Tag: ಬ್ಯಾಡಗಿ ಮೆಣಸಿನಕಾಯಿ

  • ಬಂಗಾರದ ಬೆಲೆಗೆ ಮಾರಾಟವಾದ ಬ್ಯಾಡಗಿ ಮೆಣಸಿನಕಾಯಿ- ರೈತನಿಗೆ ಸನ್ಮಾನ

    ಬಂಗಾರದ ಬೆಲೆಗೆ ಮಾರಾಟವಾದ ಬ್ಯಾಡಗಿ ಮೆಣಸಿನಕಾಯಿ- ರೈತನಿಗೆ ಸನ್ಮಾನ

    – ದಾಖಲೆ ಬೆಲೆಗೆ ಒಣ ಮೆಣಸಿನಕಾಯಿ ಮಾರಾಟ

    ಹಾವೇರಿ: ವಿಶ್ವ ಪ್ರಸಿದ್ಧ ಬ್ಯಾಡಗಿ ಒಣ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗಿದ್ದು, ಗದಗ ಜಿಲ್ಲೆಯ ರೈತನ ಒಂದು ಕ್ವಿಂಟಲ್ ಮೆಣಸಿನಕಾಯಿ ಬರೋಬ್ಬರಿ 50,111 ರೂ.ಗೆ ಮಾರಾಟವಾಗಿದೆ. ಇದು ಸರ್ವಕಾಲಿಕ ದಾಖಲೆ ಆಗಿದೆ. ಈ ಹಿನ್ನಲೆ ರೈತನಿಗೆ ಸಂತಸವಾಗಿದೆ.

    ಗದಗ ಜಿಲ್ಲೆಯ ಬೆಟಗೇರಿ ನಿವಾಸಿ ಮಲ್ಲಿಕಾರ್ಜುನ ಅವರ ಒಣ ಮೆಣಸಿನಕಾಯಿ ಇಷ್ಟೊಂದು ಬೆಲೆಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ಬರೆದಿದೆ. ಕಳೆದ ವಾರ ಬ್ಯಾಡಗಿ ಎಪಿಎಂಸಿಯಲ್ಲಿ ಸವಡಿ ರೈತರ ಮೆಣಸಿನಕಾಯಿ 40,111ರೂ. ಗೆ ಮಾರಾಟವಾಗಿ ದಾಖಲೆಯಾಗಿತ್ತು.

    ಈಗ ಬ್ಯಾಡಗಿ ಎಪಿಎಂಸಿಯಲ್ಲಿ ಗದಗ ರೈತರೊಬ್ಬರ ಮೆಣಸಿನಕಾಯಿ 50,111 ರೂ.ಗೆ ಮಾರಾಟವಾಗಿದೆ. ಇನ್ನು ಮಲ್ಲಿಕಾರ್ಜುನ ಅವರು ಸುಮಾರು ಮೂರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ಸದ್ಯ ಮೊದಲನೆ ಕಟಾವ್ ನಲ್ಲಿ 10 ಚೀಲ ಮಾರಾಟಕ್ಕೆ ಕೊಂಡೊಯ್ದಿದ್ದು, ಅದರಲ್ಲಿ ಮೂರು ಚೀಲ 50 ಸಾವಿರ ರೂ.ಗೆ ಮಾರಾಟವಾಗಿವೆ. ವಾರದಿಂದ ವಾರಕ್ಕೆ ಹೆಚ್ಚಿನ ದರದಲ್ಲಿ ಮಾರಾಟವಾಗಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

  • ಚಿನ್ನದ ಬೆಲೆ ಸನಿಹಕ್ಕೆ ಬ್ಯಾಡಗಿ ಒಣ ಮೆಣಸಿನಕಾಯಿ– ದಾಖಲೆ ಬೆಲೆಗೆ ರೈತರು ಖುಷ್

    ಚಿನ್ನದ ಬೆಲೆ ಸನಿಹಕ್ಕೆ ಬ್ಯಾಡಗಿ ಒಣ ಮೆಣಸಿನಕಾಯಿ– ದಾಖಲೆ ಬೆಲೆಗೆ ರೈತರು ಖುಷ್

    ಹಾವೇರಿ: ವಿಶ್ವ ಪ್ರಸಿದ್ಧ ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಒಣ ಮೆಣಸಿಕಾಯಿ ಮಾರಾಟವಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

    ಬ್ಯಾಡಗಿಯ ಸೋಮವಾರ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕ್ವಿಂಟಲ್‍ಗೆ ಇಂದು 33,333 ರೂಪಾಯಿಗೆ ಒಣ ಮೆಣನಕಾಯಿ ಮಾರಾಟವಾಗಿ ಹುಬ್ಬೇರಿಸುವಂತೆ ಮಾಡಿದೆ. ಇದು ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಮಂಜುನಾಥ ಗಾಡರೆಡ್ಡಿ ಜಮೀನಿನಲ್ಲಿ ಬೆಳೆದಿದ್ದ ಮೆನಸಿನಕಾಯಿ ಭಾರೀ ಬೆಲೆಗೆ ಮಾರಾಟವಾಗಿದೆ. ಇಂದು ರೈತ ಮಂಜುನಾಥ ಅವರು ಮೂರು ಕ್ವಿಂಟಲ್ ಮೆನಸಿನಕಾಯಿ ಮಾರಾಟ ಮಾಡಿ ಬರೋಬ್ಬರಿ 99,999 ರೂಪಾಯಿ ಹಣ ಪಡೆದುಕೊಂಡು ಖುಷಿಯಿಂದ ಮನೆಗೆ ತೆರೆಳಿದ್ದಾರೆ.

    ಈ ಹಿಂದೆ ಮಾರುಕಟ್ಟೆಯಲ್ಲಿ ಗದಗ ಜಿಲ್ಲೆಯ ರೋಣದ ರೈತರೊಬ್ಬರು ತಾವು ಬೆಳೆದಿದ್ದ ಒಣ ಮೆಣಸಿನಕಾಯಿಗೆ ಬಂಪರ್ ಬೆಲೆ ಪಡೆದುಕೊಂಡಿದ್ದರು. ಗುರುವಾರ ಮಾರುಕಟ್ಟೆಯಲ್ಲಿ 33,259ಕ್ಕೆ ದಾಖಲೆ ಬೆಲೆ ಸಿಕ್ಕಿತ್ತು. ಆದರೆ ಇಂದು 33,333 ರೂಪಾಯಿ ದರ ನಿಗದಿಯಾಗಿ ಗುರುವಾರದ ಮಾರುಕಟ್ಟೆ ಬೆಲೆಯನ್ನು ಹಿಂದಕ್ಕೆ ಹಾಕಿದೆ.

    ಚಿನ್ನದ ಬೆಲೆ ಸನಿಹಕ್ಕೆ ಬಂದ ಮೆನಸಿನಕಾಯಿ ಬೆಲೆ ನೋಡಿದ ಅನ್ನದಾತರು ಹಾಗೂ ವರ್ತಕರು ಬೆಲೆ ಕಂಡು ಅಚ್ಚರಿಗೊಂಡಿದ್ದಾರೆ. ಸಾವಯವ ಕೃಷಿಯಲ್ಲಿ ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದೇವೆ. ಇಂದು ಅದಕ್ಕೆ ದಾಖಲೆ ಬೆಲೆ ಸಿಕ್ಕಿದ್ದು ಸಂತಸವಾಗಿದೆ ಎಂದು ರೈತರು ಖುಷಿ ಹಂಚಿಕೊಂಡಿದ್ದಾರೆ.