Tag: ಬಿಗ್‌ ಬಾಸ್‌ ಓಟಿಟಿ

  • ನಾನು ಎಷ್ಟೋ ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಲೆಕ್ಕವಿಲ್ಲ: ಅರ್ಜುನ್ ರಮೇಶ್

    ನಾನು ಎಷ್ಟೋ ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಲೆಕ್ಕವಿಲ್ಲ: ಅರ್ಜುನ್ ರಮೇಶ್

    ಕಿರುತೆರೆಯ ಸೂಪರ್ ಹಿಟ್ ಶನಿ, ನಾಗಿಣಿ ಸೀರಿಯಲ್ ಮೂಲಕ ಮನೆಮಾತಾದ ನಟ ಅರ್ಜುನ್ ರಮೇಶ್ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಶೋನಲ್ಲಿ ತಮ್ಮ ಇಬ್ಬರ ಪತ್ನಿಯರ ಬಗ್ಗೆ ಜತೆಗೆ ರಿಲೇಷನ್‌ಶಿಪ್ ಕುರಿತು ನಟ ಮಾತನಾಡಿದ್ದಾರೆ.

    ನಟ ಅರ್ಜುನ್ ರಮೇಶ್ ಅವರು ರಾಜಕೀಯ, ನಟನೆ ಎರಡರಲ್ಲೂ ಮುಂಚೂಣಿಯಲ್ಲಿರುವ ನಟ. ಅವರು ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರದಿಂದ ಸಾಕಷ್ಟು ಚರ್ಚೆ ಆಗುತ್ತಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಅಸಲಿ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ತಮಗೆ ಎರಡು ಮದುವೆ ಆಗಿದೆ ಎಂದು ಇದನ್ನು ಆರಂಭದಲ್ಲೇ ಹೇಳಿಕೊಂಡಿದ್ದರು. ಈಗ ಅವರು ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. ಇನ್ನು ಫ್ಲರ್ಟ್ ವಿಚಾರದಲ್ಲಿ ಸಂಜಯ್ ದತ್ ಅವರನ್ನು ಮೀರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಕು?

    ನಾನು ಎಷ್ಟು ಜನರ ಜತೆ ಫ್ಲರ್ಟ್ ಮಾಡಿದ್ದೇನೆ ಎಂಬುದು ನನಗೇ ಗೊತ್ತಿಲ್ಲ. ಆ ಲೆಕ್ಕವನ್ನು ಇಲ್ಲಿ ಕೊಡೋಕೆ ಹೋಗಲ್ಲ. ಇದರ ಲೆಕ್ಕ ನೀಡೋಕೆ ಹೋದರೆ ಸಂಜಯ್ ದತ್ ಅವರನ್ನು ನಾನು ಹಿಂದಿಕ್ಕುತ್ತೇನೆ ಎಂದಿದ್ದಾರೆ ಅರ್ಜುನ್ ರಮೇಶ್. ಈ ಮೂಲಕ ಅವರು ಸಾಕಷ್ಟು ಜನರ ಜತೆ ರಿಲೇಶನ್‌ಶಿಪ್‌ನಲ್ಲಿದ್ದೆ, ಫ್ಲರ್ಟ್ ಮಾಡಿದ್ದೆ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

    ನಾನು ಬಿಗ್ ಬಾಸ್‌ಗೆ ಹೋಗುವ ದಿನ ನನ್ನ ಇಡೀ ಕುಟುಂಬದವರು ಅಳೋಕೆ ಶುರು ಮಾಡಿದರು. ಅವರಿಗೆ ನನ್ನ ಬಿಟ್ಟು ಬೇರೆ ಪ್ರಪಂಚ ಇಲ್ಲ. ಮಿಲನ್ ನನ್ನ ಮೊದಲ ಹೆಂಡತಿ. ಮದುವೆ ಆಗಿದ್ದಾಗಲೇ ರವಿಕಾ ಜತೆ ಪ್ರೀತಿಯಲ್ಲಿದ್ದೆ. ರವಿಕಾಳನ್ನು ಸುಮಾರು ಐದು ವರ್ಷಗಳ ಕಾಲ ಹೊರ ಜಗತ್ತಿನಿಂದ ಬಚ್ಚಿಟ್ಟೆ. ರವಿಕಾಳನ್ನು ಭೇಟಿ ಮಾಡುವ ವಿಚಾರ ಮಿಲನ್‌ಗೆ ಗೊತ್ತಾದರೆ ಎಂಬ ಭಯ ಸದಾ ಕಾಡುತ್ತಿತ್ತು. ನಿಮ್ಮ ಲೈಫ್ ಅರ್ಥ ಏನು ಎಂದು ರವಿಕಾ ಪಾಲಕರು ಒಂದು ದಿನ ಕೇಳಿದರು ಎಂದು ತಮ್ಮ ಹಳೆಯ ಪ್ಲ್ಯಾಶ್‌ ಬ್ಯಾಕ್ ಸ್ಟೋರಿ ನೆನಪಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊದಲ ವಾರವೇ ನಾಮಿನೇಟ್: ಸೋನು ಶ್ರೀನಿವಾಸ್ ಗೌಡಗೆ ಗೇಟ್ ಪಾಸ್?

    ಮೊದಲ ವಾರವೇ ನಾಮಿನೇಟ್: ಸೋನು ಶ್ರೀನಿವಾಸ್ ಗೌಡಗೆ ಗೇಟ್ ಪಾಸ್?

    ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಓಟಿಟಿನಲ್ಲಿ ಪ್ರಸಾರವಾಗ್ತಿದೆ. ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಇದೀಗ ಅಸಲಿ ಆಟ ಆರಂಭವಾಗಿದೆ. ಹೌದು, ಮೊದಲ ದಿನವೇ ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದ್ದು, ಒಟ್ಟು 8 ಜನ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಸೋನು ಶ್ರೀನಿವಾಸ ಗೌಡ ಸಹ ನಾಮಿನೇಟ್ ಆಗಿದ್ದಾರೆ. ಈಗಾಗಲೇ ಸೋನು ಗೌಡ ಬಿಗ್ ಬಾಸ್ ಎಂಟ್ರಿಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಅವರು ಮೊದಲ ವಾರವೇ ಹೊರಬರುತ್ತಾರಾ ಎಂಬ ಪ್ರಶ್ನೆ ಮೂಡಿದೆ.

    ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೇ ಸದ್ದು ಮಾಡುತ್ತಿದೆ. ಅದರಲ್ಲಿಯೂ ದಿನದ ಆರಂಭದಲ್ಲಿಯೇ ಸ್ಪರ್ಧಿಗಳಿಗೆ ಎಲಿಮಿನೇಷನ್ ಎಂಬ ಭಯ ಆರಂಭವಾಗಿದೆ. ಇರುವ ಒಟ್ಟು 16 ಜನ ಸ್ಪರ್ಧಿಗಳಲ್ಲಿ ಈ ವಾರ 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಸೋನು ಗೌಡ, ಸ್ಫೂರ್ತಿ ಗೌಡ, ನಂದಿನಿ, ಆರ್ಯವರ್ಧನ್, ಜಯಶ್ರೀ ಆರಾಧ್ಯಾ, ಜಶ್ವಂತ್, ಕಿರಣ್ ಯೋಗೇಶ್ವರ್ ಮತ್ತು ಅಕ್ಷತಾ ಕುಕ್ಕಿ ಎಲಿಮಿನೇಷನ್ ಆಗಿದ್ದು, ಮೊದಲ ವಾರವೇ ಯಾರು ಮನೆಯ ಆಟಕ್ಕೆ ಅಂತ್ಯ ಹಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

    16 ಸ್ಪರ್ಧಿಗಳಲ್ಲಿ 8 ಜನ ಸ್ಪರ್ಧಿಗಳು ನಾಮಿನೇಟ್ ಆದರೆ ಉಳಿದ 8 ಜನ ಈ ವಾರ ಸೇಫ್ ಆಗಿದ್ದಾರೆ. ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಸಾನ್ಯಾ ಐಯ್ಯರ್, ಚೈತ್ರಾ ಹಳ್ಳಿಕೇರಿ, ಲೋಕೇಶ್, ಉದಯ್ ಸೂರ್ಯ, ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಸದ್ಯ ಸೇಫ್ ಆಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗಲು ಇವರುಗಳು ಉತ್ತಮವಾಗಿ ಆಡಬೇಕಿದೆ. ಇದನ್ನೂ ಓದಿ: ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಕ್ಲಾಸ್

    ಬಿಗ್ ಬಾಸ್ ಗ್ರ್ಯಾಂಡ್‌ ಲಾಂಚ್ ದಿನವೇ ಸೋನು ಗೌಡ ಎಂಟ್ರಿ ನೋಡಿ, ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸುದೀಪ್ ಇರುವ ವೇದಿಕೆಗೆ ಸೋನು ಗೌಡ ಆಯ್ಕೆ ತಪ್ಪು ಎಂದು ವಾಹಿನಿಯ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ. ಇದೀಗ ಸೋನು ಗೌಡ ನಾಮಿನೇಟ್ ಆಗಿರುವುದನ್ನ ನೋಡಿ, ಈ ವಾರವೇ ಸೋನುಗೆ ಬಿಗ್ ಬಾಸ್ ಮನೆ ಕೊನೆಯಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಗುರೂಜಿ ಆಸ್ತಿ 5 ಸಾವಿರ ಕೋಟಿಯಂತೆ: ಸಿನಿಮಾ ರಂಗಕ್ಕೂ ಕೊಟ್ಟಿದ್ದಾರಂತೆ ಸಾಲ

    ಆರ್ಯವರ್ಧನ್ ಗುರೂಜಿ ಆಸ್ತಿ 5 ಸಾವಿರ ಕೋಟಿಯಂತೆ: ಸಿನಿಮಾ ರಂಗಕ್ಕೂ ಕೊಟ್ಟಿದ್ದಾರಂತೆ ಸಾಲ

    ಬಿಗ್ ಬಾಸ್ ಮನೆಯಲ್ಲಿ ಒಂದು ಕಡೆ ಟ್ರ್ಯಾಜಿಡಿ ಕಥೆಗಳೇ ಓಡುತ್ತಿದ್ದರೆ, ಮತ್ತೊಂದು ಕಡೆ ಆರ್ಯವರ್ಧನ್ ಗುರೂಜಿ ತಮ್ಮ ಪಾಡಿಗೆ ತಾವು ಅನಿಸಿದನ್ನೂ ಮಾಡುತ್ತಾ ಹೋಗುತ್ತಿದ್ದಾರೆ. ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ಸಾನ್ಯ ಅಯ್ಯರ್ ಸೇರಿದಂತೆ ಹಲವರು ತಮ್ಮ ಮೇಲೆ ನಡೆದ ಮಾನಸಿಕ ಮತ್ತು ದೈಹಿಕ ಶೋಷಣೆಯನ್ನು ಹಂಚಿಕೊಂಡಿದ್ದಾರೆ. ಕೆಲವರು ತಮ್ಮ ಬ್ರೇಕ್ ಅಪ್ ಕಥೆಗಳನ್ನು ಹೇಳಿದ್ದರೆ ಮತ್ತಷ್ಟು ಜನ ಡಿವೋರ್ಸ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ನಡುವೆ ಆರ್ಯವರ್ಧನ್ ಗುರೂಜಿ ಬೇರೆ ರೀತಿಯಲ್ಲೇ ಇದನ್ನು ವ್ಯಾಖ್ಯಾನಿಸಿದ್ದಾರೆ.

    ತಂದೆ ತಾಯಿ ಗಲಾಟೆ, ಪ್ರೇಮ, ವಿರಹ, ಬ್ರೇಕ್ ಅಪ್ ಈ ರೀತಿಯ ವಿಷಯಗಳನ್ನು ಮನೆಯಲ್ಲಿ ಇದ್ದವರು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲರ ಜೀವನದಲ್ಲೂ ಕಹಿ ಘಟನೆಗಳು ನಡೆದಿರುತ್ತವೆ. ಅವುಗಳನ್ನು ದಾಟಿಕೊಂಡು ಮುಂದೆ ಸಾಗಬೇಕು ಎಂದಿದ್ದಾರೆ. ಸಿಂಪತಿ ಪಡೆಯುವಂತಹ ವಿಷಯಗಳನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ನಡುವೆ ತಾವು ಸಾವಿರಾರು ಕೋಟಿ ಒಡೆಯರು ಎಂದು ಆರ್ಯರ್ವಧನ್ ಗುರೂಜಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ತಮ್ಮದು ಮೂಲತಃ ಹಳ್ಳಿ. ತಮ್ಮ ಹಿರಿಯರ ಆಸ್ತಿಯು ಸುಮಾರು ಐದು ಸಾವಿರ ಕೋಟಿಗೂ ಅಧಿಕ ಬೆಲೆ ಬಾಳುತ್ತದೆ. ನಾನಂತೂ ಕಷ್ಟದಲ್ಲಿ ಹುಟ್ಟಿಲ್ಲ. ಒಳ್ಳೆಯ ರೀತಿಯಲ್ಲೇ ಬದುಕಿದ್ದೇನೆ. ಅನೇಕರಿಗೆ ಸಹಾಯ ಮಾಡಿದ್ದೇನೆ. ಸಿನಿಮಾ ರಂಗಕ್ಕೂ ಸಾಲ ಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅನೇಕ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಆರ್ಯವರ್ಧನ್ ಗುರೂಜಿ ಸಾಲ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಯಾರೆಲ್ಲ ಸಾಲವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿಕೊಳ್ಳಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಕ್ಲಾಸ್

    ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಕ್ಲಾಸ್

    ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿ ಎಂಟ್ರಿ ಕೊಡುತ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಓಟಿಟಿ ಮೂಲಕ 16 ಸ್ಪರ್ಧಿಗಳು ಸದ್ದು ಮಾಡ್ತಿದ್ದಾರೆ. ಈಗ ಶೋ ಶುರುವಾಗಿ ಮೂರೇ ದಿನಕ್ಕೆ ಬಿಗ್ ಬಾಸ್ ಮನೆ ರಣರಂಗವಾಗಿದೆ. ಸೋನು ಗೌಡ ಮತ್ತು ಸ್ಪೂರ್ತಿ ಗೌಡ ಮಾತಿನ ಜಟಾಪಟಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.

    ಕಿರುತೆರೆಯ ದೊಡ್ಡ ಮನೆಯಲ್ಲಿ ಮೊದಲ ಜಗಳ ಶುರುವಾಗಿದೆ. ಸೋನು ಗೌಡ ಮತ್ತು ಸ್ಪೂರ್ತಿ ಗೌಡ ಮಾತಿನ ಚಕಮಕಿ ಜೋರಾಗಿದ್ದು, ಮನೆಯ ವಾತಾವರಣವೇ ಅಲ್ಲೋಲ್ಲ ಕಲ್ಲೋಲವಾಗಿದೆ. ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ಸ್ಪೂರ್ತಿ ಗೌಡ ಮೇಕಪ್ ಮಾಡುತ್ತಿರುವುದನ್ನು ನೋಡಿದ ಸೋನು ಗೌಡ, ಮೇಕಪ್ ಬಗ್ಗೆ ಒಂದಷ್ಟು ಮಾತನಾಡುತ್ತಾರೆ. ಆಗ ನನಗೆ ಮೇಕಪ್ ಗೊತ್ತಿಲ್ಲ ಎಂದ ಸ್ಪೂರ್ತಿ ಗೌಡಗೆ, ಸೋನು ಗೌಡ ಡವ್ ರಾಣಿ ಎಲ್ಲಾ ಗೊತ್ತಿದ್ದು, ಏನು ಗೊತ್ತಿಲ್ಲದ ಹಾಗೆ ಡವ್ ಮಾಡ್ತಿಯಾ ಎನ್ನುತ್ತಾರೆ. ಇದೇ ಮಾತುಗಳು ಇವರ ಜಗಳಕ್ಕೆ ಕಾರಣವಾಗಿವೆ. ಡವ್ ರಾಣಿ ಎನ್ನುವ ಪದ ಬಳಸಿದ್ದಕ್ಕೆ ಸ್ಪೂರ್ತಿ ಗೌಡ ಸಿಟ್ಟಾಗುತ್ತಾರೆ. ಆ ರೀತಿ ಮಾತನಾಡಬೇಡ ಎಂದು ಸಿಟ್ಟಾಗುತ್ತಾರೆ. ಇದೀಗ ಈ ವಿಚಾರವೇ ಜಗಳಕ್ಕೆ ಕಾರಣವಾಗಿದೆ. ಒಬ್ಬರಿಗೊಬ್ಬರು ಮಾತಿನ ಚಾಟಿ ಬೀಸಿದ್ದಾರೆ. ಇದಾದ ಬಳಿಕ ಒಬ್ಬರಿಗೊಬ್ಬರು ಮಾತನಾಡದೇ, ಮುನಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್ನೊಂದು ವೀಡಿಯೋ ಇದೆ, ಯಾವಾಗ ಬಿಡುತ್ತಾನೋ ನನಗೆ ಗೊತ್ತಿಲ್ಲ: ಸೋನು ಗೌಡ

    ಇನ್ನೊಂದು ವೀಡಿಯೋ ಇದೆ, ಯಾವಾಗ ಬಿಡುತ್ತಾನೋ ನನಗೆ ಗೊತ್ತಿಲ್ಲ: ಸೋನು ಗೌಡ

    ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚ್ತಿರುವ ಸೋನು ಗೌಡ ಬಿಗ್ ಬಾಸ್ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಸೋನು ಬಗ್ಗೆ ಎಂಟ್ರಿಯ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ಇದರ ನಡುವೆ ಸ್ಪರ್ಧಿಗಳು ತಮ್ಮ ಬದುಕಿನ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಈ ವೇಳೆ ಸೋನು ಗೌಡ ತಮ್ಮ ಇನ್ನೊಂದು ಖಾಸಗಿ ವಿಡಿಯೋವೊಂದು ಲೀಕ್ ಬಗ್ಗೆ ಮಾತನಾಡಿದ್ದಾರೆ.

    ಇಂಟರ್‌ನೆಟ್‌ನ ಸೆನ್ಸೇಷನ್ ಸ್ಟಾರ್ ಸೋನು ಗೌಡ ಇದೀಗ ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾನು ಯಾರು ಟಾಸ್ಕ್ ನೀಡಲಾಗಿತ್ತು. ಈ ವೇಳೆ ಎಲ್ಲಾ ಸ್ಪರ್ಧಿಗಳು ತಮ್ಮ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಸೋನು ಗೌಡ ಕೂಡ ತಮ್ಮ ವೀಡಿಯೋ ಲೀಕ್ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ.

    ನನ್ನ ಪರಿಚಯದ ವ್ಯಕ್ತಿಯೊಬ್ಬ ನನ್ನ ಜೊತೆ ಮೂರು ವರ್ಷ ಇದ್ದ. ಅವನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ.ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ ಎಂದು ಸೋನು ಗೌಡ ಹೇಳಿದ್ದಾರೆ. ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ. ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:ಪೊಲೀಸ್ ಠಾಣೆ ತಲುಪಿದ ನಿರ್ಮಾಪಕರ ವಲಯದ ಚುನಾವಣೆ ಪ್ರಕ್ರಿಯೆ

    ಇದೀಗ ಆ ವ್ಯಕ್ತಿಯ ಬಳಿ ಸೋನು ಅವರ ಇನ್ನೊಂದು ವಿಡಿಯೋ ಇದೆಯಂತೆ. ವಿಡಿಯೋ ಲೀಕ್ ಆದ ಬಳಿಕ ನಾನು ಅಪ್ಪನ ಮನೆಗೆ ಒಮ್ಮೆಯೂ ಹೋಗಿಲ್ಲ. ಯಾಕೆಂದರೆ ನನಗೆ ಮುಖ ತೋರಿಸೋಕೆ ಆಗ್ತಾ ಇಲ್ಲ. ತಪ್ಪು ಮಾಡಿದ್ದೀನಿ. ಅದನ್ನು ಒಪ್ಪಿಕೊಳ್ತೇನೆ. ಹುಡುಗಿಯರು ನನ್ನ ರೀತಿ ಸ್ಟ್ರಾಂಗ್ ಆಗಿರಿ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ. ಅವನ ಬಳಿ ಇದ್ದಿದ್ದು ಎರಡು ವಿಡಿಯೋ. ಒಂದು ವಿಡಿಯೋ ಲೀಕ್ ಮಾಡಿದ್ದಾನೆ. ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾವ ಹುಡುಗಿಯರಿಗೂ ಆಗಬಾರದು ಎಂದು ಸೋನು ಗೌಡ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ಬಿಗ್ ಬಾಸ್ ನ ಹವಾ ಜೋರಾಗಿದೆ. ಶೋನ್‌ನಲ್ಲಿ  16 ಸ್ಪರ್ಧಿಗಳಲ್ಲಿ ಒಬ್ಬರಾದ ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯ ಅಯ್ಯರ್ ಕೂಡ‌ ಸದ್ದು ಮಾಡ್ತಿದ್ದಾರೆ. ಇನ್ನು ಸ್ಪರ್ಧಿಗಳ ಜೀವನವನ್ನು ಪರಿಚಯಿಸಲು ‘ಬಿಗ್ ಬಾಸ್’ ಟಾಸ್ಕ್ ವೊಂದನ್ನು ನೀಡಿದ್ದರು. ಅದೇ ‘ನಾನು ಯಾರು?’. ತಮ್ಮ ತಮ್ಮ ಜೀವನದ ಕುರಿತು ಸ್ಪರ್ಧಿಗಳು ‌ಮಾತನಾಡಬೆಕು. ಇದೇ ಟಾಸ್ಕ್‌ನಲ್ಲಿ ಸಾನ್ಯ ಅಯ್ಯರ್ ತಮಗೆ ಎದುರಾದ ಕಷ್ಟ ಮತ್ತು ತಮ್ಮ ಸವಾಲಿನ ಬಗ್ಗೆ ಮನಬಿಚ್ಚಿ ಮಾತನಾಡಿದರು.

    ಅಮ್ಮ, ಚಿಕ್ಕಮ್ಮ, ನನ್ನನ್ನ ಕ್ಷಮಿಸಿ ಎಂದ್ಹೇಳುತ್ತಾ, ತಮ್ಮ ಜೀವನದ ಕರಾಳ ವಿಚಾರವನ್ನು ಸಾನ್ಯ ವಿವರಿಸಿದ್ದಾರೆ. ನನ್ನ ಚಿಕ್ಕಮ್ಮ ಅವರದ್ದು ಅಬ್ಯೂಸಿವ್ ಮ್ಯಾರೇಜ್. ನನ್ನ ಕಣ್ಣೇದುರೇ ಚಿಕ್ಕಮ್ಮ ಏಟು ತಿನ್ನುತ್ತಿದ್ದರು. ಇದು ನನಗೆ ಮಾನಸಿಕವಾಗಿ ಪರಿಣಾಮ ಬೀರಿತ್ತು. ರಿಲೇಶನ್‌ಶಿಪ್ ಅಂದ್ರೆ ಹೀಗೇ ಅಂತ ನಾನು ಅಂದುಕೊಂಡಿದ್ದೆ. ನಾನೂ ಕೂಡ ಒಂದು ರಿಲೇಶನ್‌ಶಿಪ್‌ನಲ್ಲಿದ್ದೆ. ಅದೂ ಕೂಡ ಅಬ್ಯೂಸಿವ್ ಆಗಿತ್ತು. ನಾನು ಅವನಿಗಾಗಿ ನಟನಾ‌ ಕ್ಷೇತ್ರ ಬಿಡಲು ತಯಾರಿದ್ದೇ. ರಿಲೇಶನ್‌ಶಿಪ್ ಉಳಿಯಬೇಕು ಎಂಬ ಕಾರಣಕ್ಕೆ ಎಲ್ಲಾ ತ್ಯಾಗಕ್ಕೂ ರೆಡಿಯಾಗಿದ್ದೆ. ಆದರೂ ಅದು ವರ್ಕ್ ಆಗಲಿಲ್ಲ. ಇದನ್ನೂ ಓದಿ: ಮೈ ತುಂಬಾ ಬಟ್ಟೆ ಹಾಕು ಅಂದಿದ್ದಕ್ಕೆ, ಉರ್ಫಿಗೆ ಬಂತು ಜ್ವರ

    ನನ್ನ ನಂಬಿಕೆಗೆ ಮೋಸ ಆಗಿದ್ದು, ನನ್ನ ಮಲತಂದೆಯಿಂದ  ನನ್ನ ತಾಯಿ ಎರಡು ಬಾರಿ ಮದುವೆಯಾಗಿದ್ದರು. ಒಬ್ಬರು ನನ್ನ ಬಯೋಲಾಜಿಕಲ್ ಫಾದರ್. ಮತ್ತೊಬ್ಬರು ಮಲತಂದೆ. ಬಯೋಲಾಜಿಕಲ್ ಫಾದರ್‌ ಜೊತೆ ಸಂಬಂಧ ಅಷ್ಟಕಷ್ಟೆ. ಮಲತಂದೆ ಜೊತೆ ನನ್ನ ರಿಲೇಶನ್‌ಶಿಪ್ ಚೆನ್ನಾಗಿತ್ತು. ಆದರೆ ನಾನು ಬೆಳೆದಿದ್ದೇ ಅವರ ಜೊತೆ. ನನ್ನಮ್ಮನಿಗೆ ಅವರು ಫ್ರೆಂಡ್ ಆಗಿದ್ದಾಗಿನಿಂದಲೂ ನನಗೆ ಅವರು ಗೊತ್ತಿತ್ತು. ಆದ್ರೆ, ಮದುವೆ ಆದ್ಮೇಲೆ ನನ್ನಮ್ಮನಿಗೆ ಗೊತ್ತಾಯಿತು ಅದು ತಪ್ಪಾದ ನಿರ್ಧಾರ ಅಂತ’’

    ಮಲತಂದೆ ನನ್ನ ತಾಯಿ ಜೊತೆನೇ ಇರಬೇಕು ಎಂಬ ಕಾರಣಕ್ಕೆ ನನ್ನ ಹೆಸರನ್ನ ಹಾಳು ಮಾಡಲು ಮುಂದಾಗ್ತಾರೆ. ಹೇಗೆ ಅಂದ್ರೆ, ನನ್ನ ಬಾಯ್‌ಫ್ರೆಂಡ್ ಜೊತೆ ನಾನಿದ್ದ ವಿಡಿಯೋವನ್ನು ರೆಕಾರ್ಡ್ ಮಾಡ್ತಾರೆ. ನನ್ನಮ್ಮನನ್ನ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನನ್ನ ವಿಡಿಯೋನ ಇಟ್ಟುಕೊಂಡು ಮೊದಲು ಅಜ್ಜಿಗೆ, ಚಿಕ್ಕಮ್ಮಗೆ ತೋರಿಸ್ತಾರೆ. ಆ ವಿಡಿಯೋದಲ್ಲಿ ಏನೂ ಇರಲಿಲ್ಲ. ಆದರೂ ಅವಮಾನ ಮಾಡ್ತಾರೆ.

    ಸಿಂಗಲ್ ಪೇರೆಂಟ್ ಆಗಿ ದೀಪಾ ತನ್ನ ಮಗಳನ್ನ ಹ್ಯಾಂಡಲ್‌ ಮಾಡೋಕೆ ಆಗುತ್ತಿಲ್ಲ. ಅವರಿಗೆ ಒಬ್ಬ ಮೇಲ್ ಫಿಗರ್ ಬೇಕು ಅಂತ ಚೀಪ್ ಟ್ರಿಕ್ ಯೂಸ್ ಮಾಡ್ತಾರೆ. ನಾನು ಅವರನ್ನ ಅಪ್ಪ ಅಂತ ಬಾಯ್ತುಂಬ ಕರೆದಿದ್ದೀನಿ. ಅವರ ಕೈತುತ್ತು ತಿಂದಿದ್ದೀನಿ. ಆದರೆ, ಅವರು ನನ್ನಮ್ಮ ತಲೆತಗ್ಗಿಸುವ ಹಾಗೆ ಮಾಡಿಬಿಟ್ಟರು. ನನಗೆ ತಂದೆ ಪ್ರೀತಿ ಸಿಕ್ಕಿರಲಿಲ್ಲ. ಆ ಪ್ರೀತಿಯನ್ನ ಇನ್ನೊಬ್ಬರಿಂದ ನಾನು ನಿರೀಕ್ಷೆ ಮಾಡುತ್ತಿದ್ದೆ. ಈಗ ಹಾಗೆ ಮಾಡಲ್ಲ. ನಾನು ಸ್ವಾವಲಂಬಿ ಆಗಿರುತ್ತೇನೆ. ಇದೆಲ್ಲಾ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ನಟಿ ಸಾನ್ಯ ಅಯ್ಯರ್ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಫಿನಾಡು ಚಂದು ಬಿಗ್ ಬಾಸ್ ಓಟಿಟಿ ಎಂಟ್ರಿಗೆ ಕಾಯ್ತಿದ್ದ ಫ್ಯಾನ್ಸ್‌ಗೆ ಬೇಸರ

    ಕಾಫಿನಾಡು ಚಂದು ಬಿಗ್ ಬಾಸ್ ಓಟಿಟಿ ಎಂಟ್ರಿಗೆ ಕಾಯ್ತಿದ್ದ ಫ್ಯಾನ್ಸ್‌ಗೆ ಬೇಸರ

    ಬಿಗ್ ಬಾಸ್ ಓಟಿಟಿ ಶುರುವಾಗುವ ಮುನ್ನ ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಸದ್ದು ಮಾಡಿತ್ತು. ಹಾಗೆಯೇ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಕಾಫಿನಾಡು ಚಂದು ಕೂಡ ಎಂಟ್ರಿ ಕೊಡುತ್ತಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಕಾಫಿನಾಡು ಚಂದು ಎಂಟ್ರಿಗೆ, ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

    ಹುಟ್ಟುಹಬ್ಬಕ್ಕೆ ಸಾಂಗ್ ಹೇಳುವ ಮೂಲಕ ಜನಮನ ಗೆದ್ದ ಪ್ರತಿಭೆ ಕಾಫಿನಾಡು ಚಂದು ಇತ್ತೀಚೆಗೆ ಬಿಗ್‌ಬಾಸ್‌ಗೆ ಹೋಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಅವರು ಹೋಗೋದು ಫಿಕ್ಸ್ ಆಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಕಾಫಿನಾಡು ಚಂದು ಅಭಿಮಾನಿಗಳು ಸಹ ಬಿಗ್‌ಬಾಸ್ ಮನೆ ಒಳಗೆ ಅವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಆದರೆ ಅವರಿಗೆ ನಿರಾಸೆ ಆಗಿದೆ. ಈ ಬಾರಿ ಚಂದು ಬಿಗ್ ಬಾಸ್‌ಗೆ ಹೋಗಿಲ್ಲ. ಇದನ್ನೂ ಓದಿ:ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಅಂದ್ರು: ಅಮ್ಮನ ನೆನೆದು ಸ್ಪೂರ್ತಿ ಗೌಡ ಭಾವುಕ

     

    View this post on Instagram

     

    A post shared by Coffe nadu chandu (@coffeenaduchandu)

    ಇನ್ನು ಈ ಬಾರಿ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಆಗಿದೆ. ಇದು ಕೇವಲ ವೂಟ್‌ನಲ್ಲಿ ಮಾತ್ರ ಲಭ್ಯವಿದೆ. ಹಾಗಾಗಿ ಪ್ರತಿಯೊಬ್ಬರಿಗೂ ನಿನ್ನೆಯ ಕಾರ್ಯಕ್ರಮ ನೋಡಲು ಸಾಧ್ಯವಾಗಿಲ್ಲ. ಬಹುತೇಕ ಜನರು ಕಾಫಿನಾಡು ಚಂದು ಒಳಗೆ ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ. ಹುಟ್ಟುಹಬ್ಬಕ್ಕೆ ವಿಶ್ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಅಪಾರ ಅಭಿಮಾನಿಗಳ ಮನಗೆದ್ದಿರುವ ಚಂದು ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಕ್ಯೂರಿಯಸ್ ಆಗಿದ್ದರು. ಈಗ ಅವರು ಹೋಗಿಲ್ಲ ಎಂಬ ವಿಚಾರ ತಿಳಿದು ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಬಿಗ್ ಬಾಸ್ ಟಿವಿ ಶೋ ಸೀಸನ್ 9ಕ್ಕೆ, ಬರಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]