Tag: ಬಿಜೆಪಿ ಮುಖಂಡ

  • ಭೀಕರ ಅಪಘಾತ – ಸ್ಥಳದಲ್ಲೇ ಕೊಡಗಿನ ಬಿಜೆಪಿ ಮುಖಂಡ ಸಾವು

    ಭೀಕರ ಅಪಘಾತ – ಸ್ಥಳದಲ್ಲೇ ಕೊಡಗಿನ ಬಿಜೆಪಿ ಮುಖಂಡ ಸಾವು

    ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೊಡಗು ಸಂಪಾಜೆಯ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಚಂದ್ರ ಕಳಗಿ(47) ಮೃತಪಟ್ಟಿದ್ದಾರೆ.

    ಮಂಗಳವಾರ ಸಂಜೆ ಓಮ್ನಿ ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಬಾಲಚಂದ್ರ ಕಳಗಿ ಸ್ಥಳದಲ್ಲೇ ಸಾವು ಸಾವನ್ನಪ್ಪಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಗೆ ಶವವನ್ನು ರವಾನೆ ಮಾಡಲಾಗಿದೆ. ಅಪಘಾತವಾದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.

    ಬಾಲಚಂದ್ರ ಅವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಆಸ್ಪತ್ರೆಗೆ ಸಂಸದ ಪ್ರತಾಪ್ ಸಿಂಹ ಮತ್ತು ವಿರಾಜಪೇಟೆ ಶಾಸಕ ಬೋಪಯ್ಯ ಅವರು ಆಗಮಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಜಿಲ್ಲೆಯಲ್ಲಿ ನಡೆಯಬೇಕಿದ್ದ ಬಿಜೆಪಿಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

  • ಸುದ್ದಿ ಕೇಳಿ ನನಗೆ ಶಾಕ್ ಆಗಿದೆ- ಬಿಜೆಪಿ ಮುಖಂಡ ಪ್ರತಿಕ್ರಿಯೆ

    ಸುದ್ದಿ ಕೇಳಿ ನನಗೆ ಶಾಕ್ ಆಗಿದೆ- ಬಿಜೆಪಿ ಮುಖಂಡ ಪ್ರತಿಕ್ರಿಯೆ

    ಬೆಂಗಳೂರು: ನಟಿ ಪೂಜಾಗಾಂಧಿ ಜೊತೆ ನಗರದ ಲಲಿತ್ ಅಶೋಕ್ ಹೋಟೆಲಿನಲ್ಲಿ 1 ವರ್ಷ ರೂಂ ಬುಕ್ ಮಾಡಿ ಹಣ ಪಾವತಿಸದೇ ಸಿಲುಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಸುದ್ದಿ ಕೇಳಿ ನನಗೆ ಶಾಕ್ ಆಗಿದೆ. ಉದ್ದೇಶಪೂರ್ವಕವಾಗಿಯೇ ನನ್ನನ್ನ ಯಾಕೆ ತಗೊಂಡ್ರು. ನನಗೆ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕವೇ ಈ ವಿಚಾರ ತಿಳಿಯಿತು. ಈ ವಿಚಾರದ ಬಗ್ಗೆ ನಾನು ಚೆಕ್ ಮಾಡುತ್ತೇನೆ ಅಂದ್ರು.

    ಅಲ್ಲದೆ 23 ಲಕ್ಷ ರೂ ಕಟ್ಟುವಷ್ಟು ನಾನು ದೊಡ್ಡವನಲ್ಲ. ಅದು ಯಾರದ್ದೋ, ಏನೋ, ಎಂತದ್ದೋ.. ಆದ್ರೆ ನನ್ನ ಯಾಕೆ ತಗ್ಲಾಕ್ಕುತ್ತಾರೆ ಎಂದು ಗೊತ್ತಿಲ್ಲ. ಯಾವ ಉದ್ದೇಶ ಹಾಗೂ ನನ್ನ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ಮಾಡಲಾಗುತ್ತಿದೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ರು. ಇದನ್ನೂ ಓದಿ: ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

    ನಾನು ಹೋಟೆಲ್ ಗೆ ಹೋಗಿಯೇ ಇಲ್ಲ. ಬೇಕಾದ್ರೆ ನೀವೇ ಪರಿಶೀಲನೆ ಮಾಡಿಕೊಳ್ಳಿ. ನಿಮಗೆ ಬೇಕಾದ್ದನ್ನು ನೀವೇ ವೆರಿಫೈ ಮಾಡಿಕೊಳ್ಳಿ. ನಾನು ಎಲ್ಲಿಯೂ ಹೋಗಿಲ್ಲ. ನನಗೆ ನನ್ನದೇ ಆದ ಆಫೀಸ್, ಮನೆ ಇದೆ. ಒಳ್ಳೆಯ ಸಂಸಾರ ಇದೆ. ಹೀಗಾಗಿ ಮನೆ, ಆಫೀಸ್ ಬಿಟ್ಟರೆ ನಾನು ಎಲ್ಲಿಗೂ ಹೋಗಲ್ಲ ಅಂದ್ರು.

    ಏನಿದು ಪ್ರಕರಣ..?
    ನಟಿ ಪೂಜಾಗಾಂಧಿ ಅವರು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆ ನಗರದ ಲಲಿತ್ ಅಶೋಕ್ ಹೋಟೆಲಿನಲ್ಲಿ 1 ವರ್ಷ ಹೋಟೆಲ್ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷದ ಹೊಟೇಲ್ ಬಿಲ್ ಒಟ್ಟು 26 ಲಕ್ಷ ಆಗಿತ್ತು. ಇದರಲ್ಲಿ 22 ಲಕ್ಷ ರೂಪಾಯಿ ಪಾವತಿಸಿ 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಬೆಂಗಳೂರಿನ ಹೈ ಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಒಂದು ವರ್ಷ ರೂಂ ಬುಕ್ ಮಾಡಿ ಜೊತೆಗಿದ್ದೆವು ಅನ್ನೋದಕ್ಕೆ ನಿಮ್ಮಲ್ಲಿ ಸಾಕ್ಷಿ ಇದ್ಯಾ: ಪೂಜಾ ಗಾಂಧಿ

    ದೂರು ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ ಎಂಬುದಾಗಿ ತಿಳಿದುಬಂದಿತ್ತು.

  • ತಲ್ವಾರ್​ನಿಂದ ಕೇಕ್ ಕತ್ತರಿಸಿದ ಬಿಜೆಪಿ ಮುಖಂಡ ಅರೆಸ್ಟ್

    ತಲ್ವಾರ್​ನಿಂದ ಕೇಕ್ ಕತ್ತರಿಸಿದ ಬಿಜೆಪಿ ಮುಖಂಡ ಅರೆಸ್ಟ್

    ಬೆಳಗಾವಿ: ತಲ್ವಾರ್​ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದಕ್ಕೆ ಬೆಳಗಾವಿಯ ಬಿಜೆಪಿ ಮುಖಂಡ ನಿಖಿಲ್ ಮುರ್ಕುಟೆಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

    ನಿಖಿಲ್ ಮುರ್ಕುಟೆ ಬೆಳಗಾವಿ ಮಹಾನಗರ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷನಾಗಿದ್ದಾನೆ. ಫೆ.1 ರಂದು ಬೆಳಗಾವಿಯ ಗಾಂಧಿನಗರದಲ್ಲಿ ಬರ್ತ್ ಡೇ ಪಾರ್ಟಿ ನಡೆದಿತ್ತು. ನಿಖಿಲ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಆಗಮಿಸಿದ್ದರು.

    ಬೆಳಗಾವಿ ಮಾಳಮಾರುತಿ ಪೊಲೀಸರು ತಡರಾತ್ರಿ ಕಾರ್ಯಚರಣೆ ನಡೆಸಿ ನಿಖಿಲ್ ಮುರ್ಕುಟೆನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

    ಹುಬ್ಬಳ್ಳಿ, ವಿಜಯಪುರ ನಂತರ ಬೆಳಗಾವಿಯಲ್ಲೂ ಈ ಪ್ರಕರಣ ಮುಂದುವರಿದಿದೆ. ಇಲ್ಲಿಯವರೆಗೂ ಪುಡಿ ರೌಡಿಗಳು ತಲ್ವಾರ್ ನಿಂದ ಕೇಕ್ ಕಟ್ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ಪಕ್ಷದ ಮುಖಂಡ ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫಿಲಂ ನೋಡಿ ಬಿಜೆಪಿ ಮುಖಂಡನಿಂದ ಅನೈತಿಕ ಸಂಬಂಧ ಹೊಂದಿದ್ದ ಯುವತಿಯ ಕೊಲೆ

    ಫಿಲಂ ನೋಡಿ ಬಿಜೆಪಿ ಮುಖಂಡನಿಂದ ಅನೈತಿಕ ಸಂಬಂಧ ಹೊಂದಿದ್ದ ಯುವತಿಯ ಕೊಲೆ

    – ಮೊದ್ಲು ನಾಯಿ ಸುಟ್ಟು ನಂತ್ರ ಯುವತಿಯನ್ನ ಸುಟ್ರು

    ಭೋಪಾಲ್: ಬಾಲಿವುಡ್ ‘ದೃಶ್ಯಂ’ ಸಿನಿಮಾ ನೋಡಿ ಯುವತಿಯನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎರಡು ವರ್ಷದ ಬಳಿಕ ಬಿಜೆಪಿ ಮುಖಂಡ ಮತ್ತು ಆತನ ಮೂವರು ಮಕ್ಕಳು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಗಂಗಾ ಪ್ರದೇಶದ ನಿವಾಸಿ ಟ್ವಿಂಕಲ್ ಡಾಗ್ರೆ (22) ಕೊಲೆಯಾದ ಯುವತಿ. ಬಿಜೆಪಿ ನಾಯಕ ಜಗದೀಶ್ ಕರೋಟಿಯಾ ಅಲಿಯಾಸ್ ಕಲ್ಲು ಪಹ್ಲ್ವಾನ್ (65), ಅವನ ಮಕ್ಕಳಾದ ಅಜಯ್ (36), ವಿಜಯ್ (38), ವಿನಯ್ (31) ಮತ್ತು ಅವರ ಸಹಾಯಕ ನೀಲಷ್ ಕಶ್ಯಪ್ (28) ಅವರನ್ನು ಬಂಧಿಸಲಾಗಿದೆ ಎಂದು ಇಂದೋರ್ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ (ಡಿಐಜಿ) ಹರಿನಾರಾಚಂಚಿ ಮಿಶ್ರಾ ತಿಳಿಸಿದ್ದಾರೆ.

    ಮೃತ ಡಾಗ್ರೆ ಬಿಜೆಪಿ ಮುಖಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆಕೆ ಆತನ ಜೊತೆಗೆ ಇರಲು ಇಷ್ಟಪಟ್ಟಿದ್ದಳು. ಆದರೆ ಇದರಿಂದ ತಮ್ಮ ಕುಟುಂಬಕ್ಕೆ ತೊಂದರೆಯಾಗುತ್ತದೆ ಎಂದು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದರಂತೆಯೇ ಕರೋಟಿಯಾ ಮತ್ತು ಆತನ ಮಕ್ಕಳು ಟ್ವಿಂಕಲ್ ಡಾಗ್ರೆಯನ್ನು 2016 ಅಕ್ಟೋಬರ್ 16ರಂದು ಕೊಲೆ ಮಾಡಿ, ನಂತರ ಆಕೆಯ ದೇಹವನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ ನೋಡಿ ಪ್ಲ್ಯಾನ್
    ಕೊಲೆಗೆ ಪ್ಲ್ಯಾನ್ ಮಾಡುವ ಮೊದಲೇ ಆರೋಪಿಗಳು ‘ದೃಶ್ಯಂ’ ಸಿನಿಮಾವನ್ನು ನೋಡಿದ್ದಾರೆ. ಈ ಸಿನಿಮಾದಲ್ಲಿ ಆಕಸ್ಮಿಕವಾಗಿ ಕೊಲೆ ನಡೆಯುತ್ತದೆ. ಆದರೆ ನಟ ತನ್ನ ಕುಟುಂಬದೊಂದಿಗೆ ಸೇರಿ, ಪೊಲೀಸರಿಗೆ ಪ್ರಕರಣದ ತನಿಖೆಯ ಹಾದಿಯನ್ನು ತಪ್ಪಿಸುವುದು ಹೇಗೆ ಎಂಬುದು ಸಿನಿಮಾದ ಸಾರಾಂಶವಾಗಿದೆ. ಅದೇ ರೀತಿ ಇವರು ಕೂಡ ಮೃತ ದೇಹವನ್ನು ಸುಡುವ ಮೊದಲು ಅದೇ ಜಾಗದಲ್ಲಿ ನಾಯಿಯನ್ನು ಸುಟ್ಟಿದ್ದಾರೆ. ಬಳಿಕ ಇಲ್ಲಿ ಮನುಷ್ಯರ ಮೃತದೇಹ ಸುಡಲಾಗಿದೆ ಎಂದು ಹೇಳಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ತನಿಖೆ
    ಪೊಲೀಸ್ ತನಿಖೆಯ ವೇಳೆ ಮೃತದೇಹ ಸುಟ್ಟಿದ್ದ ಜಾಗದಲ್ಲಿ ಟ್ವಿಂಕಲ್ ಗೆ ಸೇರಿದ್ದ ಬ್ರೇಸ್‍ಲೈಟ್ ಮತ್ತು ಇತರ ಆಭರಣಗಳು ಸಿಕ್ಕಿದೆ. ಇದರ ಆಧಾರದ ಮೇಲೆ ತನಿಖೆ ಕೈಗೊಂಡಾಗ, ಮೊದಲು ನಾಯಿಯ ಮೃತದೇಹ ಸುಡಲಾಗಿದೆ ಎಂಬುದು ಗೊತ್ತಾಗಿದೆ. ಬಳಿಕ ನಾಯಿ ಸುಟ್ಟಿದ ಜಾಗದಲ್ಲಿಯೇ ಟ್ವಿಂಕಲ್ ಮೃತದೇಹ ಸುಟ್ಟು ಹಾಕಿದ್ದಾರೆ. ಇದೆಲ್ಲವನ್ನು ಆರೋಪಿ ಕರೋಟಿಯಾ ಪೊಲೀಸರ ಹಾದಿ ತಪ್ಪಿಸಲು ಮಾಡಿರುವ ಪ್ಲ್ಯಾನ್ ಎಂದು ತಿಳಿದಿದೆ.

    ಸದ್ಯಕ್ಕೆ ಐವರನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಬಿಇಒಎಸ್ ಪರೀಕ್ಷೆ?
    ಗುಜರಾತ್ ಪ್ರಯೋಗಾಲಯದಲ್ಲಿ ಕರೋಟಿಯಾ ಮತ್ತು ಆತನ ಇಬ್ಬರು ಪುತ್ರರ ಮೇಲೆ ಬ್ರೇನ್ ಎಲೆಕ್ಟ್ರಿಕಲ್ ಆಸಿಲೇಶನ್ ಸಿಗ್ನೇಚರ್ ಪ್ರೊಫೈಲಿಂಗ್ (ಬಿಇಒಎಸ್) ಪರೀಕ್ಷೆಯನ್ನು ಮಾಡಲಾಗಿದೆ. ಎಲೆಕ್ಟ್ರೋಸೈಕಾಲಿಜಿಕಲ್ ಪರೀಕ್ಷೆಯ ಮೂಲಕ ಆತನನ್ನು ವಿಚಾರಣೆ ನಡೆಸಿದ ವೇಳೆ ಸತ್ಯ ಪ್ರಕಟವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾಣಿಕೆ ನೀಡಿದ್ದ ಇಟ್ಟಿಗೆ ವಾಪಸ್ ಪಡೆದ ಬಿಜೆಪಿ ಮುಖಂಡ

    ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾಣಿಕೆ ನೀಡಿದ್ದ ಇಟ್ಟಿಗೆ ವಾಪಸ್ ಪಡೆದ ಬಿಜೆಪಿ ಮುಖಂಡ

    ಚಿಕ್ಕಬಳ್ಳಾಪುರ: ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾಣಿಕೆಯಾಗಿ ಕೊಟ್ಟಿದ್ದ ಇಟ್ಟಿಗೆಗಳನ್ನ ಬಿಜೆಪಿ ಮುಖಂಡನೊಬ್ಬ ವಾಪಸ್ ತೆಗೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ಅರಿಕೆರೆ ಕೃಷ್ಣಾರೆಡ್ಡಿ ಇಟ್ಟಿಗೆಗಳನ್ನು ವಾಪಸ್ ತೆಗೆದುಕೊಂಡು ಹೋಗಿರುವ ಬಿಜೆಪಿ ಮುಖಂಡ. ಕೃಷ್ಣಾರೆಡ್ಡಿ ಎಂಬವರು ಸಮಾಜಸೇವೆ ಹೆಸರಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಕೊಡುಗೆ-ಕಾಣಿಕೆಗಳನ್ನ ನೀಡಿದ್ದರು. ಅಂತೆಯೇ ಪರಗೋಡು ಗ್ರಾಮದ ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಅಂತ 10,000 ಮಣ್ಣಿನ ಇಟ್ಟಿಗೆಯನ್ನ ಕಾಣಿಕೆ ನೀಡಿದ್ದರು.

    ಇವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಅರಿಕರೆ ಕೃಷ್ಣಾರೆಡ್ಡಿಗೆ ಬಿಜೆಪಿ ಪಕ್ಷ ಮಣೆ ಹಾಕದೆ ಕೊನೆ ಕ್ಷಣದಲ್ಲಿ ನಟ ಸಾಯಿಕುಮಾರ್ ಗೆ ಟಕೆಟ್ ಘೋಷಣೆ ಮಾಡಿತ್ತು. ಹೀಗಾಗಿ ಅಂದು ಶ್ರೀರಾಮ ದೇವಾಲಯದ ನಿರ್ಮಾಣಕ್ಕೆ ಅಂತ ಕೊಟ್ಟಿದ್ದ ಇಟ್ಟಿಗೆಯನ್ನ ವಾಪಸ್ ತೆಗೆದುಕೊಂಡು ಹೋಗಲು ಅರಿಕೆರೆ ಕೃಷ್ಣಾರೆಡ್ಡಿ ಮುಂದಾಗಿದ್ದಾರೆ.

    ಗ್ರಾಮಕ್ಕೆ ಟ್ರ್ಯಾಕ್ಟರ್ ಸಮೇತ ಬಂದು 5,000 ದಷ್ಟು ಇಟ್ಟಿಗೆ ಸಹ ತೆಗೆದುಕೊಂಡು ಹೋಗಿದ್ದಾರೆ. ನನಗೆ ಇಟ್ಟಿಗೆ ಅವಶ್ಯಕತೆಯಿದ್ದು, ಎಲ್ಲೂ ಇಟ್ಟಿಗೆ ಸಿಗದ ಕಾರಣ ಈ ಇಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಪುನಃ ಕೊಡಿಸುತ್ತೀನಿ ಅಂತ ಗ್ರಾಮಸ್ಥರ ಬಳಿ ಸಮಜಾಯಿಷಿ ನೀಡಿದ್ದಾರೆ.

    ಅರಿಕೆರೆ ಕೃಷ್ಣಾರೆಡ್ಡಿಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಅವರ ವಿರುದ್ಧ ಹರಿಹಾಯ್ದಿದ್ದಾರೆ. ಅರಿಕೆರೆ ಕೃಷ್ಣಾರೆಡ್ಡಿಗೆ ಮನಸ್ಸೋ ಇಚ್ಛೆ ಬೈದು ಗ್ರಾಮದಿಂದ ಹೊರಕಳುಹಿಸಿದ್ದಾರೆ. ಜೊತೆಗೆ ಇನ್ನೂ ಅಳಿದುಳಿದ ಇಟ್ಟಿಗೆಗಳನ್ನ ಒಡೆದು ಹಾಕಿ ತಮ್ಮ ಆಕ್ರೋಶವನ್ನ ಗ್ರಾಮಸ್ಥರು ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಮ್ಮನ್ನು ಎಂಪಿ ಮಾಡಿದ್ದು ನಮ್ಮ ದುರಂತ: ಪ್ರತಾಪ್ ಸಿಂಹಗೆ ಫುಲ್ ಕ್ಲಾಸ್

    ನಿಮ್ಮನ್ನು ಎಂಪಿ ಮಾಡಿದ್ದು ನಮ್ಮ ದುರಂತ: ಪ್ರತಾಪ್ ಸಿಂಹಗೆ ಫುಲ್ ಕ್ಲಾಸ್

    ಮಡಿಕೇರಿ: ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಕೇಂದ್ರದಿಂದ ಬಂದಿದ್ದ ತಂಡಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಗುರುವಾರ ಕೇಂದ್ರದ ಪರಿಶೀಲನೆ ತಂಡದೊಂದಿಗೆ ಸಂಸದ ಪ್ರತಾಪ್ ಸಿಂಹರವರು ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಕೇಂದ್ರ ತಂಡಕ್ಕೆ ಭೂ ಪರಿವರ್ತನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಸದರ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. `ನೀವು ಕೇಂದ್ರದ ಪರಿಶೀಲನೆ ತಂಡಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಿ. ಬೆಂದ ಗಾಯಕ್ಕೆ ಉಪ್ಪು ನೀರು ಸುರಿಯುತ್ತಿದ್ದೀರಾ ಎಂದು ತೀವ್ರವಾಗಿ ಹರಿಹಾಯ್ದರು.

    ನಿಮ್ಮಂಥವರಿಂದ ಪಕ್ಷ ಉದ್ಧಾರ ಆಗಲ್ಲ. ನೀವು ಮೊದಲು ನಮ್ಮ ಪಕ್ಷದ ಸಂಸದ ಎಂಬುದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷದಲ್ಲಿ ನನ್ನ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರೋ ತೆಗೆದುಕೊಳ್ಳಿ ಎಂದು ಖಾರವಾಗಿ ನುಡಿದ್ರು. ಈ ವೇಳೆ ಸ್ಥಳೀಯ ಬಿಜೆಪಿ ಶಾಸಕ ಸಹ ಉಪಸ್ಥಿತರಿದ್ದರು. ಬಿಜೆಪಿಯ ಹಿರಿಯ ಮುಖಂಡರ ಹೇಳಿಕೆಯಿಂದ ಸಂಸದ ಪ್ರತಾಪ್ ಸಿಂಹ ತೀವ್ರ ಮುಜುಗರಕ್ಕೊಳಗಾಗಿ ಸ್ಥಳದಿಂದ ತೆರಳಿದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಮೀನಿನ ವಿಚಾರಕ್ಕಾಗಿ ಬಿಜೆಪಿ ಮುಖಂಡನಿಂದ ಮಾರಣಾಂತಿಕ ಹಲ್ಲೆ

    ಜಮೀನಿನ ವಿಚಾರಕ್ಕಾಗಿ ಬಿಜೆಪಿ ಮುಖಂಡನಿಂದ ಮಾರಣಾಂತಿಕ ಹಲ್ಲೆ

    ಧಾರವಾಡ: ಜಮೀನು ವಿಚಾರದಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ರೌಡಿ ಶಿಟರ್ ಆಗಿರುವ ಬಿಜೆಪಿ ಮುಖಂಡನೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಗುರುನಾಥಗೌಡ ಹಲ್ಲೆ ನಡೆಸಿದ ರೌಡಿ ಶಿಟರ್ ಆಗಿರುವ ಬಿಜೆಪಿ ಮುಖಂಡ. ಗುರುನಾಥಗೌಡ ಹೆಬ್ಬಳ್ಳಿ ಗ್ರಾಮದ ವಿಠ್ಠಲ್ ಭೀಮಕ್ಕನವರ ಹಾಗೂ ಆತನ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

    ಕಳೆದ ಕೆಲವು ವರ್ಷಗಳಿಂದ ಗುರುನಾಥಗೌಡ ಹಾಗೂ ಭೀಮಕ್ಕನವರ ಕುಟುಂಬದ ಮಧ್ಯೆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆದಿತ್ತು. ಅಲ್ಲದೇ ನ್ಯಾಯಾಲಯವು ಭೀಮಕ್ಕನವರ ಪರ ತೀರ್ಪು ನೀಡಿದ್ದು, ಜಮೀನು ಭೀಮಕ್ಕನವರ ಕುಟುಂಬದ ಕೈ ಸೇರಿತು. ಆದರೆ ಬುಧವಾರ ಜಮೀನಿನಲ್ಲಿ ಬಿತ್ತನೆ ಮಾಡಲು ಮುಂದಾದ ವಿಠ್ಠಲ್ ಭೀಮಕ್ಕನವರ ಹಾಗೂ ಅವರ ಸಹೋದರ ಮೇಲೆ ಗುರುನಾಥಗೌಡ ಹಾಗೂ ಆತನ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ತಮ್ಮ ಮೇಲೆ ಹಲ್ಲೆ ಮಾಡಲು ಗುರುನಾಥಗೌಡ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತಂದಿದ್ದ ಎಂದು ಹಲ್ಲೆಗೊಳಗಾದ ವಿಠ್ಠಲ್ ಹಾಗೂ ಆತನ ಸಹೋದರ ತಿಳಿಸಿದ್ದಾರೆ. ಈ ಕುರಿತು ಗುರುನಾಥಗೌಡನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ- ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ ಅರೆಸ್ಟ್

    ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ- ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ ಅರೆಸ್ಟ್

    ರಾಯಚೂರು: ಜಿಲ್ಲೆಯ ಸಿಂಧನೂರು ನಗರ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನೋರ್ವರನ್ನು ಬಂಧಿಸಿದ್ದಾರೆ.

    ಸಿಂಧನೂರು ತಾಲೂಕು ಬಿಜೆಪಿ ಎಸ್‍ಸಿ ಘಟಕದ ಅಧ್ಯಕ್ಷ ಹುಸೇನಪ್ಪ ಶ್ರೀಪುರಂ ಬಂಧಿತ ಮುಖಂಡ. ನಗರದ ಆದರ್ಶ ಕಾಲೋನಿಯಲ್ಲಿ ಅಕ್ರಮ ದಂಧೆ ನಡೆಸಲಾಗ್ತಿದೆ ಅಂತ ಸಾರ್ವಜನಿಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

    ಹೀಗಾಗಿ ಖಚಿತ ಮಾಹಿತಿ ಮತ್ತು ದೂರಿನ ಅನ್ವಯ ಪೊಲೀಸರು ಅಡ್ಡೆಯ ಮೇಲೆ ರಾತ್ರಿ 8 ಗಂಟೆಯ ಸುಮಾರಿಗೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ ಹುಸೇನಪ್ಪನನ್ನು ಸಿಂಧನೂರು ಪೊಲೀಸರು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಹುಸೇನಪ್ಪ ಈ ವೇಶ್ಯಾವಾಟಿಕೆಯನ್ನ ನಡೆಸುತ್ತಿದ್ದ ಅಂತ ಹೇಳಲಾಗುತ್ತಿದ್ದು, ಪೊಲೀಸರು ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

  • ರೌಡಿಶೀಟರ್, ಬಿಜೆಪಿ ಮುಖಂಡ ಬಂಡಿ ರಮೇಶ ಕೊಲೆ ಪ್ರಕರಣ: ಮೂವರು ಮಹಿಳೆಯ ಬಂಧನ

    ರೌಡಿಶೀಟರ್, ಬಿಜೆಪಿ ಮುಖಂಡ ಬಂಡಿ ರಮೇಶ ಕೊಲೆ ಪ್ರಕರಣ: ಮೂವರು ಮಹಿಳೆಯ ಬಂಧನ

    ಬಳ್ಳಾರಿ: ಜಿಲ್ಲೆಯ ರೌಡಿಶೀಟರ್, ಬಿಜೆಪಿ ಮುಖಂಡ ಬಂಡಿ ರಮೇಶನನ್ನು ಭೀಕರವಾಗಿ ಕೊಲೆ ಮಾಡಿದ ಮೂವರು ಮಹಿಳೆಯರನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

    ಕೊಲೆ ಪ್ರಕರಣ ಪ್ರಮುಖ ಆರೋಪಿಯಾದ ಜಗ್ಗ ಅಲಿಯಾಸ ಜಗದೀಶನ ಸಂಬಂಧಿಕರಾದ ನೀಲಮ್ಮ, ಮಂಗಮ್ಮ, ಲಕ್ಷಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಡಿ ರಮೇಶನ ಕೊಲೆ ನಂತರ ಪರಾರಿಯಾಗಿದ್ದ ಮೂವರು ಮಹಿಳೆಯರನ್ನು ಇಂದು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಬಂಧಿತ ಮೂವರು ಮಹಿಳೆಯರಿಗೆ ನ್ಯಾಯಾಂಗ ಬಂಧನ ವಿಧಿಸಿಲಾಗಿದೆ. ಬಂಡಿ ರಮೇಶ ಕೊಲೆ ಪ್ರಕರಣದಲ್ಲಿ ಇನ್ನೂ 8 ಜನ ಪ್ರಮುಖ ಆರೋಪಿಗಳು ಸೇರಿದಂತೆ ಮತ್ತಿತರೂ ಪರಾರಿಯಾಗಿದ್ದಾರೆ.

    ಏನಿದು ಪ್ರಕರಣ?: ಬಳ್ಳಾರಿಯ ರೌಡಿ ಶೀಟರ್ ಬಂಡಿ ರಮೇಶನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದ ಸಾಯಿ ಪವನ್ ದಾಬಾದಲ್ಲಿ ಗುರುವಾರ ಮಧ್ಯಾಹ್ನ ಮದ್ಯ ಸೇವನೆ ಮಾಡುತ್ತಿದ್ದ ಬಂಡಿ ರಮೇಶ ಹಾಗೂ ಆತನ ಸಹಚರರ ಮೇಲೆ ಖಾರದಪುಡಿ ಎರಚಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.

    ಬಂಡಿ ರಮೇಶ ಈ ಹಿಂದೆ 2 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹಲವಾರು ಅಪರಾಧ ಪ್ರಕರಣಗಳಲ್ಲೂ ಸಹ ಇತನ ಹೆಸರು ಕೇಳಿಬಂದಿತ್ತು. ಅಲ್ಲದೇ ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರಮೇಶನ ಕಳೆದ ವರ್ಷ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಬಳ್ಳಾರಿ ನಗರ ಎಸ್‍ಟಿ ಮೋರ್ಚಾ ಘಟಕದ ಅಧ್ಯಕ್ಷನಾಗಿದ್ದನು. ಆದ್ರೆ ಇತ್ತೀಚಿಗಿನ ಕೆಲ ಘಟನೆಗಳ ನಂತರ ರಮೇಶ ಬಜೆಪಿ ಪಕ್ಷದಿಂದ ದೂರ ಉಳಿದಿದ್ದನು. ರಮೇಶನ ಹತ್ಯೆಯ ವೇಳೆ ಕೆಲ ಮಹಿಳೆಯರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿತ್ತು. ಹೀಗಾಗಿ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಳ್ಳಾರಿ ವಲಯ ಐಜಿಪಿ ಮುರಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

     

  • ಬಿಜೆಪಿ ಮುಖಂಡನ ಹತ್ಯೆ- ಶರಣಾಗದ ಆರೋಪಿ ಕಾಲಿಗೆ ಗುಂಡಿಟ್ಟು ಬಂಧನ, ಆಸ್ಪತ್ರೆಗೆ ದಾಖಲು

    ಬಿಜೆಪಿ ಮುಖಂಡನ ಹತ್ಯೆ- ಶರಣಾಗದ ಆರೋಪಿ ಕಾಲಿಗೆ ಗುಂಡಿಟ್ಟು ಬಂಧನ, ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಗರದ ಆನೇಕಲ್ ಬಿಜೆಪಿ ಮುಖಂಡ ಹರೀಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜು ಅಲಿಯಾಸ್ ರಾಜೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಆನೇಕಲ್ ತಾಲೂಕು ಬಿಜೆಪಿಯ ಎಸ್‍ಸಿ-ಎಸ್‍ಟಿ ಘಟಕದ ಉಪಾಧ್ಯಕ್ಷ ಹರೀಶ್‍ರನ್ನು ಗುರುವಾರ ತಡರಾತ್ರಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ 9.15ರ ಸುಮಾರಿನಲ್ಲಿ ರಾಜೇಶ್ ನನ್ನು ಪೊಲೀಸರು ಮುತ್ಯಾಲಮಡುವಿನ ಚೆಕ್ ಪೋಸ್ಟ್ ಬಳಿ ಸುತ್ತುವರಿದು ಶರಣಾಗತಿಯಾಗುವಂತೆ ಡಿವೈಎಸ್‍ಪಿ ಎಸ್‍ಕೆ ಉಮೇಶ್ ತಂಡ ಸೂಚಿಸಿತು. ಆದರೆ ರಾಜೇಶ್ ಶರಣಾಗತಿಗೆ ನಿರಾಕರಿಸಿ ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದ.

    ಪಿಎಸ್‍ಐ ಹೇಮಂತ್ ಕುತ್ತಿಗೆಗೆ ಚೈನ್ ಹಾಕಿ ಬಿಗಿಯತೊಡಗಿದ. ಇದರಿಂದ ಒಂದು ಕ್ಷಣ ಗಾಬರಿಯಾದ ಪೊಲೀಸರು ಮತ್ತೊಮ್ಮೆ ಶರಣಾಗುವಂತೆ ಎಚ್ಚರಿಸಿದ್ರು. ಯಾವುದಕ್ಕೂ ಬಗ್ಗದಿದ್ದಾಗ ಡಿವೈಎಸ್‍ಪಿ ಉಮೇಶ್ ಗಾಳಿಯಲ್ಲಿ ಗುಂಡು ಹಾರಿಸಿದರು. ಆಗಲೂ ಬಗ್ಗದಿದ್ದಾಗ ರಾಜೇಶ್ ನ ಬಲಗಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ.