Tag: ಬಾಲಾಕೋಟ್

  • ಏರ್‌ಸ್ಟ್ರೈಕ್‌ಗೆ ಸಾಕ್ಷಿ ಎಲ್ಲಿದೆ ಅಂದವರ ಬಾಯಿಯನ್ನೇ ಬಂದ್‌ ಮಾಡಿದ ಸೇನೆ!

    ಏರ್‌ಸ್ಟ್ರೈಕ್‌ಗೆ ಸಾಕ್ಷಿ ಎಲ್ಲಿದೆ ಅಂದವರ ಬಾಯಿಯನ್ನೇ ಬಂದ್‌ ಮಾಡಿದ ಸೇನೆ!

    ನವದೆಹಲಿ: ಬಾಲಾಕೋಟ್‌ ಏರ್‌ ಸ್ಟ್ರೈಕ್‌ (Balakot Air Strike) ನಡೆದ ಬಳಿಕ ಭಾರತದಲ್ಲಿ ವಿರೋಧ ಪಕ್ಷಗಳು ದಾಳಿ ನಡೆದಿದೆ ಎನ್ನುವುದಕ್ಕೆ ಸಾಕ್ಷಿ (Proof) ಎಲ್ಲಿದೆ ಎಂದು ಕೇಳಿದ್ದವು. ಆದರೆ ಈ ಬಾರಿ ಈ ಪ್ರಶ್ನೆ ಕೇಳುವವರ ಬಾಯಿಯನ್ನೇ ನಮ್ಮ ರಕ್ಷಣಾ ಪಡೆ ಬಂದ್‌ ಮಾಡಿವೆ.

    ಹೌದು. ಪುಲ್ವಾಮಾ (Pulwama) ದಾಳಿಯ ನಂತರ ಭಾರತದ ಪಾಕಿಸ್ತಾನ ಒಳಗಡೆ ನುಗ್ಗಿ ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಿತ್ತು. ಈ ಏರ್‌ಸ್ಟ್ರೈಕ್‌ನಲ್ಲಿ 100 ಕ್ಕೂ ಹೆಚ್ಚು ಮಂದಿ ಉಗ್ರರು ಹತ್ಯೆಯಾಗಿದ್ದರು. ಈ ದಾಳಿಯನ್ನು ಪಾಕಿಸ್ತಾನ ನಡೆದೇ ಇಲ್ಲ ಎಂಬಂತೆ ಹೇಳಿತ್ತು. ಆದರೆ ಉಪಗ್ರಹ ಚಿತ್ರಗಳ ಮೂಲಕ ಇದು ದೃಢಪಟ್ಟಿತ್ತು.  ಇದನ್ನೂ ಓದಿ: ಪಿಕ್ಚರ್ ಅಭಿ ಬಾಕಿ ಹೈ: ಉಗ್ರರಿಗೆ ಎಚ್ಚರಿಕೆ ಕೊಟ್ಟ ಮಾಜಿ ಸಿಡಿಎಸ್‌ ನರವಾಣೆ

    ಹೀಗಿದ್ದರೂ ಭಾರತದಲ್ಲಿ ಏರ್‌ಸ್ಟ್ರೈಕ್‌ ದೊಡ್ಡ ಮಟ್ಟ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಕೇಂದ್ರದ ಮಂತ್ರಿಗಳು ಹೇಳಿದರೂ ವಿಪಕ್ಷಗಳು ಪದೇ ಪದೇ ಸಾಕ್ಷಿಯನ್ನು ಕೇಳುತ್ತಿದ್ದವು. 2019ರ ಲೋಕಸಭಾ ಚುನಾವಣೆಯಲ್ಲೂ ಇದು ದೊಡ್ಡ ಸುದ್ದಿಯಾಗಿತ್ತು. ಇದನ್ನೂ ಓದಿ: ಪಾಕ್‌ ಉಗ್ರರ ದಾಳಿಗೆ SCALP, HAMMER ಕ್ಷಿಪಣಿಯನ್ನೇ ಬಳಸಿದ್ದು ಯಾಕೆ?

    ಕಳೆದ ಬಾರಿ ಸಾಕ್ಷಿ ಕೇಳಿದವರಿಗೆ ಈ ಬಾರಿ ನಮ್ಮ ಪಡೆಗಳು ಸಾಕ್ಷಿ ಸಮೇತ ಉತ್ತರ ನೀಡಿವೆ. ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿ ನಡೆಸಿದ ಆಪರೇಷನ್‌ ಸಿಂಧೂರ(Operation Sindoor) ದಾಳಿ ನಡೆದ ಪ್ರತಿ ಜಾಗದ ವಿಡಿಯೋ/ ಫೋಟೊ ತೋರಿಸುವ ಮೂಲಕ ಪುರಾವೆ ನೀಡಿದೆ. ಇದಕ್ಕೆ ಪೂರಕ ಎಂಬಂತೆ ಪಾಕಿಸ್ತಾನವೇ ದಾಳಿ ನಡೆದಿದ್ದನ್ನು ಒಪ್ಪಿಕೊಂಡಿದೆ.

     

  • ಬಾಲಾಕೋಟ್‌ ದಾಳಿಯ ನಂತರ ಶಕ್ತಿಶಾಲಿಯಾದ ಭಾರತ! – ಬತ್ತಳಿಕೆಗೆ ಏನೇನು ಸೇರಿದೆ?

    ಬಾಲಾಕೋಟ್‌ ದಾಳಿಯ ನಂತರ ಶಕ್ತಿಶಾಲಿಯಾದ ಭಾರತ! – ಬತ್ತಳಿಕೆಗೆ ಏನೇನು ಸೇರಿದೆ?

    ನವದೆಹಲಿ: ನಮ್ಮ ಮೇಲೆ ಭಾರತ (India) ಯುದ್ಧ ಸಾರಲಿದೆ ಎಂದು ಪಾಕ್‌ (Pakistan) ಹೇಳುತ್ತಾ ಬರುತ್ತಿದೆ. ಆದರೆ ಭಾರತ ಇಲ್ಲಿಯವರೆಗೆ ಯುದ್ಧದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಭಾರತ ಬಾಲಾಕೋಟ್‌ ಮೇಲಿನ ಏರ್‌ ಸ್ಟ್ರೈಕ್‌ (Balakot Air Strike) ಮಾಡಿದ ಬಳಿಕ ತನ್ನ ಬತ್ತಳಿಕೆಗೆ ಹಲವಾರು ಶಸ್ತ್ರಾಸ್ತ್ರಗಳನ್ನು ಸೇರ್ಪಡೆ ಮಾಡುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ.

    ಹಾಗೇ ನೋಡಿದರೆ ಬಾಲಾಕೋಟ್‌ ಏರ್‌ಸ್ಟ್ರೈಕ್‌ ನಡೆಸಿದ ನಂತರ ಭಾರತದ ಮೂರು ಪಡೆಗಳು ಮತ್ತಷ್ಟು ಬಲಶಾಲಿಯಾಗಿದೆ. ಹೀಗಾಗಿ 2019 ರಿಂದ ಏನೇನು ಬದಲಾವಣೆಯಾಗಿದೆ? ಈ ಎಲ್ಲಾ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ದೀರ್ಘ ರಜೆ ಕೊಡಲ್ಲ – ಶಸ್ತ್ರಾಸ್ತ್ರ ಕಾರ್ಖಾನೆ ಉದ್ಯೋಗಿಗಳಿಗೆ ಸೂಚನೆ

    ಭಾರತದ ಒಳಗಡೆಯಿಂದಲೇ ದಾಳಿ:
    2019 – ಬಾಲಾಕೋಟ್‌ ಮೇಲಿನ ಏರ್‌ ಸ್ಟ್ರೈಕ್‌ ವೇಳೆ ಮಿರಾಜ್‌ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ನೆಲೆಗಳ ಮೇಲೆ ಇಸ್ರೇಲ್‌ ನಿರ್ಮಿತ SPICE ಬಾಂಬ್‌ ಹಾಕಿತ್ತು. ಈ ರೀತಿಯ ಕಾರ್ಯಾಚರಣೆಯ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳು ವಿಮಾನದ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚು. ಅಭಿನಂದನ್‌ ವರ್ಧಮಾನ್‌ ಅವರಂತೆ ಪೈಲಟ್‌ಗಳನ್ನು ಸೆರೆ ಹಿಡಿಯವ ಅಪಾಯದ ಸಾಧ್ಯತೆಯಿದೆ.

    2025 – 300 ಕಿ.ಮೀ ದೂರದಲ್ಲಿ ಟಾರ್ಗೆಟ್‌ ಧ್ವಂಸ ಮಾಡಬಲ್ಲ SCALP ಕ್ಷಿಪಣಿಯನ್ನು ಭಾರತ ಹೊಂದಿದೆ. ಭಾರತದ ಒಳಗಡೆಯೇ ರಫೇಲ್‌ ಯುದ್ಧ ವಿಮಾನದಲ್ಲಿ ಕ್ಷಿಪಣಿ ಹಾರಿಸಿ ಶತ್ರುಗಳ ನೆಲೆಗಳನ್ನು ಧ್ವಂಸ ಮಾಡಬಹುದು. ಗಡಿ ದಾಟದೇ ಬ್ರಹ್ಮೋಸ್‌ ಕ್ಷಿಪಣಿಯ ಮೂಲಕ ಶತ್ರು ದೇಶದ ವಾಯುನೆಲೆಯನ್ನೇ ಹಾಳು ಮಾಡಬಹುದು.  ಇದನ್ನೂ ಓದಿ: ಯುದ್ಧ ನಡೆದರೆ ಇಂಗ್ಲೆಂಡ್‌ಗೆ ಪಲಾಯನ – ಪಾಕ್‌ ಸಂಸದ

    ಡ್ರೋನ್‌ ಶಕ್ತಿ
    2019 – ಗಡಿ ನಿಯಂತ್ರಣ ರೇಖೆಯ ಬಳಿಯ ಶತ್ರುಗಳ ಪೋಸ್ಟ್‌ಗಳನ್ನು ಗುರಿಯಾಗಿಸಿ ಸೈನಿಕರು ಫಿರಂಗಿಯಿಂದ ಮಾತ್ರ ದಾಳಿ ನಡೆಸಬಹುದಾಗಿತ್ತು.

    2020 – ಭಾರತ ಈಗ ಸ್ವದೇಶಿ ALS-50 ರೆಕ್ಕೆಯನ್ನು ಹೊಂದಿರುವ ಡ್ರೋನ್‌ ಅಭಿವೃದ್ಧಿ ಪಡಿಸಿದೆ. ಈ ಡ್ರೋನ್‌ ಮೂಲಕ 50 ಕಿ.ಮೀ ದೂರದಲ್ಲಿರುವ ಶತ್ರುವಿನ ನೆಲೆಯನ್ನು ಟಾರ್ಗೆಟ್‌ ಮಾಡಬಹುದಾಗಿದೆ.

    ಗಡಿಗಳ ಬಳಿ ತ್ವರಿತ, ನಿಖರ ಮತ್ತು ಕಡಿಮೆ-ವೆಚ್ಚದ ಯುದ್ಧತಂತ್ರದ ಕಾರ್ಯಾಚರಣೆಗಳಿಗಾಗಿ ನಾಗಾಸ್ತ್ರದಂತ ಸೂಸೈಡ್‌ ಡ್ರೋನ್‌ ಮತ್ತು ಇತರ ಡ್ರೋನ್‌ಗಳನ್ನು ಭಾರತ ಖರೀದಿಸಿದೆ. ಜಿಪಿಎಸ್‌ ಆಧಾರಿತ ನಾಗಾಸ್ತ್ರ 30 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

    ನೆಲದಿಂದಲೇ ಉರುಳಿಸಬಹುದು
    2019 – ಶತ್ರು ದೇಶದ ಯುದ್ಧ ವಿಮಾನಗಳು ಭಾರತದ ಗಡಿಯನ್ನು ದಾಟಿ ಬಂದರೆ ನಾವು ಯುದ್ಧ ವಿಮಾನವನ್ನು (ಎರಡು ಯುದ್ಧ ವಿಮಾನಗಳ ಕಾದಾಟಕ್ಕೆ ಡಾಗ್‌ ಫೈಟ್‌ ಎಂದು ಕರೆಯಲಾಗುತ್ತದೆ) ಹಾರಿಸಿ ಹಿಮ್ಮೆಟಿಸಬೇಕಿತ್ತು. ಬಾಲಾಕೋಟ್‌ ಏರ್‌ಸ್ಟ್ರೈಕ್‌ ಮಾಡಿದ ಬಳಿಕ ಪಾಕ್‌ ಯುದ್ಧ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಲು ಬಂದಿತ್ತು. ಈ ಸಂದರ್ಭದಲ್ಲಿ ಮಿಗ್‌, ಸುಕೋಯ್‌ ವಿಮಾನಗಳನ್ನು ಹಾರಿಸಿ ಭಾರತ ತಡೆದಿತ್ತು. ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತವಾಗಿರುವ ಮಿಗ್‌ ವಿಮಾನದ ಮೂಲಕವೇ ಅಭಿನಂದನ್‌ AMRAAM ಕ್ಷಿಪಣಿ ಸಿಡಿಸಿ ಎಫ್‌16 ವಿಮಾನವನ್ನು ಹೊಡೆದು ಹಾಕಿದ್ದರು.

    2025 – ಭಾರತ ಈಗ ರಷ್ಯಾದ ಅತ್ಯಾಧುನಿಕ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ. ಶತ್ರು ದೇಶದ ವಿಮಾನ ಅಥವಾ ಯಾವುದೇ ಕ್ಷಿಪಣಿ ಬಂದರೂ ಅದರ ವೇಗವನ್ನು ಗುರುತಿಸಿ ನೆಲದಿಂದಲೇ ಕ್ಷಿಪಣಿ ಹಾರಿಸಿ ಹೊಡೆದು ಹಾಕುತ್ತದೆ. ಈ ಮೂಲಕ ಭಾರತ ಶತ್ರು ದೇಶದ ಮೇಲೆ ದಾಳಿ ಮಾಡುವುದರ ಜೊತೆಗೆ ಶತ್ರು ದೇಶದಿಂದ ಬಂದ ಪ್ರತಿದಾಳಿಯನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಪಡೆದಿರುವುದು ವಿಶೇಷ.

  • ಬಾಲಾಕೋಟ್‌ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್‌

    ಬಾಲಾಕೋಟ್‌ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್‌

    ನವದೆಹಲಿ: ತನ್ನ ಮೇಲೆ ಭಾರತ ಬಾಲಾಕೋಟ್‌ (Balakot Air Strike) ಮೇಲೆ ವಾಯುದಾಳಿ ನಡೆಸಿದಂತೆ ಈ ಬಾರಿಯೂ ದಾಳಿ ನಡೆಸಬಹುದು ಎಂಬ ಭೀತಿ ಪಾಕಿಸ್ತಾನಕ್ಕೆ (Pakistan) ಬಂದಿದ್ಯಾ ಎಂಬ ಪ್ರಶ್ನೆ ಈಗ ಎದ್ದಿದೆ.

    ಪಹಲ್ಗಾಮ್‌ ಉಗ್ರರ ದಾಳಿಯ ನಂತರ ಪಾಕಿಸ್ತಾನ ವಾಯುಸೇನೆ ತನ್ನ ಪ್ರಮುಖ ವಿಮಾನಗಳನ್ನು ಭಾರತದ (India) ಗಡಿಯ ನೆಲೆಗಳಿಗೆ ಸಾಗಿಸುತ್ತಿರುವ ವಿಚಾರ ಫ್ಲೈಟ್‌ರಾಡರ್‌ನಲ್ಲಿ ಗೊತ್ತಾಗಿದೆ.

    ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಪ್ರಮುಖ ವಿಮಾನಗಳು ಕರಾಚಿಯ ದಕ್ಷಿಣ ವಾಯು ಕಮಾಂಡ್‌ನಿಂದ ಉತ್ತರದ ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ನೆಲೆಗಳಿಗೆ ಸಂಚರಿಸುತ್ತಿರುವ ಫ್ಲೈಟ್‌ರಾಡರ್ 24 ರ ಸ್ಕ್ರೀನ್‌ಶಾಟ್‌ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮಹಿಳೆಯರಿಂದ ಪುರುಷರನ್ನು ಬೇರ್ಪಡಿಸಿ ಹತ್ಯೆ – 20 ನಿಮಿಷದಲ್ಲಿ ನರಮೇಧ ಮಾಡಿದ್ದು ಹೇಗೆ?


    ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ವಾಯುನೆಲೆಗಳು ಭಾರತೀಯ ಗಡಿಗಳಿಗೆ ಹತ್ತಿರದಲ್ಲಿವೆ. PAF198 ಲಾಕ್‌ಹೀಡ್ C-130E ಹರ್ಕ್ಯುಲಸ್ ಸಾರಿಗೆ ವಿಮಾನವಾಗಿದ್ದರೆ PAF101 ಸಣ್ಣ ಎಂಬ್ರೇರ್ ಫೆನಮ್ 100 ಜೆಟ್ ಅನ್ನು ಸಾಮಾನ್ಯವಾಗಿ ವಿಐಪಿ ಸಾರಿಗೆ ಅಥವಾ ಗುಪ್ತಚರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ.  ಇದನ್ನೂ ಓದಿ: ಐಷಾರಾಮಿ ಕಾರುಗಳಲ್ಲಿ ಪ್ರಯಾಣ, ಪಾಕ್‌ ಸೇನೆಯ ನಂಬಿಕಸ್ಥನೇ ದಾಳಿಯ ಮಾಸ್ಟರ್‌ ಮೈಂಡ್‌!

    2019ರ ಫೆಬ್ರವರಿ 14 ರಂದು ಜಮ್ಮು ಕಾಶ್ಮೀರದ ಕೇಂದ್ರ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಹುತಿ ಉಗ್ರನ ದಾಳಿ 40 ಸೈನಿಕರು ಹುತಾತ್ಮರಾಗಿದ್ದರು. ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ (ಜೆಇಎಂ) ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಫೆಬ್ರವರಿ 26 ರಂದು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ಮಾಡಿತ್ತು.

  • ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ನವದೆಹಲಿ: ಇದೇ ಮೊದಲ ಬಾರಿಗೆ ಭಾರತ ಬಾಲಾಕೋಟ್‌ ಮೇಲೆ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಸುಮಾರು 300 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬುದನ್ನು ಪಾಕಿಸ್ತಾನ ಬಹಿರಂಗವಾಗಿಯೇ ಒಪ್ಪಿಕೊಂಡಿದೆ.

    ಉರ್ದು ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ರಾಯಭಾರಿ ಅಘಾ ಹಿಲಾ ಅವರು ಏರ್‌ಸ್ಟ್ರೈಕ್‌ನಲ್ಲಿ 300 ಮಂದಿ ಸಾವನ್ನಪ್ಪಿರುವುದು ನಿಜ ಎಂದು ಹೇಳಿದ್ದಾರೆ.

    ಭಾರತ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ದಾಳಿ ನಡೆಸಿತ್ತು. ಇದರಲ್ಲಿ 300 ಮಂದಿ ಸಾವನ್ನಪ್ಪಿದ್ದರು. ನಾವು ಮಿಲಿಟರಿ ಸಿಬ್ಬಂದಿ ಇರುವ ಅವರ ಹೈಕಮಾಂಡ್​ನ್ನು ಗುರಿಯಾಗಿಸಿದ್ದೆವು. ನಮ್ಮದು ನ್ಯಾಯಯುತ ಗುರಿಯಾಗಿತ್ತು. ನಮ್ಮ ಗುರಿ ಅವರ ಗುರಿಗಿಂತಲೂ ವಿಭಿನ್ನವಾಗಿತ್ತು. ಯಾಕೆಂದರೆ ನಮ್ಮ ಗುರಿ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಿಬ್ಬಂದಿ ಆಗಿತ್ತು ಎಂದಿದ್ದಾರೆ.

    ಕಳೆದ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್-ಎನ್(ಪಿಎಂಎಲ್-ಎನ್) ನಾಯಕ ಆಯಾಝ್ ಸಾದಿಖ್ ಸಂಸತ್‌ನಲ್ಲಿ ಮಾಡಿದ ಭಾಷಣದಲ್ಲಿ ಭಾರತದ ದಾಳಿಗೆ ಹೆದರಿ ಪಾಕಿಸ್ತಾನ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಿತ್ತು ಎಂದು ಹೇಳಿಕೆ ನೀಡಿದ ನಂತರ ಅಘಾ ಹಿಲಾ ಅವರ ಈ ಹೇಳಿಕೆ ಈಗ ಭಾರೀ ಮಹತ್ವ ಪಡೆದಿದೆ.

    ಕಳೆದ ವರ್ಷ 2019ರ ಫೆಬ್ರವರಿಯಲ್ಲಿ ಬಂಧಿತರಾಗಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ಅಂದು ರಾತ್ರಿ 9 ಗಂಟೆಗೆ ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪರಿಪರಿಯಾಗಿ ಕೇಳಿಕೊಂಡಿದ್ದರು. ಈ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜ. ಖಮರ್ ಜಾವೇದ್ ಬಜ್ವಾ ಅವರ ಕಾಲು ಭಯದಿಂದ ನಡುಗಿ ಹೋಗಿತ್ತು ಎಂದು ಹೇಳಿಕೆ ನೀಡಿದ್ದರು.

    ಪುಲ್ವಾಮಾದಲ್ಲಿ ಆತ್ಮಹುತಿ ದಾಳಿಕೋರನೊಬ್ಬ ಸ್ಫೋಟಕ ತುಂಬಿದ್ದ ಮಾರುತಿ ಇಕೋ ಕಾರನ್ನು ಸಿಆರ್‌ಪಿಎಫ್‌ ಬಸ್ಸಿಗೆ ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಈ ಕೃತ್ಯಕ್ಕೆ ಪ್ರತಿಯಾಗಿ ಭಾರತ 2019ರ ಫೆ.26ರಂದು ನಸುಕಿನ ಜಾವ ವಾಯುಸೇನೆ ಮಿರಾಜ್‌ ವಿಮಾನದ ಮೂಲಕ ಬಾಲಾಕೋಟ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಬಾಂಬ್‌ ದಾಳಿ ನಡೆಸಿತ್ತು.

    ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿರಬಹುದು ಎಂದು ಭಾರತ ಸರ್ಕಾರ ಹೇಳಿತ್ತು. ಆದರೆ ಪಾಕಿಸ್ತಾನ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿ ಭಾರತದ ವಾದವನ್ನು ತಿರಸ್ಕರಿಸಿತ್ತು. ಬಳಿಕ ವಿದೇಶಿ ಮಾಧ್ಯಮಗಳು ಇಲ್ಲಿ ಉಗ್ರರ ಶಿಬಿರ ನಡೆಯುತ್ತಿತ್ತು. ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಮೂಲಗಳನ್ನು ಆಧಾರಿಸಿ ವರದಿ ಮಾಡಿದ್ದವು.

    ಭಾರತ ಸೇನೆ ಬಾಲಾಕೋಟ್‌ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಫೆ.28ರ ಬೆಳಗ್ಗೆ ಪಾಕಿಸ್ತಾನ ವಾಯುಸೇನೆ ಭಾರತೀಯ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಮುಂದಾಗಿತ್ತು. ಆದರ ಪಾಕಿಸ್ತಾನ ಈ ಕುತಂತ್ರವನ್ನು ಭಾರತದ ಯುದ್ಧವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಈ ವೇಳೆ ಮಿಗ್‌ ವಿಮಾನವನ್ನು ಹಾರಿಸುತ್ತಿದ್ದ ಅಭಿನಂದನ್‌ ಪಾಕಿಸ್ತಾನದ ಎಫ್‌ 16 ಯುದ್ಧವಿಮಾನದ ಜೊತೆಗೆ ಡಾಗ್‌ಫೈಟ್‌ ಮಾಡಿ ಕೆಳಗೆ ಉರುಳಿಸಿದ್ದರು.

  • ಭಾರತಕ್ಕಿಂದು ಕರಾಳ ದಿನ – ಪುಲ್ವಾಮಾ ದಾಳಿಗೆ 1 ವರ್ಷ

    ಭಾರತಕ್ಕಿಂದು ಕರಾಳ ದಿನ – ಪುಲ್ವಾಮಾ ದಾಳಿಗೆ 1 ವರ್ಷ

    ನವದೆಹಲಿ: ಇಂದು ಇಡೀ ವಿಶ್ವಕ್ಕೆ ಪ್ರೇಮಿಗಳ ದಿನ, ಆದರೆ ಭಾರತಕ್ಕೆ ಮಾತ್ರ ಕರಾಳ ದಿನ. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಬರೋಬ್ಬರಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಬಲಿಯಾಗಿದ್ದರು ಇಂದಿಗೆ ಆ ದುರ್ಘಟನೆಗೆ ಒಂದು ವರ್ಷ.

    ಹೌದು. ಇಡೀ ವಿಶ್ವ ಇಂದು ಸಂಭ್ರಮದಿಂದ ಪ್ರೇಮಿಗಳ ದಿನ ಆಚರಿಸುತ್ತಿದೆ. ಆದರೆ ಭಾರತಕ್ಕೆ ಕರಾಳ ದಿನವಾಗಿ ಬದಲಾಗಿದೆ. ದೇಶ ಕಾಯುವ ಕಾಯಕದಲ್ಲಿದ್ದ 40 ಮಂದಿ ಸಿಆರ್‌ಪಿಎಫ್‌ ಯೋಧರಿದ್ದ ಬಸ್ ಮೇಲೆ ಆತ್ಮಾಹುತಿ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಇಂದಿಗೆ ಆ ದುರ್ಘಟನೆ ಸಂಭವಿಸಿ ಒಂದು ವರ್ಷವಾಗಿದೆ. ಇದನ್ನೂ ಓದಿ: ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    ಕಳೆದ ವರ್ಷ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಆತ್ಮಾಹುತಿ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಜೈಷ್ ಎ ಮೊಹಮ್ಮದ್ ಸಂಘಟನೆ ಉಗ್ರ ಆದಿಲ್ ಅಹ್ಮದ್ ದಾರ್ ಮಾರುತಿ ಇಕೋ ಕಾರ್ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಸೈನಿಕರಿದ್ದ ಬಸ್ ಮೇಲೆ ದಾಳಿ ಮಾಡಿದ್ದ. ಘಟನೆಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು.

    ವ್ಯವಸ್ಥಿತವಾಗಿ ದಾಳಿಗೆ ಸ್ಕೆಚ್ ಹಾಕಿದ್ದ ಆದಿಲ್ ದಾರ್ ಕಾರಿನಲ್ಲಿ 300 ಕೆಜಿ ಗೂ  ಹೆಚ್ಚು ಸ್ಫೋಟಕಗಳನ್ನು ತುಂಬಿಕೊಂಡು ಬಸ್ ಮೇಲೆ ದಾಳಿ ಮಾಡಿದ್ದ ಎಂದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿತ್ತು. ಇದನ್ನೂ ಓದಿ: ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ ನೂರಕ್ಕೂ ಅಧಿಕ ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

    ಘಟನೆಯ ಬಳಿಕ ಪ್ರತಿಕಾರದ ದೊಡ್ಡ ಕೂಗೇ ಕೇಳಿ ಬಂದಿತು. ಪಾಕ್ ಆಕ್ರಮಿತ ಕಾಶ್ಮೀರ ದಾಟಿ  ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್  ಮಾಡುವ ಮೂಲಕ ಭಾರತೀಯ ಸೇನೆ ಉಗ್ರ ನೆಲೆಗಳನ್ನು ಧ್ವಂಸ ಮಾಡಿತ್ತು. 300ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದು ನಮ್ಮ ಯೋಧರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲಾಗಿದೆ. ಏನೆ ಆದರೂ ಉಗ್ರರ ಸಂಚಿಗೆ 40 ಮಂದಿ ಯೋಧರು ಹುತ್ಮಾತ್ಮರಾಗಿದ್ದು ಭಾರತ ಮಾತೆಗೆ ತುಂಬಲಾರದ ನಷ್ಟ. ಇಂದು ಅವರಿಗೆ ಒಂದು ಸೆಲ್ಯೂಟ್ ಮಾಡುತ್ತಾ ಅವರಿಗಾಗಿ ಈ ದಿನವನ್ನು ಸಮರ್ಪಿಸೋಣ.

  • ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ಈಗ ವಾಯುಸೀಮೆ ತೆರವುಗೊಳಿಸಿದ ಪಾಕ್

    ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ಈಗ ವಾಯುಸೀಮೆ ತೆರವುಗೊಳಿಸಿದ ಪಾಕ್

    ಇಸ್ಲಾಮಾಬಾದ್: ಈಗಾಗಲೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಪಾಕಿಸ್ತಾನ ಕೊನೆಗೂ ಎಚ್ಚೆತ್ತುಕೊಂಡಿದ್ದು, ಮಂಗಳವಾರ ಎಲ್ಲ ನಾಗರಿಕ ವಿಮಾನಗಳಿಗೆ ತನ್ನ ವಾಯುಸೀಮೆಯನ್ನು ತೆರವುಗೊಳಿಸಿದೆ.

    ವಿಶ್ವ ಬ್ಯಾಂಕ್‍ನ ಹೂಡಿಕೆ ವಿವಾದಗಳ ನ್ಯಾಯಾಲಯವು ಪಾಕಿಸ್ಥಾನಕ್ಕೆ 40 ಸಾವಿರ ಕೋಟಿ ರೂ. ದಂಡ ವಿಧಿಸಿದ ಬೆನ್ನಲ್ಲೇ ಪಾಕಿಸ್ತಾನದಿಂದ ಈ ನಿರ್ಧಾರ ಪ್ರಕಟವಾಗಿದೆ. ಚಿನ್ನದ ಗಣಿಯನ್ನು ವಿದೇಶಿ ಕಂಪೆನಿಗಳಿಗೆ ಗುತ್ತಿಗೆ ನೀಡಿ ಅನಂತರ ರದ್ದು ಮಾಡಿದ ಪ್ರಕರಣದಲ್ಲಿ ವಿಶ್ವಬ್ಯಾಂಕ್ ಕಳೆದ ವಾರ 40 ಸಾವಿರ ಕೋಟಿ ರೂ. ದಂಡ ವಿಧಿಸಿತ್ತು.

    ಬಾಲಕೋಟ್ ಮೇಲಿನ ವಾಯುದಾಳಿ ಬಳಿಕ ಭಾರತೀಯ ವಿಮಾನ ಸೇರಿದಂತೆ ಎಲ್ಲ ಏರ್ ಲೈನ್ಸ್ ಗಳಿಗೆ ತನ್ನ ವಾಯುಸೀಮೆ ಪ್ರವೇಶಿಸುವುದಕ್ಕೆ ಪಾಕಿಸ್ತಾನ ನಿಷೇಧ ಹೇರಿತ್ತು. ಈ ಸಂಬಂಧ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಂದು ಮಧ್ಯಾಹ್ನ 12:41 ರಿಂದ ಎಲ್ಲ ಏರ್ ಲೈನ್ಸ್ ಗಳಿಗೆ ತನ್ನ ವಾಯು ಸೀಮೆಯನ್ನು ಬಳಸಿಕೊಳ್ಳಲು ಪಾಕಿಸ್ತಾನ ಅನುಮತಿ ನೀಡಿದೆ. ಇಂದಿನಿಂದ ಭಾರತದ ಏರ್ ಲೈನ್ಸ್ ಪಾಕಿಸ್ತಾನ ವಾಯುಸೀಮೆಯನ್ನು ಬಳಸಿಕೊಂಡು ತನ್ನ ಎಂದಿನ ಮಾರ್ಗದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

    ತನ್ನ ವಾಯುಸೀಮೆಯನ್ನು ನಿರ್ಬಂಧಿಸಿದ್ದರಿಂದ ಈಗಾಗಲೇ ಕುಸಿತಗೊಂಡಿರುವ ಪಾಕ್ ಆರ್ಥಿಕತೆಗೆ ಭಾರೀ ನಷ್ಟವಾಗಿತ್ತು. ಪ್ರತಿದಿನ 400ಕ್ಕೂ ಹೆಚ್ಚು ವಿಮಾನಗಳು ಪಾಕ್ ವಾಯುಸೀಮೆಯನ್ನು ಬಳಸಿಕೊಳ್ಳುತ್ತಿವೆ. ವಾಯುಸೀಮೆಯನ್ನು ಬಳಕೆ ಮಾಡಿದ್ದಕ್ಕೆ ಅಲ್ಲದೇ ಲ್ಯಾಂಡಿಂಗ್ ಆದರೂ ವಿಮಾನದ ಗಾತ್ರಕ್ಕೆ ಅನುಗುಣವಾಗಿ ಶುಲ್ಕ ವಿಧಿಸುತ್ತದೆ. ವಿಮಾನದ ಗಾತ್ರ ಮತ್ತು ದರ್ಜೆಗೆ ಅನುಗುಣವಾಗಿ ಶುಲ್ಕ ಬದಲಾಗುತ್ತದೆ.

    ಬೋಯಿಂಗ್ 737 ಪ್ರಯಾಣಿಕ ವಿಮಾನ ತನ್ನ ವಾಯುಸೀಮೆಯನ್ನು ಬಳಕೆ ಮಾಡಿದರೆ ಪಾಕಿಸ್ತಾನ ಪ್ರತಿ ದಿನಕ್ಕೆ ಅಂದಾಜು 600 ಡಾಲರ್ ನಿಂದ 700 ಡಾಲರ್(ಅಂದಾಜು 41 ಸಾವಿರದಿಂದ 48 ಸಾವಿರ ರೂ.) ಶುಲ್ಕ ವಿಧಿಸುತ್ತದೆ. ಒಟ್ಟು 400 ವಿಮಾನಗಳಿಂದ ಪಾಕಿಸ್ತಾನ ಪ್ರತಿದಿನ 3ಲಕ್ಷ ಡಾಲರ್(ಅಂದಾಜು 2 ಕೋಟಿ) ಆದಾಯ ಗಳಿಸುತ್ತದೆ. ಅಂದಾಜು ಒಟ್ಟು 1685 ಕೋಟಿ ರೂ. ಆದಾಯವನ್ನು ಪಾಕಿಸ್ತಾನ ಕಳೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಕಂಪನಿಗಳಿಗೂ ಪ್ರತಿದಿನ 4.50 ಲಕ್ಷ ಡಾಲರ್(ಅಂದಾಜು 3.09 ಕೋಟಿ ರೂ.) ನಷ್ಟವಾಗಿದೆ.

    ಭಾರತೀಯ ವಾಯುಪಡೆ ಫೆ.26ರಂದು ಬಾಲಾಕೋಟ್‍ನಲ್ಲಿರುವ ಉಗ್ರರ ಅಡಗು ತಾಣದ ಮೇಲೆ ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ವಾಯುಸೀಮೆಯ ಮೇಲೆ ನಿಷೇಧ ಹೇರಿದ ಪರಿಣಾಮ ಭಾರತೀಯ ಕಂಪನಿಗಳು ಹಲವು ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದು ಮಾಡಿತ್ತು.

    ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್‍ದೀಪ್ ಸಿಂಗ್ ಪುರಿ ಜುಲೈ 3 ರಂದು ರಾಜ್ಯಸಭೆಯಲ್ಲಿ ಪಾಕಿಸ್ತಾನ ವಾಯುಸೀಮೆಯನ್ನು ನಿಷೇಧಿಸಿದ ಪರಿಣಾಮ ಭಾರತದ ವಿಮಾನಯಾನ ಕಂಪನಿಗಳಿಗೆ ನಷ್ಟವಾಗಿದೆ. ಏರ್ ಇಂಡಿಯಾಗೆ 491 ಕೋಟಿ ರೂ., ಸ್ಪೈಸ್ ಜೆಟ್, ಇಂಡಿಗೋ ಮತ್ತು ಗೋ ಏರ್ ಕಂಪನಿಗಳಿಗೆ ಕ್ರಮವಾಗಿ 30.73 ಕೋಟಿ ರೂ., 25.1 ಕೋಟಿ ರೂ., 2.1 ಕೋಟಿ ರೂ., ನಷ್ಟವಾಗಿದೆ ಎಂದು ತಿಳಿಸಿದ್ದರು.

    ಕಿರ್ಗಿಸ್ತಾನ ರಾಜಧಾನಿ ಬಿಷ್ಕೇಕ್‍ನಲ್ಲಿ ಜೂ.13 ಮತ್ತು 14ರಂದು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ಆಯೋಜನೆಗೊಂಡಿತ್ತು. ಈ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿದ್ದ ಕಾರಣ ಭಾರತದ ಅಧಿಕಾರಿಗಳು ಪಾಕಿಸ್ತಾನಕ್ಕೆ ಮನವಿ ಮಾಡಿ ನಿಷೇಧ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಭಾರತದ ಮನವಿಗೆ ಪಾಕ್ ಒಪ್ಪಿ ಮೋದಿ ವಿಮಾನಕ್ಕೆ ಅನುಮತಿ ನೀಡಿತ್ತು. ಆದರೆ ಮೋದಿ ವಿಮಾನ ಪ್ರಯಾಣ ದೂರವಾದರೂ ಪರವಾಗಿಲ್ಲ. ಪಾಕ್ ಮೇಲೆ ಪ್ರಯಾಣಿಸಲ್ಲ ಎಂದು ಹೇಳಿದ್ದರು. ನಂತರ ಮೋದಿ ಓಮನ್, ಇರಾನ್ ಹಾಗೂ ಮಧ್ಯ ಏಷ್ಯಾ ಮೂಲಕ ಕಿರ್ಗಿಸ್ತಾನಕ್ಕೆ ತೆರಳಿದ್ದರು.

    ಈ ಹಿಂದೆ ಭಾರತ ಕೇಳಿಕೊಂಡಾಗ ಪಾಕಿಸ್ತಾನ, ಭಾರತದ ಗಡಿಯಲ್ಲಿ ನಿಯೋಜನೆಗೊಂಡಿರುವ ಯುದ್ಧ ವಿಮಾನಗಳನ್ನು ತೆರವುಗೊಳಿಸದ ಹೊರತು ವಾಯುಸೀಮೆಯನ್ನು ಪ್ರವೇಶಕ್ಕೆ ಹೇರಲಾಗಿರುವ ನಿಷೇಧವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿತ್ತು.

  • ಬಾಲಾಕೋಟ್ ಪ್ರೇರಣೆ – ಈಗ ಕಟ್ಟಡವನ್ನೇ ಉಡೀಸ್ ಮಾಡೋ ಬಾಂಬ್ ಖರೀದಿಗೆ ಮುಂದಾದ ಭಾರತ

    ಬಾಲಾಕೋಟ್ ಪ್ರೇರಣೆ – ಈಗ ಕಟ್ಟಡವನ್ನೇ ಉಡೀಸ್ ಮಾಡೋ ಬಾಂಬ್ ಖರೀದಿಗೆ ಮುಂದಾದ ಭಾರತ

    ನವದೆಹಲಿ: ಪಾಕಿಸ್ತಾನದ ಬಾಲಕೋಟ್ ಮೇಲಿನ ಏರ್ ಸ್ಟ್ರೈಕ್‍ನಿಂದ ಉತ್ತೇಜನಗೊಂಡಿರುವ ಭಾರತ ಈಗ ಕಟ್ಟಡವನ್ನೇ ಸಂಪೂರ್ಣವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿರುವ ಬಾಂಬ್ ಖರೀದಿಸಲು ಮುಂದಾಗಿದೆ.

    ಹೌದು. ಬಾಲಾಕೋಟ್ ದಾಳಿ ವೇಳೆ ಭಾರತ ಇಸ್ರೇಲ್ ನಿರ್ಮಿತ ಸ್ಪೈಸ್-2000 ಬಾಂಬ್ ಬಳಸಿತ್ತು. ಈಗ ಸರ್ಕಾರ ಈ ಬಾಂಬ್‍ಗಿಂತ ಶಕ್ತಿಶಾಲಿಯಾಗಿರುವ ಮಾರ್ಕ್ 84 ಖರೀದಿಸಲು ಮುಂದಾಗಿದೆ ಎಂದು ವಾಯು ಸೇನೆಯಯ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಬಾಲಾಕೋಟ್ ದಾಳಿ ವೇಳೆ ಮಿರಾಜ್ ಯುದ್ಧ ವಿಮಾನದ ಮೂಲಕ ಉಗ್ರರ ಶಿಬಿರದ ಮೇಲೆ ಸ್ಪೈಸ್ -2000 ಬಾಂಬ್ ಹಾಕಲಾಗಿತ್ತು. ಈ ಬಾಂಬ್ ಗಳು ಮೇಲಿನಿಂದ ಸಿಮೆಂಟ್ ಶೀಟ್ ಗಳನ್ನು ತೂತು ಮಾಡಿ ಕೆಳಗಡೆ ಬಿದ್ದ ಬಳಿಕ ಸ್ಫೋಟಗೊಂಡಿತ್ತು. ಈ 70-80 ಕೆಜಿ ಸ್ಫೋಟಕಗಳನ್ನು ಹೊಂದಿರುವ ಈ ಬಾಂಬ್‍ಗಳು ಸ್ಫೋಟಗೊಳ್ಳುತ್ತದೆ ಹೊರತು ಸಂಪೂರ್ಣ ಕಟ್ಟಡವನ್ನು ಧ್ವಂಸಗೊಳಿಸುವ ಸಾಮಥ್ರ್ಯವನ್ನು ಹೊಂದಿಲ್ಲ.

    ಈಗ ಭಾರತದ ವಾಯುಸೇನೆ ಬಂಕರ್ ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸಬಲ್ಲ ಮಾರ್ಕ್ 84 ಬಾಂಬ್ ಗಳನ್ನು ಖರೀದಿಸಲು ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಬಾಂಬ್ ಗಳು ಬಂಕರ್ ಬಸ್ಟರ್ ಎಂದೇ ಪ್ರಸಿದ್ಧಿ ಪಡೆದಿದ್ದು, ಶತ್ರುಪಾಳಯದ ಬಂಕರ್‍ಗಳು ಎಷ್ಟೇ ಸುರಕ್ಷಿತವಾಗಿದ್ದರೂ ಛಿದ್ರಗೊಳಿಸುತ್ತವೆ. ಗುರಿ ನಿಗದಿ ಪಡಿಸಿ ಉಡಾವಣೆ ಮಾಡಿದರೆ ಸಾಕು ಗುರಿ ತಪ್ಪುವುದಿಲ್ಲ. ಎಂತಹುದೇ ಪರಿಸ್ಥಿತಿಯಲ್ಲೂ ಗುರಿಯನ್ನು ನಿಖರವಾಗಿ ಭೇದಿಸುತ್ತದೆ.

    ಕೇಂದ್ರ ಸರ್ಕಾರ ಮೂರು ಸೇನೆಗಳಿಗೆ ಗರಿಷ್ಠ 300 ಕೋಟಿ ರೂ. ವರೆಗಿನ ಸಲಕರಣೆಗಳನ್ನು ಖರೀದಿಸಲು ಅನುಮತಿ ನೀಡಿದೆ. ಈ ತುರ್ತು ವಿಶೇಷ ಅಧಿಕಾರದ ಅಡಿಯಲ್ಲಿ ವಾಯುಸೇನೆ ಈ ಬಾಂಬ್‍ಗಳನ್ನು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

    ಭಾರತೀಯ ಸೇನೆ ಈಗಾಗಲೇ ಈ ವಿಶೇಷ ಅಧಿಕಾರದ ಅಡಿಯಲ್ಲಿ ಸ್ಪೈಕ್ ಆಂಟಿ ಟ್ಯಾಂಕ್ ಮಿಸೈಲ್ ಖರೀದಿಸಲು ಮುಂದಾಗಿದೆ. ಇದನ್ನೂ ಓದಿ:ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ 170 ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

    ಪುಲ್ವಾಮಾದಲ್ಲಿ 44 ಸಿಆರ್‌ಪಿಎಫ್‌ ಯೋಧರು ಜೈಶ್ ಉಗ್ರನ ದಾಳಿಗೆ ಬಲಿಯಾದ ನಂತರ ಭಾರತ ಪ್ರತೀಕಾರ ತೀರಿಸಲು ಫೆ.26 ರಂದು ಪಾಕ್ ಆಕ್ರಮಿತ ಕಾಶ್ಮೀರವನ್ನು ದಾಟಿ ಬಾಲಾಕೋಟ್ ನಲ್ಲಿದ್ದ ಉಗ್ರರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತ್ತು.