Tag: ಬೆಂಗಳೂರು ವಿಶ್ವ ವಿದ್ಯಾಲಯ

  • ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಮಾರಾಮಾರಿ – ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್

    ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಮಾರಾಮಾರಿ – ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್

    ಬೆಂಗಳೂರು: ಎಬಿವಿಪಿ ಮತ್ತು ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    ರಾಯಚೂರಿನಲ್ಲಿ ಅಂಬೇಡ್ಕರ್ ಅವರಿಗೆ ಅವಮಾನವಾದ ಹಿನ್ನೆಲೆ ಬೆಂಗಳೂರು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದರೆ ಇತ್ತ ಮಾಕ್ರ್ಸ್ ಕಾರ್ಡ್, ಫಲಿತಾಂಶ ತಡವಾಗಿ ಬರುತ್ತಿರುವ ಹಿನ್ನೆಲೆ ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ.

    ಪ್ರತಿಭಟನೆ ವೇಳೆ ಎಬಿವಿಪಿ ವಿದ್ಯಾರ್ಥಿಗಳೊಂದಿಗೆ ಸಂಶೋಧನಾ ವಿದ್ಯಾರ್ಥಿಗಳು ವಾಗ್ವಾದ ಇಳಿದಿದ್ದು, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ವಿಚಾರವೇ ದೊಡ್ಡದು. ದೇಶಕ್ಕಾಗಿ ನೀವು ಬರುವುದಿಲ್ಲ ಮಾಕ್ರ್ಸ್ ಕಾರ್ಡ್, ಫಲಿತಾಂಶ ತಡವಾಗುವುದು ಇದೆಲ್ಲ ಮಾಮೂಲಿಯಾಗಿದೆ. ಇವತ್ತು ನಮ್ಮ ಪ್ರತಿಭಟನೆ ಇದೆ. ನೀವು ನಾಳೆ ಬನ್ನಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ಗಲಾಟೆ ವೇಳೆ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಸಂಶೋಧನಾ ವಿವಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳು, ಮನ ಬಂದಂತೆ ತಮ್ಮ ಸ್ನೇಹಿತರನ್ನ ಹಾಸ್ಟೆಲ್‍ನಲ್ಲಿ ಉಳಿಸಿಕೊಳ್ಳುತ್ತಿದ್ದರು. ಇದರಿಂದ ಉಳಿದ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿತ್ತು. ಕೆಲ ಸಂಶೋಧನಾ ವಿದ್ಯಾರ್ಥಿಗಳು ಇದನ್ನು ಪ್ರಶ್ನೆ ಮಾಡಿದರೆ ನೀವು ಜೂನಿಯರಗಳು ಅಂತ ದರ್ಪ ಮಾಡುತ್ತಿದ್ದಾರೆ ಎಂದು ಎಬಿವಿಪಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಈ ವೇಳೆ ಎರಡೂ ವಿದ್ಯಾರ್ಥಿ ಸಂಘಟನೆಗಳ ಸದಸ್ಯರ ವಾಗ್ವಾದ ನಡೆದು ಜಗಳ ನಡೆದಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ: ನಲಪಾಡ್ ಅಧಿಕಾರ ಸ್ವೀಕಾರ

    ಕಳೆದ ಎರಡು ದಿನಗಳಿಂದ ಈ ಕುರಿತು ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ ಇಂದು ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದ ವೇಳೆ ಗಲಾಟೆ ನಡೆದಿದೆ.

  • ಬೆಂಗಳೂರು ವಿವಿ ಈಜುಕೊಳದಲ್ಲಿ ಪೂಲ್ ಪಾರ್ಟಿ – ವರದಿ ಮಾಡದಂತೆ ಹಣದ ಆಮಿಷ

    ಬೆಂಗಳೂರು ವಿವಿ ಈಜುಕೊಳದಲ್ಲಿ ಪೂಲ್ ಪಾರ್ಟಿ – ವರದಿ ಮಾಡದಂತೆ ಹಣದ ಆಮಿಷ

    ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಏನಾದ್ರು ಆಯೋಜನೆ ಮಾಡುವಾಗ ಸಂಬಂಧಪಟ್ಟವರು ಲಿಖಿತ ಅನುಮತಿ ನೀಡಬೇಕು ಅಥವಾ ಯಾರಾದ್ರೂ ಹೊರಗಿನವರು ಕಾರ್ಯಕ್ರಮ ಮಾಡೋವಾಗ ಬಾಡಿಗೆ ನೀಡಬೇಕು. ಆದ್ರೆ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿರುವ ಈಜುಕೊಳದಲ್ಲಿ ಪಾರ್ಟಿ ಮಾಡಲು ಪ್ರಾಂಶುಪಾಲರಾದ ಕೃಷ್ಣಸ್ವಾಮಿ ಯಾವುದೇ ಲಿಖಿತ ಅನುಮತಿ ನೀಡದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಲಾಗಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

    ಇಂದು ಈ ಕಾರ್ಯಕ್ರಮ ಇದೆ ಅಂತ ಆಯೋಜಕರು ಮಾಧ್ಯಗಳಿಗೆ ಆಹ್ವಾನ ನೀಡಿದ್ರು. ಆದ್ರೆ ಮಾಧ್ಯಮದವರು ಅಲ್ಲಿ ಹೋದಾಗ ಅಲ್ಲಿನ ಪ್ರಾಂಶುಪಾಲರಾದ ಕೃಷ್ಣಸ್ವಾಮಿ ಗಲಿಬಿಲಿಗೆ ಒಳಗಾಗಿ, ನನಗೆ ಈ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಅನುಮತಿ ಕೊಟ್ಟಿದ್ದೆ. ಈಗ ಕಾರ್ಯಕ್ರಮ ನಡೆಸಲ್ಲ ಎಂದು ಮಾಧ್ಯಮದವರನ್ನ ಸಾಗಹಾಕಿದ್ರು. ಹೀಗಾಗಿ ಮಾಧ್ಯಮದವರು ಹಿಂದಿರುಗಿದ್ದಾರೆ. ಆದ್ರೆ ಆ ಬಳಿಕ ಜುಲೈ 29ರಂದು ಸಂಜೆ ಅನುಮತಿ ನೀಡಿದ್ದಾರೆ. ಯಾಕೆ ಈ ರೀತಿ ನಮ್ಮನ್ನ ದೂರ ಇಟ್ರು ಅಂತ ಮಾಧ್ಯಮ ಮಂದಿ ಹುಡುಕಾಡಿದಾಗ ಅಲ್ಲಿನ ಪಾರ್ಟಿಗೆ ಕೇವಲ ಮೌಖಿಕ ಅನುಮತಿ ನೀಡಲಾಗಿದೆಯೆಂದು ತಿಳಿದುಬಂತು. ಈ ಬಗ್ಗೆ ಪಬ್ಲಿಕ್ ಟಿವಿ ವಿವಿಯ ಪ್ರಾಂಶುಪಾಲ ಕೃಷ್ಣಸ್ವಾಮಿಯರನ್ನು ಪ್ರಶ್ನಿಸಿದಾಗ, ಕಾರ್ಯಕ್ರಮ ನಿಲ್ಲಿಸುತ್ತೇವೆ ಅಂದ್ರು. ಆದ್ರೆ ಅಂದು ಕಾರ್ಯಕ್ರಮ ನಡೆದಿದೆ. ಹೇಗೆ ಅನುಮತಿ ನೀಡಿದ್ರಿ ಅಂದ್ರೆ ಮೌಖಿಕವಾಗಿಯೇ ಅನುಮತಿ ಕೊಟ್ಟೆ ಅನ್ನೋದು ಬಿಟ್ಟು ಬೇರೆ ಮಾತಾಡಲ್ಲ ಪ್ರಾಂಶುಪಾಲ ಕೃಷ್ಣಸ್ವಾಮಿ.

    ಲಿಖಿತ ಆದೇಶ ಎಲ್ಲಿ ಅಂದ್ರೆ ಯಾವುದೋ ಪ್ರಿಂಟ್ ತಂದು ತೊರಿಸ್ತಾರೆ. ಅದು ಅಲ್ಲಿಯೇ ಸಹಿ ಮಾಡಿದ್ದು. ಮೌಖಿಕ ಆದೇಶ ಅಂದ್ರಿ ಇದೆಲ್ಲಿಂದ ಬಂತು? ಅಂತ ಕೇಳಿದ್ರೆ ಮತ್ತೆ ಗಲಿಬಿಲಿಯಾಗ್ತಾರೆ. ಇನ್ನು ಈ ಬಗ್ಗೆ ರಿಜಿಸ್ಟ್ರಾರ್ ರವಿಯವರನ್ನ ಕೇಳಿದ್ರೆ ಇದಕ್ಕೂ ನನಗೂ ಸಂಬಂಧ ಇಲ್ಲ. ಕೃಷ್ಣಸ್ವಾಮಿಯನ್ನ ಕೇಳಿ ಅಂತಾರೆ. ಏನೋ ಕೊಡ್ತೀವಿ ಸುಮ್ಮನಾಗಿ ಸರ್ ಅಂತ ಹಣದ ಆಮಿಷ ಬೇರೆ ನೀಡ್ತಾರೆ ಈ ಪ್ರಿನ್ಸಿಪಾಲ್.

    ವಿವಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಅಕ್ರಮ ನಡೆದಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ರೂ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ವಿಶ್ವವಿದ್ಯಾಲಯದ ಈಜುಕೊಳ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಅಂತ ಇರೋದು. ಅದರಲ್ಲಿ ಕಾರ್ಯಕ್ರಮ ಮಾಡೋದೇ ಆದ್ರೆ ಅನುಮತಿಯ ಮೇರೆಗೆ ಆಗಬೇಕು. ಆದ್ರೆ ಈ ರೀತಿ ತಪ್ಪು ಮಾಡಿದೋರ ವಿರುದ್ಧ ಕ್ರಮ ಯಾವಾಗ ಅನ್ನೊದೇ ಪ್ರಶ್ನೆ.