಲಿ ಇದರ ಕಾಮಿಡಿ ಝಲಕ್ ಮತ್ತು ತಮ್ಮ ಪಾತ್ರದ ವಿಶೇಷತೆಗೆ ಮನಸೋತೇ ಅದಿತಿ ನಟಿಸಲು ಒಪ್ಪಿಕೊಂಡಿದ್ದರಂತೆ. ಪ್ರತಿ ಸಿನಿಮಾಗಳೂ ತನ್ನ ಪಾಲಿಗೆ ಹೊಸ ಕಲಿಕೆಗೆ ಕಾರಣವಾಗಬೇಕೆಂಬ ಹಂಬಲವಿಟ್ಟುಕೊಂಡಿರೋ ಅವರ ಪಾಲಿಗೆ ಬ್ರಹ್ಮಚಾರಿ ಚಿತ್ರದ ಮೂಲಕ ಹೊಸತನದ ಅನುಭವ ದಕ್ಕಿದೆಯಂತೆ. ಯಾವ ಪ್ರೇಕ್ಷಕರೇ ಆಗಿದ್ದರೂ ತಮ್ಮ ಖಾಸಗಿ ಬದುಕಿನ ಜಂಜಾಟಗಳಿಂದ ಮುಕ್ತವಾಗಿ ಎಲ್ಲವನ್ನೂ ಮರೆತು ಮೈ ಮರೆಯಲೋಸ್ಕರವೇ ಸಿನಿಮಾ ಮಂದಿರಗಳತ್ತ ಬರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬರಿಗೂ ಭರ್ಜರಿ ಮನರಂಜನೆ ನೀಡುವಲ್ಲಿ ಬ್ರಹ್ಮಚಾರಿ ಗೆಲುವು ಕಾಣುತ್ತಾನೆಂಬ ನಂಬಿಕೆ ಅದಿತಿಯದ್ದು.

    ಇದೇ ಸಂದರ್ಭದಲ್ಲಿ ಅವರು ಇಡೀ ಚಿತ್ರದಲ್ಲಿ ಎಲ್ಲಿಯೂ ಮುಜುಗರ ಪಟ್ಟುಕೊಳ್ಳುವಂಥಾ ಸನ್ನಿವೇಶಗಳಿಲ್ಲ ಎಂಬುದನ್ನೂ ಒತ್ತಿ ಹೇಳುತ್ತಾರೆ. ಒಟ್ಟಾರೆಯಾಗಿ ಈ ಸಿನಿಮಾ ದೊಡ್ಡ ಗೆಲುವು ದಾಖಲಿಸೋದರೊಂದಿಗೆ ತನ್ನ ಕೆರಿಯರ್‍ನಲ್ಲಿಯೂ ಭಿನ್ನ ಸಿನಿಮಾವಾಗಿ ನೆಲೆಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಯಾವ ವೆರೈಟಿಯ ಪಾತ್ರಗಳನ್ನಾದರೂ ತುಸು ಕಷ್ಟವಾದರೂ ಮಾಡಿ ಬಿಡಬಹುದು. ಆದರೆ ಏಕಾಏಕಿ ಕಾಮಿಡಿ ಟೈಮಿಂಗಿಗೆ ಒಗ್ಗಿಕೊಳ್ಳೋದು ಮಾತ್ರ ಅಕ್ಷರಶಃ ಹರಸಾಹಸ. ಕೊಂಚ ಕಷ್ಟವಾದರೂ ಅದಿತಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರಂತೆ. ಇಲ್ಲಿ ಅವರ ಪಾತ್ರ ಕೂಡಾ ಸೊಗಸಾಗಿದೆಯಂತೆ. ಅಂದಹಾಗೆ, ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಈ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

  • ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ದಯ್ ಮೆಹ್ತಾ ನಿರ್ಮಾಣ ಮಾಡಿರುವ ಬ್ರಹ್ಮಚಾರಿ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆಗಾಣುತ್ತಿದೆ. ನೀನಾಸಂ ಸತೀಶ್ ನಟಿಸಿರೋ ಈ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಫಸ್ಟ್ ನೈಟ್ ಟೀಸರ್ ನಿಂದ ಶುರುವಾಗಿ ಟ್ರೇಲರ್ ತನಕ ಬ್ರಹ್ಮಚಾರಿ ಪ್ರೇಕ್ಷಕರನ್ನು ಮರುಳು ಮಾಡಿಕೊಂಡು ಬಂದು ಇದೀಗ ಬಿಡುಗಡೆಯ ಹಂತ ತಲುಪಿಕೊಂಡಿದ್ದಾನೆ. ವಿಶೇಷವೆಂದರೆ, ಸಂಪೂರ್ಣ ಮನೋರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆಯಂತೆ. ಈ ಕಾರಣದಿಂದಲೇ ಚಿತ್ರತಂಡ ಕುಟುಂಬ ಸಮೇತರಾಗಿ ಬಂದು ನೋಡುವಂತೆ ಪ್ರೇಕ್ಷಕರಿಗೆ ಆಹ್ವಾನ ನೀಡುತ್ತಾ ಬಂದಿದೆ.

    ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಎಂಬ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದವರು ಚಂದ್ರ ಮೋಹನ್. ಈ ಥರದ ಸಿನಿಮಾಗಳನ್ನು ರೂಪಿಸೋದು, ಇಡೀ ಸಿನಿಮಾದಲ್ಲಿ ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನು ನಗಿಸೋದೆಲ್ಲ ಅಷ್ಟು ಸಲೀಸಿನ ಸಂಗತಿಯಲ್ಲ. ಆದರೆ ಚಂದ್ರಮೋಹನ್ ಅದನ್ನು ಕರಗತ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಎರಡು ಸರಣಿ ಗೆಲುವುಗಳನ್ನು ತನ್ನದಾಗಿಸಿಕೊಂಡು, ಇದೀಗ ಬ್ರಹ್ಮಚಾರಿ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಿಂದಿದ್ದಾರೆ. ಈಗಾಗಲೇ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಅದರ ವಿಶಿಷ್ಟ ಕಂಟೆಂಟಿನ ವಿಚಾರಗಳೆಲ್ಲವೂ ಬ್ರಹ್ಮಚಾರಿಗೆ ಪ್ರೇಕ್ಷಕರೆಲ್ಲ ಬೇಷರತ್ತಾಗಿ ಫಿದಾ ಆಗುವಂಥಾ ಲಕ್ಷಣಗಳನ್ನೇ ಧ್ವನಿಸುವಂತಿವೆ.

    ಗುಪ್ತ ಸಮಸ್ಯೆಗಳನ್ನು ಒಳಗೇ ಇಟ್ಟುಕೊಂಡು, ಕನಿಷ್ಟ ಅದಕ್ಕೊಂದು ಚಿಕಿತ್ಸೆ ಪಡೆಯಲೂ ಮುಜುಗರ ಪಡುವ, ಹೇಗೋ ಅದು ಬಟಾಬಯಲಾದ ನಂತರ ಮಾನಸಿಕ ಹಿಂಸೆ ಅನುಭವಿಸುವಂಥಾ ಅದೆಷ್ಟೋ ಜನರಿದ್ದಾರೆ. ಅಂಥಾದ್ದೊಂದು ಗುಪ್ತ ಸಮಸ್ಯೆಯಿಂದ ಬಳಲೋ ನಾಯಕನ ಪಡಿಪಾಟಲುಗಳನ್ನು ಎಲ್ಲಿಯೂ ವಲ್ಗರ್ ಅನ್ನಿಸದಂತೆ, ಸಭ್ಯತೆಯ ಗೆರೆ ದಾಟದಂತೆ, ಪ್ರತೀ ಫ್ರೇಮಿನಲ್ಲಿಯೂ ನಗಿಸುವಂತೆ ಕಟ್ಟಿ ಕೊಡುವಲ್ಲಿ ಚಂದ್ರ ಮೋಹನ್ ಗೆದ್ದಿದ್ದಾರಂತೆ. ಚಿತ್ರತಂಡದಲ್ಲಿಯೂ ಆ ಬಗೆಗಿನ ಗಾಢವಾದ ವಿಶ್ವಾಸವಿದೆ. ಈಗಾಗಲೇ ಹೊರ ಬಂದಿರುವ ಟೀಸರ್ ಮತ್ತು ಟ್ರೇಲರ್ ಗಳಲ್ಲಿ ಅದರ ಕುರುಹುಗಳಿವೆ.

    ಉದಯ್ ಮೆಹ್ತಾ ನಿರ್ಮಾಣದ ಚಿತ್ರಗಳೆಂದ ಮೇಲೆ ಅಲ್ಲಿ ಅದ್ಧೂರಿತನದ ಹಾಜರಿ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಬ್ರಹ್ಮಚಾರಿಯನ್ನೂ ಕೂಡಾ ಅವರು ಅಷ್ಟೇ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಹಾಡುಗಳಲ್ಲಿಯೇ ಅದಕ್ಕೆ ಸಾಕ್ಷಿಗಳು ಸಿಗುವಂತಿವೆ. ಟ್ರೇಲರ್ ಮತ್ತು ಟೀಸರ್ ಗಳಲ್ಲಿ ಕಚಗುಳಿ ಇಡುವಂತಾ ಸನ್ನಿವೇಶ, ಡೈಲಾಗುಗಳಿಂದಲೇ ಬ್ರಹ್ಮಚಾರಿ ಲಕಲಕಿಸಿದ್ದಾನೆ. ಹಾಗಂತ ಇದನ್ನೇನು ಡಬಲ್ ಮೀನಿಂಗ್‍ಗಳಿಂದ ತುಂಬಿರೋ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದು ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಚಿತ್ರ. ಒಂದೇ ಒಂದು ಮುಜುಗರದ ಸನ್ನಿವೇಶಗಳೂ ಈ ಸಿನಿಮಾದಲ್ಲಿಲ್ಲವಂತೆ. ಅಂತೂ ನೀನಾಸಂ ಸತೀಶ್ ಬ್ರಹ್ಮಚಾರಿಯಾಗಿ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸೋದರಲ್ಲಿ ಯಾವ ಸಂದೇಹವೂ ಇಲ್ಲ.

  • ಬ್ರಹ್ಮಚಾರಿಯ ಬರ್ತ್ ಡೇಗೆ ಫಸ್ಟ್ ನೈಟ್ ಟೀಸರ್ ಗಿಫ್ಟ್!

    ಬ್ರಹ್ಮಚಾರಿಯ ಬರ್ತ್ ಡೇಗೆ ಫಸ್ಟ್ ನೈಟ್ ಟೀಸರ್ ಗಿಫ್ಟ್!

    ದಯ್ ಕೆ ಮೆಹ್ತಾ ನಿರ್ಮಾಣದ ಬ್ರಹ್ಮಚಾರಿ ಚಿತ್ರದ ಟೀಸರ್ ಲಾಂಚ್ ಆಗಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ನೀನಾಸಂ ಸತೀಶ್ ಹುಟ್ಟುಹಬ್ಬದ ಕೊಡುಗೆಯಾಗಿ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಮೂಲಕ ಭರ್ಜರಿ ನಗುವಿಗೆ ಮೋಸವಿಲ್ಲದ, ಮನೋರಂಜನಾತ್ಮಕ ಚಿತ್ರವೊಂದರ ಮೂಲಕ ಸತೀಶ್ ಮತ್ತೆ ಪ್ರೇಕ್ಷಕರನ್ನು ಎದುರುಗೊಳ್ಳೋದು ಪಕ್ಕಾ ಆಗಿದೆ.

    ಈ ಟೀಸರ್ ಬಿಡುಗಡೆಯಾಗಿ ದಿನ ಕಳೆಯೋದರೊಳಗಾಗಿ ಜನಪ್ರಿಯತೆ ಪಡೆದುಕೊಂಡಿರೋ ರೀತಿಯೇ ಇಡೀ ಚಿತ್ರದ ಕಂಟೆಂಟ್ ಸ್ಪೆಷಲ್ ಆಗಿದೆ ಎಂಬುದರ ಸೂಚನೆ. ಯಾವುದೇ ವಲ್ಗಾರಿಟಿ ಇಲ್ಲದಂತೆ ಕಲಾತ್ಮಕವಾಗಿಯೇ ಬ್ರಹ್ಮಚಾರಿಯ ಫಸ್ಟ್ ನೈಟ್ ರಹಸ್ಯದ ಸೂಚನೆಯೊಂದಿಗೆ ಕಚಗುಳಿಯಿಟ್ಟಿರೋ ಈ ಟೀಸರ್ ದಿನದೊಪ್ಪತ್ತಿನಲ್ಲಿಯೇ ಯಶಸ್ವಿಯಾಗಿ ಬಿಟ್ಟಿದೆ. ಈ ಹಿಂದೆ ಚಂಬಲ್ ಮೂಲಕ ಮಾಸ್ ಲುಕ್ಕಿನಲ್ಲಿ ಮಿಂಚಿದ್ದ ಸತೀಶ್ ಈ ಬಾರಿ ಬೇರೊಂದು ಸಾದಾ ಸೀದಾ ಲುಕ್ಕಿನಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ.

    ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಚಂದ್ರಮೋಹನ್. ಈ ಹಿಂದೆ ಬಾಂಬೆ ಮಿಠಾಯಿ, ಡಬ್ಬಲ್ ಇಂಜಿನ್‍ನಂಥಾ ಹಾಸ್ಯಪ್ರಧಾನ ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಬಾರಿ ಅದೇ ಜಾಡಿನಲ್ಲಿ ವಿಶಿಷ್ಟವಾದೊಂದು ಕಥೆಯೊಂದಿಗೆ ಬಂದಿದ್ದಾರೆ. ಬ್ರಹ್ಮಚಾರಿಯನ್ನು ಉದಯ್ ಮೆಹ್ತಾ ಅವರು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶಶನ ಈ ಚಿತ್ರಕ್ಕಿದೆ.

    ಅಯೋಗ್ಯ ಚಿತ್ರದ ಅಗಾಧ ಪ್ರಮಾಣದ ಯಶಸ್ಸಿನಿಂದ ಈಗ ನೀನಾಸಂ ಸತೀಶ್ ಅವರ ವೃತ್ತಿ ಜೀವನಕ್ಕೊಂದು ಹೊಸ ಓಘ ಬಂದಂತಾಗಿದೆ. ಅದು ಚಂಬಲ್ ಮೂಲಕ ಮುಂದುವರೆದು ಇದೀಗ ಬ್ರಹ್ಮಚಾರಿಯ ರೂಪದಲ್ಲಿಯೂ ಮತ್ತಷ್ಟು ಲಕ ಲಕಿಸೋ ಸೂಚನೆಗಳೇ ದಟ್ಟವಾಗಿವೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಸತೀಶ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರಸ್ಥಕ್ಕೆ ಕಾಯುತ್ತಿರೋ ಬ್ರಹ್ಮಚಾರಿಗೆ ಬರ್ತ್ ಡೇ ಗಿಫ್ಟ್!

    ಪ್ರಸ್ಥಕ್ಕೆ ಕಾಯುತ್ತಿರೋ ಬ್ರಹ್ಮಚಾರಿಗೆ ಬರ್ತ್ ಡೇ ಗಿಫ್ಟ್!

    ಬೆಂಗಳೂರು: ಅಯೋಗ್ಯ ಎಂಬ ಚಿತ್ರದ ಅದ್ಭುತ ಯಶಸ್ಸಿನ ನಂತರದಲ್ಲಿ ನಟ ನೀನಾಸಂ ಸತೀಶ್ ಅವರ ನಸೀಬು ಬದಲಾಗಿ ಬಿಟ್ಟಿದೆ. ಆ ನಂತರದಲ್ಲಿ ಒಂದರ ಹಿಂದೊಂದರಂತೆ ಚಿತ್ರಗಳು ಅವರನ್ನು ಅರಸಿ ಬರುತ್ತಿವೆ. ಸದ್ಯ ಅವರೊಪ್ಪಿಕೊಂಡಿರೋ ಚಿತ್ರಗಳೆಲ್ಲವೂ ಭಿನ್ನ ಬಗೆಯವುಗಳೇ ಎಂಬುದು ವಿಶೇಷ. ಇದೀಗ ಸತೀಶ್ ಬ್ರಹ್ಮಚಾರಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರತಂಡವೀಗ ಹೀರೋ ಬರ್ತ್ ಡೇಗೆ ಗಿಫ್ಟೊಂದನ್ನು ಕೊಡಲು ತಯಾರಾಗಿದೆ!

    ಬ್ರಹ್ಮಚಾರಿ ಚಿತ್ರಕ್ಕೆ ಹಂಡ್ರೆಡ್ ಪರ್ಸೆಂಟ್ ವರ್ಜಿನ್ ಎಂಬ ಟ್ಯಾಗ್ ಲೈನ್ ಇದೆ. ಆದರೆ ಇದೀಗ ಬಿಡುಗಡೆಗೊಂಡಿರೋ ಪೋಸ್ಟರಿನಲ್ಲಿ ನೀನಾಸಂ ಸತೀಶ್, ನಾಯಕಿ ಅದಿತಿ ಪ್ರಭುದೇವರೊಂದಿಗೆ ಪ್ರಸ್ಥದ ಮೂಡಿನಲ್ಲಿರೋ ಫೋಟೋ ಅನಾವರಣಗೊಂಡಿದೆ. ಪ್ಯೂರ್ ವರ್ಜಿನ್ ಬ್ರಹ್ಮಚಾರಿಯ ಪ್ರಸ್ಥದ ಮೂಡಿನ ಬಗ್ಗೆ ಪ್ರೇಕ್ಷಕರು ಚಕಿತಗೊಂಡಿದ್ದಾರೆ.

    ಹೀಗೆ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪೋಸ್ಟರ್ ಬಿಡುಗಡೆ ಮಾಡಿರೋ ಚಿತ್ರತಂಡ ನೀನಾಸಂ ಸತೀಶ್ ಅವರಿಗೆ ಬರ್ತ್ ಡೇ ಗಿಫ್ಟ್ ಒಂದನ್ನು ಕೊಡಲು ತಯಾರಾಗಿರೋ ಸೂಚನೆ ನೀಡಿದೆ. ಇದೇ ತಿಂಗಳ ಇಪ್ಪತ್ತರಂದು ಸತೀಶ್ ಅವರ ಹುಟ್ಟುಹಬ್ಬವಿದೆ. ಆ ದಿನವೇ ಬ್ರಹ್ಮಚಾರಿಯದ್ದೊಂದು ಟೀಸರ್ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಈ ಟೀಸರ್ ಹೇಗಿರಬಹುದೆಂಬ ಅಂದಾಜು ನೀಡೋ ಮಿನಿ ಟೀಸರೊಂದು 10ನೇ ತಾರೀಕಿನಂದು ಹೊರ ಬರಲಿದೆಯಂತೆ.

    ಬ್ರಹ್ಮಚಾರಿ ಚಿತ್ರ ಈಗಾಗಲೇ ಪೋಸ್ಟರುಗಳ ಮೂಲಕವೇ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಮೂಲಕವೇ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳುತ್ತಾ, ಅದನ್ನೇ ಕ್ಯೂರಿಯಾಸಿಟಿಯಾಗಿ ಮಾರ್ಪಾಟು ಮಾಡೋ ಕಲೆಗಾರಿಕೆಯನ್ನ ಚಿತ್ರತಂಡ ಪ್ರದರ್ಶಿಸುತ್ತಿದೆ. ಸತೀಶ್ ಅಭಿಮಾನಿಗಳಂತೂ ಈ ಸಿನಿಮಾ ಬಗ್ಗೆ ಕಾತರರಾಗಿದ್ದಾರೆ. ಸತೀಶ್ ಬರ್ತ್ ಡೇಯಂದೇ ಅಭಿಮಾನಿಗಳೆಲ್ಲರಿಗೂ ಟೀಸರ್ ಕೊಡುಗೆ ಸಿಗಲಿದೆ.

  • ಬ್ರಹ್ಮಚಾರಿಗೆ ಜೂನಿಯರ್ ರಾಕಿ ಭಾಯ್ ಸಾಥ್!

    ಬ್ರಹ್ಮಚಾರಿಗೆ ಜೂನಿಯರ್ ರಾಕಿ ಭಾಯ್ ಸಾಥ್!

    ಬೆಂಗಳೂರು: ಒಂದು ಕಾಲದಲ್ಲಿ ಕೆಜಿಎಫ್ ಅಂದರೆ ಬಹುತೇಕರ ಕಣ್ಣುಗಳಲ್ಲಿ ಚಿನ್ನವೇ ಫಳಫಳಿಸುತ್ತಿತ್ತು. ಆದರೀಗ ಈ ಹೆಸರು ಕೇಳಿದಾಕ್ಷಣ ಕನ್ನಡದ ಕೀರ್ತಿ ಪತಾಕೆಯನ್ನು ದೇಶಾದ್ಯಂತ ಎತ್ತಿ ಹಿಡಿದ ಯಶ್ ಅಭಿನಯದ ಚಿನ್ನದಂಥಾ ಚಿತ್ರ ನೆನಪಾಗುವಂತಾಗಿದೆ. ಅಷ್ಟರ ಮಟ್ಟಿಗೆ ಪುಷ್ಕಳ ಗೆಲುವು ತನ್ನದಾಗಿಸಿಕೊಂಡ ಈ ಸಿನಿಮಾದ ಭಾಗವಾಗಿದ್ದ ಪ್ರತಿಯೊಬ್ಬರೂ ಈಗ ಒಂದಿಲ್ಲೊಂದು ರೀತಿಯಲ್ಲಿ ಬ್ಯುಸಿಯಾಗಿದ್ದಾರೆ. ಭರಪೂರ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

    ಕೆಜಿಎಫ್ ಚಿತ್ರದಲ್ಲಿ ಜ್ಯೂನಿಯರ್ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್ ಎಂಬ ಹುಡುಗ ಪ್ರೇಕ್ಷಕರೆಲ್ಲರ ಮನ ಗೆದ್ದಿದ್ದ. ಪುಟ್ಟ ವಯಸ್ಸಿನಲ್ಲಿಯೇ ನಟನೆಯ ಎಲ್ಲ ಪಟ್ಟುಗಳನ್ನು ಅರಗಿಸಿಕೊಂಡವನಂತೆ ನಟಿಸಿದ್ದ ಈ ಹುಡುಗನ ಲಕ್ಕು ಸದರಿ ಪಾತ್ರದಿಂದಲೇ ಖುಲಾಯಿಸಿ ಬಿಟ್ಟಿದೆ. ಇದಾದ ನಂತರ ಬಹಳಷ್ಟು ಅವಕಾಶಗಳೂ ಕೂಡಾ ಅನ್ಮೋಲ್ ನನ್ನು ಅರಸಿ ಬಂದಿವೆ. ಸದ್ಯಕ್ಕೆ ಅನ್ಮೋಲ್ ಬ್ರಹ್ಮಚಾರಿಯ ಗೆಟಪ್ಪಿನಲ್ಲಿರೋ ನೀನಾಸಂ ಸತೀಶ್ ಅವರ ಜೊತೆ ನಟಿಸೋ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾನೆ.

    ನೀನಾಸಂ ಸತೀಶ್ ನಾಯಕನಾಗಿರೋ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣವೀಗ ಭರದಿಂದ ಸಾಗುತ್ತಿದೆ. ಈ ಸೆಟ್‍ನಲ್ಲಿ ಅನ್ಮೋಲ್ ಜೊತೆಗಿರೋ ಫೋಟೋವೊಂದನ್ನು ಸತೀಶ್ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅನ್ಮೋಲ್ ಪಾತ್ರ ಹೇಗಿದೆ? ಇಲ್ಲಿಯೂ ಸತೀಶ್ ಅವರ ಜ್ಯೂನಿಯರ್ ಶೇಡಿನ ಪಾತ್ರವನ್ನೇನಾದರೂ ಆತ ಮಾಡಿದ್ದಾನಾ ಎಂಬುದೂ ಸೇರಿದಂತೆ ಯಾವ ವಿಚಾರವನ್ನೂ ಸತೀಶ್ ಅವರಾಗಲಿ, ಚಿತ್ರತಂಡವಾಗಲಿ ಬಿಟ್ಟು ಕೊಟ್ಟಿಲ್ಲ.

    ಬ್ರಹ್ಮಚಾರಿ ರೊಮ್ಯಾಂಟಿಕ್ ಕಾಮಿಡಿ ಜಾನರಿನ ಚಿತ್ರ. ಅಯೋಗ್ಯ ಚಿತ್ರದ ನಂತರ ಭರ್ಜರಿ ಯಶಸ್ಸಿನ ಅಲೆಯಲ್ಲಿರೋ ಸತೀಶ್ ಪಾಲಿಗೆ ಈ ಚಿತ್ರವೂ ಅಂಥಾದ್ದೇ ಗೆಲುವು ತಂದು ಕೊಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈ ಚಿತ್ರದ ತಾರಾಗಣವೂ ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಕೆಜಿಎಫ್ ಖ್ಯಾತಿಯ ಅನ್ಮೋಲ್ ನಟಿಸುತ್ತಿರೋ ವಿಚಾರ ಮಾತ್ರವೇ ಬಯಲಾಗಿದೆ.

  • ‘ಅಯೋಗ್ಯ’ದ ಸತೀಶ್ ಈಗ ‘ಬ್ರಹ್ಮಚಾರಿ’

    ‘ಅಯೋಗ್ಯ’ದ ಸತೀಶ್ ಈಗ ‘ಬ್ರಹ್ಮಚಾರಿ’

    ಬೆಂಗಳೂರು: ಅಯೋಗ್ಯ ಚಿತ್ರದ ಸಕ್ಸಸ್ ನಂತರ ನೀನಾಸಂ ಸತೀಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ರಿಲೀಸ್ ಆಗಿದ್ದ ಚಂಬಲ್ ಸಹ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಹಾಗೆಯೇ ನಟನೆಯೊಂದಿಗೆ ತಾವೇ ನಿರ್ದೇಶನಕ್ಕೂ ಮುಂದಾಗಿದ್ದರು. ಈಗ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೌದು. ಸತೀಶ್ ಈಗ ಬ್ರಹ್ಮಚಾರಿ ಹೆಸರಿನ ಚಿತ್ರವನ್ನು ಒಪ್ಪಿಕೊಂಡಿದ್ದು, ಅವರಿಲ್ಲಿ ಬ್ರಹ್ಮಚಾರಿಯಾಗಿ ನಟಿಸುತ್ತಿದ್ದಾರೆ. ಉದಯ್ ಮೆಹ್ತಾ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಇನ್ನು ಬ್ರಹ್ಮಚಾರಿ ಅಂತ ಟೈಟಲ್ ಇಟ್ಟಿರುವ ಚಿತ್ರತಂಡ 100 ಪರ್ಸೆಂಟ್ ವರ್ಜಿನ್ ಎನ್ನುವ ಸಬ್ ಟೈಟಲ್ ಇಟ್ಟಿದೆ. ಈಗಾಗಲೇ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ‘ಬ್ರಹ್ಮಚಾರಿ’ ಹೆಸರಿನ ಮೂರನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅಂದ ಹಾಗೆ ಈ ಹಿಂದೆ ಕೇಳಿ ಬಂದಿರುವಂತೆ ಈ ಚಿತ್ರವು ಲವ್ ಇನ್ ಮಂಡ್ಯ ಚಿತ್ರದ ಮುಂದುವರಿದ ಭಾಗ ಎನ್ನಲಾಗುತ್ತಿದ್ದು, ಆದರೆ ಅದನ್ನು ಚಿತ್ರ ತಂಡ ಅಲ್ಲಗಳೆದಿದೆ. ಇದೊಂದು ಪಕ್ಕಾ ಕಾಮಿಡಿ ಎಂಟರ್‍ಟೇನ್ ಮೆಂಟ್ ಚಿತ್ರ ಎಂದಿದ್ದಾರೆ. ಯುಗಾದಿ ಹಬ್ಬಕ್ಕೆ ಬ್ರಹ್ಮಚಾರಿ ಸೆಟ್ಟೇರಲಿದೆ.

  • ಶಬರಿಮಲೆಗೆ ಮಹಿಳೆಯರ ಪ್ರವೇಶ ಅನಾಹುತಕ್ಕೆ ದಾರಿ- ವಿದ್ವಾನ್ ಅನಂತ್ ಶರ್ಮಾ

    ಶಬರಿಮಲೆಗೆ ಮಹಿಳೆಯರ ಪ್ರವೇಶ ಅನಾಹುತಕ್ಕೆ ದಾರಿ- ವಿದ್ವಾನ್ ಅನಂತ್ ಶರ್ಮಾ

    ಬೆಂಗಳೂರು: ಮಹಿಳೆಯರು ದೇವಸ್ಥಾನವನ್ನು ಪ್ರವೇಶ ಮಾಡಬಾರದು ಎಂಬುದು ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ಇಲ್ಲ. ಆದ್ರೆ ಅಯ್ಯಪ್ಪನ ಮಂದಿರಕ್ಕೆ ಯಾಕೆ ಮಹಿಳೆಯರಿಗೆ ನಿಷೇಧ ಯಾಕೆ ಎನ್ನುವುದು ಇದೀಗ ಪ್ರಶ್ನೆಯಾಗಿದೆ. ಅಯ್ಯಪ್ಪ ಸ್ವಾಮಿ ಬ್ರಹ್ಮಚರಿಯಾಗಿ ಇರುವ ಕಾರಣ ಮಹಿಳೆಯರು ಹೋದರೆ ಅಯ್ಯಪ್ಪ ಸ್ವಾಮಿಗೆ ತೊಂದರೆಯಾಗಬಹುದು. ಒಬ್ಬ ಬ್ರಹ್ಮಚರಿಯಾದವನಿಗೆ ಹೀಗೆಯೇ ನಡೆದುಕೊಳ್ಳಬೇಕು ಎನ್ನುವ ನಿಯಮಗಳಿರುತ್ತವೆ. ಒಟ್ಟಿನಲ್ಲಿ ಸಂಪ್ರದಾಯಕ್ಕೆ ಭಂಗ ಮಾಡುವುದರಿಂದ ದೇವಸ್ಥಾನಕ್ಕೆ ತೊಂದರೆಯಾಗಬಹುದು ಎಂದು ವಿದ್ವಾನ್ ಅನಂತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದವನ್ನು ಪ್ರಭುಸಂಹಿತೆ ಅಂತ ಹೇಳುತ್ತೇವೆ. ಹಾಗೆಯೇ ಕೆಲವೊಂದು ಶಾಸ್ತ್ರಗಳಿವೆ. ಅವುಗಳನ್ನು ಮಿತ್ರ ಸಂಹಿತ, ಕಾವ್ಯಗಳನ್ನು ಕಾಂತಾ ಸಂಹಿತಾ ಅಂತ ಕರೆಯುತ್ತೇವೆ. ಈ ಮೂರನ್ನು ಇಟ್ಟುಕೊಂಡು ನಾವು ಜೀವನ ಮಾಡಬೇಕಿದೆ. ಇದನ್ನೂ ಓದಿ: ಅಯ್ಯಪ್ಪನ ಬಾಗಿಲು ಮಹಿಳೆಯರಿಗೆ ಮುಕ್ತ: ಸುಪ್ರೀಂ ಕೋರ್ಟ್

    ಎರಡು ದೇವತೆಗಳ ಶಕ್ತಿಯ ಮಿಶ್ರಣದಿಂದ ಉದ್ಭವಾಗಿರುವ ಈ ದೇವರು ಬ್ರಹ್ಮಚಾರಿ ಎನ್ನುವ ಸ್ವರೂಪವಿದೆ. ಹಾಗಿರುವ ಕಾರಣದಿಂದ ಹಿಂದಿನ ಸಂಪ್ರದಾಯದಿಂದ ಬಂದಂತಹ ಕ್ರಮದಲ್ಲಿ ಋತುಮತಿಯಾದ ಸ್ತ್ರೀಯರು ದೇವರನ್ನು ನೋಡಬಾರದೆಂಬ ಪ್ರತೀತಿ ಇದೆ. ಇದನ್ನೂ ಓದಿ: ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಇಂದು ಸಾರ್ಥಕವಾಯಿತು- ಶಬರಿಮಲೆ ತೀರ್ಪಿಗೆ ಜಯಮಾಲಾ ಪ್ರತಿಕ್ರಿಯೆ

    ಅದೇ ರೀತಿಯಾಗಿ ಸ್ತ್ರೀಯರಿಗೆ ದೇವಾಲಯ ಪ್ರವೇಶ ನಿರ್ಬಂಧ ಎನ್ನುವುದು ಶಾಸ್ತ್ರದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಆದ್ರೆ ಸಂಪ್ರದಾಯದಲ್ಲಿ ಉಲ್ಲೇಖವಿದೆ. ಈ ಮಿತ್ರ ಸಂಹಿತೆ ಎನ್ನುವುದು ಶಾಸ್ತ್ರ ಆಗಿರೋದ್ರಿಂದ, ಇದರಲ್ಲಿ ಸಂಪ್ರದಾಯ ಹಾಗೂ ಶಾಸ್ತ್ರ ಎರಡನ್ನೂ ಸೇರಿಸಿಕೊಂಡು ನಾವು ಮಂದೆ ಹೋಗಬೇಕಾಗಿದೆ.

    ಈ ಆಚರಣೆ ಹಿಂದಿನಿಂದ ಬಂದಿರುವಂತಹ ಒಂದು ಸಮಂಜಸವಾದ ಕ್ರಮ. ಅದರ ಬಗ್ಗೆ ನಾವು ಮಾತನಾಡಲು ಸಾಧ್ಯವಿಲ್ಲ. ಯಾಕಂದ್ರೆ ಶಾಸ್ತ್ರದ ದೃಷ್ಟಿಯಿಂದ ಕುಲ ಮತ್ತು ದೇಶ ಆಚಾರ ಧರ್ಮವನ್ನು ಉಲ್ಲಂಘನೆ ಮಾಡಬಾರದು ಅಂತ ಪುರಾಣದಲ್ಲಿದೆ. ಶಾಸ್ತ್ರದಲ್ಲಿ ಹೇಳಿರುವುದರಿಂದ ಆ ಸಂಪ್ರದಾಯವನ್ನೇ ಪಾಲಿಸಿಕೊಂಡು ಮುಂದುವರಿಯಬೇಕಾಗಿದೆ ಅಂತ ಹೇಳಿದರು.

    ಇದೀಗ ಒಂದು ತೀರ್ಪು ಬಂದಿದೆ. ಯಾಕಂದ್ರೆ ಅದನ್ನು ಕಾನೂನು ತಜ್ಞರೇ ನೋಡಿಕೊಳ್ಳಬೇಕು. ಇಲ್ಲಿ ಮಹಿಳೆಯರಿಗೆ ಎನಾದ್ರೂ ಆಗುತ್ತೆ ಅಂತ ಅಲ್ಲ, ದೇವರಿಗೆ ತೊಂದರೆ ಆಗಲ್ಲ, ಆದ್ರೆ ದೇವರಿಗೆ ಇದು ಸಮಂಜಸವಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv