Tag: ಬಿನ್ನಿಪೇಟೆ

  • ಜನ ಕೆಲಸಕ್ಕೆ ಮನ್ನಣೆ ನೀಡ್ತಾರೆ, ಹಣಕ್ಕಲ್ಲ: ದಿನೇಶ್ ಗುಂಡೂರಾವ್ ಗೆ ಐಶ್ವರ್ಯ ಟಾಂಗ್

    ಜನ ಕೆಲಸಕ್ಕೆ ಮನ್ನಣೆ ನೀಡ್ತಾರೆ, ಹಣಕ್ಕಲ್ಲ: ದಿನೇಶ್ ಗುಂಡೂರಾವ್ ಗೆ ಐಶ್ವರ್ಯ ಟಾಂಗ್

    ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಅವರು 1,939 ಮತಗಳ ಅಂತರದಲ್ಲಿ ಜಯಸಾಧಿಸಿದ್ದಾರೆ.

    ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ಅವರು 7,188 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಅವರು 5,243 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಬಿಜೆಪಿಯ ಚಾಮುಂಡೇಶ್ವರಿ ಅವರು 2,445 ಮತಗಳನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರ ಅಧೀನದಲ್ಲಿದ್ದ ಬಿನ್ನಿಪೇಟೆ ವಾರ್ಡ್, ಈ ಬಾರಿ ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನು ಓದಿ: ಇಂದು ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ

    ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಐಶ್ವರ್ಯ ನಾಗರಾಜ್ ಅವರು, ನಮ್ಮ ತಾಯಿ ಈ ಗೆಲುವಿನ ಮೂಲಕ ಜೀವಂತವಾಗಿದ್ದಾರೆ ಎನ್ನುತ್ತ ದಿವಂಗತ ಮಹದೇವಮ್ಮ ಅವರನ್ನು ನೆನೆದು ಭಾವುಕರಾದರು. ಈ ಗೆಲುವನ್ನು ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ. ನನ್ನ ತಂದೆ-ತಾಯಿ ಅವರ ಸೇವೆಯನ್ನು ಜನ ಗುರುತಿಸಿದ್ದಾರೆ ಎಂದು ನೆನೆಪಿಸಿಕೊಂಡರು.

    ಜನ ಕೆಲಸಕ್ಕೆ ಮನ್ನಣೆ ನೀಡುತ್ತಾರೆ, ಹಣಕ್ಕೆ ಅಲ್ಲ ಎನ್ನುವ ಸಂದೇಶವನ್ನು ಮತದಾರರು ತಿಳಿಸಿದ್ದಾರೆ. ಬಿನ್ನಿಪೇಟೆ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಇಲ್ಲದೆ ಬಿನ್ನಿಪೇಟೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಭಾವಿಸಿದ್ದರು. ಅದರೆ ಈಗ ಬಿನ್ನಿಪೇಟೆ ಅಂದ್ರೆ ಬಿಟಿಎಸ್ ನಾಗರಾಜ್ ಅಂತಾ ಜನ ಉತ್ತರಿಸಿದ್ದಾರೆ ಎಂದು ಗುಂಡೂರಾವ್ ವಿರುದ್ಧ ಐಶ್ವರ್ಯ ವಾಗ್ದಾಳಿ ನಡೆಸಿದರು.

    https://youtu.be/NjT2yLFgZZ4

  • ಇಂದು ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ

    ಇಂದು ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ

    ಬೆಂಗಳೂರು: ಇಂದು ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ. ನಗರದ ಹೋಮ್ ಸೈನ್ಸ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

    10 ಗಂಟೆ ಹೊತ್ತಿಗೆ ಕಾಂಗ್ರೆಸ್‍ನ ವಿದ್ಯಾ ಶಶಿಕುಮಾರ್, ಬಿಜೆಪಿಯ ಜಿ ಚಾಮುಂಡೇಶ್ವರಿ ಮತ್ತು ಜೆಡಿಎಸ್ ನ ಐಶ್ವರ್ಯ ಮಹದೇವಮ್ಮ ರ ಭವಿಷ್ಯ ನಿರ್ಧಾರ ಆಗಲಿದೆ. ಒಟ್ಟು 6 ಸುತ್ತು ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಒಟ್ಟು 6 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ.

    ಇದೇ ತಿಂಗಳ 18 ರಂದು ಹಿಂಸಾಚಾರದ ನಡ್ವೆ ಬಿನ್ನಿಪೇಟೆ ವಾರ್ಡ್‍ಗೆ ಚುನಾವಣೆ ನಡೆದಿತ್ತು. ಶೇಕಡಾ 43.55 ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು.

    ಗಾಂಧಿನಗರ ವಿಧಾನಸಭಾ ವ್ಯಾಪ್ತಿಯಲ್ಲಿರುವ ಈ ವಾರ್ಡ್‍ನ ಕಾರ್ಪೋರೇಟರ್ ಮಹದೇವಮ್ಮ ಹೃದಯಾಘಾತದಿಂದ ನಿಧನರಾಗಿದ್ರು. ಮಹಾದೇವಮ್ಮ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.  ವಾರ್ಡ್ ನಲ್ಲಿ ಒಟ್ಟು 34,582 ಮತದಾರರಿದ್ದು, 17,746 ಪುರುಷ ಮತ್ತು 16826 ಮಹಿಳಾ ಮತದಾರರಿದ್ದರು.

  • ಬಿನ್ನಿಪೇಟೆ ಬೈಎಲೆಕ್ಷನ್ ಪ್ರಚಾರದ ವೇಳೆ ಮಾರಾಮಾರಿ- ಕೈ ಕಾರ್ಯಕರ್ತನ ಮೇಲೆ ಜೆಡಿಎಸ್‍ನವರಿಂದ ಹಲ್ಲೆ

    ಬಿನ್ನಿಪೇಟೆ ಬೈಎಲೆಕ್ಷನ್ ಪ್ರಚಾರದ ವೇಳೆ ಮಾರಾಮಾರಿ- ಕೈ ಕಾರ್ಯಕರ್ತನ ಮೇಲೆ ಜೆಡಿಎಸ್‍ನವರಿಂದ ಹಲ್ಲೆ

    ಬೆಂಗಳೂರು: ಬಿಬಿಎಂಪಿಯ ಬಿನ್ನಿಪೇಟೆ ವಾರ್ಡ್‍ಗೆ ಉಪ ಚುನಾವಣೆ ನಡೆಯುತ್ತಿದ್ದು, 7 ಗಂಟೆಗೆ ಮತದಾನ ಆರಂಭವಾಗಿದೆ.

    ಆದ್ರೆ ಈ ಮೊದಲು ಅಂದರೆ ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಬೆಂಗಳೂರಿನ ಗಾಂಧಿನಗರ ವಿಧಾನಸಭೆ ವ್ಯಾಪ್ತಿಯ ಬಿನ್ನಿಪೇಟೆ ವಾರ್ಡ್‍ನ ಉಪಚುನಾವಣೆ ಇಂದು ನಡೆಯಲಿದ್ದು, ಕೆ.ಪಿ.ಅಗ್ರಹಾರದಲ್ಲಿ ತಡರಾತ್ರಿ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಕುಮಾರ್ ಪ್ರಚಾರ ಕಾರ್ಯದಲ್ಲಿ ತೋಡಗಿದ್ದರು. ಈ ವೇಳೆ ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್‍ಗೆ ಜೈ ಅನ್ನೋವಂತೆ ಬೆದರಿಸಿದ್ರು.

    ಸುರೇಶ್ ಇದಕ್ಕೆ ಬಗ್ಗದೇ ಇದ್ದಾಗ, ಹಣ ಹಂಚುತ್ತೀದಿಯ ಅಂತಾ ಆರೋಪಿಸಿ ಹಲ್ಲೆ ಮಾಡಿದ್ದಾರೆ ಅಂತಾ ಸುರೇಶ್ ಆರೋಪಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದು, ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಗಾಂಧಿನಗರ ವಿಧಾನಸಭಾ ವ್ಯಾಪ್ತಿಯಲ್ಲಿರುವ ಈ ವಾರ್ಡ್‍ನ ಕಾರ್ಪೋರೇಟರ್ ಮಹದೇವಮ್ಮ ಹೃದಯಾಘಾತದಿಂದ ನಿಧನರಾಗಿದ್ರು. ಮಹಾದೇವಮ್ಮ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ಒಟ್ಟು 37 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಕಾಂಗ್ರೆಸ್‍ನಿಂದ ವಿದ್ಯಾ ಶಶಿಕುಮಾರ್, ಜೆಡಿಎಸ್‍ನಿಂದ ಮಹದೇವಮ್ಮ ಪುತ್ರಿ ಐಶ್ವರ್ಯ ಹಾಗೂ ಬಿಜೆಪಿಯಿಂದ ಜಿ.ಚಾಮುಂಡೇಶ್ವರಿ ಕಣದಲ್ಲಿದ್ದಾರೆ. ವಾರ್ಡ್ ನಲ್ಲಿ ಒಟ್ಟು 34,582 ಮತದಾರರಿದ್ದು, 17,746 ಪುರುಷ ಮತ್ತು 16826 ಮಹಿಳಾ ಮತದಾರರಿದ್ದಾರೆ. ಇದೇ ತಿಂಗಳ 20 ರಂದು ಇದರ ಮತ ಎಣಿಕೆ ನಡೆಯಲಿದೆ.