Tag: ಬೆಂಬಲ ವಾಪಸ್

  • ದೋಸ್ತಿ ಸರ್ಕಾರದ ಎರಡು ವಿಕೆಟ್ ಪತನ- ಪಕ್ಷೇತರರ ಬೆಂಬಲ ವಾಪಸ್

    ದೋಸ್ತಿ ಸರ್ಕಾರದ ಎರಡು ವಿಕೆಟ್ ಪತನ- ಪಕ್ಷೇತರರ ಬೆಂಬಲ ವಾಪಸ್

    ಮುಂಬೈ: ಸಂಕ್ರಾಂತಿಯಂದು ಆಪರೇಷನ್ ಕಮಲ ನಡೆಯಲಿದೆ ಎನ್ನುವ ಸುದ್ದಿಗೆ ಪೂರಕ ಎಂಬಂತೆ ಪಕ್ಷೇತರ ಶಾಸಕರಾದ ರಾಣೇಬೆನ್ನೂರು ಶಾಸಕ ಆರ್.ಶಂಕರ್ ಮತ್ತು ಮುಳಬಾಗಿಲು ನಾಗೇಶ್ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ಸು ಪಡೆದಿದ್ದಾರೆ.

    ಈ ಇಬ್ಬರು ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದ್ರಾ ಎಂಬ ಚರ್ಚೆಗಳು ಅರಂಭಗೊಂಡಿವೆ. ಇನ್ನು ಮುಂಬೈನಲ್ಲಿರುವ ಇತರೆ ಕಾಂಗ್ರೆಸ್ ನಾಯಕರ ನಡೆಯ ಮೇಲೆ ಎಲ್ಲರ ಕಣ್ಣಿದೆ. ಒಂದು ವೇಳೆ ಮುಂಬೈನಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ 14 ಜನರು ರಾಜೀನಾಮೆ ನೀಡಿದ್ರೆ ದೋಸ್ತಿಗಳಿಗೆ ಕಂಟಕ ಎದುರಾಗುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಸರ್ಕಾರ ರಚನೆಯಾಗಿ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೇ ಆಡಳಿತ ನಡೆಸುತ್ತಿದೆ. ಈ ಅಭದ್ರ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತು ನಮ್ಮ ಬೆಂಬಲವನ್ನು ವಾಪಸ್ಸು ಪಡೆಯುತ್ತಿದ್ದೇವೆ ಎಂದು ಹೇಳಿದ್ದು, ಎಲ್ಲಿಯೂ ಬಿಜೆಪಿ ಸೇರುತ್ತೇನೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv