Tag: ಬಿಗ್ ಬಾಸ್ ಕನ್ನಡ 8

  • ಬಿಗ್‍ಬಾಸ್ ಮನೆಯಿಂದ ಪ್ರಿಯಾಂಕಾ ಔಟ್

    ಬಿಗ್‍ಬಾಸ್ ಮನೆಯಿಂದ ಪ್ರಿಯಾಂಕಾ ಔಟ್

    ಬಿಗ್‍ಬಾಸ್ ಮನೆಯಿಂದ ಈ ವಾರ ಪ್ರಿಯಾಂಕಾ ತಿಮ್ಮೇಶ್ ಅವರು ಹೊರ ನಡೆಯಲಿದ್ದಾರೆ.

    ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಮನೆಯಲ್ಲಿ ಎಲ್ಲರೊಂದಿಗೂ ಬೆರೆತು, ತುಂಬಾ ಸೈಲೆಂಟಾಗಿದ್ದ ಪ್ರಿಯಾಂಕಾ, ಯಾರು ಏನೇ ಹೇಳಿದರೂ ತಾಳ್ಮೆ ಕಳೆದುಕೊಳ್ಳದೆ, ಎಲ್ಲವನ್ನೂ ನಿಭಾಯಿಸುತ್ತಿದ್ದರು. ಟಾಸ್ಕ್ ವೇಳೆ ಸಹ ತಮ್ಮದೇ ಛಾಪು ಮೂಡಿಸಿದ್ದರು.

    ತುಂಬಾ ಸೈಲೆಂಟ್ ಆಗಿದ್ದ ಪ್ರಿಯಾಂಕಾ, ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ಆಗಾಗ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಕೆಲವು ಬಾರಿ ಚಕ್ರವರ್ತಿ ಅವರ ಜೊತೆ ಏರು ಧ್ವನಿಯಲ್ಲಿ ಜಗಳವನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಕ್ರವರ್ತಿ ಅವರ ಜೊತೆ ನಡೆದ ಜಗಳದಲ್ಲಿ ತಮ್ಮ ಉಗ್ರಾವತಾರವನ್ನು ತೋರಿಸಿದ್ದರು. ಸಿಟ್ಟಿನಿಂದ ಇಡೀ ಮನೆಯನ್ನೇ ಬೆಚ್ಚಿಬೀಳಿಸಿದ್ದರು.

    ಟಾಸ್ಕ್ ವಿಚಾರವಾಗಿ ಅನ್ಯಾಯ ನಡೆದಾಗಲೆಲ್ಲ ಪ್ರಿಯಾಂಕಾ ಅವರು ಧ್ವನಿ ಎತ್ತಿದ್ದಾರೆ. ಕ್ಯಾಪ್ಟನ್ ಕಂಟೆಸ್ಟೆಂಟ್ ಟಾಸ್ಕ್ ವೇಳೆ ಅರವಿಂದ್ ವಿರುದ್ಧ ಕಿಡಿಕಾರಿದ್ದರು. ಹೀಗೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ತುಂಬಾ ಆ್ಯಕ್ಟಿವ್ ಆಗಿ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿದ್ದ ಪ್ರಿಯಾಂಕಾ ಇದೀಗ ಎಲಿಮಿನೇಟ್ ಆಗುತ್ತಿದ್ದಾರೆ.

    ಈ ಹಿಂದೆಯೇ ಪ್ರಿಯಾಂಕಾ ಅವರು ಮನೆಯಿಂದ ಹೊರನಡೆಯುವ ಸಂಭವವಿತ್ತು. ಆದರೆ ನಿಧಿ ಸಿಬ್ಬಯ್ಯ ಅವರು ಪ್ರಿಯಾಂಕಾ ಅವರನ್ನು ಸೇವ್ ಮಾಡಿದ್ದರು. ಹೀಗಾಗಿ ಮತ್ತುಷ್ಟು ದಿನಗಳ ಕಾಲ ಬಿಗ್‍ಬಾಸ್ ಮನೆಯಲ್ಲಿ ಮುಂದುವರಿದಿದ್ದರು. ಆದರೆ ಈ ವಾರ ಅವರು ಮನೆಯಿಂದ ಹೊರ ನಡೆಯುತ್ತಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಮೊದಲ ಸಂಪಾದನೆ ಎಷ್ಟು ಗೊತ್ತಾ?

    ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಮೊದಲ ಸಂಪಾದನೆ ಎಷ್ಟು ಗೊತ್ತಾ?

    ಣ ಗಳಿಸುವ ಟಾಸ್ಕ್‍ನ್ನು ಬಿಗ್ ಬಾಸ್ ಸ್ಪರ್ಧಿಗಳು ಆಡಿದ್ದಾರೆ. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಸ್ಪರ್ಧಿಗಳ ಬಳಿ ಪ್ರಶ್ನೆ ಕೇಳಿದ್ದು, ಈ ವೇಳೆ ಸ್ಪರ್ಧಿಗಳ ಮೊದಲ ಸಂಪಾದನೆ ಕುರಿತ ಸೀಕ್ರೇಟ್ ಹೊರ ಬಿದ್ದಿದೆ.

    ಹೌದು ಬಿಗ್ ಬಾಸ್ ಸ್ಪರ್ಧಿಗಳು ತಾವು ಗಳಿಸಿದ ಮೊದಲ ಸಂಪಾದನೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳನ್ನು ಈ ಕುರಿತು ಸ್ಪರ್ಧಿಗಳನ್ನು ಪ್ರಶ್ನಿಸಿದ್ದು, ಲೈಫಲ್ಲಿ ನೀವು ಮಾಡಿದ ಹಣದ ಟಾಸ್ಕ್ ಬಗ್ಗೆ ಹೇಳಿ. ಜೀವನದಲ್ಲಿ ಹಣ ಗಳಿಸುವುದು ಒಂದುಕಡೆಯಾದರೆ, ಇದ್ದ ಹಣವನ್ನು ಉಳಿಸುವುದು ಇನ್ನೊಂದು ಟ್ಯಾಲೆಂಟ್, ಎರಡೂ ಕಷ್ಟದ ಕೆಲಸವೇ ಎಂದು ಹೇಳಿದ್ದಾರೆ. ಬಳಿಕ ವೈಷ್ಣವಿ ತಮ್ಮ ಜೀವನದ ಮೊದಲ ಸಂಪಾದನೆ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

    ನೀವು ಮೊದಲ ದುಡಿದ ಸಂಬಳ ಎಷ್ಟು, ಅದನ್ನು ಸಂಪಾದಿಸಲು ಎಷ್ಟು ಸಮಯ ಆಯ್ತು, ಅದನ್ನು ಹೇಗೆ ಖರ್ಚು ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಉತ್ತರಿಸಿದ ವೈಷ್ಣವಿ, ನಾನು ಕ್ಲಾಸಿಕಲ್ ಡ್ಯಾನ್ಸ್ ಮಾಡುತ್ತಿದ್ದೆ, ನನ್ನ ಫಸ್ಟ್ ಶೋಗೆ 1,500 ರೂ.ಚೆಕ್ ನಿಡಿದ್ದರು. ಅದನ್ನು ನಾನು ತಂದೆಗೆ ನೀಡಿದ್ದೆ. ಆಗ 7ನೇ ತರಗತಿಯಲ್ಲಿದ್ದೆ ಎಂದು ಹೇಳಿದ್ದಾರೆ.

    ಬಳಿಕ ಶುಭಾ ಅವರು ನಾನು ಆ್ಯಡ್ ಏಜೆನ್ಸಿಯಲ್ಲಿ ಇಂಟರ್ನ್‍ಶಿಪ್ ಮಾಡಿದೆ, ತಿಂಗಳಿಗೆ 2000 ರೂ. ಸಿಗುತ್ತಿತ್ತು. ಅದು ಪೆಟ್ರೋಲ್‍ಗೇ ಹೊಯಿತು ಎಂದಿದ್ದಾರೆ. ಪ್ರಶಾಂತ್ ಮಾತನಾಡಿ, ಟೆಲಿಕಾಂ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಸಿಕ್ಕಿತು. 3000 ರೂ. ಸಂಬಳ ಸಿಗುತ್ತಿತ್ತು. 2,500 ರೂ. ಮನೆಗೆ ಕೊಡುತ್ತಿದ್ದೆ. 500 ರೂ.ನಾನು ಇಟ್ಟುಕೊಳ್ಳುತ್ತಿದ್ದೆ ಎಂದಿದ್ದಾರೆ.

    ಬಳಿಕ ಶಮಂತ್ ಉತ್ತರಿಸಿ, ನಾನು ಕಾಲೇಜ್ ಆದಮೇಲೆ ಇಂಟರ್‍ಶಿಪ್ ಮಾಡುತ್ತಿದ್ದೆ, ಆಗ ತಿಂಗಳಿಗೆ 3000 ರೂ. ನೀಡಿದ್ದರು. ಅದರಲ್ಲಿ ಮೈಕ್ ಖರೀದಿಸಿದ್ದೆ, ಅದೂ ಇನ್ನು ಹಾಗೇ ಇದೆ ಎಂದಿದ್ದಾರೆ. ಬಳಿಕ ಅರವಿಂದ್ ಮಾತನಾಡಿ, ನನ್ನ ಮೊದಲ ಸಂಬಳ 3,500 ರೂ. ಅದು 3 ತಿಂಗಳಿಗೆ ಒಂದು ಸಲ ನೀಡುತ್ತಿದ್ದರು. 9000ದಲ್ಲಿ ಟಿಡಿಎಸ್ ಕಟ್ ಆಗಿ ಹಣ ಬಂತು ಅದರಲ್ಲಿ, ಅರ್ಧ ದುಡ್ಡಲ್ಲಿ ಬೈಕ್‍ಗೆ ಸ್ಪೇರ್ಸ್ ತೆಗೆದುಕೊಂಡೆ. ಉಳಿದಿದ್ದು, ಚಿಕ್ಕ ಪಾರ್ಟಿ, ಅಮೇಲೆ ಬಟ್ಟೆ ತೆಗೆದುಕೊಂಡೆ ಎಂದಿದ್ದಾರೆ.

    ನಾನು 6ನೇ ತರಗತಿ ಇದ್ದಾಗ ಊರಿಗೆ ಟೆಲಿಫಿಲಂ ಶೂಟಿಂಗ್‍ಗೆ ಸುಮಿತ್ರಾ ಭಾವೆ ಹಾಗೂ ಅವರ ತಂಡ ಬಂದಿತ್ತು. ಇದರಲ್ಲಿ 2 ದಿನ ಚಿಕ್ಕ ಹುಡುಗಿಯ ಪಾತ್ರ ಮಾಡಬೇಕಿತ್ತು. ಅದಕ್ಕೆ ನನ್ನ ಕರೆದುಕೊಂಡು ಹೋಗಿದ್ದರು. ಈ ವೇಳೆ 500ರೂ. ನೀಡಿದ್ದರು. ಅದು ನನ್ನ ಮೊದಲ ಸಂಪಾದನೆ. ಇದರಲ್ಲಿ ನನ್ನ ಕಡೆಯಿಂದ ಮನೆಯವರಿಗೆ ಚಿಕನ್ ತರಲು ಹಣ ನಿಡಿದ್ದೆ ಎಂದಿದ್ದಾರೆ. ಹೀಗೆ ಹಲವರು ತಮ್ಮ ಮೊದಲ ಸಂಪಾದನೆ ಕುರಿತು ತಿಳಿಸಿದ್ದಾರೆ.

  • ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

    ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

    ಬಿಗ್ ಬಾಸ್ ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಪ್ರತಿ ದಿನ ಜಗಳ ಆಗುತ್ತಲೇ ಇದೆ. ಅದೇ ರೀತಿ ಇದೀಗ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಮಧ್ಯೆ ನಡೆದಿದ್ದು, ಅರವಿಂದ್ ಸಂಬರಗಿಗೆ ಚಳಿ ಬಿಡಿಸಿದ್ದಾರೆ.

    ಹೌದು ಬಿಗ್ ಬಾಸ್ ದಿವ್ಯಾ ಉರುಡುಗ ಅವರ ಕ್ಯಾಪ್ಟೆನ್ಸಿ ಅವಧಿ ಮುಗಿದಿದೆ ಎನ್ನುತ್ತಲೇ ಎಲ್ಲರೂ ಚಪ್ಪಾಳೆ ತಟ್ಟಿದ್ದು, ಬಳಿಕ ಪ್ರಶಾಂತ್ ಸಂಬರಗಿ ದಿವ್ಯಾ ಉರುಡುಗ ಅವರ ಕೈ ಕುಲುಕಿದ್ದಾರೆ. ಈ ವೇಳೆ ಅರವಿಂದ್ ಅದು ಸುಳ್ಳು, ಇದನ್ನು ನಂಬಬೇಡ. ಹುಚ್ಚ ಬಂದರು, ಅವರು ಸ್ನೇಹಿತರಂತೆ ಚೆನ್ನಾಗಿದ್ದು, ಹಿಂದೆ ಮಾತನಾಡುತ್ತಾರೆ ಎಂದಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಉತ್ತರಿಸಿ ನಾನು ನೇರವಾಗಿಯೇ ಮಾತನಾಡುತ್ತೇನೆ. ನಿನಗೆ ಸ್ಪೋರ್ಟಿವ್ ಸ್ಪಿರಿಟ್ ಇಲ್ಲ ಗುರು ಎಂದಿದ್ದಾರೆ.

    ನನ್ನ ಕ್ಯಾರೆಕ್ಟರ್ ಬಗ್ಗೆ ನೀವು ಮಾತನಾಡಬೇಕಿಲ್ಲ, ನಿಮ್ದು ನೀವು ನೋಡ್ಕೊಳಿ. ನಿಮ್ಮ ಮಾರ್ಗದರ್ಶನ ನಮಗೆ ಬೇಕಾಗಿಲ್ಲ. ನಿನ್ನ ಬಗ್ಗೆ ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ. ನಿನಗೆ ಒಂದು ವಿಮರ್ಶೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲವೆಂದರೆ ಹೇಗೆ ಎಂದು ಸಂಬರಗಿ ಪ್ರಶ್ನಿಸಿದ್ದಾರೆ. ತಕ್ಷಣವೇ ಉತ್ತರಿಸಿದ ಅರವಿಂದ್ ಕ್ರಿಟಿಸಿಸಂ ತೆಗೆದುಕೊಳ್ಳುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

    ಹುಚ್ಚ ಆಚೆ ಹೋಗಿ ವಿದ್ಯಾ ಉರುಡುಗ ಹೀಗೆ, ಹಾಗೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬರಗಿ ಪ್ರತಿಕ್ರಿಯಿಸಿ, ಹೌದು ಫೇವರಿಟಿಸಂ ಮಾಡುತ್ತಿದ್ದೀಯಾ ಎಂದು ನಾನು ಹೇಳಿದೆ. ಎರಡು ವಿಚಾರದಲ್ಲಿ ಫೇವರಿಟಿಸಂ ಆಗಿತ್ತು ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ. ತಕ್ಷಣ ಅರವಿಂದ್ ನೀನ್ಯಾರು ಕೇಳಲು, ನೀನೇನು ಬಿಗ್ ಬಾಸಾ? ಎಂದು ಜೋರಾಗಿ ಕೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸಾ ಎಂದು ಪ್ರಶಾಂತ್ ಮರು ಪ್ರಶ್ನಿಸಿದ್ದಾರೆ.

    ನೀನು ಆಟದಲ್ಲೇ ಇಲ್ಲ ನಿನ್ಯಾಗ್ಯಾಕೆ, ನೀನು ಅಡ್ವಕೇಟಾ ಅವರ ಪರ ಎಂದು ಪ್ರಶ್ನಿಸಿದ್ದಾರೆ. ಹೌದು ನಾನು ನ್ಯಾಯದ ಪರ ಮಾತನಾಡುವ ಅಡ್ವೋಕೇಟ್, ನೀನು ಮೋಸ ಮಾಡಿದ್ದೀಯಾ, ಎಷ್ಟು ಗೇಮ್‍ನಲ್ಲಿ ಚೀಟಿಂಗ್ ಮಾಡಿದ್ದೀಯಾ ಎಂದು ಹೇಳುತ್ತೇನೆ ಎಂದಿದ್ದಾರೆ. ಆಯ್ತು ಹೇಳು ಎಲ್ಲರೂ ನೋಡುತ್ತಿದ್ದಾರೆ, ಅಲ್ಲದೆ ಮುಂದೆ ನೀನು ನನ್ನ ಫ್ರೆಂಡ್ ಎಂದು ನೈಸ್ ಆಗಿ ಮಾತನಾಡುವುದು, ಬೇರೆಯವರ ಬಳಿ ಹೋಗಿ ನಮ್ಮ ವಿರುದ್ಧವೇ ಮಾತನಾಡುವುದು ಇದು ಯಾವ ರೀತಿಯ ಕನ್ನಿಂಗ್, ಮುಚ್ಚೋ ಎಂದು ಅರವಿಂದ್ ವಾರ್ನ್ ಮಾಡಿದ್ದಾರೆ.

    ಮುಚ್ಗೊಂಡು ಕೂರು ಎಂದು ಅರವಿಂದ್ ಹೇಳಿದ ತಕ್ಷಣ ನೀನ್ ಕೂರು ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಅರವಿಂದ್ ಕೂರಲ್ಲ ಏನ್ ಮಾಡ್ತಿಯಾ ಎಂದು ರಾಂಗ್ ಆಗಿದ್ದಾರೆ. ಆಗ ಸಂಬರಗಿ ಸಹ ನೀನ್ ಏನ್ ಮಾಡ್ತಿಯಾ ಎಂದು ಎದ್ದಿದ್ದಾರೆ. ಅರವಿಂದ್ ಸಹ ತರಕಾರಿ ಕಟ್ ಮಾಡುತ್ತಿದ್ದ ಚಾಕು ಕೆಳಗಿಟ್ಟು ಏನೂ ಎಂದು ಸಿಟ್ಟಿಂದ ಬಂದಿದ್ದಾರೆ. ಆಗ ರಘು ತಡೆದಿದ್ದಾರೆ. ಬಳಿಕ ಸಂಬರಗಿ ಏನು ಮಾಡ್ತಿಯಾ ಎಂದಿದ್ದಾರೆ, ನಾನು ಏನೂ ಮಾಡಲ್ಲ, ನೀನ್ ಹೇಳ್ತಿಯಲ್ಲ ಏನ್ ಮಾಡ್ತಿದಿಯಾ ಹೇಳು ಎಂದು ಜೋರಾಗಿಯೇ ಮಾತನಾಡಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು. ಆದರೆ ಅಷ್ಟರಲ್ಲಿ ರಘು, ಹಾಗೂ ಶಮಂತ್ ತಡೆದಿದ್ದಾರೆ.

  • ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ವೀಕೆಂಡ್ ಬಂತೆಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆಲ್ಲ ಹಬ್ಬ ಎನ್ನುವುದು ತಿಳಿದಿರುವ ವಿಚಾರ. ಆದರೆ ಇದರ ಹಿಂದೆ ವೀಕೆಂಡ್ ಎರಡು ದಿನಗಳಿಗಾಗಿ ದೊಡ್ಮನೆ ಮಂದಿ ಇಷ್ಟೆಲ್ಲಾ ತಯಾರಾಗ್ತಾರಾ, ಇಷ್ಟೆಲ್ಲಾ ಯೋಚಿಸುತ್ತಾರಾ ಎಂಬ ಆಶ್ಚರ್ಯ ಇದೀಗ ಕಾಡತೊಡಗಿದೆ.

    ಹೌದು ಈ ಕುತೂಹಲವನ್ನು ಕಿಚ್ಚ ಸುದೀಪ್ ಅವರು ಈ ಬಾರಿಯ ಸೂಪರ್ ಸಂಡೇಯಲ್ಲಿ ಕೆದಿಕಿದ್ದು, ಎಲ್ಲ ಸ್ಪರ್ಧಿಗಳು ಒಂದೊಂದು ರೀತಿಯ ಉತ್ತರ ನೀಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಕಿಚ್ಚ ಸುದೀಪ್ ಅವರೊಟ್ಟಿಗೆ ಮಾತನಾಡಲು ಸ್ಪರ್ಧಿಗಳು ಇಷ್ಟೆಲ್ಲಾ ತಯಾರಾಗ್ತಾರಾ ಎಂದು ಆಶ್ಚರ್ಯವಾಗುತ್ತಿದೆ. ಎಲ್ಲರೂ ಅವರ ಬಟ್ಟೆ, ಮೇಕಪ್ ಬಗ್ಗೆ ಮಾತನಾಡಿದ್ದು, ಯಾವ್ಯಾವ ರೀತಿ ತಯಾರಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.

    ವೀಕೆಂಡ್‍ನಲ್ಲಿ ಶೋನಲ್ಲಿ ಭಾಗವಹಿಸಲು ಯಾವ ರೀತಿಯ ಬಟ್ಟೆ ಹಾಕೋಬೇಕು, ಹೇರ್ ಸ್ಟೈಲ್ ಯಾವ ರೀತಿ ಇರಬೇಕೆಂದು ಬಹುತೇಕ ಎಲ್ಲರಿಗೂ ಕನ್ಫ್ಯೂಸ್ ಇರುತ್ತದೆ. ಆದರೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಶುಭಾ ಪೂಂಜಾ, ದಿವ್ಯಾ ಸುರೇಶ್ ಎಂದು ಮನೆ ಮಂದಿ ಹೇಳಿದ್ದಾರೆ. ಅಲ್ಲದೆ ಇನ್ನೂ ಅಚ್ಚರಿಯ ರೀತಿಯಲ್ಲಿ ಪ್ರಶಾಂತ್ ಸಂಬರಗಿ ಉತ್ತರಿಸಿದ್ದು, ವೈಷ್ಣವಿ ಹಾಗೂ ದಿವ್ಯಾ ಉರುಡುಗ ಅವರಿಗೆ ಯಾವ ವೀಕೆಂಡ್‍ಗೆ, ಯಾವ ಬಟ್ಟೆ, ಯಾವ ರೀತಿ ಕಾಸ್ಟೂಮ್ ಮಾಡಿಕೊಳ್ಳಬೇಕೆಂಬ ಪಟ್ಟಿ ಅವರ ಕಾಸ್ಟೂಮ್ ಡಿಸೈನರ್ ಇಂದ ಬಂದಿರುತ್ತದೆ. ಅವರಿಗೆ ಕನ್ಫ್ಯೂಸ್ ಆಗಲ್ಲ. ಆದರೆ ಶುಭಾ ಪೂಂಜಾ ಹಾಗೂ ದಿವ್ಯಾ ಸುರೇಶ್ ಹೆಚ್ಚು ಕನ್ಫ್ಯೂಸ್ ಆಗುತ್ತಾರೆ ಎಂದು ಹೇಳಿದ್ದಾರೆ.

    ಹಿಯರಿಂಗ್, ಫಿಂಗರ್, ಹೇರ್ ಸ್ಟೈಲ್, ಬಟ್ಟೆ, ಸ್ಲಿಪ್ಪರ್ ತನಕ ದಿವ್ಯಾ ಸುರೇಶ್ ಅವರಿಗೆ ಕನ್ಫ್ಯೂಶನ್ ಇರುತ್ತದೆ. ಹೀಲ್ಸ್ ಹಾಕ್ಲಾ, ಸ್ಲಿಪ್ಪರ್ ಹಾಕ್ಲಾ, ಶೂ ಹಾಕ್ಲಾ ಎಂದು ಕೇಳುತ್ತಿರುತ್ತಾರೆ ಎಂದು ಹೇಳಿದ್ದಾರೆ. ಒಟ್ನಲ್ಲಿ ವೀಕೆಂಡ್‍ಗೆ ಹೇಗೆ ರೆಡಿ ಆಗ್ತಾರೆ, ಎಷ್ಟೆಲ್ಲಾ ಕಷ್ಟ ಪಡ್ತಾರೆ ಎಂಬ ವಿಚಾರವನ್ನು ಕಿಚ್ಚ ಸುದೀಪ್ ಕೆದಕಿದ್ದಾರೆ. ಅಲ್ಲದೆ ಮುಂದಿನ ಶನಿವಾರ ನಿಮ್ಮಿಷ್ಟದ ಬಟ್ಟೆ ಹಾಕಿಕೊಂಡು ಬನ್ನಿ, ಯಾರು ಚೆನ್ನಾಗಿ ಕಾಣುತ್ತಾರೋ ನೋಡೋಣ ಎಂದು ಸುದೀಪ್ ಹೇಳಿದ್ದಾರೆ.

  • ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್

    ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್

    ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಆಯ್ಕೆಯಾಗುತ್ತಿದ್ದಂತೆ ಮನೆಯಲ್ಲಿ ಸಂತಸ ಹರಿದಿದೆ. ಕಿಚ್ಚ ಸುದೀಪ್ ಸಹ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದೆಲ್ಲರ ಜೊತೆಗೆ ಡಿಯುಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ.

    ಹೌದು ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಕ್ಕೆ ದಿವ್ಯಾ ಅವರ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದು, ಶುಭ ಕೋರಿದ್ದಾರೆ, ಜೊತೆಗೆ ಕಿವಿ ಮಾತನ್ನು ಹೇಳಿದ್ದಾರೆ. ತುಂಬಾ ಸಂತೋಷ ಆಗ್ತಿದೆ ಕಣೆ ನಿನ್ನ ಮಾತನ್ನು ನೀನು ಇಂದು ಉಳಿಸಿಕೊಂಡೆ, ಫಸ್ಟ್ ಫೀಮೇಲ್ ಕ್ಯಾಪ್ಟನ್ ನಾನಾಗಬೇಕು ಎಂದು ಯಾವಾಗಲೂ ಹೇಳುತ್ತಿರುತ್ತಿದ್ದೆ. ಆ ಮಾತನ್ನು ಇಂದು ಉಳಿಸಿಕೊಂಡಿದ್ದೀಯಾ. ಎಲ್ಲರಿಗೂ ತುಂಬಾ ಖುಷಿಯಾಗಿದೆ. ನೀನು ಕ್ಯಾಪ್ಟನ್ಸಿ ಟಾಸ್ಕ್ ವಿನ್ ಆಗಿ ಕ್ಯಾಪ್ಟನ್ ಆಗಬೇಕೆಂಬುದು ತುಂಬಾ ದಿನದ ಬಯಕೆಯಾಗಿತ್ತು. ಇಂದು ಈಡೇರಿದೆ ಎಂದಿದಾರೆ. ಇದನ್ನೂ ಓದಿ: ‘ಪತ್ರವಳ್ಳಿ’ ಪದಕ್ಕೆ ನಮಗೆ ಅರ್ಥವೇ ಸಿಗಲಿಲ್ಲ- ಚಕ್ರವರ್ತಿಗೆ ಸುದೀಪ್ ಕ್ಲಾಸ್

    ಕ್ಯಾಪ್ಟೆನ್ಸಿಯನ್ನು ಚೆನ್ನಾಗಿ ನಿಭಾಯಿಸು, ಚೆನ್ನಾಗಿ ಆಡು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊ. ಕ್ಯಾಪ್ಟೆನ್ಸಿ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ. ಚೆನ್ನಾಗಿರು ಮಗಳೇ, ಚೆನ್ನಾಗಿ ಆಡು. ಆರೋಗ್ಯವನ್ನು ಚೆನ್ನಾಗಿ ನೋಡಿಕೋ, ಹೆಚ್ಚು ನೀರು ಕುಡಿ, ಚೆನ್ನಾಗಿರು ಎಂದು ಸಲಹೆ ನೀಡಿದ್ದಾರೆ. ಈ ಮೂಲಕ ಮಗಳಿಗೆ ಶುಭ ಹಾರೈಸಿದ್ದಾರೆ.

    ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದಕ್ಕೆ ದಿವ್ಯಾ ಉರುಡುಗ ಸಹ ತುಂಬಾ ಖುಷಿಯಾಗಿದ್ದು, ಇದು ನನ್ನ ಕನಸಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಎಲ್ಲ ಮಹಿಳಾ ಸ್ಪರ್ಧಿಗಳಿಂದಲೇ ಇದು ಸಾಧ್ಯವಾಗಿದೆ. ನಿಮ್ಮ ಕಷ್ಟಗಳನ್ನು ಫುಲ್ ಫಿಲ್ ಮಾಡುತ್ತೇನೆ. ನೆಕ್ಸ್ಟ್ ಎಲ್ಲ ಹುಡುಗಿಯರೇ ನಿಂತುಕೊಳ್ಳಬೇಕೆಂಬ ಆಸೆಯಿದೆ ಎಂದಿದ್ದಾರೆ.

  • ನಾನು 4 ತಿಂಗಳ ಗರ್ಭಿಣಿ – ಸ್ಪರ್ಧಿಗಳನ್ನು ಅಚ್ಚರಿಗೊಳಿಸಿದ ಶುಭಾ

    ನಾನು 4 ತಿಂಗಳ ಗರ್ಭಿಣಿ – ಸ್ಪರ್ಧಿಗಳನ್ನು ಅಚ್ಚರಿಗೊಳಿಸಿದ ಶುಭಾ

    ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ ಏಳುತ್ತಲೇ ಶುಭಾ ಪೂಂಜಾ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ವಿವಾಹವಾಗಿ ತಾವು ಪ್ರಗ್ನೆಂಟ್ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದ ಮನೆ ಮಂದಿ ಫುಲ್ ನಕ್ಕಿದ್ದಾರೆ.

    ಹೌದು ತಮಗೆ ಬಿದ್ದ ಕನಸಿನ ಕುರಿತು ಶುಭಾ ಹೇಳಿದ್ದು, ಬೆಳಗ್ಗೆ ಏಳುತ್ತಲೇ ನಾನು ನಾಲ್ಕು ತಿಂಗಳು ಪ್ರಗ್ನೆಂಟ್ ಆಗಿದ್ದೆ ಎನ್ನುವ ಮೂಲಕ ಸ್ಪರ್ಧಿಗಳನ್ನು ಅಚ್ಚರಿಪಡಿಸಿದ್ದಾರೆ. ಬಳಿಕ ಇದು ಆಗಿದ್ದು, ಕನಸಲ್ಲಿ ಎಂದು ಹೇಳಿದ್ದಾರೆ.

    ನಿನ್ನೆ ಮಂಜಾ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ತಕ್ಷಣ ಮದುವೆ ಮಾಡಿಕೊಳ್ಳುತ್ತೀಯಾ ಏನ್ ಕಥೆ ಎಂದು ಕೇಳುತ್ತಿದ್ದ. ನಾನು ಹೂ ಹೋದ್ ತಕ್ಷಣ ಆಗ್ತೀನಿ ಕಣೋ ಅಂತಿದ್ದೆ. ಹೌದು ಸಿಂಪಲ್ ಆಗಿಯಾದರೂ ಆಗು ಎಂದು ಹೇಳುತ್ತಿದ್ದ. ಹೀಗೆ ನನ್ನ ಮದುವೆ ಬಗ್ಗೆ ನಿನ್ನೆ ಮಾತನಾಡುತ್ತಿದ್ದೆವು. ಅದೇ ನನ್ನ ಮೈಂಡ್‍ನಲ್ಲಿ ಪ್ಲೇ ಆಗಿದೆ ಅನ್ಸುತ್ತೆ, ಅಚ್ಚರಿಯ ಕನಸು ಬಿದ್ದಿತ್ತು ಎಂದು ಹೇಳಿದ್ದಾರೆ.

    ಕನಸಲ್ಲಿ ನನಗೆ ಮದುವೆ ಆಗಿ, ನಾಲ್ಕು ತಿಂಗಳು ಗರ್ಭಿಣಿ ಸಹ ಆಗಿದ್ದೇನೆ. 4-5 ತಿಂಗಳು ಪ್ರಗ್ನೆಂಟ್ ಮನೆ ತುಂಬಾ ಗೋಳಾಡುತ್ತಿದ್ದೇನೆ. ಇನ್ನೂ ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಮಡಚುತ್ತಿದ್ದೆ. ಬಳಿಕ ಓ ಹೆಂಗಪ್ಪ ಈಗ ಬಿಗ್ ಬಾಸ್‍ಗೆ ಹೋಗೋದು ಎಂದು ನಾನೇ ಅಂದುಕೊಳ್ಳುತ್ತಿದ್ದೆ ಎಂದಿದ್ದಾರೆ. ಇದನ್ನು ಕೇಳಿದ ಪ್ರಂಶಾಂತ್ ಸಂಬರಗಿ ಹಾಗೂ ಮನೆ ಮಂದಿ ಫುಲ್ ನಕ್ಕಿದ್ದು, ತಮಾಷೆ ಮಾಡಿದ್ದಾರೆ.

    ಇದಕ್ಕೆ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿ, ಪ್ರಗ್ನೆಂಟ್ ಆಗ್ಬಿಟ್ಟೆ ಎಂದು ನಕ್ಕಿದ್ದಾರೆ. ಅಲ್ಲದೆ ಮೊದ್ಲೇ ಟಾಸ್ಕ್ ಮಾಡಲ್ಲ, ಇನ್ನು ಹೊಟ್ಟೆ ಇಟ್ಟುಕೊಂಡು ಹೇಗೆ ಟಾಸ್ಕ್ ಮಾಡೋದು ಎಂದು ಕೇಳಿ ನಕ್ಕಿದ್ದಾರೆ. ಬಳಿಕ ಶುಭಾ ಏನೆಲ್ಲಾ ಡ್ರೀಮ್ ಗೊತ್ತಾ ಎಂದು ಹೇಳಿ ಮಂದಹಾಸ ಬೀರಿದ್ದಾರೆ.

  • ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

    ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

    ಬಿಗ್ ಬಾಸ್ ಎಲಿಮಿನೇಟ್ ಆಟ ಸ್ಪರ್ಧಿಗಳನ್ನೆಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಆದರೆ ವೀಕ್ಷಕರಿಗೆ ಹಾಗೂ ಬಿಗ್‍ಬಾಸ್‍ಗೆ ಮಾತ್ರ ಫುಲ್ ಮನರಂಜನೆ ಸಿಗುತ್ತಿದೆ. ಒಟ್ನಲ್ಲಿ ಮನಯೊಳಗೆ ಏನೇನೋ ಆಗುತ್ತಿದೆ.

    ಭಾನುವಾರ ಪ್ರಶಾಂತ್ ಸಂಬರಗಿ ಎಲಿಮಿನೇಟ್ ಪ್ರ್ಯಾಂಕ್ ಎಂಬುದು ಆರಂಭದಲ್ಲಿ ಬಿಗ್ ಬಾಸ್ ವೀಕ್ಷಕರಿಗೆ ತಿಳಿಸಿದ್ದರು. ಬಳಿಕ ಇದನ್ನು ಮನೆಯವರಿಗೂ ತಿಳಿಸಲಾಯಿತು. ಆದರೆ ಈ ವೇಳೆ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್‍ನ್ನು ಬಿಗ್ ಬಾಸ್ ನೀಡಿದ್ದರು. ಸ್ಪರ್ಧಿಗಳಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರಲ್ಲೂ ಆತಂಕ, ದುಗುಡ ಎದುರಾಗಿದೆ.

    ಈ ವಾರ ಯಾರೂ ಎಲಿಮಿನೇಟ್ ಆಗಿಲ್ಲ, ಪ್ರಶಾಂತ್ ಸಂಬರಗಿ ಎಲಿಮಿನೇಟ್ ಕೂಡ ಪ್ರ್ಯಾಂಕ್ ಎಂದು ಬಿಗ್ ಬಾಸ್ ಈಗಾಗಲೇ ಖಚಿತಪಡಿಸಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತಿದ್ದರೂ ಬಿಗ್ ಬಾಸ್ ಮಾತ್ರ ಚೆನ್ನಾಗಿ ಆಟ ಆಡಿಸಿದ್ದರು. ಇದು ಬಿಗ್ ಮನೆಯ ಸ್ಪರ್ಧಿಗಳಿಗೆ ಪ್ರಾಣಸಂಕಟವಾಗಿ ಕಾಡಿತ್ತು.

    ಹೌದು ಪ್ರಶಾಂತ್ ಸಂಬರಗಿ ಮನೆಯಲ್ಲಿದ್ದರೂ ಇನ್‍ವಿಸಿಬಲ್, ಯಾರಿಗೂ ಕಾಣಲ್ಲ. ಸ್ಪರ್ಧಿಗಳು ಅವರಿಲ್ಲ ಎಂದೇ ಭಾವಿಸಿ ಆಟವಾಡಬೇಕು ಎಂದು ಷರತ್ತು ವಿಧಿಸಿದ್ದರು. ಹೀಗಾಗಿ ಪ್ರಶಾಂತ್ ಸಂಬರಗಿ ಪರದಾಡುವಂತಾಗಿತ್ತು. ಯಾಕೆ ಮಾತನಾಡಿಸುತ್ತಿಲ್ಲ ಎಂದು ಸ್ಪರ್ಧಿಗಳೆಲ್ಲರನ್ನೂ ಸಂಬರಗಿ ಹಿಡಿದು ಕೇಳುತ್ತಿದ್ದರು. ಆದರೆ ಯಾರೂ ಉತ್ತರಿಸುವ ಸ್ಥಿತಿಯರಲಿಲ್ಲ.

    ಎಲ್ಲರನ್ನೂ ಮಾತನಾಡಿಸಿ ಸುಸ್ತಾದ ಪ್ರಶಾಂತ್ ಸಂಬರಗಿ, ಕೊನೆಗೆ ಶುಭ ಪೂಂಜಾ ಅವರನ್ನು ಮಾತನಾಡಿಸಿ, ಎಲ್ಲರೂ ಯಾಕೆ ಹೀಗೆ ಮಾಡುತ್ತಿದ್ದೀರಿ, ಇಷ್ಟೇನಾ ಸ್ನೇಹ, ಪ್ರೀತಿ, ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಶುಭಾ ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆದರೆ ಶುಭ ಮಾತ್ರ ಏನೂ ಮಾತನಾಡಿಲ್ಲ, ಹೀಗಾಗಿ ಪ್ರಶಾಂತ್ ಸಂಬರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಕೊನೆಗೆ ಬಿಗ್ ಬಾಸ್ ಪ್ರಶಾಂತ್ ಸಂಬರಗಿ ಅನುಮಾನವನ್ನು ಪರಿಹಿರಿಸಿ ಇದು ಪ್ರ್ಯಾಂಕ್ ಎಂದು ತಿಳಿಸಿದ್ದಾರೆ. ಈ ವಿಚಾರ ತಿಳಿಯತ್ತಿದ್ದಂತೆ ಸಂಬರಗಿ ನಕ್ಕಿದ್ದರೆ ಚಂದ್ರಚೂಡ್, ಅರವಿಂದ್, ದಿವ್ಯಾ, ವೈಷ್ಣವಿ, ಶಮಂತ್ ಸಂಬರಗಿಯನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಬಿಗ್‍ಬಾಸ್ ಈ ಆಟಕ್ಕೆ ಸಂಬರಗಿ ಸುಸ್ತಾಗಿದ್ದು ಮಾತ್ರ ನಿಜ.

  • ಬಿಗ್ ಬಾಸ್ 2ನೇ ಇನ್ನಿಂಗ್ಸ್ ಮೊದಲ ದಿನವೇ DU,DS ಜಡೆ ಜಗಳಕ್ಕೆ ಕಾರಣವೇನು?

    ಬಿಗ್ ಬಾಸ್ 2ನೇ ಇನ್ನಿಂಗ್ಸ್ ಮೊದಲ ದಿನವೇ DU,DS ಜಡೆ ಜಗಳಕ್ಕೆ ಕಾರಣವೇನು?

    ಬಿಗ್ ಬಾಸ್ 2ನೇ ಇನ್ನಿಂಗ್ಸ್ ಫುಲ್ ಕಿಕ್ಕೇರಿಸುತ್ತಿದ್ದು, ಸ್ಪರ್ಧಿಗಳು ರೊಚ್ಚಿಗೆದ್ದು, ಟಾಸ್ಕ್ ಗೆಲ್ಲಲೇಬೇಕೆಂಬ ಛಲ ಹಾಗೂ ಮನರಂಜನೆ ನೀಡಲೇಬೇಕೆಂದು ಪಣ ತೊಟ್ಟು ನಿಂತಂತೆ ಗಂಭಿರವಾಗಿ ಆಟವಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಬಿಗ್ ಬಾಸ್ 2ನೇ ಇನ್ನಿಂಗ್ಸ್ ಆರಂಭದ ದಿನವೇ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ನಡುವೆ ರಣರೋಚಕ ಫೈಟ್.

    ಬಿಗ್ ಬಾಸ್ 2ನೇ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಗಳು ಫುಲ್ ಆಕ್ಟಿವ್ ಆಗಿದ್ದು, ಸ್ಟ್ರಾಂಗ್ ಆಗಿದ್ದಾರೆ. ಹೀಗಾಗಿ ಆಟದ ವಿಚಾರವಾಗಿ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಮಧ್ಯೆ ಫುಲ್ ಜಡೆ ಜಗಳ ನಡೆದಿದ್ದು, ಇಬ್ಬರೂ ಬಿದ್ದು ಹೊರಳಾಡಿ, ಒಬ್ಬರಿಗೊಬ್ಬರ ಜಡೆ ಹಿಡಿದು ಫುಲ್ ಫೈಟ್ ಮಾಡಿದ್ದಾರೆ. ಇದನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದು, ಅಷ್ಟು ಗಂಭಿರವಾಗಿ ಫೈಟ್ ಮಾಡಿದ್ದನ್ನು ಕಂಡು ದಂಗಾಗಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಟೂ ವೀಲರ್ ಮಾತ್ರವಿಲ್ಲ – ದಿವ್ಯಾ ಕಾಲೆಳೆದ ಸುದೀಪ್

    ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಒಬ್ಬರ ಮೇಲೊಬ್ಬರು ಬಿದ್ದು, ಜಡೆ ಹಿಡಿದು, ಹೊರಳಾಡಿ ತಮ್ಮ ಗೆಲುವಿಗಾಗಿ ಹೋರಾಡಿದ್ದಾರೆ. ಕೊನೆಗೂ ದಿವ್ಯಾ ಸುರೇಶ್ ಗೆದ್ದಿದ್ದಾರೆ. ಬಳಿಕ ಬಿಗ್ ಬಾಸ್ ದಿವ್ಯಾ ಸುರೇಶ್ ಅವರನ್ನು ಲೀಡರ್ಸ್ ತಂಡದ ನಾಯಕಿ ಎಂದು ಘೋಷಿಸುತ್ತಾರೆ. ಆದರೆ ಆಟದ ರೋಚಕತೆ ಕಂಡು ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಇದಕ್ಕಿದ್ದಂತೆ ಇಷ್ಟೊಂದು ಸ್ಪರ್ಧೆ ಎಂದು ಬಾಯ್ ಮೇಲೆ ಬೆರಳಿಟ್ಟಿದ್ದಾರೆ. ಈ ಆಟದ ಮೂಲಕವೇ ಇಬ್ಬರೂ ದಿವ್ಯಾ ಅವರು 2ನೇ ಇನ್ನಿಂಗ್ಸ್ ಫುಲ್ ಸ್ಟ್ರಾಂಗ್ ಇರುತ್ತೆ ಎಂಬುದರ ಸುಳಿವು ನೀಡಿದ್ದಾರೆ.

    ಅಂದಹಾಗೆ ಇಷ್ಟೊಂದು ಗಂಭೀರ ಜಗಳ ಯಾಕಾಯ್ತು ಅಂತೀರಾ ಇಲ್ಲಿದೆ ನೋಡಿ ಮ್ಯಾಟ್ರು, ಎರಡನೇ ಇನ್ನಿಂಗ್ಸ್ ಮೊದಲ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಬಿಗ್ ಬಾಸ್ ವೇದಿಕೆಗೆ ಆಗಮಿಸಿದರು. ಕಿಚ್ಚ ಸುದೀಪ್ ದಿವ್ಯಾ ಅವರನ್ನು ಸ್ವಾಗತಿಸಿ, ಹರಟೆ ಬಳಿಕ ಎರಡು ಆಟಗಳನ್ನು ತಿಳಿಸಿದರು. ದಿವ್ಯಾ ಉರುಡುಗ ಬಳಿಕ ಎಂಟ್ರಿ ಕೊಡಲಿರುವ ಸ್ಪರ್ಧಿ ಯಾರು ಎಂದು ಗೆಸ್ ಮಾಡುವುದು. ಮತ್ತೊಂದು ಟೀಮ್ ಡಿವಿಷನ್ ಸಲುವಾಗಿ ಒಬ್ಬರ ಎದುರು ಮತ್ತೊಬ್ಬರು ಆಡುವ ಆಟ. ಮೊದಲನೇ ಆಟ ಗೆಸ್ ಮಾಡುವುದರಲ್ಲಿ ಜಯ ಗಳಿಸಿದರೆ ನೀವು ಯಾವಾಗ ಬೇಕಾದರೂ, ಬಿಗ್ ಬಾಸ್ ಮನೆಯೊಳಗೆ ತಿಂಡಿ ಅಥವಾ ನಿಮಗಿಷ್ಟವಾದ ಆಹಾರ ಪದಾರ್ಥವನ್ನು ಪಡೆಯಬಹುದು ಎಂದು ಹೇಳುತ್ತಾರೆ.

    ಕಿಚ್ಚನ ಪ್ರಶ್ನೆಗೆ ದಿವ್ಯಾ ಉರುಡುಗ ಸರಿಯಾದ ಉತ್ತರ ನೀಡುತ್ತಾರೆ. ಅದರಂತೆ ಮುಂದಿನ ಸ್ಪರ್ಧಿಯಾಗಿ ದಿವ್ಯಾ ಸುರೇಶ್ ಬಿಗ್ ಬಾಸ್ ವೇದಿಕೆಗೆ ಆಗಮಿಸುತ್ತಾರೆ. ಆಗ ಸುದೀಪ್ ನೀವಿಬ್ಬರು ಮನೆಯೊಳಗೆ ಹೋದ ಮೇಲೆ ಒಂದು ಪಂದ್ಯ ನಡೆಯುತ್ತದೆ. ನಿಮ್ಮಿಬ್ಬರ ಕೈಗೆ ಬಿಂದಿ ಪಾಕೆಟ್‍ನ್ನು ಕೊಡಲಾಗುತ್ತದೆ. ಅದರಲ್ಲಿನ ಒಂದು ಬಿಂದಿಯನ್ನು ಎದುರಾಳಿಯ ಹಣೆಗೆ ಅಂಟಿಸಬೇಕು ಎಂದು ಹೇಳುತ್ತಾರೆ. ಯಾರು ಮೊದಲು ಎದುರಾಳಿಯ ಹಣೆಗೆ ಬಿಂದಿಯನ್ನು ಅಂಟಿಸುತ್ತಾರೋ ಅವರು ಪಂದ್ಯ ಗೆಲ್ಲುತ್ತಾರೆ ಎಂದು ಹೇಳಿ ಒಳಗೆ ಕಳುಹಿಸುತ್ತಾರೆ. ಬಳಿಕ ಮನೆಯ ಒಳಗೆ ರೋಚಕ ಫೈಟಿಂಗ್ ಬಳಿಕ ದಿವ್ಯಾ ಸುರೇಶ್ ಗೆಲುವು ಸಾಧಿಸಿದ್ದಾರೆ.

  • ನಾಳೆಯಿಂದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್- ಸ್ಪರ್ಧಿಗಳ ಎಂಟ್ರಿ ಹೇಗಿರಲಿದೆ?

    ನಾಳೆಯಿಂದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್- ಸ್ಪರ್ಧಿಗಳ ಎಂಟ್ರಿ ಹೇಗಿರಲಿದೆ?

    ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭಕ್ಕೆ ಕ್ಷಣಗಣನೆ ಎದುರಾಗಿದ್ದು, ಬಲಗಾಲಿಟ್ಟು ಮನೆ ಪ್ರವೇಶಿಸಲು ಸ್ಪರ್ಧಿಗಳು ಕಾತರಿಂದ ಕಾಯುತ್ತಿದ್ದಾರೆ. ಅದೇ ರೀತಿ ವೀಕ್ಷಕರು ಸಹ ಬಿಗ್ ಬಾಸ್ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ವಾಹಿನಿ ಸಹ ಸ್ಪರ್ಧಿಗಳ ಜರ್ನಿ ವಿಟಿ ಬಿಡುಗಡೆ ಮಾಡುವ ಮೂಲಕ ಕಿಕ್ಕೇರಿಸುತ್ತಿದೆ. ಇದೆಲ್ಲದ ಮಧ್ಯೆ ಸ್ಪರ್ಧಿಗಳ ಗ್ರ್ಯಾಂಡ್ ಎಂಟ್ರಿ ಹೇಗಿರಲಿದೆ ಎಂಬ ಕುತೂಹಲ ಕಾಡುತ್ತಿದೆ.

    ಹೌದು ಬಿಗ್ ಬಾಸ್ 8ರ 2ನೇ ಇನ್ನಿಂಗ್ಸ್ ಮುಂದುವರಿದ ಭಾಗವೇ ಅಥವಾ ಪುನರಾರಂಭವೇ ಎಂಬ ಪ್ರಶ್ನೆ ಸಹ ಇದೇ ವೇಳೆ ಮೂಡಿದ್ದು, ಈ ಕುರಿತು ವಾಹಿನಿಯ ವಿಟಿಯಲ್ಲಿ ಸಹ ತಲೆಯಲ್ಲಿ ಹುಳ ಬಿಟ್ಟಿದೆ. ಅರ್ಧವಾಗಿರುವ ಕನಸು ಮುಂದುವರಿಯುತ್ತಾ ಅಥವಾ ಹೊಸ ಕನಸೇ ಆರಂಭವಾಗುತ್ತಾ ಎಂದಿಂದೆ. ಹೀಗಾಗಿ ಹಲವರಲ್ಲಿ ಗೊಂದಲ ಉಂಟಾಗಿದ್ದು, ಇದಕ್ಕೆ ಬುಧವಾರ ಸಂಜೆ 6ಕ್ಕೆ ಪ್ರಸಾರವಾಗುವ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮಹಾಸಂಚಿಕೆಯಲ್ಲೇ ಉತ್ತರ ಸಿಗಬೇಕಿದೆ. ಆದರೆ ಸ್ಪರ್ಧಿಗಳು ಮಾತ್ರ ಫುಲ್ ತಯಾರಾಗಿದ್ದಾರೆ.

    ಒಂದರ ಹಿಂದೆ ಒಂದರಂತೆ ಸ್ಪರ್ಧಿಗಳ ಜರ್ನಿ ವಿಟಿಯನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಸ್ಪರ್ಧಿಗಳ ಎಂಟ್ರಿ, ಹೊಸಬರ ಎಂಟ್ರಿ, ಅಲ್ಲದೆ ಈಗಿರುವ ಸ್ಪರ್ಧಿಗಳು ಯಾರಾದ್ರೂ ಮಿಸ್ ಆಗ್ತಾರಾ ಎಂಬುದರ ಬಗ್ಗೆ ಈ ವರೆಗೆ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಎರಡನೇ ಇನ್ನಿಂಗ್ಸ್ ಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗ್ರ್ಯಾಂಡ್ ಎಂಟ್ರಿ ಮೂಲಕ ಸ್ಪರ್ಧಿಗಳು ಮತ್ತೆ ಬಿಗ್ ಮನೆಗೆ ಕಳುಹಿಸುವುದು ಮಾತ್ರ ಪಕ್ಕಾ.

    ಇನ್ನೂ ಸಂತಸದ ಸಂಗತಿ ಎಂದರೆ ಎಲ್ಲ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಮಾತನಾಡಿಸಲಿದ್ದಾರಂತೆ. ಬಳಿಕ ಸ್ವತಃ ಅವರೇ ಮನೆಯೊಳಗೆ ಕಳುಹಿಸಿಕೊಡಲಿದ್ದಾರೆ. ಹೊಸ ಸ್ಪರ್ಧಿಗಳು ಭಾಗವಹಿಸಿದರೆ ಅವರನ್ನೂ ಕಿಚ್ಚ ಪರಿಚಯಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲುವುದಕ್ಕೂ ಮೊದಲು ಅನಾರೋಗ್ಯದಿಂದ ಹಾಗೂ ಲಾಕ್‍ಡೌನ್‍ನಿಂದ ಕಿಚ್ಚ ವಾರಾಂತ್ಯದ ಶೋನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೊನೇಯ ಕೆಲ ವಾರಗಳಲ್ಲಿ ಕಿಚ್ಚನ ಅನುಪಸ್ಥಿತಿ ಕಾಡುತ್ತಿತ್ತು.

    ಕಳೆದ ಬಾರಿಗಿಂತ ಬಿಗ್ ಬಾಸ್ ಹೊಸ ಸ್ವರೂಪದಲ್ಲಿ ಮೂಡಿ ಬರಲಿದ್ದು, ಹಲವು ಬದಲಾವಣೆಗಳನ್ನು ಸಹ ಮಾಡಿಕೊಳ್ಳುತ್ತಿದೆ. ಟಾಸ್ಕ್, ಹರಟೆ, ಜಗಳ, ಕಾಮಿಡಿ ಹೀಗೆ ಎಲ್ಲ ರೀತಿಯಲ್ಲಿ ಮನರಂಜಿಸಲು ವಾಹಿನಿ ತಯಾರಿ ನಡೆಸಿದೆ. ಆದರೆ ಯಾವೆಲ್ಲ ಬದಲಾವಣೆ ಇರಲಿದೆ, ಸ್ಪರ್ಧಿಗಳಲ್ಲಿ ಕಿಕ್ ಹೇಗೆ ತುಂಬುಲಿದೆ, ಈ ಹಿಂದಿಗಿಂತ ವಿಭಿನ್ನವಾಗಿ ಯಾವ ರೀತಿ ಮಸಾಲೆ ಬೆರೆಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಕೊರೊನಾ ಹಿನ್ನೆಲೆ ನೆಚ್ಚಿನ ರಿಯಾಲಿಟಿ ಶೋ ಅರ್ಧಕ್ಕೆ ನಿಂತಿತ್ತು. ಇದರಿಂದಾಗಿ ವೀಕ್ಷಕರಲ್ಲಿ ಭಾರೀ ಬೇಸರ ಮನೆ ಮಾಡಿತ್ತು. ಬಿಗ್ ಮನೆಯಿಂದ ಹೊರ ಹೋಗಲು ಸ್ಪರ್ಧಿಗಳಿಗೆ ಸಹ ಅಷ್ಟೇ ಬೇಸರವಾಗಿತ್ತು. ಇದೀಗ ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವುದಕ್ಕೆ ಫುಲ್ ಖುಷಿಯಾಗಿದ್ದಾರೆ. ಈ ಮೂಲಕ ಸ್ಪರ್ಧಿಗಳು ಅರ್ಧವಾಗಿದ್ದ ತಮ್ಮ ಕನಸನ್ನು ಹೊಸ ರೀತಿಯಲ್ಲಿ ಪೂರ್ಣಗೊಳಿಸಿಕೊಳ್ಳಲಿದ್ದಾರೆ. ಆದರೆ ಯಾವ ರೀತಿ ರಂಜಿಸಲಿದ್ದಾರೆ ಎಂಬುದನ್ನು ನೋಡಲು ಕಾಯಲೇಬೇಕಿದೆ.