Tag: ಬೆಲೆ

  • ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ವಿಜಯಪುರ: ಜಿಲ್ಲೆಯ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ಹಣ ವಸೂಲಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇಸಾಕ್ ಬಡಿಗೇರ್ ರೈತರಿಂದ ಪ್ರತಿ ಕ್ವಿಂಟಲ್ ಗೆ 100 ರಿಂದ 150 ರೂಪಾಯಿ ವಸೂಲಿ ಮಾಡುತ್ತಿದ್ದಾನೆ. ಕಾಖಂಡಕಿ ತೊಗರಿ ಖರೀದಿ ಕೇಂದ್ರ ದಲ್ಲಿನ ಸಿಬ್ಬಂದಿಯ ಈ ವರ್ತನೆಯಿಂದ ರೈತರು ಬೇಸತ್ತಿದ್ದಾರೆ.

    ಪ್ರತಿ ರೈತರಿಂದ ಉಚಿತವಾಗಿ ತೊಗರಿ ಖರೀದಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶ ನೀಡಿದರೂ, ಈ ಕಂಪ್ಯೂಟರ್ ಆಪರೇಟರ್ ಮಾತ್ರ ರಾಜಾರೋಷವಾಗಿ ರೈತರಿಂದ ಸುಲಿಗೆ ಮಾಡುತ್ತಿದ್ದಾನೆ. ಒಬ್ಬ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿ ಮಾಡಬೇಕು ಎಂದು ಸರ್ಕಾರದ ಸೂಚನೆಯಿಂದ ಪ್ರತಿ ರೈತರಿಂದಲೂ 10 ಕ್ವಿಂಟಲ್ ಗೆ ಕಡಿಮೆ ಎಂದರೂ ಸಾವಿರ ರೂಪಾಯಿ ಸುಲಿಗೆ ಮಾಡಲಾಗುತ್ತಿದೆ.

    ಎರಡು ದಿನಗಳ ಹಿಂದಷ್ಟೇ ಇಂತಹ ಅಕ್ರಮ ದಂಧೆಯ ತೊಗರಿ ಖರೀದಿ ಕೇಂದ್ರದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಆದರೂ ಎಚ್ಚೆತ್ತುಗಳ್ಳದ ಖದೀಮರು ಅದೇ ಕೆಲಸ ಮುಂದುವರಿಸಿದ್ದು, ರೈತರಿಂದ ಸುಲಿಗೆ ಮಾಡುತ್ತಿದ್ದಾರೆ.

  • ಭಾರೀ ಪ್ರಮಾಣದಲ್ಲಿ ಕುಸಿಯಿತು ತರಕಾರಿ ಬೆಲೆ – ವ್ಯಾಪಾರಕ್ಕೆ ಬರ್ತಿಲ್ಲ ಕೇರಳಿಗರು

    ಭಾರೀ ಪ್ರಮಾಣದಲ್ಲಿ ಕುಸಿಯಿತು ತರಕಾರಿ ಬೆಲೆ – ವ್ಯಾಪಾರಕ್ಕೆ ಬರ್ತಿಲ್ಲ ಕೇರಳಿಗರು

    ಮೈಸೂರು: ಕೊರೊನಾ ವೈರಸ್ ಎಫೆಕ್ಟ್ ಅರಮನೆ ನಗರಿಯಲ್ಲಿ ತರಕಾರಿ ಮೇಲೆ ಬಿದ್ದಿದೆ. ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಗದೆ ಎಲ್ಲಾ ತರಕಾರಿ ಬೆಲೆ ಸಂಪೂರ್ಣವಾಗಿ ಕುಸಿದಿದೆ.

    ಕೇರಳದಲ್ಲಿ ಕೊರೊನಾದಿಂದ ಮೈಸೂರಿನ ತರಕಾರಿ ವ್ಯಾಪಾರದ ಮೇಲೆ ಭಾರಿ ಹೊಡೆತ ಬಿದ್ದಿದೆ. ಮೈಸೂರು ಎಪಿಎಂಸಿಯಿಂದ ನೇರವಾಗಿ ಕೇರಳಕ್ಕೆ ತರಕಾರಿ ಮಾರಾಟವಾಗುತ್ತಿತ್ತು. ಶೇಕಡಾ ಶೇ. 80 ತರಕಾರಿಗಳನ್ನ ಕೇರಳದ ವ್ಯಾಪಾರಿಗಳೇ ತೆಗೆದುಕೊಳ್ಳುತ್ತಿದ್ದರು. ಇದನ್ನೂ ಓದಿ: ನಾನ್ ವೆಜ್ ಪ್ರಿಯರಿಗೆ ಕೊರೊನಾ ಶಾಕ್- ಚಿಕನ್ ರೇಟ್ ಡೌನ್, ಮಟನ್, ಫಿಶ್ ರೇಟ್ ಹೈಕ್?

    ಕಳೆದೊಂದು ತಿಂಗಳಿಂದ ಕೇರಳದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಇದರಿಂದ ಮೈಸೂರಿನತ್ತ ತರಕಾರಿ ತೆಗೆದುಕೊಳ್ಳಲು ಕೇರಳಿಗರು ಬರುತ್ತಿಲ್ಲ. ಕೇರಳಿಗರು ಇಲ್ಲದೆ ತರಕಾರಿ ಬೆಲೆಗಳು ಕುಸಿದು ವ್ಯಾಪಾರಸ್ಥರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ:
    ಒಂದು ಸೌತೆಕಾಯಿಗೆ 6 ರೂ., ಸುನಾಮಿ ಕಾಯಿಗೆ 4 ರೂ., ಕೆ.ಜಿ ಗುಂಡು ಬದನೆ ಕೇವಲ 5 ರೂ. ಆಗಿದೆ. ಇನ್ನೂ ಕುಂಬಳಕಾಯಿ 3 ರೂ. ಕೆ.ಜಿ. ಹೀರೆಕಾಯಿ 8 ರೂ., ಕೆ.ಜಿ. ಬಿನಿಸ್ 10 ರೂ. ಆಗಿದೆ. ಒಂದು ಕೆ.ಜಿ ಮೆಣಸಿನಕಾಯಿ 10 ರೂ. ತೊಂಡೆಕಾಯಿ 7 ರೂ., ಮತ್ತು ಕೆ.ಜಿ. ಟಮೋಟ 5 ರೂ. ಆಗಿದೆ.

  • ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ

    ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ

    ಬೆಂಗಳೂರು: ಕೊರೊನಾ ವೈರಸ್ ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದ ಪರಿಣಾಮ ಚಿನ್ನದ ಬೆಲೆ ಗಗನಕ್ಕೇರಿದೆ. ಶುಕ್ರವಾರ ಒಂದೇ ದಿನಕ್ಕೆ 10 ಗ್ರಾಂ ಚಿನ್ನದ ಬೆಲೆ 990 ರೂ. ಹೆಚ್ಚಳ ಕಂಡಿದೆ.

    ಒಂದು ತಿಂಗಳಿನಲ್ಲಿ (ಫೆಬ್ರವರಿ 6ರಿಂದ ಮಾರ್ಚ್ 6ರವರೆಗೆ) 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 3,940 ರೂ. ಹೆಚ್ಚಾಗಿದೆ. ಅಂದರೆ ಫೆಬ್ರವರಿ 6ರಂದು 41,750 ರೂ. ಇದ್ದರೆ, ಇಂದು ಚಿನ್ನದ ಬೆಲೆ 45,690 ರೂ.ಗೆ ಏರಿಕೆ ಆಗಿದೆ. ಈ ಮಧ್ಯೆ ಅಂದ್ರೆ ಫೆಬ್ರವರಿ 29ರಂದು ಚಿನ್ನದ ಬೆಲೆ 43 ಸಾವಿರ ರೂ. ಇತ್ತು. ಆದರೆ ಆ ಬಳಿಕ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ.

    ಬೆಂಗಳೂರಿನಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ ಮಾರ್ಚ್ 2 ಹಾಗೂ 3ರಂದು 43,510 ರೂ., ಮಾರ್ಚ್ 4ರಂದು 44,570 ರೂ. ಹಾಗೂ ಮಾರ್ಚ್ 5ರಂದು 44,700 ರೂ. ಇತ್ತು. ಆದರೆ ಇಂದು 45,690 ರೂ.ಗೆ ಏರಿಕೆಯಾಗಿದೆ. ಈ ಮೂಲಕ ಒಂದೇ ದಿನಕ್ಕೆ 10 ಗ್ರಾಂ ಚಿನ್ನದ ಬೆಲೆ 990 ರೂ. ಹೆಚ್ಚಳವಾಗಿದೆ.

    ಷೇರುಪೇಟೆ ಭಾರೀ ಕುಸಿತ ಕಾಣುತ್ತಿದೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

  • ಹೋಳಿ ಹಬ್ಬಕ್ಕೂ ಮುನ್ನವೇ ಎಲ್‍ಪಿಜಿ ಗ್ರಾಹಕರಿಗೆ ಗುಡ್‍ನ್ಯೂಸ್ ಕೊಟ್ಟ ಕೇಂದ್ರ

    ಹೋಳಿ ಹಬ್ಬಕ್ಕೂ ಮುನ್ನವೇ ಎಲ್‍ಪಿಜಿ ಗ್ರಾಹಕರಿಗೆ ಗುಡ್‍ನ್ಯೂಸ್ ಕೊಟ್ಟ ಕೇಂದ್ರ

    ನವದೆಹಲಿ: ಹೋಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಎಲ್‍ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇಂದು ಅಂದ್ರೆ ಮಾರ್ಚ್ 1ರಂದು ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ 53 ರೂ. ಅಗ್ಗವಾಗಿದೆ.

    ಸಬ್ಸಿಡಿ ರಹಿತ ಎಲ್‍ಪಿಜಿ ದರವು ಸದ್ಯ ದೆಹಲಿಯಲ್ಲಿ 805 ರೂ. ಮತ್ತು ಮುಂಬೈನಲ್ಲಿ 776 ರೂ. ಇದೆ. ಕಳೆದ ವರ್ಷ ಆಗಸ್ಟ್ ನಂತರ ಇದೇ ಮೊದಲ ಬಾರಿಗೆ ಎಲ್‍ಪಿಜಿ ಸಿಲಿಂಡರ್ ಬೆಲೆ ಇಳಿಕೆ ಕಂಡಿದೆ. ಮೊದಲ 6 ತಿಂಗಳಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ ಆರು ಪಟ್ಟು ಹೆಚ್ಚಾಗಿತ್ತು.

    ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಪ್ರಕಾರ, ಹೊಸ ಬೆಲೆಯು ಭಾನುವಾರ ಜಾರಿಗೆ ಬಂದಿದ್ದು, ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್‍ಗಳ ಬೆಲೆ 53 ರೂ. ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಸದ್ಯ 862 ರೂ. ಇದ್ದು, ಬೆಲೆ ಕಡಿಮೆ ಆಗಿರುವುದರಿಂದ 809 ರೂ. ಆಗಲಿದೆ.

    ದೆಹಲಿಯಲ್ಲಿ ಈ ಮೊದಲು ಎಲ್‍ಪಿಜಿ ಸಿಲಿಂಡರ್ ಬೆಲೆಯು 858 ರೂ. ಇತ್ತು, ಈಗ 805 ರೂ. ಆಗಿದೆ. ಎಲ್‍ಪಿಜಿ ಸಿಲಿಂಡರ್ ಬೆಲೆ ಮುಂಬೈನಲ್ಲಿ 829 ರೂ.ರಿಂದ 776 ರೂ.ಗೆ ಇಳಿಕೆ ಕಂಡರೆ, ಕೋಲ್ಕತ್ತಾದಲ್ಲಿ 896 ರೂ.ದಿಂದ 839 ರೂ. ಹಾಗೂ ಚೆನ್ನೈನಲ್ಲಿ 881 ರೂ.ದಿಂದ 826 ರೂ.ಗೆ ಬೆಲೆ ಇಳಿಕೆಯಾಗಿದೆ.

    ಕೇಂದ್ರದಿಂದ ವಾರ್ಷಿಕ 12 ಸಿಲಿಂಡರ್ ಸಬ್ಸಿಡಿ:
    ಪ್ರಸ್ತುತ, ಕೇಂದ್ರ ಸರ್ಕಾರವು ಪ್ರತಿವರ್ಷ 14.2 ಕೆಜಿಯ 12 ಸಿಲಿಂಡರ್‍ಗಳಿಗೆ ಸಹಾಯಧನ ನೀಡುತ್ತದೆ. 12ಕ್ಕೂ ಹೆಚ್ಚು ಸಿಲಿಂಡರ್‍ಗಳನ್ನು ಬಳಸಿದರೆ ಗ್ರಾಹಕರು ಸಂಪೂರ್ಣ ಬೆಲೆ ತೆರಬೇಕಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‍ಪಿಜಿ ಬೆಲೆಗಳ ಆಧಾರದ ಮೇಲೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ನಿರ್ಧರಿಸಲಾಗುತ್ತದೆ. ದೇಶೀಯ ಗ್ರಾಹಕರಿಗೆ ಸಿಲಿಂಡರ್‍ಗೆ ಸುಮಾರು 154 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.

    ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಫೆಬ್ರವರಿ 13ರಂದು, ಎಲ್‍ಪಿಜಿ ದರ ಏರಿಕೆಯಾಗಿದ್ದನ್ನು ಖಂಡಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.

    ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್‍ಪಿಜಿ ದರ ಏರಿಕೆ ಖಂಡಿಸಿ ಸ್ಮೃತಿ ಇರಾನಿ ರಸ್ತೆಯಲ್ಲಿ ಸಿಲಿಂಡರ್ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ರಾಹುಲ್ ಗಾಂಧಿ, ಅದೇ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ದರ ಏರಿಕೆಯನ್ನು ಖಂಡಿಸಿದ್ದರು. ಎಲ್‍ಪಿಜಿ ಸಿಲಿಂಡರ್ ಬೆಲೆ 150 ರೂ. ಏರಿಕೆಯಾಗಿದ್ದನ್ನು ಖಂಡಿಸಿ ಬಿಜೆಪಿ ಸದಸ್ಯರ ನಡೆಸುತ್ತಿರುವ ಈ ಪ್ರತಿಭಟನೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ್ದರು.

    2010ರ ಫೋಟೋ: ಜುಲೈ 1, 2010ರ ಸ್ಮೃತಿ ಇರಾನಿ ಪ್ರತಿಭಟನೆ ನಡೆಸಿದ್ದರು. ಅಂದು ಅವರು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದರು. 2010ರ ಜುಲೈ 1ರಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ರಾಹುಲ್ ಸಿನ್ಹಾ ನೇತೃತ್ವದ ಪ್ರತಿಭಟನೆಯಲ್ಲಿ ಸ್ಮೃತಿ ಇರಾನಿ ಭಾಗಿಯಾಗಿದ್ದರು.

  • ಕಳೆದ ವಾರ 12 ಸಾವಿರ, ಇಂದು 2,000ಕ್ಕೆ ಕುಸಿದ ಬೆಲೆ – ರಸ್ತೆಗೆ ಬೆಳ್ಳುಳ್ಳಿ ಸುರಿದು ರೈತರ ಪ್ರತಿಭಟನೆ

    ಕಳೆದ ವಾರ 12 ಸಾವಿರ, ಇಂದು 2,000ಕ್ಕೆ ಕುಸಿದ ಬೆಲೆ – ರಸ್ತೆಗೆ ಬೆಳ್ಳುಳ್ಳಿ ಸುರಿದು ರೈತರ ಪ್ರತಿಭಟನೆ

    ಹಾವೇರಿ: ದಿಢೀರ್ ಬೆಳ್ಳುಳ್ಳಿ ದರ ಕುಸಿತ ಕಂಡ ಹಿನ್ನೆಲೆಯಲ್ಲಿ ರಸ್ತೆ ಮತ್ತು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಸುರಿದು ರೈತರು ಪ್ರತಿಭಟನೆ ಮಾಡಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದ ಎಪಿಎಂಸಿಯಲ್ಲಿ ನಡೆದಿದೆ.

    ರಾಣೇಬೆನ್ನೂರು ನಗರದ ಎಪಿಎಂಸಿಯಲ್ಲಿ ಕಳೆದ ವಾರ ಕ್ವಿಂಟಲ್‍ಗೆ 12,000 ರೂಪಾಯಿ ಬೆಳ್ಳುಳ್ಳಿ ಮಾರಾಟವಾಗಿತ್ತು. ಇವತ್ತು ಕ್ವಿಂಟಲ್‍ಗೆ ಎರಡು ಸಾವಿರ ರೂಪಾಯಿಗೆ ದರ ಕುಸಿದಿದೆ. ಇದರಿಂದ ಆಕ್ರೋಶಗೊಂಡ ರೈತರು ಬೆಳ್ಳುಳ್ಳಿ ಸುರಿದು ಪ್ರತಿಭಟನೆ ಮಾಡಿದರು.

    ಪ್ರತಿಭಟನೆ ವೇಳೆ ಬೆಳ್ಳುಳ್ಳಿ ಮಾರಾಟಕ್ಕೆ ಬಂದಿದ್ದ ರೈತನ ತಾಯಿ ನಾಗಮ್ಮ ಅಸ್ವಸ್ಥಗೊಂಡಿದ್ದರು. ತಕ್ಷಣ ಅಸ್ವಸ್ಥ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

    ಸೂಕ್ತ ದರ ನೀಡುವಂತೆ ರೈತರ ಪಟ್ಟು ಹಿಡಿದು ರಸ್ತೆ ತಡೆ ನಡೆಸಿದ್ದರು. ಆಗ ಮಾಹಿತಿ ತಿಳಿದು ಸ್ಥಳಕ್ಕೆ ರಾಣೇಬೆನ್ನೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ದಿಢೀರ್ ಬೆಲೆ ಕುಸಿತ- ಮಠಗಳಿಗೆ ರೈತರಿಂದ 300 ಮೂಟೆ ಉಚಿತ ಎಲೆಕೋಸು ರವಾನೆ

    ದಿಢೀರ್ ಬೆಲೆ ಕುಸಿತ- ಮಠಗಳಿಗೆ ರೈತರಿಂದ 300 ಮೂಟೆ ಉಚಿತ ಎಲೆಕೋಸು ರವಾನೆ

    – 30, 40 ಸಾವಿರ ಖರ್ಚು ಮಾಡಿ ಬೆಳೆದಿದ್ದ ರೈತರು
    – 40 ಮಂದಿ ರೈತರಿಂದ ಕೂಲಿಯಿಲ್ಲದೆ ಉಚಿತ ಕಟಾವು

    ನೆಲಮಂಗಲ: ದೇಶದ ಬೆನ್ನಲುಬು ರೈತ ಎನ್ನುತ್ತಾರೆ. ಆದರೆ ರೈತರು ಬೆಳೆದ 300 ಚೀಲ ಕೋಸಿಗೆ ಬೆಂಬಲ ಬೆಲೆಯಿಲ್ಲದೆ ಎಲೆಕೋಸನ್ನು ಮಠ ಮಂದಿರಗಳಿಗೆ ಉಚಿತವಾಗಿ ನೀಡಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರಿನ ರೈತ ಬಾಬು ಮತ್ತು ವಾಸು ಬೆಳೆದ ಎಲೆಕೋಸನ್ನು ಉಚಿತವಾಗಿ ಮಠ-ಮಂದಿರಗಳಿಗೆ ನೀಡುವ ಮೂಲಕ ಸಾರ್ಥಕ ಕಾರ್ಯಕ್ಕೆ ಮುಂದಾಗಿದ್ದಾರೆ. 30 ರಿಂದ 40 ಸಾವಿರ ಖರ್ಚು ಮಾಡಿ ಬೆಳೆದ ಎಲೆಕೋಸಿಗೆ ಬೆಲೆಯಿಲ್ಲಾದಂತಾಗಿದೆ. ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಚೀಲಕ್ಕೆ 70 ರಿಂದ 80 ರೂಪಾಯಿ. ಈ ಹಿನ್ನೆಲೆಯಲ್ಲಿ ರೈತರ ತಂಡ ಮನಸ್ಸು ಮಾಡಿ, ತುಮಕೂರಿನ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಯಡಿಯೂರು, ಧರ್ಮಸ್ಥಳಕ್ಕೆ ರವಾನೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಕೆರೆಕತ್ತಿಗನೂರು ರೈತರ ತಂಡ 300 ಚೀಲ ಎಲೆಕೋಸನ್ನು ಉಚಿತವಾಗಿ ನೀಡಿದ್ದಾರೆ. ಅಲ್ಲದೇ ಎಲೆಕೋಸನ್ನು ಕಟಾವು ಮಾಡಲು ಗ್ರಾಮದ 40 ಮಂದಿ ರೈತರು ಕೂಲಿಯಿಲ್ಲದೇ ಉಚಿತವಾಗಿ ಕೆಲಸ ನಿರ್ವಹಿಸಿದ್ದಾರೆ. ಸ್ಥಳೀಯ ಲಾರಿ ಮಾಲೀಕರೊಬ್ಬರು ಈ ಎಲೆಕೋಸನ್ನು ಸಾಗಿಸುವ ಹೊಣೆ ಹೊತ್ತು ಎಲ್ಲ ಮಠಗಳಿಗೆ ರವಾನೆ ಮಾಡುತ್ತಿದ್ದಾರೆ.

    ಅರ್ಧ ಎಕರೆಯಲ್ಲಿ ಮಗುವಿನಂತೆ ಹಾರೈಕೆ ಮಾಡಿರುವ ಎಲೆಕೋಸಿನ ಬೆಳೆ ಅನ್ನದಾತ ವಾಸು ಮತ್ತು ಕುಟುಂಬಕ್ಕೆ ಕೈ ಸುಡುವಂತೆ ಮಾಡಿದೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತನ ಬದುಕು ದುಸ್ತಾರವಾಗುತ್ತದೆ. ಬೆಳೆದ ತರಕಾರಿಗಳಿಗೂ ಬೆಂಬಲ ಘೋಷಿಸಿ ಎಂದು ಎಲೆಕೋಸು ಬೆಳೆದ ಬಾಬು ಒತ್ತಾಯಿಸಿದ್ದಾರೆ. ಕೃಷಿ ಇಲಾಖೆ ಆಯಾ ಕಾಲಕ್ಕೆ ತಕ್ಕ ಬೆಳೆ ಬೆಳೆಯಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

  • ನಾನ್‍ವೆಜ್ ಪ್ರಿಯರಿಗೆ ಶಾಕ್ – 700ರ ಗಡಿದಾಟಿದ ಮಟನ್ ರೇಟ್

    ನಾನ್‍ವೆಜ್ ಪ್ರಿಯರಿಗೆ ಶಾಕ್ – 700ರ ಗಡಿದಾಟಿದ ಮಟನ್ ರೇಟ್

    ಬೆಂಗಳೂರು: ನಾನ್‍ವೆಜ್ ಖಾದ್ಯಪ್ರಿಯರಿಗೆ ಶಾಕ್, ಇನ್ಮುಂದೆ ಮಟನ್ ಐಟಮ್ಸ್ ತಿನ್ನೋ ಮುನ್ನ ಜೇಬು ಗಟ್ಟಿಯಿದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ. ಯಾಕೆಂದರೆ ಮಟನ್ ರೇಟ್ ಏರಿಕೆಯಾಗಿದೆ.

    ಹೌದು.ಕಳೆದ ವಾರ ಕೆಜಿ ಮಟನ್‍ಗೆ 550 ರೂ. ಇತ್ತು. ಆದರೀಗ ಕೆಜಿ ಮಟನ್‍ಗೆ 700 ರೂಪಾಯಿಯಾಗಿದೆ. ಕಳೆದ ಬಾರಿ ಉಂಟಾದ ಪ್ರವಾಹದಿಂದ ಕುರಿಗಳು ಸತ್ತಿವೆ. ಜೊತೆಗೆ ಚಳಿಗಾಲದಲ್ಲಿ ಕುರಿಗಳು ಚಳಿ ತಡೆಯಲಾರದೇ ಸಾಯುತ್ತಿವೆ. ಅಲ್ಲದೇ ಕುರಿಗಳ ಸಾಕಾಣಿಕೆ ಕುಗ್ಗಿದೆ. ಈ ಎಲ್ಲಾ ಕಾರಣದಿಂದ ಮಟನ್ ಬೆಲೆ ಹೆಚ್ಚಳವಾಗಿದೆ.

    ಇತ್ತೀಚಿಗೆ ದಿನಗಳಲ್ಲಿ ಮೊದಲಿನ ಹಾಗೆ ಸಾಕಷ್ಟು ಪ್ರಮಾಣದಲ್ಲಿ ಕುರಿ ಸಾಕಾಣಿಕೆಯಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅಂದರೆ ಕುರಿ ಸಾಕಾಣಿಕೆದಾರರಿಗೆ ಕುರಿ, ಮೇಕೆಗಳನ್ನ ಮೇಯಿಸಲು ಗೋಮಾಳಗಳು ಸಿಗುತ್ತಿಲ್ಲ. ಮೊದಲಿನ ಹಾಗೆ ರೈತರೂ ಕೂಡ ಭೂಮಿಯಲ್ಲಿ ಕುರಿಗಳನ್ನ ಬಿಡುತ್ತಿಲ್ಲ. ಹೀಗಾಗಿ ಕುರಿ ಸಾಕಾಣಿಕೆ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಟನ್ ರೇಟ್ ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ ಮಾರುಕಟ್ಟೆಗೆ ಇತ್ತೀಚಿನ ದಿನಗಳಲ್ಲಿ ಬೌಯ್ಲರ್ ಕೋಳಿ ಲಗ್ಗೆ ಇಟ್ಟಿದ್ದು, ಇದರಿಂದಾಗಿಯೂ ಮಟನ್ ರೇಟ್ ಏರಿಕೆಗೆ ಕಾರಣವಾಗಿದೆ ಎಂದು ಮಟನ್ ವ್ಯಾಪಾರಸ್ಥರು ನಿಸಾರ್ ಅಹಮದ್ ತಿಳಿಸಿದ್ದಾರೆ.

    ಮಟನ್ ಖಾದ್ಯಗಳನ್ನ ತುಂಬಾ ಇಷ್ಟಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಹೀಗಾಗಿ ಮಟನ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800-1000 ರೂಪಾಯಿಗಳಿಗೆ ಏರಿಕೆಯಾದರೆ ಅಚ್ಚರಿ ಪಡಬೇಕಿಲ್ಲ ಎಂದು ಮಟನ್ ಪ್ರಿಯ ಮಹಮದ್ ಇದ್ರೀಸ್ ಹೇಳಿದ್ದಾರೆ.

    ಒಂದು ಕಡೆ ಗ್ಯಾಸ್ ರೇಟ್, ತರಕಾರಿ ರೇಟ್, ಈರುಳ್ಳಿ ರೇಟ್ ಜಾಸ್ತಿಯಾಗುತ್ತಿದೆ. ಮತ್ತೊಂದು ಕಡೆ ಮಟನ್ ದರ ಕೂಡ ಏರಿಕೆಯಾಗಿರುವುದು ಮಟನ್ ರೇಟ್ ಪ್ರಿಯರಿಗೆ ಬೇಸರ ಮೂಡಿಸಿದೆ.

  • ಸಂಕ್ರಾಂತಿ ಎಫೆಕ್ಟ್ – ಹೆಚ್ಚಾಯ್ತು ತರಕಾರಿಗಳ ಬೆಲೆ

    ಸಂಕ್ರಾಂತಿ ಎಫೆಕ್ಟ್ – ಹೆಚ್ಚಾಯ್ತು ತರಕಾರಿಗಳ ಬೆಲೆ

    – ಪೆಟ್ರೋಲ್, ಡಿಸೇಲ್ ರೀತಿ ತರಕಾರಿ ದರ ಅಧಿಕ!

    ಬೆಂಗಳೂರು: ಸಂಕ್ರಾಂತಿ ವರ್ಷದ ಮೊದಲ ಹಬ್ಬ. ಚೆನ್ನಾಗಿ ಆಚರಿಸಬೇಕು ಎಂಬ ಉತ್ಸಾಹಕ್ಕೆ ತರಕಾರಿ ಬೆಲೆಗಳು ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿವೆ.

    ಬೆಂಗಳೂರಿನ ಹಾಪ್ ಕಾಮ್ಸ್ ಮಳಿಗೆಗಳ ಬಳಿ ವ್ಯಾಪಾರಿಗಳು ಖಾಲಿ ಖಾಲಿ ಹೊಡೆಯುತ್ತಿದ್ದಾರೆ. ಈರುಳ್ಳಿ ಬೆಲೆ ಇನ್ನೂ ಮೊದಲ ಬೆಲೆಗೆ ಬಂದಿಲ್ಲ. ಜೊತೆಗೆ ತರಕಾರಿಗಳ ಬೆಲೆ ಸ್ವಲ್ಪ ಸ್ವಲ್ಪ ಹೆಚ್ಚಾಗುತ್ತಲೇ ಇದೆ. ನುಗ್ಗೇಕಾಯಿ ಕೆಜಿಗೆ 230 ರೂಪಾಯಿ ಆಗಿದೆ. ಬಟಾಣಿ, ಗುಂಡು ಬದನೆ ಬೆಲೆ ಕಳೆದ ದಿನಕ್ಕಿಂತ 15 ರೂಪಾಯಿ ಜಾಸ್ತಿಯಾಗಿದೆ. ಕ್ಯಾರೆಟ್ 90 ರೂ. ಆಗಿದೆ.

    ಹಬ್ಬದ ಹಿಂದಿನ ದಿನಕ್ಕಿಂತ ಸಂಕ್ರಾಂತಿಗೆ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿರುವುದು ಹಬ್ಬದ ಮೂಡ್‍ನಲ್ಲಿ ಬೇಜಾರು ತರಿಸಿದೆ. ಹಬ್ಬದ ಎಫೆಕ್ಟ್ ಗೆ ಗ್ರಾಹಕನ ಜೇಬು ತರಕಾರಿಗೆ ಖಾಲಿಯಾಗುವಂತಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಕಡಲೆಕಾಯಿ ಹಾಗೂ ಅವರೆಕಾಯಿ ಬೇಕೆ ಬೇಕು. ಅವರೆಕಾಯಿ ಕೆಜಿಗೆ 50-60 ರೂಪಾಯಿಯಾಗಿದ್ದರೆ, ಕಡಲೆಕಾಯಿ ಬೆಲೆ ಕೆಜಿಗೆ 90 ರೂಪಾಯಿಯಾಗಿದೆ. ಪ್ರತಿದಿನವೂ ಹಾಪ್ ಕಾಮ್ಸ್ ತರಕಾರಿ ದರ ಏರಿಕೆಯಾಗುತ್ತಲೇ ಇದೆ.

    ಎಷ್ಟೇ ಬೆಲೆಯಾದರೂ ತರಕಾರಿ ಖರೀದಿಮಾಡಲೇಬೇಕು. ಖರೀದಿ ಮಾಡುತ್ತಿದ್ದೇವೆ. ಹಬ್ಬಕ್ಕಾದರೂ ದರ ಕಡಿಮೆಯಾದರೆ ಸಾಕು ಅನ್ನಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದರ ಏರಿಕೆಗೆ ಕಡಿವಾಣ ಹಾಕಿ ಜನರು ಕೊಂಡುಕೊಳ್ಳುವಂತೆ ಮಾಡಬೇಕು. ಇಲ್ಲವಾದರೆ ನಾವು ಇನ್ನೂ ಕಷ್ಟದ ದಿನಗಳನ್ನ ನೋಡಬೇಕಾಗುತ್ತೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.

    ಯಾವುದಕ್ಕೆ ಎಷ್ಟು?
    ಹುರಳಿಕಾಯಿ 58 ರೂ, ಕ್ಯಾರೆಟ್ 92 ರೂ. ಆಗಿದೆ. ಇನ್ನೂ ಬೀಟ್‍ರೋಟ್ ಕೆಜಿಗೆ 39 ರೂ. ಇದೆ. ನವಿಲು ಕೋಸು 30 ರೂ., ಬದನೆ ಕಾಯಿ 40 ರೂ., ಬಿಳಿ ಬದನೆ 67 ರೂ. ಆಗಿದೆ. ಟೊಮೊಟೋ ಕೆಜಿಗೆ 28 ರೂ. ಆಗಿದೆ. ಈರುಳ್ಳಿ- 65 ರೂ., ಕಡ್ಲೆಕಾಯಿ 90 ರೂ. ಆಗಿದೆ. ನುಗ್ಗೆಕಾಯಿ 230 ರೂ., ಬಟಾಣಿ ಕೆಜಿಗೆ 80 ರೂ. ಆಗಿದೆ.

  • 41 ಸಾವಿರ ಗಡಿ ದಾಟಿತು – ಗಗನಕ್ಕೇರಿದ ಚಿನ್ನದ ಬೆಲೆ

    41 ಸಾವಿರ ಗಡಿ ದಾಟಿತು – ಗಗನಕ್ಕೇರಿದ ಚಿನ್ನದ ಬೆಲೆ

    ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಒಂದೇ ದಿನ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 710 ರೂ. ಏರಿಕೆಯಾಗಿ 41,130 ರೂ.ಗೆ ತಲುಪಿದೆ. ಇದು ಚಿನ್ನದ ಬೆಲೆಯ ಸಾರ್ವಕಾಲಿಕ ದಾಖಲೆಯಾಗಿದೆ.

    ಇದೇ ಮೊದಲ ಬಾರಿಗೆ ದೇಶದಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 41 ಸಾವಿರ ಗಡಿಯನ್ನು ದಾಟಿದ್ದು, 10 ಗ್ರಾಂ ಚಿನ್ನದ ಬೆಲೆ 2 ಸಾವಿರದಷ್ಟು ಹೆಚ್ಚಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.1.10 ರಷ್ಟು ಹೆಚ್ಚಳವಾಗಿದ್ದರೆ, 1 ಕೆಜಿ ಬೆಳ್ಳಿಯ ಬೆಲೆಯಲ್ಲಿ ಶೇ.0.83ರಷ್ಟು ಏರಿಕೆಯಾಗಿದೆ.

    ಡಿಸೆಂಬರ್ ತಿಂಗಳ ಅಂತ್ಯದಿಂದಲೂ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇದು ಆಭರಣಕೊಳ್ಳುವವರಿಗೆ ನಿರಾಸೆಯನ್ನು ಮೂಡಿಸಿದೆ. ಅಮೆರಿಕ ಇರಾನ್ ದೇಶದ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯನ್ನು ಆಭರಣ ಅಂಗಡಿ ಮಾಲೀಕರು ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ:  ಅಮೆರಿಕದಿಂದ ಏರ್ ಸ್ಟ್ರೈಕ್ – ಇರಾನ್ ಸೇನಾಧಿಕಾರಿ ಹತ್ಯೆ, ಕಚ್ಚಾ ತೈಲ ಬೆಲೆ ಏರಿಕೆ

    ಭಾರತದ ಜನರು ಸಂಪೂರ್ಣವಾಗಿ ಚಿನ್ನದ ಆಮದು ಮೇಲೆ ಅವಲಂಬಿತವಾಗಿದ್ದು, ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯಾಗುವ ನೇರ ಪರಿಣಾಮವನ್ನು ಎದುರಿಸಬೇಕಿದೆ. ಚೀನಾ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಟ್ರೆಡ್ ವಾರ್ ಪರಿಣಾಮವೂ ಚಿನ್ನದ ಬೆಲೆಯ ಮೇಲೆ ಬೀರುತ್ತಿದೆ. ಭಾರತದ ವಿಶ್ವದಲ್ಲೇ ಅತಿ ದೊಡ್ಡ ಚಿನ್ನ ಆಮದು ಮಾಡುವ ದೇಶವಾಗಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಭಾರತದ ಚಿನ್ನದ ಆಮದು ಪ್ರಮಾಣ ಕಡಿಮೆಯಾಗಿದೆ. 2019-20ರ ಅಂಕಿ ಅಂಶಗಳ ಅನ್ವಯ ಚಿನ್ನದ ಆಮದು ಪ್ರಮಾಣ 1.43 ಲಕ್ಷ ಕೋಟಿಗಳಷ್ಟಿದೆ. ವಾರ್ಷಿಕವಾಗಿ 800 ರಿಂದ 900 ಟನ್‍ನಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

    ತೈಲ ಬೆಲೆ ಏರಿಕೆ:
    ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.39 ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 69.16 ಡಾಲರ್(ಅಂದಾಜು 4,900 ರೂ.) ತಲುಪಿದೆ. ಈ ಹಿಂದೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 66.25 ಡಾಲರ್(ಅಂದಾಜು 4,700 ರೂ.) ಇತ್ತು.

  • ಈರುಳ್ಳಿ, ನುಗ್ಗೆಕಾಯಿ ಆಯ್ತು, ಇದೀಗ ಅವರೆಕಾಯಿ ಸರದಿ

    ಈರುಳ್ಳಿ, ನುಗ್ಗೆಕಾಯಿ ಆಯ್ತು, ಇದೀಗ ಅವರೆಕಾಯಿ ಸರದಿ

    ಬೆಂಗಳೂರು: ಇತ್ತೀಚೆಗಷ್ಟೆ ಈರುಳ್ಳಿ ಬೆಲೆ ಹಾಗೂ ನುಗ್ಗೆಕಾಯಿ ಬೆಲೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಈಗ ಅವರೆಕಾಯಿ ಬೆಲೆ ಜಾಸ್ತಿಯಾಗಿದೆ. ಇದರಿಂದ ಅವರೆಕಾಯಿ ಪ್ರಿಯರಿಗೆ ಶಾಕ್ ಆಗಿದೆ.

    ಕಳೆದ ವರ್ಷ ಕೇವಲ 20 ರಿಂದ 40 ರೂ. ಸಿಗುತ್ತಿದ್ದ ಅವರೆಕಾಯಿ, ಈ ಬಾರಿ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಒಂದು ಕೆಜಿ ಸಾಧಾರಣ ಅವರೆಕಾಯಿ ಬೆಲೆ 40 ರಿಂದ 50 ರೂಪಾಯಿ ಮಾರಟವಾಗುತ್ತಿದ್ದು, ಬೆಸ್ಟ್ ಕ್ವಾಲಿಟಿ ಅವರೆಕಾಯಿ ಬೇಕು ಎಂದರೆ 70 ರಿಂದ 80 ರೂ. ಮಾರಾಟವಾಗುತ್ತಿದೆ.

    ರಾಗಿ, ಮೆಕ್ಕೆಜೋಳ, ಜೋಳ, ತೊಗರಿ ಹೊಲಗಳಲ್ಲಿ ಉಪ ಬೆಳೆಯಾಗಿ ಅವರೆಕಾಯಿಯನ್ನು ಬೆಳೆಸಲಾಗುತ್ತಿತ್ತು. ಆದರೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮ ರೋಗ ಬಂದು ಅವರೆಕಾಯಿ ಇಳುವರಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಕೇವಲ 2 ರಿಂದ 3 ಲೋಡ್ ಅವರೆಕಾಯಿ ಮಾತ್ರ ಪೂರೈಕೆಗೆ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

    ಡೆಂಕಣಕೋಟೆ, ಥಳಿ, ಆನೇಕಲ್, ಚಿತ್ರದುರ್ಗ, ಮಾಗಡಿಗಳಿಂದ ಸೊಗಡು ಅವರೆಕಾಯಿ ಮಾರುಕಟ್ಟೆಗೆ ಪ್ರವೇಶಿಸಬೇಕಿತ್ತು. ಇನ್ನೂ ಜನವರಿ ಮೊದಲ ವಾರ ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯ ಈರುಳ್ಳಿ, ನುಗ್ಗೆಕಾಯಿ ಬೆಲೆ ಕೇಳಿ ಸುಸ್ತಾದ ಜನ, ಈಗ ಅವರೆಕಾಯಿ ಬೆಲೆ ಕೂಡ ಶಾಕ್ ನೀಡಿದ್ದು, ಮುಂದಿನ ದಿನದಲ್ಲಿ ಇನ್ಯಾವೆಲ್ಲ ತರಕಾರಿ ರೇಟ್ ಜಾಸ್ತಿ ಆಗಬಹುದು ಎಂದು ಚಿಂತೆಯಲ್ಲಿದ್ದಾರೆ.