Tag: ಬಿಸಿ ನೀರು

  • ಬಿಸಿ ನೀರು ಕುಡಿಯಿರಿ ಆರೋಗ್ಯವಾಗಿರಿ

    ಬಿಸಿ ನೀರು ಕುಡಿಯಿರಿ ಆರೋಗ್ಯವಾಗಿರಿ

    ರೋಗ್ಯವು ಸಮತೋಲನವಾಗಿರ ಬೇಕಾದರೆ ನೀರಿನ ಸೇವನೆ ಅತ್ಯಗತ್ಯ. ನೀರಿನ ಸೇವನೆಯಿಂದ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದಾಗಿದೆ. ಅದರಲ್ಲೂ ಮುಂಜಾನೆ ಎದ್ದು ಬಿಸಿಯಾದ ನೀರನ್ನು ಕುಡಿಯುವುದಿಂದ ಅನೇಕ ಲಾಭ ಸಿಗುತ್ತದೆ.

    ತಣ್ಣಗಿನ ನೀರು ಮತ್ತು ಬಿಸಿ ನೀರು ಎಂದು ಕುಡಿಯುತ್ತೇವೆ. ಹೆಚ್ಚಾಗಿ ಬೇಸಿಗೆಯಲ್ಲಿ ತಣ್ಣಗಿನ ನೀರು ಕುಡಿಯಲು ಇಷ್ಟಪಡುತ್ತೇವೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಿಸಿ ನೀರು ಇಷ್ಟವಾಗುತ್ತದೆ. ಮುಂಜಾನೆ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುತ್ತವೆ.

    * ಬಿಸಿ ನೀರು ಕುಡಿಯುವುದರಿಂದ ಸಿಗುವಂತಹ ಅತೀ ಮುಖ್ಯ ಲಾಭ ಎಂದರೆ ಅದು ಜೀರ್ಣ ಕ್ರಿಯೆ ಸುಧಾರಣೆಯಾಗುತ್ತದೆ. ಬಿಸಿ ನೀರು ಕುಡಿದರೆ ಅದರಿಂದ ಮಲಬದ್ಧತೆ ನಿವಾರಣೆ ಮಾಡಬಹುದಾಗಿದೆ.

    * ಬಿಸಿ ನೀರು ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು ನೆರವಾಗುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಬಿಸಿ ನೀರು ಹೊಟ್ಟೆ ತುಂಬಿದಂತೆ ಮಾಡುತ್ತದೆ ಮತ್ತು ಬಿಸಿ ನೀರು ಹೆಚ್ಚು ಕಾಲ ಹೊಟ್ಟೆಯಲ್ಲಿ ಉಳಿಯುತ್ತದೆ.

    * ಬಿಸಿ ನೀರನ್ನು ಕುಡಿಯುವುದರಿಂದ ಕಟ್ಟಿದ ಮೂಗಿನ ನಿವಾರಣೆಯಾಗುತ್ತದೆ.

    * ಬಿಸಿ ನೀರಿನಿಂದಾಗಿ ದೇಹದಲ್ಲಿ ರಕ್ತ ಸಂಚಾರವು ಸುಗಮವಾಗಿ ಆಗಲು ನೆರವಾಗುತ್ತದೆ. ಬಿಸಿ ನೀರು ರಕ್ತನಾಳನ್ನು ಹಿಗ್ಗಿಸುವ ಮೂಲಕವಾಗಿ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡುತ್ತದೆ.

    * ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    * ಬಿಸಿ ನೀರು ಸೇವನೆ ಮಾಡುವುದರಿಂದ ಚರ್ಮದ ತಾರುಣ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

    * ಒತ್ತಡ, ಖಿನ್ನತೆ ದೂರ ಮಾಡಿ ಆರಾಮದಾಯಕ ಅನುಭವವನ್ನು ಬಿಸಿ ನೀರು ಸೇವನೆಯಿಂದ ಪಡೆಯಬಹುದಾಗಿದೆ.

  • ಚಾಚುತಪ್ಪದೇ ಬಿಸಿನೀರು ಸೇವನೆ – ಕೊರೊನಾ ಗೆದ್ದು ಮಾದರಿಯಾದ 100ರ ಅಜ್ಜಿ

    ಚಾಚುತಪ್ಪದೇ ಬಿಸಿನೀರು ಸೇವನೆ – ಕೊರೊನಾ ಗೆದ್ದು ಮಾದರಿಯಾದ 100ರ ಅಜ್ಜಿ

    ಬಳ್ಳಾರಿ: ಕೊರೊನಾ ಬಂದಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಜನರ ಉದಾಹರಣೆಗೆ ನಮಗೆ ಸಿಗುತ್ತೆ. ಆದರೆ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿ ರಾಜ್ಯದ ಮೊದಲ ಶತಾಯುಷಿ ಅಜ್ಜಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಬರೋಬ್ಬರಿ ನೂರು ವರ್ಷದ ಅಜ್ಜಿ ಸೋಂಕಿನಿಂದ ಗುಣಮುಖ ಆಗಿದ್ದಾರೆ. ವಿಶೇಷ ಅಂದರೆ ಅಜ್ಜಿ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ತಮ್ಮ ಮನೆಯ ಹಿರಿಯ ಮಗನಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹಿರಿಯ ಮಗನ ಪ್ರಾಥಮಿಕ ಹಂತದ ಸಂಪರ್ಕ ಹೊಂದಿರುವ ಕಾರಣ ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಮನೆಯ ಉಳಿದ ನಾಲ್ವರ ಸ್ವಾಬ್ ಟೆಸ್ಟ್ ಮಾಡಿದಾಗ ಎಲ್ಲರಿಗೂ ಸೋಂಕು ಇರುವುದು ದೃಢಪಟ್ಟಿತ್ತು.

    ಹಿರಿಯ ಮಗನನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಮನೆಯ ಮಂದಿಯ ಜೊತೆಯಲ್ಲಿ ಅಜ್ಜಿಯ ಸಹ ಗುಣಮುಖ ಆಗಿದ್ದಾರೆ. 80 ವರ್ಷದ ಮೇಲ್ಪಟ್ಟ ಜನರಲ್ಲಿ ಸೋಂಕು ಕಾಣಿಸಿಕೊಂಡರೇ ಬಹಳ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಅಜ್ಜಿ ಸೋಂಕಿತರ ಭಯವನ್ನು ದೂರ ಮಾಡಿದ್ದಾರೆ. ವೈದ್ಯರ ನೀಡಿದ ಔಷಧಿ ಹಾಗೂ ಬಿಸಿ ನೀರು ಕುಡಿಯುವುದು ಇದೆಲ್ಲವನ್ನೂ ಅಜ್ಜಿ ಚಾಚು ತಪ್ಪದೆ ಪಾಲನೆ ಮಾಡಿದ್ದಾರೆ. ಹೀಗಾಗಿ ಅಜ್ಜಿ ಬೇಗ ಗುಣಮುಖ ಆಗಿದ್ದಾರೆ ಎಂದು ಮನೆಯವರು ಹೇಳಿದ್ದಾರೆ.

  • ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ ಕೊರೊನಾ ಕಡಿಮೆ ಆಗುತ್ತೆ: ಶ್ರೀರಾಮುಲು

    ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ ಕೊರೊನಾ ಕಡಿಮೆ ಆಗುತ್ತೆ: ಶ್ರೀರಾಮುಲು

    -ಚೀನಾದಲ್ಲೂ ಸಾಕಷ್ಟು ಮಂದಿ ಇದನ್ನೇ ಅನುಸರಿಸಿ ಗುಣವಾಗಿದ್ದಾರೆ

    ಬಳ್ಳಾರಿ: ಈ ಹಿಂದೆ ಸೂರ್ಯನ ಕಿರಣ ಎಲ್ಲಿ ಹೆಚ್ಚು ಇರುತ್ತೋ ಅಲ್ಲಿ ಹೆಚ್ಚು ಜನ ಕೊರೊನಾ ಸೋಂಕಿನಿಂದ ಗುಣಮುಖರಾಗ್ತಾರೆ ಎಂದಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು ಇಂದು ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ ಕೊರೊನಾ ಕಡಿಮೆ ಆಗುತ್ತ ಎಂದು ಟಿಪ್ಸ್ ಕೊಟ್ಟಿದ್ದಾರೆ.

    ಇಂದು ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾಡನಾಡಿದ ಸಚಿವರು, ಕೊರೊನಾ ಸೋಂಕಿನಿಂದ ಗುಣಮುಖರಾಗಲು ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ. ತಣ್ಣೀರಿನ ಬದಲು ಬಿಸಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೊರೊನಾ ಕಡಿಮೆ ಆಗುತ್ತದೆ. ಚೀನಾದಲ್ಲೂ ಇದೇ ರೀತಿ ಜನರು ಮಾಡಿ ಗುಣಮುಖರಾಗಿದ್ದಾರೆ. ನಾನು ವೈದ್ಯನಲ್ಲ ಆದರೆ ಯಾವುದೋ ಆರ್ಟಿಕಲ್‍ನಲ್ಲಿ ಈ ಬಗ್ಗೆ ಓದಿದ್ದೆ ಎಂದು ಸಲಹೆ ನೀಡಿದ್ದಾರೆ.

    ಈ ಹಿಂದೆ ಹಾವೇರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ಎಲ್ಲೆಲ್ಲಿ ಸೂರ್ಯನ ಕಿರಣ ಹೆಚ್ಚು ಬೀಳುತ್ತಿವೆಯೋ ಅಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರು ಹೆಚ್ಚು ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದ್ದರು.

    ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಚಿವರು:
    ಇಂದು ಬಳ್ಳಾರಿಯ ರೂಪನಗುಡಿ ರಸ್ತೆಯಲ್ಲಿ ಆಹಾರದ ಕಿಟ್ ವಿತರಣೆ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಆರೋಗ್ಯ ಸಚಿವರೇ ಮರೆತಿದ್ದರು. ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಅವರು ದಾನಿಗಳು ನೀಡಿದ್ದ ಆಹಾರದ ಕಿಟ್ ವಿತರಣೆಗೆ ಬಂದಿದ್ದ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕಿಟ್ ಹಂಚಿದ್ದಾರೆ. ಇತ್ತ ಸಚಿವರ ಹಿಂಬಾಲಕರಿಂದಲೂ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡಲಾಗಿದೆ.

  • ಸ್ನಾನಕ್ಕೆಂದು ಸಿದ್ಧಪಡಿಸಿದ್ದ ಬಿಸಿ ನೀರಿಗೆ ಬಿದ್ದು ಬಾಲಕಿ ಸಾವು!

    ಸ್ನಾನಕ್ಕೆಂದು ಸಿದ್ಧಪಡಿಸಿದ್ದ ಬಿಸಿ ನೀರಿಗೆ ಬಿದ್ದು ಬಾಲಕಿ ಸಾವು!

    ಮಂಗಳೂರು: ಸ್ನಾನ ಮಾಡಲೆಂದು ಸಿದ್ಧಪಡಿಸಿದ್ದ ಬಿಸಿ ನೀರು ಮೈಮೇಲೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಐದು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

    ಪುತ್ತೂರಿನ ಬೆದ್ರಾಳದ ರಮೇಶ್ ಗೌಡ ಎಂಬವರ ಪುತ್ರಿ ತನ್ವಿ(5) ಮೃತಪಟ್ಟ ಬಾಲಕಿ. ಎರಡು ದಿನಗಳ ಹಿಂದೆ ಮನೆಯಲ್ಲಿ ಸ್ನಾನಕ್ಕೆಂದು ಸಿದ್ಧಪಡಿಸಿದ್ದ ಬಿಸಿ ನೀರು ಆಕಸ್ಮಿಕವಾಗಿ ಬಾಲಕಿಯ ಮೇಲೆ ಬಿದ್ದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ತನ್ವಿಯನ್ನು ಪೋಷಕರು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಸೇರಿಸಿದ್ದರು. ಒಂದು ದಿನ ಚಿಕಿತ್ಸೆ ನೀಡಿದ ಅಲ್ಲಿನ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳುವಂತೆ ಸೂಚಿಸಿದ್ದರು.

    ವೈದ್ಯರ ಸೂಚನೆ ಮೇರೆಗೆ ಪೋಷಕರು ಬಾಲಕಿಯನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಗೆ ಕರೆತರುವಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಮಗಳು ಸಾವಿಗೀಡಾಗಿದ್ದಾಳೆಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪಕ್ಕದ ಮನೆಯವಳ ಜೊತೆ ಗಂಡನ ಲವ್ವಿ ಡವ್ವಿ – ಕುದಿಯುವ ಬಿಸಿ ನೀರು ಹಾಕಿ ಪ್ರೇಯಸಿಯ ಕೊಂದ ಹೆಂಡತಿ!

    ಪಕ್ಕದ ಮನೆಯವಳ ಜೊತೆ ಗಂಡನ ಲವ್ವಿ ಡವ್ವಿ – ಕುದಿಯುವ ಬಿಸಿ ನೀರು ಹಾಕಿ ಪ್ರೇಯಸಿಯ ಕೊಂದ ಹೆಂಡತಿ!

    ಹೈದರಾಬಾದ್: ತಾಳಿ ಕಟ್ಟಿದ ಗಂಡನ ಇನ್ನೊಂದು ಪ್ರೇಮದಾಟ ತಿಳಿದ ಪತ್ನಿಯೊಬ್ಬಳು ಗಂಡನ ಪ್ರಿಯತಮೆಯನ್ನು ಕೊತ ಕೊತ ಕುದಿಯುವ ಬಿಸಿ ನೀರು ಸುರಿದು ಹತ್ಯೆ ಮಾಡಿದ್ದಾಳೆ. ಉಪ್ಪಾರಪಳ್ಳಿಯ ಸತ್ಸಂಗ ವಿಹಾರ ಕಾಲೋನಿಯಲ್ಲಿ ನವೆಂಬರ್ 7ರಂದು ಈ ಘಟನೆ ನಡೆದಿದ್ದು, ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಒಸ್ಮಾನಿಯಾ ಆಸ್ಪತೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಶನಿವಾರ ಮೃತಪಟ್ಟಿದ್ದಾಳೆ.

    ಘಟನೆ ವಿವರ: ಉಪ್ಪಾರಪಳ್ಳಿಯ ಸತ್ಸಂಗ ವಿಹಾರ ಕಾಲೋನಿಯಲ್ಲಿ ಛತ್ತೀಸ್ ಗಢ ಮೂಲದ ರಾಜು ಮತ್ತು ರೆಹಮತ್ ಮದುವೆಯಾಗಿ ವಾಸ ಮಾಡುತ್ತಿದ್ದರು. ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಒಂದು ಬಾರಿ ರೆಹಮತ್ ತನ್ನ ತವರು ಮನೆಗೆ ತೆರಳಿದ್ದಾಗ ಆಕೆಯ ಪತಿಗೆ ಪಕ್ಕದ ಮನೆಯ 25 ವರ್ಷದ ಚಂದ್ರಿಕಾಳ ಪರಿಚಯವಾಗಿದೆ. ರೆಹಮತ್ ವಾಪಸ್ ಬಂದರೂ ಇವರಿಬ್ಬರ ಪ್ರಣಯ, ಚಕ್ಕಂದ ನಿಂತಿರಲಿಲ್ಲ. ಇದರಿಂದ ರೆಹಮತ್ ತನ್ನ ಪತಿ ರಾಜು ಹಾಗೂ ಚಂದ್ರಿಕಾ ಮೇಲೆ ತೀವ್ರ ಸಿಟ್ಟಾಗಿದ್ದಳು.

    ನವೆಂಬರ್ 7ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರೆಹಮತ್ ಚಂದ್ರಿಕಾಳನ್ನು ಮನೆಗೆ ಆಹ್ವಾನಿಸುತ್ತಾಳೆ. ಚಂದ್ರಿಕಾ ಮೇಲೆ ಪ್ರತೀಕಾರ ಮಾಡಲೆಂದೇ ಸಿದ್ಧಳಾಗಿದ್ದ ರೆಹಮತ್ ಆಗಲೇ ಕೊತ ಕೊತ ಕುದಿಯುವ ಬಿಸಿ ನೀರು ರೆಡಿ ಮಾಡಿಟ್ಟಿದ್ದಳು.

    ಚಂದ್ರಿಕಾ ಮನೆಯೊಳಗೆ ಬಂದು ಕೂರುತ್ತಿದ್ದಂತೆಯೇ ರೆಹಮತ್ ಬಿಸಿ ನೀರನ್ನು ಚಂದ್ರಿಕಾ ಮೇಲೆ ಸುರಿದಿದ್ದಾಳೆ. ಇದರಿಂದಾಗಿ ಚಂದ್ರಿಕಾ ಮೈಯೆಲ್ಲಾ ಸುಟ್ಟು ಹೋಗಿತ್ತು. ಕಿರುಚಾಟ ಕೇಳಿ ಬಂದ ಕಾಲೋನಿ ನಿವಾಸಿಗಳು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಚಂದ್ರಿಕಾ ಶನಿವಾರ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಪ್ರಥಮ ಚಿಕಿತ್ಸೆ ನೀಡದೇ ಬೆಂಗ್ಳೂರು ಆಸ್ಪತ್ರೆಗೆ 2ರ ಬಾಲಕನನ್ನು ಕಳುಹಿಸಿದ್ರು ಕೋಲಾರ ವೈದ್ಯರು!

    ಪ್ರಥಮ ಚಿಕಿತ್ಸೆ ನೀಡದೇ ಬೆಂಗ್ಳೂರು ಆಸ್ಪತ್ರೆಗೆ 2ರ ಬಾಲಕನನ್ನು ಕಳುಹಿಸಿದ್ರು ಕೋಲಾರ ವೈದ್ಯರು!

    ಕೋಲಾರ: ಬಿಸಿ ನೀರು ಬಿದ್ದು 2 ವರ್ಷದ ಬಾಲಕನೊಬ್ಬ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರೋ ಘಟನೆಯೊಂದು ಕೋಲಾರದ ಕೆಜಿಎಫ್ ನಗರದ ಡಿ ಬ್ಲಾಕ್ ನಡೆದಿದೆ.

    ಪವಿತ್ರ ಎಂಬವರ 2 ವರ್ಷದ ಮಗ ವಸಂತ್ ರಾಜ್ ಬೆಳಗ್ಗೆ ಮನೆಯಲ್ಲಿ ಆಟವಾಡುವ ವೇಳೆ ಮೈ ಮೇಲೆ ಬಿಸಿ ನೀರು ಬಿದ್ದ ಪರಿಣಾಮ ಬಾಲಕನ ಅರ್ಧದಷ್ಟು ದೇಹ ಸುಟ್ಟಿದೆ.

    ಘಟನೆ ನಡೆದ ತಕ್ಷಣವೇ ಪೋಷಕರು ಬಾಲಕನನ್ನು ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದ್ರೆ ಅಲ್ಲಿ ವೈದ್ಯರು ಬಾಲಕನಿಗೆ ಪ್ರಥಮ ಚಿಕಿತ್ಸೆ ಕೂಡ ನೀಡದೆ ಬೆಂಗಳೂರಿನ ವಿಕ್ಟೋರಿಯಾಗೆ ಕಳುಹಿಸಿದ್ದಾರೆ. ಕನಿಷ್ಟ ಮಾನವೀಯತೆ ಕೂಡ ಇಲ್ಲದಂತೆ ಕೋಲಾರ ಜಿಲ್ಲಾಸ್ಪತ್ರೆ ವೈದ್ಯರು ವಿಕ್ಟೋರಿಯಾಗೆ ಕಳುಹಿಸಿಕೊಟ್ಟಿದ್ದಾರೆ.

    ಸದ್ಯ ಖಾಸಗಿ ಆಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾಗೆ ಮಗು ಹಾಗೂ ಪೋಷಕರು ತೆರಳಿದ್ದಾರೆ. ವೈದ್ಯರ ಪ್ರಥಮ ಚಿಕಿತ್ಸೆ ನೀಡದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

     

  • ಔಷಧಿ ಸೇವಿಸಲು ಬಿಸಿ ನೀರಿಗಾಗಿ 2 ಗಂಟೆ ಪರದಾಡಿದ ಮಾಜಿ ಪ್ರಧಾನಿ!

    ಔಷಧಿ ಸೇವಿಸಲು ಬಿಸಿ ನೀರಿಗಾಗಿ 2 ಗಂಟೆ ಪರದಾಡಿದ ಮಾಜಿ ಪ್ರಧಾನಿ!

    ಬೆಳಗಾವಿ: ದೇಶದ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಕುಡಿಯಲು ಒಂದು ಗ್ಲಾಸ್ ಬಿಸಿನೀರು ಸಿಗದೆ ಪರದಾಡಿದ ಘಟನೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆದಿದೆ.

    ಪಕ್ಷ ಸಂಘಟನೆಗಾಗಿ ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿರುವ ಮಾಜಿ ಪ್ರಧಾನಿ ಔಷಧಿ ತಗೆದುಕೊಳ್ಳಲು ಪ್ರವಾಸಿ ಮಂದಿರದ ಸಿಬ್ಬಂದಿಯಲ್ಲಿ ಬಿಸಿನೀರು ಕೇಳಿದರೆ ಅವರು ನೀರು ಕೊಡಲು ನಿರಾಕರಿಸಿದರು. ಸುಮಾರು 2 ಗಂಟೆಗಳ ಕಾಲ ಮಾಜಿ ಪ್ರಧಾನಿ ಬಿಸಿ ನೀರಿಗಾಗಿ ಕಾದು ಕುಳಿತಿದ್ದರು.

    ಕೊನೆಗೆ ಕಾರ್ಯಕರ್ತರೊಬ್ಬರ ಮನೆಯಿಂದ ಬಿಸಿನೀರು ತಂದು ಎಚ್ ಡಿಡಿ ಔಷಧಿ ಸೇವಿಸಿದ್ರು. ಈ ಘಟನೆಯಿಂದ ಸ್ಥಳದಲ್ಲಿದ್ದ ಎಂ ಎಲ್ ಸಿ ಶರವಣ ಗರಂ ಆಗಿ ಪ್ರವಾಸಿ ಮಂದಿರದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ಐಬಿ ಕ್ಯಾಂಟೀನ್ ಮುಚ್ಚಿ 1 ತಿಂಗಳು ಆಗಿತ್ತು. ಹೀಗಾಗಿ ನೀರಿನ ವ್ಯವಸ್ಥೆಗಾಗಿ ಮಾಜಿ ಪ್ರಧಾನಿ ಪರದಾಡುವ ಸ್ಥಿತಿ ಬಂದಿತ್ತು.

     

     

  • ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವು

    ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವು

    ಬೆಂಗಳೂರು: ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕ ಓಲ್ಡ್ ಟೌನ್‍ನಲ್ಲಿ ನಡೆದಿದೆ.

    ನಾಲ್ಕು ವರ್ಷದ ಶೇಷಾದ್ರಿ ಸಾವನ್ನಪ್ಪಿದ ಮಗು. ಮನೆಯಲ್ಲಿ ಬೆಳಗ್ಗೆ ನೀರು ಕಾಯಿಸೋದಕ್ಕೆ ತಾಯಿ ಬಕೆಟ್‍ನಲ್ಲಿ ಹೀಟರ್ ಹಾಕಿಟ್ಟಿದ್ದರು. ನೀರು ಕಾಯಿಸೋಕೆ ಇಟ್ಟು ಆಕೆ ಹೊರಗಡೆ ತೆರಳಿದ್ದ ವೇಳೆ ಆಟವಾಡುತ್ತಾ ಮಗು ಬಕೆಟ್ ಒಳಗೆ ಬಿದ್ದು ಸಾವನ್ನಪ್ಪಿದೆ.

    ಘಟನೆ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳೆದ ವಾರ ಮಂಡ್ಯದಲ್ಲಿ ಪೋಷಕರು ಅರಿವಿಲ್ಲದೆ ಅವಧಿ ಮುಗಿದ ಔಷಧಿಯನ್ನ ಮಗುವಿಗೆ ನೀಡಿದ್ದರಿಂದ ಎರಡು ವರ್ಷದ ಮಗು ಸಾವನ್ನಪ್ಪಿತ್ತು.

    ಇದನ್ನೂ ಓದಿ:ವಾಷಿಂಗ್‍ ಮಷೀನ್‍ಗೆ ಬಿದ್ದು 3 ವರ್ಷದ ಅವಳಿ ಮಕ್ಕಳ ದಾರುಣ ಸಾವು