Tag: ಬಾಲಕಿ

  • ಫಿಲಂಗೆ ಕರೆದುಕೊಂಡು ಹೋಗೋ ನೆಪದಲ್ಲಿ 7ನೇ ತರಗತಿ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

    ಫಿಲಂಗೆ ಕರೆದುಕೊಂಡು ಹೋಗೋ ನೆಪದಲ್ಲಿ 7ನೇ ತರಗತಿ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

    – ಇಬ್ಬರು ಅಪ್ರಾಪ್ತರು ಸೇರಿ ಮೂವರ ಬಂಧನ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಕಾಮಮೃಗಗಳ ಅಟ್ಟಹಾಸ ಮುಂದುವರೆದಿದೆ. ಫಿಲಂಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಕಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬಾಲಕಿ 7ನೇ ತರಗತಿ ವಿದ್ಯಾರ್ಥಿಯೆಂದು ತಿಳಿದುಬಂದಿದೆ. ಮೂವರಲ್ಲಿ ಒಬ್ಬಾತ ಬಾಲಕಿ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ. ಅಲ್ಲದೆ ಮೂವರಲ್ಲಿ ಇಬ್ಬರು ಯುವಕರು ಅಪ್ರಾಪ್ತರೆಂದು ತಿಳಿದುಬಂದಿದೆ.

    ನಡೆದಿದ್ದೇನು?: ಮೇ 8ರಂದು ಬಾಲಕಿಯನ್ನ ಯಶವಂತಪುರಕ್ಕೆ ಫಿಲಂ ನೋಡಲು ಕರೆದುಕೊಂಡು ಬಂದಿದ್ದ ಆರೋಪಿ ರಾತ್ರಿ 8-30ರ ನಂತರ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಸಿ ಪೀಣ್ಯದ ಪಾಳು ಬಿದ್ದ ಮನೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಸ್ನೇಹಿತರಿಗೆ ಕರೆ ಮಾಡಿದ್ದು, ಅವರು ಸಹ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ರು. ಘಟನೆ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ರು. ರಾತ್ರಿ 10-30ರ ನಂತರ ಎಚ್ಚರಗೊಂಡ ಬಾಲಕಿ ಮನೆ ಕಡೆ ಹೊರಟಾಗ ದಾರಿಯಲ್ಲಿ ಸಿಕ್ಕ ಸ್ನೇಹಿತೆ ಬಳಿ ನಡೆದ ವಿಚಾರವನ್ನೆಲ್ಲಾ ಹೇಳಿದ್ದಾಳೆ. ನಂತರ ಬಾಲಕಿ 5 ದಿನಗಳ ಕಾಲ ಸ್ನೇಹಿತೆಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ಅತ್ತ ಬಾಲಕಿಯ ತಾಯಿ ಮಗಳು ನಾಪತ್ತೆಯಾಗಿರೋ ಬಗ್ಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ರು.

    5 ದಿನಗಳ ನಂತರ ಮನೆಗೆ ಹೋದ ಬಾಲಕಿ ನಡೆದ ವಿಚಾರವನ್ನೆಲ್ಲಾ ತಾಯಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಮಗಳನ್ನು ಠಾಣೆಗೆ ಕರೆತಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಮೂವರನ್ನ ಬಂಧಿಸಿದ್ದಾರೆ.

  • ಬೋಟ್‍ನಲ್ಲಿ ಕುಳಿತಿದ್ದ ಬಾಲಕಿಯನ್ನು ಏಕಾಏಕಿ ನೀರಿಗೆಳೆದ ಕಡಲಸಿಂಹ! ಶಾಕಿಂಗ್ ವಿಡಿಯೋ ನೋಡಿ

    ಬೋಟ್‍ನಲ್ಲಿ ಕುಳಿತಿದ್ದ ಬಾಲಕಿಯನ್ನು ಏಕಾಏಕಿ ನೀರಿಗೆಳೆದ ಕಡಲಸಿಂಹ! ಶಾಕಿಂಗ್ ವಿಡಿಯೋ ನೋಡಿ

    ಒಟ್ಟಾವ: ಬೋಟ್‍ನಲ್ಲಿ ಕುಳಿತಿದ್ದ ಬಾಲಕಿಯನ್ನು ಕಡಲ ಸಿಂಹ ಸೀಲ್ ಎಳೆದೊಯ್ದ ಘಟನೆ ಕೆನಡಾದ ಪಶ್ಚಿಮ ಕರಾವಳಿಯಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೋಟ್‍ನಿಂದ ಈಜುತ್ತಿದ್ದ ಸೀಲ್‍ಗೆ ಆಹಾರ ಎಸೆದಿದ್ದಾರೆ. ಇತ್ತ ಬಾಲಕಿಯೊಬ್ಬಳು ಮಾತನಾಡುತ್ತಾ ನಗುತ್ತಾ ಬೋಟ್ ಬದಿಯಲ್ಲಿ ಬಂದು ಕುಳಿತಿದ್ದಾಳೆ. ಆಹಾರವನ್ನು ಅರಸುತ್ತಿದ್ದ ಸೀಲ್ ಗೆ ಬಾಲಕಿ ಬಿಳಿ ಬಟ್ಟೆ ಧರಿಸಿ ಕುಳಿತಿರುವುದು ಕಂಡಿತು. ಹೀಗಾಗಿ ತನಗೆ ಆಹಾರ ಸಿಕ್ಕಿತ್ತೆಂದು ಸೀಲ್ ಹಾರಿ ಆಕೆಯ ಅಂಗಿಯನ್ನು ಕಚ್ಚಿ ನೀರಿಗೆಳೆದಿದೆ. ಈ ವೇಳೆ ಅಲ್ಲಿದ್ದವರು ಆಶ್ಚರ್ಯಗೊಂಡು ಕೂಗಾಡಿದ್ದಾರೆ. ಆದ್ರೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಕೂಡಲೇ ಸಮುದ್ರಕ್ಕೆ ಹಾರಿ ಹುಡುಗಿಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಹುಡುಗಿ ಪಾರಾಗಿದ್ದು, ವ್ಯಕ್ತಿಯ ಕೈಗೆ ಗಾಯಗಳಾಗಿವೆ. ಆದ್ರೆ ನೀರಿನಿಂದ ರಕ್ಷಿಸಿದ ಕೂಡಲೇ ಬಾಲಕಿಯನ್ನು ಆಕೆಯ ಪೋಷಕರು ಕರೆದುಕೊಂಡು ಹೋಗಿದ್ದಾರೆ.

    ಘಟನೆಯ ಸಂಪೂರ್ಣ ದೃಶ್ಯವನ್ನು ಮೈಕೆಲ್ ಫುಜಿವಾರಾ ಎಂಬವರು ಸೆರೆಹಿಡಿದಿದ್ದು, ಬಳಿಕ ಸಾಮಾಜಿಕ ಜಾಲತಾಣ ಯೂಟ್ಯೂಬ್ ಗೆ ಕಳೆದ ಶನಿವಾರ ಅಪ್ ಲೋಡ್ ಮಾಡಿದ್ದಾರೆ. ಅಪ್ ಲೋಡ್ ಮಾಡಿದ ದಿನನೇ ಸುಮಾರು ಒಂದೂವರೆ ಲಕ್ಷ ವ್ಯೂ ವಿಡಿಯೋವನ್ನು ನೋಡಿದ್ದು, ಇದೂವರೆಗೆ 67.49 ವ್ಯೂ ಕಂಡಿದೆ.

  • ಕೊಪ್ಪಳ ಆಸ್ಪತ್ರೆಯಲ್ಲಿ ಬಾಲಕಿ ಸಾವು: ವೈದ್ಯರ ವಿರುದ್ಧ ಪೋಷಕರು ಆರೋಪ

    ಕೊಪ್ಪಳ ಆಸ್ಪತ್ರೆಯಲ್ಲಿ ಬಾಲಕಿ ಸಾವು: ವೈದ್ಯರ ವಿರುದ್ಧ ಪೋಷಕರು ಆರೋಪ

    ಕೊಪ್ಪಳ: ಮೂರು ವರ್ಷದ ಮಗುವೊಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಮೃತ ಬಾಲಕಿಯನ್ನು ಕಲ್ಗುಡಿ ಗ್ರಾಮದ ಅಮೃತಾ ಎಂದು ಗುರುತಿಸಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಕಿಯನ್ನು ಶುಕ್ರವಾರ ಬೆಳಗ್ಗೆ ಪೋಷಕರು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಡಾ ಎಸ್ ಜಿ ಮಟ್ಟಿಗೆ ಸೇರಿದ ತೇಜಸ್ವಿನಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಅಂತೆಯೇ ಬಾಲಕಿಯನ್ನು ಪರೀಕ್ಷಿಸಿರುವ ವೈದ್ಯ ರಕ್ತದ ಕೊರತೆ ಇದ್ದು, ರಕ್ತ ಹಾಕಬೇಕು ಎಂದು ಹೇಳಿದ್ರು. ಆದ್ರೆ, ಸೂಕ್ತ ಸಮಯದಲ್ಲಿ ರಕ್ತ ನೀಡದಿರುವುದೇ ಸಾವಿಗೆ ಕಾರಣವಾಗಿದೆ. ವೈದ್ಯರು ಹೇಳುತ್ತಿದ್ದಂತಯೇ ರಕ್ತ ತಂದರೂ ಹಾಕಿಲ್ಲ ಎಂದು ಬಾಲಕಿ ಕುಟುಂಬ ಆಸ್ಪತ್ರೆ ಮುಂದೆ ನಿನ್ನೆ ರಾತ್ರಿ ಇಡೀ ಪ್ರತಿಭಟನೆ ನಡೆಸಿದೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈ ಬಿಡಲ್ಲ ಅಂತಾ ಪಟ್ಟು ಹಿಡಿದಿದ್ರು.

    ಗಂಗಾವತಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

     

  • ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್‍ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ

    ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್‍ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ

    ವಿಜಯವಾಡ: ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.

    ಆಂಧ್ರಪ್ರದೇಶ ಮೂಲದ ಈ ಬಾಲಕಿಯ ಹೆಸರು ಸಾಯಿ ಶ್ರೀ. ಈಕೆಗೆ ಬೋನ್ ಮ್ಯಾರೋ ಕ್ಯಾನ್ಸರ್ ಇದೆ ಎಂದು 2016ರ ಆಗಸ್ಟ್ 27ರಂರಂದು ವೈದ್ಯರು ಹೇಳಿದ್ದರು. ಆದ್ರೆ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಅಮ್ಮನ ಬಳಿ ಇಲ್ಲ. ಮನೆ ಮಾರಿ ಹಣ ಕೊಡಿ. ಅಮ್ಮನಿಗೆ ಹಣ ಕೊಡಲು ಇಷ್ಟವಿಲ್ಲ ಅಂದ್ರೆ ನೀವೇ ಬಂದು ಆಸ್ಪತ್ರೆಯಲ್ಲಿ ಹಣ ಕಟ್ಟಿ ಎಂದು ಸಾಯಿ ಶ್ರೀ ವಿಡಿಯೋ ಮೂಲಕ ತನ್ನ ತಂದೆಗೆ ಹಣ ನೀಡುವಂತೆ ಕೇಳಿದ್ದಳು.

    ಸಾಯಿ ಶ್ರೀ ತಂದೆ ಮದಮ್‍ಶೆಟ್ಟಿ ಶಿವಕುಮಾರ್ ತನ್ನ ಪತ್ನಿ ಸುಮಾ ಶ್ರೀ ಮತ್ತು ಮಗಳಿಂದ 8 ವರ್ಷದ ಹಿಂದೆಯೇ ದೂರವಾಗಿದ್ರು. ವರದಿಯ ಪ್ರಕಾರ ಸಾಯಿ ಶ್ರೀ ತನ್ನ ತಾಯಿಯೊಂದಿಗೆ ವಿಜಯವಾಡದಲ್ಲಿ ನೆಲೆಸಿದ್ದು, ತಂದೆ ಬೆಂಗಳೂರಿನಲ್ಲಿದ್ದರು ಎನ್ನಲಾಗಿದೆ.

    ಶಿವ ಕುಮಾರ್ ಮತ್ತು ಸುಮಾ ದೂರವಾಗುವುದಕ್ಕೂ ಮುನ್ನ ಮಗಳಾದ ಸಾಯಿ ಶ್ರೀ ಹೆಸರಲ್ಲಿ ಒಂದು ಫ್ಲಾಟ್ ಖರೀದಿಸಿದ್ರು. ಮನೆ ಮಾರಿ ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮುಂದಾದಾಗ ಗಂಡ ಶಿವ ಕುಮಾರ್, ತೆಲುಗು ದೇಶಂ ಪಾರ್ಟಿಯ ಶಾಸಕ ಬೋಂಡಾ ಉಮಾಮಹೇಶ್ವರ್ ರಾವ್ ಅವರ ನೆರವಿನಿಂದ ಮನೆ ಮಾರಾಟ ಮಾಡದಂತೆ ತಡೆದಿದ್ದರು ಎಂದು ಸುಮಾ ಆರೋಪಿಸಿದ್ದಾರೆ.

    ಶಾಸಕರ ಬೆಂಬಲ ಇದ್ದ ಕಾರಣ ಶಿವ ಕುಮಾರ್ ಕಳಿದಿದ್ದ ಗೂಂಡಾಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಆಂಧ್ರಪ್ರದೇಶದ ಪೊಲೀಸರು ನಿರಾಕರಿಸಿದ್ರು ಎಂದು ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ.

    ಈ ಬಗ್ಗೆ ಹೇಳಿಕೆ ನೀಡಿರೋ ಬಾಲಾಲ ಹಕ್ಕುಳ ಸಂಗಂನ ಅಧ್ಯಕ್ಷರಾದ ಅಚ್ಯುತ್ ರಾವ್, ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

    ಹಣ ನೀಡಲು ಶಕ್ತರಾಗಿದ್ದರೂ ತಂದೆ ಮಗಳ ಚಿಕಿತ್ಸೆಗೆ ಹಣ ನೀಡಿಲ್ಲವೆಂಬುದನ್ನು ಮನಗಂಡ ರಾಜ್ಯ ಮಾನವ ಹಕ್ಕುಗಳ ಆಯೋಗ, ಈ ಬಗ್ಗೆ ವಿಸ್ತøತ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.

    ಈ ವಿಡಿಯೋ ಸದ್ಯ ದೇಶದಾದ್ಯಂತ ವೈರಲ್ ಆಗಿದ್ದು, ತಂದೆಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

    https://www.youtube.com/watch?v=iqejG-FQ01s

    https://www.youtube.com/watch?v=wpxTOC7C-aY

     

  • ಸೋದರಮಾವನಿಂದಲೇ ಅಪ್ರಾಪ್ತೆಯ ಅಪಹರಣ!

    ಸೋದರಮಾವನಿಂದಲೇ ಅಪ್ರಾಪ್ತೆಯ ಅಪಹರಣ!

    ಯಾದಗಿರಿ: ಶಹಾಪೂರ ತಾಲೂಕಿನ ಗೊಂದೆನೂರು ಗ್ರಾಮದಲ್ಲಿ ಸೋದರಮಾವನೇ ಅಪ್ರಾಪ್ತ ಬಾಲಕಿಯನ್ನು ಅಪಹರಣಗೈದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

    ಕೊಂಕಲ ಗ್ರಾಮದ ನಿವಾಸಿ ಬಸವರಾಜ(45) ಬಾಲಕಿಯನ್ನು ಅಪಹರಿಸಿದ ವ್ಯಕ್ತಿ. ಗೊಂದೆನೂರು ಗ್ರಾಮದ ಜಮೀನಿನ ಮನೆಯೊಂದರಲ್ಲಿ ಕಳೆದ ಎರಡು ವರ್ಷಗಳಿಂದ ವಾಸವಾಗಿದ್ದ ಬಸವರಾಜನಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳು ಇವೆ. ಬಾಲಕಿಯನ್ನು ಪ್ರೀತಿಯ ಜಾಲದಲ್ಲಿ ಹಾಕಿ ಅಪಹರಿಸಿಕೂಂಡು ಹೋಗಿದ್ದಾನೆ ಅಂತ ಬಾಲಕಿಯ ಪೋಷಕರ ಹೇಳಿದ್ದಾರೆ.

    ಬಾಲಕಿಯು ಶಹಾಪೂರದಲ್ಲಿ ಪ್ರಥಮ ಪಿಯುಸಿ ಓದು ತ್ತಿದ್ದಳು, ಫೆಭ್ರುವರಿ 18 ರಂದು ಕಾಲೇಜಿಗೆ ಬಂದಾಗ ಶಹಾಪೂರದಿಂದಲೇ ಕಿಡ್ನಾಪ್ ಮಾಡಿಕೂಂಡು ಹೋಗಿದ್ದಾನೆ ಅಂತ ಬಾಲಕಿಯ ಪೋಷಕರು ದೂರಿದ್ದಾರೆ. ಇನ್ನು ಅಪಹರಣ ಮುನ್ನಾದಿನವೇ ನಿನ್ನನ್ನು ಇಷ್ಟಪಟ್ಟಿದೆನೆ. ನಾನೇ ಮದುವೆ ಮಾಡಿಕೂಳ್ಳುತ್ತೇನೆ ಅಂತಾ ಸೋದರಮಾವ ಬಸವರಾಜ ಬಾಲಕಿಗೆ ಹೇಳಿದ್ದಾನೆ. ಮಾರನೆ ದಿನವೆ ಬಾಲಕಿಯನ್ನು ಅಪಹರಿಸಿಕೂಂಡು ಹೋಗಿದ್ದಾನೆ. ಈ ಕುರಿತು ಬಾಲಕಿಯ ತಂದೆ ಫೆಬ್ರವರಿ 18 ರಂದು ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಆರಂಭದಲ್ಲಿ ಪೊಲೀಸರು ಕಿಡ್ನಾಪ್ ಪ್ರಕರಣದ ದೂರು ದಾಖಲು ಮಾಡಿಕೂಂಡಿರಲಿಲ್ಲ. ಬಾಲಕಿಯನ್ನು ಹುಡಿಕಿ ಕೂಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಭರವಸೆ ನೀಡಿದಂತೆ ಪೊಲೀಸರು ಹುಡುಕಾಡಿದರೂ ಬಾಲಕಿ ಬಗ್ಗೆ ಸುಳಿವು ಸಿಗಲಿಲ್ಲ. ಹೀಗಾಗಿ ಮಾರ್ಚ್ 17 ರಂದು ವಡಗೇರಾ ಪೊಲಿಸರು ಕಿಡ್ನಾಪ ಪ್ರಕರಣ ದಾಖಲಿಸಿಕೂಂಡು ಆರೋಪಿ ಬಂಧನಕ್ಕೆ ವ್ಯಾಪಕವಾಗಿ ಜಾಲ ಬಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಒನ್ ಸೈಡ್ ಲವ್ ಅಥವಾ ಬಾಲಕಿಯು ಕೂಡ ಆತನನ್ನು ಪ್ರೀತಿ ಮಾಡುತ್ತಿದ್ದಾಳಾ ಎಂಬುವದು ಪೊಲೀಸರು ತನಿಖೆ ಬಳಿಕ ಗೊತ್ತಾಗಲಿದೆ.

    ಮಗಳನ್ನು ಪತ್ತೆ ಹಚ್ಚಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ವಿಳಂಬವಾದ್ರೆ ಕುಟುಂಬ ಸಮೇತ ವಡಗೆರಾ ಪೊಲೀಸ್ ಠಾಣೆ ಎದರುಗಡೆ ಅಮರಣಾಂತ ಸತ್ಯಾಗ್ರಹ ಮಾಡುವದಾಗಿ ಎಚ್ಚರಿಕೆ ನೀಡಿದೆ.

  • 3 ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ: ಕಸದ ರಾಶಿಯಲ್ಲಿ ಸಿಕ್ತು ಶವ

    3 ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ: ಕಸದ ರಾಶಿಯಲ್ಲಿ ಸಿಕ್ತು ಶವ

    ಚೆನ್ನೈ: 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಮಗುವಿನ ಮೃತದೇಹ ಕಸದ ರಾಶಿಯಲ್ಲಿ ಪತ್ತೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಭಾನುವಾರ ಮಧ್ಯಾಹ್ನ ಇಲ್ಲಿನ ತಿರುವೊಟ್ಟಿಯೂರ್ ಬಳಿ ಇರುವ ಡಂಪಿಂಗ್ ಯಾರ್ಡ್‍ನಲ್ಲಿ ಕಾರ್ಮಿಕರು ಕಸವನ್ನು ಸುರಿಯುತ್ತಿದ್ದ ವೇಳೆ ಮಗುವಿನ ಮೃತದೇಹ ಪತ್ತೆಯಾಗಿದೆ.

    ಶನಿವಾರ ಮಧ್ಯಾಹ್ನ ಮಗು ತನ್ನ 5 ವರ್ಷದ ಅಣ್ಣನೊಂದಿಗೆ ಆಟವಾಡುತ್ತಿತ್ತು. ಮಗುವಿನ ತಾಯಿ ಜ್ವರದಿಂದ ಮಲಗಿದ್ದರು ಹಾಗೂ ತಂದೆ ಕೆಲಸಕ್ಕೆ ಹೋಗಿದ್ದರು. 3 ಗಂಟೆಯ ನಂತರ ತಾಯಿ ನಿದ್ದೆಯಿಂದ ಎದ್ದು ಹುಡುಕಾಡಿದಾಗ ಬಾಲಕಿ ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೂಡಲೇ ಅವರು ಎರ್ನಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವನ್ನು ಹುಡುಕಲು ಪೊಲೀಸರು ಪ್ರಯತ್ನಿಸಿದರಾದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.

    ಕಸದ ರಾಶಿಯಲ್ಲಿ ಮಗುವಿನ ಶವ ಕಂಡು ಕೆಲಸಗಾರರು ತಿರುವಟ್ಟೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ನಂತರ ಪೋಷಕರು ಬಂದು ಮಗುವಿನ ಗುರುತು ಪತ್ತೆ ಹಚ್ಚಿದ್ದು, ಈ ಶವ ಎರ್ನಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಬಾಲಕಿಯದ್ದೇ ಎಂದು ಖಚಿತವಾಯಿತು.

    ನಂತರ ಇಲ್ಲಿನ ಸರ್ಕಾರಿ ಸ್ಟ್ಯಾನ್ಲಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಬಾಲಕಿಯ ನೆರಮನೆಯ ವ್ಯಕ್ತಿಯೇ ಈ ಕೃತ್ಯವೆಸಗಿರಬಹುದು ಎಂಬ ಶಂಕೆಯ ಮೇಲೆ ಪೊಲಿಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಘಟನೆಯಿಂದ ಆಕ್ರೋಶಗೊಂಡ ಸ್ಥಳಿಯ ನಿವಾಸಿಗಳು ಎರ್ನಾವೂರ್ ಪೊಲೀಸ್ ಠಾಣೆಗೆ ಮತ್ತಿಗೆ ಹಾಕಿ ದುಷ್ಕರ್ಮಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ರು.

  • ಸಾಕು ತಂದೆಯಿಂದಲೇ ಅತ್ಯಾಚಾರ- ತಂದೆಯ ಕೃತ್ಯಕ್ಕೆ ಗರ್ಭಿಣಿಯಾದ ಬಾಲಕಿ

    ಚಿಕ್ಕಮಗಳೂರು: ಸಾಕು ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿ ಮಗಳನ್ನ ಗರ್ಭಿಣಿ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

    ಮಕ್ಕಳಿಲ್ಲದ ಕಾರಣ ಹೆಣ್ಣು ಮಗುವೊಂದನ್ನ ದತ್ತು ತೆಗೆದುಕೊಂಡು ಸಾಕಿದ್ದ 59 ವರ್ಷದ ಕೃಷ್ಣಪ್ಪ ತಾನೇ ಎತ್ತಿ, ಮುದ್ದಾಡಿ ಬೆಳೆಸಿದ್ದ ಏಳನೇ ತರಗತಿ ಓದುತ್ತಿರೋ ಮಗಳನ್ನ ನಿರಂತರವಾಗಿ ಲೈಂಗಿಕ ತೃಪ್ತಿಗೆ ಬಳಸಿಕೊಂಡಿದ್ದ. ಆ ಬಾಲಕಿ ಈಗ ಮೂರು ತಿಂಗಳ ಗರ್ಭೀಣಿ. ಕೃಷ್ಣಪ್ಪ ಬಾಲಕಿಗೆ ಕೆಲ ನಾಟಿ ಔಷಧಿಗಳನ್ನು ಕೊಡಿಸಿದ್ದ ಎಂದು ಹೇಳಲಾಗ್ತಿದೆ.

    ಇದೀಗ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರೋ ಕೊಪ್ಪ ತಾಲೂಕಿನ ಜೈಪುರ ಪೊಲೀಸರು ಆರೋಪಿ ಕೃಷ್ಣಪ್ಪನನ್ನ ಬಂಧಿಸಿದ್ದಾರೆ. ಸಂತ್ರಸ್ಥ ಬಾಲಕಿಗೆ ಕೊಪ್ಪದ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

  • 15 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ 70,000ಕ್ಕೆ ಮಾರಿಬಿಟ್ರು!

    ನವದೆಹಲಿ: ಛತ್ತೀಸ್‍ಗಢಕ್ಕೆ ಹೋಗಬೇಕಾಗಿದ್ದ 15 ವರ್ಷದ ಬಾಲಕಿ ರೈಲಿನಲ್ಲಿ ದೆಹಲಿಗೆ ಬಂದಿಳಿದಿದ್ದು, ಕಿಡಿಗೇಡಿಗಳು ಆಕೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಬಳಿಕ ಮಾರಾಟ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಹುಮಾಯೂನ್ ಸಮಾಧಿ ಬಳಿ ಶುಕ್ರವಾರ ಬಂಧಿಸಿದ್ದಾರೆ.

    ನಡೆದಿದ್ದೇನು?: 15 ವರ್ಷದ ಬಾಲಕಿ ಚತ್ತೀಸ್ ಗಢದಲ್ಲಿರುವ ತಮ್ಮ ಸಂಬಂಧಿಕರ ಮನೆಗೆಂದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹೊರಟಿದ್ದಳು. ಆದ್ರೆ ಆಕೆ ಆಕಸ್ಮಿಕವಾಗಿ ಬೇರೆ ರೈಲು ಹತ್ತಿದ್ದರಿಂದ ದೆಹಲಿಗೆ ಬಂದಿಳಿದಿದ್ದಾಳೆ. ಈ ವೇಳೆ ಬಾಲಕಿಗೆ ರೈಲ್ವೆ ನಿಲ್ದಾಣದಲ್ಲಿ ನೀರಿನ ಬಾಟಲಿಗಳನ್ನು ಮಾರುತ್ತಿದ್ದ ಅರ್ಮಾನ್ ಎಂಬಾತ ಪರಿಚಯವಾಗುತ್ತಾನೆ. ಬಳಿಕ ಪತ್ನಿ ಹಸೀನಾಳ ನೆರವಿನೊಂದಿಗೆ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದನು. ನಂತರ ಪಪ್ಪು ಯಾದವ್ ಎಂಬಾತನಿಗೆ ದಂಪತಿ 70,000 ರೂ.ಗೆ ಬಾಲಕಿಯನ್ನು ಮಾರಾಟ ಮಾಡಿದ್ದರು.

    ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿದ್ದ ಪಪ್ಪು ಜೊತೆ ಬಾಲಕಿ 2 ತಿಂಗಳವರೆಗೂ ಫರೀದಾಬಾದ್ ನ ಮನೆಯಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆಯೊಂದಿಗೆ ನೆಲೆಸಿದ್ದಳು. ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಓಡಿ ಬಂದಿದ್ದ ಬಾಲಕಿಗೆ ಮತ್ತೆ ಹಸೀನಾ ಎದುರಾಗಿದ್ದಳು. ಈ ವೇಳೆ ಮತ್ತು ಬರುವ ಪಾನೀಯವನ್ನು ಬಾಲಕಿಗೆ ಕುಡಿಸಿದ ಹಸೀನಾ ಅವಳನ್ನು 22 ವರ್ಷದ ಮೊಹಮ್ಮದ್ ಅಫ್ರೋಜ್ ಎಂಬ ಯುವಕನಿಗೆ ಮಾರಾಟ ಮಾಡಿದ್ದಾಳೆ.

    ರೈಲ್ವೆ ನಿಲ್ದಾಣದಲ್ಲೇ ಅಫ್ರೋಜ್ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹಸೀನಾಗೆ ಒಂದಷ್ಟು ಹಣವನ್ನು ನೀಡಿದ್ದನು. ಹೇಗೋ ಕಾಮುಕನ ಕೈಯಿಂದ ತಪ್ಪಿಸಿಕೊಂಡ ಬಾಲಕಿ ಪ್ರಯಾಣಿಕರ ನೆರವಿನಿಂದ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಪಪ್ಪು ಯಾದವ್ ಹಾಗೂ ಅಫ್ರೋಜ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ ತಲೆಮರೆಸಿಕೊಂಡಿರೋ ಪ್ರಮುಖ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸದ್ಯ ಬಾಲಕಿಗೆ ಏಮ್ಸ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್ ನಡೆಯುತ್ತಿದೆ.