Tag: ಬೂಮ್ರಾ

  • ಚಂದ್ರಯಾನದ ಯಶಸ್ಸು ಸಂಭ್ರಮಿಸಿದ ಟೀಂ ಇಂಡಿಯಾ

    ಚಂದ್ರಯಾನದ ಯಶಸ್ಸು ಸಂಭ್ರಮಿಸಿದ ಟೀಂ ಇಂಡಿಯಾ

    ಡಬ್ಲಿನ್: ಪ್ರಪಂಚದಾಂದ್ಯಂತ ಜನ ಇಂದು ಚಂದ್ರಯಾನ-3 (Chandrayaan-3) ಮಿಷನ್ ಸಕ್ಸಸ್ ಅನ್ನು ಕಣ್ತುಂಬಿಕೊಂಡರು. ಅಂತೆಯೇ ಟೀಂ ಇಂಡಿಯಾ (Team India) ಆಟಗಾರರು ಕೂಡ ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸಿದರು.

    ಬೂಮ್ರಾ (Jasprit Bumrah) ಪಡೆ ಚಂದ್ರಯಾನ-3 ಸಕ್ಸಸ್ ಲೈವ್ ನೋಡುತ್ತಾ ಸಂಭ್ರಮಿಸಿದ ವೀಡಿಯೋವನ್ನು ಬಿಸಿಸಿಐ (BCCI) ಟ್ವಿಟ್ವರ್ ಅಕೌಂಟ್‍ನಿಂದ ಶೇರ್ ಮಾಡಲಾಗಿದೆ. ವಿಕ್ರಮ್ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ಟೀಂ ಇಂಡಿಯಾ ಆಗಾರರು ಚಪ್ಪಾಳೆ ತಟ್ಟುತ್ತಾ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸಿರುವುದನ್ನು ಕಾಣಬಹುದಾಗಿದೆ.

    ಭಾರತ ಮತ್ತು ಐರ್ಲೆಂಡ್ ನಡುವಿನ 3ನೇ ಟಿ-20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ತುಂತುರು ಮಳೆಯ ಪರಿಣಾಮ ಟಾಸ್ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಬೂಮ್ರಾ ಪಡೆ ಚಂದ್ರಯಾನ-3 ಯೋಜನೆಯ ಯಶಸ್ಸನ್ನು ಕಣ್ತುಂಬಿಕೊಂಡಿತು. ಇದನ್ನೂ ಓದಿ: ವಿಕ್ರಮ್ ಲ್ಯಾಂಡ್ ಆದ ಬಳಿಕ ಮೊದಲ ಚಿತ್ರ ರಿಲೀಸ್

    ಇಸ್ರೋ ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ (Vikram Lander) ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ (Soft Landing) ಮಾಡುವುದು ಸಾಧಾರಣ ಸಾಧನೆಯಲ್ಲ. ಚಂದ್ರನ ಮೇಲೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇರಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ನಾಲ್ಕು ದೇಶಗಳ ಸಾಲಿಗೆ ಭಾರತವೂ ಸೇರಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾಗೆ 150ನೇ ಟೆಸ್ಟ್ ಗೆಲುವು – ಕೀಪರ್ ರಿಷಭ್, ಇಶಾಂತ್ ಶರ್ಮಾ, ಬೂಮ್ರಾ ದಾಖಲೆ!

    ಟೀಂ ಇಂಡಿಯಾಗೆ 150ನೇ ಟೆಸ್ಟ್ ಗೆಲುವು – ಕೀಪರ್ ರಿಷಭ್, ಇಶಾಂತ್ ಶರ್ಮಾ, ಬೂಮ್ರಾ ದಾಖಲೆ!

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಭಾರತ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧದ 137 ರನ್ ಅಂತರದ ಗೆಲುವು ಸಾಧಿಸಿ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತನ್ನ 150ನೇ ಗೆಲುವು ದಾಖಲಿಸಿದೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 5ನೇ ತಂಡ ಎಂಬ ಖ್ಯಾತಿಗೆ ಟೀಂ ಇಂಡಿಯಾ ಪಾತ್ರವಾಗಿದೆ.

    ಮೊದಲ ಸ್ಥಾನದಲ್ಲಿ ಕಾಂಗರೂ ಪಡೆ!: ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಲ್ಲಿದೆ. ಕಾಂಗರೂ ಪಡೆ ಇದುವರೆಗೆ 384 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 364 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ತಂಡ 2ನೇ ಸ್ಥಾನದಲ್ಲಿದ್ದರೆ, 171 ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ಹಾಗೂ 162 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

    ಸೋಲಿನಲ್ಲಿ ಆಸ್ಟ್ರೇಲಿಯಾ ದ್ವಿತೀಯ!: ಇದುವರೆಗೆ ಆಡಿದ ಟೆಸ್ಟ್ ಮ್ಯಾಚ್ ಗಳಲ್ಲಿ 222 ಬಾರಿ ಸೋಲುಂಡ ಆಸ್ಟ್ರೇಲಿಯಾ ಸೋಲಿನ ಸಾಧನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. 298 ಸೋಲಿನ ಜೊತೆ ಇಂಗ್ಲೆಂಡ್ ಸೋಲಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೆರಡು ಸೋಲನುಭವಿಸಿದರೆ ಇಂಗ್ಲೆಂಡ್ ತಂಡ ಸೋಲಿನಲ್ಲೂ ‘ತ್ರಿಶತಕ’ದ ಸಾಧನೆ ಮಾಡಲಿದೆ.

    ರಿಷಭ್ ದಿ ಕಿಲ್ಲರ್!: ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಬಲಿ ಪಡೆದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಗೆ ರಿಷಭ್ ಪಂತ್ ಭಾಜನರಾಗಿದ್ದಾರೆ. ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅವರು 20 ಬಲಿ ಪಡೆದಿದ್ದಾರೆ. ಇನ್ನೂ ಒಂದು ಟೆಸ್ಟ್ ಪಂದ್ಯ ಬಾಕಿ ಉಳಿದಿದ್ದು ಇದರಲ್ಲಿ ರಿಷಭ್ ತನ್ನ ಸಾಧನೆಯನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯೇ ಹೆಚ್ಚಾಗಿದೆ.

    ಇದುವರೆಗೆ ಭಾರತದ ಇಬ್ಬರು ವಿಕೆಟ್ ಕೀಪರ್ ಗಳು ತಲಾ 19 ಬಲಿ ಪಡೆದು ಅಗ್ರಸ್ಥಾನದಲ್ಲಿದ್ದರು. ನರೇನ್ ತಮ್ಹಾನೆ ಹಾಗೂ ಸೈಯದ್ ಕೀರ್ಮಾನಿ ಅವರು ಪರಸ್ಪರ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು. ತಮ್ಹಾನೆ ಅವರು 1954-55ರಲ್ಲಿ ಪಾಕಿಸ್ತಾನ ವಿರುದ್ಧದ 7 ಪಂದ್ಯಗಳ ಸರಣಿಯಲ್ಲಿ ಈ ದಾಖಲೆ ಮಾಡಿದ್ದರೆ, ಸೈಯದ್ ಕೀರ್ಮಾನಿ ಅವರು ಕೂಡಾ ಪಾಕಿಸ್ತಾನ ವಿರುದ್ಧ 1979-80ರಲ್ಲಿ 6 ಪಂದ್ಯಗಳಲ್ಲಿ 19 ಬಲಿ ಪಡೆದಿದ್ದರು.

    ಇಶಾಂತ್ ಶರ್ಮಾ ದಾಖಲೆ!: ಇಶಾಂತ್ ಶರ್ಮಾ ಇಂದು ಆಸ್ಟ್ರೇಲಿಯಾ ತಂಡದ ನಥಾನ್ ಲಿಯೋನ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ 6ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಈ ಮೂಲಕ ಅವರು ಬಿಷನ್ ಸಿಂಗ್ ಬೇಡಿ ಅವರನ್ನು ಹಿಂದಿಕ್ಕಿದರು. 90 ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ಶರ್ಮಾ 267 ವಿಕೆಟ್ ಪಡೆದರೆ, ಬೇಡಿ 266 ವಿಕೆಟ್ ಗಳಿಸಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು.

    ಕಪಿಲ್ ದಾಖಲೆ ಮುರಿದ ಬೂಮ್ರಾ!: ಆಸ್ಟ್ರೇಲಿಯಾ ಮಣ್ಣಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಕಪಿಲ್ ದೇವ್ ಹೆಸರಿನಲ್ಲಿದ್ದ ದಾಖಲೆಯನ್ನು ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ನಡೆದ ಈ ಪಂದ್ಯದಲ್ಲಿ ಬೂಮ್ರಾ 86 ರನ್ ನೀಡಿ 9 ವಿಕೆಟ್ ಪಡೆದುಕೊಂಡರೆ, ಕಪಿಲ್ ದೇವ್ ಅವರು 1985ರಲ್ಲಿ ಆಡಿಲೇಡ್ ಕ್ರೀಡಾಂಗಣದಲ್ಲಿ 109 ರನ್ ನೀಡಿ 8 ವಿಕೆಟ್ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಚಕ ಲಾಸ್ಟ್ ಓವರ್‍ನಲ್ಲಿ ಪಾಂಡ್ಯಾ ಕೊಹ್ಲಿಗೆ ಹೇಳಿದ್ದೇನು?

    ರೋಚಕ ಲಾಸ್ಟ್ ಓವರ್‍ನಲ್ಲಿ ಪಾಂಡ್ಯಾ ಕೊಹ್ಲಿಗೆ ಹೇಳಿದ್ದೇನು?

    ತಿರುವನಂತಪುರ: `ನಾನು ಉತ್ತಮ ಬೌಲಿಂಗ್ ಮಾಡುತ್ತೇನೆ, ನೀವು ಚೀತಸಬೇಡಿ’ ಎಂದು ಪಾಂಡ್ಯಾ ನಾಯಕ ಕೊಹ್ಲಿಗೆ ಭರವಸೆ ನೀಡಿ, ನಿರ್ಣಾಯಕ ಓವರ್‍ ನಲ್ಲಿ ಕೇವಲ 12 ರನ್‍ಗಳನ್ನು ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

    ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಕೊಹ್ಲಿ, ಪಾಂಡ್ಯಾ ಅಂತಿಮ ಓವರ್‍ನಲ್ಲಿ ಹೇಳಿದ ಮಾತನ್ನು ಬಿಚ್ಚಿಟ್ಟರು. ಪಂದ್ಯದ ನಿರ್ಣಾಯಕ ಒವರ್‍ನಲ್ಲಿ ಬೌಲರ್‍ಗೆ ಧೈರ್ಯ ತುಂಬುವುದು ನಾಯಕನ ಕರ್ತವ್ಯ ಆದ್ದರಿಂದಲೇ ನಾನು ಪಾಂಡ್ಯಾಗೆ ಸಲಹೆ ನೀಡಲು ತೆರಳಿದೆ. ಈ ವೇಳೆ ಪಾಂಡ್ಯಾ ತಮ್ಮದೇ ಶೈಲಿಯಲ್ಲಿ `ನಾನು ಉತ್ತಮ ಬೌಲಿಂಗ್ ಮಾಡುತ್ತೇನೆ, ನೀವು ಚಿಂತಿಸಬೇಡಿ’ ಎಂದರು. ತಂಡದ ನಾಯಕನಿಗೆ ಬೌಲರ್ ಇಷ್ಟು ಭರವಸೆ ನೀಡಿದರೆ ಸಾಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಪಾಂಡ್ಯಾ ಅವರ ಬೌಲಿಂಗ್ ಮೇಲಿನ ವಿಶ್ವಾಸದಿಂದಲೇ ಅವರಿಗೆ ಬಾಲ್ ನೀಡಿದೆ. ಪಾಂಡ್ಯಾರ ಆಫ್ ಕಟ್ ಸ್ವಿಂಗ್ ಉತ್ತಮ ಫಲಿತಾಂಶವನ್ನು ನೀಡಿತು. ಇನ್ನೂಳಿದಂತೆ ಬೂಮ್ರಾ ಅವರ ಶಿಸ್ತುಬದ್ಧ ದಾಳಿ ನ್ಯೂಜಿಲೆಂಡ್ ಆಟಗಾರರನ್ನು ಒತ್ತಡದಲ್ಲಿ ಸಿಲುಕಿಸಿತು ಎಂದರು.

    ಒಟ್ಟಾರೆ ತಂಡದ ಸಾಂಘಿಕ ಹೋರಾಟದಿಂದ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಕೊನೆಯ ಆ ಓವರ್: ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಓವರ್ ನಲ್ಲಿ 19 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ 1 ರನ್ ಬಂದರೆ 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಈ ವೇಳೆ ಬಾಲ್ ಪಾಂಡ್ಯಾ ಎಡಕೈಗೆ ತಗುಲಿತ್ತು. ತಕ್ಷಣ ಟೀಂ ಫಿಸಿಯೋ ಬಂದು ನೋವು ನಿವಾರಕ ಸ್ಪ್ರೇ ಹಾಕಿದರು. ಬಳಿಕ ಬೌಲಿಂಗ್ ಆರಂಭಿಸಿದ ಪಾಂಡ್ಯಾ 3ನೇ ಎಸೆತದಲ್ಲಿ ಗ್ರಾಂಡ್ ಹೋಮ್ ಸಿಕ್ಸರ್ ಬಾರಿಸಿದಾಗ ಸ್ಟೇಡಿಯಂನಲ್ಲಿ ನೀರವ ಮೌನ. ನಂತರದ ಬಾಲ್ ನಲ್ಲಿ ಪಾಂಡ್ಯಾ ವೈಡ್ ಎಸೆದರು. 4ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಂತು. 5 ನೇ ಎಸೆತದಲ್ಲಿ 2 ರನ್ ಬಂದಿತ್ತು. ಅಷ್ಟರಲ್ಲಾಗಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಯಾಕೆಂದರೆ ಬಾಕಿ ಉಳಿದಿದ್ದ 1 ಎಸೆತದಲ್ಲಿ 8 ರನ್ ಬೇಕಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರರು ಕೇವಲ 1 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಟೀಂ ಇಂಡಿಯಾ 6 ರನ್ ಗಳ ಗೆಲುವು ಸಾಧಿಸಿತ್ತು.

  • ಚಾಹಲ್, ಬೂಮ್ರಾ ಓವರ್ ಟರ್ನಿಂಗ್ ಪಾಯಿಂಟ್! – ರೋಚಕವಾಗಿತ್ತು ಪಾಂಡ್ಯ ಲಾಸ್ಟ್ ಓವರ್!

    ಚಾಹಲ್, ಬೂಮ್ರಾ ಓವರ್ ಟರ್ನಿಂಗ್ ಪಾಯಿಂಟ್! – ರೋಚಕವಾಗಿತ್ತು ಪಾಂಡ್ಯ ಲಾಸ್ಟ್ ಓವರ್!

    ತಿರುವನಂತಪುರ: ನ್ಯೂಜಿಲೆಂಡ್ ವಿರುದ್ಧದ ಕೊನೆಯ ಹಾಗೂ ನಿರ್ಣಾಯಕ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಸಿದ್ದು ಟೀಂ ಇಂಡಿಯಾದ ಸಾಂಘಿಕ ಹೋರಾಟ. ಸಿಕ್ಕಿದ ಯಾವ ಅವಕಾಶವನ್ನೂ ಕೈಚೆಲ್ಲದ ಟೀಂ ಇಂಡಿಯಾ ಆಟಗಾರರು ಟಿ20 ಕಪ್ ತಮ್ಮ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

    ಅದರಲ್ಲೂ ಮುಖ್ಯವಾಗಿ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಸ್ಪಿನ್ನರ್ ಚಾಹಲ್ ತಮ್ಮ ನಾಯಕ ವಿರಾಟ್ ಕೊಹ್ಲಿ ಮೇಲಿಟ್ಟ ವಿಶ್ವಾಸವನ್ನು ಹುಸಿಗೊಳಿಸಲಿಲ್ಲ. 8 ಓವರ್ ಗಳ ಈ ಪಂದ್ಯದಲ್ಲಿ ಬೂಮ್ರಾ ಹಾಗೂ ಚಾಹಲ್ 4 ಓವರ್ ಗಳನ್ನು ಎಸೆದರು. 4 ಓವರ್‍ಗಳಲ್ಲಿ ಇಬ್ಬರೂ ಸೇರಿ ಕೇವಲ 17 ರನ್ ಮಾತ್ರ ಬಿಟ್ಟು ಕೊಟ್ಟು 2 ಮಹತ್ವದ ವಿಕೆಟ್ ಗಳನ್ನು ಕಬಳಿಸಿದರು. ಇದರಲ್ಲಿ ಬೂಮ್ರಾ 2 ಓವರ್ ನಲ್ಲಿ 9 ರನ್ ಗೆ 2 ವಿಕೆಟ್ ಪಡೆದರೆ, ಚಹಲ್ 2 ಓವರ್ ಗಳಲ್ಲಿ ಕೇವಲ 8 ರನ್ ಮಾತ್ರ ಬಿಟ್ಟು ಕೊಟ್ಟರು. 2 ಓವರ್ ನಲ್ಲಿ 2 ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

    ಕೊನೆಯ ಆ ಓವರ್: ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಓವರ್ ನಲ್ಲಿ 19 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ 1 ರನ್ ಬಂದರೆ 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸುವುದು ಸಾಧ್ಯವಾಗಲಿಲ್ಲ. ಆದರೆ ಈ ವೇಳೆ ಬಾಲ್ ಪಾಂಡ್ಯಾ ಎಡಕೈಗೆ ತಗುಲಿತ್ತು. ತಕ್ಷಣ ಟೀಂ ಫಿಸಿಯೋ ಬಂದು ನೋವು ನಿವಾರಕ ಸ್ಪ್ರೇ ಹಾಕಿದರು. ಬಳಿಕ ಬೌಲಿಂಗ್ ಆರಂಭಿಸಿದ ಪಾಂಡ್ಯ 3ನೇ ಎಸೆತದಲ್ಲಿ ಗ್ರಾಂಡ್ ಹೋಮ್ ಸಿಕ್ಸರ್ ಬಾರಿಸಿದಾದ ಸ್ಟೇಡಿಯಂನಲ್ಲಿ ನೀರವ ಮೌನ. ನಂತರದ ಬಾಲ್ ನಲ್ಲಿ ಪಾಂಡ್ಯಾ ವೈಡ್ ಎಸೆದರು. 4ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಂತು. 5 ನೇ ಎಸೆತದಲ್ಲಿ 2 ರನ್ ಬಂದಿತ್ತು. ಅಷ್ಟರಲ್ಲಾಗಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಯಾಕೆಂದರೆ ಬಾಕಿ ಉಳಿದಿದ್ದ 1 ಎಸೆತದಲ್ಲಿ 8 ರನ್ ಬೇಕಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರರು ಕೇವಲ 1 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಟೀಂ ಇಂಡಿಯಾ 6 ರನ್ ಗಳ ಗೆಲುವು ಸಾಧಿಸಿತ್ತು.

     

  • ಆಸೀಸ್ ವಿರುದ್ಧ ಸತತ 7ನೇ ಟಿ20 ಗೆದ್ದ ಟೀಂ ಇಂಡಿಯಾ!

    ಆಸೀಸ್ ವಿರುದ್ಧ ಸತತ 7ನೇ ಟಿ20 ಗೆದ್ದ ಟೀಂ ಇಂಡಿಯಾ!

    ರಾಂಚಿ:  ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಟಿ20 ಕ್ರಿಕೆಟ್ ಪಂದ್ಯದಲ್ಲಿ ಸತತ 7ನೇ ಗೆಲುವು ಸಾಧಿಸಿದೆ. 2012ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿತ್ತು. ಇದಾದ ನಂತರ ಒಟ್ಟು 6 ಪಂದ್ಯಗಳು ಇತ್ತಂಡಗಳ ನಡುವೆ ನಡೆದಿತ್ತು. ಈ ಆರೂ ಪಂದ್ಯಗಳಲ್ಲಿ ಟೀಂ ಇಂಡಿಯಾವೇ ಗೆಲುವು ಸಾಧಿಸಿತ್ತು.  ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಗಳ ಗೆಲುವು ಸಾಧಿಸಿದೆ. ಮಳೆ ಹಿನ್ನೆಲೆಯಲ್ಲಿ ಡಕ್ ವರ್ತ್ ಲೂಯಿಸ್ ನಿಯಮದಂತೆ ಗೆಲ್ಲಲು ಭಾರತಕ್ಕೆ 6 ಓವರ್ ಗಳಲ್ಲಿ 48 ರನ್ ಗಳ ಟಾರ್ಗೆಟ್ ಸಿಕ್ಕಿತ್ತು. 48 ರನ್ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. 7 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದ ರೋಹಿತ್ ಶರ್ಮಾ 11 ರನ್ ಗೆ ಔಟಾದರು.

    ಶಿಖರ್ ಧವನ್ 12 ಎಸೆತದಿಂದ 3 ಬೌಂಡರಿಗಳ ನೆರವಿನಿಂದ 15 ಹಾಗೂ ನಾಯಕ ವಿರಾಟ್ ಕೊಹ್ಲಿ 14 ಎಸೆತದಿಂದ 3 ಬೌಂಡರಿಗಳ ಜೊತೆ 22 ರನ್ ಗಳಿಸಿದರು. 5.3ನೇ ಓವರ್ ನಲ್ಲಿ ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಗೆಲುವಿನ ದಡ ದಾಟಿಸಿದರು.

    ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾಗೆ ಕೇವಲ 18.4 ಓವರ್ ಮಾತ್ರ ಆಡಲು ಸಾಧ್ಯವಾಯಿತು. ಪಂದ್ಯದ ನಿಗದಿತ ಓವರ್ ಮುಗಿಯಲು 8 ಎಸೆತ ಬಾಕಿ ಇರುವಂತೆಯೇ ಮಳೆ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಆಸೀಸ್ ಇನ್ನಿಂಗ್ಸನ್ನು ಅಲ್ಲಿಗೇ ಕೊನೆಗೊಳಿಸಲಾಯಿತು. ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಓವರ್ ನಲ್ಲೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. 5 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 8 ರನ್ ಗಳಿಸಿದ ನಾಯಕ ಡೇವಿಡ್ ವಾರ್ನರ್ ಬೌಲ್ಡ್ ಆದ್ರು.

    ಆದರೆ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆಸರೆಯಾದರು. ಒಂದೆಡೆ ಫಿಂಚ್ ಉತ್ತಮವಾಗಿ ಆಡುತ್ತಿದ್ದರೆ ಆಸ್ಟ್ರೇಲಿಯಾ ಆಟಗಾರರೆಲ್ಲರೂ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರು. ಮ್ಯಾಕ್ಸ್ ವೆಲ್ 17, ಪೇನ್ 17, ಹೆಡ್ 9, ಹೆನ್ರಿಕ್ಸ್ 8, ಕ್ರಿಶ್ಚಿಯನ್ 9, ಕಾಲ್ಟರ್ ನೈಲ್ 1, ಝಂಪಾ 4 ರನ್ ಗಳಿಸಿದರು.

    ಟೀ ಇಂಡಿಯಾ ಪರವಾಗಿ ಜಸ್ಪ್ರೀತ್ ಬೂಮ್ರಾ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯಾ ಹಾಗೂ ಚಾಹಲ್ ತಲಾ 1 ವಿಕೆಟ್ ಪಡೆದರು. ಸ್ಪಿನ್ನರ್ ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.