Tag: ಬೀಚ್

  • ಮಳೆ ಅಬ್ಬರ ಕಡಿಮೆಯಾದರೂ ಸಮುದ್ರದಲ್ಲಿ ರಕ್ಕಸ ಅಲೆಗಳ ಹೊಡೆತ ನಿಂತಿಲ್ಲ

    ಮಳೆ ಅಬ್ಬರ ಕಡಿಮೆಯಾದರೂ ಸಮುದ್ರದಲ್ಲಿ ರಕ್ಕಸ ಅಲೆಗಳ ಹೊಡೆತ ನಿಂತಿಲ್ಲ

    – ಭಾರೀ ಪ್ರಮಾಣದ ಅಲೆಗಳ ಹೊಡೆತಕ್ಕೆ ಜನ ತತ್ತರ

    ಕಾರವಾರ: ಕರಾವಳಿಯಲ್ಲಿ ಮಳೆ ಅಬ್ಬರ ಕಡಿಮೆಯಾದರೂ ರಕ್ಕಸ ಅಲೆಗಳ ಹೊಡೆತಕ್ಕೆ ಕರಾವಳಿ ತೀರದ ಜನ ತತ್ತರಿಸಿದ್ದು, ಭಯಭೀತರಾಗಿದ್ದಾರೆ.

    ಕಡಲ ಅಬ್ಬರಕ್ಕೆ ಕಡಲ ತೀರ ಪ್ರದೇಶ ಭಾಗದ ರಾಜ್ಯದ ಪ್ರಸಿದ್ಧ ಇಕೋ ಬೀಚ್ ನ ಹಲವು ಭಾಗಗಳಿಗೆ ಹಾನಿಯಾಗಿದ್ದು, ಸಮುದ್ರದ ಅಲೆಗಳಿಗೆ ಮರಗಿಡಗಳು ಕೊಚ್ಚಿಹೋಗುತ್ತಿವೆ. ಕಾರವಾರ, ಹೊನ್ನಾವರದ ಕಡಲತೀರದಲ್ಲಿ ಕಡಲಕೊರತದಿಂದಾಗಿ ಭಾರೀ ಹಾನಿ ಸಂಭವಿಸಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಕಡಲ ಅಬ್ಬರದಿಂದಾಗಿ ಕಡಲ ಕೊರೆತ ಹೆಚ್ಚಾಗಿದ್ದು, ಜಿಲ್ಲೆಯ ಕಾರವಾರ, ಭಟ್ಕಳ, ಹೊನ್ನಾವರ ಭಾಗದ ಕಡಲ ತೀರ ಪ್ರದೇಶದಲ್ಲಿ ಗಜ ಗಾತ್ರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿವೆ. ಈ ಭಾಗದ ಪ್ರದೇಶಗಳಲ್ಲಿ ಕಡಲ ಕೊರೆತ ಪ್ರಾರಂಭವಾಗಿದ್ದು, ರಾಜ್ಯದ ಪ್ರಸಿದ್ಧ ಇಕೋ ಬೀಚ್ ಸೇರಿದಂತೆ ಹಲವು ಭಾಗಗಳಿಗೆ ಹಾನಿಯಾಗಿದೆ.

    ಸುಮಾರು 4-5 ಅಡಿಯ ಅಲೆಗಳು ಸಮುದ್ರದ ದಂಡೆಗೆ ಬಂದು ಹೊಡೆಯುತ್ತಿವೆ. ಇದರಿಂದಾಗಿ ದಡದಲ್ಲಿರುವ ಬೀಚ್‍ನ ಹಟ್‍ಗಳಿಗೆ ಹಾನಿಯಾಗಿದ್ದು, ಭೂ ಭಾಗ ಕೊಚ್ಚಿ ಹೋಗುತ್ತಿದೆ. ಇದರಿಂದಾಗಿ ಸ್ಥಳೀಯ ಜನರಲ್ಲಿ ಭಾರೀ ಆತಂಕ ಮನೆ ಮಾಡಿದೆ.

  • ಗೋಕರ್ಣ ಸಮುದ್ರದಲ್ಲಿ ಈಜಲು ಹೋದವರು ನೀರು ಪಾಲು

    ಗೋಕರ್ಣ ಸಮುದ್ರದಲ್ಲಿ ಈಜಲು ಹೋದವರು ನೀರು ಪಾಲು

    – ಹೋಗಬೇಡಿ ಅಂದ್ರು ಹೋದ್ರು

    ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದ ಕರಿಯಪ್ಪನ ಕಟ್ಟೆ ತೀರ ಪ್ರದೇಶದಲ್ಲಿ ನಡೆದಿದೆ.

    ಮೈಸೂರಿನ ಸುಹಾಸ್(17) ಹಾಗೂ ಈತನೊಂದಿಗಿದ್ದ ಮಂಡ್ಯ ಮೂಲದ ಉಲ್ಲಾಸ್ (15) ಸಮುದ್ರದಲ್ಲಿ ಕಾಣಿಯಾದ ಬಾಲಕರಾಗಿದ್ದಾರೆ. ಒಟ್ಟು 8 ಜನರ ತಂಡ ಮೈಸೂರಿನಿಂದ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ಖಾಸಗಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಇವರು, ಇಂದು ಮುಂಜಾನೆ ಸಮುದ್ರಕ್ಕಿಳಿದಿದ್ದರು. ಅಮವಾಸ್ಯೆಯಾದ್ದರಿಂದ ಸಮುದ್ರದಲ್ಲಿ ಸೆಳತ ಹೆಚ್ಚಿರುತ್ತದೆ ಹೀಗಾಗಿ ಸಮುದ್ರದಲ್ಲಿ ಇಳಿಯಬೇಡಿ ಎಂದು ಎಚ್ಚರಿಸಲಾಗಿತ್ತು.

    ಸ್ಥಳೀಯರ ಮಾತಿಗೆ ಬೆಲೆ ಕೊಡದೆ ಬಾಲಕರು ಸಮುದ್ರಕ್ಕಿಳಿದಿದ್ದು, ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹಾಗೂ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಕೊಚ್ಚಿಹೋಗಿದ್ದಾರೆ. ರಕ್ಷಣೆ ಮಾಡುವ ಪ್ರಯತ್ನ ಮಾಡಿದರೂ ಯುವಕ ಸುಹಾಸ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವು ಕಂಡಿದ್ದಾನೆ. ಇನ್ನೋರ್ವ ಬಾಲಕ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಈತನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೀಚ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸುವಾಗ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಕೊಚ್ಚೋಯ್ತು ಕಂದಮ್ಮ

    ಬೀಚ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸುವಾಗ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಕೊಚ್ಚೋಯ್ತು ಕಂದಮ್ಮ

    – ಕಣ್ಮುಚ್ಚಿ ತೆರೆಯುವಷ್ಟರಲ್ಲಿ 2.5 ವರ್ಷದ ಕಂದಮ್ಮ ಸಮುದ್ರದ ಪಾಲು

    ತಿರುವನಂತಪುರಂ: ಸೆಲ್ಫಿಯಿಂದಾಗಿ ಹಲವು ರೀತಿಯಲ್ಲಿ ಅನಾಹುತಗಳು ಸಂಭವಿಸಿರುವುದನ್ನು ಕಂಡಿದ್ದೇವೆ. ಅದೇ ರೀತಿಯ ಮನಕಲುಕುವ ದುರಂತ ಇದೀಗ ನಡೆದಿದ್ದು, ತಾಯಿ ತನ್ನ ಮೂರು ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಎರಡೂವರೆ ವರ್ಷದ ಕಂದಮ್ಮ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿರುವ ಆಘಾತಕಾರಿ ಘಟನೆ ನಡೆದಿದೆ.

    ಕೇರಳದ ಆಲಪ್ಪುಳ ಬೀಚ್ ಬಳಿ ಘಟನೆ ನಡೆದಿದ್ದು, ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಬಾಲಕನನ್ನು ಅಧಿಕೃಷ್ಣ ಎಂದು ಗುರುತಿಸಲಾಗಿದೆ. ಮಗು ಕೇವಲ 2.5 ವರ್ಷದ್ದಾಗಿದೆ. ಅಧಿಕೃಷ್ಣರ ಪೋಷಕರಾದ ಲಕ್ಷ್ಮಣನ್ ಹಾಗೂ ಅನಿತಮೋಲಿ ಪಾಲಕ್ಕಾಡ್ ಜಿಲ್ಲೆಯವರಾಗಿದ್ದಾರೆ. ಇವರ ಸಂಬಂಧಿಕರಾದ ಬಿನು ಆಲಪ್ಪುಳದವರಾಗಿದ್ದಾರೆ.

    ಮದುವೆ ಸಮಾರಂಭಕ್ಕಾಗಿ ಅನಿತಮೋಲಿ ತಮ್ಮ ಎರಡು ಮಕ್ಕಳೊಂದಿಗೆ ಬಿನು ಅವರ ಮನೆಗೆ ಬಂದಿದ್ದಾರೆ. ಅಲ್ಲದೆ ತಮ್ಮ ಸಹೋದರನ ಮಗನೂ ಇದೇ ವೇಳೆ ವಿವಾಹ ಸಮಾರಂಭಕ್ಕಾಗಿ ಬಂದಿದ್ದ. ಈ ವೇಳೆ ನೋಡಿಕೊಂಡು ಬರಲು ಬಿನು ಇವರನ್ನು ಬೀಚ್‍ಗೆ ಕರೆದುಕೊಂಡು ಬಂದಿದ್ದಾರೆ.

    ಬೀಚ್ ಬಳಿ ಬರುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ. ಸಮುದ್ರದ ತಟದಲ್ಲಿ ಪರಿಸ್ಥಿತಿ ಸರಿ ಇಲ್ಲದ ಕಾರಣ ಬೀಚ್‍ನ ಮುಖ್ಯ ಭಾಗಕ್ಕೆ ಪ್ರವೇಶಿಸದಂತೆ ಸೂಚಿಸಿದ್ದಾರೆ. ಹೀಗಾಗಿ ಇವರು ಇಎಸ್‍ಐ ಆಸ್ಪತ್ರೆ ಬಳಿಯಿಂದ ಈ ಬೀಚ್‍ಗೆ ಹೋಗಿದ್ದಾರೆ. ಬಿನು ಕಾರ್ ಪಾರ್ಕ್ ಮಾಡಲು ತೆರಳಿದ್ದಾರೆ. ಈ ವೇಳೆ ಅನಿತಮೋಲಿ ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದ್ದಕ್ಕಿದ್ದಂತೆ ಬೃಹತ್ ಅಲೆಯೊಂದು ಅಪ್ಪಳಿಸಿದೆ.

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಆದಿಕೃಷ್ಣನನ್ನು ಅನಿತಮೋಲಿ ತಮ್ಮ ಕಂಕುಳಲ್ಲಿ ಎತ್ತಿಕೊಂಡಿದ್ದರು. ಬೃಹತ್ ಅಲೆಗೆ ಸಿಲುಕಿ ಮಗು ಕೊಚ್ಚಿಕೊಂಡು ಹೋಗಿದೆ. ಉಳಿದ ಇಬ್ಬರು ಮಕ್ಕಳು ಹಾಗೂ ಅಮಿತಮೋಲಿಯನ್ನು ಬಿನು ಎಳೆದು ತಂದರು ಎಂದು ತಿಳಿಸಿದ್ದಾರೆ. ಈ ಮಧ್ಯೆ ಮಕ್ಕಳನ್ನು ಬೀಚ್‍ಗೆ ಕರೆದೊಯ್ದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾ ಮಕ್ಕಳ ಸಮಿತಿ ಒತ್ತಾಯಿಸಿದೆ.

  • ಬಂಡೆಯಾಕಾರದ ಬೃಹತ್ ತಿಮಿಂಗಿಲದ ಮೃತದೇಹ ಬೀಚ್‍ನಲ್ಲಿ ಪತ್ತೆ

    ಬಂಡೆಯಾಕಾರದ ಬೃಹತ್ ತಿಮಿಂಗಿಲದ ಮೃತದೇಹ ಬೀಚ್‍ನಲ್ಲಿ ಪತ್ತೆ

    – ನೋಡಲು ಮುಗಿಬಿದ್ದ ಜನರು

    ಚೆನ್ನೈ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ವಾಲಿನೋಕ್ಕಂ ಬೀಚ್‍ನಲ್ಲಿ ಬಂಡೆಯಾಕಾರದ ಬೃಹತ್ ತಿಮಿಂಗಿಲವೊಂದು ಪತ್ತೆಯಾಗಿದೆ.

    ವಾಲಿನೋಕ್ಕಂ ಬೀಚ್‍ನಲ್ಲಿ ಬೃಹತ್ ತಿಮಿಂಗಿಲ ನೋಡಿ ಜನರು ಅದನ್ನು ನೋಡಲು ಹತ್ತಿರ ಹೋಗಿದ್ದಾರೆ. ಆಗ ತಿಮಿಂಗಿಲ ಮೃತಪಟ್ಟಿರುವುದು ತಿಳಿದು ಬಂದಿದೆ.  ತಿಮಿಂಗಿಲಕ್ಕೆ ಸಮುದ್ರದಲ್ಲಿ ಹಡಗು ಡಿಕ್ಕಿ ಹೊಡೆದಿರಬಹುದು. ತಿಮಿಂಗಿಲದ ವಯಸ್ಸನ್ನು ಲೆಕ್ಕಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    “ಇದು ಬೃಹತ್ ತಿಮಿಂಗಿಲ. ನಾವು ಇದೀಗ ತಿಮಿಂಗಿಲದ ಮರಣೋತ್ತರ ಪರೀಕ್ಷೆಯನ್ನು ಮುಗಿಸಿದ್ದೇವೆ. ತಿಮಿಂಗಿಲಕ್ಕೆ ದೊಡ್ಡ ಹಡಗು ಹೊಡೆದಿರಬಹದು ಎಂದು ಶಂಕಿಸಿದ್ದೇವೆ. ಆದರೆ ತಿಮಿಂಗಿಲ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ” ಎಂದು ಅರಣ್ಯ ಅಧಿಕಾರಿ ಸಿಕ್ಕಾಂತರ್ ಬಾಷಾ ತಿಳಿಸಿದ್ದಾರೆ.

    ಈ ಭಾಗದಲ್ಲಿ ಇಷ್ಟು ಬೃಹತ್ ತಿಮಿಂಗಿಲಗಳು ಕಾಣುವುದಿಲ್ಲ. ಆದರೆ ಜೂನ್‍ನಲ್ಲಿ ಇದೇ ಜಿಲ್ಲೆಯಲ್ಲಿ 18 ಅಡಿ ಉದ್ದದ, ಒಂದು ಕಾಲಿನ ಶಾರ್ಕ್‍ನ ಮೃತದೇಹ ತೀರಕ್ಕೆ ಬಂದಿತ್ತು. ಶವಪರೀಕ್ಷೆ ನಡೆಸಿದ ನಂತರ ಅರಣ್ಯ ಅಧಿಕಾರಿಗಳು ಅದನ್ನು ಕಡಲತೀರದಲ್ಲಿ ಸಮಾಧಿ ಮಾಡಿದ್ದರು.

    ಇಂತಹ ಅಪರೂಪದ ಜೀವಿಗಳನ್ನು ಹಿಡಿಯುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧ. ಒಂದು ವೇಳೆ ಅಪರೂಪದ ತಿಮಿಂಗಿಲಗಳನ್ನು ಹಿಡಿಯುವುದಾಗಲಿ, ಕೊಲ್ಲುವುದಾಗಲಿ ಮಾಡಿದರೆ ಕಾಯ್ದೆಯಡಿಯಲ್ಲಿ 3 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಬಾಷಾ ತಿಳಿಸಿದ್ದಾರೆ.

  • ಜೆಸಿಬಿ ಇಳಿಸಿ ರಸ್ತೆ ಕ್ಲೀನ್ ಮಾಡಿದ ಜನಪ್ರತಿನಿಧಿಗಳು

    ಜೆಸಿಬಿ ಇಳಿಸಿ ರಸ್ತೆ ಕ್ಲೀನ್ ಮಾಡಿದ ಜನಪ್ರತಿನಿಧಿಗಳು

    -ಮೀನುಗಾರಿಕಾ ರಸ್ತೆಗೆ ಎಸೆಯಲ್ಪಟ್ಟ ಮರಳು

    ಉಡುಪಿ: ರಸ್ತೆಯಲ್ಲಿದ್ದ ಮರಳನ್ನು ಕಾಪುವಿನ ಜನಪ್ರತಿನಿಧಿಗಳು ಮುಂದೆ ನಿಂತು ಸ್ವಚ್ಛಗೊಳಿಸಿದ್ದಾರೆ. ಭಾರೀ ಮಳೆಯಾಗುತ್ತಿರುವುದರಿಂದ ಅರಬ್ಬಿ ಸಮುದ್ರದ ಅಬ್ಬರ ಕೂಡ ಜಾಸ್ತಿಯಾಗಿದೆ. ಕಾಪು ತಾಲೂಕಿನ ಉದ್ಯಾವರ ತೀರದಲ್ಲಿ ಕಡಲು ಕೊರೆತದಿಂದ ರಸ್ತೆ ಸಂಪರ್ಕ ಸಮಸ್ಯೆ ಉಂಟಾಗಿದೆ.

    ಭಾರಿ ಮಳೆ ಹಿನ್ನೆಲೆ ಕನಕೋಡ ಉದ್ಯಾವರ ಪಡುಕರೆಯಲ್ಲಿ ಕಡಲಬ್ಬರ ಜಾಸ್ತಿಯಾಗಿದ್ದು, ಕಡಲಿನ ಆರ್ಭಟಕ್ಕೆ ರಾಶಿ ರಾಶಿ ಮರಳು ದಡಕ್ಕೆ ಉಕ್ಕಿ ಬರುತ್ತಿದೆ. ಅಲೆಗಳ ಜೊತೆ ಭಾರಿ ಪ್ರಮಾಣದ ಮರಳು ಕೂಡ ಮೀನುಗಾರಿಕಾ ರಸ್ತೆಯನ್ನು ಸೇರುತ್ತಿದೆ. ಕಡಲು ಉಕ್ಕಿದ ಹಿನ್ನಲೆ ಕೈಪುಂಜಾಲು-ಮಲ್ಪೆ ಸಂಪರ್ಕ ರಸ್ತೆ ಮೇಲೆ ಮರಳು ರಾಶಿ ಬಿದ್ದಿದೆ.

    ಸಮುದ್ರದ ಮರಳು ತುಂಬಿ ರಸ್ತೆ ಸಂಪರ್ಕಕ್ಕೆ ಸಮಸ್ಯೆ ಉಂಟಾಗಿದ್ದು, ಬಸ್, ರಿಕ್ಷಾ, ಟೆಂಪೋ ಹಾಗೂ ದ್ವಿಚಕ್ರ ವಾಹನ ಸಂಚಾರ ಸ್ಥಗಿತವಾಗಿದೆ. ಇಂದು ಭಾನುವಾರ ಆಗಿರೋದ್ರಿಂದ ಪಂಚಾಯತ್ ನ ಕಾರ್ಮಿಕರು ರಜೆಯಲ್ಲಿದ್ದಾರೆ. ಹೀಗಾಗಿ ಉದ್ಯಾವರ ಗ್ರಾಮ ಪಂಚಾಯತ್ ನ ಸದಸ್ಯರೇ ಜೆಸಿಬಿ ಹಿಡಿದು ರಸ್ತೆಗಿಳಿದಿದ್ದಾರೆ.

    ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಜಿ.ಕೋಟ್ಯಾನ್ ಮತ್ತು ರವಿ ಪಡುಕರೆ ಜೆಸಿಬಿ ಎಲ್ಲಿ ರಸ್ತೆಯಲ್ಲಿ ಬಿದ್ದಿರುವ ಮರಳ ರಾಶಿಯನ್ನು ಸ್ವಚ್ಛ ಮಾಡಿದ್ದಾರೆ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಜನಪ್ರತಿನಿಧಿಗಳಿಂದ ನಡೆದ ರಸ್ತೆ ಸ್ವಚ್ಛತಾ ಕಾರ್ಯ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

    ರವಿ ಮತ್ತು ಕೃಷ್ಣ ಮಾತನಾಡಿ, ಜೆಸಿಬಿ ಚಾಲಕರು ರಜೆಯಲ್ಲಿದ್ದಾರೆ. ರಸ್ತೆ ಸಂಪರ್ಕ ಕಡಿತ ಆಗಿರುವುದರಿಂದ ಓಡಾಟಕ್ಕೆ ಬಹಳ ಕಷ್ಟ ಆಗುತ್ತಿತ್ತು.

     

  • ಕಡಲ್ಕೊರೆತವಾಗುತ್ತಿರುವ ಪ್ರದೇಶಗಳಿಗೆ ಸಚಿವ ಆರ್.ಅಶೋಕ್ ಭೇಟಿ, ಪರಿಶೀಲನೆ

    ಕಡಲ್ಕೊರೆತವಾಗುತ್ತಿರುವ ಪ್ರದೇಶಗಳಿಗೆ ಸಚಿವ ಆರ್.ಅಶೋಕ್ ಭೇಟಿ, ಪರಿಶೀಲನೆ

    ಮಂಗಳೂರು: ಸುರತ್ಕಲ್ ಸಮೀಪದ ಚಿತ್ರಾಪುರ ಮತ್ತು ಬೈಕಂಪಾಡಿಯ ಮೀನಕಳಿಯದಲ್ಲಿನ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದರು. ಚಿತ್ರಾಪುರದಲ್ಲಿನ ರಂಗ ಮಂದಿರ, ಶಾಲಾ ಮೈದಾನ ಅಪಾಯದಲ್ಲಿರುವುದನ್ನು ಗಮನಿಸಿದರು. ಮೀನಕಳಿಯದ ಮೀನು ಹರಾಜು ಕಟ್ಟಡವೂ ಅಪಾಯದಲ್ಲಿದ್ದು ಭೇಟಿ ನೀಡಿ ಸ್ವತಃ ಕಡಲ್ಕೊರೆತದ ಸಮಸ್ಯೆಯನ್ನು ತಿಳಿದುಕೊಂಡರು.

    ಈ ಸಂದರ್ಭ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಚಿತ್ರಾಪುರ ಮತ್ತು ಬೈಕಂಪಾಡಿ ಪ್ರದೇಶದಲ್ಲಿ ಸಮುದ್ರದ ಕೊರೆತದಿಂದ ಆಗುತ್ತಿರುವ ನಷ್ಟದ ಕುರಿತು ಮಾಹಿತಿ ನೀಡಿದ್ದು, ಶಾಶ್ವತ ಕಾಮಗಾರಿಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸಿದರು. ಈಗಾಗಲೇ ಚಿತ್ರಾಪುರ ಬಳಿ 1.65 ಕೋ.ರೂ,ಮತ್ತು ಮೀನಕಳಿಯದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಸಮುದ್ರ ಕೊರೆತಕ್ಕೆ ಕಲ್ಲುಹಾಕುವ ಕಾಮಗಾರಿ ಅನುದಾನ ಮೀಸಲಿಡಲಾಗಿದೆ. ಹೆಚ್ಚುವರಿ 250 ಕೋಟಿ ರೂ. ಅನುದಾನದಲ್ಲಿ ಸರ್ಕಾರ ಹೆಚ್ಚುವರಿ ಅನುದಾನ ನೀಡುವಂತೆ ಕಂದಾಯ ಸಚಿವ ಆರ್.ಆಶೋಕ್ ಅವರಿಗೆ ಮನವಿ ಮಾಡಿದರು.

    ಈ ಸಂದರ್ಭ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಉಪಮೇಯರ್ ವೇದಾವತಿ,ಕಾರ್ಪೊರೇಟರ್ ಸುಮಿತ್ರ ಕರಿಯಾ, ಈ ಸಂದರ್ಭ ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ ಹಾಗೂ ಮಹಾಸಭಾದ ಪದಾಧಿಕಾರಿಗಳು, ಉಪಸ್ಥಿತರಿಸದ್ದರು.

  • ಪೊಲೀಸ್ರು ಬಂದು ಮುಂದೆ ನಿಂತ್ರೂ ಸೆಕ್ಸ್ ನಿಲ್ಲಿಸಲು ಒಪ್ಪದ ಜೋಡಿ

    ಪೊಲೀಸ್ರು ಬಂದು ಮುಂದೆ ನಿಂತ್ರೂ ಸೆಕ್ಸ್ ನಿಲ್ಲಿಸಲು ಒಪ್ಪದ ಜೋಡಿ

    – ಕಡಲ ತೀರದಲ್ಲಿ ಎಲ್ಲರ ಮುಂದೆ ಬೆತ್ತಲಾದ್ರು

    ಮನಿಲಾ: ಬ್ರಿಟಿಷ್ ಯುವತಿ ಮತ್ತು ಆಸ್ಟ್ರೇಲಿಯಾದ ಯುವಕ ಹಾಡಹಗಲೇ ಜನರು ಓಡಾಡುವ ಬೀಚ್‍ನಲ್ಲಿ ಸೆಕ್ಸ್ ಮಾಡಿದ್ದು, ಪೊಲೀಸರು ಬಂದರೂ ಮುಂದುವರಿಸಿರುವ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.

    ಜಾಸ್ಮಿನ್ ನೆಲ್ಲಿ ಮತ್ತು ಆಂಥೋನಿ ಕ್ಯಾರಿಯೊ ಎಂದು ಗುರುತಿಸಲಾಗಿದೆ. ಇಬ್ಬರೂ 26 ನೇ ವಯಸ್ಸಿನವರಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

    ಯುವಕ ಮತ್ತು ಯುವತಿ ಸಂಜೆ ಬೀಜ್ ಬಳಿ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಇಬ್ಬರೂ ನಗ್ನವಾಗಿ ಲೈಂಗಿಕ ಸಂಬಂಧ ಹೊಂದಿದ್ದಾರೆ. ಆ ಬೀಚ್‍ನಲ್ಲಿ ಅನೇಕ ಮಕ್ಕಳು ತಮ್ಮ ಕುಟುಂಬದವರೊಂದಿಗೆ ಬಂದಿದ್ದು, ತುಂಬಾ ಜನರು ಕೂಡ ಓಡಾಡುತ್ತಿದ್ದರು. ಆದರೂ ಜೋಡಿ ಅಸಭ್ಯವಾಗಿ ಜೋಡಿ ಸೆಕ್ಸ್ ಮಾಡಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬಂದು ಜೋಡಿ ಮುಂದೆ ನಿಂತಿದ್ದಾರೆ. ಆದರೆ ಜೋಡಿ ಸೆಕ್ಸ್ ಮಾಡುವುದನ್ನು ನಿಲ್ಲಿಸದೆ ಮುಂದುವರಿಸಿದ್ದಾರೆ. ನಂತರ ಅವರನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಯುವವ-ಯುವತಿ ಕಾರಿನಲ್ಲಿ ಬೀಚ್‍ಗೆ ಹೋಗಿದ್ದಾರೆ. ಆದರೆ ಅವರು ಬೀಚ್‍ಗೆ ಹೋಗುವ ಮೊದಲು ತುಂಬಾ ಕುಡಿದಿದ್ದರು. ನಂತರ ಇಬ್ಬರು ಸುತ್ತಮುತ್ತಲೂ ಜನರು ಇದ್ದಾರೆ ಎಂದು ನೋಡದೆ ಸೆಕ್ಸ್ ಮಾಡಲು ಮುಂದಾಗಿದ್ದಾರೆ. ನಮ್ಮ ಪೊಲೀಸರು ಅವರ ಪಕ್ಕದಲ್ಲಿ ಹೋಗಿ ನಿಂತರೂ ಸೆಕ್ಸ್ ಮಾಡುವುದನ್ನು ಮುಂದುವರಿಸಿದ್ದಾರೆ. ಕೊನೆಗೆ ಪೊಲೀಸರು ಇಬ್ಬರನ್ನು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ದಂಡ ವಿಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಜೋಡಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಇದೇ ತಿಂಗಳು ವಿಚಾರಣೆಗೆಂದು ನ್ಯಾಯಾಲಯಕ್ಕೆ ಹಾಜರಾಗಬೇಕು. ಇನ್ನೂ ನಿಖರವಾದ ದಿನಾಂಕವನ್ನು ಸೂಚಿಸಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

  • ಬೀಚ್‍ನಲ್ಲಿ ಯುವಕನೊಂದಿಗೆ 19ರ ಹುಡ್ಗಿ ಸೆಕ್ಸ್

    ಬೀಚ್‍ನಲ್ಲಿ ಯುವಕನೊಂದಿಗೆ 19ರ ಹುಡ್ಗಿ ಸೆಕ್ಸ್

    – ಪೊಲೀಸರ ಬಳಿ ಕೈ ಮುಗಿದು ಕ್ಷಮೆ

    ಬ್ಯಾಂಕಾಕ್: ಜೋಡಿಯೊಂದು ಕುಡಿದ ಮತ್ತಿನಲ್ಲಿ ಬೀಚ್‍ನ ತೀರದಲ್ಲಿ ಸೆಕ್ಸ್ ಮಾಡಿದ್ದಾರೆ. ಬಳಿಕ ಅವರು ಪೊಲೀಸರ ಬಳಿ ಕೈ ಮುಗಿದು ಕ್ಷಮೆ ಕೇಳಿರುವ ಘಟನೆ ಥೈಲ್ಯಾಂಡ್‍ನ ಪ್ರಸಿದ್ಧ ಪಟ್ಟಾಯ ಬೀಚ್‍ನಲ್ಲಿ ನಡೆದಿದೆ.

    ಜೋಡಿಯನ್ನು ರೋಮನ್ ಗ್ರಿಗೊರೆಂಕೊ (26) ಮತ್ತು ದರಿಯಾ ವಿನೋಗ್ರಾಡೋವಾ (19) ಎಂದು ತಿಳಿದು ಬಂದಿದೆ. ಇಬ್ಬರೂ ರಷ್ಯಾ ಮೂಲದವರಾಗಿದ್ದು, ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಥೈಲ್ಯಾಂಡ್‍ಗೆ ಬಂದಿದ್ದರು. ಜೋಡಿ ಸೆಕ್ಸ್ ಮಾಡಿರುವುದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಂಡು ಪೊಲೀಸರಿಗೆ ಕೊಟ್ಟಿದ್ದಾರೆ. ಬೀಚ್‍ನಲ್ಲಿ ಅನೇಕ ಮಂದಿ ಓಡಾಡುತ್ತಿದ್ದರೂ ಜೋಡಿ ಅಸಭ್ಯವಾಗಿ ನಡೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪೊಲೀಸರು ವಿಡಿಯೋ ನೋಡಿ ಜೋಡಿ ಉಳಿದುಕೊಂಡಿದ್ದ ಹೋಟೆಲ್ ಪತ್ತೆ ಮಾಡಿ ಅವರನ್ನು ಬಂಧಿಸಿದ್ದರು. ನಂತರ ಅವರಿಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪೊಲೀಸರ ಬಳಿ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದ್ದು ಅಪರಾಧ. ಇದರಿಂದ ನಗರದ ಬೀಚ್ ಖ್ಯಾತಿಗೆ ಧಕ್ಕೆಯುಂಟು ಮಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನಮ್ಮನ್ನು ಕ್ಷಮಿಸಿ” ಎಂದು ರೋಮನ್ ಕೇಳಿಕೊಂಡಿದ್ದಾನೆ.

    ಜೋಡಿ ಕ್ಷಮೆ ಕೇಳಿದ ನಂತರ ಪೊಲೀಸರು ದಂಡ ವಿಧಿಸಿ ಅವರನ್ನು ಬಿಡುಗಡೆ ಮಾಡಿದ್ದಾರೆ. ಬೀಚ್‍ನ ಸಮೀಪದಲ್ಲಿ ಜೋಡಿ ಮದ್ಯಪಾನ ಮಾಡಿದ್ದರು. ಅಲ್ಲದೇ ಬೀಚ್ ಬಳಿಯೂ ಕುಡಿಯುತ್ತಿದ್ದರು. ಕುಡಿದ ಮತ್ತಿನಲ್ಲಿ ಅವರು ಎಲ್ಲಿದ್ದೇವೆ ಎಂಬ ಅರಿವನ್ನು ಕಳೆದುಕೊಂಡಿದ್ದರು. ಹೀಗಾಗಿ ಇಬ್ಬರು ಲೈಂಗಿಕ ಸಂಬಂಧ ಹೊಂದಿದ್ದಾರೆ. ಅಲ್ಲಿ ಸಿಸಿಟಿವಿಯನ್ನು ಪರಿಶೀಲನೆ ಮಾಡಿ ಅವರನ್ನು ಬಂಧಿಸಿದ್ದೆವು. ಕಳೆದ ವಾರವೂ ಇದೇ ಬೀಚ್‍ನಲ್ಲಿ ಇಂತಹ ಘಟನೆ ನಡೆದಿತ್ತು. ಇದರಿಂದ ಬೀಚ್‍ನ ಖ್ಯಾತಿಗೆ ಧಕ್ಕೆಯಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಹೊಸ ವರ್ಷಾಚರಣೆಗೆ ಗೋವಾ ಖಾಲಿ ಖಾಲಿ – ಬಿಕೋ ಎನ್ನುತ್ತಿದೆ ಬೀಚ್‌ಗಳು

    ಹೊಸ ವರ್ಷಾಚರಣೆಗೆ ಗೋವಾ ಖಾಲಿ ಖಾಲಿ – ಬಿಕೋ ಎನ್ನುತ್ತಿದೆ ಬೀಚ್‌ಗಳು

    ಕಾರವಾರ: ಪ್ರವಾಸಿಗರ ಸ್ವರ್ಗ ಗೋವಾ ಎಂದೇ ಪ್ರಸಿದ್ಧ. ಹಾಗೆಯೇ ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆಯೂ ಪ್ರವಾಸೋದ್ಯಮಕ್ಕೆ ಪ್ರಸಿದ್ಧ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ರಜೆಯ ಮೋಜು ಅನುಭವಿಸಲು ಕರಾವಳಿ ತೀರಾ ಹಾಗೂ ಗೋವಾ ರಾಜ್ಯಕ್ಕೆ ದೇಶ ವಿದೇಶಿಗರು ಮುಗಿ ಬೀಳುತ್ತಿದ್ದರು. ಆದರೆ ಈ ವರ್ಷ ದೇಶ, ವಿದೇಶಿಗರ ಪ್ರವಾಸಿ ಸಂಖ್ಯೆ ಇಳಿಮುಖವಾಗಿದೆ.

    ಗೋವಾ ರಾಜ್ಯದಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ ದೇಶ ವಿದೇಶದ ಜನರು ಕಿಕ್ಕಿರಿದು ತುಂಬುತ್ತಿದ್ದರು. ಈ ವರ್ಷದ ಕ್ರಿಸ್‍ಮಸ್ ಆಚರಣೆಯ ಹಬ್ಬದಂದು ವಾರವಿಡೀ ಪ್ರವಾಸಿಗರ ನಿರೀಕ್ಷೆಯನ್ನು ಮಾಡಲಾಗಿತ್ತು. ಆದರೆ ನಿರೀಕ್ಷೆಯಂತೆ ಪ್ರವಾಸಿಗರು ಬರಲಿಲ್ಲ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ಡಿಸೆಂಬರ್ ಅಂತ್ಯದಲ್ಲಿ ಪ್ರವಾಸಿಗರ ಆಗಮನದ ಸಂಖ್ಯೆ ಶೇ.50ರಷ್ಟು ಇಳಿಮುಖವಾಗಿದೆ.

    ಗೋವಾ ರಾಜ್ಯಕ್ಕೆ ಪ್ರತಿ ವರ್ಷ 6 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಗೋವಾ ರಾಜ್ಯದ ಪ್ರವಾಸೋಧ್ಯಮ ಇಲಾಖೆ ಹೇಳುತ್ತದೆ. ಈ ಬಾರಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂಬುದರ ಬಗ್ಗೆ ಅಂಕಿ ಅಂಶ ಕಲೆ ಹಾಕಲಾಗಿದೆ. ಅದರ ಪ್ರಕಾರ ಈ ವರ್ಷದ ಡಿಸೆಂಬರ್ ನಲ್ಲಿ ಶೇ.50ರಷ್ಟು ಕಮ್ಮಿಯಾಗಿರುವ ಕುರಿತು ಮಾಹಿತಿ ನೀಡಿದೆ.

    ಗೋವಾ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲು ಕಾರಣಗಳು:
    ದೇಶದಲ್ಲಿ ಪ್ರತಿಭಟನೆ ಹೆಚ್ಚಾಗಿತ್ತು. ಜೊತೆಗೆ ಇಂದು ಗೋವಾದಲ್ಲಿ ಮಹದಾಯಿ ಹೋರಾಟ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಸಲು ಅಲ್ಲಿನ ಸಂಘಟನೆಗಳು ಕರೆಕೊಟ್ಟಿದ್ದರು. ಇದರ ಜೊತೆ ದೇಶ ವಿದೇಶದಿಂದ ಪ್ರವಾಸಿಗರನ್ನು ಕರೆ ತರುತ್ತಿದ್ದ ಪ್ರವಾಸೋಧ್ಯಮ ಕಂಪನಿಗಳು ಆರ್ಥಿಕ ಸಂಕಟದಿಂದ ಮುಚ್ಚಿರುವುದು ಕೂಡ ಗೋವಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

    ನೆರೆಯ ಗೋವಾಕ್ಕೆ ಹೋಲಿಸಿದರೆ ಕರ್ನಾಟಕದ ಕರಾವಳಿ ಭಾಗ ಅಲ್ಪ ಮಟ್ಟಿಗೆ ಖುಷಿ ಪಡಬಹುದು. ಉತ್ತರ ಕನ್ನಡ ಜಿಲ್ಲೆ ಗೋವಾ ರಾಜ್ಯವನ್ನು ಅಂಟಿಕೊಂಡಿದೆ. ಹೀಗಾಗಿ ಗೋವಾಕ್ಕೆ ಪ್ರತಿ ವರ್ಷ ಹೊಸ ವರ್ಷಾಚರಣೆ ಮಾಡುವ ಪ್ರವಾಸಿಗರು ಇಲ್ಲಿನ ಗೋಕರ್ಣ, ಕಾರವಾರ, ಮುರಡೇಶ್ವರದತ್ತ ಮುಖ ಮಾಡುತ್ತಾರೆ. ಈ ಬಾರಿ ಕಳೆದ ಬಾರಿಗಿಂತ ಇಳಿಮುಖವಾಗಿದ್ದು, ಜನರಲ್ಲಿ ಆಸಕ್ತಿ ಕಡಿಮೆ ಮಾಡಿದೆ. 2018ರ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ದೇಶಿಯರ ಪ್ರವಾಸಿಗರ ಸಂಖ್ಯೆ 6,10,994, ವಿದೇಶಿಗರ ಪ್ರವಾಸಿಗರು -2023 ಒಟ್ಟು 6,13,016 ಲಕ್ಷ ಜನ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದಾರೆ. ಆದರೆ 2019ರ ಪ್ರಕಾರ ದೇಶಿಯ ಪ್ರವಾಸಿಗರು – 5,21,880 ವಿದೇಶಿಯ ಪ್ರವಾಸಿಗರು 3839, ಒಟ್ಟು 5,25,719 ಇದ್ದು ಈ ಬಾರಿ ಇಳಿಮುಖವಾಗಿದೆ.

    ವಿದೇಶಿ ಪ್ರವಾಸಿಗರಲ್ಲಿ ಏರಿಕೆ
    ಕಳೆದ ಬಾರಿ ಹೋಲಿಸಿದರೆ ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. 2018 ಡಿಸೆಂಬರ್ ರಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾದ ಗೋಕರ್ಣಕ್ಕೆ 836, ಓಂ ಬೀಚ್ 625, ಮುರಡೇಶ್ವರ 395, ಕಾರವಾರ ಕಡಲ ತೀರ 94 ಜನ ಭೇಟಿ ನೀಡಿದ್ದು, ಒಟ್ಟು ವಿದೇಶಿ ಪ್ರವಾಸಿಗರು 2023 ಆಗಿದೆ. 2019 ಡಿಸೆಂಬರ್ ನಲ್ಲಿ ಗೋಕರ್ಣಕ್ಕೆ 2568, ಓಂ ಬೀಚ್ 650, ಮುರಡೇಶ್ವರ 347, ಕಾರವಾರ 100, ಕಾಸರಕೋಡು ಬೀಚ್ 150 ಒಟ್ಟು ವಿದೇಶಿಯ ಪ್ರವಾಸಿಗರು 3839 ಆಗಿದ್ದು, ಕಳೆದ ಬಾರಿಗಿಂತ ಈ ಬಾರಿ ಏರಿಕೆ ಕಂಡಿದೆ.

    ಹೊಸ ವರ್ಷಕ್ಕಿಲ್ಲ ಸೆಲಬ್ರೇಷನ್:
    ಕಳೆದ ವರ್ಷ ದೊಡ್ಡ ದೊಡ್ಡ ಪಾರ್ಟಿಯನ್ನು ಆಯೋಜನೆ ಮಾಡುವ ಮೂಲಕ ಹೊಸ ವರ್ಷಾಚರಣೆಯನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲಾಗಿತ್ತು. ಇದಕ್ಕಾಗಿ ಖಾಸಗಿ ಹೋಟಲ್, ರೆಸಾರ್ಟ್ ಗಳಲ್ಲಿ ಮ್ಯೂಸಿಕಲ್ ಪಾರ್ಟಿ ಸಹ ಇರುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಜಿ.ಎಸ್‍ಟಿ ಹಾಗೂ ಮನೋರಂಜನಾ ಶುಲ್ಕ ಆಯೋಜಕರಿಗೆ ದುಬಾರಿಯಾಗಿದ್ದು, ಇದರ ಜೊತೆ ಪ್ರವಾಹದಿಂದ ಜಿಲ್ಲೆಗೆ ಆದ ಹಾನಿಗಳಿಂದ ಜನರಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಈ ಕಾರಣದಿಂದ ಕಾರವಾರದಲ್ಲಿ ಕೇವಲ ಒಂದು ಹೋಟೆಲ್, ಗೋಕರ್ಣದಲ್ಲಿ ಒಂದು ರೆಸಾರ್ಟ್ ಹೊರತುಪಡಿಸಿ ಉಳಿದ ಭಾಗದಲ್ಲಿ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳು ಆಯೋಜನೆ ಗೊಂಡಿಲ್ಲ. ಒಟ್ಟಿನಲ್ಲಿ ಈ ವರ್ಷದ ಹೊಸ ವರ್ಷಾಚರಣೆ ಪ್ರವಾಸಿಗರ ಸ್ವರ್ಗದ ನಾಡಿನಲ್ಲಿ ಬಿಕೋ ಎನ್ನಿಸುತ್ತಿದ್ದು, ಹೊಸ ವರ್ಷವನ್ನು ಬರಮಾಡಿಕೊಳ್ಳುವ ಉತ್ಸುಕತೆ ಜನರಲ್ಲಿ ಅಷ್ಟಾಗಿ ಕಾಣುತ್ತಿಲ್ಲ.

  • ಅಲೆಗಳ ಹೊಡೆತಕ್ಕೆ ಸಿಲುಕಿ ಯುವಕ ಸಾವು

    ಅಲೆಗಳ ಹೊಡೆತಕ್ಕೆ ಸಿಲುಕಿ ಯುವಕ ಸಾವು

    ಚಾಮರಾಜನಗರ: ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು ದೀಪು(26) ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಯುವಕ ದೀಪು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಈತ ತನ್ನ ಸ್ನೇಹಿತರ ಶನಿವಾರ ಪಾಂಡಿಚೇರಿಗೆ ಪ್ರವಾಸಕ್ಕೆ ತೆರಳಿದಾಗ ಈ ಘಟನೆ ನಡೆದಿದೆ.

    ಚಾಮರಾಜನರದ ದೀಪು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ವೀಕೆಂಡ್ ಇದ್ದ ಕಾರಣ ಸ್ನೇಹಿತ ಜೊತೆ ಕಾರಿನಲ್ಲಿ ಪ್ರವಾಸ ಹೋಗಿದ್ದಾರೆ. ಈ ವೇಳೆ ಪಾಂಡೀಚೇರಿಯ ಬೀಚ್‍ನಲ್ಲಿ ಸ್ನೇಹಿತರ ಜೊತೆ ಆಟವಾಡುವ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ದೀಪು ಸಾವನ್ನಪ್ಪಿದ್ದಾನೆ.