ತೆಲುಗು ಆಕ್ಟರ್ ಶರ್ವಾನಂದ್ (Sharwanand) ಅವರು ಜೂನ್ 3ರಂದು ರಕ್ಷಿತಾ ರೆಡ್ಡಿ (Rakshitha Reddy) ಜೊತೆ ಹೊಸ ಬಾಳಿಗೆ ಕಾಲಿಟ್ಟರು. ಜೈಪುರದ ಲೀಲಾ ಪ್ಯಾಲೇಸ್ನಲ್ಲಿ ಅದ್ದೂರಿಯಾಗಿ ಶರ್ವಾನಂದ್ ಮದುವೆಯಾದರು. ಇದೀಗ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ನಟನ ಆರತಕ್ಷತೆ ಜರುಗಿದೆ. ಈ ಸಂಭ್ರಮದಲ್ಲಿ ಸಿನಿ ತಾರೆಯರು ಭಾಗಿಯಾಗಿದ್ದಾರೆ.
ಟಾಲಿವುಡ್ (Tollywood) ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ನಟ ಶರ್ವಾನಂದ್ ಸಂಚಲನ ಮೂಡಿಸಿದ್ದಾರೆ. ಜಾನೂ, ಮಹಾಸಮುದ್ರಂ, ಓಕೆ ಓಕಾ ಜೀವಿತಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಿನ್ನ ಕಥೆ, ವಿಭಿನ್ನ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.
ಜನವರಿ 26ರಂದು ಶರ್ವಾನಂದ್- ರಕ್ಷಿತಾ ರೆಡ್ಡಿ (Rakshitha Reddy) ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೊಂದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಇಂಜಿನಿಯರ್ ರಕ್ಷಿತಾ ಜೊತೆ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 3ರ ರಾತ್ರಿ 11ಕ್ಕೆ ಸಂಪ್ರದಾಯ ಬದ್ಧವಾಗಿ ಶರ್ವಾನಂದ್ ಜೋಡಿ ಮದುವೆಯಾದರು. ನಟ ಶರ್ವಾನಂದ್ ಲೈಟ್ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ
ಜೈಪುರ ಲೀಲಾ ಪ್ಯಾಲೇಸ್ನಲ್ಲಿ ಮದುವೆಯಾಗಿದ್ದ ಶರ್ವಾನಂದ್ ಇದೀಗ ಹೈದರಾಬಾದ್ನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಆಪ್ತರಿಗೆ ರಿಸೆಪ್ಷನ್ಗೆ ಆಹ್ವಾನ ನೀಡಿದ್ದರು. ಸೆಲೆಬ್ರಿಟಿಗಳ ದಂಡೇ ನಟನ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಳಿ ಬಣ್ಣದ ಸೂಟ್ನಲ್ಲಿ ಶರ್ವಾನಂದ್ ಕಾಣಿಸಿಕೊಂಡಿದ್ದರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಶರ್ವಾನಂದ್ ರೆಸೆಪ್ಷನ್ ಸಂಭ್ರಮದಲ್ಲಿ ರಾಮ್ ಚರಣ್ (Ram Charan) ದಂಪತಿ, ಬಾಲಯ್ಯ, ನಟ ವೆಂಕಟೇಶ್, ರಾಣಾ ದಗ್ಗುಭಾಟಿ, ಲಕ್ಷ್ಮಿ ಮಂಚು, ನಿಖಿಲ್ ಸಿದ್ಧಾರ್ಥ್, ನಟಿ ರೀತು ವರ್ಮಾ ಸೇರಿದಂತೆ ಹಲವು ಭಾಗಿಯಾಗಿ, ಶುಭಕೋರಿದರು.
























ನಾಯಕಿಯಾಗಿ ಡಿಮ್ಯಾಂಡ್ನಲ್ಲಿರುವ ನಟಿ ಈಗಾಗಲೇ ಸಾಕಷ್ಟು ಚಿತ್ರದಲ್ಲಿನ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೋ, ಗಣಿ, ಜಾಗ್ವಾರ್, ಜೈ ಲವಕುಶ, ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹೆಜ್ಜೆ ಹಾಕಿ ಮಿಂಚಿದ್ದಾರೆ. ಸದ್ಯ ಬಾಲಯ್ಯ ಜೊತೆ ತಮನ್ನಾ ಐಟಂ ಡ್ಯಾನ್ಸ್ ನ್ಯೂಸ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಶಿವಣ್ಣ ಕುಟುಂಬದವರಿಗೂ ಮತ್ತು ಬಾಲಯ್ಯ ಕುಟುಂಬಕ್ಕೂ ಸಾಕಷ್ಟು ವರ್ಷಗಳಿಂದ ಒಳ್ಳೆಯ ಒಡನಾಟವಿದೆ. ಸಿನಿಮಾಗೂ ಮೀರಿ ಆತ್ಮೀಯ ಒಡನಾಟವಿದೆ. ಹಾಗೆಯೇ ಸಿನಿಮಾ ಅಂತಾ ಬಂದಾಗ ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಾರೆ. ಈಗ ತೆಲುಗಿನಲ್ಲಿ ಅಬ್ಬರಿಸಲು `ವೇದ’ ಅಬ್ಬರಿಸಲು ʻವೇದʼ ಚಿತ್ರ ರೆಡಿಯಾಗಿದೆ. ಇದೇ ಫೆ.9ಕ್ಕೆ ಸಿನಿಮಾ ತೆಲುಗಿನಲ್ಲಿ ಅಬ್ಬರಿಸಲಿದೆ. ಹೀಗಿರುವಾಗ ಶಿವಣ್ಣ ಸಿನಿಮಾ ಪ್ರಚಾರ ಕಾರ್ಯಕ್ರಮ ಬಾಲಯ್ಯ ಅವರು ಭಾಗಿಯಾಗಿ ಶಿವಣ್ಣ ಮತ್ತು ಅವರ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸ್ಟಾರ್ ಆಗಿ ಮಿಂಚಿದವರು ಪವನ್ ಕಲ್ಯಾಣ್, ಸಿನಿಮಾ ಜೊತೆಗೆ ರಾಜಕೀಯದಲ್ಲೂ ಪವನ್ ಬೆಳಗುತ್ತಿದ್ದಾರೆ. ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಇತ್ತೀಚಿಗೆ ಬಾಲಯ್ಯ ಅವರ ನಿರೂಪಣೆಯ ಟಾಕ್ ಶೋವೊಂದರಲ್ಲಿ ನಟ ಪವನ್ ಭಾಗವಹಿಸಿದ್ದಾರೆ. ಮದುವೆ, ರಾಜಕೀಯ (Politics) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಪವನ್ ಕಲ್ಯಾಣ್ ಎಂದಾಕ್ಷಣ ಗಾಸಿಪ್ ಪ್ರಿಯರಿಗೆ ಚರ್ಚೆಗೆ ಗ್ರಾಸವಾಗೋದೇ ಅವರ ಮದುವೆ ಮತ್ತು ಡಿವೋರ್ಸ್ ವಿಚಾರ. ಅದಕ್ಕೆಲ್ಲಾ ಪವನ್ ಕಲ್ಯಾಣ್ ಖಡಕ್ ಉತ್ತರ ಕೊಟ್ಟಿದ್ದಾರೆ. ವೈಯಕ್ತಿಕ ಜೀವನವನ್ನ ರಾಜಕೀಯಕ್ಕೆ ಹೋಲಿಸಿ ಮಾತನಾಡುವವರಿಗೂ ತಿರುಗೇಟು ನೀಡಿದ್ದಾರೆ. ಇದೀಗ ಬಾಲಯ್ಯ ನಡೆಸಿ ಕೊಡುವ ಅನ್ಸ್ಟಾಪೆಬಲ್ (Unstoppable Show) ಶೋನಲ್ಲಿ ಮೂರು ಮದುವೆಯಾಗಿದ್ದು ಯಾಕೆ? ಅದೆಲ್ಲ ಹೇಗಾಯಿತು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.
