Tag: ಬಾಲಕಿ

  • ಶಾಲೆಗೆ ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವು

    ಶಾಲೆಗೆ ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವು

    ಹಾವೇರಿ: ಶಾಲೆಗೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ನಡೆದಿದೆ.

    ಮೃತ ಬಾಲಕಿಯನ್ನ ಕಾಕೋಳ ತಾಂಡಾದ ನಿವಾಸಿ ಕಾವ್ಯಾ ಲಮಾಣಿ(16) ಎಂದು ಗುರುತಿಸಲಾಗಿದೆ. ಬೆಳಗ್ಗೆ ತಾಂಡಾದಿಂದ ರಾಣೇಬೆನ್ನೂರು ನಗರದ ರಾಜರಾಜೇಶ್ವರಿ ಶಾಲೆ ಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಬಾಲಕಿ ಕಾವ್ಯಾ ರಾಜರಾಜೇಶ್ವರಿ ಹೈಸ್ಕೂಲ್ ನಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಾಕೋಳ ತಾಂಡಾದಿಂದ ಟ್ರ್ಯಾಕ್ಟರ್ ನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಘಟನೆಯ ಸ್ಥಳದಿಂದ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮಗಳ ಸಾವಿನ ಸುದ್ದಿಗೆ ಶಾಕ್ ಆಗಿ ತಾಯಿಯೂ ಮೃತಪಟ್ಟಳು!

    ಮಗಳ ಸಾವಿನ ಸುದ್ದಿಗೆ ಶಾಕ್ ಆಗಿ ತಾಯಿಯೂ ಮೃತಪಟ್ಟಳು!

    ಚಿತ್ರದುರ್ಗ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೂರು ವರ್ಷದ ಮಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಘಾತಕ್ಕೆ ಒಳಗಾದ ತಾಯಿ ಕೂಡ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಂಡೇನಹಳ್ಳಿ ಗ್ರಾಮದ ಬಾಲಕಿ ಕೀರ್ತನಾ(3) ಹಾಗೂ ತಾಯಿ ರಂಜಿತಾ(23) ಮೃತ ದುರ್ದೈವಿಗಳು.

    ಸೋಮವಾರ ಬೆಳಗ್ಗೆ 5 ಘಂಟೆ ಸುಮಾರಿಗೆ ತೀವ್ರ ಅಸ್ವಸಳಾಗಿದ್ದ ತೀರ್ತನಾಳನ್ನ ಧರ್ಮಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗೆ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದ ಕಾರಣ ಹಿರಿಯೂರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಮಗುವಿನ ಮರಣದಿಂದ ಆಘಾತಕ್ಕೆ ಒಳಗಾದ ತಾಯಿ ಕೂಡ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅಬ್ಬಿನ ಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾಪತ್ತೆಯಾಗಿದ್ದ 2 ವರ್ಷದ ಬಾಲಕಿ ನೀರಿನ ಸಂಪ್‍ನಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ 2 ವರ್ಷದ ಬಾಲಕಿ ನೀರಿನ ಸಂಪ್‍ನಲ್ಲಿ ಶವವಾಗಿ ಪತ್ತೆ

    – ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಕೊಪ್ಪಳ: ಕಳೆದರೆಡು ದಿನಗಳಿಂದ ನಿಗೂಢವಾಗಿ ಕಾಣೆಯಾಗಿದ್ದ 2 ವರ್ಷದ ಬಾಲಕಿ ಶವ ಎದುರಿನ ಮನೆಯ ನೀರಿನ ಸಂಪ್‍ನಲ್ಲಿ ಪತ್ತೆಯಾಗಿದೆ.

    ಕೊಪ್ಪಳದ ಯಲಬುರ್ಗಾ ಪಟ್ಟಣದ ಮೆಹಬೂಬ ನಗರದಲ್ಲಿ ಕಳೆದ ಜೂನ್ 28 ರಂದು ಬಾಲಕಿ ಕಾಣೆಯಾಗಿದ್ದಳು. ಬಾಬುಸಾಬ್ ವಣಗೇರಿ ದಂಪತಿಯ 2ನೇ ಪುತ್ರಿ ಉಸ್ನಾ ಪಕ್ಕದ ಮನೆಯಲ್ಲಿ ಆಟವಾಡಲು ಹೋಗಿ ಕಾಣೆಯಾಗಿದ್ದಳು.

    ಜೂನ್ 28 ರಂದು ಪಕ್ಕದ ಮನೆಯಲ್ಲಿದ್ದ ಬಾಲಕಿಯನ್ನ ಕರೆದುಕೊಂಡು ಹೋಗಲು ಬಾಲಕಿ ತಾಯಿ ಹೋಗಿದ್ದರು. ಆದ್ರೆ ಆ ಮನೆಯವರು ನಿಮ್ಮ ಬಾಲಕಿ ಆವಾಗ್ಲೆ ಮನೆಗೆ ಹೋಗಿದ್ದಾಳೆ ಅಂತಾ ಹೇಳಿದ್ದರು. ಅಂದಿನಿಂದಲೇ ಬಾಲಕಿ ನಾಪತ್ತೆ ಆಗಿದ್ದಳು. ಆ ಬಳಿಕ ಬಾಲಕಿ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು.

    ಬಾಲಕಿ ಕಾಣೆಯಾಗಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ವೈರಲ್ ಆಗಿತ್ತು. ಆದ್ರೆ ಇಂದು ಬೆಳಗ್ಗೆ ಸಂಪ್ ತೆಗೆದು ನೋಡಿದಾಗ ನೀರಿನಲ್ಲಿ ಬಾಲಕಿ ಶವ ತೇಲುತ್ತಿರುವುದನ್ನು ಕಂಡಿದ್ದಾರೆ. ಸದ್ಯ ಬಾಲಕಿಯ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಲೆ ಮಾಡಿ ಸಂಪ್‍ನಲ್ಲಿ ಬಿಸಾಡಿ ಹೋಗಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

     

  • ಚಾಕಲೇಟ್ ಕೊಡಿಸೋದಾಗಿ ಹೇಳಿ 6ರ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

    ಚಾಕಲೇಟ್ ಕೊಡಿಸೋದಾಗಿ ಹೇಳಿ 6ರ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

    ತುಮಕೂರು: ಚಾಕೊಲೇಟ್ ಕೊಡಿಸೋದಾಗಿ ಪುಸಲಾಯಿಸಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ವೇದಮೂರ್ತಿ(35) ಅತ್ಯಾಚಾರ ಎಸಗಿದ ಕಾಮುಕ. ಶುಕ್ರವಾರ ಸಂಜೆ ವೇಳೆ ಬಾಲಕಿಯನ್ನು ಚಾಕಲೇಟ್ ಕೊಡಿಸೋದಾಗಿ ಹೇಳಿ ಮನೆಯ ಹಿಂಬದಿಯ ನಿಲಗಿರಿ ತೋಪಿಗೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ.

    ಕುಡಿದ ಮತ್ತಿನಲ್ಲಿದ್ದ ಕಾಮುಕ ಮುಗ್ಧ ಬಾಲಕಿ ಕಿರುಚಿಕೊಂಡರೂ ಬಿಡದೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರವನ್ನು ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ.

    ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

     

  • 5 ವರ್ಷದ ಪೋರಿಗೆ ಬಾಯ್‍ಫ್ರೆಂಡ್ ಜೊತೆ ಮದ್ವೆ- ಸಾವಿನಂಚಿನ ಬಾಲೆಯ ಆಸೆ ಈಡೇರಿಸಿದ ಪೋಷಕರು

    5 ವರ್ಷದ ಪೋರಿಗೆ ಬಾಯ್‍ಫ್ರೆಂಡ್ ಜೊತೆ ಮದ್ವೆ- ಸಾವಿನಂಚಿನ ಬಾಲೆಯ ಆಸೆ ಈಡೇರಿಸಿದ ಪೋಷಕರು

    ಎಡಿನ್ಬರ್ಗ್(ಸ್ಕಾಟ್ಲೆಂಡ್): 5 ವರ್ಷದ ಬಾಲಕಿಯೊಬ್ಬಳು ತನ್ನ ಬೆಸ್ಟ್ ಫ್ರೆಂಡ್ ಜೊತೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿರೋ ಘಟನೆ ಸ್ಕಾಟ್ಲೆಂಡ್‍ನಲ್ಲಿ ನಡೆದಿದೆ.

    ಕ್ಯಾನ್ಸರ್‍ನಿಂದಾಗಿ ಸಾವಿನಂಚಿನಲ್ಲಿದ್ದ ಐದು ವರ್ಷದ ಈಲೀದ್ ಪ್ಯಾಟರ್ಸನ್ ಎಂಬಾಕೆ ಮದುವೆಯಾದ ಬಾಲಕಿ. ಎರಡು ವರ್ಷ ವಯಸ್ಸಿನಲ್ಲಿರುವಾಗಲಿಂದಲೇ ಬಾಲಕಿ ಕ್ಯಾನ್ಸರ್ ನಿಂದ ಬಳುತ್ತಿದ್ದಳು. ಈಕೆ ತನ್ನ ಗೆಳೆಯ ಹ್ಯಾರಿಸನ್ ಗ್ರಯರ್ ಎಂಬಾತನ್ನು ಮದುವೆಯಾಗುವ ಕನಸು ಹೊಂದಿದ್ದಳು.

    ಚಿಕ್ಕವರಾಗಿದ್ದರೂ ಇಬ್ಬರೂ ಒಬ್ಬರನೊಬ್ಬರು ಮೆಚ್ಚಿಕೊಂಡಿದ್ದರು. ಹ್ಯಾರಿಸನ್ ಕೂಡ ನಾನು ಆಕೆಯನ್ನು ಪ್ರೀತಿಸಿಸುತ್ತಿದ್ದೇನೆ. ಹಾಗೂ ಆಕೆಯನ್ನು ಮದುವೆಯಾಗುವುದಾಗಿ ಹೇಳಿಕೊಳ್ಳುತ್ತಿದ್ದನು ಅಂತಾ ಈಲೀದ್ ತಂದೆ, ತಾಯಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಅಲ್ಲದೇ ಈಲೀದ್ ಕೂಡ ಆಸ್ಪತ್ರೆಯಲ್ಲಿ ದಾದಿಯರ ಜೊತೆ ನನಗೆ ಬಾಯ್ ಫ್ರೆಂಡ್ ಇದ್ದಾನೆ. ನಾವಿಬ್ಬರೂ ಮುಂದೊಂದು ದಿನ ಮದುವೆಯಾಗುತ್ತೇವೆ ಅಂತೆಲ್ಲ ಹೇಳುತ್ತಿದ್ದಳು.

    ಐದು ವರ್ಷದ ಪುಟ್ಟ ಬಾಲಕಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಪತ್ತೆ ಮಾಡುವಷ್ಟರಲ್ಲಿ ಅದು ಇಡೀ ದೇಹಕ್ಕೆ ಹರಡಿತ್ತು. ಹೀಗಾಗಿ ಬಾಲಕಿಯ ಪೋಷಕರು ಕೊನೆಯ ಆಸೆ ಏನೆಂಬುವುದನ್ನು ಕೇಳಿದ್ದಾರೆ. ಈ ಬಾಲಕಿ ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗಬೇಕು. ಇದೇ ನನ್ನ ಕೊನೆಯ ಆಸೆಗಳಲ್ಲಿ ಮೊದಲೆನೆಯದು ಎಂದಿದ್ದಾಳೆ. ಅಂತೆಯೇ ಇಬ್ಬರ ಪೋಷಕರೂ ಒಪ್ಪಿ ಅದ್ಧೂರಿಯಾಗಿಯೇ ಈಲೀದ್ ಬಾಯ್ ಫ್ರೆಂಡ್ 6 ವರ್ಷದ ಹ್ಯಾರಿಸನ್ ಜೊತೆ ಮದುವೆ ಮಾಡಿದ್ದಾರೆ. ಸೈಂಟ್ ಕ್ರಿಸ್ಟೋಫರ್‍ನ ನೆಕ್ಲೇಸ್ ಗಳನ್ನು ವಿನಿಮಯ ಮಾಡಿಕೊಂಡು ಇಬ್ಬರೂ ಮದುವೆಯಾಗಿದ್ದಾರೆ. ಮದುವೆಗೆ ಆಗಮಿಸಿದ ಎಲ್ಲರೂ ಪ್ರೀತಿಪೂರ್ವಕವಾಗಿಯೇ ಇಬ್ಬರಿಗೂ ಶುಭಾಶಯ ತಿಳಿಸಿದ್ದಾರೆ.

    ಈ ಬಗ್ಗೆ ಈಲೀದ್ ತಂದೆ ಗೈಲ್ ಪತ್ರಿಕೆಯೊಂದಕ್ಕೆ ಮಾತನಾಡಿ, ಮಗಳ ಮದುವೆ ನೋಡಿ ನಿಜಕ್ಕೂ ಒಂದು ಬಾರಿ ಕಣ್ಣೀರು ಬಂತು. ಆದ್ರೆ ಕೂಡಲೇ ನಾನು ಅಳಬಾರದು ಅಂದುಕೊಂಡು ಸುಮ್ಮನಾದೆ. ನನ್ನ ಜೀವನದಲ್ಲಿ ಇದೊಂದು ಅದ್ಭುತ ದಿನವಾಗಿದೆ ಅಂತಾ ತಿಳಿಸಿದ್ದಾರೆ.

  • 3 ವರ್ಷದ ಮಗಳ ಕಿವಿಯನ್ನೇ ಕತ್ತರಿಸಿದ ತಂದೆ!

    3 ವರ್ಷದ ಮಗಳ ಕಿವಿಯನ್ನೇ ಕತ್ತರಿಸಿದ ತಂದೆ!

    ನವದೆಹಲಿ: ತಂದೆಯೊಬ್ಬ ತನ್ನ 3 ವರ್ಷದ ಪುಟ್ಟ ಮಗಳ ಕಿವಿಯನ್ನೇ ಕತ್ತರಿಸಿದ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ.

    35 ವರ್ಷದ ಅಮೃತ್ ಬಹದ್ದೂರ್ ಈ ಕೃತ್ಯವೆಸಗಿದ್ದು ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಗುರುವಾರ ಬೆಳಿಗ್ಗೆ ದೆಹಲಿಯ ಜಿಟಿಬಿಒ ಎನ್‍ಕ್ಲೇವ್‍ನಲ್ಲಿ ಈ ಘಟನೆ ನಡೆದಿದೆ.

    ದೆವ್ವ ಹೇಳ್ತಂತೆ!: ಕುಟುಂಬಸ್ಥರ ಪ್ರಕಾರ ಕೆಲವು ತಿಂಗಳ ಹಿಂದೆ ಒಂದೂವರೆ ವರ್ಷದ ಮಗಳು ಮೃತಪಟ್ಟಿದ್ದು ಅಂದಿನಿಂದ ಬಹದ್ದೂರ್ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಅಂದಿನಿಂದ ದೆವ್ವ ಭೂತ ಎಂಬ ಭ್ರಮೆಗಳನ್ನ ಹೊಂದಿದ್ದು, ಎರಡನೇ ಮಗಳ ಕಿವಿ ಕತ್ತರಿಸುವಂತೆ ದೆವ್ವ ಹೇಳಿತು ಎಂದು ಬಹದ್ದೂರ್ ಹೇಳಿದ್ದಾನೆ.

    ಬಹದ್ದೂರ್ ಕ್ಲೀನರ್ ಆಗಿ ಕೆಲಸ ಮಾಡ್ತಿದ್ದು, ಮಧ್ಯರಾತ್ರಿ ಸುಮಾರು 1.30ರ ಸಮಯದಲ್ಲಿ ಮನೆಗೆ ಬಂದಿದ್ದ. ಈ ವೇಳೆ ಮದ್ಯಪಾನ ಮಾಡಿದ್ದ. ಈತನಿಗೆ ಈ ಕೃತ್ಯವೆಸಗಲು ಏನೋ ಒಂದು ಪ್ರಚೋದನೆ ನೀಡುತ್ತಿದೆ ಎನ್ನಿಸುತ್ತಿತ್ತಂತೆ. ಒಂದು ವೇಳೆ ಹಾಗೆ ಮಾಡದಿದ್ದರೆ ಎರಡನೇ ಮಗಳನ್ನ ಕಳೆದುಕೊಳ್ಳಬಹುದು ಎಂದುಕೊಂಡಿದ್ದನಂತೆ. ಹೀಗಾಗಿ ಮಗಳ ಕಿವಿಯನ್ನ ಕತ್ತರಿಸಿದೆ ಎಂದಿದ್ದಾನೆ.

    ಈ ವೇಳೆ ಕುಟುಂಬಸ್ಥರು ಎಚ್ಚರಗೊಂಡು ಚೀರಾಡಿದ್ದಾರೆ. ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಬಾಲಕಿಯನ್ನ ರಕ್ಷಿಸಲಾಗಿದೆ ಎಂದು ಡಿಸಿಪಿ ನೂಪುರ್ ಪ್ರಸಾದ್ ಎಎನ್‍ಐಗೆ ತಿಳಿಸಿದ್ದರೆ.

    ಬಾಲಕಿಯ ತಾಯಿ ಮಧ್ಯಪ್ರವೇಶಿಸಲು ಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಬಹದ್ದೂರ್ ಹೆಂಡತಿಯನ್ನ ಹೊಡೆದು, ಮನೆ ಬಿಟ್ಟು ಹೋಗುವಂತೆ ಹೇಳಿದ್ದ. ನಂತರ ಹೆಂಡತಿ ಹಾಗೂ ಉಳಿದ ಐವರು ಮಕ್ಕಳನ್ನು ಮೇಲ್ಮಡಿಗೆ ಕರೆದುಕೊಂಡು ಹೋಗಿ ಬಾಗಿಲನ್ನ ಲಾಕ್ ಮಾಡಿದ್ದ. ನಂತರ ವಾಪಸ್ ಬಂದು ಮಗಳಿಗೆ ಮತ್ತಷ್ಟು ಹಿಂಸೆ ನೀಡಿ ಕಿವಿಯನ್ನ ಕತ್ತರಿಸಿದ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕೆಗೆ ತಿಳಿಸಿದ್ದಾರೆ.

    ಕಿವಿಯನ್ನು ಕತ್ತರಿಸಿದ್ರೂ ದೆವ್ವಕ್ಕೆ ತೃಪ್ತಿಯಾಗ್ಲಿಲ್ಲ ಎಂದು ಹೇಳಿ ಬಹದ್ದೂರ್ ಮಗಳ ಕುತ್ತಿಗೆಯಿಂದ ರಕ್ತ ಬೇಕು ಎಂದಿದ್ದ. ಈ ವೇಳೆ ಬಾಲಕಿ ಓಡಿಹೋಗಲು ಯತ್ನಿಸಿದ್ದು ಆತ ಆಕೆಯನ್ನು ಹಿಡಿದುಕೊಂಡಿದ್ದಾನೆ. ಬಾಲಕಿಯ ತಾಯಿ ಜೋರಾಗಿ ಕಿರುಚಾಡೋದನ್ನ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದು ಪೊಲೀಸರಿಗೆ ಕರೆ ಮಾಡಿದ್ರು. ನಂತರ ಪೊಲೀಸರು ಬಹದ್ದೂರ್ ಮನೆ ತಲುಪಿದ್ರು. ಆತ ಕುತ್ತಿಗೆಯನ್ನು ಸೀಳುವ ಮುನ್ನವೇ ಆತನನ್ನ ಹಿಡಿದುಕೊಳ್ಳಲಾಯ್ತು ಎಂದು ಹಿರಿಯ ಅಧಿಕಾರಿಯಬ್ಬರು ಹೇಳಿದ್ದಾರೆ. ಬಾಲಕಿಯನ್ನು ಸದ್ಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.

    ಬಹದ್ದೂರ್‍ನ ಅಣ್ಣ 7 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅಣ್ಣನ ಸಾವಿನ ನಂತರ ಆತ 4 ಮಕ್ಕಳಿದ್ದ ಅತ್ತಿಗೆಯನ್ನೇ ಮದುವೆಯಾಗಿದ್ದಾನೆಂದು ವರದಿಯಾಗಿದೆ.

  • ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಮನೆಗೆ ಕಳುಹಿಸಿದ ಶಿಕ್ಷಕಿ!

    ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಮನೆಗೆ ಕಳುಹಿಸಿದ ಶಿಕ್ಷಕಿ!

    ಪಾಟ್ನಾ: ಶಾಲಾ ಯೂನಿಫಾರ್ಮ್ ಶುಲ್ಕ ಪಾವತಿಸದ್ದಕ್ಕೆ ಶಿಕ್ಷಕಿಯೊಬ್ಬರು ಇಬ್ಬರು ಬಾಲಕಿಯರನ್ನ ಅರೆಬೆತ್ತಲೆಯಾಗಿ ಮನೆಗೆ ಕಳುಹಿಸಿದ ಘಟನೆ ಬಿಹಾರದ ಬೆಗುಸರಾಯ್‍ನ ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಒಂದು ಮತ್ತು 2ನೇ ತರಗತಿಯ ಓದುವ ವಿದ್ಯಾರ್ಥಿನಿಯರನ್ನು ಶಿಕ್ಷಕಿ ಎಲ್ಲರ ಮುಂದೆ ಯೂನಿಫಾರ್ಮ್ ಬಟ್ಟೆ ಬಿಚ್ಚಿಸಿ ಮನೆಗೆ ಕಳುಹಿಸಿದ್ದಾಳೆ.

    ನಾವು ಬಡವರಾಗಿದ್ದೇವೆ. ಶುಲ್ಕ ಪಾವತಿಸಲು ಸ್ವಲ್ಪ ಸಮಯ ಬೇಕು ಎಂದು ಬಾಲಕಿಯರ ತಂದೆ ಮನವಿ ಮಾಡಿದ್ದರೂ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಅವಮಾನ ಮಾಡಿದ್ದಾಳೆ.

    ಬಾಲಕಿಯರ ತಂದೆ ದೂರು ನೀಡಿದ್ದು, ಈಗ ಶಾಲೆಯ ಶಿಕ್ಷಕಿಯಾದ ಅಂಜನಾ ಕುಮಾರಿ ಮತ್ತು ಶಾಲಾ ಪ್ರಾಂಶುಪಾಲರಾದ ಎನ್.ಕೆ.ಝಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ರಂಜಿತ್ ಮಿಶ್ರಾ ತಿಳಿಸಿದ್ದಾರೆ.

    ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಆರೋಪಿಗಳು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ರಾಜ್ಯ ಶಿಕ್ಷಣ ಸಚಿವ ಅಶೋಕ್ ಚೌಧರಿ ತಿಳಿಸಿದ್ದಾರೆ.

     

  • ಐಸ್ ಕ್ರೀಂ ಕೊಡಿಸೋ ನೆಪದಲ್ಲಿ 5ರ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದ!

    ಐಸ್ ಕ್ರೀಂ ಕೊಡಿಸೋ ನೆಪದಲ್ಲಿ 5ರ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದ!

    ಹುಬ್ಬಳ್ಳಿ: ವ್ಯಕ್ತಿಯೊಬ್ಬ ಐಸಕ್ರೀಮ್ ಕೊಡಿಸುವ ನೆಪದಲ್ಲಿ ಐದು ವರುಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹಳೇ ಹುಬ್ಬಳ್ಳಿಯ ಆನಂದನಗರದ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 56 ವರ್ಷದ ನಾಗಪ್ಪ ಪೂಜಾರ್ ಮನೆಯ ಮುಂದೆ ನಿಂತಿದ್ದ ಬಾಲಕಿಯನ್ನು ನೋಡಿ ಅವಳಿಗೆ ಐಸ್ ಕ್ರೀಮ್ ಕೋಡಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಬಾಲಕಿ ಅವನೊಂದಿಗೆ ಹೋಗಿದ್ದಾಳೆ. ಬಳಿಕ ಮಗುವನ್ನು ಗೋಕುಲ ರಸ್ತೆಯ ಬಂಜಾರ ಕಾಲೋನಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ನಾಗಪ್ಪ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಬಲಾತ್ಕಾರ ಯತ್ನದ ನಂತರ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ರಕ್ತದ ಮಡುವಿನಲ್ಲಿ ಅಳುತ್ತಾ ಬಿದ್ದಿರುವುದನ್ನು ನೋಡಿದ ಸಾರ್ವಜನಿಕರು ಕೂಡಲೇ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇತ್ತ ಮಗು ಕಾಣೆಯಾದ ಬಗ್ಗೆ ಪೋಷಕರಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐಸ್ ಕ್ರೀಮ್ ಕೊಡಿಸುವುದಾಗಿ ಅಮಾಯಕ ಬಾಲಕಿಗೆ ಆಮಿಷ ಒಡ್ಡಿ ಹೀನ ಕೃತ್ಯವೆಸಗಿದ ನಾಗಪ್ಪ ಪೂಜಾರ್‍ನನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ.

  • 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಪ್ರಕರಣ- ಆರೋಪಿ ಬಂಧನ

    5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಪ್ರಕರಣ- ಆರೋಪಿ ಬಂಧನ

    ಬೆಂಗಳೂರು: ಕೆಜಿ ಹಳ್ಳಿಯಲ್ಲಿ 5 ವರ್ಷದ ಬಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ವೀರೇಶ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನ ಕೆಜಿ ಹಳ್ಳಿ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಏನಿದು ಘಟನೆ?: ಬೆಂಗಳೂರಿನ ಕೆಜಿ ಹಳ್ಳಿಯ ವೈಯಾಲಿಕಾವಲ್ ಸೊಸೈಟಿ ಬಳಿ ಮನೆಯಲ್ಲಿ ಎಂದಿನಂತೆ ಶುಕ್ರವಾರ ರಾತ್ರಿಯೂ ತಾಯಿಯ ಜೊತೆ ಮಲಗಿದ್ದ ಬಾಲಕಿ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಿದೆ. ಆದ್ರೆ ಈ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ. ಬಾಲಕಿ ಹೊರಗೆ ಬಂದಿದ್ದ ವೇಳೆ ಕಾಮುಕ ಆಕೆಯನ್ನು ಕರೆದುಕೊಂಡು ಹೋಗಿ ವೈಯಲಿಕಾವಲ್ ಸೂಸೈಟಿ ಗ್ರೌಂಡ್ ನಲ್ಲಿ ಅತ್ಯಾಚಾರವೆಸಗಿದ್ದ. ಬಳಿಕ ಮನೆಯ ಬಳಿ ಬಾಲಕಿಯನ್ನು ಬಿಸಾಕಿ ಹೋಗಿದ್ದ. ಇದರಿಂದ ಬಾಲಕಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು.

    ಪ್ರಕರಣ ಸಂಬಂಧ ಸಚಿವ ಕೆಜೆ ಜಾರ್ಜ್ ನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿಯ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಬಾಲಕಿಯ ಪೋಷಕರ ಜೊತೆಗೂ ಮಾತುಕತೆ ನಡೆಸಿದ್ದರು. ಘಟನೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=uCpC9-RbZAg

  • 5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

    5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

    ಬೆಂಗಳೂರು: ನಗರದಲ್ಲಿ ಕಾಮುಕರ ಅಟ್ಟಹಾಸ ಮೀತಿಮೀರಿದೆ. ಮೂವರು ಕಾಮುಕರು ಶುಕ್ರವಾರ ಮಧ್ಯರಾತ್ರಿ ಐದು ವರ್ಷದ ಪುಟ್ಟ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಗ್ಯಾಂಗ್ ರೇಪ್ ಎಸಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

    ಬೆಂಗಳೂರಿನ ಕೆಜಿ ಹಳ್ಳಿಯ ವೈಯಾಲಿಕಾವಲ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಮಗುವಿನ ಪೋಷಕರು ಮೂಲತಃ ಚಿತ್ರದುರ್ಗದವರಾಗಿದ್ದು, ಕೆಲಸದ ನಿಮಿತ್ತ ಬೆಂಗಲೂರಿನಲ್ಲಿ 3 ವರ್ಷಗಳಿಂದ ವಾಸವಿದ್ದಾರೆ.

    ನಡೆದಿದ್ದೇನು?: ಎಂದಿನಂತೆ ತಾಯಿಯ ಜೊತೆ ಮಲಗಿದ್ದ ಬಾಲಕಿ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಿದೆ. ಆದ್ರೆ ಈ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ. ಬಾಲಕಿ ಹೊರಗೆ ಬಂದಿದ್ದ ವೇಳೆ ಕಾಮುಕರು ಆಕೆಯನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಮನೆಯ ಬಳಿ ಬಾಲಕಿಯನ್ನು ಬಿಸಾಕಿ ಹೋಗಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಮಾತನಾಡುವ ಪರಿಸ್ಥಿತಿಗೆ ಬಂದ ಬಳಿಕ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಅಂತಾ ಡಿಸಿಪಿ ಅಜಯ್ ಹಿಲೋರಿ ಹೇಳಿದ್ದಾರೆ.

    ನಿನ್ನೆ ಮೂರು ಗಂಟೆ ಸುಮಾರಿಗೆ ಆಸ್ಪತ್ರೆಗೆ ಮಗು ದಾಖಲಾಗಿದೆ. ಮಗು ಶಾಕ್‍ಗೆ ಒಳಗಾಗಿದೆ. ಆಸ್ಪತ್ರೆಗೆ ದಾಖಲಾದಾಗ ಅರೆಪ್ರಜ್ಞಾವಸ್ಥೆಯಲ್ಲಿ ಇತ್ತು. ಮಗುವಿನ ಕೈ ಬೆರಳು ಕಟ್ಟಾಗಿದೆ. ಸದ್ಯ ಬಾಲಕಿಗೆ ಐಸಿಯೂವಿನಲ್ಲಿ ಚಿಕಿತ್ಸೆ ಮುಂದುವರೆದಿದೆ ಅಂತಾ ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಮಂಜುನಾಥ್ ಹೇಳಿದ್ದಾರೆ.

    ಜಾರ್ಜ್ ಭೇಟಿ: ಪ್ರಕರಣ ಸಂಬಂಧ ಸಚಿವ ಕೆ ಜೆ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಬಾಲಕಿಯ ಪೋಷಕರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸಿರಿಯಸ್ ಕ್ರೈಂ. ಪ್ರಕರಣದಲ್ಲಿ ಯಾರೆ ತಪ್ಪು ಮಾಡಿದ್ರು ಕಠಿಣ ಶಿಕ್ಷೆ ಆಗಬೇಕು ಅಂತ ಹೇಳಿದ್ದಾರೆ.

    ಘಟನೆಯಿಂದ ಮಗು ತಲೆಗೆ ಏಟಾಗಿದೆ. ಅದಕ್ಕೆ ಮೊದಲ ಆದ್ಯತೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಪೊಲೀಸ್ರು ಪ್ರಕರಣವನ್ನು ಪಡೆದುಕೊಂಡು ತನಿಖೆ ಮಾಡುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಸೀರಿಯಸ್ ಆಗಿ ಮಾಡಿ ಕೋರ್ಟ್‍ಗೆ ನೀಡ್ತಾರೆ. ಪೊಲೀಸ್ರಿಗೆ ಸಹಕಾರ ನೀಡಬೇಕು. ಸಮಾಜ ಇಂತಹವರ ವಿರುದ್ಧ ಒಟ್ಟಾಗಿ ಶಿಕ್ಷೆ ನೀಡಬೇಕು. ಇದು ಸಮಾಜ ಸಹಿಸಲಾಗದ ಪ್ರಕರಣವಾಗಿದೆ. ಇಂತಹ ಕೃತ್ಯವೆಸಗಿದ್ದಾರೆ ಅವರಿಗೆ ಶಿಕ್ಷೆ ನೀಡಬೇಕಿದೆ. ಈ ಬಗ್ಗೆ ಕಮಿಷನರ್ ಮತ್ತು ಡಿಸಿಪಿ ಜತೆ ಮಾತನಾಡಿದ್ದೇನೆ ಅಂತಾ ಜಾರ್ಜ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಕೆಜಿ ಹಳ್ಳಿ ಪೊಲೀಸರು ಕಾಮುಕರಿಗಾಗಿ ಬಲೆ ಬೀಸಿದ್ದಾರೆ.