Tag: ಬೆಂಗಳೂರು ಮೇಯರ್

  • ಬೈಕ್ ಏರಿದ ಬೆಂಗ್ಳೂರು ಮೇಯರ್​ಗೆ ಗುಂಡಿಗಳ ದರ್ಶನ

    ಬೈಕ್ ಏರಿದ ಬೆಂಗ್ಳೂರು ಮೇಯರ್​ಗೆ ಗುಂಡಿಗಳ ದರ್ಶನ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸುತ್ತಲು ಇಂದು ಮೇಯರ್ ಗೌತಮ್ ಕುಮಾರ್ ಬೈಕ್ ನಲ್ಲಿ ಹೊರಟ್ಟಿದ್ದರು. ಬೈಕ್ ನಲ್ಲಿ ರೌಂಡ್ಸ್ ಹೊರಟ ಮೇಯರ್ ಅವರಿಗೆ ಸಾಲು ಸಾಲು ಗುಂಡಿಗಳ ದರ್ಶನವಾಗಿದೆ.

    ಅಧಿಕಾರಿಗಳ ಜೊತೆ ಜನರ ಸಮಸ್ಯೆ ಆಲಿಸಲು ಮೇಯರ್ ಮಲ್ಲೇಶ್ವರಂ ಮುಖ್ಯರಸ್ತೆಗಳಲ್ಲಿ ಇಂದು ಬೈಕ್ ರೈಡ್ ಹೊರಟಿದ್ದರು. ಮೇಯರ್ ಹೊರಟ 100 ಮೀ. ಅಂತರದಲ್ಲಿ ರಸ್ತೆಯೇ ಗುಂಡಿಯಾಗಿರೊ ಸತ್ಯ ಬಯಲಾಯಿತು. ಗುಂಡಿ ಕಂಡು ಮೇಯರ್ ಒಂದು ಕ್ಷಣ ಶಾಕ್ ಆದರು. ಕೂಡಲೇ ತಮ್ಮ ಜೊತೆಯಲ್ಲಿದ್ದ ಜಂಟಿ ಆಯುಕ್ತ ಚಿದಾನಂದ್ ಅವರಿಗೆ ಅಕ್ಟೋಬರ್ 13ರೊಳಗೆ ಗುಂಡಿಗಳನ್ನು ಮುಚ್ಚುವಂತೆ ಖಡಕ್ ಆದೇಶ ನೀಡಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮೇಯರ್, ರಸ್ತೆ ಗುಂಡಿಗಳ ಬಗ್ಗೆ ಹಲವು ದೂರುಗಳ ಬಂದಿವೆ. ಅಧಿಕಾರಿಗಳು ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ತಿಳಿಸಿದ್ದೇನೆ. ದೂರುಗಳನ್ನಾಧರಿಸಿ ಇಂದು ರಸ್ತೆ ಗುಂಡಿ ಪರಿಶೀಲನೆಗೆ ಮುಂದಾದೆ. ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಕಾರಿನಲ್ಲಿ ಸಂಚರಿಸುವದರಿಂದ ರಸ್ತೆಗುಂಡಿಗಳ ಬಗ್ಗೆ ಗೊತ್ತಾಗಲ್ಲ. ದ್ವಿಚಕ್ರ ವಾಹನ ಸವಾರರು ರಸ್ತೆಗುಂಡಿಗಳಿಂದ ತೊಂದರೆ ಅನುಭವಿಸುತ್ತಾರೆ. ಹಾಗಾಗಿ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಬೈಕ್ ರೌಂಡ್ಸ್ ಗೆ ಬರಲಾಗಿತ್ತು. ಇಂದು ಜನರ ನೋವು ಏನು ಎಂಬುವುದು ಅರ್ಥವಾಗಿದೆ. ಆದಷ್ಟು ಬೇಗ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಭರವಸೆ ನೀಡಿದರು.

    ಆದಷ್ಟು ಬೇಗ ಇಲ್ಲಿಯ ರಸ್ತೆ ರಿಪೇರಿ, ಟ್ರಾಫಿಕ್ ನಿಯಂತ್ರಿಸಿ ಎಂದು ಸಾರ್ವಜನಿರಕು ಮೇಯರ್ ಬಳಿ ಮನವಿ ಮಾಡಿಕೊಂಡರು. ಇನ್ನುಂದೆ ವಲಯವಾರು ಗುಂಡಿ ಚೆಕ್ ಮಾಡುತ್ತೇನೆ ಎಂದು ಮೇಯರ್ ಹೇಳಿದ್ದಾರೆ.

  • ‘ಅಧ್ಯಕ್ಷರನ್ನೇ ಕೇಳಿ, ಅವರದ್ದೇ ತೀರ್ಮಾನ’ – ‘ರಾಜಾಹುಲಿ’ ಬಿಎಸ್‍ವೈ ಅಸಹಾಯಕ?

    ‘ಅಧ್ಯಕ್ಷರನ್ನೇ ಕೇಳಿ, ಅವರದ್ದೇ ತೀರ್ಮಾನ’ – ‘ರಾಜಾಹುಲಿ’ ಬಿಎಸ್‍ವೈ ಅಸಹಾಯಕ?

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ, ಪಕ್ಷದ ಅಧ್ಯಕ್ಷರ ಎದುರು ಅಸಹಾಯಕರಾಗಿದ್ದಾರಾ ಎಂಬ ಪ್ರಶ್ನೆ ಮೂಡಿದ್ದು, ಬೆಂಗಳೂರು ಮೇಯರ್ ಆಯ್ಕೆ ಸಂಬಂಧ ಬಿಎಸ್‍ವೈ ಅವರು ಒಕ್ಕಲಿಗರ ನಿಯೋಗದ ಮುಂದೆ ಅಸಹಾಯಕರಾಗಿ ಮಾತನಾಡಿದ್ದಾರೆ.

    ಮೇಯರ್ ಆಯ್ಕೆ ಸಂಬಂಧ ತಮ್ಮ ಸಮುದಾಯದ ನಾಯಕರಿಗೆ ಹುದ್ದೆ ನೀಡಬೇಕು ಎಂದು ಒಕ್ಕಲಿಗ ಸಂಘದ ನಾಯಕರು ಬಿಎಸ್‍ವೈ ಅವರಿಗೆ ನಿಯೋಗದೊಂದಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಮುದಾಯದ ನಾಯಕರಿಗೆ ಯಾವುದೇ ಆಶ್ವಾಸನೆಯನ್ನು ಕೂಡ ನೀಡಿದ ಸಿಎಂ ಅವರು “ಅಧ್ಯಕ್ಷರನ್ನೇ ಕೇಳಿ, ಅವರದ್ದೇ ತೀರ್ಮಾನ” ಎಂದು ಹೇಳಿದ್ದಾರೆ.

    “ನನಗೆ ಒಕ್ಕಲಿಗ, ಬ್ರಾಹ್ಮಣ ಏನೂ ಗೊತ್ತಿಲ್ಲ. ಎಲ್ಲರೂ ಸೇರಿಕೊಂಡು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದೇ ಅಂತಿಮ. ಈ ಬಗ್ಗೆ ರಾಜ್ಯದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ನಮಗೆ ಬಂದ ಮನವಿಯನ್ನು ಅವರಿಗೆ ಕಳುಹಿಸಿಕೊಡುತ್ತೇವೆ. ನೀವು ಒಮ್ಮೆ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ” ಎಂದು ಬಿಎಸ್‍ವೈ ಹೇಳಿದರು.

    ಇದೇ ಸಂದರ್ಭದಲ್ಲಿ ಸಂಘದ ಮುಖಂಡರು ನಮ್ಮ ಭಾವನೆಗಳನ್ನು ನಿಮ್ಮ ಮುಂದೇ ಹೇಳುತ್ತಿದ್ದೇವೆ ಎಂದು ಮತ್ತೊಮ್ಮೆ ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ನಿಮ್ಮ ನೋವನ್ನು ಅರ್ಥ ಮಾಡಿಕೊಳ್ಳುವ ಹೃದಯ ಇದೆ. ಆದರೆ ನಾನು ಇಲ್ಲ ಎಂದು ಹೇಳುತ್ತಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಿ. ನೀವು ಭೇಟಿ ಮಾಡಿದ್ದ ಸಂಗತಿ ಹಾಗೂ ನಿಮ್ಮ ಭಾವನೆಗಳನ್ನು ಅಧ್ಯಕ್ಷರಿಗೆ ತಿಳಿಸುತ್ತೇನೆ. ನೀವು ಒಮ್ಮೆ ಅವರನ್ನು ಭೇಟಿ ಮಾಡಿ. ನನ್ನಿಂದ ಆಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳಾಗಿದ್ದರೂ ಕೂಡ ಸಮುದಾಯದ ಮುಖಂಡರಿಗೆ ಭರವಸೆಯನ್ನು ನೀಡಲು ಕೂಡ ಸಾಧ್ಯವಾಗದೆ ಇರುವುದನ್ನು ಕಂಡ ಸಮುದಾಯದ ನಾಯಕರಲ್ಲಿ ಬಿಎಸ್‍ವೈ ಅಸಹಾಯಕರಾದರಾ ಎಂಬ ಅನುಮಾನ ಮೂಡಿತ್ತು. ಪಕ್ಷದ ಅಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲು ಆಯ್ಕೆಯಾದ ಬಳಿಕ ಬಿಎಸ್‍ವೈ ಅವರನ್ನು ಪಕ್ಷದಲ್ಲೇ ಸೈಡ್ ಲೈನ್ ಮಾಡಲಾಗುತ್ತಿದ್ದೀಯಾ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡುತ್ತಿದೆ.