Tag: ಬಾಲಕಿ

  • ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

    ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

    ನವದೆಹಲಿ: ತಂದೆ-ತಾಯಿ ಇಬ್ಬರೂ ಕೆಲಸದಲ್ಲಿದ್ದರೆ ಮಕ್ಕಳನ್ನು ನೋಡಿಕೊಳ್ಳಲೆಂದು ಆಳುಗಳನ್ನು ನೇಮಿಸುತ್ತಾರೆ. ಹೀಗೆ ನೇಮಕಗೊಂಡ ವ್ಯಕ್ತಿಯೇ 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರವೆಸಗಿರೋ ಶಾಕಿಂಗ್ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ದಕ್ಷಿಣ ದೆಹಲಿಯ ಶಾಹಪುರ್ ಜಾಟ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳ ದಿನಾಚರಣೆಯ ಹಿಂದಿನ ದಿನವಾದ ಸೋಮವಾರ ಈ ಘಟನೆ ನಡೆದಿದ್ದು, ಇಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?: ತನ್ನ ಪುಟ್ಟ ಕಂದಮ್ಮನನ್ನು ನೋಡಿಕೊಳ್ಳಲೆಂದು ಮಗುವಿನ ತಂದೆ ಪ್ರಖ್ಯಾತ ಉದ್ಯೋಗ ಸಂಸ್ಥೆಯಿಂದ ವ್ಯಕ್ತಿಯೊಬ್ಬನನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಆದ್ರೆ ಅದೇ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿಯ ನೀಚ ಕೃತ್ಯದಿಂದ ಪುಟ್ಟ ಕಂದಮ್ಮನ ಸ್ಥಿತಿ ಚಿಂತಾನಜನಕವಾಗಿದ್ದು, ಸದ್ಯ ನಗರದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಸೋಮವಾರ ಮಧ್ಯಾಹ್ನದ ಬಳಿಕ ತಾಯಿ ಮನೆಗೆ ಬಂದು ನೋಡಿದಾಗ ಮಗುವಿನ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಪುಟ್ಟ ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಹೌಹಾರಿದ ತಾಯಿ ಆತಂಕ ಹಾಗೂ ಗಾಬರಿಗೊಂಡು ಕೂಡಲೇ ಆರೋಪಿಯನ್ನು ಪ್ರಶ್ನಿಸಿದ್ದಾರೆ. ತನ್ನ ಪತಿಗೂ ಈ ವಿಚಾರ ತಿಳಿಸಿದ್ದಾರೆ. ಬಳಿಕ ಆರೋಪಿಯಿದ್ದ ಕೋಣೆಯ ಬಾಗಿಲಿಗೆ ಬೀಗ ಜಡಿದು ಪೊಲೀಸರಿಗೆ ಮಾಹಿತಿ ನೀಡಿದ್ರು.

    ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆಯೊಳಗಿನಿಂದಲೇ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಇತ್ತ ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಘಟನೆ ಸಂಬಂಧ ಆರೋಪಿ ವಿರುದ್ಧ ಹಾಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

  • ಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ಬಕೆಟ್‍ನಲ್ಲಿ ಕೂರಿಸಿ ರಕ್ಷಿಸಿದ್ರು: ವಿಡಿಯೋ ನೋಡಿ

    ಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ಬಕೆಟ್‍ನಲ್ಲಿ ಕೂರಿಸಿ ರಕ್ಷಿಸಿದ್ರು: ವಿಡಿಯೋ ನೋಡಿ

    ಭೋಪಾಲ್: ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯ ದೇವಾಲ್ಪುರ ಗ್ರಾಮದಲ್ಲಿ ನಡೆದಿದೆ.

    ದೇವಾಲ್ಪುರ ಗ್ರಾಮದ ನಿವಾಸಿಗಳಾದ ರಾಹುಲ್ ಮತ್ತು ಸುರೇಂದ್ರ ಎಂಬುವವರು ಬಾವಿಗೆ ಹಾರಿ ಬಾಲಕಿಯನ್ನು ಕಾಪಾಡಿದ್ದಾರೆ. ಬಾಲಕಿ ತನ್ನ ಅಮ್ಮ ಮತ್ತು ಚಿಕ್ಕಮ್ಮನ ಜೊತೆ ಸ್ನಾನ ಮಾಡಲು ನೀರನ್ನು ತೆಗೆದುಕೊಂಡು ಬರಲು ಬಾವಿಗೆ ಬಂದಿದ್ದಳು. ಬಾವಿಯಿಂದ ನೀರು ಎಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ. ತಕ್ಷಣ ತಾಯಿ ಕೂಗಿಕೊಂಡಿದ್ದು, ಅಲ್ಲೇ ಸಮೀಪದಲ್ಲಿದ್ದ ರಾಹುಲ್ ಹಾಗೂ ಸುರೇಂದ್ರ ತಮ್ಮ ಜೀವದ ಹಂಗು ತೊರೆದು ಬಾಲಕಿಯನ್ನು ರಕ್ಷಣೆ ಮಾಡಲು ಬಾವಿಗೆ ಹಾರಿದ್ದಾರೆ.

    ನಂತರ ಗ್ರಾಮಸ್ಥರು ಮೇಲಿಂದ ಒಂದು ಹಗ್ಗಕ್ಕೆ ಬಕೆಟ್ ಕಟ್ಟಿ ಕೆಳಗೆ ಬಿಟ್ಟಿದ್ದಾರೆ. ಬಾವಿ ಒಳಗೆ ಇದ್ದ ಇಬ್ಬರು ಆ ಬಕೆಟ್‍ನಲ್ಲಿ ಬಾಲಕಿಯನ್ನು ಕೂರಿಸಿದ್ದಾರೆ. ನಂತರ ಬಾವಿಯ ಮೇಲಿದ್ದವರು ನಿಧಾನವಾಗಿ ಹಗ್ಗವನ್ನು ಎಳೆದುಕೊಂಡು ಬಾಲಕಿಯನ್ನು ಮೇಲೆಕ್ಕೆತ್ತಿದ್ದಾರೆ. ಈ ಎಲ್ಲಾ ಸಾಹಸ ದೃಶ್ಯಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    https://www.youtube.com/watch?v=B4Oo6rnK9vQ

  • ಮಗಳು ಸಾವನ್ನಪ್ಪಿದ್ದಕ್ಕೆ ವೈದ್ಯರ ಮೇಲೆ ತಾಯಿಯಿಂದ ಹಲ್ಲೆಗೆ ಯತ್ನ

    ಮಗಳು ಸಾವನ್ನಪ್ಪಿದ್ದಕ್ಕೆ ವೈದ್ಯರ ಮೇಲೆ ತಾಯಿಯಿಂದ ಹಲ್ಲೆಗೆ ಯತ್ನ

    ಬೆಳಗಾವಿ: ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ ಪೋಷಕರು ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ತಾಯವ್ವಾ ಕಾಮಶೆಟ್ಟಿ ಎಂಬ ಬಾಲಕಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಹಾಗೂ ಅವರ ನಿರ್ಲಕ್ಷ್ಯಕ್ಕೆ ನಮ್ಮ ಮಗಳು ಸಾವನ್ನಪಿದ್ದಾಳೆ ಎಂದು ತಾಯಿ ಹಾಗೂ ಸಂಬಂಧಿಕರು ಆಕ್ರೋಶಗೊಂಡು ವೈದ್ಯರಾದ ಡಾ. ಅಂಬಲಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

    ಘಟನೆ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಹಿರಿಯ ವೈದ್ಯರು ಹಲ್ಲೆ ನಡೆಸುವುದನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸದ್ಯ ನ್ಯಾಯ ಒದಗಿಸಿಕೊಡುವವರಿಗೆ ಶವವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದು ಕುಳಿತಿದ್ದಾರೆ.

  • ಪಕ್ಕದ ಮನೆಗೆ ಆಟವಾಡಲು ಹೋಗಿದ್ದ 1 ವರ್ಷದ ಬಾಲಕಿ ಮೇಲೆ ಮಕ್ಕಳ ಮುಂದೆಯೇ ಅತ್ಯಾಚಾರ

    ಪಕ್ಕದ ಮನೆಗೆ ಆಟವಾಡಲು ಹೋಗಿದ್ದ 1 ವರ್ಷದ ಬಾಲಕಿ ಮೇಲೆ ಮಕ್ಕಳ ಮುಂದೆಯೇ ಅತ್ಯಾಚಾರ

    ನವದೆಹಲಿ: ಪಕ್ಕದ ಮನೆಗೆ ಆಟವಾಡಲೆಂದು ಹೋಗಿದ್ದ 1 ವರ್ಷದ ಬಾಲಕಿ ಮೇಲೆ 33 ವರ್ಷದ ವ್ಯಕ್ತಿ ಆತನ ಮಕ್ಕಳ ಮುಂದೆಯೇ ಅತ್ಯಾಚಾರ ನಡೆಸಿರೋ ಆಘಾತಕಾರಿ ಘಟನೆ ಬುಧವಾರದಂದು ದೆಹಲಿಯಲ್ಲಿ ನಡೆದಿದೆ.

    ಪಕ್ಕದ ಮನೆಯಲ್ಲಿ ವಾಸವಿದ್ದ 4 ವರ್ಷದ ಬಾಲಕ ಹಾಗೂ 2 ವರ್ಷದ ಬಾಲಕಿಯೊಂದಿಗೆ ಆಟವಾಡಲೆಂದು ಬಾಲಕಿ ಹೋಗಿದ್ದಳು. ಈ ವೇಳೆ ಆ ಮಕ್ಕಳ ತಾಯಿ ಟೆರೆಸ್ ಮೇಲೆ ಏನೋ ಕೆಲಸ ಮಾಡುತ್ತಿದ್ದರು. ಇತ್ತ ಮನೆಯ ರೂಮಿನಲ್ಲಿ ಆರೋಪಿ ಬಾಲಕಿಯ ಮೇಲೆ ತನ್ನ ಮಕ್ಕಳ ಮುಂದೆಯೇ ಅತ್ಯಾಚಾರ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಬಾಲಕಿ ಮನೆಗೆ ಹಿಂದಿರುಗಿದ ನಂತರ ಆಕೆಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ತಾಯಿ ನೋಡಿದ್ದರು. ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಯಿತು ಎಂದು ಅವರು ತಿಳಿಸಿದ್ದಾರೆ.

    ನಂತರ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯ ತಾಯಿ ತನ್ನ ಗಂಡನಿಂದ ದೂರವಾಗಿದ್ದು, ದೆಹಲಿಯಲ್ಲಿ ತಾಯಿ ಮನೆಯಲ್ಲಿ ವಾಸವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿಯನ್ನು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಕೆಯನ್ನು ಭೇಟಿಯಾಗುವುದಾಗಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಸಭೆ ಕರೆಯಬೇಕೆಂದು ಸ್ವಾತಿ ಹೇಳಿದ್ದಾರೆ ಎಂದು ವರದಿಯಾಗಿದೆ.

     

  • ಹೆಡ್ ಮಾಸ್ಟರ್ ನಿಂದ್ಲೇ ರೇಪ್- ಗರ್ಭಿಣಿಯಾಗಿದ್ದಕ್ಕೆ ಗ್ರಾಮದಿಂದಲೇ ಬಾಲಕಿ ಕುಟುಂಬಕ್ಕೆ ಬಹಿಷ್ಕಾರ

    ಹೆಡ್ ಮಾಸ್ಟರ್ ನಿಂದ್ಲೇ ರೇಪ್- ಗರ್ಭಿಣಿಯಾಗಿದ್ದಕ್ಕೆ ಗ್ರಾಮದಿಂದಲೇ ಬಾಲಕಿ ಕುಟುಂಬಕ್ಕೆ ಬಹಿಷ್ಕಾರ

    ಭುವನೇಶ್ವರ್: ಮೂರು ವಾರಗಳ ಹಿಂದೆ ಶಾಲೆಯ ಮುಖ್ಯೋಪಾದ್ಯಾಯನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿ ಮಾಡಿ ಜೈಲಿಗೆ ಹೋದ ಘಟನೆ ಒಡಿಶಾದ ಕೊರತ್ ಪುತ್ ಜಿಲ್ಲೆಯಲ್ಲಿ ನಡೆದಿದೆ.

    ಮದುವೆಯ ಮುಂಚೆ ಬಾಲಕಿ ಗರ್ಭವತಿ ಆಗಿರುವ ವಿಷಯ ತಿಳಿದು ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಅಕ್ಟೋಬರ್ ತಿಂಗಳ ಮೊದಲು ಕೊರತ್ ಪುತ್ ಜಿಲ್ಲೆಯ ನಂದಾಪುರ್ ಬ್ಲಾಕ್ ನ ಬಾಲ್ದಾ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಾಯ 9ನೇ ತರಗತಿಯ ಬಾಲಕಿಯನ್ನು ಅತ್ಯಾಚಾರ ಮಾಡಿ ಅವಳನ್ನು ಗರ್ಭವತಿ ಮಾಡಿಸಿದ್ದಕ್ಕೆ ಆತನನ್ನು ಬಂಧಿಸಿದ್ದರು.

    ದೈಹಿಕವಾಗಿ ನನ್ನ ಜೊತೆ ನೀನು ಸಂಬಂಧವಿಟ್ಟುಕೊಳ್ಳಬೇಕು ಎಂದು ಬಾಲಕಿಗೆ ಕಿರುಕುಳ ನೀಡುತ್ತಿದ್ದನು. ಈ ವಿಷಯ ತಿಳಿದ ಬಾಲಕಿಯ ತಂದೆ ಮುಖ್ಯೋಪಾದ್ಯಾಯ ಬಿದುಬೂಷಣ್ ನಾಯಕ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

    5 ತಿಂಗಳು ಗರ್ಭಿಣಿ ಆಗಿದ್ದ ಬಾಲಕಿಯನ್ನು ಪೋಷಕರು ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದರು. ಬಾಲಕಿಯ ಆರೋಗ್ಯದ ಬಗ್ಗೆ ಪೋಷಕರು ಚಿಂತಿಸುತ್ತಿರುವಾಗಲೇ, ಇತ್ತ ಮದುವೆಗೆ ಮೊದಲೇ ಬಾಲಕಿ ಗರ್ಭವತಿ ಆಗಿರುವುದಕ್ಕೆ ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಮತ್ತು ಸಮುದಾಯದ ದಂಡ ಕಟ್ಟಲು ಹೇಳಿದ್ದಾರೆ.

    ನಾನು ಒಬ್ಬ ಕೂಲಿ ಕಾರ್ಮಿಕ. ಸಮುದಾಯದ ದಂಡ ಸುಮಾರು ರೂ. 30,000 ಇರುತ್ತದೆ. ನಾನು ಅಷ್ಟು ದೊಡ್ಡ ಮೊತ್ತ ಹೇಗೆ ಕೊಡಲಿ. ನನ್ನ ಮಗಳ ಆರೋಗ್ಯ ತಪಾಸಣೆಗೆ ನನಗೆ ದುಡ್ಡು ಬೇಕಾಗಿದೆ ಎಂದು ಬಾಲಕಿಯ ತಂದೆ ಮಾಧ್ಯಮದ ಮುಂದೆ ತಮ್ಮ ಅಳಲುತೋಡಿಕೊಂಡಿದ್ದಾರೆ.

    ಈ ಸಂಬಂಧದ ಬಗ್ಗೆ ಮಾತನಾಡಿದ ಕೊರತ್ ಪುತ್ ಜಿಲ್ಲಾ ಆಡಳಿತದ ಅಧಿಕಾರಿಯಾದ ಜಗನ್ನಾಥ್ ಸೋರೆನ್, ಬಾಲಕಿಯ ಕುಟುಂಬದವರಿಗೆ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ.

  • 9 ವರ್ಷದ ಬಾಲಕಿಯ ಮೇಲೆ ಕುಳಿತ 150 ಕೆಜಿ ತೂಕದ ಮಹಿಳೆ: ಕ್ರೂರ ಶಿಕ್ಷೆಗೆ ಮಗು ಸಾವು

    9 ವರ್ಷದ ಬಾಲಕಿಯ ಮೇಲೆ ಕುಳಿತ 150 ಕೆಜಿ ತೂಕದ ಮಹಿಳೆ: ಕ್ರೂರ ಶಿಕ್ಷೆಗೆ ಮಗು ಸಾವು

    ಫ್ಲೋರಿಡಾ: 9 ವರ್ಷದ ಬಾಲಕಿ ಮೇಲೆ 150 ಕೆ.ಜಿ. ತೂಕದ ಮಹಿಳೆ ಕುಳಿತ ಪರಿಣಾಮವಾಗಿ ಬಾಲಕಿ ಮೃತಪಟ್ಟಿರುವ ಧಾರುಣ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.

    ಪ್ಲೋರಿಡಾ ನಗರದ ಪೆನ್ನಕೋಲಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡೆರಿಕ್ಕಾ ಲಿಂಡ್ಸೆ ಎಂಬ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಈ ನರಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆರೋನಿಕಾ ಗ್ರೀನ್ ಪೋಸ್ಸಿ(64) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಲಿಂಡ್ಸೆ ಹೆಚ್ಚು ಗಲಾಟೆ ಮಾಡಿದ್ದಕ್ಕೆ 150 ಕೆಜಿ ತೂಕದ ಸೋದರ ಸಂಬಂಧಿ ವೆರೋನಿಕಾ ಪೋಸ್ಸಿ ಆಕೆಯ ಮೇಲೆ ಕುಳಿತ್ತಿದ್ದಾಳೆ. 12 ನಿಮಿಷಗಳ ಕಾಲ ಕುಳಿತ ಪರಿಣಾಮ ಲಿಂಡ್ಸೆ ಮೂರ್ಛೆ ಹೋಗಿದ್ದನ್ನು ತಿಳಿದ ವೆರೋನಿಕಾ ತಕ್ಷಣ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಬಾಲಕಿಗೆ ಹೃದಯಘಾತವಾಗಿದೆ ಎಂದು ಹೇಳಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆಕೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ.

    ಮೃತಪಡುವ ಮೊದಲು ಲಿಂಡ್ಸೆ ತನ್ನ ತನ್ನ ಮೇಲೆ ವೆರೋನಿಕಾ ಕುಳಿತ್ತಿದ್ದಳು. ಇದರಿಂದಾಗಿ ನನಗೆ ಉಸಿರಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾಳೆ. ಈ ಹೇಳಿಕೆಯ ಆಧಾರದಲ್ಲಿ ವೆರೋನಿಕಾಳನ್ನು ಪೊಲೀಸರು ಬಂಧಿಸಿದ್ದಾರೆ.

    ಕುಳಿತಿದ್ದು ಯಾಕೆ?
    ಎಷ್ಟು ಹೇಳಿದರೂ ಲಿಂಡ್ಸ್ ಗಲಾಟೆ ಮಾಡುತ್ತಿದ್ದಳು. ಹೀಗಾಗಿ ನನಗೆ ಸಿಟ್ಟು ತಡೆಯಲಾರದೇ ಆಕೆಯ ಮೇಲೆ ಕುಳಿತೆ ಎಂದು ವೆರೋನಿಕಾ ಗ್ರೀನ್ ಪೋಸ್ಸಿ ನ್ಯಾಯಾಲಯದ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈ ಕೃತ್ಯಕ್ಕೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಗ್ರೇಸ್ ಜೋನ್ ಸ್ಮಿತ್(69) ಮತ್ತು ಜೇಮ್ಸ್ ಎಡ್ಮಂಡ್ ಸ್ಮಿತ್(62) ಎಂಬುವರನ್ನು ಬಂಧಿಸಲಾಗಿದೆ.

     

     

  • ಬೆಂಗ್ಳೂರಲ್ಲಿ ಮತ್ತೊಂದು ಬಲಿ ಪಡೆದ ಭೀಕರ ಮಳೆ-ಮೂರು ದಿನಗಳ ಬಳಿಕ ಸಿಕ್ಕಿತು ಮಗಳ ಶವ

    ಬೆಂಗ್ಳೂರಲ್ಲಿ ಮತ್ತೊಂದು ಬಲಿ ಪಡೆದ ಭೀಕರ ಮಳೆ-ಮೂರು ದಿನಗಳ ಬಳಿಕ ಸಿಕ್ಕಿತು ಮಗಳ ಶವ

    ಬೆಂಗಳೂರು: ಕಳೆದು ಎರಡು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಗ್ಗೆ ಮಳೆಗೆ ಮತ್ತೊಂದು ಬಲಿಯಾಗಿದೆ.

    ಸಿ ವಿ ರಾಮನ್ ನಗರದ ಕೃಷ್ಣಪ್ಪ ಗಾರ್ಡನ್ ನಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 16 ವರ್ಷದ ನರಸಮ್ಮ ಎಂಬ ಬಾಲಕಿ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ಸದ್ಯ ಬಾಲಕಿಯ ಶವ ಪತ್ತೆಯಾಗಿದೆ.

    ಮೂಲತಃ ಕಲಬುರ್ಗಿ ಜಿಲ್ಲೆಯವರಾದ ವೆಂಕಪ್ಪ ಮತ್ತು ಕಾಶಿ ಬಾಯಿ ದಂಪತಿಯ ಮಗಳಾದ ನರಸಮ್ಮ ಶೌಚಾಲಯಲ್ಲೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಳು. ಬಾಲಕಿ ಶವ ಮಳೆ ನೀರಿನಲ್ಲಿ ಕೊಚ್ಚಿ ಹೋದ ಸ್ಥಳದಿಂದ 400 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸದ್ಯ ಶವವನ್ನು ಸ್ಥಳೀಯರು ಹೊರಗೆತ್ತಿದ್ದಾರೆ.

    ಈಕೆಗೆ 15 ದಿನದಲ್ಲಿ ಮದುವೆಯೂ ನಿಗದಿಯಾಗಿತ್ತು. ಈ ಮೊದಲೇ ದುರಂತ ಎದುರಾಗಿರುವುದರಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ರಘು ಸ್ಥಳಕ್ಕೆ ದೌಡಾಯಿಸಿದ ಸಂದರ್ಭದಲ್ಲಿ ಶಾಸಕರ ವಿರುದ್ಧ ಸ್ಥಳೀಯರು ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಶಾಸಕರು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಜನರ ಆಕ್ರೋಶಕ್ಕೆ ಬೆದರಿ ಶಾಸಕರು ಮತ್ತು ಬೆಂಬಲಿಗರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ತಾಯಿ ಶವ ಪತ್ತೆ: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಕೆಂಪೇಗೌಡ ಲೇಔಟ್ ನ ರಾಜಕಾಲುವೆಯಲ್ಲಿ ತಾಯಿ ಪುಷ್ಪ ಹಾಗೂ ಮಗಳು ನಿಂಗವ್ವ ನೀರಿನಲ್ಲಿ ಕೊಚ್ಚಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತಾಯಿ ಶವ ಪತ್ತೆಯಾಗಿದೆ.

    ಕುಂಬಳಗೋಡು ರಾಜಕಾಲುವೆ ಬಳಿ ಇಂದು ಪುಷ್ಪಳಾ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಪುಷ್ಪ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅದೇ ಸ್ಥಳದಲ್ಲಿ ತಾಯಿ ನಿಂಗವ್ವನ ಮೃತದೇಹಕ್ಕಾಗಿ ಎನ್‍ಡಿಆರ್‍ಎಫ್ , ಬಿಬಿಎಂಪಿ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಚಾರಣೆ ನಡೆಸುತ್ತಿದ್ದಾರೆ.

    ಕಾರ್ಯಾಚರಣೆ ತಂಡ ಎರಡು ದಿನಗಳ ಬಳಿಕ ಪತ್ತೆಯಾದ ಪುಷ್ಪ ಶವವನ್ನು ಹೊರತೆಗೆಯಲು ಹರಸಾಹಸಪಟ್ಟಿದ್ದಾರೆ. ನೀರಿನ ರಭಸ ಹೆಚ್ಚಾಗಿದ್ದರಿಂದ ಶವ ಹೊರತೆಗೆಯಲು ಕಷ್ಟವಾಯಿತು ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸವಣ್ಣ ಹೇಳಿದ್ದಾರೆ.

    https://www.youtube.com/watch?v=3-CXRwsdAew

    https://www.youtube.com/watch?v=_pU2WXHoAA4

  • ಮಧ್ಯಾಹ್ನ ಊಟ ಮುಗಿಸಿ ಶಾಲೆಗೆ ಹೋಗ್ತಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಾವಿಗೆ ತಳ್ಳಿದ

    ಮಧ್ಯಾಹ್ನ ಊಟ ಮುಗಿಸಿ ಶಾಲೆಗೆ ಹೋಗ್ತಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಾವಿಗೆ ತಳ್ಳಿದ

    ಹೈದರಾಬಾದ್: 6 ವರ್ಷದ ಬಾಲಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಆಕೆಯನ್ನು ಬಾವಿಗೆ ತಳ್ಳಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಹೈದರಾಬಾದ್‍ನಿಂದ 100 ಕಿ.ಮೀ ದೂರದಲ್ಲಿರುವ ಗ್ರಮಾವೊಂದರಲ್ಲಿ ಈ ಘಟನೆ ನಡೆದಿದೆ. ಕಾಮುಕ ಬಾಲಕಿಯನ್ನು ಬಾವಿಗೆ ತಳ್ಳಿದ್ದು ಆಕೆ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

    ಬುಧವಾರದಂದು ಬಾಲಕಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದಳು. ಊಟ ಮುಗಿಸಿ ಶಾಲೆಗೆ ಹಿಂದಿರುಗಿದ್ದಳು. ಆದ್ರೆ ಸಂಜೆಯಾದ್ರೂ ಮನೆಗೆ ಹಿಂದಿರುಗದ ಕಾರಣ ಆಕೆಯ ತಾಯಿ ಮಗಳನ್ನ ಎಲ್ಲಾ ಕಡೆ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಬಾಲಕಿ ಶಾಲೆಗೆ ಹೋಗೋ ಮಾರ್ಗದಲ್ಲಿನ ಜನರನ್ನ ಪೊಲೀಸರು ವಿಚಾರಿಸಿದ್ದರು. ಆಗ ಯಾರೋ ಒಬ್ಬರು ಗ್ರಾಮದ 22 ವರ್ಷದ ಶಿವಕುಮಾರ್ ಜೊತೆ ಬಾಲಕಿ ಇದ್ದಿದ್ದನ್ನು ನೋಡಿದ್ದಾಗಿ ಹೇಳಿದ್ದರು. ಇಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ ಶಿವಕುಮಾರ್ ಬಾಲಕಿಯ ಸಂಬಂಧಿ ಎಂದು ಹೇಳಲಾಗಿದೆ. ಶಿವಕುಮಾರ್‍ನನ್ನು ಗುರುವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ.

    ಮೋಗ್ದಾಂಪಲ್ಲಿ ಮಂಡಲ್‍ನ ಮನ್ನಾಪುರ ಗ್ರಾಮದಲ್ಲಿ ಬಾಲಕಿ ಶಾಲೆಗೆ ಹೋಗುವ ವೇಳೆ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಅಂತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹತ್ತಿರದ ಜಮೀನೊಂದಕ್ಕೆ ಕರೆದುಕೊಂಡು ಹೋಗಿ ಎರಡು ಬಾರಿ ಅತ್ಯಾಚಾರವೆಸಗಿದ್ದಾಗಿ ಆರೋಪಿ ಶಿವಕುಮಾರ್ ಪೊಲೀಸರಿಗೆ ಹೇಳಿದ್ದಾನೆಂದು ವರದಿಯಾಗಿದೆ. ಅಲ್ಲದೆ ಬಾಲಕಿಯನ್ನು ಹತ್ತಿರದ ಬಾವಿಯೊಂದಕ್ಕೆ ತಳ್ಳಿದ್ದಾಗಿ ಆರೋಪಿ ಹೇಳಿದ್ದಾನೆ. ಬಾಲಕಿಯ ಶವವನ್ನು ಬಾವಿಯಿಂದ ಹೊರತೆಗೆಯಲಾಗಿದೆ.

     

  • ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

    ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

    ಥಾಣೆ: ಬಾಲಕಿಯೊಬ್ಬಳ ಎಡಗೈ ಲಿಫ್ಟ್ ಗೆ ಸಿಲುಕಿ ತುಂಡಾಗಿದ್ದರೂ ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದ ಘಟನೆ ಥಾಣೆಯಲ್ಲಿ ನಡೆದಿದೆ.

    ಮಂಗಳವಾರ ಸಂಜೆ 8 ವರ್ಷದ ಬಾಲಕಿ ಅರ್ಚನಾಳ ತಾಯಿ ಮನೆ ಬಾಗಿಲು ತೆಗೆದು ನೋಡಿದಾಗ ಮಗಳ ಮೈಮೇಲೆಲ್ಲಾ ರಕ್ತ ಇದ್ದಿದ್ದು ಕಂಡು ಶಾಕ್ ಆಗಿದ್ರು. ಅಲ್ಲದೆ ಆಕೆಯ ಎಡಗೈ ಕೂಡ ಕಾಣಿಸುತ್ತಿರಲಿಲ್ಲ. ಅರ್ಚನಾ ಅಳುತ್ತಿರಲಿಲ್ಲ. ಬದಲಿಗೆ ಶಾಂತವಾಗಿಯೇ ನಡೆದಿದ್ದನ್ನು ಅಮ್ಮನಿಗೆ ವಿವರಿಸಿದ್ದಳು. ಅರ್ಚನಾ ಟ್ಯೂಷನ್ ಕ್ಲಾಸ್‍ಗೆ ಹೋಗುವ ಥಾಣೆಯ ಕಾಸರವಡಾವ್ಲಿಯ ಕಟ್ಟಡದಲ್ಲಿ ಲಿಫ್ಟ್ ನ ಬಾಗಿಲಿಗೆ ಸಿಲುಕಿ ಕೈ ಕಟ್ ಆಗಿತ್ತು.

    ಈ ವಿಷಯವನ್ನ ತಾಯಿಗೆ ತಿಳಿಸಲು ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದಿದ್ದಾಳೆ. ಆಸ್ಪತ್ರೆಯಲ್ಲಿ ವೈದ್ಯರು ಕಟ್ ಆದ ಕೈ ಎಲ್ಲಿ ಎಂದು ಕೇಳಿದ ನಂತರವಷ್ಟೇ ಪೋಷಕರು ಕಟ್ಟಡದ ಲಿಫ್ಟ್ ಬಳಿ ಹುಡುಕಲು ಹೋಗಿದ್ದಾರೆ. ದುರಾದೃಷ್ಟವೆಂಬಂತೆ ಅರ್ಚನಾಳ ನರಗಳು ಹಾಗೂ ರಕ್ತನಾಳಗಳಿಗೆ ಗಂಭೀರ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಕೈ ಮರುಜೋಡಣೆ ಮಾಡಲು ಅಸಾಧ್ಯವಾಗಿದೆ. ಅರ್ಚನಾ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ಥಾಣೆಯ ಆದರ್ಶ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

    ಲಿಫ್ಟ್ ನಲ್ಲಿ ಶೂ ಸಿಕ್ಕಿಹಾಕೊಂಡಿತ್ತು: ಅರ್ಚನಾ ಇತ್ತೀಚೆಗಷ್ಟೇ ಟ್ಯೂಷನ್‍ಗೆ ಸೇರಿಕೊಂಡಿದ್ದಳು. ಲಿಫ್ಟ್ ನ ಸಂದಿಯಲ್ಲಿ ಆಕೆಯ ಪಾದರಕ್ಷೆ ಸಿಲುಕಿಕೊಂಡಿದ್ದು, ಅದನ್ನ ಬಿಡಿಸಿಕೊಳ್ಳಲು ಯತ್ನಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಎಡಗೈ ಸಿಲುಕಿಕೊಳ್ತು ಎಂದು ನಮಗೆ ಹೇಳಿದಳು ಅಂತ ಅರ್ಚನಾಳ ಸಂಬಂಧಿ ನವಿತ್ ಹೇಳಿದ್ದಾರೆ.

    ಇಷ್ಟಾದರೂ ಅರ್ಚನಾ ಗಾಬರಿಯಾಗದೇ, ಶಾಂತ ರೀತಿಯಲ್ಲೇ ಘಟನೆಯನ್ನ ವಿವರಿಸಿದ್ದು ನೋಡಿ ಕುಟುಂಬಕ್ಕೆ ಶಾಕ್ ಆಗಿದೆ. ಗೋಧ್‍ಬುಂದರ್ ರಸ್ತೆಯಿಂದ ಕೆಇಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಆಕೆ ಎಚ್ಚರವಾಗೇ ಇದ್ದಳು. ನಮ್ಮೊಂದಿಗೆ ಮಾತಾಡುತ್ತಿದ್ದಳು. ವೈದ್ಯರು ಕೇಳಿದ ನಂತರವಷ್ಟೇ ನಮಗೆ ಆಕೆಯ ಕಟ್ ಆಗಿದ್ದ ಎಡಗೈ ನಮ್ಮ ಬಳಿ ಇಲ್ಲದಿರುವುದು ಗೊತ್ತಾಯಿತು. ಥಾಣೆಯ ನರ್ಸಿಂಗ್ ಹೋಮ್‍ವೊಂದರಲ್ಲಿ ಡ್ರೆಸ್ಸಿಂಗ್ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಹೇಳಿದ್ರು ಎಂದು ನವಿತ್ ಹೇಳಿದ್ದಾರೆ.

    ಅರ್ಚನಾಳ ಎಡಗೈಯಲ್ಲಿ ಮೊಣಕೈಯಿಂದ ಮೇಲ್ಭಾಗಕ್ಕೆ ಆಂಪ್ಯುಟೇಷನ್ ಚಿಕಿತ್ಸೆ ನೀಡಲಾಗಿದೆ. ಈಗ ಆಕೆಯ ಸ್ಥಿತಿ ಸಹಜವಾಗಿದೆ. ಆರ್ಥೋಪೆಡಿಕ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವೈದ್ಯರಾದ ಡಾ. ಅವಿನಾಶ್ ಸುಪೆ ಹೇಳಿದ್ದಾರೆ.

    ಕಾಸರವಡಾವ್ಲಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಡಿಎಸ್ ಧೋಲೆ ಈ ಬಗ್ಗೆ ಮಾತನಾಡಿ, ದೂರು ದಾಖಲಿಸಲು ಬಯಸುತ್ತೀರಾ ಎಂದು ನಾವು ಅವರ ಕುಟುಂಬಕ್ಕೆ ಕೇಳಿದೆವು. ಆದ್ರೆ ಅವರು ನಿರಾಕರಿಸಿದ್ರು. ಇದು ಬಾಲಕಿಯ ತಪ್ಪೇ ಇರಬಹುದು ಎಂದು ಹೇಳಿದ್ರು. ಆದ್ರೆ ನಾವು ಬಾಲಕಿಯ ಹೇಳಿಕೆ ಪಡೆಯಲು ನಮ್ಮ ಅಧಿಕಾರಿಗಳನ್ನ ಆಸ್ಪತ್ರೆಗೆ ಕಳಿಸಿದ್ದೇವೆ ಅಂದ್ರು.

    ಕೈ ದಾನ: ಈ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಬಾಲಕಿಯ ಮುರಿದ ಕೈಯನ್ನ ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ. ಬಾಲಕಿಯ ಕೈನ ರಕ್ತನಾಳಗಳಿಗೆ ತೀವ್ರವಾದ ಗಾಯವಾಗಿದ್ರಿಂದ ಅದನ್ನು ಮರುಜೋಡಣೆ ಮಾಡಲು ಸಾಧ್ಯವಿಲ್ಲ. ಆದ್ರೆ ಕಟ್ ಆಗಿರೋ ಕೈಯನ್ನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಬಹುದು. ಮೂಳೆ ಮತ್ತು ಸ್ನಾಯುಗಳು ಉಪಯೋಗಕ್ಕೆ ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾಗಿ ಅರ್ಚನಾ ಸಂಬಂಧಿ ಹೇಳಿದ್ದಾರೆ. ಶೀಘ್ರದಲ್ಲೇ ನಾವು ಕೈ ದಾನದ ಎಲ್ಲಾ ಪ್ರಕ್ರಿಯೆ ಮುಗಿಸಲಿದ್ದೇವೆ ಎಂದಿದ್ದಾರೆ.

  • ಹಾಲು ಕುಡಿಯದ್ದಕ್ಕೆ ಶಿಕ್ಷೆಯಾಗಿ 3 ವರ್ಷದ ಮಗಳನ್ನ ನಡುರಾತ್ರಿ ಮನೆಯಿಂದ ಹೊರಗೆ ನಿಲ್ಲಿಸಿದ ತಂದೆ- ಬಾಲಕಿ ನಾಪತ್ತೆ

    ಹಾಲು ಕುಡಿಯದ್ದಕ್ಕೆ ಶಿಕ್ಷೆಯಾಗಿ 3 ವರ್ಷದ ಮಗಳನ್ನ ನಡುರಾತ್ರಿ ಮನೆಯಿಂದ ಹೊರಗೆ ನಿಲ್ಲಿಸಿದ ತಂದೆ- ಬಾಲಕಿ ನಾಪತ್ತೆ

    ಟೆಕ್ಸಾಸ್: ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ 3 ವರ್ಷದ ಬಾಲಕಿಗೆ ಆಕೆಯ ತಂದೆ ಮನೆಯಿಂದ ಹೊರಗೆ ಒಬ್ಬಳೇ ನಿಲ್ಲುವಂತೆ ಹೇಳಿ ಶಿಕ್ಷೆ ನೀಡಿದ್ದು, ಈಗ ಬಾಲಕಿ ಕಾಣೆಯಾಗಿರುವ ಘಟನೆ ಟೆಕ್ಸಾಸ್‍ನಲ್ಲಿ ನಡೆದಿದೆ.

    ಇಲ್ಲಿನ ಸಬ್ ಅರ್ಬನ್ ಡಲ್ಲಾಸ್‍ನಲ್ಲಿ ಬಾಲಕಿ ಶೆರಿನ್‍ಳ ತಂದೆ 37 ವರ್ಷದ ವೆಸ್ಲೀ ಮ್ಯಾಥ್ಯೂಸ್, ರಾತ್ರಿ ವೇಳೆ ಮಗಳನ್ನು ಮನೆಯ ಹಿಂದೆ ಇದ್ದ ಕಾಲುದಾರಿಯಲ್ಲಿ ನಿಲ್ಲುವಂತೆ ಹೇಳಿದ್ದರು. ಬಾಲಕಿ ನಾಪತ್ತೆಯಾಗಿರುವ ಕಾರಣ ಶನಿವಾರದಂದು ಮ್ಯಾಥ್ಯೂಸ್‍ರನ್ನು ವಶಕ್ಕೆ ಪಡೆದು ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ರಿಚರ್ಡ್‍ಸನ್‍ನ ಪೊಲೀಸರು ತಿಳಿಸಿದ್ದಾರೆ.

    ಕಳೆದ ಶನಿವಾರ ಶೆರಿನ್ ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ಮಧ್ಯರಾತ್ರಿ 3 ಗಂಟೆ ವೇಳೆಯಲ್ಲಿ ಮನೆಯ ಬಳಿಯಿದ್ದ ದೊಡ್ಡ ಮರದ ಬಳಿ ನಿಲ್ಲುವಂತೆ ಸೂಚಿಸಿದ್ದೆ. ಆದ್ರೆ 15 ನಿಮಿಷಗಳ ಬಳಿಕ ನೋಡಿದಾಗ ಆಕೆ ಅಲ್ಲಿ ಇರಲಿಲ್ಲ ಎಂದು ಮ್ಯಾಥ್ಯೂಸ್ ಪೊಲೀಸರಿಗೆ ತಿಳಿಸಿದ್ದಾರೆ.

    ಮಗಳನ್ನ ಮನೆಯಿಂದ ಹೊರಗೆ ಕಳಿಸಿದ 5 ಗಂಟೆಗಳ ಬಳಿಕ ಮ್ಯಾಥ್ಯೂಸ್ ಪೊಲೀಸರಿಗೆ ಕರೆ ಮಾಡಿ ಮಗಳು ಕಾಣೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಮನೆಯ ಹೊರಗಡೆ ದಾರಿಯಲ್ಲಿ ಗುಳ್ಳೇನರಿಗಳನ್ನ ನೋಡಿದ್ದು, ಅಲ್ಲೇ ಮಗಳಿಗೆ ನಿಲ್ಲುವಂತೆ ಹೇಳಿದ್ದಾಗಿ ಮ್ಯಾಥ್ಯೂಸ್ ಪೊಲೀಸರಿಗೆ ಹೇಳಿದ್ದಾರೆ.

    ಶೆರಿನ್ ಜನಿಸಿದ್ದು ಭಾರತದಲ್ಲಿ. ಮ್ಯಾಥ್ಯೂಸ್ ಕುಟುಂಬ ಆಕೆಯನ್ನು ದತ್ತು ಪಡೆದಿತ್ತು. ಆಕೆ ಅಮೆರಿಕಗೆ ಬರುವ ಮುಂಚೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದಳು. ಈಗ ವಿಶೇಷ ಡಯಟ್‍ನಲ್ಲಿದ್ದಳು ಎಂದು ರಿಚರ್ಡ್‍ಸನ್ ಪೊಲೀಸ್ ಇಲಾಖೆಯ ವಕ್ತಾರರಾದ ಸಜೆಂಟ್ ಕೆವಿನ್ ಪರ್ಲಿಚ್ ತಿಳಿಸಿದ್ದಾರೆ.