Tag: ಬೆಣ್ಣೆ ಅಲಂಕಾರ

  • ಮಧ್ಯ ರಂಗನಾಥಸ್ವಾಮಿಗೆ 150 ಕೆ.ಜಿ.ಬೆಣ್ಣೆ ಅಲಂಕಾರ

    ಮಧ್ಯ ರಂಗನಾಥಸ್ವಾಮಿಗೆ 150 ಕೆ.ಜಿ.ಬೆಣ್ಣೆ ಅಲಂಕಾರ

    ಚಾಮರಾಜನಗರ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಚಾಮರಾಜನಗರದ ಬಹುತೇಕ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರಗಳು ನಡೆದವು. ಅದರಲ್ಲೂ ಕೊಳ್ಳೇಗಾಲ ತಾಲೂಕಿನ ಮಧ್ಯ ರಂಗನಾಥಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

    ಸುಮಾರು 150 ಕೆ.ಜಿ.ತೂಕದ ಬೆಣ್ಣೆಯಿಂದ ಮಧ್ಯ ರಂಗನಾಥಸ್ವಾಮಿಗೆ ಅಲಂಕಾರ ಮಾಡಲಾಗಿತ್ತು. ಬೆಣ್ಣೆಯಲ್ಲಿ ಅಲಂಕಾರವಾಗಿದ್ದ ರಂಗನಾಥಸ್ವಾಮಿಯನ್ನು ನೋಡಲು ಸಾವಿರಾರು ಭಕ್ತರು ಬಂದಿದ್ದು, ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೇ ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತೆ ಎಂದು ಭಾವಿಸಿರೋ ಅಪಾರ ಭಕ್ತ ಸಮೂಹ ಸ್ವಾಮಿಯ ದರ್ಶನ ಪಡೆದರು.

    ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಅಂತ್ಯರಂಗನನ್ನು ಒಂದೇ ದಿನ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಪಾರ ಭಕ್ತ ಸಮೂಹವೇ ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯುತ್ತಿದ್ದಾರೆ. ಅದಲ್ಲರೂ ಬೆಣ್ಣೆ ಅಲಂಕಾರದಲ್ಲಿ ಮಧ್ಯ ರಂಗನಾಥಸ್ವಾಮಿ ಕಂಗೊಳಿಸುತ್ತಿದುದ್ದು ವಿಶೇಷವಾಗಿತ್ತು.

  • ಬೃಹತ್ ಸಾಲಿಗ್ರಾಮ ಶಿಲಾ ಗಣಪನಿಗೆ 150 ಕೆಜಿ ಬೆಣ್ಣೆ, 3,500 ತೆಂಗಿನಕಾಯಿ ಅಲಂಕಾರ

    ಬೃಹತ್ ಸಾಲಿಗ್ರಾಮ ಶಿಲಾ ಗಣಪನಿಗೆ 150 ಕೆಜಿ ಬೆಣ್ಣೆ, 3,500 ತೆಂಗಿನಕಾಯಿ ಅಲಂಕಾರ

    ಕೋಲಾರ: ನಾಲ್ಕು ಯುಗಗಳಲ್ಲಿ ತನ್ನ ಪವಾಡಗಳಿಂದ ಪ್ರಸಿದ್ಧಿಯಾಗಿರುವ ಸಾಲಿಗ್ರಾಮ ಶಿಲಾ ಗಣಪ ಗ್ರಹಣ ಹಾಗೂ ಧನುರ್ಮಾಸ ಅಂಗವಾಗಿ ಇಂದು ಬೆಣ್ಣೆಯಲ್ಲಿ ಅದ್ದೂರಿಯಾಗಿ ಅಲಂಕಾರಗೊಂಡು ಭಕ್ತರ ಕಣ್ಮನ ತಣಿಸಿದ್ದಾನೆ. ಬರೋಬ್ಬರಿ 150 ಕೆಜಿ ಬೆಣ್ಣೆ ಹಾಗೂ 3,500 ತೆಂಗಿನಕಾಯಿಯಿಂದ ಗಣಪನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

    ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ದ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ 14 ಅಡಿ ಏಕಶಿಲಾ ಸಾಲಿಗ್ರಾಮ ಗಣಪನ ವಿಭಿನ್ನ ಅಲಂಕಾರವನ್ನು ಭಕ್ತ ಸಮೂಹ ಕಣ್ತುಂಬಿಕೊಂಡಿತು. ಬೆಣ್ಣೆ ಹಾಗೂ ಒಣಗಿದ ತೆಂಗಿನಕಾಯಿಯಿಂದ ಗರ್ಭಗುಡಿ ಕಂಗೊಳಿಸಿದ್ದು, ಎಲ್ಲರ ಗಮನ ಸೆಳೆಯಿತು. ಮುಜರಾಯಿ ಇಲಾಖೆಗೆ ಸೇರಿರೋ ಕುರುಡುಮಲೆ ದೇವಸ್ಥಾನದಲ್ಲಿ ಧನುರ್ಮಾಸದ ಪ್ರಯುಕ್ತ ಹಾಗೂ ಗ್ರಹಣ ಅಂಗವಾಗಿ ಕೇತುಗ್ರಹಕ್ಕೆ ಅಧಿಪತಿಯಾದ ಗಣಪತಿಗೆ ಕಳೆದ 23 ವರ್ಷಗಳಿಂದ ಬೆಣ್ಣೆ ಅಲಂಕಾರ ಮಾಡಿಕೊಂಡ ಬರಲಾಗಿದೆ.

    ವಿಶ್ವದ ಏಕೈಕ 14 ಅಡಿಯ ಏಕಶಿಲಾ ಸಾಲಿಗ್ರಾಮ ಶಿಲೆಯ ಗಣೇಶನಿಗೆ ಬೆಣ್ಣೆಯ ಅಲಂಕಾರ ಮಾಡಿ, ದೇವರೆದುರು ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡರೆ ಅವರ ಕಷ್ಟಗಳು ಬೆಣ್ಣೆಯಂತೆ ಕರಗುತ್ತದೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಅದಕ್ಕಾಗಿಯೇ ಪ್ರತಿವರ್ಷ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಲಾಗುತ್ತದೆ. 14 ಅಡಿಯ ಈ ಬೃಹತ್ ಸಾಲಿಗ್ರಾಮ ಶಿಲಾ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಲು 150 ಕೆಜಿ ಬೆಣ್ಣೆ ಬಳಸಿಕೊಂಡು, 10 ಪುರೋಹಿತರು ಶ್ರಮ ವಹಿಸಿ ಅಲಂಕಾರ ಮಾಡಿದ್ದಾರೆ. ಈ ವರ್ಷ ಗಣೇಶನಿಗೆ ಬೆಣ್ಣೆ ಅಲಂಕಾರದ ಜೊತೆಗೆ ವಿಶೇಷವಾಗಿ ದೇವಾಲಯದ ಗರ್ಭಗುಡಿಗೆ 3,500 ಒಣಗಿದ ತೆಂಗಿನ ಕಾಯಿಯಿಂದ ಅಲಂಕಾರ ಮಾಡಲಾಗಿದೆ.

    ಕುರುಡುಮಲೆ ದೇವಸ್ಥಾನಕ್ಕೆ ದೊಡ್ಡ ಇತಿಹಾಸವಿದೆ. ತ್ರಿಪುರಾಸುರ ಎಂಬ ರಾಕ್ಷಸನ ಸಂಹಾರಕ್ಕಾಗಿ ಬ್ರಹ್ಮ, ವಿಷ್ಣು, ಮಹೇಶ್ವರರು ಕೂಡಿ ಈ 14 ಅಡಿಯ ಏಕಶಿಲಾ ಸಾಲಿಗ್ರಾಮ ಶಿಲಾ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಅದಕ್ಕಾಗಿಯೇ ಈ ಸ್ಥಳಕ್ಕೆ ಕುರುಡುಮಲೆ ಎಂದು ಹೆಸರು ಬಂತು ಅನ್ನೋದು ಪ್ರತೀತಿ. ಈ ಗಣಪ ನಾಲ್ಕು ಯುಗಗಳಲ್ಲಿ ಅಂದರೆ ಕೃತಯಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದಲ್ಲೂ ಪೂಜೆ ಮಾಡಲಾಗುತ್ತಿದೆ.

    ಹೀಗಾಗಿ ಈ ಶಕ್ತಿಶಾಲಿ ಗಣಪನಲ್ಲಿಗೆ ಈಗಲೂ ಲಕ್ಷಾಂತರ ಜನರು ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರು, ಅಧಿಕಾರಿಗಳು, ವ್ಯಾಪಾರಸ್ಥರು ಯಾರೇ ಆಗಲೀ, ಏನೇ ಕೆಲಸ ಆರಂಭಿಸುವ ಮೊದಲು ಈ ಗಣೇಶನಿಗೆ ಪೂಜೆ ಸಲ್ಲಿಸೋದು ಪ್ರತೀತಿ. ಈ ವಿಶೇಷ ದಿನದಂದು ಬೆಣ್ಣೆ ಅಲಂಕಾರದಲ್ಲಿ ಗಣೇಶನನ್ನು ನೋಡಿದ ಭಕ್ತರಂತೂ ಭಕ್ತಿ ಸಾಗರದಲ್ಲಿ ತೇಲಿ ಹೋಗಿದ್ದಾರೆ.