Tag: ಬಾಲ್

  • ಮೊದಲ ಏಕದಿನ ಪಂದ್ಯದಲ್ಲಿ ಬಾಲ್ ಬದಲಾವಣೆಯ ರಹಸ್ಯವೇನು?

    ಮೊದಲ ಏಕದಿನ ಪಂದ್ಯದಲ್ಲಿ ಬಾಲ್ ಬದಲಾವಣೆಯ ರಹಸ್ಯವೇನು?

    ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಮೊದಲ ಅವಧಿಯಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 3 ಓವರ್ ಆಗುವಷ್ಟರಲ್ಲೇ ಪಂದ್ಯದಲ್ಲಿ ಬಳಸುತ್ತಿದ್ದ ಹೊಸ ಬಾಲ್‍ನ್ನು ಬದಲಾವಣೆ ಮಾಡಲಾಗಿತ್ತು.

    ಕ್ರಿಕೆಟ್‍ನಲ್ಲಿ ಬಾಲ್‍ಗಳಲ್ಲಿ ಲೋಪ ಮತ್ತು ಸ್ಟೇಡಿಯಂನಿಂದ ಹೊರ ಹೋದ ಬಾಲ್ ಸಿಗದೆ ಇದ್ದಾಗ ಮಾತ್ರ ಚೆಂಡನ್ನು ಬದಲಾವಣೆ ಮಾಡಲಾಗುತ್ತದೆ. ಆದರೆ ಪುಣೆಯಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಆರಂಭದ 3 ನೇ ಓವರ್ ನಲ್ಲೇ ಬಾಲ್‍ನ್ನು ಬದಲಾಯಿಸಲು ಅಂಪೈರ್ ನಿರ್ಧಾರ ಮಾಡಿದ್ದರು.

    ಇದ್ದನ್ನು ಗಮನಿಸಿದ ಅಭಿಮಾನಿಗಳಲ್ಲಿ ಬಾಲ್ ಬದಲಾವಣೆಯ ಕುರಿತು ಭಾರೀ ಕೂತುಹಲ ಮೂಡಿಸಿತ್ತು. ಆದರೆ ಪಂದ್ಯ ಮುಗಿದ ಬಳಿಕ ಬಾಲ್ ಬದಲಾವಣೆಯ ಕಾರಣ ರೀವಿಲ್ ಆಗಿದೆ.

    ಭಾರತ ಬ್ಯಾಟಿಂಗ್ ಆರಂಭಿಸಿ 3ನೇ ಓವರ್ ವೇಳೆ ಹೊಸ ಬಾಲ್‍ನ್ನು ಅಂಪೈರ್ ಬದಲಾವಣೆಗಾಗಿ ಕೊಂಡೊಯ್ಯಲಾಗಿತ್ತು. ಶಿಖರ್ ಧವನ್ ಹೊಡೆದ ಬಾಲ್ ಬೌಂಡರಿ ಗೆರೆ ದಾಟಿದ ನಂತರ ಬಾಲ್‍ನ್ನು ಬದಲಾವಣೆ ಮಾಡಲಾಯಿತು. ಇದಕ್ಕೆ ಕಾರಣ ಚೆಂಡಿನಲ್ಲಿ ಇದ್ದಂತಹ ಸಣ್ಣ ತೂತು.

    ಮೊದಲ ಏಕದಿನ ಪಂದ್ಯದ ವೇಳೆ ಹೊಸ ಬಾಲ್‍ನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಕೇವಲ 16 ಎಸೆತ ಎಸೆಯುವಷ್ಟರಲ್ಲಿ ಬಾಲ್‍ನಲ್ಲಿ ಕಂಡು ಬಂದ ದೋಷವನ್ನು ಗಮನಿಸಿದ ಅಂಪೈರ್ ಬದಲಾವಣೆ ನಿರ್ಧರಿಸಿದ್ದರು. ಬಾಲ್ ಮೈದಾನದ ಬೌಂಡರಿ ರೋಪ್, ಮೈದಾನದಲ್ಲಿದ್ದ ವಸ್ತುವಿಗೆ ಅಥವಾ ಡಿಜಿಟಲ್ ಬೋರ್ಡ್‍ಗೆ ಬಡಿದ ಪರಿಣಾಮ ಬಾಲ್‍ನಲ್ಲಿ ತೂತು ಕಂಡು ಬಂದು ಬಾಲ್‍ನ ತೂಕ ಕಡಿಮೆಯಾಗಿತ್ತು. ಹೀಗಾಗಿ ಅಂಪೈರ್ ಚೆಂಡು ಬದಲಾವಣೆಯ ನಿರ್ಧಾರ ಕೈಗೊಳ್ಳಲಾಯಿತು.

  • ಬಿಯರ್ ಗ್ಲಾಸ್‍ಗೆ ಬಿತ್ತು ಸಿಕ್ಸರ್ ಬಾಲ್ – ಚೆಂಡು ತೆಗೆಯದೇ 1 ಪೆಗ್ ಏರಿಸಿದ

    ಬಿಯರ್ ಗ್ಲಾಸ್‍ಗೆ ಬಿತ್ತು ಸಿಕ್ಸರ್ ಬಾಲ್ – ಚೆಂಡು ತೆಗೆಯದೇ 1 ಪೆಗ್ ಏರಿಸಿದ

    ಸಿಡ್ನಿ: 2020ರ ಬಿಗ್ ಬ್ಯಾಷ್ ಲೀಗ್‍ನ 23ನೇ ಪಂದ್ಯದಲ್ಲಿ ಬ್ಯಾಟ್ಸ್ ಮ್ಯಾನ್ ಸಿಕ್ಸರ್ ಗೆ ಅಟ್ಟಿದ ಚೆಂಡು ಪ್ರೇಕ್ಷಕನ ಬಿಯರ್ ಗ್ಲಾಸ್ ಸೇರಿದೆ. ಚೆಂಡು ಗ್ಲಾಸ್ ನಲ್ಲಿ ಬೀಳುತ್ತಿದ್ದಂತೆ ಖುಷಿಗೊಂಡ ಪ್ರೇಕ್ಷಕ ಬಾಲ್ ತೆಗೆಯದೇ ಮತ್ತೊಂದು ಗುಟುಕು ಏರಿಸಿದ್ದಾನೆ. ಐಸಿಸಿ ವೀಡಿಯೋ ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

    ಮೆಲ್ವರ್ನ್ ಸ್ಟಾರ್ಸ್ ಮತ್ತು ಹೊಬಾರ್ಟ್ ಹರಿಕೆನ್ಸ್ ತಂಡಗಳ ನಡುವೆ ಮ್ಯಾಚ್ ನಡೆದಿತ್ತು. ಹೋಬಾರ್ಟ್ ತಂಡದ ಬ್ಯಾಟಿಂಗ್ ವೇಳೆ 16ನೇ ಓವರ್ ನಲ್ಲಿ ಡೇವಿಡ್ ಮಲನ್ ಅದ್ಭುತವಾದ ಸಿಕ್ಸ್ ಬಾರಿಸಿದರು. ಈ ಬಾಲ್ ನೇರವಾಗಿ ಗ್ಯಾಲರಿಯಲ್ಲಿ ಕುಳಿತಿದ್ದ ವೀಕ್ಷಕರ ಬಿಯರ್ ಗ್ಲಾಸ್ ನಲ್ಲಿ ಬಿತ್ತು. ಇದಕ್ಕೂ ಮುಂಚೆ ಯುವಕನೋರ್ವ ಈ ಬಾಲ್ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ್ದ. ಆದ್ರೆ ಆತನ ಕೈಗೆ ತಾಕಿದ ಬಾಲ್ ಬಿಯರ್ ಗ್ಲಾಸ್ ಸೇರಿಕೊಂಡಿತು.

    ಇತ್ತ ಫೀಲ್ಡರ್ ಬಾಲ್ ನೀಡುವಂತೆ ಹೇಳಿದಾಗ ಅಭಿಮಾನಿ ಗ್ಲಾಸ್ ನಲ್ಲಿದ್ದ ಬಾಲ್ ತೆಗೆಯದೇ ಒಂದು ಗುಟುಕು ಬಿಯರ್ ಕುಡಿದಿದ್ದಾನೆ. ಬಿಯರ್ ಖಾಲಿಯಾಗ್ತಿದ್ದಂತೆ ಬಾಲ್ ಎಸೆದಿದ್ದಾನೆ. ಬಿಯರ್ ಕುಡಿದಿದನ್ನ ನೋಡಿದ ಗ್ಯಾಲರಿಯಲ್ಲಿದ್ದ ಜನ ಚಪ್ಪಾಳೆ ಹೊಡೆದು ಜೋರಾಗಿ ಕೂಗಿದ್ದಾರೆ.

    ಈ ಪಂದ್ಯವನ್ನ ಹೋಬಾರ್ಟ್ ತಂಡ 21 ರನ್ ಗಳ ಅಂತರದಿಂದ ಗೆದ್ದು ಕೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಹೋಬಾರ್ಟ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಪೇರಿಸಿತ್ತು. ಡೇವಿಡ್ ಮಲಾನ್ 75 ರನ್ ಸೇರಿಸಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೋಬಾರ್ಟ್ ನೀಡಿದ ಮೊತ್ತವನ್ನ ಬೆನ್ನತ್ತಿದ ಮೆಲ್ವರ್ನ್ ಸ್ಟಾರ್ಸ್ 20 ಓವರ್ ಗಳಲ್ಲಿ 143 ರನ್ ಗಳಿಸಲು ಮಾತ್ರ ಶಕ್ತವಾಯ್ತು. ಮೆಲ್ಬರ್ನ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸವೆಲ್ 37 ಎಸೆತದಲ್ಲಿ 70 ರನ್ ಗಳಿಸಿ ತಂಡದ ಚೇತರಿಕೆಗೆ ಕಾರಣರಾಗಿದ್ದರು. 70 ರನ್ ನಲ್ಲಿ 4 ಫೋರ್ ಮತ್ತು 5 ಸಿಕ್ಸ್ ಸೇರಿವೆ.

  • ಕ್ಯಾಚ್ ಬಿಟ್ಟು ಬಾಲಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿಕೊಂಡ ಉತ್ತಪ್ಪ

    ಕ್ಯಾಚ್ ಬಿಟ್ಟು ಬಾಲಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿಕೊಂಡ ಉತ್ತಪ್ಪ

    ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಅವರು ಆಚಾನಕ್ ಆಗಿ ಬಾಲಿಗೆ ಎಂಜಲು ಹಚ್ಚಿ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

    ಕೊರೊನಾ ಕಾರಣದಿಂದ 6 ತಿಂಗಳ ತಡವಾಗಿ ಐಪಿಎಲ್ ಯುಎಇಯಲ್ಲಿ ಆರಂಭವಾಗಿದೆ. ಇಡೀ ವಿಶ್ವದಲ್ಲೇ ಕೊರೊನಾ ಇರುವ ಕಾರಣದಿಂದ ಬಿಸಿಸಿಐ ಕೆಲ ಹೊಸ ಕೊರೊನಾ ನಿಯಮಗಳನ್ನು ರಚಿಸಿಕೊಂಡು ಐಪಿಎಲ್ ಆಡಿಸುತ್ತಿದೆ. ಈ ನಿಯಮಗಳ ಪ್ರಕಾರ ಬಾಲಿಗೆ ಎಂಜಲು ಹಚ್ಚುವುದನ್ನು ನಿಷೇಧ ಮಾಡಿದೆ.

    ರಾಬಿನ್ ಉತ್ತಪ್ಪ ಎಡವಟ್ಟು
    ಟಾಸ್ ಸೋತ ಕೋಲ್ಕತ್ತಾ ತಂಡ ಮೊದಲು ಬ್ಯಾಟಿಂಗ್ ಬಂದಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಜಯದೇವ್ ಉನಾದ್ಕಟ್ ಅವರು ಇನ್ನಿಂಗ್ಸ್‍ನ ಮೂರನೇ ಓವರ್ ಬೌಲ್ ಮಾಡುತ್ತಿದ್ದರು. ಆಗ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ ಮ್ಯಾನ್ ಸುನಿಲ್ ನರೈನ್ ಅವರು ದೊಡ್ಡ ಹೊಡೆತಕ್ಕೆ ಕೈಹಾಕಿ ಉತ್ತಪ್ಪ ಅವರಿಗೆ ಕ್ಯಾಚ್ ನೀಡಿದರು. ಆದರೆ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ ಉತ್ತಪ್ಪ ಆ ನಂತರ ಬಾಲಿಗೆ ಎಂಜಲು ಹಚ್ಚಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.

    ಕೊರೊನಾ ಕಾರಣದಿಂದ ಬಾಲಿಗೆ ಎಂಜಲು ಹಚ್ಚುವುದನ್ನು ಐಪಿಎಲ್ ನಿಷೇಧ ಮಾಡಿದೆ. ಈ ನಿಯಮ ಐಸಿಸಿ ಕೂಡ ಜಾರಿಗೆ ತಂದಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲೂ ಬ್ಯಾನ್ ಮಾಡಲಾಗಿದೆ. ಜೊತೆಗೆ ಒಂದು ವೇಳೆ ಬಾಲಿಗೆ ಯಾವುದೇ ಆಟಗಾರ ಎಂಜಲು ಹಚ್ಚಿದರೆ ಎರಡು ಬಾರಿ ಎಚ್ಚರಿಕೆ ನೀಡುತ್ತಾರೆ. ಇದನ್ನೂ ಮೀರಿ ಮೂರನೇ ಬಾರಿ ತಪ್ಪು ಮಾಡಿದರೆ ಎದರುರಾಳಿ ತಂಡಕ್ಕೆ ಬೌಲಿಂಗ್ ಮಾಡುತ್ತಿದ್ದ ತಂಡ ಐದು ರನ್‍ಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಐಸಿಸಿ ನಿಯಮ ಮಾಡಿದೆ.

    https://twitter.com/ItsRaviMaurya/status/1311308712670195713

    ಕೋಲ್ಕತ್ತಾಗೆ ಸುಲಭ ಜಯ
    ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಸುಲಭವಾಗಿ ಜಯಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಶುಭ್‍ಮನ್ ಗಿಲ್ ಮತ್ತು ಇಯೋನ್ ಮೋರ್ಗಾನ್ ಅವರ ಉತ್ತಮ ಆಟದಿಂದ ನಿಗದಿತ 20 ಓವರಿನಲ್ಲಿ ಆರು ವಿಕೆಟ್ ಕಳೆದುಕೊಂಡು 175 ರನ್ ಟಾರ್ಗೆಟ್ ನೀಡಿತ್ತು.

    ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡ ಶಿವಮ್ ಮಾವಿ ಮತ್ತು ಕಮಲೇಶ್ ನಾಗರ್ಕೋಟಿ ಬೌಲಿಂಗ್‍ಗೆ ತತ್ತರಿಸಿ ಹೋಯ್ತು. ಪವರ್ ಪ್ಲೇ ಹಂತದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡಿತು. ನಾಯಕ ಸ್ಟೀವ್ ಸ್ಮಿತ್ ಮತ್ತು ಉತ್ತಮ ಲಯದಲ್ಲಿದ್ದ ಸಂಜು ಸಮ್ಸನ್ ಬೇಗ ಔಟ್ ಆದರು. ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೇ ಆಡುವ ಮೂಲಕ ಅರ್ಧ ಶತಕ ಬಾರಿಸಿದ ಟಾಮ್ ಕರ್ರನ್ ಅವರ ಪಂದ್ಯ ಗೆಲ್ಲಿಸುವ ಪ್ರಯತ್ನ ವಿಫಲವಾಗಿದ್ದು, ಈ ಮೂಲಕ 37 ರನ್‍ಗಳ ಅಂತರದಲ್ಲಿ ಕೋಲ್ಕತ್ತಾ ಜಯ ಗಳಿಸಿತು.

  • ಬಾಲ್‍ಗೆ ಸ್ಯಾನಿಟೈಸರ್ ಹಚ್ಚಿದ ಆಸಿಸ್ ಬೌಲರ್ ಅಮಾನತು

    ಬಾಲ್‍ಗೆ ಸ್ಯಾನಿಟೈಸರ್ ಹಚ್ಚಿದ ಆಸಿಸ್ ಬೌಲರ್ ಅಮಾನತು

    ಲಂಡನ್: ಚೆಂಡಿಗೆ ಸ್ಯಾನಿಟೈಸರ್ ಹಚ್ಚಿದ್ದಕ್ಕೆ ಆಸ್ಟ್ರೇಲಿಯಾದ ಅನುಭವಿ ಕೌಂಟಿ ಕ್ರಿಕೆಟ್ ಬೌಲರ್ ಮೀಚ್ ಕ್ಲೇಡನ್ ಅವರನ್ನು ಮಾನತು ಮಾಡಲಾಗಿದೆ.

    ಕೌಂಟಿ ಕ್ರಿಕೆಟ್‍ನಲ್ಲಿ ಮೀಚ್ ಕ್ಲೇಡನ್ ಅವರು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡದ ಪರವಾಗಿ ಆಡುತ್ತಾರೆ. ಕಳೆದ ತಿಂಗಳು ಮಿಡ್ಲ್‍ಸೆಕ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೀಚ್ ಕ್ಲೇಡನ್ ಮೂರು ವಿಕೆಟ್ ಪಡೆದಿದ್ದರು. ಈ ವೇಳೆ ಅವರು ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಾಲಿಗೆ ಹಾಕಿ ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಮೀಚ್ ಕ್ಲೇಡನ್ ಅವರು ಕಳೆದ ತಿಂಗಳು ನಡೆದ ಮಿಡ್ಲ್‍ಸೆಕ್ಸ್ ವಿರುದ್ಧ ಪಂದ್ಯದಲ್ಲಿ ಬಾಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹಚ್ಚಿ ವಿರೂಪಗೊಳಿಸಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತನ್ನ ವೆಬ್‍ಸೈಟಿನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

    ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್ ಆಟದಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದ ಪ್ರೋಟೋಕಾಲ್‍ಗಳನ್ನು ಹೊರಡಿಸಲಾಗಿದೆ. ಈ ನಿಯಮದ ಪ್ರಕಾರ ಬೌಲರ್ ಬಾಲಿಗೆ ಉಗುಳನ್ನು ಹಚ್ಚುವುದನ್ನು ಬ್ಯಾನ್ ಮಾಡಲಾಗಿದೆ. ಹೀಗಿದ್ದರೂ ಬಾಲ್‍ಗೆ ಸ್ಯಾನಿಟೈಸರ್ ಹಾಕಿದ ಮೀಚ್ ಕ್ಲೇಡನ್ ಅವರನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಸರ್ರೆ ವಿರುದ್ಧದ ಮುಂದಿನ ಬಾಬ್ ವಿಲ್ಲೀಸ್ ಟ್ರೋಫಿ ಪಂದ್ಯದಲ್ಲಿ ಕ್ಲೇಡನ್ ಅವರು ಆಡುವುದಿಲ್ಲ ಎಂದು ತಂಡ ತಿಳಿಸಿದೆ.

  • ಬ್ಯಾಟಿಂಗ್ ವೇಳೆ ಟ್ರೆಂಟ್ ಬೌಲ್ಟ್ ಹೆಲ್ಮೆಟ್‍ನಲ್ಲಿ ಸಿಕ್ಕಿಬಿದ್ದ ಬಾಲ್ – ವಿಡಿಯೋ ವೈರಲ್

    ಬ್ಯಾಟಿಂಗ್ ವೇಳೆ ಟ್ರೆಂಟ್ ಬೌಲ್ಟ್ ಹೆಲ್ಮೆಟ್‍ನಲ್ಲಿ ಸಿಕ್ಕಿಬಿದ್ದ ಬಾಲ್ – ವಿಡಿಯೋ ವೈರಲ್

    ಕೊಲಂಬೋ: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದ 2ನೇ ದಿನ ಹಾಸ್ಯಾಸ್ಪದ ಪ್ರಸಂಗವೊಂದು ನಡೆದಿದೆ.

    ಗಾಲೆಯಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾ ಎಸೆದ ಚೆಂಡು ಬ್ಯಾಟಿಂಗ್ ಮಾಡುತ್ತಿದ್ದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರ ಹೆಲ್ಮೆಟ್‍ಗೆ ಸಿಕ್ಕಿ ಹಾಕಿಕೊಂಡಿತ್ತು.

    https://twitter.com/ooccricket/status/1161998041714438144

    ಇನ್ನಿಂಗ್ಸ್ ನ 82 ಓವರ್ ನ ಮೊದಲ ಎಸೆತದಲ್ಲಿ ನಡೆದಿದ್ದು, ಎಂಬುಲ್ಡೆನಿಯಾ ಎಸೆದ ಚೆಂಡನ್ನು ಹಿಂದಕ್ಕೆ ಹೊಡೆಯಲು ಟ್ರೆಂಡ್ ಬೌಲ್ಟ್ ಯತ್ನಿಸಿದಾಗ ಅವರ ಬ್ಯಾಟ್ ತುದಿಗೆ ತಗಲಿದ ಚೆಂಡು ಬೌಲ್ಟ್ ಅವರ ಹೆಲ್ಮೆಟ್‍ನ ಮುಂದಿನ ಭಾಗದಲ್ಲಿ ಹೋಗಿ ಸಿಕ್ಕಿ ಹಾಕಿಕೊಳ್ಳುತ್ತದೆ.

    ಬ್ಯಾಟ್‍ಗೆ ತಗಲಿ ನೇರವಾಗಿ ಮುಖದ ಕಡೆ ಬಂದ ಚೆಂಡನ್ನು ಕಂಡು ಸ್ವಲ್ಪ ಮಟ್ಟಿಗೆ ಗಾಬರಿಯ ಬೌಲ್ಟ್, ತನ್ನ ಸುತ್ತ ಸುತ್ತಿಗೊಂಡಿರುವ ಶ್ರೀಲಂಕಾ ಆಟಗಾರರನ್ನು ನೋಡಿ ನಗುತ್ತಾರೆ. ಈ ವಿಚಿತ್ರ ದೃಶ್ಯವನ್ನು ಕಂಡು ಕಾಮೆಂಟ್ರಿ ಹೇಳುವವರು ಕೂಡ ನಗುತ್ತಾರೆ.

    ಈ ಪಂದ್ಯದಲ್ಲಿ ಬೌಲ್ಟ್ ಅವರು 18 ರನ್ ಹೊಡೆದು ಸುರಂಗ ಲಕ್ಮಲ್ ಅವರಿಗೆ ಔಟ್ ಆಗುತ್ತಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‍ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 267 ರನ್ ಹೊಡೆದು ಆಲೌಟ್ ಆಗಿದೆ.

    ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ. ಇನ್ನೂ 2 ದಿನದ ಆಟ ಬಾಕಿಯಿದೆ.

  • ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎಲ್ಲಿಯೂ ಹೋಗುವುದಿಲ್ಲ, ಅವರು ತಂಡದಲ್ಲಿಯೇ ಇರುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರೀಯವರು ಸ್ಪಷ್ಟನೆ ನೀಡಿದ್ದಾರೆ.

    ಧೋನಿ ನಿವೃತ್ತಿ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಧೋನಿಯವರು ಕೇವಲ ಬಾಲನ್ನು ಪರೀಕ್ಷೆಗೆ ಒಳಪಡಿಸುವುದಕ್ಕೋಸ್ಕರ ತೆಗೆದುಕೊಂಡಿದ್ದಾರೆ. ಧೋನಿಯವರು ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ನಿವೃತ್ತಿ ಹೊಂದುತ್ತಾರೆ ಎನ್ನುವ ವಂದತಿ ಹಬ್ಬಿರುವುದು ದುರದೃಷ್ಟಕರ ಸಂಗತಿ. ಧೋನಿಯವರು ಎಲ್ಲಿಯೂ ಹೋಗಲ್ಲ, ಅವರು ಭಾರತ ಕ್ರಿಕೆಟ್ ತಂಡದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್ ಮಾಡುವಾಗ 45 ಓವರ್ ಗಳ ಬಳಿಕವು ಬಾಲ್ ವೇಗಿಗಳಿಗೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧೋನಿ ಬಾಲನ್ನು ಪಡೆದು ತಂಡದ ಭಾರತ್ ಅರುಣ್ ಎಂಬ ಬಾಲ್ ತಜ್ಞರಿಗೆ ತೋರಿಸಿ, ಬಾಲ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅಂಪೈರ್ ನಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಏನಿದು ವದಂತಿ?
    ಇಂಗ್ಲೆಂಡಿನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಧೋನಿಯವರು ಅಂಪೈರ್ ನಿಂದ ಬಾಲನ್ನು ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜಾಲತಾಣಿಗರು ವಿಡಿಯೋವನ್ನು ನೋಡಿ ಧೋನಿಯವರು ನಿವೃತ್ತಿಗಾಗಿ ಬಾಲನ್ನು ಪಡೆದುಕೊಂಡಿದ್ದಾರೆ ಎಂದು ವದಂತಿ ಹರಿಬಿಟ್ಟಿದ್ದರು. ಧೋನಿಯವರು ಬಾಲ್ ಪಡೆದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿಬಂದಿದ್ದವು.

  • ಬಾಲ್ ತಂದುಕೊಡ್ಲಿಲ್ಲ ಅಂತ ಪ್ರಾಣವನ್ನೆ ತೆಗೆದ್ರು!

    ಬಾಲ್ ತಂದುಕೊಡ್ಲಿಲ್ಲ ಅಂತ ಪ್ರಾಣವನ್ನೆ ತೆಗೆದ್ರು!

    ಬೆಂಗಳೂರು: ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲನ್ನು ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವ್ಯಕ್ತಿಯನ್ನು ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

    ಈ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಮಣಿಕಂಠ ಮೃತ ದುರ್ದೈವಿಯಾಗಿದ್ದು, ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಪ್ರಕರಣ ಕುರಿತಂತೆ ಮಹಾಲಕ್ಷ್ಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.

    ಶೀಘ್ರವೇ ಕಾರ್ಯಚರಣೆ ನಡೆಸಿದ ಮಹಾಲಕ್ಷ್ಮೀ ಠಾಣಾ ಪೊಲೀಸರು ಮೃತ ಮಣಿಕಂಠನ ಸ್ನೇಹಿತರಾದ ಶಿವಾಜಿ, ಪುನೀತ್, ವಿನೋದ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಮೃತ ಮಣಿಕಂಠ ಹಾಗೂ ಆರು ಆರೋಪಿಗಳು ಒಂದೇ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಕ್ರಿಕೆಟ್ ಆಟ ಆಡುತ್ತಿರುವಾಗ ಬಾಲ್ ಮೈದಾನದಿಂದ ಹೊರಗೆ ಹೋಗಿದೆ. ಈ ವೇಳೆ ಶಿವಾಜಿ ಎಂಬಾತನು ಮಣಿಕಂಠನಿಗೆ ಬಾಲ್ ತರುವಂತೆ ಹೇಳಿದ್ದಾನೆ. ಮೃತನು ಬಾಲ ಅನ್ನು ತಂದು ಕೊಡದಿದ್ದಕ್ಕೆ ತಂಡದ ಸದಸ್ಯರ ಜೊತೆ ಜಗಳ ಏರ್ಪಟ್ಟಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಸ್ಥಳದಲ್ಲೇ ಮಣಿಕಂಠನನ್ನು ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.