Tag: ಬೆಳಗಾವಿ ಆಸ್ಪತ್ರೆ

  • ಪೂಜೆ ಮಾಡಿ ತೀರ್ಥ ಸೇವಿಸುವಾಗ ಲೋಹದ ಶ್ರೀಕೃಷ್ಣನ ಮೂರ್ತಿ ನುಂಗಿದ ವ್ಯಕ್ತಿ!

    ಪೂಜೆ ಮಾಡಿ ತೀರ್ಥ ಸೇವಿಸುವಾಗ ಲೋಹದ ಶ್ರೀಕೃಷ್ಣನ ಮೂರ್ತಿ ನುಂಗಿದ ವ್ಯಕ್ತಿ!

    ಬೆಳಗಾವಿ: ಪೂಜೆ ಮಾಡಿ ತೀರ್ಥ ಸೇವಿಸುವಾಗ ವ್ಯಕ್ತಿಯೊಬ್ಬ ಲೋಹದ ಕೃಷ್ಣನ ಮೂರ್ತಿ ನುಂಗಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಶ್ರೀಕೃಷ್ಣನ ಮೂರ್ತಿಯನ್ನು ಹೊರತೆಗೆದಿದ್ದಾರೆ.

    ಬೆಳಗಾವಿಯ 45 ವರ್ಷದ ವ್ಯಕ್ತಿ ಮನೆಯಲ್ಲಿ ನಿತ್ಯ ಪೂಜೆ ಮಾಡುತ್ತಿದ್ದ. ಪೂಜೆ ಮಾಡಿದ ನಂತರ ಮಾಮೂಲಿಯಂತೆ ತೀರ್ಥ ಸೇವಿಸಿದ್ದಾನೆ. ಈ ವೇಳೆ ಲೋಹದ ಕೃಷ್ಣನ ಮೂರ್ತಿಯನ್ನು ನುಂಗಿದ್ದಾನೆ. ಇದನ್ನೂ ಓದಿ: ಸರಗಳ್ಳತನಕ್ಕೆ ಯತ್ನಿಸಿ ಎಸ್ಕೇಪ್‌ ಆಗುವಾಗ ಬೈಕ್‌ ಅಪಘಾತ – ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರು

    ಇದಾದ ಬಳಿಕ ವ್ಯಕ್ತಿಯಲ್ಲಿ ಗಂಟಲು ನೋವು ಕಾಣಿಸಿಕೊಂಡಿದೆ. ನಂತರ ಗಂಟಲಿನಲ್ಲಿ ಊತ ಉಂಟಾಗಿ ಆತಂಕಗೊಂಡು ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾನೆ. ವೈದ್ಯರ ಸೂಚನೆ ಮೇರೆಗೆ ಎಕ್ಸರೇ ಮಾಡಿಸಿದ್ದಾನೆ. ಶ್ರೀಕೃಷ್ಣನ ಮೂರ್ತಿ ಗಂಟಲಿನಲ್ಲಿರುವುದು ಎಕ್ಸರೇ ವರದಿಯಿಂದ ತಿಳಿದುಬಂದಿದೆ.

    ವ್ಯಕ್ತಿ ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ. ಶಸ್ತ್ರಚಿಕಿತ್ಸೆ ಮೂಲಕ ಗಂಟಲಿನಿಂದ ಶ್ರೀಕೃಷ್ಣ‌‌‌ನ ಮೂರ್ತಿಯನ್ನು ವೈದ್ಯರು ಹೊರತೆಗೆದಿದ್ದಾರೆ. ಇಎನ್‌ಟಿ ವಿಭಾಗದ ವೈದ್ಯೆ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಿರ್ದೇಶಕ ಭೇಟಿ

    Live Tv