Tag: ಬಿಗ್ ಬಜಾರ್

  • ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

    ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

    ಮುಂಬೈ: ಫೇಸ್‌ಬುಕ್‌ ಜೊತೆ ಸೇರಿ ಕಿರಾಣಿ ಉದ್ಯಮಗಳಿಗೆ ಸಹಾಯ ಮಾಡಲು ಜಿಯೋ ಮಾರ್ಟ್‌ ತೆರೆದಿದ್ದ ಮುಕೇಶ್‌ ಅಂಬಾನಿ ಈಗ ಸೂಪರ್‌ ಮಾರ್ಕೆಟ್‌ ಕಂಪನಿ ಬಿಗ್‌ ಬಜಾರ್‌ ಅನ್ನೇ ಶಾಪಿಂಗ್‌ ಮಾಡಿದ್ದಾರೆ.

    ರಿಲಯನ್ಸ್‌ ಇಂಡಸ್ಟ್ರೀಸ್‌ ಬಿಗ್‌ ಬಜಾರ್‌ ಮಾಲೀಕತ್ವ ಹೊಂದಿರುವ ಫ್ಯೂಚರ್‌ ಗ್ರೂಪ್‌ ಅನ್ನು 24,713 ಕೋಟಿ ರೂ.ಗಳಿಗೆ ಖರೀದಿಸಿದೆ. ಫ್ಯೂಚರ್‌ ಗ್ರೂಪ್‌ ತನ್ನ ಐದು ಕಂಪನಿಗಳನ್ನು ಒಟ್ಟು ಸೇರಿಸಿ ‘ಫ್ಯೂಚರ್‌ ಎಂಟರ್‌ಪ್ರೈಸಸ್‌’ ಹೆಸರಿನಲ್ಲಿ ರಿಲಯನ್ಸ್‌ಗೆ ಮಾರಾಟ ಮಾಡಿದೆ. ಇದನ್ನೂ ಓದಿ: ಫೇಸ್‌ಬುಕ್‌ ಬಳಿಕ ಜಿಯೋದಲ್ಲಿ ಭಾರೀ ಹೂಡಿಕೆ ಮಾಡಲಿದೆ ಗೂಗಲ್‌

    ಕಿಶೋರ್‌ ಬಿಯಾನಿ ಮಾಲಿಕತ್ವದ ಫ್ಯೂಚರ್‌ ಗ್ರೂಪ್‌ ಬಿಗ್‌ ಬಜಾರ್‌, ಫುಡ್‌ ಬಜಾರ್‌, ಲೈಫ್‌ಸ್ಟೈಲ್‌ ಸ್ಟೋರ್‌ಗಳನ್ನು ಒಳಗೊಂಡಿದೆ. ಫ್ಯೂಚರ್‌ ಗ್ರೂಪ್‌ ಬ್ರ್ಯಾಂಡ್‌ ಫ್ಯಾಕ್ಟರಿ, ನೀಲಗಿರೀಸ್‌, ಎಫ್‌ಬಿಬಿ, ಸೆಂಟ್ರಲ್‌, ಈಸಿಡೇನಂಥ ಮಳಿಗೆಗಳು, ಲೀ ಕೂಪರ್‌, ಹೆರಿಟೇಜ್‌ ಫ್ರೆಷ್‌, ಗೋಲ್ಡನ್‌ ಹಾರ್ವೆಸ್ಟ್‌, ಡಿಜೆ & ಜಿ, ಕೊರ್ಯೋ ಮೊದಲಾದ ಬ್ರ್ಯಾಂಡ್‌ಗಳನ್ನು ಹೊಂದಿದೆ. ಇನ್ನು ಮುಂದೆ ಇವುಗಳೆಲ್ಲ ರಿಲಯನ್ಸ್‌ ಇಂಡಸ್ಟ್ರೀಸ್‌ ಒಡೆತನಕ್ಕೆ ಸೇರಲಿವೆ. ಇದನ್ನೂ ಓದಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    ಫ್ಯೂಚರ್‌ ಗ್ರೂಪ್‌ನ ಸಾಲ ಪಾವತಿಗೆ ರಿಲಯನ್ಸ್‌ 13 ಸಾವಿರ ಕೋಟಿ ರೂಪಾಯಿ ನೀಡಲಿದ್ದರೆ, ಬಾಕಿ ಪಾವತಿಗೆ 7 ಸಾವಿರ ಕೋಟಿ ರೂಪಾಯಿ ನೀಡಲಿದೆ. ದೇಶದ ಒಟ್ಟು 420 ನಗರಗಳಲ್ಲಿ ಬಿಗ್‌ ಬಜಾರ್‌ ಮಳಿಗೆಗಳನ್ನು ತೆರೆದಿದೆ. ಫ್ಯೂಚರ್‌ ಗ್ರೂಪ್‌ ಖರೀದಿಯೊಂದಿಗೆ ರಿಲಯನ್ಸ್‌ ತೆಕ್ಕೆಗೆ ಒಟ್ಟು 1,800 ಮಳಿಗೆಗಳು ಸಿಗಲಿವೆ.

    ಮಾರಾಟ ಮಾಡಿದ್ದು ಯಾಕೆ?
    2001ರಲ್ಲಿ ಮೊದಲ ಬಿಗ್‌ ಬಜಾರ್‌ ಮಳಿಗೆ ಸ್ಥಾಪನೆಗೊಂಡಿತ್ತು. 2007ರಲ್ಲಿ ಫ್ಯೂಚರ್‌ ಗ್ರೂಪ್‌ ವಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿತ್ತು. ಈ ಸಂದರ್ಭದಲ್ಲಿ ವಿಶ್ವದಲ್ಲಿ ಆರ್ಥಿಕ ಕುಸಿತ ಸಂಭವಿಸಿತ್ತು. ಇದರಿಂದಾಗಿ ಫ್ಯೂಚರ್‌ ಗ್ರೂಪ್‌ಗೆ ಮೊದಲ ಪೆಟ್ಟು ಬಿದ್ದಿತ್ತು. ಇದಾದ ನಂತರ ಭಾರತದಲ್ಲಿನ ಆನ್‌ಲೈನ್‌ ಶಾಪಿಂಗ್‌ ಮಾರುಕಟ್ಟೆ ಬೆಳವಣಿಗೆ ಭಾರೀ ಹೊಡೆತ ನೀಡಿತು. ಇದರಿಂದಾಗಿ ಕಂಪನಿಯ ಸಾಲ ಏರತೊಡಗಿತು. ಈ ವರ್ಷ ಕೋವಿಡ್‌ 19ನಿಂದ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿತ್ತು. ಈ ಕಾರಣಕ್ಕೆ ಕಿಶೋರ್‌ ಬಿಯಾನಿ ಫ್ಯೂಚರ್‌ ಗ್ರೂಪ್‌ ಅನ್ನೇ ಮಾರಾಟ ಮಾಡಿದ್ದಾರೆ.

    ರೇಟಿಂಗ್ ಏಜೆನ್ಸಿ ಐಸಿಆರ್‌ಎ(ಕ್ರೇಡಿಟ್‌ ರೇಟಿಂಗ್‌ ಏಜೆನ್ಸಿ ಆಫ್‌ ಇಂಡಿಯಾ) ಪ್ರಕಾರ, ಫ್ಯೂಚರ್ ಗ್ರೂಪ್‌ ಕಂಪನಿಗಳ ಸಾಲವು 2019ರ ಮಾರ್ಚ್‌ ವೇಳೆಗೆ 10,951 ಕೋಟಿ ರೂ. ಇದ್ದರೆ 2019 ರ ಸೆಪ್ಟೆಂಬರ್ 30 ರ ವೇಳೆಗೆ 12,778 ಕೋಟಿ ರೂ.ಗೆ ಏರಿಕೆ ಆಗಿತ್ತು.

    ಮುಕೇಶ್‌ ಅಂಬಾನಿ ಪ್ಲಾನ್ ಏನು‌?
    ಮುಕೇಶ್‌ ಅಂಬಾನಿ ಇಂಧನ ಕ್ಷೇತ್ರದ ಬಳಿಕ ತಮ್ಮ ಹೂಡಿಕೆಯನ್ನು ಟೆಲಿಕಾಂ ಕಂಪನಿಯಲ್ಲಿ ಮಾಡಿದ್ದರು. ಜಿಯೋ ಸ್ಥಾಪಿಸಿ ಕಡಿಮೆ ದರದಲ್ಲಿ ಡೇಟಾ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯನ್ನೇ ಅಲುಗಡಿಸಿದ್ದರು. ಈಗ ಕಿರಾಣಿ ಮತ್ತು ರಿಟೇಲ್‌ ವ್ಯವಹಾರದತ್ತ ಅಂಬಾನಿ ಕಣ್ಣು ಹಾಕಿದ್ದಾರೆ. ಈಗಾಗಲೇ ಜಿಯೋದಲ್ಲಿ ಫೇಸ್‌ಬುಕ್‌ 43,573.62 ಕೋಟಿ ರೂ.(ಶೇ.9.99) ಹೂಡಿಕೆ ಮಾಡಿದೆ. ವ್ಯವಹಾರದ ಮುಂದಿನ ಭಾಗವಾಗಿ ಮುಕೇಶ್‌ ಅಂಬಾನಿ ಫ್ಯೂಚರ್‌ ಗ್ರೂಪ್‌ ಕಂಪನಿಗಳನ್ನು ಖರೀದಿ ಮಾಡಿದ್ದಾರೆ.

  • ಮಾಲ್‌ನಲ್ಲಿ ಕದ್ದು ಸಿಕ್ಕಿಬಿದ್ದ ತುಳಸಿಪ್ರಸಾದ್!

    ಮಾಲ್‌ನಲ್ಲಿ ಕದ್ದು ಸಿಕ್ಕಿಬಿದ್ದ ತುಳಸಿಪ್ರಸಾದ್!

    ಬೆಂಗಳೂರು: ತನ್ನ ವಿಶಿಷ್ಟ ಧ್ವನಿಯಲ್ಲಿ ಗಾಯನ ಹಾಗೂ ಡಬ್ ಸ್ಮ್ಯಾಶ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಗಳನ್ನು ಹೊಂದಿರುವ ತುಳಸಿ ಪ್ರಸಾದ್ ವಿರುದ್ಧ ಕಳ್ಳತನದ ಆರೋಪವೊಂದು ಕೇಳಿಬಂದಿದೆ.

    ಬೆಂಗಳೂರಿನ ಬಿಗ್ ಬಜಾರ್ ವೊಂದರಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಈ ಕುರಿತು ಆತನಿಗೆ ಬಿಗ್ ಬಜಾರ್ ಸಿಬ್ಬಂದಿ ಆತನನ್ನು ಬೆವರಿಳಿಸಿದ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ವಿಡಿಯೋದಲ್ಲೇನಿದೆ?:
    ವಸ್ತುಗಳನ್ನು ಯಾಕೆ ಕದ್ರಿ. ಫೇಸ್ ಬುಕ್ ನಲ್ಲಿ ಫ್ಯಾನ್ಸ್ ಆಗಿದ್ದಾರೆ. ತುಂಬಾ ಜನ ಲೈವ್ ನೋಡ್ತಿದ್ದಾರೆ. ಕಳ್ಳತನ ಮಾಡೋಕೆ ನಾಚಿಕೆ ಆಗಲ್ವ ಅಂತ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ ಈ ವೇಳೆ ತುಳಸಿಪ್ರಸಾದ್ ಬಿಗ್ ಬಜಾರ್ ನಲ್ಲಿ ಅಮಾಯಕನಂತೆ ನಿಂತಿದ್ದಾನೆ.

    ಬಿಗ್ ಬಜಾರ್ ಗೆ ಎಂಟ್ರಿ ಕೊಟ್ಟಿರುವ ತುಳಸಿಪ್ರಸಾದ್, ಅಲ್ಲಿ ಹಲವು ವಸ್ತುಗಳನ್ನು ಜೇಬಿಗಿಳಿಸಿಕೊಂಡಿದ್ದಾನೆ. ಬಳಿಕ ಮಾಲ್ ನಿಂದ ಹೊರಗೆ ಹೋಗುವಾಗ ಸೆಕ್ಯೂರಿಟಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಈ ಘಟನೆ ಯಾವಾಗ ನಡೆದಿದೆ ಎಂಬುದಾಗಿ ತಿಳಿದುಬಂದಿಲ್ಲ. ಅಲ್ಲದೇ ಘಟನೆ ಬಗ್ಗೆ ತುಳಸಿಪ್ರಸಾದ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಿನ ಜಿಟಿ ಮಾಲ್‍ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ದುರ್ಮರಣ

    ಬೆಂಗ್ಳೂರಿನ ಜಿಟಿ ಮಾಲ್‍ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ದುರ್ಮರಣ

    ಬೆಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಇಂದು ನಗರದಲ್ಲಿ ನಡೆದಿದೆ.

    ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಈ ದುರಂತ ಸಂಭವಿಸಿದ್ದು, ಮೃತ ದುರ್ದೈವಿಯನ್ನು 40 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ಕೆಪಿ ಅಗ್ರಹಾರದ ನಿವಾಸಿಯಾಗಿದ್ದು ಜಿಟಿ ಮಾಲ್ ನ ಬಿಗ್ ಬಜಾರ್ ನಲ್ಲಿ ಕೆಲಸ ಮಾಡುತ್ತಿದ್ದರು.

    ಶ್ರೀನಿವಾಸ್ ಇಂದು ಲಿಫ್ಟ್ ನಲ್ಲಿ ಗೂಡ್ಸ್ ಹಾಕಿಕೊಂಡು ಹೋಗುವಾಗ ಲಿಫ್ಟ್ ಆಫ್ ಆಗಿತ್ತು. ಈ ವೇಳೆ ಲಿಫ್ಟ್ ನಲ್ಲಿ ಸಿಲುಕಿದ್ದ ಶ್ರೀನಿವಾಸ್ ಬಗ್ಗಿದಾಗ ಲಿಫ್ಟ್ ತಲೆಗೆ ಬಡಿದಿದೆ. ಪರಿಣಾಮ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://www.youtube.com/watch?v=NT4mgAvc1yc