Tag: ಬಾಹುಬಲಿ ರಾಕೆಟ್

  • ಇಂದು ಚಂದ್ರಯಾನ-3 ಉಡಾವಣೆ – ನಿಮಗೆ ತಿಳಿದಿರಲೇ ಬೇಕಾದ 10 ಅಂಶಗಳು

    ಇಂದು ಚಂದ್ರಯಾನ-3 ಉಡಾವಣೆ – ನಿಮಗೆ ತಿಳಿದಿರಲೇ ಬೇಕಾದ 10 ಅಂಶಗಳು

    ಶ್ರೀಹರಿಕೋಟ: ಮತ್ತೊಂದು ಐತಿಹಾಸಿಕ ಸಾಧನೆಯತ್ತ ಇಸ್ರೋ (ISRO) ಹೆಜ್ಜೆ ಇಟ್ಟಿದೆ. ಶುಭ ಶುಕ್ರವಾರವಾದ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಭಾರತದ ಗಗನನೌಕೆ ನಭಕ್ಕೆ ಚಿಮ್ಮಲಿದೆ. ಬಾಹುಬಲಿ ರಾಕೆಟ್ (Bahubali Rocket) ಎಂದೇ ಹೆಸರಾದ ಜಿಎಲ್‌ಎಲ್‌ವಿ ಮಾರ್ಕ್ 3 ರಾಕೆಟ್ ಇದನ್ನು ಹೊತ್ತೊಯ್ಯಲಿದೆ. ಚಂದ್ರಯಾನ-3 (Chandrayaan-3) ಉಡಾವಣೆ ಬಗ್ಗೆ ಈ 10 ಅಂಶಗಳನ್ನು ನೀವು ತಿಳಿದುಕೊಳ್ಳಲೇ ಬೇಕು.

    * ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನಲ್ಲಿ ಇಳಿಯುವ ಲ್ಯಾಂಡರ್ ವಿಕ್ರಮ್ ಅನ್ನು ಅಳವಡಿಸಲಾಗಿದೆ. ಇದು 43.5 ಮೀ ಎತ್ತರವಿದ್ದು, ಕುತುಬ್ ಮಿನಾರ್‌ನ ಅರ್ಧಕ್ಕಿಂತಲೂ ಹೆಚ್ಚು ಎತ್ತರವಾಗಿದೆ.
    * ಇಂದು ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಉಡಾವಣೆಯಾಗಲಿದೆ. ಇದು 40 ದಿನಗಳ ಕಾಲ ಅಂತರಿಕ್ಷದಲ್ಲಿ ಪ್ರಯಾಣಿಸಲಿದ್ದು, ಆಗಸ್ಟ್ 23 ಇಲ್ಲವೇ 24ರಂದು ಚಂದ್ರನ ಮೇಲೆ ಇಳಿಯಲಿದೆ.
    * 4 ವರ್ಷಗಳ ಹಿಂದೆ ಚಂದ್ರಯಾನ-2 ಪ್ರಯೋಗಿಸಿ ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್ ವೇಳೆ ಉಂಟಾದ ವೈಫಲ್ಯದಿಂದ ಪಾಠ ಕಲಿತ ಇಸ್ರೋ ಇದೀಗ ಮತ್ತಷ್ಟು ಉತ್ಸಾಹದೊಂದಿಗೆ ಚಂದ್ರಯಾನ-3 ಪ್ರಯೋಗಕ್ಕೆ ಸಜ್ಜಾಗಿದೆ.

    * 2008ರಲ್ಲಿ ಭಾರತದ ಮೊದಲ ಚಂದ್ರಯಾನ ಸಮಯದಲ್ಲಿ ಆದ ಸಂಶೋಧನೆಯೊಂದು ಜಗತ್ತನ್ನೇ ವಿಸ್ಮಯಗೊಳಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಣುಗಳು ಕಂಡುಬಂದಿದ್ದು, ಇದೀಗ ಚಂದ್ರಯಾನ-3 ಮೊದಲ ಬಾರಿಗೆ ಅದೇ ಸ್ಥಳದಲ್ಲಿ ಇಳಿಯಲಿದೆ.
    * ವಿಕ್ರಮ್ ಸುರಕ್ಷಿತ ಹಾಗೂ ನಾಜೂಕಿನಿಂದ ಚಂದ್ರನ ಮೇಲೆ ಇಳಿಯಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

    * ವಿಜ್ಞಾನಿಗಳು ಚಂದ್ರನ ಮಣ್ಣನ್ನು ವಿಶ್ಲೇಷಿಸಲು, ಚಂದ್ರನ ಮೇಲ್ಮೈ ಸುತ್ತಲೂ ತಿರುಗಲು ಹಾಗೂ ಚಂದ್ರನ ಕಂಪನಗಳನ್ನು ದಾಖಲಿಸಲಿಸಲು ಆಶಿಸಿದ್ದಾರೆ.
    * ಕಳೆದ ಬಾರಿಯ ಚಂದ್ರಯಾನದ ಮಿಷನ್‌ನಿಂದ ಸಾಕಷ್ಟು ವೈಜ್ಞಾನಿಕ ವಿಷಯಗಳನ್ನು ಕಲಿತಿದ್ದು, ಈ ಬಾರಿ ಲ್ಯಾಂಡರ್‌ನಲ್ಲಿ ಎಂಜಿನ್‌ಗಳ ಸಂಖ್ಯೆಯನ್ನು 5 ರಿಂದ 4ಕ್ಕೆ ಇಳಿಸಲಾಗಿದೆ. ಮಾತ್ರವಲ್ಲದೇ ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌

    * ಚಂದ್ರಯಾನ-3ರಲ್ಲಿ ಆರ್ಬಿಟರ್ ಅಳವಡಿಸಲಾಗಿಲ್ಲ. ಕೇವಲ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಮಾಡ್ಯೂಲ್ ಮಾತ್ರ ಇವೆ. ಏಕೆಂದರೆ ಚಂದ್ರಯಾನ-2ರಲ್ಲಿ ಪ್ರಯೋಗಿಸಿದ್ದ ಆರ್ಬಿಟರ್ 3 ವರ್ಷಗಳಿಂದ ಚಂದ್ರನ ಸುತ್ತ ತಿರುಗುತ್ತಾ ತನ್ನ ಕೆಲಸವನ್ನು ಮಾಡುತ್ತಿದೆ.
    * ಚಂದ್ರಯಾನ-1 ಚಂದ್ರನ ಕಾರ್ಯಾಚರಣೆಯ ಭಾರತದ ಮೊದಲ ಮಿಷನ್ ಆಗಿತ್ತು. ಅಕ್ಟೋಬರ್ 2008 ರಲ್ಲಿ ಪ್ರಾರಂಭವಾದ ಮಿಷನ್ 2009ರ ಆಗಸ್ಟ್ ವರೆಗೆ ಕಾರ್ಯನಿರ್ವಹಿಸಿತ್ತು.

    * 1969ರಲ್ಲಿ ಅಮೆರಿಕಾದ ನಾಸಾ ಕಳಿಸಿದ ಅಪೋಲೋ 11 ಎಂಬ ಮಾನವಸಹಿತ ರಾಕೆಟ್ 4 ದಿನಗಳಲ್ಲಿ ಗಮ್ಯ ಸ್ಥಾನವನ್ನು ಸೇರಿತ್ತು. ಆದರೆ ಇಸ್ರೋ ಜುಲೈ 14 ರಂದು ಕಳಿಸುತ್ತಿರುವ ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ಸೇರಲು 40 ದಿನ ಹಿಡಿಯಲಿದೆ. ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ 3ನೇ ಹೆಜ್ಜೆ ಇಡಲು ಕ್ಷಣಗಣನೆ; ಚಂದ್ರಯಾನ-1, 2 ಕ್ಕೆ ಹೋಲಿಸಿದ್ರೆ ಚಂದ್ರಯಾನ-3 ಹೇಗೆ ಭಿನ್ನ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿನ ಕಲಾವಿದನ ಕೈಯಲ್ಲಿ ಮೂಡಿತು ಚಿನ್ನದ ಚಂದ್ರಯಾನ-2

    ಬೆಂಗ್ಳೂರಿನ ಕಲಾವಿದನ ಕೈಯಲ್ಲಿ ಮೂಡಿತು ಚಿನ್ನದ ಚಂದ್ರಯಾನ-2

    ಬೆಂಗಳೂರು: ಚಂದ್ರಯಾನ-2 ಉಪಗ್ರಹ ಚಂದ್ರನ ಮುತ್ತಿಕ್ಕುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಭಾರತ ಕಾತುರದಿಂದ ಕಾಯುತ್ತಿದೆ. ಆದರೆ ಸಿಲಿಕಾನ್ ಸಿಟಿಯ ಕಲಾವಿದರೊಬ್ಬರು ತಮ್ಮ ಕಲೆಯ ಮೂಲಕ ವಿಭಿನ್ನವಾಗಿ ಚಂದ್ರಯಾನ-2ಕ್ಕೆ ಶುಭಹಾರೈಸಿದ್ದಾರೆ.

    ಬೆಂಗಳೂರಿನ ಶ್ರೀರಾಮ್‍ಪುರದ ನಿವಾಸಿ ಅಕ್ಕಸಾಲಿಗರಾದ ನಾಗರಾಜ್ ರೇವಣಕರ್ ಚಿನ್ನದಲ್ಲಿ ಮಿನಿ ಚಂದ್ರಯಾನ-2 ಆಕೃತಿ ತಯಾರಿಸಿದ್ದಾರೆ. ನಾಗರಾಜ್ ಅವರು ಕಲಾವಿದರಾಗಿದ್ದು, 2 ಗ್ರಾಂ 700 ಮಿಲಿಗ್ರಾಂ ಚಿನ್ನದಲ್ಲಿ ಬಾಹುಬಲಿ ರಾಕೆಟ್ ತಯಾರಿಸಿದ್ದು, ಈ ಆಕೃತಿ ಸ್ಟಾಂಡ್ ಸೇರಿ 4.5 ಸೆಂಟಿಮೀಟರ್ ಎತ್ತರವಿದೆ. ಜೊತೆಗೆ ತ್ರಿವರ್ಣ ಧ್ವಜ, ಇಂಡಿಯಾ ಹಾಗೂ ಇಸ್ರೋ ಹೆಸರನ್ನು ಕೂಡ ಇದರ ಮೇಲೆ ಬರೆಯಲಾಗಿದೆ.

    ಈ ಚಿನ್ನದ ಚಂದ್ರಯಾನ ತಯಾರಿಸಲು ನಾಗರಾಜ್ ಅವರು ಬರೋಬ್ಬರಿ 30 ಗಂಟೆಗಳ ಕಾಲ ಶ್ರಮಪಟ್ಟಿದ್ದಾರೆ. ಈ ಗೋಲ್ಡ್ ರಾಕೆಟ್ ಅನ್ನು ಭಾರತೀಯ ವಿಜ್ಞಾನಿಗಳಿಗೆ ಅರ್ಪಿಸುವುದಾಗಿ ನಾಗರಾಜ್ ತಿಳಿಸಿದ್ದಾರೆ. ಈ ಮಿನಿ ಚಂದ್ರಯಾನ-2ರ ಚಿನ್ನದ ಆಕೃತಿ ಸದ್ಯ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:ಇಸ್ರೋ ಐತಿಹಾಸಿಕ ಸಾಧನೆಗೆ ಕೆಲವೇ ಗಂಟೆ ಬಾಕಿ – ಚಂದ್ರನ ಅಂಗಳಕ್ಕೆ ಇಳಿಯಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್

    ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು `ಚಂದ್ರಯಾನ-2’ನ ವಿಕ್ರಮ್ ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆ(ಶನಿವಾರ ನಸುಕಿನಲ್ಲಿ) ಲ್ಯಾಂಡ್ ಆಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದು, ಇಲ್ಲಿಯ ವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಯು ತೆರಳದ ದಕ್ಷಿಣ ಧ್ರುವದ ಮೇಲೆ ಐತಿಹಾಸಿಕ ಲ್ಯಾಂಡಿಂಗ್‍ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.

    ಮೋದಿ ಅವರೊಂದಿಗೆ ಪ್ರೌಢಶಾಲೆಗಳ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಮೋದಿ ಹಾಗೂ ಮಕ್ಕಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಟಿವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ.

    ಈ ವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೇರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.